` elections, - chitraloka.com | Kannada Movie News, Reviews | Image

elections,

  • Ramya Says No To Mandya Election

    ramya says no to mandya election

    Former actress and Congress social media cell in charge Ramya has said she is not contesting the upcoming Assembly election in Karnataka. After the confusion over Ambareesh contesting from Mandya constituency there was speculation that Ramya would be brought in his place.

    But Ramya has brushed aside all speculation by making it clear that she will not be contesting. The suspense over who will contest from Mandya therefore continues. From the last two decades Ambareesh has made Mandya his political base. In recent years Ramya has emerged as another important politician from the district after winning a Lok Sabha bypoll from there which she subsequently lost.

     

  • ಮಂಡ್ಯದಿಂದ ನಿಲ್ಲಲ್ಲ ರಮ್ಯಾ

    ramya not contesting from mandya

    ರೆಬಲ್‍ಸ್ಟಾರ್ ಅಂಬರೀಷ್, ಅಕ್ಷರಶಃ ರೆಬಲ್ ಆಗಿಬಿಟ್ಟಿದ್ದಾರೆ. ಕಾಂಗ್ರೆಸ್‍ನಲ್ಲಿ ಅವರಿಗೆ ಕೇಳದೆಯೇ ಟಿಕೆಟ್ ಕೊಡಲಾಗಿತ್ತು. ಬಿಫಾರಂನ್ನು ಮನೆಗೇ ಕಳಿಸಿಕೊಡಲಾಗಿತ್ತು. ಆದರೆ, ತಮ್ಮನ್ನು ಅವಮಾನಕಾರಿಯಾಗಿ ಸಚಿವ ಸ್ಥಾನದಿಂದ ಕಿತ್ತು ಹಾಕಿದ್ದನ್ನು ಮರೆಯದ ಅಂಬರೀಷ್, ಈಗ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷವನ್ನು ಆಟವಾಡಿಸುತ್ತಿದ್ದಾರೆ. 

    ಹಾಗೆ ನೋಡಿದರೆ, ಮಂಡ್ಯದಲ್ಲಿ ಅಂಬರೀಷ್ ಪ್ರಭಾವ ಮುರಿಯಲೆಂದೇ ಚೆಲುವರಾಯ ಸ್ವಾಮಿಯನ್ನು ಪಕ್ಷಕ್ಕೆ ಕರೆತಂದಿರುವ ಸಿದ್ದರಾಮಯ್ಯ, ಆ ನಿಟ್ಟಿನಲ್ಲಿ ಗೆಲ್ತಾರಾ ಅನ್ನೋದು ಬೇರೆ ಪ್ರಶ್ನೆ. ಇದರ ಮಧ್ಯೆ ಮಂಡ್ಯದಿಂದ ರಮ್ಯಾ ನಿಲ್ತಾರಂತೆ ಅನ್ನೋ ಸುದ್ದಿಗೆ ವೇಗ ಬಂದಿತ್ತು. 

    ಅಂಬರೀಷ್ ಅವರು ಸತಾಯಿಸುತ್ತಿರುವ ಹಿನ್ನೆಲೆಯಲ್ಲಿ ರಮ್ಯಾ ಅವರನ್ನು ಮಂಡ್ಯದಿಂದ ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆದಿದೆ ಎಂಬ ಸುದ್ದಿ ಹರಿದಾಡಿತ್ತು. ಇವುಗಳಿಗೆಲ್ಲ ಒಂದೇ ಮಾತಿನಲ್ಲಿ ನೋ ಎಂದುಬಿಟ್ಟಿದ್ದಾರೆ ರಮ್ಯಾ.

    ಮಂಡ್ಯದಿಂದ ನಾನು ಸ್ಪರ್ಧಿಸುತ್ತಿಲ್ಲ ಎನ್ನುವುದು ರಮ್ಯಾ ಅವರ ಒನ್‍ಲೈನ್ ಉತ್ತರ. ಅಂದಹಾಗೆ ಕರ್ನಾಟಕದಲ್ಲಿ ಚುನಾವಣೆ ಇಷ್ಟು ರಂಗೇರಿರುವಾಗ ಕೂಡಾ ರಮ್ಯಾ ಎಲ್ಲಿಯೂ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ.

  • ಶೀಘ್ರ ಫಿಲಂ ಚೇಂಬರ್ ಚುನಾವಣೆ ನಡೆಸುವಂತೆ ಸಹಕಾರ ಇಲಾಖೆ ಆದೇಶ

    ಶೀಘ್ರ ಫಿಲಂ ಚೇಂಬರ್ ಚುನಾವಣೆ ನಡೆಸುವಂತೆ ದೂರು

    ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧಿಕಾರಾವಧಿ ಮುಕ್ತಾಯಗೊಂಡಿದ್ದು ಶೀಘ್ರದಲ್ಲೇ ಚುನಾವಣೆ ನಡೆಸುವಂತೆ ಸಹಕಾರ ಸಂಘಗಳ ಸಂಬಂಧಿಸಿದ ಇಲಾಖೆಗೆ ದೂರು ನೀಡಲಾಗಿದೆ. ಈಗ ಇರುವ ಚಲನಚಿತ್ರ ವಾಣಿಜ್ಯ ಮಂಡಳಿ ಅಧಿಕಾರಾವಧಿ 28-05-2023ಕ್ಕೆ ಮುಕ್ತಾಯಗೊಂಡಿದೆ. ಆದರೆ ಚುನಾವಣೆ ನಡೆಸುವ ಕುರಿತಂತೆ ಯಾವುದೇ ಪ್ರಕ್ರಿಯೆಗಳೂ ನಡೆಯುತ್ತಿಲ್ಲ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಲಾಗಿದೆ. 

    dc_copy_kfcc.jpgಮಂಡಳಿಯ ಬೈಲಾ ಪ್ರಕಾರ ಶೀಘ್ರದಲ್ಲೇ ಚುನಾವಣೆ ನಡೆಸಬೇಕು ಹಾಗೂ ಅಲ್ಲಿಯವರೆಗೆ ಫಿಲಂ ಚೇಂಬರ್`ಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

    ನರಸಿಂಹರಾಜು ನೀಡಿದ ದೂರಿಗೆ ಸಹಕಾರ ಸಂಘಗಳ ಇಲಾಖೆ ಶ್ರೀಘ್ರವೇ ಚುನಾವಣೆ ನಡೆಸುವಲಂತೆ ತಿಳಿಸಿತ್ತು. ಆದರೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಲ ತಿಂಗಳು ಸಮಯ ನೀಡುವಂತೆ ಮನವೆ ಸಲ್ಲಿಸಿತು. 

    ನಿರ್ಮಾಪಕ ಎನ್ ಎಂ ಸುರೇಶ್ ಮತ್ತು ಪ್ರವೀಣ್ ಕುಮಾರ್ ಅವರು ಸಹಕಾರ ಇಲಾಖೆ ಸಚಿವರಾಗಿರುವ ಕೆ ಎನ್ ರಾಜಣ್ಣ ಅವರನ್ನ ಬೇಟಿ ಮಾಡಿ ತುನಾವಣೆ ಮಾಡಿಸುವಂತೆ ಮನವಿ ಮಾಡಿದರು. 

    ಒಟ್ಟಿನಲ್ಲಿ ನರಸಿಂಹರಾಜು ಮತ್ತು ಇತರರು ಮಾಡಿದ ಹೋರಾಟಕ್ಕೆ ಜಯ ಸಿಕ್ಕಿದೆ.

  • ಸುಮಲತಾಗೆ ಡಬಲ್ ಗಜ ಬಲ - ಮಂಡ್ಯ ಸ್ಟಾರ್ ವಾರ್

    sumalatha gets double power support

    ಮಂಡ್ಯದಲ್ಲೀಗ ಸ್ಟಾರ್ ವಾರ್. ಒಂದು ಕಡೆ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ. ಅವರೂ ಸಿನಿಮಾದವರೇ. ಇನ್ನೊಂದ್ ಕಡೆ ಸುಮಲತಾ ಅಂಬರೀಷ್. ಅವರೂ ಸಿನಿಮಾದವರೇ. ಇಬ್ಬರಿಗೂ ಮಂಡ್ಯ ಬೇಕು. 

    ಅಂಬರೀಷ್ ಪತ್ನಿ ಎಂದೇ ಗುರುತಿಸಿಕೊಂಡಿದ್ದ ಸುಮಲತಾ ಈಗ ಮಂಡ್ಯ ಚುನಾವಣೆ ಯುದ್ಧಕ್ಕಿಳಿದಿದ್ದಾರೆ. ಅವರ ಜೊತೆಗೀಗ ನಿಂತಿರುವುದು ದರ್ಶನ್, ಯಶ್, ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ, ಜೈ ಜಗದೀಶ್, ವಿಜಯಲಕ್ಷ್ಮಿ ಸಿಂಗ್ ಮೊದಲಾದವರು. ಗಜಕೇಸರಿ ಯಶ್ ಮತ್ತು ಗಜ ದರ್ಶನ್ ಎಡಬಲಗಳಲ್ಲಿ ಕುಳಿತು ಅಮ್ಮನಿಗೆ ಬೆಂಬಲ ಘೋಷಿಸಿದ್ರು.

    ದರ್ಶನ್ ನನ್ನ ದೊಡ್ಡ ಮಗ, ಯಶ್ ನನ್ನ ಮನೆ ಮಗ ಎಂದಿದ್ದರು ಸುಮಲತಾ. ವಿಧೇಯ ಮಕ್ಕಳಂತೆ ಸುಮಲತಾ ಅಕ್ಕಪಕ್ಕ ಕುಳಿತಿದ್ದ ದರ್ಶನ್-ಯಶ್, ತಾಯಿಗೆ ಬೆಂಬಲ ಎಂದು ಹೇಳಿದರು. ನನ್ನ ಇಬ್ಬರು ಅಣ್ಣಂದಿರು ಇವತ್ತು ನಮ್ಮ ಜೊತೆಗಿದ್ದಾರೆ ಎಂದರು ಅಭಿಷೇಕ್ ಅಂಬರೀಷ್.

    ಎಲ್ಲಿಯೂ ನಿಖಿಲ್ ಬಗ್ಗೆ ಕೆಟ್ಟದಾಗಿ ಮಾತನಾಡದ ಸುಮಲತಾಗೆ ಎದುರಾದ ದೊಡ್ಡ ಪ್ರಶ್ನೆ, ಗೆದ್ದರೆ.. ನೀವು ಗೆದ್ದ ಮೇಲೆ ಬಿಜೆಪಿಗೆ ಹೋಗ್ತೀರಾ.. ಕಾಂಗ್ರೆಸ್‍ಗೆ ಹೋಗ್ತೀರಾ ಎಂಬುದು. ಅದನ್ನು ನಾನು ಜನರ ಮುಂದಿಡುತ್ತೇನೆ. ಜನ ಏನ್ ಹೇಳ್ತಾರೋ ಹಾಗೆ ನಡೆದುಕೊಳ್ತೇನೆ ಎಂದರು ಸುಮಲತಾ.