` chiru sarja, - chitraloka.com | Kannada Movie News, Reviews | Image

chiru sarja,

  • Chiranjeevi Sarja Laid To Rest At Dhruva Sarja's Farmhouse

    chiranjeevi sarja's final rights at dhruva sarja's farm house

    Actor Chiranjeevi Sarja's mortal remains was laid to rest at the farmhouse located on Kanakapura Road at 5 pm amidst family members, fans and the members from the Kannada film industry who bid the actor a teary adieu to the actor.

    Last rites were carried out by Chiru's father Vijay Kumar as per Okkaliga rituals. The inconsolable Meghana Raj was present along with the entire family members and others in huge numbers. 

    Chiranjeevi Sarja who is fondly known as Chiru, had breathed his last following a massive heart attack on Sunday. He was 39.

    After his mortal remains were brought from the Hospital, it was brought to his residence in Basavanagudi where it was kept till Monday morning for public viewing, to pay their last respects.

    Later, the mortal remains were taken by road to the farmhouse, where the last rites were performed. 

  • Chirranjeevi Sarja Dies Of Massive Heart Attack

    chiranjeeivi sarja no more

    In A Shocking Incident, Actor Chiranjeeivi Sarja, aged 39 Years Dies of Cardiac Arrest at Apollo Hospital Today. Actor Chiranjeeivi Sarja had acted in many films like Aake, Singa, Samhara and many more. He entered films through Vaayuputra

     He is the brother of actor Dhruva Sarja, nephew of actor Arjun Sarja and grandson of veteran Kannada actor Shakti Prasad. Chiru Was married to Actress Meghana Raj.

    Chitraloka Mourns The death of Actor Chiranjeeivi Sarja.

  • Chiru Bags Another

    chiru bags another

    Chiranjeevi Sarja who has signed a series of film, has bagged another one. The latest which is yet to be titled is being produced by the Ayogya fame T R Chandrashekar. This one is going to be directed by Mahesh Chaitanya who is presently assisting direction for Buddhivanta 2 film.

    The producer has revealed that it is going to be a complete commercial action entertainer, and it will be made on the lines of blockbuster film Jogi, for which the shooting will start from the first week of December.

    The actor is presently busy shooting for Khaki, Raja Marthanda, Aa Kshana, Ranam and Jugari Cross.

     

  • Chiru Starts With Khaki In 2020

    chiru starts with khaki in 2020

    After Singha, actor Chiranjeevi Sarja returns with Khaki, which hits the screens from tomorrow in about 200 screens. The tale which revolves around a group of people who come together against corrupt system over civic disputes, is directed by Naveen Reddy.

    Director Naveen has been in the industry for over a decade, and turns an independent filmmaker with Khaki.

    While the maker say that Chiranjeevi, plays the role of a cable operator and not a cop, he has a greater purpose to serve in Khaki. It is more like a parallel policing with a difference fighting against land mafia and so on in the background of a typical commercial entertainment, the director says.

    Tanya of Yajamana and Amar fame plays a middle class girl. Book your tickets to witness Khaki on the big screens from today.

  • Shivarjun, An Out And Out EntertainerShivarjun, An Out And Out Entertainer

    shivarjun is an out and out entertainer

    Yuva Samrat Chiranjeevi Sarja who is set to hit an hat-trick with Shivarjuna after Khaki and Aadya,  returns for his third release in 2020.

    Directed by Shiva Tejas of the fame of Male, Dhairyam and Loud Speaker, the film is an out and out entertainer with huge line of star cast from the Tara including a host of comedians from Sadhu Kokila, Shivraj K R Pete and Nayana in it.

    "Despite being high on action, Shivarjuna is a paisa vasool commercial entertainment, which is tailor made for all kinds of audiences," Chiranjeevi said while Amrutha Iyengar, the lead actress shares that her role is that of a bold one.

    The songs composed by Surag Kokila, son of Sadhu Kokila has been trending since the release of two songs including the one sung by the actress and wife of Chiranjeevi Sarja, Meghana Raj. Yogaraj Bhat, Kaviraj and Nagendra Prasad has penned the songs for the movie, which is hitting the screens from March 12.

  • T R Chandrashekhar's New Film With Chiru

    tr chandrashekar's new film with chiru sarja

    Producer T R Chandrashekhar is currently producing Upendra starrer 'Buddhivantha 2' and Ajay Rao's 'Shokiwala'. Now Chandrashekhar has announced a new film with Chiranjeevi Sarja.

    Chandrashekhar will be producing a new file for Chiru under his Crystal Park Cinemas banner soon. The film will be directed by debutante Mahesh Chaitanya, who is currently working as a co-director for 'Buddhivantha 2'.

    Chiru is currently busy with 'Khakhee', 'Shivarjuna', 'Jugari Cross' and other films in hand and the new film is likely to start after the completion of these films.

  • ಅನುಮತಿಯನ್ನೇ ಪಡೆಯದೆ ಚಿತ್ರೀಕರಣ ದುರಂತಕ್ಕೆ ಕಾರಣ..?

    what is the reason behind ranam tragedy

    ರಣಂ ಚಿತ್ರದ ದುರಂತಕ್ಕೆ ಕಾರಣ ಏನು..? ಇಬ್ಬರನ್ನು ಬಲಿ ಪಡೆದ ದುರಂತದಲ್ಲಿ ನಿರ್ಲಕ್ಷ್ಯ, ಉಡಾಫೆ, ಕಡಿಮೆ ಬಜೆಟ್‍ನಲ್ಲಿ ಮಾಡಿ ಮುಗಿಸುವ ಧಾವಂತವೇ ಎದ್ದು ಕಾಣುತ್ತಿದೆ. ಮೇಲ್ನೋಟಕ್ಕೆ ಕಾಣಿಸುತ್ತಿರುವುದು ಹಾಗೂ ಪೊಲೀಸರು ಹೇಳುತ್ತಿರುವುದು ಇದನ್ನೇ.

    ಚಿತ್ರತಂಡ ಪೊಲೀಸರಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಹಾಗೆಯೇ ಚಿತ್ರೀಕರಣ ಮಾಡುತ್ತಿತ್ತು. ಸಾರ್ವಜನಿಕ ಸ್ಥಳದಲ್ಲಿ ಕಾರ್ ಸ್ಫೋಟಿಸಲು ಅನುಮತಿ ಕೇಳಿದ್ದರೂ ಕೊಡುತ್ತಿರಲಿಲ್ಲ. ಇದಕ್ಕೆ ಚಿತ್ರತಂಡದ ನಿರ್ಲಕ್ಷ್ಯವೇ ಕಾರಣ ಎನ್ನುವುದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರೇ ಹೇಳಿರುವ ಮಾತು.

    ಘಟನೆ ಸಂಭವಿಸಿದ ಸ್ಥಳದಲ್ಲಿ ಟ್ರಾಫಿಕ್ ಕಡಿಮೆ. ವಾಹನಗಳು ಕಡಿಮೆ ಓಡಾಡುತ್ತವೆ. ಹೀಗಾಗಿಯೇ ಅನುಮತಿ ಪಡೆಯದೆ ಒಂದು ವಾರದಿಂದ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಸುತ್ತಿತ್ತು ಚಿತ್ರತಂಡ. 

  • ಇಂದ್ರಜಿತ್ ಲಂಕೇಶ್ ಆರೋಪಕ್ಕೆ ಮೇಘನಾ ರಾಜ್, ಧ್ರುವ ಸರ್ಜಾ ಕೊಟ್ಟ ಉತ್ತರ

    meghana raj, dhruva sarja upsset over allegantons by indrajith lankesh

    ಇತ್ತೀಚೆಗೆ ಮೃತಪಟ್ಟ ಯುವ ನಟನೊಬ್ಬನ ಪೋಸ್ಟ್ ಮಾರ್ಟಂ ಏಕೆ ಆಗಲಿಲ್ಲ..? ಆತನಿಗೂ ಡ್ರಗ್ಸ್ ವ್ಯಸನವಿತ್ತು ಎಂಬರ್ಥದ ಹೇಳಿಕೆಗಳನ್ನು ನೀಡಿದ್ದ ಇಂದ್ರಜಿತ್ ಲಂಕೇಶ್, ಚಿರು ಸರ್ಜಾ ಮೇಲೆ ಅನುಮಾನದ ಬೊಟ್ಟು ಮೂಡುವಂತೆ ಮಾಡಿದ್ದರು. ಹೆಸರನ್ನೇ ಹೇಳದೆ ಚಿರು ಹೆಸರು ಚರ್ಚೆಯಾಗುವಂತೆ ಮಾಡಿದ್ದರು. ಅವರು ಹೇಳ್ತಿರೋದು ಚಿರಂಜೀವಿ ಸರ್ಜಾ ಬಗ್ಗೆಯೇ ಅನ್ನೋದ್ರಲ್ಲಿ ಅನುಮಾನವೇನೂ ಇರಲಿಲ್ಲ. ಇದರ ಬಗ್ಗೆ ಬೇಸರಗೊಂಡಿದ್ದು ಸರ್ಜಾ ಕುಟುಂಬ.

    ಚಿರು ಪತ್ನಿ ಮೇಘನಾ ರಾಜ್ ಅವರಂತೂ ಕಣ್ಣೀರು ಹಾಕಿದ್ದಾರೆ. ಅವರೀಗ ಗರ್ಭಿಣಿ. ಇಂತಹ ಹೊತ್ತಿನಲ್ಲಿ ಇದೆಲ್ಲ ಬೇಕಾ ಎಂದು ಅಭಿಮಾನಿಗಳು ಇಂದ್ರಜಿತ್ ಲಂಕೇಶ್ ಅವರಿಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಈಗ ಚಿರು ಇಲ್ಲ. ಅವರ ಫೋಟೋ ನೋಡಿದರೂ ಕಣ್ಣೀರು ಬರುತ್ತೆ. ನಿಮ್ಮ ಆರೋಪಗಳಿಗೆ ಉತ್ತರ ಕೊಡೋಕೂ ಅವರಿಲ್ಲ. ಇಲ್ಲದೇ ಇರುವ ವ್ಯಕ್ತಿಯ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಬೇಕಿತ್ತಾ..? ಇದು ಮೇಘನಾ ರಾಜ್ ಪ್ರಶ್ನೆ.

    ಚಿರಂಜೀವಿ ಸರ್ಜಾ ಪರ ನಿಂತು ವಾದ ಮಾಡಿದ ಪ್ರಶಾಂತ್ ಸಂಬರಗಿ ಮತ್ತು ಶಿವಾರ್ಜುನ್ ಅವರಿಗೆ ಧ್ರುವ ಸರ್ಜಾ ಧನ್ಯವಾದ ಹೇಳಿದ್ದಾರೆ. ತಮ್ಮ ಅಣ್ಣ ಅಂತಹವರಲ್ಲ ಅನ್ನೋದು ಧ್ರುವ ಸರ್ಜಾ ಮಾತು.

    ಗೊತ್ತಿದ್ರೆ ಹೇಳಿ, ಸುಮ್ಮನೆ ಟ್ರೇಲರ್ ಕೊಡಬೇಡಿ ಅನ್ನೋ ರೀತಿಯಲ್ಲಿ ಉತ್ತರ ಕೊಟ್ಟಿರೋದು ನಟ ನವೀನ್ ಕೃಷ್ಣ.

  • ಒಟ್ಟಿಗೇ ಖಾಕಿ ನೋಡಿದ ಸರ್ಜಾ ಬ್ರದರ್ಸ್

    sarja brothers watched khakii movie in theater

    ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಖಾಕಿ ಚಿತ್ರಕ್ಕೆ ಅಣ್ಣ ತಮ್ಮ ಇಬ್ಬರೂ ಒಟ್ಟೊಟ್ಟಿಗೇ  ನೋಡಿದ್ದಾರೆ. ಚಿರಂಜೀವಿ ಸರ್ಜಾ, ತಾನ್ಯಾ ಹೋಪ್, ಶಿವಮಣಿ, ಛಾಯಾಸಿಂಗ್ ನಟಿಸಿರುವ ಖಾಕಿ ಚಿತ್ರ ಸಾಮಾನ್ಯ ಜನರೆಲ್ಲ ಒಟ್ಟಾಗಿ ಅನ್ಯಾಯವನ್ನು ಎದುರಿಸಿ ನಿಲ್ಲುವ ಕಥೆ ಹೊಂದಿದೆ. ನವೀನ್ ರೆಡ್ಡಿ ನಿರ್ದೇಶನದ ಚಿತ್ರಕ್ಕೆ ತರುಣ್ ಶಿವಪ್ಪ, ಮಾನಸ ತರುಣ್ ನಿರ್ಮಾಪಕರು. ಈ ಚಿತ್ರವನ್ನೀಗ ಸರ್ಜಾ ಸೋದರರು ಒಟ್ಟಿಗೇ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ವೀಕ್ಷಿಸಿದ್ದಾರೆ.

    ನರ್ತಕಿಯಲ್ಲಿ ಚಿರಂಜೀವಿ ಸರ್ಜಾ ತಮ್ಮ ತಮ್ಮ ಧ್ರುವ ಸರ್ಜಾರ ಜೊತೆ ಬಂದು ವೀಕ್ಷಿಸಿದ್ದು ವಿಶೇಷ. ಅಣ್ಣನ ಆ್ಯಕ್ಷನ್, ಶಿವಮಣಿಯವರ ಘರ್ಜನೆ ಮೆಚ್ಚಿಕೊಂಡ ಧ್ರುವಾ ಚಿತ್ರವನ್ನು ನೋಡಿ, ಹರಸಿ ಹಾರೈಸಿ ಎಂದು ಮನವಿ ಮಾಡಿಕೊಂಡರು.

  • ಚಿರಂಜೀವಿ ಸರ್ಜಾ ಸಾವು ಹೇಗಾಯ್ತು..? ಡಾಕ್ಟರ್ ರಿಪೋರ್ಟ್ 

    chiru sarja medical sarja

    ಚಿರಂಜೀವಿ ಸರ್ಜಾ ಸಾವು ಅನಿರೀಕ್ಷಿತ ಆಘಾತ. ಏಕೆಂದರೆ ಚಿರಂಜೀವಿ ಸರ್ಜಾ ಫಿಟ್ ಆಗಿದ್ದರು. ವ್ಯಾಯಾಮ ನಿರಂತರವಾಗಿತ್ತು. ವಯಸ್ಸು ಜಸ್ಟ್ 39 ವರ್ಷ. ಹಾಗಾದರೆ ಇದ್ದಕ್ಕಿದ್ದಂತೆ ಸಾವು ಸುತ್ತಿಕೊಂಡಿದ್ದು ಹೇಗೆ..? ಡಾಕ್ಟರ್ ಕೊಟ್ಟಿರೋ ವರದಿಯ ಡೀಟೈಲ್ಸ್ ಹೀಗಿದೆ.

    ಚಿರು ಅವರನ್ನು ವೈದ್ಯರು ಆಸ್ಪತ್ರೆಗೆ ಕರೆತಂದಿದ್ದು ಮಧ್ಯಾಹ್ನ 2.20ಕ್ಕೆ. ಆಸ್ಪತ್ರೆಗೆ ಕರೆತರುವ ಹೊತ್ತಿಗೆ ಚಿರು ಅವರ ಪಲ್ಸ್ ರೇಟ್ ಡೌನ್ ಆಗಿತ್ತು. ಹೀಗಾಗಿ ಆಸ್ಪತ್ರೆಗೆ ಕರೆತಂದ ತಕ್ಷಣ ಅವರನ್ನು ಎಮರ್ಜೆನ್ಸಿ ರೂಂಗೆ ಶಿಫ್ಟ್ ಮಾಡಲಾಯ್ತು. ತಕ್ಷಣ ಅವರನ್ನು ಟ್ರಿಯೇಜ್ ಏರಿಯಾಗೆ ಶಿಫ್ಟ್ ಮಾಡಲಾಯ್ತು. ಟ್ರಿಯೇಜ್ ಏರಿಯಾ ಅಂದ್ರೆ ಏನ್ ಗೊತ್ತಾ..? ಸಿಂಪಲ್ಲಾಗ್ ಅರ್ಥ ಆಗಬೇಕು, ಆರ್ಮಿಯಲ್ಲಿ ಮೈತುಂಬಾ ಗಾಯಗೊಂಡವರನ್ನ ಒಂದು ರೂಂಗೆ ಶಿಫ್ಟ್ ಮಾಡ್ತಾರೆ. ಅಲ್ಲಿ ಒಬ್ಬ ರೋಗಿಗೆ ಏನೇನೆಲ್ಲ ಸೌಲಭ್ಯ ಕೊಡಲು ಸಾಧ್ಯವಿದೆಯೋ, ಎಲ್ಲ ಸೌಲಭ್ಯಗಳೂ ಅಲ್ಲಿರ್ತವೆ. ಇದು ಆರ್ಮಿಯಿಂದ ಬಂದಿರೋ ಪದ. ಹೀಗಾಗಿ ಹಲವು ಆಸ್ಪತ್ರೆಗಳು ಅದನ್ನು ಟ್ರಿಯೇಜ್ ಏರಿಯಾ ಎಂದೇ ಕರೆಯುತ್ತವೆ. ಅದು ಎಮರ್ಜೆನ್ಸಿ ರೂಂಗಳಲ್ಲಿ ಮಾತ್ರ ಇರುತ್ತೆ. ಅಲ್ಲಿ ಚಿಕಿತ್ಸೆ ನೀಡಲಾಯ್ತು.

    ಚಿಕಿತ್ಸೆ ವೇಳೆ ಪಲ್ಸ್ ಬಡಿತ ಹೆಚ್ಚಿಸಲು ಪ್ರಯತ್ನ ಮಾಡಲಾಯ್ತು. ಸಿಪಿಆರ್ ಬಳಸುವ ಮೂಲಕ ನಾಡಿ ಮಿಡಿತವನ್ನು ಹತೋಟಿಯಲ್ಲಿಡಲು ಪ್ರಯತ್ನ ಮಾಡಿದರೂ ಫಲಕಾರಿಯಾಗಲಿಲ್ಲ. 3 ಗಂಟೆ 48 ನಿಮಿಷದವರೆಗೂ ನಡೆದ ನಿರಂತರ ಪ್ರಯತ್ನದಲ್ಲಿ 3 ಬಾರಿ ನಾಡಿ ಮಿಡಿತ ಹೆಚ್ಚಿಸಲು ಯಶಸ್ವಿಯಾದೆವು. ಆದರೆ ಅದು ಸ್ಥಿರವಾಗಿ ನಿಲ್ಲಲಿಲ್ಲ. 3.48ಕ್ಕೆ ಚಿರಂಜೀವಿ ಸರ್ಜಾ ನಿಧನ ಎಂದು ಘೋಷಿಸಿದೆವು.

    ಇದು ಜಯನಗರ ಅಪೋಲೋ ಆಸ್ಪತ್ರೆಯ ಡಾ.ಯತೀಶ್ ಗೋವಿಂದಯ್ಯ ಅವರು ನೀಡಿರುವ ವರದಿ.

    ಚಿರುಗೆ ನಿನ್ನೆಯೇ ಎದೆನೋವು ಕಾಣಿಸಿಕೊಂಡಿತ್ತಂತೆ. ಇಸಿಜಿ ಮಾಡಿಸಿಕೊಂಡು ಬಂದಿದ್ದರಂತೆ. ಅಣ್ಣನಿಗೆ ಧ್ರುವ ಸರ್ಜಾ ಮನೆಯಿಂದ ಮಟನ್ ಮಾಡಿಸಿಕೊಂಡು ತಂದಿದ್ದರು. ಚೆನ್ನಾಗಿಯೇ ಊಟವನ್ನೂ ಮಾಡಿದ್ದ ಚಿರು, ಮಧ್ಯಾಹ್ನ ಮಾವ ಅರ್ಜುನ್ ಸರ್ಜಾ ಜೊತೆ ಮಾತನಾಡಿದ್ದರು. ಚೆನ್ನಾಗಿದ್ದೇನೆ ಎಂದು ತಿಳಿಸಿದ್ದರು. ಅಪ್ಪನ ಜೊತೆ ಯಾಕೋ ಸ್ವಲ್ಪ ಬೆವರು ಬರ್ತಿದೆ ಅಪ್ಪಾ, ಫ್ಯಾನ್ ಹಾಕಿ ಎಂದು ಫ್ಯಾನ್ ಹಾಕಿಸಿಕೊಂಡಿದ್ದರು. ಹಾಗೇ ಮಲಗಿದವರು ಮೇಲೇಳಲೇ ಇಲ್ಲ.

     

  • ಚಿರು ಕೊರೋನಾ ಟೆಸ್ಟ್ ನೆಗೆಟಿವ್

    chiru sarja's corona test report negative

    ಅನಿರೀಕ್ಷಿತವಾಗಿ ಹೃದಯಾಘಾತದಿಂದ ಮೃತಪಟ್ಟ ಚಿರಂಜೀವಿ ಸರ್ಜಾ  ಕೊರೊನಾ ಟೆಸ್ಟ್ ವರದಿ ನೆಗೆಟಿವ್ ಬಂದಿದೆ. ಕೊರೋನಾ ಅನ್ನೋ ಶಂಕೆಯಿಂದ ಟೆಸ್ಟ್ ಮಾಡಲಾಗಿತ್ತು. ಮೃತಪಟ್ಟ ಅರ್ಧ ಗಂಟೆಯ ಒಳಗೆ ಗಂಟಲಿನ ಸ್ವಾಬ್ ತೆಗೆದು ಪರೀಕ್ಷೆ ಮಾಡಲಾಗಿದ್ದು, ಸ್ವಾಬ್ ನಲ್ಲಿ ಕೋವಿಡ್ 19 ಅಂಶಗಳಿಲ್ಲ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

    ಇದೀಗ ಕೊರೊನಾ ಸ್ವ್ಯಾಬ್ ಟೆಸ್ಟ್ ನಲ್ಲಿ ನೆಗಟಿವ್ ಬಂದಿರುವ ಹಿನ್ನೆಲೆಯಲ್ಲಿ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ.

    ಅಪೊಲೊ ಆಸ್ಪತ್ರೆಯ ವೈದ್ಯರಿಂದ  ಮಾಹಿತಿ ಸಿಕ್ಕಿದೆ. ನಾಳೆ ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.

    Related Articles :-

    ಮೇಘನಾ ಸರ್ಜಾ 6 ತಿಂಗಳ ಗರ್ಭಿಣಿ 

    ಚಿರಂಜೀವಿ ಸರ್ಜಾ ಸಾವು ಹೇಗಾಯ್ತು..? ಡಾಕ್ಟರ್ ರಿಪೋರ್ಟ್ 

    Chirranjeevi Sarja Dies Of Massive Heart Attack

     

  • ಜೋಗಿ ಪ್ರೇಮ್, ಚಿರು ಸರ್ಜಾ, ವಿನೋದ್ ಪ್ರಭಾಕರ್ ಸಂಗಮ ಫಿಕ್ಸ್

    jogi prem, chiru sarja, vinod prabhakar in a multi starrer film

    ನಿರ್ದೇಶಕ ಜೋಗಿ ಪ್ರೇಮ್, ಚಿರಂಜೀವಿ ಸರ್ಜಾ ಮತ್ತು ವಿನೋದ್ ಪ್ರಭಾಕರ್ ಒಟ್ಟಿಗೇ ಸಿನಿಮಾ ಮಾಡಲು ರೆಡಿಯಾಗಿದ್ದಾರಂತೆ. ಹೊಸ ನಿರ್ದೇಶಕರೊಬ್ಬರ ಕಥೆಗೆ ಓಕೆ ಎಂದಿದ್ದಾರಂತೆ ಮೂರೂ ಜನ. ಆದರೆ ಚಿತ್ರವಿನ್ನೂ ಆರಂಭಿಕ ಹಂತದಲ್ಲಿದೆ.

    ಚಿರು ಸದ್ಯಕ್ಕೆ ಸಿಕ್ಕಾಪಟ್ಟೆ ಬ್ಯುಸಿ ಇರುವ ಕಲಾವಿದ. ಒಟ್ಟೊಟ್ಟಿಗೇ ನಾಲ್ಕೈದು ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅತ್ತ ಜೋಗಿ ಪ್ರೇಮ್ ಏಕ್ ಲವ್ ಯಾ ಚಿತ್ರದ ನಿರ್ದೇಶನದಲ್ಲಿ ಬ್ಯುಸಿ. ಇತ್ತ ವಿನೋದ್ ಪ್ರಭಾಕರ್ ಕೈಲಿ ಕೂಡಾ 2 ಸಿನಿಮಾಗಳಿವೆ. ಹೀಗಿರುವಾಗ ಈ ಕಾಂಬಿನೇಷನ್ ಸಿನಿಮಾ ಯಾವಾಗ..?

    ಕಥೆ ಕೇಳಿದ್ದೇವೆ, ಇನ್ನೂ ಫೈನಲ್ ಆಗಿಲ್ಲ ಎನ್ನುವ ಚಿರಂಜೀವಿ ಸರ್ಜಾ ಕನ್ನಡಕ್ಕೆ ಮತ್ತೊಂದು ಮಲ್ಟಿಸ್ಟಾರ್ ಸಿನಿಮಾ ಸಿಗ್ನಲ್‍ನ್ನಂತೂ ಕೊಟ್ಟಿದ್ದಾರೆ.

  • ದಚ್ಚುಗೆ ನಾಯಿಯ ಉಡುಗೊರೆ

    Sinnga actor Chiru Sarja Gifts Darshan image

    ಪ್ರಾಣಿ ಪ್ರಿಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪುಟ್ಟದೊಂದು ನಾಯಿಮರಿ ಉಡುಗೊರೆಯಾಗಿ ಸಿಕ್ಕಿದೆ. ದರ್ಶನ್ ಅವರಿಗೆ ಈ ಪ್ರೀತಿಯ ಕಾಣಿಕೆ ನೀಡಿರುವುದು ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ದಂಪತಿ. ಸಿಂಗ ಚಿತ್ರದಲ್ಲಿ ವ್ಹಾಟ್ ಎ ಬ್ಯುಟಿಫುಲ್ ಹುಡುಗಿ ಹಾಡನ್ನು ದರ್ಶನ್ ರಿಲೀಸ್ ಮಾಡಿದ್ದರು. ಈ ಹಾಡಲ್ಲಿ ಫಿಮೇಲ್ ವರ್ಷನ್ ಗಾಯಕಿ ಮೇಘನಾ ರಾಜ್.

    ಬ್ಯೂಟಿಫುಲ್ ಹುಡುಗಿ ಹಾಡು ಹಿಟ್ ಆಗಿದೆ. ಚಿರು,ಮೇಘನಾ ಚಿತ್ರಗಳಿಗೆ ಸದಾ ಬೆಂಬಲವಾಗಿ ನಿಲ್ಲುವ ದರ್ಶನ್‍ಗೆ ಪುಟ್ಟದೊಂದು ಉಡುಗೊರೆ ಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಕುರುಕ್ಷೇತ್ರ ಚಿತ್ರದಲ್ಲಿ ದುರ್ಯೋಧನ ದರ್ಶನ್‍ರ ಪತ್ನಿ ಭಾನುಮತಿಯಾಗಿ ನಟಿಸಿರುವುದು ಕೂಡಾ ಮೇಘನಾ ಅವರೇ. 

    ಉದಯ್ ಮೆಹ್ತಾ ನಿರ್ಮಾಣದ ಸಿಂಗ ಚಿತ್ರಕ್ಕೆ ವಿಜಯ್ ಕಿರಣ್ ನಿರ್ದೇಶನವಿದೆ. ಆದಿತಿ ಪ್ರಭುದೇವ ನಾಯಕಿ. ಚಿತ್ರ ಇದೇ ವಾರ ರಿಲೀಸ್ ಆಗುತ್ತಿದೆ.

     

  • ಪಾರುಲ್ ಮಿಸ್ಸಿಂಗ್.. ನಾಟ್ ರೀಚಬಲ್ - ಸೀಜರ್ ಟೀಂ

    seizer director prpducer upset on heroine parul

    ಬಿಡುಗಡೆಯ ಹೊಸ್ತಿಲಲ್ಲಿ ನಿಂತಿರುವ ಚಿತ್ರ ಸೀಜರ್. ಆದರೆ, ಚಿತ್ರದ ಪ್ರಚಾರಕ್ಕೆ ಚಿತ್ರದ ಕಲಾವಿದರೇ ಸಹಕರಿಸುತ್ತಿಲ್ಲವಾ..? ಸೀಜರ್ ಚಿತ್ರದ ನಿರ್ಮಾಪಕ, ನಿರ್ದೇಶಕರ ಮಾತು ಕೇಳಿದರೆ ಹಾಗನ್ನಿಸೋದು ಸಹಜ.

    ಚಿತ್ರದ ನಾಯಕಿ ಪಾರುಲ್ ಯಾದವ್. ಆದರೆ, ನಿರ್ಮಾಪಕರಿಗೆ, ನಿರ್ದೇಶಕರಿಗೆ ಸಿಗುತ್ತಿಲ್ಲ. ಫೋನ್ ಸ್ವಿಚ್‍ಆಫ್. ಅವರು ಉಳಿದುಕೊಂಡಿರುವ ಹೋಟೆಲ್‍ಗೆ ಹೋಗಿ ಗಂಟೆಗಟ್ಟಲೆ ಕಾದರೂ ಸಿಕ್ಕಲ್ಲ. ತಾವು ನಟಿಸಿರುವ ಸಿನಿಮಾ ಬಗ್ಗೆ ಒಂದೇ ಒಂದು ಮಾತೂ ಆಡಲ್ಲ. ನಾವು ಪಾರುಲ್ ಅವರಿಗೆ ಯಾವುದೇ ಸಂಭಾವನೆ ಬಾಕಿ ಉಳಿಸಿಕೊಂಡಿಲ್ಲ ಎನ್ನುತ್ತಾರೆ ಚಿತ್ರದ ನಿರ್ದೇಶಕ ವಿನಯ್ ಕೃಷ್ಣ.

    ನಿರ್ಮಾಪಕ ತ್ರಿವಿಕ್ರಮ್ ಅವರದ್ದೂ ಇದೇ ಆರೋಪ. ಚಿತ್ರ 4 ವರ್ಷಗಳ ಹಿಂದೆ ಶುರುವಾಯ್ತು. ಆರಂಭದಲ್ಲಿ ಕನ್ನಡದಲ್ಲಷ್ಟೇ ಎಂದುಕೊಂಡಿದ್ದೆವು, ನಂತರ 4 ಭಾಷೆಯಲ್ಲೂ ನಿರ್ಮಿಸಿದೆವು. 15 ಕೋಟಿ ವೆಚ್ಚದ ಸಿನಿಮಾ. ಬಿಡುಗಡೆ ವಿಳಂಬವಾಗಿದ್ದಕ್ಕೆ ಬೇರೆ ಬೇರೆ ಕಾರಣಗಳಿವೆ. ಕಲಾವಿದರು ನಿರ್ಮಾಪಕರಿಗೆ ಈ ರೀತಿ ಅವಮಾನ ಮಾಡಬಾರದು ಎಂದು ಆಕ್ರೋಶ ಹೊರಹಾಕಿದ್ದಾರೆ ತ್ರಿವಿಕ್ರಮ್.

    ಚಿತ್ರತಂಡದ ಮುನಿಸು, ಆಕ್ರೋಶವೇನೇ ಇರಲಿ, ಸೀಜರ್ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಉಳಿದದ್ದು ಪ್ರೇಕ್ಷಕರಿಗೆ ಬಿಟ್ಟಿದ್ದು.

  • ಮೇಘನಾ ಸರ್ಜಾ 6 ತಿಂಗಳ ಗರ್ಭಿಣಿ 

    meghana raj 6 months pregnan

    ಮೇಘನಾ ರಾಜ್, ಚಿರಂಜೀವಿ ಸರ್ಜಾ ಅವರನ್ನು ಮದುವೆಯಾಗಿ 2 ವರ್ಷವಾಗಿತ್ತು. ಅವರದ್ದು ಲವ್ ಮ್ಯಾರೇಜ್. ಎರಡೂ ಕುಟುಂಬಗಳ ಜೊತೆ ಸ್ನೇಹ ಸಂಬಂಧವೂ ಉತ್ತಮವಾಗಿತ್ತು. ಹೀಗಾಗಿ ಮಕ್ಕಳ ಪ್ರೀತಿಗೆ ಅಡ್ಡಿ ಬರಲಿಲ್ಲ. ಪ್ರೀತಿಗೆ ಮದುವೆಯ ಮುದ್ರೆ ಬಿದ್ದಿತ್ತು.

    ಅವರ ದಾಂಪತ್ಯವೂ ಚೆನ್ನಾಗಿತ್ತು. ಮೇಘನಾ ರಾಜ್ ಈಗ 6 ತಿಂಗಳ ಗರ್ಭಿಣಿ. ಇತ್ತೀಚೆಗೆ ಪತ್ನಿಯ ಸೀಮಂತವನ್ನು ಹೇಗೆ ಮಾಡಬೇಕು ಎಂದು ಮನೆಯವರ ಜೊತೆ ಚರ್ಚೆ ಮಾಡಿಕೊಂಡಿದ್ದ ಚಿರು, ಅದನ್ನು ಬಹಿರಂಗ ಪಡಿಸಲು ಕಾಯುತ್ತಿದ್ದರು. ಮನೆಯವರಿಗೆ ಹಾಗೂ ಚಿತ್ರರಂಗದ ಕೆಲವೇ ಕೆಲವು ಆತ್ಮೀಯರಿಗೆ ಮಾತ್ರವೇ ಮೇಘನಾ ರಾಜ್ ಗರ್ಭಿಣಿ ಎಂಬ ವಿಷಯ ಗೊತ್ತಿತ್ತು. 

    ಈಗ ಪುಟ್ಟ ಕಂದನನ್ನು ನೋಡುವ ಮುನ್ನವೇ ಚಿರು ಇನ್ನಿಲ್ಲವಾಗಿದ್ದಾರೆ. ಮತ್ತೆ ಹುಟ್ಟಿ ಬಾ ಚಿರು..

  • ಮೊದಲ ರಿಲೀಸ್ ಆಗುತ್ತಾ ರಣಂ..?

    meet the prime suspect behind bangalore drug mafia

    ಕೊರೊನಾ ಸಂಕಷ್ಟ, ಲಾಕ್ ಡೌನ್ ಮುಗಿದು ಥಿಯೇಟರ್ ಓಪನ್ ಮಾಡೋಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ರಿಲೀಸ್ ಆಗುವ ಮೊದಲ ಸಿನಿಮಾ ಯಾವುದು..? ಈ ಪ್ರಶ್ನೆಗೆ ಉತ್ತರ ರಣಂ ಆಗಬಹುದಾ..?

    ಕಾರಣ ಇಷ್ಟೆ, 7 ತಿಂಗಳ ನಂತರ ದಿನ ಪತ್ರಿಕೆಗಳಲ್ಲಿ ಸಿನಿಮಾ ಜಾಹೀರಾತು ಕಾಣಿಸಿದೆ. ರಣಂ ಚಿತ್ರದ್ದು. ಅದೂ ಥಿಯೇಟರುಗಳ ಹೆಸರಿನ ಸಮೇತ. ಹೀಗಾಗಿ ಥಿಯೇಟರ್ ಓಪನ್ ಆಗುತ್ತಿದ್ದಂತೆ ರಣಂ ಮೊದಲ ರಿಲೀಸ್ ಆದರೂ ಆಶ್ಚರ್ಯವಿಲ್ಲ.

    ವಿಚಿತ್ರವೆಂದರೆ ಇದು ಚಿರಂಜೀವಿ ಸರ್ಜಾ ಸಿನಿಮಾ. ಲಾಕ್ ಡೌನ್ ಶುರುವಾದಾಗ ಥಿಯೇಟರಿನಲ್ಲಿದ್ದ ಕೊನೆಯ ಚಿತ್ರವೂ ಅವರದ್ದೇ. ಶಿವಾರ್ಜುನ. ರಣಂ ರಿಲೀಸ್ ಆದರೆ.. ಲಾಕ್ ಡೌನ್ ಮುಗಿದ ನಂತರ ಮೊದಲ ಚಿತ್ರವೂ ಅವರದ್ದೇ ಆಗಲಿದೆ. ನೋವಿನ ಸಂಗತಿಯೆಂದರೆ ಲಾಕ್ ಡೌನ್ ಶುರುವಾದಾಗ ನಮ್ಮೊಂದಿಗಿದ್ದ ಅವರು ಈಗ ಇಲ್ಲ. 

  • ರಿಲೀಸ್ ಆಗುತ್ತಿದೆ ಚಿರು ಸರ್ಜಾರ ರಣಂ

    ರಿಲೀಸ್ ಆಗುತ್ತಿದೆ ಚಿರು ಸರ್ಜಾರ ರಣಂ

    ಚಿರಂಜೀವಿ ಸರ್ಜಾ ನಟಿಸಿರುವ ರಣಂ, ಲಾಕ್ ಡೌನ್ ಇಲ್ಲದೇ ಹೋಗಿದ್ದರೆ 2020ರಲ್ಲೇ ರಿಲೀಸ್ ಆಗಬೇಕಿತ್ತು. ಚಿತ್ರ ಪೋಸ್ಟ್ ಪ್ರೊಡಕ್ಷನ್ ಕೂಡಾ ಮುಗಿಸಿ ರಿಲೀಸ್ ಆಗೋಕೆ ರೆಡಿಯಾಗಿತ್ತು. ಈಗ ಚಿರಂಜೀವಿ ಸರ್ಜಾ ಅಭಿನಯದ ರಣಂ ಮಾರ್ಚ್ 26ಕ್ಕೆ ರಿಲೀಸ್ ಆಗುತ್ತಿದೆ. ಚಿರು ನಿಧನದ ನಂತರ ರಿಲೀಸ್ ಆಗುತ್ತಿರುವ ಚಿರು ಅಭಿನಯದ ಮೊದಲ ಸಿನಿಮಾ ರಣಂ.

    ಕನಕಪುರ ಶ್ರೀನಿವಾಸ್ ನಿರ್ಮಾಣದ ಚಿತ್ರದಲ್ಲಿ ಚಿರು ಜೊತೆ ಆ ದಿನಗಳು ಖ್ಯಾತಿಯ ಚೇತನ್ ಕೂಡಾ ನಟಿಸಿದ್ದಾರೆ. ಚಿತ್ರಕ್ಕೆ ವಿ. ಸಮುದ್ರ ನಿರ್ದೇಶನವಿದೆ. ವರಲಕ್ಷ್ಮಿ ಶರತ್ ಕುಮಾರ್, ಸಾಧುಕೋಕಿಲ, ಬುಲೆಟ್ ಪ್ರಕಾಶ್ ಕೂಡಾ ತಾರಾಗಣದಲ್ಲಿದ್ದಾರೆ. ಚಿರು ಮತ್ತು ಬುಲೆಟ್ ಪ್ರಕಾಶ್ ಇಬ್ಬರೂ ಈಗ ಬದುಕಿಲ್ಲ.