` chandan shetty, - chitraloka.com | Kannada Movie News, Reviews | Image

chandan shetty,

  • ಶರಣೆ ಸಂಕಮ್ಮನ ಈ ಕಥೆಯನ್ನು ಚಂದನ್ ಶೆಟ್ಟಿ ತಿಳಿದುಕೊಳ್ಳಬೇಕಿತ್ತು..!

    kolumande jangamadeva

    ಕೋಲುಮಂಡೆ ಜಂಗಮ ದೇವ.. ಜಾನಪದ ಗೀತೆಯನ್ನು ರ್ಯಾಪ್ ಶೈಲಿಯಲ್ಲಿ ಹಾಡಿ ಹಿಟ್ ಆಗಿದ್ದಾರೆ ಚಂದನ್ ಶೆಟ್ಟಿ. ಜೊತೆಯಲ್ಲಿ ವಿವಾದಗಳನ್ನೂ ಮೈಮೇಲೆ ಎಳೆದುಕೊಂಡಿದ್ದಾರೆ. ಶರಣೆ ಸಂಕಮ್ಮನನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎನ್ನುವುದು ಚಂದನ್ ಶೆಟ್ಟಿ ಮೇಲಿರೋ ಆರೋಪ. ಅದರಲ್ಲಿ ಸತ್ಯ ಇಲ್ಲದೆ ಏನಿಲ್ಲ. ಚಂದನ್ ಶೆಟ್ಟಿ, ಗ್ಲಾಮರ್ ಹೆಸರಿನಲ್ಲಿ ಶರಣೆಯನ್ನು ಬಿಕಿನಿ ಮಾದರಿಯ ಡ್ರೆಸ್‍ನಲ್ಲಿ ತೋರಿಸಿರುವುದು ಒಪ್ಪಲು ಸಾಧ್ಯವಿಲ್ಲ. ಮಾದಪ್ಪನ ಭಕ್ತರಿಗಷ್ಟೇ ಅಲ್ಲ, ಪ್ರತಿಯೊಬ್ಬರಿಗೂ ಇದು ನೋವು ತಂದಿದೆ.

    ಇಷ್ಟಕ್ಕೂ ಶರಣೆ ಸಂಕಮ್ಮನ ಕಥೆಯೇನು ಗೊತ್ತೇ.. ಸಂಕಮ್ಮ ಮತ್ತು ನೀಲಯ್ಯ ದಂಪತಿಗಳು. ಸಂಕಮ್ಮನೋ ಅದ್ಭುತ ಸುಂದರಿ. ಊರವರ ಕಣ್ಣೆಲ್ಲ ನನ್ನ ಹೆಂಡತಿಯೇ ಮೇಲೇ ಇದೆ ಎಂದು ಅನುಮಾನಗೊಳುತ್ತಾನೆ ನೀಲಯ್ಯ. ಹೆಂಡತಿಯನ್ನು ಬಿಟ್ಟು ಕದಲೋದಿಲ್ಲ. ಆದರೆ ಹೊಟ್ಟೆಪಾಡಿಗೆ ಜೇನು ತರಲು ಕಾಡಿಗೆ ಹೋಗಬೇಕಲ್ಲ. ಹಾಗೆ ಹೊರಟಾಗ ಹೆಂಡತಿಯ ಬಳಿ ಯಾವುದೇ ಪುರುಷರನ್ನು ಮುಟ್ಟೋದಿಲ್ಲ ಎಂದು ವಚನ ಕೊಡು ಎನ್ನುತ್ತಾನೆ.

    ನಾನು ತಪ್ಪು ಮಾಡಿದ್ದರೆ ಸಾಕ್ಷಿ ಕೊಡು. ಅನುಮಾನ ಬೇಡ ಎನ್ನುತ್ತಾಳೆ. ಗಂಡನನ್ನು ಪ್ರತಿರೋಧಿಸುತ್ತಾಳೆ. ಆಗ ನೀಲಯ್ಯ ಹೆಂಡತಿಗೆ ಸೀರೆ ಬಿಟ್ಟು, ಎಲೆಯ ಬಟ್ಟೆ ತೊಡಿಸಿ, ಮನೆಯ ಸುತ್ತ ಮಂಡಲ ಸೃಷ್ಟಿಸಿ, ರಾಕ್ಷಸ ಗೊಂಬೆಯನ್ನು ಕಾವಲಿಗಿಟ್ಟು ಹೋಗುತ್ತಾನೆ. ಆಗ ಮಾದಯ್ಯನನ್ನು ಬೇಡಿಕೊಳ್ಳುವ ಸಂಕಮ್ಮನನ್ನು ಹಲ್ಲಿಯ ರೂಪದಲ್ಲಿ ಬಂದು ಕಾಯುತ್ತಾನೆ ಮಾದಪ್ಪ. ಇದು ಕಥೆ.

    ಆದರೆ ಚಂದನ್ ಶೆಟ್ಟಿ ಹಾಡಿನಲ್ಲಿ ಸಂಕಮ್ಮನನ್ನು ಬಳೆಗಾರನ ಮೋಡಿಗೆ ಬೀಳುವ ಹೆಣ್ಣಾಗಿ, ಕಡಿಮೆ ಬಟ್ಟೆಯಲ್ಲಿ ತೋರಿಸಿದ್ದಾರೆ. ಸಿಂಪಲ್ಲಾಗ್ ಹೇಳ್ಬೇಕಂದ್ರೆ ಕ್ಯಾಬರೆ ಡ್ರೆಸ್. ಇದು ಭಕ್ತರ ಸಿಟ್ಟಿಗೆ ಕಾರಣವಾಗಿದೆ. ಇಲ್ಲಿ ಚಂದನ್ ಶೆಟ್ಟಿ ತಿಳಿದುಕೊಳ್ಳಬೇಕಾಗಿದ್ದ ವಿಷಯ ಇಷ್ಟೆ...

    ತಾನು ಮಾದಪ್ಪನ ಭಕ್ತರ ಜಾನಪದ ಗೀತೆಯನ್ನು ಹಾಡು ಮಾಡುತ್ತಿದ್ದೇನೆ. ಭಕ್ತರ ಭಾವನೆಗೆ ಧಕ್ಕೆಯಾಗಬಾರದು ಎಂಬ ವಿಷಯ. ವಿವಾದವಾದರೆ ಜನಪ್ರಿಯತೆ ಹೆಚ್ಚಲಿದೆ ಎಂದು ಹೊರಟಾಗ ಇಂತಹ ಭಾನಗಡಿಗಳಾಗುತ್ತವೆ. 

  • ``ನಾವೆಲ್ಲ ಮನೇಲೆ ಇರೋಣ.. ಮಿಸ್ ಆದ್ರೆ ಡೈರೆಕ್ಟ್ ಸ್ಮಶಾಣ..''

    chandan niveditha has special song for corona virus

    ಎಣ್ಣೆ ಸಪ್ಲೈ ಮಾಡ್ಬಹುದೇನೋ ಕುಡುಕ್ರು ಸ್ವಲ್ಪ ತಡ್ಕಳಿ..

    ಪೊಲೀಸ್ ಲಾಠಿ ಏಟು ತಿಂದವ್ರು ಮುಲಾಮು ಹಚ್ಕೊಳಿ..

    ನಾವೆಲ್ಲ ಮನೇಲೆ ಇರೋಣ.. ಮಿಸ್ ಆದರೆ ಡೈರೆಕ್ಟು ಸ್ಮಶಾಣ..

    ಎರಡು ಸಲ ಮಾಡ್ಕೊಳಿ ಸ್ನಾನ.. ತುಂಬ ಡೇಂಜರ್ ಕಣ್ರೋ ಈ ಕೊರೋನ.. ಕೊರೋನಾ.. ಕೊರೋನಾ..

    ನಿಂಗೆ ಸದ್ಯದಲ್ಲೇ ಮಾಡ್ತಿವಿ ತಿಥಿನಾ..

    ಇದು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡರ ಕೊರೋನಾ ಗೀತೆ. ಕೊರೋನಾ ಜಾಗೃತಿಗಾಗಿ ಮೊನ್ನೆ ಮೊನ್ನೆಯಷ್ಟೇ ಎಸ್‍ಪಿಬಿ ಹಾಡು ಹಾಡಿದ್ದರು. ಜಯಂತ ಕಾಯ್ಕಿಣಿ ಸಾಹಿತ್ಯ ಬರೆದಿದ್ದರು. ನವೀನ್ ಕೃಷ್ಣ ಏಕಪಾತ್ರಾಭಿನಯ ಮಾಡಿದ್ದರು. ಬೇರೆ ಬೇರೆ ಭಾಷೆಗಳಲ್ಲಿ ಹಾಡುಗಳ ಸುರಿಮಳೆಯೇ ಸುರಿಯತ್ತಿದೆ. ಕನ್ನಡದಲ್ಲಿ ರ್ಯಾಪ್ ಸಾಂಗ್ ಬಂದಿದೆ.

     

  • Chandan and Niveditha Gowda gets engaged

    chandan and niveditha gets engaged

    'Big Boss' stars Chandan Shetty and Niveditha Gowda on Monday got engaged in a private ceremony in Mysore.

    Rapper and music director Chandan Shetty and Niveditha Gowda participated as contestants in the fifth season of the 'Big Boss'. Chandan went on to become the winner of the fifth season and there were speculations that Chandan and Niveditha are in love. It was confirmed last month when Chandan officially proposed to Niveditha during the Yuva Dasara in Mysore. Chandan proposing in a government function had irked a lot of opposition from all over and Chandan finally apologised for proposing publicly.

    On Monday, Chandan and Niveditha finally got engaged in a private function in Mysore. Many from the film and television fraternity attended the engagement and wished the couple.

  • Shetty's Loudspeaker single on May 27

    chandan shetty's song in loudspeaker

    Rapper Chandan Shetty will be releasing his single Chaddi Olage Iruve Bitkoli for the film Loudspeaker on May 17. The film is directed by Tejas of Maley (starring Prem) and Dhairyam (starring Ajai Rao). Four new actors are being introduced by Tejas in this film.

    Their faces have not yet been revealed till now. It is not known of they will be unveiled in the song on May 17. As of now there is a lot of secrecy about the actors. Meanwhile there is also a lot of curiosity about the Chaddi Olage song by Chandan Shetty.

  • ಎಲ್ರ ಕಾಲೆಳೆಯುತ್ತೆ ಕಾಲ

    ಎಲ್ರ ಕಾಲೆಳೆಯುತ್ತೆ ಕಾಲ

    ಎಲ್ರ ಕಾಲ್ ಎಳೀತದೆ ಕಾಲ.. ಈ ಲೈನ್ ಕಿವಿಗೆ ಬಿದ್ದರೆ ತಕ್ಷಣ ನೆನಪಾಗೋದು ಉಪ್ಪಿ. ಅದೇ ಲೈನ್ ಇಟ್ಟುಕೊಂಡು ಮಾಡಿದ್ದ ಸೃಷ್ಟಿಸಿದ್ದ ಹಾಡು ಸೂಪರ್ ಹಿಟ್ ಆಗಿತ್ತು. ಅದೀಗ ಹೊಸ ಚಿತ್ರದ ಟೈಟಲ್ ಆಗಿದೆ.

    ರ್ಯಾಪರ್ ಮತ್ತು ಮ್ಯೂಸಿಕ್ ಡೈರೆಕ್ಟರ್ ಚಂದನ್ ಶೆಟ್ಟಿ ಹೀರೋ ಆಗುತ್ತಿದ್ದಾರಲ್ಲ.. ಆ ಚಿತ್ರದ ಟೈಟಲ್ ಇದೇ.. ಎಲ್ರ ಕಾಲೆಳೆಯುತ್ತೆ ಕಾಲ. ಸುಜಯ್ ಶಾಸ್ತ್ರಿ ನಿರ್ದೇಶನದ ಸಿನಿಮಾ ಇದು. ಉಷಾ ಗೋವಿಂದ ರಾಜು ನಿರ್ದೇಶನದ ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರದಲ್ಲಿ ಚಂದನ್ ಶೆಟ್ಟಿ ರೆಟ್ರೋ ಸ್ಟೈಲಿನಲ್ಲಿ ಕಾಣಿಸಿಕೊಳ್ತಾರೆ. ಸುಜಯ್ ಶಾಸ್ತ್ರಿ ಡೈರೆಕ್ಷನ್ ಆಗಿರೋದ್ರಿಂದ ಪನ್ ಮತ್ತು ಫನ್‍ಗೆ ಬರ ಇರಲ್ಲ. 

  • ಎಲ್ರ ಕಾಲೆಳೆಯುತ್ತೆ ಕಾಲ ನಂತರ ಇನ್ನೊಂದು ಚಿತ್ರಕ್ಕೂ ಚಂದನ್ ಶೆಟ್ಟಿ ಹೀರೋ

    ಎಲ್ರ ಕಾಲೆಳೆಯುತ್ತೆ ಕಾಲ ನಂತರ ಇನ್ನೊಂದು ಚಿತ್ರಕ್ಕೂ ಚಂದನ್ ಶೆಟ್ಟಿ ಹೀರೋ

    ಚಂದನ್ ಶೆಟ್ಟಿ. ರ್ಯಾಪರ್ ಆಗಿ ಬಂದವರು ಮ್ಯೂಸಿಕ್ ಡೈರೆಕ್ಟರ್ ಆಗಿಯೂ ಗೆದ್ದರು. ಈಗ ಹೀರೋ ಆಗಿದ್ದಾರೆ. ಚಂದನ್ ಶೆಟ್ಟಿ ಅಭಿನಯದ ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಇದರ ನಡುವೆಯೇ ಇನ್ನೊಂದು ಚಿತ್ರಕ್ಕೆ ಯೆಸ್ ಎಂದಿದ್ದಾರೆ ಚಂದನ್ ಶೆಟ್ಟಿ.

    ಎಲ್ರ ಕಾಲೆಳೆಯುತ್ತೆ ಕಾಲ 80ರ ದಶಕದ ಕಥೆಯಾದರೆ ಹೊಸ ಸಿನಿಮಾ ಕ್ರೈಂ ಥ್ರಿಲ್ಲರ್. ದಮಯಂತಿ, ರಾಕ್ಷಸಿ(ತೆಲುಗು), ನೀ ಎನ್ ಉಯಿರೆ(ತಮಿಳು) ಚಿತ್ರಗಳನ್ನು ನಿರ್ಮಾಣ ಮಾಡಿದ್ದ ದಮಯಂತಿ ಚಿತ್ರವನ್ನು ನಿರ್ದೇಶಿಸಿದ್ದ ನವರಸನ್ ನಿರ್ಮಾಣದ ಚಿತ್ರವಿದು. ವಿಜಯದಶಮಿಯಂದು ಚಿತ್ರ ಸೆಟ್ಟೇರಲಿದೆ.

    ಚಂದನ್ ಶೆಟ್ಟಿ ಚಿತ್ರಕ್ಕೆ ಕಿರಣ್ ಕುಮಾರ್ ನಿರ್ದೇಶಕರಾಗಿದ್ದಾರೆ. ಚಂದನ್ ಶೆಟ್ಟಿ ಚಿತ್ರದಲ್ಲಿ ಹೀರೋ ಆಗುವುದರ ಜೊತೆಗೆ ಸಂಗೀತ ನಿರ್ದೇಶನವನ್ನೂ ಮಾಡಲಿದ್ದಾರೆ.

  • ಎಲ್ರ ಕಾಲೆಳೆಯುತ್ತೆ ಕಾಲ.. : ಟೀಸರ್ ನೋಡಿದ್ರಾ?

    ಎಲ್ರ ಕಾಲೆಳೆಯುತ್ತೆ ಕಾಲ.. : ಟೀಸರ್ ನೋಡಿದ್ರಾ?

    ಹೀರೋ ಪೊಗರು ಸೆನ್ಸೇಷನ್ ಸ್ಟಾರ್ ಚಂದನ್ ಶೆಟ್ಟಿ. ಡೈರೆಕ್ಟರ್ ಸಗಣಿ ಪಿಂಟೋ ಖ್ಯಾತಿಯ ಸುಜಯ್ ಶಾಸ್ತ್ರಿ. ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರದ ಟೀಸರ್ ಹೊರಬಂದಿದೆ. ನಗದೇ ಇದ್ದವನಿಗೆ ಇದ್ನೋಡು ಗ್ರಾಮದ ಊರ್ಬಾಗ್ಲು ಟೀಸ್ಟಾಲ್‍ನಲ್ಲಿ ಎಲ್ಲ ಫ್ರೀ.. ಎನ್ನುವಷ್ಟು ತರಲೆ.. ತಮಾಷೆ ಇದೆ.

    ಮೂರೇ ಮೂರು ಪೆಗ್ಗಿಗೆ ತಲೆ ಗಿರಗಿರ ಎನ್ನಿಸಿದ್ದ ಚಂದನ್ ಶೆಟ್ಟಿ, ಈ ಚಿತ್ರದ ಮೂಲಕ ಹೀರೋ ಆಗಿದ್ದಾರೆ. ಅವರ ತಲೆಯನ್ನೇ ಗಿರಗಿರ ಎನ್ನಿಸಿರೋದು ಸುಜಯ್ ಶಾಸ್ತ್ರಿ. ಏರಿದ ಕಿಕ್ ಇಳಿಸೋ ಹಾಗೆ ಸವಾಲ್ ಹಾಕಿರೋದು ನಾಯಕಿ ಅರ್ಚನಾ ಕೊಟ್ಟಿಗೆ.

    ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರದ ಮೂಲಕ ಡೈರೆಕ್ಟರ್ ಆದ ಸುಜಯ್ ಶಾಸ್ತ್ರ ಅವರಿಗೆ ಇದು 2ನೇ ಸಿನಿಮಾ. ಒಬ್ಬ ಸಂಗೀತ ನಿರ್ದೇಶಕ ನಾಯಕನಾಗಿರೋ ಚಿತ್ರಕ್ಕೆ ಸಂಗೀತ ನೀಡಿರೋ ಪ್ರವೀಣ್-ಪ್ರದೀಪ್ ಜೋಡಿ ಭರವಸೆ ಮೂಡಿಸಿದೆ. ಉಷಾ ಗೋವಿಂದರಾಜು ನಿರ್ಮಾಣದ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ತಾರಾ, ಮಂಡ್ಯ ರಮೇಶ್, ದತ್ತಣ್ಣ, ಮಂಜು ಪಾವಗಡ.. ಹೀಗೆ ಸೀನಿಯರ್ ಕಲಾವಿದರೇ ಚಿತ್ರದಲ್ಲಿದ್ದಾರೆ. ಟೀಸರ್‍ನಲ್ಲಿ ಕಥೆಯ ಗುಟ್ಟು ಬಿಡದ ಸುಜಯ್ ಶಾಸ್ತ್ರಿ, ಇದೊಂದು ಪಕ್ಕಾ ಕಾಮಿಡಿ ಮೂವಿ ಅನ್ನೋದನ್ನು ಮಾತ್ರ ಸ್ಪಷ್ಟವಾಗಿ ಹೇಳಿದ್ದಾರೆ.ನ

  • ಕೊರೋನಾ ಟೆಸ್ಟ್ : ನಿವೇದಿತಾ, ಚಂದನ್ ಶೆಟ್ಟಿ ರಿಯಾಕ್ಷನ್

    chandan shetty niveditha gowd'a reaction

    ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ವಿದೇಶಕ್ಕೆ ಹನಿಮೂನ್‍ಗೆ ಹೋಗಿದ್ದಾರೆ. ಅವರು ಬಂದ ತಕ್ಷಣ ಅವರಿಗೆ ಕೊರೋನಾ ಟೆಸ್ಟ್ ಮಾಡಿಸಬೇಕು ಎಂದು ಸಂಘಟನೆಯೊಂದು ಮೈಸೂರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿತ್ತು. ವಿಚಿತ್ರವೇನು ಗೊತ್ತೇ..? ಆ ಸಂಘಟನೆಯವರು ಮನವಿ ಮಾಡುವ ಹೊತ್ತಿಗೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಇಂಡಿಯಾಗೆ ವಾಪಸ್ ಬಂದು ವಾರವಾಗಿತ್ತು. ಅಷ್ಟೆ ಅಲ್ಲ, ನಿವೇದಿತಾ ಆಗಲೇ ಏರ್‍ಪೋರ್ಟ್‍ನಲ್ಲಿ ಕೆಲಸಕ್ಕೆ ಹಾಜರಾಗಿದ್ದಾರೆ. ಹನಿಮೂನ್ ಸಂಭ್ರಮ ಮುಗಿದು, ನಿತ್ಯ ಜೀವನ ಶುರುವಾಗಿದೆ.

    ನಾವು ವಾರದ ಹಿಂದೆಯೇ ವಾಪಸ್ ಬಂದಿದ್ದೇವೆ. ನಾವು ಇಟಲಿಗೆ ಹೋಗಲೇ ಇಲ್ಲ. ನೆದರ್‍ಲ್ಯಾಂಡ್‍ಗೆ ಹೋಗಿದ್ದೆವು. ವಾಪಸ್ ಬಂದಿದ್ದೇವೆ. ಏರ್‍ಪೋರ್ಟ್‍ನಲ್ಲಿ ಪರೀಕ್ಷೆ ಸುದೀರ್ಘವಾಗಿ ನಡೆಯಿತು. ನೋ ಪ್ರಾಬ್ಲಂ ಎಂದಿದ್ದಾರೆ ಚಂದನ್ ಶೆಟ್ಟಿ.

    ನಿವೇದಿತಾ ಅವರ ತಾಯಿ ಹೇಮ ಕೂಡಾ ಪ್ರತಿಕ್ರಿಯೆ ಕೊಟ್ಟಿದ್ದಾರೆ. ನಾವು ಮಗಳನ್ನು ತುಂಬಾ ಎಚ್ಚರಿಕೆಯಿಂದ ಬೆಳೆಸಿದ್ದೇವೆ. ಅವರು ವಾಪಸ್ ಬಂದಾಗಲೂ ಇಷ್ಟು ಆತಂಕವಾಗಿರಲಿಲ್ಲ. ಈಗ ಇವರೆಲ್ಲ ಕೇಳುತ್ತಿದ್ದರೆ ಭಯವಾಗುತ್ತಿದೆ ಎಂದಿದ್ದಾರೆ ಹೇಮ.

    ಸಿಂಪಲ್ಲಾಗ್ ಹೇಳ್ಬೇಕಂದ್ರೆ, ಚಂದನ್ ಶೆಟ್ಟಿ, ನಿವೇದಿತಾ ಇಬ್ಬರೂ ಚೆನ್ನಾಗಿದ್ದಾರೆ. ಅವರಿಬ್ಬರಿಗೂ ಕೊರೋನಾ ಟೆಸ್ಟ್ ಆಗಿದೆ. ಅವರಿಬ್ಬರಿಗೂ ಕೊರೋನಾ ಸೋಂಕು ಇಲ್ಲ.

    Also Read :-

    ಚಂದನ್ ಶೆಟ್ಟಿ, ನಿವೇದಿತಾಗೆ ಬಂದ ತಕ್ಷಣ ಕೊರೋನಾ ಟೆಸ್ಟ್ ಮಾಡ್ಸಿ - ಡಿಸಿಗೆ ಮನವಿ

  • ಗಾಂಜಾ ಹಾಡಿನ ಎಫೆಕ್ಟ್.. ಚಂದನ್ ಶೆಟ್ಟಿಗೆ ನೋಟಿಸ್

    chandan shetty gets notice from ccb

    ಬಿಗ್‍ಬಾಸ್ ಖ್ಯಾತಿಯ ಸಿಂಗರ್ ಚಂದನ್ ಶೆಟ್ಟಿ ಅವರಿಗೆ 2 ವರ್ಷದ ಹಿಂದಿನ ಗಾಂಜಾ ಹಾಡಿನ ಬಿಸಿ ತಟ್ಟಿದೆ. ಸಿನಿಮಾವೊಂದಕ್ಕೆ ಚಂದನ್ ಶೆಟ್ಟಿ ಹಾಡಿದ್ದ ಹಾಡು, ಯೂಟ್ಯೂಬ್‍ನಲ್ಲಿ ಹಿಟ್ ಆಗಿತ್ತು.

    ಹಾಡಿನಲ್ಲಿನ ಸಾಹಿತ್ಯ, ಮಾದಕ ವಸ್ತು ಸೇವನೆಗೆ ಪ್ರಚೋದಿಸುವಂತಿದೆ ಎಂದು ಹೇಳಿ ಮಾದಕ ದ್ರವ್ಯ ನಿಯಂತ್ರಣ ವಿಭಾಗದ ಪೊಲೀಸರು ಚಂದನ್ ಶೆಟ್ಟಿಗೆ ನೋಟಿಸ್ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಚಂದನ್ ಶೆಟ್ಟಿ, ನಿರ್ದೇಶಕರ ಕಲ್ಪನೆಗೆ ತಕ್ಕಂತೆ ನಾನು ಹಾಡು ಹಾಡಿದ್ದೇನೆ. ಇದು ಇಷ್ಟು ತಪ್ಪು ಎಂದು ಗೊತ್ತಿರಲಿಲ್ಲ. ಇಷ್ಟು ಪ್ರಭಾವ ಬೀರುತ್ತೆ ಎಂಬ ಅರಿವೂ ಇರಲಿಲ್ಲ. ಸಿಸಿಬಿ ನೋಟಿಸ್‍ಗೆ ಖುದ್ದು ಹಾಜರಾಗಿ ವಿವರಣೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.

  • ಚಂದನ್ ನಿವೇದಿತಾ ಒಂದು ಪ್ರಪೋಸಲ್ : 4 ಕೇಸು

    4 cases filed against chandan shetty and niveditha gowda

    ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ, ಬಿಗ್ ಬಾಸ್ ಗೊಂಬೆ ಖ್ಯಾತಿ ನಿವೇದಿತಾ ಗೌಡ ದಸರಾ ಪ್ರೇಮ ನಿವೇದನೆ ವಿವಾದವನ್ನಷ್ಟೇ ಅಲ್ಲ, ತಲ್ಲಣವನ್ನೂ ಸೃಷ್ಟಿಸಿದೆ. ಸಚಿವ ವಿ.ಸೋಮಣ್ಣನವರೇನೋ ಆರಂಭದಲ್ಲಿ ಕೇಸು, ಚಾಮುಂಡೇಶ್ವರಿ ಶಾಪ ಎಂದೆಲ್ಲ ಮಾತನಾಡಿದರೂ, ಕೊನೆ ಕೊನೆಗೆ ಹೋಗ್ಲಿ ಬಿಡಿ ಅತ್ಲಾಗೆ ಎಂದುಕೊಂಡು ಸುಮ್ಮನಾಗಿರುವಂತಿದೆ. ಸಂಸದ ಪ್ರತಾಪ್ ಸಿಂಹ ತಪ್ಪೇನಿದೆ.. ನಾನೇ ಇದ್ದಿದ್ದರೆ ಹೂಗುಚ್ಛ ಕೊಟ್ಟು ಅಭಿನಂದಿಸುತ್ತಿದ್ದೆ ಎಂದಿದ್ದಾರೆ. ಅತ್ತ, ಚಂದನ್ ಶೆಟ್ಟಿ ಕೂಡಾ ತಪ್ಪಾಗಿದ್ದರೆ ಕ್ಷಮಿಸಿ ಎನ್ನುತ್ತಿದ್ದಾರೆ. ಇಷ್ಟಿದ್ದರೂ ಕೇಸುಗಳೇನೂ ಬಿಟ್ಟಿಲ್ಲ.

    ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿರುದ್ಧ ಒಟ್ಟು 4 ಕೇಸ್ ದಾಖಲಾಗಿವೆ.

    ದೂರು ನಂ.1 : ಸರ್ಕಾರಿ ವೇದಿಕೆ ದುರ್ಬಳಕೆ

    ದೂರು ನಂ.2 : ವೇದಿಕೆಗೆ ನಿವೇದಿತಾ ಅತಿಕ್ರಮ ಪ್ರವೇಶ

    ದೂರು ನಂ.3 : ಸಂಚು ರೂಪಿಸಿ ಪ್ರಚಾರ ಪಡೆದಿರುವುದು

    ದೂರು ನಂ. 4 : ಸಾರ್ವಜನಿಕ ಸ್ಥಳಗಳಲ್ಲಿ ಅನುಚಿತ ವರ್ತನೆ

    ಇದಿಷ್ಟೂ ದಾಖಲಾಗಿರುವ ದೂರುಗಳಲ್ಲಿರೋ ಆರೋಪಗಳು. ಇಬ್ಬರ ವಿರುದ್ಧ ಮೈಸೂರು ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಮೊಹ್ಸಿನ್ ಖಾನ್, ಆರ್‍ಟಿಐ ಕಾರ್ಯಕರ್ತ ಗಂಗರಾಜು, ಪರಿಸರ ಸಂರಕ್ಷಣಾ ಸಮಿತಿಯ ಭಾನುಮೋಹನ್ ಹಾಗೂ ಕರ್ನಾಟಕ ಪ್ರಜಾ ಪಾರ್ಟಿ ಸದಸ್ಯರು ದೂರು ಕೊಟ್ಟಿದ್ದಾರೆ. ಲಕ್ಷ್ಮೀಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ. ಜಿಲ್ಲಾಧಿಕಾರಿಗಳೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಎಸ್‍ಪಿಯೇ ನೋಟಿಸ್ ಕೊಟ್ಟಿದ್ದಾರೆ. ಪ್ರಕರಣ ಮುಗಿಯುವಂತೆ ಕಾಣುತ್ತಿಲ್ಲ.

  • ಚಂದನ್ ಶೆಟ್ಟಿ ಸಂಗೀತ ನಿರ್ದೇಶನದ ಸೀಜರ್

    chandan shetty's music in seizer

    ಚಂದನ್ ಶೆಟ್ಟಿ ಎಂದರೆ ತಕ್ಷಣ ನೆನಪಾಗುವುದು ಮೂರೇ ಮೂರು ಪೆಗ್ಗಿಗೆ.. ಹಾಡು. ಆದರೆ, ಚಂದನ್ ಶೆಟ್ಟಿ ಇದಿಷ್ಟೇ ಅಲ್ಲ, ಅವರು ಗಾಯಕರೂ ಹೌದು. ಹಾಡನ್ನು ಬರೆಯುವ ಕಲೆಯೂ ಅವರಿಗೆ ಸಿದ್ಧಿಸಿದೆ. ಸಂಗೀತ ಸಂಯೋಜಿಸುವುದೂ ಗೊತ್ತಿದೆ. ಇದೆಲ್ಲವೂ ಗೊತ್ತಿರುವ ಚಂದನ್ ಶೆಟ್ಟಿ, ಸೀಜರ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

    ಚಂದನ್ ಶೆಟ್ಟಿಯವರಿಗೆ ಇಂತಾದ್ದೊಂದು ಅವಕಾಶ ಕೊಟ್ಟಿದ್ದು ನಿರ್ಮಾಪಕ ತ್ರಿವಿಕ್ರಮ್. ಪವರ್ ಚಿತ್ರದ ಧಮ್ ಪವರೇ ಹಾಡು ಕೇಳಿದ ನಂತರ ತ್ರಿವಿಕ್ರಮ್, ಚಂದನ್ ಅವರನ್ನು ಆಯ್ಕೆ ಮಾಡಿದರಂತೆ.

    ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ನಾಲ್ಕೂ ಹಾಡುಗಳು ಸದ್ಯಕ್ಕೆ ಹಿಟ್ ಲಿಸ್ಟ್‍ನಲ್ಲಿವೆ. ವೆಸ್ಟರ್ನ್ ಶೈಲಿಯಲ್ಲಿರುವ ಸಂಗೀತ, ಅಭಿಮಾನಿಗಳಿಗೆ ಇಷ್ಟವಾಗಿದೆ.ರವಿಚಂದ್ರನ್, ಚಿರಂಜೀವಿ ಸರ್ಜಾ, ಪಾರೂಲ್ ಯಾದವ್ ಅಭಿನಯದ ಚಿತ್ರಕ್ಕೆ ವಿನಯ್ ಕೃಷ್ಣ ನಿರ್ದೇಶಕರು. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ.

  • ಚಂದನ್ ಶೆಟ್ಟಿ, ನಿವೇದಿತಾಗೆ ಬಂದ ತಕ್ಷಣ ಕೊರೋನಾ ಟೆಸ್ಟ್ ಮಾಡ್ಸಿ - ಡಿಸಿಗೆ ಮನವಿ

    mysuru citizens urge chandan shetty and niveditha gowda for corona virus test

    ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಹನಿಮೂನ್ ಟ್ರಿಪ್‍ನಲ್ಲಿದ್ದಾರೆ. ಈ ಪ್ರಣಯದ ಪಕ್ಷಿಗಳು ತಮ್ಮ ಹನಿಮೂನ್‍ನ ಕೆಲವು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದರೆ, ಸುದ್ದಿ ಅದಲ್ಲ, ಈಗ ಅವರನ್ನು ಕೊರೋನಾ ಟೆಸ್ಟ್ ಮಾಡಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಹೋಗಿದೆ.

    ಮೈಸೂರಿನ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಘಟಕದ ಅಧ್ಯಕ್ಷ ರಫೀಕ್ ಅಲಿ & ಸದಸ್ಯರು ಖುದ್ದು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿದ್ದಾರೆ. ಮೈಸೂರಿನಲ್ಲಿ ಯಾವುದೇ ಕೊರೋನಾ ಕೇಸ್ ಇಲ್ಲ. ಅಂಥಾದ್ದರಲ್ಲಿ ವಿದೇಶದಿಂದ ಬರುತ್ತಿರುವ ಅವರಿಬ್ಬರನ್ನೂ ಕಡ್ಡಾಯವಾಗಿ ಕೊರೋನಾ ಟೆಸ್ಟ್ ಮಾಡಿಸಬೇಕು ಎಂದು ಮನವಿ ಮಾಡಿದ್ದಾರೆ.

  • ಚಂದನ್ ಶೆಟ್ಟಿ.. ಮೇಘಾ ಶೆಟ್ಟಿ ಜೊತೆ ಜೊತೆಯಲಿ

    ಚಂದನ್ ಶೆಟ್ಟಿ.. ಮೇಘಾ ಶೆಟ್ಟಿ ಜೊತೆ ಜೊತೆಯಲಿ

    ಜೊತೆ ಜೊತೆಯಲಿ ಖ್ಯಾತಿಯ ಮೇಘಾ ಶೆಟ್ಟಿ, ಈಗಾಗಲೇ ಸಿಂಪಲ್ ಸುನಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಗಣೇಶ್ ನಟಿಸುತ್ತಿರುವ ತ್ರಿಬಲ್ ರೈಡಿಂಗ್‍ನಲ್ಲಿ, ಮೇಘಾ ಶೆಟ್ಟಿ ಹೀರೋಯಿನ್. ಕಿರುತೆರೆ ಮತ್ತು ಹಿರಿತೆರೆ ಎರಡರ ನಡುವೆ ಆಲ್ಬಂ ಸಾಂಗ್`ಗೂ ಎಂಟ್ರಿ ಕೊಟ್ಟಿದ್ದಾರೆ ಮೇಘಾ ಶೆಟ್ಟಿ.

    ಮೂರೇ ಮೂರು ಪೆಗ್ಗಿನಿಂದ ಶುರು ಮಾಡಿ ಈಗ ಖರಾಬು ಸಾಂಗ್ ಮೂಲಕ ಯಶಸ್ಸಿನ ಉತ್ತುಂಗದಲ್ಲಿರೋ ಚಂದನ್ ಶೆಟ್ಟಿ ಜೊತೆ ಆಲ್ಬಂ ಸಾಂಗ್‍ಗೆ ಹೆಜ್ಜೆ ಹಾಕುತ್ತಿದ್ದಾರೆ ಮೇಘಾ. ಚಂದನ್ ಶೆಟ್ಟಿ ಸ್ವತಃ ರಚಿಸಿ, ಮ್ಯೂಸಿಕ್ ಕಂಪೋಸ್ ಮಾಡಿರುವ ನೋಡು ಶಿವ.. ಹಾಡಿನಲ್ಲಿ ಮೇಘಾ ಶೆಟ್ಟಿ ನಟಿಸುತ್ತಿದ್ದಾರೆ.

  • ದಸರಾ ವೇದಿಕೆಯಲ್ಲೇ ಐ ಲವ್ ಯೂ ನಿವೇದಿತಾ ಎಂದ ಚಂದನ್ ಶೆಟ್ಟಿ : ನಿಶ್ಚಿತಾರ್ಥ  

    chandan shetty proposes niveditha gowda

    ಗಾಯಕ ಚಂದನ್ ಶೆಟ್ಟಿ ಮತ್ತು ಬಿಗ್‍ಬಾಸ್ ಮೂಲಕ ಪರಿಚಯವಾದ ನಿವೇದಿತಾ ಗೌಡ ಈಗ ಬರೀ ಗೆಳೆಯಗೆಳತಿಯಲ್ಲ. ಪ್ರೇಮಿಗಳಾಗಿದ್ದಾರೆ. ಚಂದನ್ ಶೆಟ್ಟಿ, ಯುವ ದಸರಾ ವೇದಿಕೆಯಲ್ಲೇ ನಿವೇದಿತಾಗೆ ಪ್ರೇಮ ನಿವೇದನೆ ಮಾಡಿದ್ದಾರೆ. ವೇದಿಕೆಯ ಮೇಲೇ ಉಂಗುರ ತೊಡಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಹಾಡು ಹೇಳುತ್ತಿದ್ದ ಚಂದನ್ ಶೆಟ್ಟಿ, ಹಾಡು ಮುಗಿದ ಮೇಲೆ ನಿವೇದಿತಾಗೆ ಪ್ರಪೋಸ್ ಮಾಡಿ ಉಂಗುರ ತೊಡಿಸಿದ್ದಾರೆ.

    ನಾನಿದನ್ನು ನಿರೀಕ್ಷೆ ಮಾಡಿರಲಿಲ್ಲ ಎನ್ನುತ್ತಲೇ ನಿವೇದಿತಾ ಗೌಡ, ಚಂದನ್ ಶೆಟ್ಟಿಯನ್ನು ಒಪ್ಪಿಕೊಂಡಿದ್ದಾರೆ. ಇದು ನಮಗೂ ಗೊತ್ತಿರಲಿಲ್ಲ ಅನ್ನೋದು ಇಬ್ಬರ ತಂದೆ ತಾಯಿ ಮಾತು.

    ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಪ್ರೇಮ ನಿವೇದನೆಗೆ ಭಾರಿ ಆಕ್ಷೇಪ ವ್ಯಕ್ತವಾಗಿದ್ದು, ಪರ್ಸನಲ್ ವಿಚಾರವನ್ನು ದಸರಾ ವೇದಿಕೆಗೆ ತಂದಿದ್ದು ಸರಿಯಲ್ಲ, ನಾಡಹಬ್ಬ ಇಂತಹವುಗಳಿಗೆಲ್ಲ ವೇದಿಕೆಯಾಗಬಾರದು ಎಂದು ಚಂದನ್ ಶೆಟ್ಟಿ, ನಿವೇದಿತಾ ಗೌಡ, ದಸರಾ ಆಯೋಜಕರ ವಿರುದ್ಧ ಕಿಡಿ ಕಾರಿದ್ದಾರೆ.

  • ನಿವೇದಿತಾ ಗೌಡ 19, ಚಂದನ್ ಶೆಟ್ಟಿ 30 : ನಿಶ್ಚಿತಾರ್ಥ ಆಗೋಯ್ತು.. ಮದುವೆ ಫಿಕ್ಸ್ ಆಯ್ತು..!

    chandan shetty niveditha gowda gets engaged

    ಮೈಸೂರು ದಸರಾದ ವೇದಿಕೆಯಲ್ಲಿ ಪ್ರಪೋಸ್ ಮಾಡಿ ವಿವಾದ ಸೃಷ್ಟಿಸಿದ್ದ ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರೊಂದಿಗೆ ಎಂಗೇಜ್‍ಮೆಂಟ್ ಮಾಡಿಕೊಂಡಿದ್ದಾರೆ. ಇದು ಅಧಿಕೃತ. ಮೈಸೂರಿನ ಖಾಸಗಿ ಹೋಟೆಲ್ಲಿನಲ್ಲಿ ನಿಶ್ಚಿತಾರ್ಥ ನೆರವೇರಿದೆ. ಮದುವೆ ಡೇಟ್ ಇನ್ನೂ ಫಿಕ್ಸ್ ಆಗಿಲ್ಲ.

    ನಿವೇದಿತಾಗೆ 19 ವರ್ಷ. ಚಂದನ್ ಶೆಟ್ಟಿಗೆ 30 ವರ್ಷ. ಇಬ್ಬರ ಜಾತಿಯೂ ಬೇರೆ ಬೇರೆ. ಆದರೆ ಪ್ರೀತಿ ಇದೆಲ್ಲವನ್ನೂ ಮೀರಿ, ಇಬ್ಬರೂ ಪರಸ್ಪರ ಒಪ್ಪಿ.. ಪ್ರೀತಿಸಿ ಮದುವೆಯಾಗುತ್ತಿದ್ದಾರೆ. ಇಬ್ಬರ ಪ್ರೇಮ ಕಲ್ಯಾಣಕ್ಕೆ ಮನೆಯವರ ಆಶೀರ್ವಾದವೂ ದೊರೆತಿದೆ.

    ಬಿಗ್‍ಬಾಸ್ ಮನೆಯಿಂದ ಶುರುವಾದ ಪ್ರೀತಿ ಈಗ ನಿಶ್ಚಿತಾರ್ಥದ ಹೊಸ್ತಿಲಿಗೆ ತಂದು ನಿಲ್ಲಿಸಿದೆ.

  • ಮದುವೆಗೆ ಮುನ್ನ ಇನ್ನೊಂದು ಗುಡ್ ನ್ಯೂಸ್ ಕೊಟ್ಟ ನಿವೇದಿತಾ ಗೌಡ

    Chandan Shetty - Niveditha Gowda Image

    ಗಾಯಕ ಚಂದನ್ ಶೆಟ್ಟಿಯ ಮುದ್ದಿನ ಗೊಂಬೆ ನಿವೇದಿತಾ ಗೌಡ. ದಸರಾ ವೇದಿಕೆಯಲ್ಲಿಯೇ ಪ್ರಪೋಸ್ ಮಾಡಿ ಸಂಚಲನ ಸೃಷ್ಟಿಸಿದ್ದರು ಚಂದನ್ ಶೆಟ್ಟಿ. ಅದು ವಿವಾದವೂ ಆಗಿತ್ತು. ಈಗ ಮದುವೆ ಫಿಕ್ಸ್ ಆಗಿದೆ. ಫೆಬ್ರವರಿ 25, 26ರಂದು ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಮದುವೆ. ಇದರ ನಡುವೆ ಇನ್ನೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ ನಿವೇದಿತಾ ಗೌಡ.

    ನಿವೇದಿತಾ ಗೌಡಗೆ ಏರ್‍ಪೋರ್ಟ್‍ನಲ್ಲಿ ಬಿಐಎಎಲ್‍ನಲ್ಲಿ ಕೆಲಸ ಸಿಕ್ಕಿದೆ. ಆಪರೇಷನ್ ಅಸಿಸ್ಟೆಂಟ್ ಆಗಿ. ಡಿಗ್ರಿ ಮುಗಿಸಿದ ಕೂಡಲೇ ಕೆಲಸ ಸಿಕ್ಕಿದ್ದು ಖುಷಿ ಕೊಡ್ತು. ಏರ್‍ಫೋರ್ಸ್‍ನಲ್ಲಿ ಕೆಲಸ ಮಾಡಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಕನಸು ಈಡೇರಿದೆ ಎಂದಿದ್ದಾರೆ ನಿವೇದಿತಾ ಗೌಡ.

  • ಲಕಲಕ ಲ್ಯಾಂಬೊರ್ಗಿನಿ ರಿಲೀಸ್

    ಲಕಲಕ ಲ್ಯಾಂಬೊರ್ಗಿನಿ ರಿಲೀಸ್

    ಹೊಸ ವರ್ಷಕ್ಕೊಂದು ಪಾರ್ಟಿ ಸಾಂಗ್ ಕೊಡೋ ಪದ್ಧತಿ ಇಟ್ಟುಕೊಂಡಿರೋ ಚಂದನ್ ಶೆಟ್ಟಿ 2022ರ ವೆಲ್‍ಕಂ ವೇಳೆಯೂ ಒಂದು ಸಾಂಗ್ ಕೊಟ್ಟಿದ್ದಾರೆ. ಲಕಲಕ ಲ್ಯಾಂಬೊರ್ಗಿನಿ ಹಾಡಿದು. ಈ ಹಾಡಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರೋದು ರಚಿತಾ ರಾಮ್. ಅಲೆಲೆಲೆಲೆ.. ಇವ್ಳು ಚೆಂದಾಗವ್ಳೆ.. ಎಂದು ಶುರುವಾಗುವ ಹಾಡಿನಲ್ಲಿ ರಚಿತಾ ಪಡ್ಡೆಗಳ ಹೃದಯಕ್ಕೆ.. ಮೆದುಳಿಗೆ.. ಹಾಡಿನಲ್ಲಿ ಹೇಳೋ ಹಾಗೆ ಸೌಟು ಹಾಕಿ ತಿರುವಿಬಿಡುತ್ತಾರೆ.. ಅಷ್ಟು ಹಾಟ್..

    ಚಂದನ್ ಶೆಟ್ಟಿ ಮ್ಯೂಸಿಕ್ ನೀಡಿರೋ ಹಾಡಿಗೆ ನಂದ ಕಿಶೋರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಆರ್.ಕೇಶವ್ ಎಂಬುವವರು ಈ ಹಾಡಿಗೆ ಪ್ರೊಡ್ಯೂಸರ್. ಬೇಬಿ ಬಿಂದಿಯಾ ಕೆ.ಗೌಡ ಈ ಹಾಡಿನ ಮೂಲಕ ಹೊಸ ಪರಿಚಯವಾಗಿ ಎಂಟ್ರಿ ಕೊಟ್ಟಿದ್ದಾರೆ.

  • ಲೌಡ್‍ಸ್ಪೀಕರ್ ಚಡ್ಡಿ ಒಳಗೆ ಇರುವೆ ಬಿಟ್ಕಳಿ

    loud speaker chaddi olage song

    ಚಡ್ಡಿ ಒಳಗೆ ಇರುವೆ ಬಿಟ್ಕಳಿ.. ಇಲ್ಲಾ ಅಂದ್ರೆ ಕಿವಿ ಒಳಗೆ ಬೆರಳು ಇಟ್ಕೊಳ್ಳಿ.. ಬಟ್ ಈ ಗೇಮ್ ಮಾತ್ರ ಆಡ್ಬೇಡಿ.. ಈ ಗೇಮ್ ಹೆಸರೇನು.. ಲೌಲೌಲೌಲೌ ಲೌಡ್ ಸ್ಪೀಕರ್.. 

    ಇದು ಲೌಡ್ ಸ್ಪೀಕರ್ ಚಿತ್ರದಲ್ಲಿರೋ ಏಕೈಕ ಹಾಡು. ಚಂದನ್ ಶೆಟ್ಟಿ ಹಾಡಿರುವ ಈ ಹಾಡು ಸಿಕ್ಕಾಪಟ್ಟೆ ಹಿಟ್ ಆಗಿದೆ. ಈಗಾಗಲೇ 20 ಲಕ್ಷಕ್ಕೂ ಹೆಚ್ಚು ಆನ್‍ಲೈನ್‍ನಲ್ಲಿ ನೋಡಿದ್ದಾರೆ.

    ಪೆಟ್ರೋಲ್ ಇದ್ರೆ ಕಾಲೇಜ್ ಮುಂದೆ ಬೀಟ್ ಹೊಡ್ಕಳಿ, ಇಲ್ಲ ಅಂದ್ರೆ ಮುಚ್ಚೊಂಡ್ ಮನೇಲ್ ಮುದ್ದೆ ತಿನ್ಕೊಳಿ.. ಫ್ರೆಂಡ್ಸ್‍ಗಳ್ ಜೊತೆ ಸೇರ್ಕೊಂಡ್ ಎಣ್ಣೆ ಬಿಟ್ಕೋಳಿ.. ಬಟ್ ಡೋಂಟ್ ಟ್ರೈ ದಿಸ್ ಗೇಮ್ ಅಂತಾ ಕಂಟಿನ್ಯೂ ಆಗುತ್ತೆ ಈ ಹಾಡು.

    ಇಷ್ಟಕ್ಕೂ ಲೌಡ್ ಸ್ಪೀಕರ್ ಅನ್ನೋ ಗೇಮ್ ಯಾಕೆ ಆಡಬಾರದು..? ಅದೇ ಚಿತ್ರದ ಕಥೆ. ನಿರ್ದೇಶಕ ಶಿವತೇಜಸ್ ಈ ಹಿಂದೆ ಮಳೆ ಅನ್ನೋ ಎಂಬ ರೊಮ್ಯಾಂಟಿಕ್ ಸಿನಿಮಾ ಕೊಟ್ಟಿದ್ದವರು. ಥೈರ್ಯ ಅನ್ನೋ ಆ್ಯಕ್ಷನ್ ಥ್ರಿಲ್ಲರ್ ಕೊಟ್ಟಿದ್ದವರು. ಈ ಬಾರಿ ಟೆಕ್ನಾಲಜಿ ಕೂಡಾ ಆಧರಿಸಿರುವ ಸಸ್ಪೆನ್ಸ್, ಥ್ರಿಲ್ಲರ್, ಡಾರ್ಕ್ ಕಾಮಿಡಿ ಜಾನರ್ ಕಥೆ ಹೇಳುತ್ತಿದ್ದಾರೆ. ಕಥೆ ವಿಶೇಷವಾಗಿರುತ್ತೆ ಅನ್ನೊದ್ರಲ್ಲಿ ಅನುಮಾನವಿಲ್ಲ. ಧೈರ್ಯಂ ಚಿತ್ರಕ್ಕೆ ಬಂಡವಾಳ ಹೂಡಿದ್ದ ರಾಜು ಅವರೇ ಲೌಡ್ ಸ್ಪೀಕರ್‍ಗೂ ನಿರ್ಮಾಪಕರು. 

  • ಸಗಣಿ ಪಿಂಟೋ ಹೊಸ ಸಿನಿಮಾಗೆ ಚಂದನ್ ಶೆಟ್ಟಿ

    ಸಗಣಿ ಪಿಂಟೋ ಹೊಸ ಸಿನಿಮಾಗೆ ಚಂದನ್ ಶೆಟ್ಟಿ

    ಬೆಲ್‍ಬಾಟಂ ಚಿತ್ರದಲ್ಲಿ ಸಗಣಿ ಪಿಂಟೋ ಪಾತ್ರದ ಮೂಲಕ ಗುರುತಿಸಿಕೊಂಡ ನಟ ಸುಜಯ್ ಶಾಸ್ತ್ರಿ. ನಿರ್ದೇಶಕರಾಗಿ ಗುಬ್ಬಿ ಮೇಲೆ ಬ್ರಹ್ಮಾಸ್ತ್ರದ ಮೂಲಕ ಭರವಸೆ ಹುಟ್ಟಿಸಿದ್ದ ಸುಜಯ್ ಈಗ ಇನ್ನೊಂದು ಚಿತ್ರದ ನಿರ್ದೇಶನಕ್ಕೆ ರೆಡಿಯಾಗಿದ್ದಾರೆ. ಚಂದನ್ ಶೆಟ್ಟಿ ಹೀರೋ.

    ಇದೊಂದು ಕಾಮಿಡಿ ಕಥೆ. ರೆಟ್ರೋ ಸ್ಟೈಲ್‍ನಲ್ಲಿ ಕಥೆ ಹೇಳಲಿದ್ದೇನೆ ಎಂದಿರೋ ಸುಜಯ್ ಶಾಸ್ತ್ರಿ ಫೆಬ್ರವರಿಯಲ್ಲಿ ಸಿನಿಮಾ ಸೆಟ್ಟೇರುವ ಸುಳಿವು ಕೊಟ್ಟಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡುತ್ತಿಲ್ಲ. ಹೀರೋ ಆಗಿ ಚಂದನ್ ಶೆಟ್ಟಿಗೂ ಇದು ಹೊಸ ಪ್ರಯತ್ನ. ತಮ್ಮದೇ ಆಲ್ಬಂಗಳಲ್ಲಿ ನಟಿಸಿರುವ ಚಂದನ್ ಶೆಟ್ಟಿ ಹೀರೋ ಆಗಿಯೂ ಗೆಲ್ಲುವ ಸೂಚನೆಯಂತೂ ಇದೆ.

  • ಸೂತ್ರಧಾರನ ಜೊತೆಯಾದ ಸಂಜನಾ : ಹೀರೋ ಚಂದನ್ ಶೆಟ್ಟಿ

    ಸೂತ್ರಧಾರನ ಜೊತೆಯಾದ ಸಂಜನಾ : ಹೀರೋ ಚಂದನ್ ಶೆಟ್ಟಿ

    ಚಂದನ್  ಶೆಟ್ಟಿ ಕನ್ನಡದ ಫೇಮಸ್ ರ್ಯಾಪ್ ಸಿಂಗರ್. ಅವರ ಆಲ್ಬಮ್ಮುಗಳಿಗೆ ಕೋಟಿ ಕೋಟಿ ವೀಕ್ಷಕರಿದ್ದಾರೆ. ಮ್ಯೂಸಿಕ್ ಡೈರೆಕ್ಟರ್ ಆಗಿ ಚಂದನ್ ಶೆಟ್ಟಿಯವರಿಗೆ ಬೇರೆಯದೇ ಸ್ಟಾರ್ ಡಂ ಇದೆ. ಪೊಗರು ನಂತರವಂತೂ ಚಂದನ್ ಶೆಟ್ಟಿ ಬೇರೆಯದೇ ಲೆವೆಲ್ ತಲುಪಿದ್ದಾರೆ. ಆಲ್ಬಮ್ಮುಗಳಲ್ಲಿ ನಟಿಸಿ ಅನುಭವವಿರೋ ಚಂದನ್ ಶೆಟ್ಟಿ ಈಗಾಗಲೇ ಹೀರೋ ಆಗಿ ಎಲ್ರ ಕಾಲೆಳೀತದೆ ಕಾಲ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆ ಚಿತ್ರಕ್ಕೆ ಸಗಣಿ ಪಿಂಟೋ ಖ್ಯಾತಿಯ ಸುಜಯ್ ಶಾಸ್ತ್ರಿ ನಿರ್ದೇಶಕ. ಇದರ ನಡುವೆಯೇ ಚಂದನ್ ಶೆಟ್ಟಿ ಸೂತ್ರಧಾರನಾಗಿದ್ದಾರೆ.

    ನವರಸನ್ ನಿರ್ಮಾಣದ ಸೂತ್ರಧಾರ ಚಿತ್ರದಲ್ಲಿ ಚಂದನ್ ಶೆಟ್ಟಿ ಹೀರೋ. ಬಹುತೇಕ ಚಿತ್ರೀಕರಣ ಮುಕ್ತಾಯವಾಗಿದ್ದು ಇದೀಗ ಚಿತ್ರತಂಡಕ್ಕೆ ನಾಯಕಿಯ ಆಯ್ಕೆಯೂ ಆಗಿದೆ. ಸಲಗ ಖ್ಯಾತಿಯ ಸಂಜನಾ ಆನಂದ್ ನಾಯಕಿ. ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಚಿತ್ರದ ಹಾಡಿನ ಶೂಟಿಂಗ್ ನಡೆದಿದ್ದು, ಡಿ.27ರಂದು ಹಾಡು ರಿಲೀಸ್ ಆಗುತ್ತಿದೆ. ಚಿತ್ರದಲ್ಲಿ ಚಂದನ್ ಶೆಟ್ಟಿ ಜೊತೆ ಅಪೂರ್ವ ಕೂಡಾ ನಾಯಕಿಯಾಗಿದ್ದು, ತಬಲಾ ನಾಣಿ ಪ್ರಮುಖ ಪಾತ್ರದಲ್ಲಿದ್ದಾರೆ. ಕಿರಣ್ ಕುಮಾರ್ ನಿರ್ದೇಶನದ ಸೂತ್ರಧಾರ ಚಿತ್ರದ ಈ ಹಾಡು ಹೊಸ ವರ್ಷದ ಸಂಭ್ರಮಕ್ಕೆಂದೇ ಬಿಡುಗಡೆಯಾಗುತ್ತಿದೆ