` kiran raj, - chitraloka.com | Kannada Movie News, Reviews | Image

kiran raj,

  • Trailer Of 'Asathoma Sadgamya' Released In Dubai

    asathoma sadgamaya trailer released in dubai

    The trailer of Radhika Chethan's new film 'Asathoma Sadgamaya' was launched in Dubai recently. The trailer was released by Fortune Group of Hotels owner Praveen Shetty. 

    'Asathoma Sadgamya' is almost complete and waiting for release. Journalist Rajesh Venur has written the story and screenplay apart from directing the film. Ashiwin Periera is the producer. Wahab Saleem has written the lyrics apart from composing the music for the film.

    'Asathoma Sadgamaya' stars Radhika Chethan, Kiran Raj, Lasya Nagaraj and others in prominent roles. The film is likely to hit the screens in the month of April.

  • ಅಮ್ಮನ ಪ್ರೀತಿಗೆ ಹಂಬಲಿಸುವ ಪ್ರತಿ ಮನಸ್ಸಿಗೆ..

    mother children special song

    ಅಸತೋಮಾ ಸದ್ಗಮಯ ಚಿತ್ರದಲ್ಲೊಂದು ಹಾಡಿದೆ. ನಾ ತೆರೆದೆ ತುಂಬಾ ಹಳೆಯ ಪುಟವ.. ಅನ್ನೋ ಹಾಡದು. ಆ ಹಾಡು ಈಗ ಮಕ್ಕಳಿಗೆ ಇಷ್ಟವಾಗುತ್ತಿದೆ. ಏಕೆಂದರೆ, ಆ ಹಾಡಿನಲ್ಲಿರೋದು ಅಮ್ಮನ ಮೇಲಿನ ಪ್ರೀತಿ. ಅಮ್ಮನ ಪ್ರೀತಿಗೆ ಹಾತೊರೆಯುವ ಪ್ರತಿ ಮನಸ್ಸಿಗೂ ಈ ಹಾಡು ಅರ್ಪಣೆ ಎಂದಿದೆ ಚಿತ್ರತಂಡ. 

    ಹಾಡು ಹಾಡಿರುವುದು ಅನುರಾಧಾ ಭಟ್. ಅಪ್ಪ ಐ ಲವ್ ಯೂ ಹಾಡು ಹಾಡಿದ್ದ ಅನುರಾಧಾ ಭಟ್ ಅವರ ಧ್ವನಿ, ಈಗ ಅಮ್ಮನ ಮೇಲಿನ ಹಾಡಿನಲ್ಲೂ ಮ್ಯಾಜಿಕ್ ಮಾಡಿದೆ. ಈ ಹಾಡಿಗೆ ಸಾಹಿತ್ಯ ನೀಡಿರುವುದು ವಹಾಬ್ ಸಲೀಂ. ಸಂಗೀತವೂ ಅವರದ್ದೇ. ಹಾಡು ಕೇಳುವ ಸರದಿ ನಿಮ್ಮದಾಗಲಿ.

  • ಅಸತೋಮಾ ಸದ್ಗಮಯ.. ಟ್ರೇಲರ್ ಹಿಟ್‍ಮಯ

    asathoma sadgamaya trailer is a hit

    ಅಸತೋಮಾ ಸದ್ಗಮಯ.. ವಿಭಿನ್ನ ಕಥಾ ಹಂದರ ಇರುವ ಈ ಚಿತ್ರದಲ್ಲಿ ರಾಧಿಕಾ ಚೇತನ್ ಪ್ರಮುಖ ಪಾತ್ರದಲ್ಲಿದ್ದಾರೆ. ಮಕ್ಕಳ ಶಿಕ್ಷಣದ ಸುತ್ತಲೇ ಇರುವ ಚಿತ್ರದ ಟ್ರೇಲರ್, ತನ್ನ ವಿಭಿನ್ನತೆಯಿಂದಲೇ ಸದ್ದು ಮಾಡುತ್ತಿದೆ.

    ಚಿತ್ರನಟರಾದ ಶರಣ್, ಪ್ರಥಮ್, ಕಿರಿಕ್ ಕೀರ್ತಿ, ಪ್ರಥಮ್, ಚಂದನ್ ಶೆಟ್ಟಿ, ಇಂದ್ರಜಿತ್ ಲಂಕೇಶ್.. ಹೀಗೆ ಸಿನಿಮಾ ಟ್ರೇಲರ್ ನೋಡಿದ ಚಿತ್ರಂಗದವರು ಮೆಚ್ಚುಗೆಯ ಸುರಿಮಳೆ ಸುರಿಸುತ್ತಿದ್ದಾರೆ.

    ಶಿಕ್ಷಣ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುವ ಚಿತ್ರದಲ್ಲಿ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳೂ ಇರುವುದು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದೆ. ವಿಜಯ್ ಪ್ರಕಾಶ್ ಹಾಡಿರುವ ಸ್ಕ್ರಿಪ್ಟ್ ಬರೆದೋನು ಹಾಗೂ ಓ ಸಂಜೆ ಹಾಡುಗಳು ಹಿಟ್ ಆಗುತ್ತಿವೆ.

    ಅಶ್ವಿನ್ ಪಿರೇರಾ ನಿರ್ಮಾಣದ ಚಿತ್ರಕ್ಕೆ ರಾಜೇಶ್ ವೇಣೂರು ನಿರ್ದೇಶನವಿದೆ. ಬಿಡುಗಡೆಗೆ ಸಿದ್ಧವಾಗಿರುವ ಅಸತೋಮಾ ಸದ್ಗಮಯ.. ಕತ್ತಲಿಂದ ಬೆಳಕಿನೆಡೆಗೆ ಎಂಬ ಚಿತ್ರದ ಟೈಟಲ್‍ನಲ್ಲೇ ಇರುವ ವಿಭಿನ್ನತೆ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಸುತ್ತಿದೆ.

  • ಅಸತೋಮಾ ಸದ್ಗಮಯ.. ಸಂದೇಶ ಅಮೃತಂಗಮಯ

    asathoma sadgamaya has a wonderfull message

    ಅಸತೋಮಾ ಸದ್ಗಮಯ. ಒಂದೊಳ್ಳೆಯ ಉದ್ದೇಶವನ್ನಿಟ್ಟುಕೊಂಡೇ ನಿರ್ಮಾಣವಾಗಿರುವ ಸಿನಿಮಾ. ಮನುಷ್ಯ ಸಂಬಂಧಗಳು ಮುಖ್ಯವೋ.. ಬುದ್ದಿವಂತಿಕೆ ಮುಖ್ಯವೋ.. ಈಗಿನ ಜನರೇಷನ್‍ನ ಆದ್ಯತೆಗಳೇ ಬದಲಾಗಿರುವುದಕ್ಕೆ ಕಾರಣ ಏನು..ಶಿಕ್ಷಣದಲ್ಲೇ ಏನಾದರೂ ಸಮಸ್ಯೆ ಇದೆಯಾ..? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಅಪ್ಪಟ ಸಿನಿಮ್ಯಾಟಿಕ್ ಆಗಿ ಚಿತ್ರ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ರಾಜೇಶ್.

    ರಾಧಿಕಾ ಚೇತನ್ ಮುಖ್ಯ ಪಾತ್ರದಲ್ಲಿರೋ ಚಿತ್ರದಲ್ಲಿ ಲಾಸ್ಯ ನಾಗರಾಜ್, ಬೇಬಿ ಚಿತ್ರಾಲಿ, ಕಿರಣ್ ರಾಜ್, ದೀಪಕ್ ಶೆಟ್ಟಿ.. ಮೊದಲಾದವರು ನಟಿಸಿದ್ದಾರೆ. ಅಶ್ವಿನ್ ಕುಮಾರ್ ಅವರ ಐಕೇರ್ ಮೂವೀಸ್‍ನಲ್ಲಿ ನಿರ್ಮಾಣವಾಗಿರುವ ಸಿನಿಮಾ ಅಸತೋಮಾ ಸದ್ಗಮಯ. ರಾಜ್ಯಾದ್ಯಂತ 70ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ರಿಲೀಸ್ ಆಗುತ್ತಿದೆ.

  • ಕಿನ್ನರಿಯ ಹೀರೋ ಕಿರಾತಕನಾ..?

    kinnari serial hero arrested in assault

    ಕಿನ್ನರಿ. ಕಿರುತೆರೆಯ ಜನಪ್ರಿಯ ಧಾರಾವಾಹಿ. ಆ ಧಾರಾವಾಹಿಯ ಕಥಾ ನಾಯಕ ಕಿರಣ್ ರಾಜ್, ಈಗ ಪೊಲೀಸರ ಅತಿಥಿ. ಅವರ ಮೇಲಿರೋದು ಅತ್ಯಾಚಾರದ ಆರೋಪ. ದೂರು ನೀಡಿರುವ ಯುವತಿ ಮುಂಬೈ ಮೂಲದವರು. ಇಬ್ಬರಿಗೂ ಸುಮಾರು 5 ವರ್ಷದ ಪರಿಚಯ ಹಾಗೂ ಸ್ನೇಹವಿದೆಯಂತೆ. 

    ಮಾರ್ಚ್ 28ರಂದು ಬೆಂಗಳೂರಿಗೆ ಬಂದಿದ್ದ ಯುವತಿ, ಕಿರಣ್ ಮನೆಯಲ್ಲೇ ಉಳಿದುಕೊಂಡಿದ್ದರು. ಆಗ ಮದುವೆಯಾಗುವುದಾಗಿ ಹೇಳಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಅನ್ನೋದು ಯುವತಿಯ ದೂರು. ಅದಾದ ಮೇಲೆ ಯುವತಿಯ ಮೇಲೆ ಹಲ್ಲೆಯನ್ನೂ ನಡೆಸಿದ್ದಾರೆ ಅನ್ನೋ ಆರೋಪವನ್ನೂ ಆ ಯುವತಿ ಮಾಡಿದ್ದಾರೆ.

    ವಿಚಾರಣೆ ನಡೆಸಿರುವ ರಾಜರಾಜೇಶ್ವರಿ ನಗರ ಠಾಣೆ ಪೊಲೀಸರು, ಆರೋಪಿ ಕಿರಣ್ ರಾಜ್ ಅವರನ್ನು ಬಂಧಿಸಿದ್ದಾರೆ. ಮುಂಬೈನಲ್ಲಿ ನಟನಾ ತರಬೇತಿ ವೇಳೆ ಇಬ್ಬರಿಗೂ ಪರಿಚಯವಾಗಿತ್ತು. ಯುವತಿಯ ಕಣ್ಣು, ತುಟಿಗಳ ಮೇಲೆ ಗಾಯಗಳಾಗಿರುವ ಗುರುತುಗಳಿವೆ. ದೂರು ನೀಡಿರುವ ಯುವತಿ ಕೂಡಾ ಮರಾಠಿ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಎಂದು ಪೊಲೀಸರು ತಿಳಿಸಿದ್ದಾರೆ. 

  • ಮಂಗಳಮುಖಿಯರ ಜೊತೆ ಬಹದ್ದೂರ್ ಗಂಡು ಕಿರಣ್ ರಾಜ್

    ಮಂಗಳಮುಖಿಯರ ಜೊತೆ ಬಹದ್ದೂರ್ ಗಂಡು ಕಿರಣ್ ರಾಜ್

    ಬಹದ್ದೂರ್ ಗಂಡು ಚಿತ್ರದಲ್ಲಿ ನಟಿಸುತ್ತಿರೋ ನಾಯಕ ನಟ ಕಿರಣ್ ರಾಜ್ ಕೊರೊನಾ ಸಂದರ್ಭದಲ್ಲಿ ಹಲವರಿಗೆ ನೆರವು ನೀಡಿದ್ದರು. ತಮ್ಮದೇ ಕಿರಣ್ ರಾಜ್ ಫೌಂಡೇಷನ್ ಮೂಲಕ ನೂರಾರು ಜನರಿಗೆ ನೆರವಿನ ಹಸ್ತ ಚಾಚಿದ್ದರು. ಅಗತ್ಯ ಇರುವವರಿಗೆ ನಮ್ಮ ಕೈಲಾದಷ್ಟು ಸಹಾಯವನ್ನು ಮಾಡಬೇಕು ಎನ್ನುವುದು ಕಿರಣ್ ರಾಜ್ ನಂಬಿಕೆ.

    ಅದಕ್ಕೆ ತಕ್ಕಂತೆ ಇತ್ತೀಚೆಗೆ ಮಂಗಳಮುಖಿಯರ ಜೊತೆ ಕಿರಣ್ ರಾಜ್ ಊಟ ಮಾಡಿ, ಜೊತೆಗೆ ಒಂದಿಷ್ಟು ನೆರವು ನೀಡಿದ್ದಾರೆ. ಬದುಕು ಕಟ್ಟಿಕೊಳ್ಳಲು ಸಹಾಯ ಮಾಡಿದ್ದಾರೆ. ಬದುಕು ಕಟ್ಟಿಕೊಳ್ಳೋಕೆ ನೆರವಾಗುತ್ತಿರೋ ನಟ ಕಿರಣ್ ರಾಜ್ ಅವರಿಗೆ ಮಂಗಳಮುಖಿಯರು ಮನದುಂಬಿ ಹರಸಿದ್ದಾರೆ.

  • ವೇಯ್ಟರ್.. ಸೆಕ್ಯುರಿಟಿ ಗಾರ್ಡ್.. ಈಗ ಪ್ಯಾನ್ ಇಂಡಿಯಾ ಸಿನಿಮಾ ಡೈರೆಕ್ಟರ್..

    ವೇಯ್ಟರ್.. ಸೆಕ್ಯುರಿಟಿ ಗಾರ್ಡ್.. ಈಗ ಪ್ಯಾನ್ ಇಂಡಿಯಾ ಸಿನಿಮಾ ಡೈರೆಕ್ಟರ್..

    ಸಾಧಿಸುವ ಛಲವಿದ್ದರೆ.. ಅದಕ್ಕಾಗಿ ನಿರಂತರ ಶ್ರಮ ವಹಿಸಿದರೆ.. ಗುರಿಯನ್ನು ಮುಂದಿಟ್ಟುಕೊಂಡು.. ಮುನ್ನುಗ್ಗಿದರೆ.. ಗೆಲುವು ಕಟ್ಟಿಟ್ಟ ಬುತ್ತಿ ಎನ್ನುವುದು ಯಾವತ್ತೂ ಸುಳ್ಳಾಗಿಲ್ಲ. ಸ್ಫೂರ್ತಿಯ ಕಥೆಗಳು ನಮ್ಮ ನಡುವೆಯೇ ಇರುತ್ತವೆ. ಹುಡುಕಬೇಕಷ್ಟೆ. ಅಂತಾದ್ದೊಂದು ಕಥೆ 777 ಚಾರ್ಲಿ ಚಿತ್ರದ ಡೈರೆಕ್ಟರ್ ಕಿರಣ್ ರಾಜ್ ಅವರದ್ದು.

    ಕಿರಣ್ ರಾಜ್ ಎಸ್‍ಎಸ್‍ಎಲ್‍ಸಿ ಕೂಡಾ ಪಾಸು ಮಾಡೋಕೆ ಆಗಿಲ್ಲವಂತೆ. 10ನೇ ಕ್ಲಾಸಿನಲ್ಲಿದ್ದಾಗಲೇ ಮನೆಯಲ್ಲಿನ ಬಡತನದ ಕಾರಣ ಸ್ಕೂಲು ಬಿಟ್ಟೆ. ನಂತರ ಮಂಗಳೂರಿನ ಹೋಟೆಲೊಂದರಲ್ಲಿ ವೇಯ್ಟರ್ ಆಗಿ ಕೆಲಸಕ್ಕೆ ಸೇರಿದೆ. ನಂತರ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡಿದೆ. ಇದರ ಮಧ್ಯೆ ಸಿನಿಮಾ ಸೆಳೆಯುತ್ತಲೇ ಇತ್ತು. 2010ರಲ್ಲಿ ಬೆಂಗಳೂರಿಗೆ ಬಂದೆ. ಜ್ಯೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದೆ. ಕೊನೆಗೊಮ್ಮೆ ಬೇಸತ್ತು ಕಾಸರಗೋಡಿಗೆ ಹೋಗಿ ಕಬ್ಬಿನ ಹಾಲು ಶಾರ್ಟ್ ಫಿಲ್ಮ್ ಮಾಡಿದೆ.  ಹಾಗೆ ಕೆಲಸ ಮಾಡುತ್ತಿರುವಾಗಲೇ ಜಯತೀರ್ಥ ಅವರ ಪರಿಚಯವಾಯಿತು.. ಎನ್ನುತ್ತಾ ಕಥೆ ಹೇಳುತ್ತಾರೆ ಕಿರಣ್ ರಾಜ್.

    ಜಯತೀರ್ಥ ಅವರ ಸಂಪರ್ಕಕ್ಕೆ ಬಂದ ನಂತರ ರಿಕ್ಕಿ, ಎಂದೆಂದಿಗೂ ಚಿತ್ರಗಳಲ್ಲಿ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದ ಅನುಭವ ಹೆಚ್ಚಿಸಿಕೊಂಡ ಕಿರಣ್ ರಾಜ್, ನಂತರ ಸ್ಕ್ರಿಪ್ಟ್ ವರ್ಕ್ ಟೀಂಗಳಲ್ಲಿ ಕೆಲಸ ಮಾಡತೊಡಗಿದರು. ಆಗ ಸಿದ್ಧವಾದ ಕಥೆಯೇ 777 ಚಾರ್ಲಿ.

    ಈ ಕಥೆಯ ಎಳೆ ಬಂದಾಗ ಕಣ್ಣೆದುರು ಬಂದ ಮೊದಲ ಪಾತ್ರವೇ ರಕ್ಷಿತ್ ಶೆಟ್ಟಿ ಅವರದ್ದು. ಜೊತೆಗೆ ದೊಡ್ಡ ಬ್ಯಾನರ್ ಕೂಡಾ ಸಿಕ್ಕಿತು. ನನ್ನ ಮೊದಲ ಸಿನಿಮಾನೇ ಪ್ಯಾನ್ ಇಂಡಿಯಾ ಆಗಿ ದೊಡ್ಡ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ ಎನ್ನವುದು ಖುಷಿ ಕೊಟ್ಟಿದೆ.. ಎಂದು ಖುಷಿಯಾಗಿದ್ದಾರೆ ಕಿರಣ್ ರಾಜ್.

    ಪರಂವಾ ಸ್ಟುಡಿಯೋಸ್ ನಿರ್ಮಾಣದ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಹೀರೋ. ಸಂಗೀತಾ ಶೃಂಗೇರಿ ನಾಯಕಿ. ಸಿನಿಮಾ ಜೂನ್ 10ಕ್ಕೆ ಜಗತ್ತಿನಾದ್ಯಂತ ರಿಲೀಸ್ ಆಗುತ್ತಿದೆ. ಈಗಾಗಲೇ ಪ್ರೀಮಿಯರ್ ಶೋಗಳೂ ಶುರುವಾಗಿವೆ.