` loose mada yogi, - chitraloka.com | Kannada Movie News, Reviews | Image

loose mada yogi,

  • `ಪರಿಮಳ ಲಾಡ್ಜ್'ನಲ್ಲಿರೋದು ಸಲಿಂಗಿಗಕ ಕಥೆ ಅಲ್ಲ..!

    sathish ninasam clears rumors regarding parimalalodge

    ನೀನಾಸಂ ಸತೀಶ್, ಯೋಗೀಶ್ ಜೊತೆಯಾಗಿರುವ ವಿಜಯ್ ಪ್ರಸಾದ್ ನಿರ್ದೇಶನದ ಸಿನಿಮಾ ಪರಿಮಳ ಲಾಡ್ಜ್. ಚಿತ್ರದ ಟೀಸರ್ ಭರ್ಜರಿ ಸದ್ದು ಮಾಡಿದೆ. ಪರ, ವಿರೋಧಗಳ ಟೀಕೆ ಸುರಿಮಳೆಯಾಗಿದೆ. ಅದಕ್ಕೆ ಕಾರಣವಾಗಿರೋದು ಇಷ್ಟೆ, ಟೀಸರ್‍ನಲ್ಲಿ ಸತೀಶ್ ಮತ್ತು ಯೋಗೀಶ್‍ರನ್ನು ಸಲಿಂಗ ಕಾಮಿಗಳು ಎಂದು ತೋರಿಸಲಾಗಿದೆ. ಹಾಗಾದರೆ..

    ಹೌದು.. ಅದೇ ಕಾರಣಕ್ಕೆ ಚಿತ್ರ ಟೀಕೆಗೆ ಗುರಿಯಾಗಿದೆ. ಈ ಟೀಕೆಗಳಿಗೆ ಫುಲ್ ಸ್ಟಾಪ್ ಇಡುವ ಪ್ರಯತ್ನ ಮಾಡಿದ್ದಾರೆ ಸತೀಶ್. ಇದು ಸಲಿಂಗಿಗಳ ಕಥೆಯಲ್ಲ. ಚಿತ್ರದಲ್ಲೊಂದು ಕಣ್ಣೀರು ತರಿಸುವ ಕಥೆ ಇದೆ. ಟೀಸರ್‍ನಲ್ಲಿರೋದು ನಿರ್ದೇಶಕರ ಚೇಷ್ಟೆಯೇ ಹೊರತು ಮತ್ತೇನಲ್ಲ ಎಂದಿದ್ದಾರೆ ಸತೀಶ್.

    ವಿಜಯ್ ಪ್ರಸಾದ್ ಮೊದಲೇ ಚೇಷ್ಟೆ ಚತುರ. ಅದು ಈ ಹಿಂದಿನ ಸಿದ್ಲಿಂಗು, ನೀರ್‍ದೋಸೆಯಲ್ಲಿ ಸಾಬೀತಾಗಿದೆ ಕೂಡಾ. ಹೀಗಾಗಿ ಸತೀಶ್ ಮಾತುಗಳನ್ನು  ನಂಬಬಹುದು.

  • `ಪರಿಮಳಾ ಲಾಡ್ಜ್'ಗೆ ಸಿದ್ಲಿಂಗು ಜೋಡಿ

    siddlingu jodi teams up for parimala guest house

    ಸಿದ್ಲಿಂಗು, 2012ರಲ್ಲಿ ತೆರೆ ಕಂಡಿದ್ದ ಸೂಪರ್ ಹಿಟ್ ಸಿನಿಮಾ. ನಿರ್ದೇಶಕ ವಿಜಯ್ ಪ್ರಸಾದ್ ನಿರ್ದೇಶನದಲ್ಲಿ ಯೋಗಿ, ರಮ್ಯಾ ಹಾಗೂ ಸುಮನ್ ರಂಗನಾಥ್ ನಟಿಸಿದ್ದರು. ಈಗ ಆ ಜೋಡಿ ಮತ್ತೆ ಜೊತೆಯಾಗಿದೆ. ರಮ್ಯಾ ಅವರನ್ನು ಬಿಟ್ಟು, ಯೋಗಿ ಮತ್ತು ಸುಮನ್ ಮತ್ತೆ ಒಂದಾಗಿದ್ದಾರೆ. ಅವರ ಜೊತೆಗೆ ನೀನಾಸಂ ಸತೀಶ್ ಕೂಡಾ ಇದ್ದಾರೆ. ನೀರ್‍ದೋಸೆ, ಬ್ಯೂಟಿಫುಲ್ ಮನಸುಗಳು ಖ್ಯಾತಿಯ ನಿರ್ಮಾಪಕ ಪ್ರಸನ್ನ, ನಿರ್ಮಾಣ ಮಾಡುತ್ತಿರುವ ಚಿತ್ರ ಇದು. ಟೈಟಲ್ ಪರಿಮಳಾ ಲಾಡ್ಜ್.

    ಯೋಗಿ ಮತ್ತು ಸುಮನ್ ರಂಗನಾಥ್, ಸಿದ್ಲಿಂಗು ನಂತರ ಮತ್ತೆ ಒಂದಾಗಿದ್ದಾರೆ. ವಿಜಯ್ ಪ್ರಸಾದ್ ಜೊತೆ ಸುಮನ್‍ಗೆ ಇದು 4ನೇ ಸಿನಿಮಾ. ಸಿದ್ಲಿಂಗು, ನೀರ್‍ದೋಸೆ, ತೋತಾಪುರಿ ಚಿತ್ರಗಳಲ್ಲಿ ಸುಮನ್ ಇದ್ದಾರೆ. ನೀನಾಸಂ ಸತೀಶ್ ಅವರಿಗೆ ಇದು ವಿಜಯ್ ಪ್ರಸಾದ್ ಜೊತೆ ಮೊದಲ ಸಿನಿಮಾ. ಹೀಗಾಗಿಯೇ ಚಿತ್ರ ಬಹಳ ನಿರೀಕ್ಷೆ ಹುಟ್ಟಿಸಿದೆ. 

  • 'Ombattane Dikku' To Be Launched On Thursday

    ombattane dikku to be launched on thursday

    Directors Dayal Padmanabhan and Guru Deshpande has joined hands for a new film called 'Ombattane Dikku' and the film is all set to be launched on Thursday. the 12th of September.

    'Ombattane Dikku' is all set to be launched at the Sri One Anjaneya Swamy Temple, opposite Jnanajyothi Auditorium in Bangalore. Tamil actor Arya will be sounding the clap for the first shot, while first shot call will be done by Rishab Shhetty. Well known producer Soundarya Jagadish will be switching over the camera.

    'Ombattane Dikku' will be directed by Dayal and produced by his own production banner, D Pictures in association with director Guru Deshpande's G Cinemas. The film will be presented by a Chennai based company called K9 Studios. 'Ombattane Dikku' is an action thriller and 'Loose Maadha' fame Yogi is the hero.

  • 75ನೇ ದಿನದತ್ತ ಯೋಗಿಯ ಲಂಕೆ

    75ನೇ ದಿನದತ್ತ ಯೋಗಿಯ ಲಂಕೆ

    ಲಂಕೆ. ಸೆಪ್ಟೆಂಬರ್ 10ರಂದು ರಿಲೀಸ್ ಆಗಿದ್ದ ಸಿನಿಮಾ. ಶೇ.50ರಷ್ಟು ಪ್ರೇಕ್ಷಕರ ಮಿತಿಯಿದ್ದಾಗ ಧೈರ್ಯ ಮಾಡಿ ತೆರೆಗೆ ಬಂದ ಸಿನಿಮಾ, ಗೆದ್ದು ಬೀಗುತ್ತಿದೆ. ಲಂಕೆ ಚಿತ್ರ 75ನೇ ದಿನದ ಯಶಸ್ವಿ ಪ್ರದರ್ಶನದತ್ತ ಸಾಗುತ್ತಿದೆ. ಈ ಮೂಲಕ ಯೋಗಿಗೂ ಬಹುದಿನಗಳ ನಂತರ ಒಂದು ಹಿಟ್ ಚಿತ್ರ ಸಿಕ್ಕಿದೆ.

    ರಾಮ್ ಪ್ರಸಾದ್ ನಿರ್ದೇಶನದ ಲಂಕೆ ಚಿತ್ರದಲ್ಲಿ ಕೃಷಿ ತಾಪಂಡ, ಕಾವ್ಯಾ ಶೆಟ್ಟಿ, ಎಸ್ಟರ್ ನರೋನ್ಹಾ, ಗಾಯತ್ರಿ ಜಯರಾಂ, ಸಂಚಾರಿ ವಿಜಯ್, ಸುಚೇಂದ್ರ ಪ್ರಸಾದ್, ವಾಣಿಶ್ರೀ.. ಮೊದಲಾದವರು ನಟಿಸಿದ್ದರು. ಪಟೇಲ್ ಶ್ರೀನಿವಾಸ್, ಸುರೇಖಾ ರಾಮ್‍ಪ್ರಸಾದ್ ನಿರ್ಮಾಣದ ಸಿನಿಮಾ ಈಗ ಸಕ್ಸಸ್ ಖುಷಿಯಲ್ಲಿದೆ.

  • My son Is Not A Drug Addict Says T P Siddaraju

    My son Is Not A Drug Addict Says T P Siddaraju

    Producer and father of actor Yogi has said that his son is neither a drug addict nor has he done any mistake.

    The Internal Security Department has recently interrogated Yogi regarding his involvement in the ongoing probe of Kannada film industry's involvement in the drug scandal. Yogi had called for a press meet regarding the whole issue at his residence in Konanakunte.Yogi's parents Siddaraju and Amuja were also present during the occasion,

    'My son is not a drug addict. He has not committed any mistake. If in case, if he is proved guilty then law takes its own course' said Siddaraju. Yogi's mother Ambuja also asserted the same.

  • Parimala Lodge' Teaser Launched

    parimala lodge teaser launched

    Trailer oF Satish Neenasam and Yogi starrer 'Parimala Lodge' was launched on Wednesday at Ayyappa Swamy Temple in Vijayanagar Bangalore. The teaser of the film was launched in an event in Bangalore.

    'Parimala Lodge' is being written and directed by Vijayaprasad of 'Sidlingu' game and is produced by Prasanna who had earlier produced 'Beautiful Manasugalu'. Prasanna and Vijayaprasad had announced a film called 'Ganesh Medicals' last year. However, the film did not take off due to various reasons and the duo is back with 'Parimala Lodge'.

    'Parimala Lodge' stars Satish Neenasam, Yogi, Suman Rangananth, Bullet Prakash, Dattanna and others in prominent roles. Anoop Seelin is the music composer, while Niranjan Babu is the cinematographer.

  • We Are Not Homosexuals In 'Parimala Lodge': Satish

    we are not homosexuals in parimala lodge says sathish

    Actor Satish Neenasam has said that he and actor Yogi are not playing the role of homosexuals in their latest film 'Parimala Lodge' and it is just a joke.

    The first teaser of 'Parimala Lodge' was released on Wednesday evening by Darshan in Bangalore and in the teaser the two actors are introduced as playing the role of homosexuals. So, Satish has said that he and Yogi are not playing the role of homosexuals and it is just a joke. Satish has said that it was done in the intention of fun and nothing else.

    'Parimala Lodge' stars Satish Neenasam, Yogi, Suman Rangananth, Bullet Prakash, Dattanna and others in prominent roles. Anoop Seelin is the music composer, while Niranjan Babu is the cinematographer. The film is written and directed by Vijayaprasad of 'Sidlingu' game and is produced by Prasanna who had earlier produced 'Beautiful Manasugalu'. 

  • Yogi Duniya Movie Review, Chitraloka Rating 3/5

    yogi duniya movie review

    10 years after Duniya introduced Yogesh aka Loose Maada to Sandalwood, the film of the same name brings out the stardom and maturity in the actor. Yogi Duniya is not just any underworld fight fest. It is a film with a heart. It is one of the best roles of his career for Yogesh and one of the better films of the year in Kannada. 

    The story is about a young chap with no one to call family. So the better part of his life is spent in an uncomplicated way as he makes Majestic his home and does all kinds of jobs. He is sucked into the betting world to make money. Why does he need money? He falls in love with a girl and finds out that she is forced into prostitution. To protect her he needs money. Easy money comes only when you are ready to do the wrong things. Yogi jumps into this world of betting headlong. How does he manage to help the girl forms the rest of the story. 

    The film opens up the dark underbelly of Bengaluru especially the Majestic area which is the heart of the city. Some of the realities of the society is shown without any hesitation. It is commendable that Yogi a mainstream actor and Hita Chandrashekar agreed to do such roles. Both of them have given superb performances. Yogi's role changes from a dandy nobody to a responsible person. He has managed to give the performance of a lifetime. Another actor who gets noticed in the film for his performance is Vasishta N Simha. 

    The film has a pleasing look even if the theme is sometimes dark. Bharath BJ comes up with some good music. Hari has combined the story and the characters well to come up with a film that makes you think as well as providing you with entertainment.

    Chitraloka Review - 3/5 

  • ಇನ್ಮೇಲೆ ಎಲ್ರೂ ನನ್ನ ಗಂಗಾ ಎಂದೇ ಕರೆಯುತ್ತಾರೆ : ಲೂಸ್ ಮಾದ ಯೋಗಿ

    ಇನ್ಮೇಲೆ ಎಲ್ರೂ ನನ್ನ ಗಂಗಾ ಎಂದೇ ಕರೆಯುತ್ತಾರೆ : ಲೂಸ್ ಮಾದ ಯೋಗಿ

    ದುನಿಯಾ ಚಿತ್ರ ಇಬ್ಬರ ಹೆಸರಿಗೆ ಚಿತ್ರದ ಟೈಟಲ್‍ನ್ನೇ ಬಿರುದಾಗಿ ಕೊಟ್ಟಿತು. ದುನಿಯಾ ಸೂರಿ ಮತ್ತು ದುನಿಯಾ ವಿಜಯ್. ಅದೇ ಚಿತ್ರದ ಪುಟ್ಟ ಪಾತ್ರದ ಮೂಲಕ ನಟಿಸಿದ ಯೋಗಿ ಲೂಸ್ ಮಾದ ಎಂದೇ ಫೇಮಸ್ ಆದರು. ಅದಾದ ಮೇಲೆ ಹೀರೋ ಆಗಿಯೇ ಹಲವು ಹಿಟ್ ಕೊಟ್ಟಿದ್ದರೂ ಜನ ಇವತ್ತಿಗೂ ಅವರನ್ನು ಗುರುತಿಸೋದು ಲೂಸ್ ಮಾದ ಯೋಗಿ ಎಂದೇ. ಯೋಗೇಶ್ ಎಂದು ಕರೆಯುವವರು ಕೂಡಾ ಕಡಿಮೆ. ಅಭಿಮಾನಿಗಳ ಪಾಲಿಗೆ ಲೂಸ್ ಮಾದ ಯೋಗಿಯೇ. ಅದು ಈ ಚಿತ್ರದಿಂದ ಬದಲಾಗಲಿದೆ. ಹೆಡ್ ಬುಷ್ ರಿಲೀಸ್ ಆದ ಮೇಲೆ ಎಲ್ಲರೂ ನನ್ನನ್ನು ಗಂಗಾ ಎಂದೇ ಕರೆಯುತ್ತಾರೆ ಎನ್ನುವುದು ಯೋಗಿ ಕಾನ್ಫಿಡೆನ್ಸ್.

    ಗಂಗಾ ಪಾತ್ರವು ತನ್ನ ವೃತ್ತಿಜೀವನದಲ್ಲಿ ಹೊಸ ಮೈಲಿಗಲ್ಲಾಗಲಿದೆ. ಗಂಗಾ ಪಾತ್ರವು ನನಗೆ ಇಲ್ಲಿಯವರೆಗೆ ಸಿಕ್ಕಿರುವ ಅತ್ಯುತ್ತಮ ಪಾತ್ರಗಳಲ್ಲಿ ಒಂದಾಗಿದೆ. ಇಲ್ಲಿಯವರೆಗೆ ನನ್ನನ್ನು ಸಾಮಾನ್ಯವಾಗಿ ಲೂಸ್ ಮಾದ ಎಂದು ಸಂಬೋಧಿಸುವ ಜನ ಹೆಡ್ ಬುಷ್ ನಂತರ ನನ್ನನ್ನು ಗಂಗಾ ಎಂದು ಕರೆಯಲು ಪ್ರಾರಂಭಿಸುತ್ತಾರೆ' ಎಂದು ಯೋಗಿ ಹೇಳುತ್ತಾರೆ.

    ಅಕ್ಟೋಬರ್ 21 ರಂದು ಹೆಡ್ ಬುಷ್ ಬಿಡುಗಡೆಯಾಗುತ್ತಿದೆ. ಕೆಲ ವರ್ಷಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಿರುವಾಗ ನನ್ನ ದೃಷ್ಟಿಕೋನ ಮತ್ತು ಚಿಂತನೆಯ ಪ್ರಕ್ರಿಯೆಯು ಬದಲಾಗಿದೆ. 'ನಟರಾಗಿದ್ದಾಗ ನಾವು ಯಾವುದೇ ಪಾತ್ರವಾದರೂ ಅದಕ್ಕೆ ಹೊಂದಿಕೊಳ್ಳಲು ಅವಕಾಶವಿದೆ ಎಂದು ನಾನು ಯಾವಾಗಲೂ ನಂಬಿದ್ದೇನೆ. ಆದರೆ, ಅದು ನಾಯಕನ ಪಾತ್ರದಲ್ಲಿ ನಟಿಸುವಾಗ ಆಗುವುದಿಲ್ಲ. ಹಾಗಾಗಿ, ಈಗ ಹೀರೋ ಆಗುವುದಕ್ಕಿಂತ ಒಳ್ಳೆಯ ಪಾತ್ರಗಳತ್ತ ಗಮನ ಹರಿಸಲು ಪ್ರಯತ್ನಿಸುತ್ತಿದ್ದೇನೆ ಎನ್ನುತ್ತಾರೆ ಯೋಗಿ.

    ಧನಂಜಯ್ ಮತ್ತು ನಿರ್ದೇಶಕ ಶೂನ್ಯ ಅವರ  ಚಾಯ್ಸ್ ನಾನೇ ಆಗಿದ್ದೆ. ಅದೇ ನನಗೆ ಖುಷಿಯ ವಿಚಾರ. ಗಂಗಾ ಧೈರ್ಯಶಾಲಿ. ಮೊಂಡ. ನೇರ ಮತ್ತು ಜಯರಾಜನ ಆತ್ಮೀಯ ಗೆಳೆಯ. ಒಬ್ಬರಿಗೊಬ್ಬರು ನಿಲ್ಲುವ ಪರಿ ನಿಜಕ್ಕೂ ಉತ್ತಮವಾಗಿ ಮೂಡಿಬಂದಿದೆ ಅನ್ನೋದು ಯೋಗಿ ಮಾತು. ಅಗ್ನಿ ಶ್ರೀಧರ್ ಅವರ ದಾದಾಗಿರಿಯ ದಿನಗಳು ಹಾಗೂ ಮೇ ಡೇಸ್ ಇನ್ ದಿ ಅಂಡರ್‍ವಲ್ರ್ಡ್ ಪುಸ್ತಕವನ್ನು ಓದಿರುವ

    ಯೋಗಿ ನಾನು ಹುಟ್ಟಿದ್ದು ಬೆಂಗಳೂರಿನಲ್ಲೇ.. ಬೆಳೆದಿದ್ದೂ ಬೆಂಗಳೂರಿನಲ್ಲೇ. ಭೂಗತ ಜಗತ್ತಿನ ಬಗ್ಗೆ ಕೇಳಿದ್ದೇನೆ ಹಾಗೂ ನೋಡಿದ್ದೇನೆ ಎನ್ನುತ್ತಾರೆ.

    ಹೆಡ್ ಬುಷ್ ಇದೇ 21ರಂದು ರಿಲೀಸ್ ಆಗುತ್ತಿದೆ. ಜೈರಾಜ್, ಕೊತ್ವಾಲ್, ಗಂಗಾ ಹಾಗೂ ಭೂಗತ ಜಗತ್ತಿನ ಜೊತೆ ಥಳುಕು ಹಾಕಿಕೊಂಡ ಇನ್ನಿತರ ಪಾತ್ರಗಳ ಮೂಲ ನೈಜವಾದ ಕಥೆಯನ್ನೇ ಹೆಡ್ ಬುಷ್ ತೆರೆಗೆ ತರುತ್ತಿದೆ.

  • ಕತ್ತಲೆ ಜಗತ್ತಿನ ಪ್ರೇಮಕಥೆ ಯೋಗಿ ದುನಿಯಾ

    story of duniya 2

    ಯೋಗಿ ದುನಿಯಾ.. ಕತ್ತಲೆ ಜಗತ್ತಿನೊಳಗಿನ ಪ್ರೇಮಕಥೆ. ದುನಿಯಾದಲ್ಲಿ ಮುಗ್ದರ ಪ್ರೇಮಕಥೆ ಇತ್ತು. ಇಲ್ಲಿ ಹಾಗಲ್ಲ. ಬೆಟ್ಟಿಂಗ್ ಜಗತ್ತಿನ ಕರಾಳಮುಖದ ನಡುವೆಯೇ, ಅದೇ ಲೋಕದ ಎರಡು ಹಕ್ಕಿಗಳ ಪ್ರೇಮಕತೆ ಚಿತ್ರದಲ್ಲಿ ಹೊರಹೊಮ್ಮಿದೆ.

    ಟ್ರೇಲರ್‍ಗಳನ್ನು ನೋಡಿದರೆ, ಸಿಹಿಕಹಿ ದಂಪತಿಯ ಪುತ್ರಿ ಹಿತಾ ಚಂದ್ರಶೇಖರ್, ಹಿತವಾದ ಅಭಿನಯ ಗಮನ ಸೆಳೆಯುತ್ತಿದೆ. ಅಂದಹಾಗೆ ಇದು ಸ್ನೇಹಿತರಿಂದ ಸ್ನೇಹಿತರಿಗಾಗಿ ಸ್ನೇಹಕ್ಕೋಸ್ಕರ ನಿರ್ಮಾಣವಾದ ಸಿನಿಮಾ.

    ಚಿತ್ರಕ್ಕೆ ಯೋಗಿ ಅವರ ತಂದೆ ಸಿದ್ದರಾಜು ನಿರ್ಮಾಪಕರಾದರೂ, ಅವರ ಜೊತೆ ಹಣ ಹೂಡಿರುವುದು ಸಿದ್ದರಾಜು ಅವರ ಗೆಳೆಯರಾದ ವೆಂಕಟೇಶ್ ಬಾಬು, ಚಂದ್ರಶೇಖರ್ ಪಾಟೀಲ್, ನಾರಾಯಣ ಮೂರ್ತಿ. ಎಲ್ಲ ಸ್ನೇಹಿತರೂ ಜೊತೆಗೂಡಿ ನಿರ್ಮಿಸಿರುವ ಚಿತ್ರ ಇದು. 

     

     

     

  • ಕಿರಿಕ್ ಮಾಡ್ತಾರಂತೆ ಲೂಸ್ ಮಾದ..!

    ಕಿರಿಕ್ ಮಾಡ್ತಾರಂತೆ ಲೂಸ್ ಮಾದ..!

    ಲೂಸ್ ಮಾದ ಯೋಗೀಶ್ `ಕಿರಿಕ್ ಶಂಕರ'ನಾಗಿದ್ದಾರೆ. ಅರೆ.. ಯಾವಾಗ ಎಂದು ಮಾತ್ರ ಕೇಳಬೇಡಿ. ಈ ಹೊಸ ಸಿನಿಮಾದ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿ ಹೋಗಿದೆ. ಯಾವಾಗ ಶುರುವಾಯ್ತು? ಡೈರೆಕ್ಟರ್ ಯಾರು? ಹೀರೋಯಿನ್ ಯಾರು? ಪ್ರೊಡ್ಯೂಸರ್ ಯಾರು? ಇಂತಹ ಎಲ್ಲ ಪ್ರಶ್ನೆಗಳಿಗೂ ಕಿರಿಕ್ ಶಂಕರ್ ಟೀಂ ಉತ್ತರ ಕೊಟ್ಟಿದೆ.

    ಚಿತ್ರೀಕರಣ ಮುಗಿಯೋವರೆಗೆ ಚಿತ್ರದ ಬಗ್ಗೆ ಎಲ್ಲಿಯೂ ಮಾತನಾಡಬಾರದು ಅನ್ನೋದೇ ನಮ್ಮ ಪ್ಲಾನ್ ಆಗಿತ್ತು. ಹೀಗಾಗಿ ಹೇಳಲಿಲ್ಲ. ಶೂಟಿಂಗ್ ಕಂಪ್ಲೀಟ್ ಆಗಿದೆ. ಇದು ಪಕ್ಕಾ ಕಾಮಿಡಿ ಸಿನಿಮಾ. ಒಂದಿಷ್ಟು ಕಲ್ಪನೆ ಮತ್ತೊಂದಿಷ್ಟು ರಿಯಾಲಿಟಿ ಎರಡನ್ನೂ ಮಿಕ್ಸ್ ಮಾಡಿರೋ ಕಥೆ.

    ಯೋಗಿ ಹೀರೋ. ಅದ್ವಿಕಾ ರೆಡ್ಡಿ ನಾಯಕಿ. ಆರ್.ಅನಂತರಾಜು ಡೈರೆಕ್ಟರ್. ವೀರ ಸಮರ್ಥ್ ಸಂಗೀತ. ಎನ್. ಕುಮಾರ್ ಪ್ರೊಡ್ಯೂಸರ್. ಯೋಗೀಶ್ ಹುಣಸೂರು ಕಾರ್ಯಕಾರಿ ನಿರ್ಮಾಪಕ.

  • ನನಗೆ ಚಟಗಳಿಲ್ಲ, ಡ್ರಗ್ಸ್ ಗೊತ್ತಿಲ್ಲ, ರಾಗಿಣಿ ಸಂಪರ್ಕ ಬಿಟ್ಟು 8 ವರ್ಷ - ಯೋಗಿ

    loose mada yogi clarifies

    ಡ್ರಗ್ಸ್ ಕೇಸ್‍ನಲ್ಲಿ ಲೂಸ್ ಮಾದ ಯೋಗಿ ವಿಚಾರಣೆ ನಡೆದಿದ್ದೇ ತಡ, ಯೋಗಿ ಮೇಲೆ ಎಲ್ಲರಿಗೂ ಅನುಮಾನ. ಹೌದಾ..? ಯೋಗಿ ಡ್ರಗ್ಸ್ ತೆಗೆದುಕೊಳ್ತಿದ್ದಾರಾ..? ಯೋಗಿ ಡ್ರಗ್ಸ್ ಪೆಡ್ಲರ್ ಆಗಿದ್ದಾರಾ..? ಹೀಗೆ.. ಹತ್ತು ಹಲವು ಅನುಮಾನಗಳಿಗೆ ಯೋಗಿ ನೇರಾನೇರವಾಗಿ ಉತ್ತರ ಕೊಟ್ಟಿದ್ದಾರೆ.

    ನನಗೆ ಸಿಗರೇಟು, ಡ್ರಿಂಕ್ಸ್ ಮತ್ತು ಗುಟ್ಕಾ ಚಟಗಳಿದ್ದದ್ದು ಹೌದು. ಅತಿಯಾಗಿದ್ದುದೂ ಹೌದು. ಆದರೆ ಆ ಚಟಗಳಿಂದಲೂ ಈಗ ಹೊರಬಂದಿದ್ದೇನೆ.

     

    ನನಗೆ ಡ್ರಗ್ಸ್ ಗೊತ್ತಿಲ್ಲ. ಯಾವತ್ತೂ ತೆಗೆದುಕೊಂಡಿಲ್ಲ. ಡ್ರಗ್ಸ್ ಪಾರ್ಟಿಗಳಿಗೂ ಹೋಗಿಲ್ಲ.

     

    ರಾಗಿಣಿ ಜೊತೆ 2013ರಲ್ಲಿ ಒಂದು ಸಿನಿಮಾ ಮಾಡಿದ್ದೆ. ಅದಾದ ನಂತರ ಅವರ ಜೊತೆಯಲ್ಲೂ ನನಗೆ ಸಂಪರ್ಕವಿಲ್ಲ. ರಾಗಿಣಿಗೆ ಕರೆ ಮಾಡಿ 8 ವರ್ಷಗಳೇ ಆಗಿ ಹೋಗಿವೆ.

     

    ರಾಗಿಣಿ ಜೊತೆ ಸಂಪರ್ಕ, ಸಂಬಂಧ ಇದೆ ಎಂದು ವರದಿ ಮಾಡಬೇಡಿ. ನನಗೆ, ಕುಟುಂಬದವರಿಗೆ ಬೇಸರವಾಗುತ್ತೆ.

     

    ಪೊಲೀಸರು ರಾಗಿಣಿ ಬಗ್ಗೆಯಾಗಲೀ, ಐಂದ್ರಿತಾ, ದಿಗಂತ್ ಬಗ್ಗೆಯಾಗಲೀ ಪ್ರಶ್ನೆ ಮಾಡಿಲ್ಲ. ಅವರು ಕೇಳಿದ್ದು ಹಾಗೂ ನಾನು ಹೇಳಿದ್ದನ್ನು ಹೊರಗೆ ಬಹಿರಂಗ ಮಾಡಬೇಡಿ ಎಂದು ಹೇಳಿದ್ದಾರೆ. ಹೀಗಾಗಿ ನಾನು ಅವುಗಳ ವಿವರವನ್ನು ಕೊಡೋಕೆ ಸಾಧ್ಯವಿಲ್ಲ.

  • ನನ್ನ ಸಂಸಾರ ಒಡೆದ್ಯೆಲ್ಲೋ.. : ಡಾಲಿಗೆ ಯೋಗಿ ಹೆಡ್ ಬುಷ್

    ನನ್ನ ಸಂಸಾರ ಒಡೆದ್ಯೆಲ್ಲೋ.. : ಡಾಲಿಗೆ ಯೋಗಿ ಹೆಡ್ ಬುಷ್

    ಹೆಡ್ ಬುಷ್ ಸಿನಿಮಾ ರಿಲೀಸ್ ಆಗೋದು ಮುಂದಿನ ತಿಂಗಳು. ಪ್ರಮೋಷನ್ ಶುರುವಾಗಿದೆ. ಇದು ಡಾಲಿ ಪಿಕ್ಚರ್ಸ್ ಸಿನಿಮಾ. ಡಾಲಿ ಧನಂಜಯ್, ಯೋಗಿ, ವಸಿಷ್ಠ ಸಿಂಹ, ರವಿಚಂದ್ರನ್, ದೇವರಾಜ್, ಶೃತಿ ಹರಿಹರನ್, ಪಾಯಲ್ ರಜಪೂತ್.. ಹೀಗೆ ಘಟಾನುಘಟಿಗಳನ್ನೇ ಒಂದುಗೂಡಿಸಿದ್ದಾರೆ ಡಾಲಿ. ಶೂನ್ಯ ನಿರ್ದೇಶನದ ಚಿತ್ರಕ್ಕೆ ಕಥೆ-ಚಿತ್ರಕಥೆ ಅಗ್ನಿ ಶ್ರೀಧರ್ ಅವರದ್ದು. ಆದರೆ ಚಿತ್ರದ ಶೂಟಿಂಗ್ ಯೋಗಿ ಸಂಸಾರವನ್ನೇ ಒಡೆದು ಹಾಕಿದ್ದ ಕಥೆ ಇದು.

    ಬೆಳಗ್ಗೆ 6 ಗಂಟೆಗೆ ಹೋದ್ರೆ ಮಾರನೇ ದಿನ ರಾತ್ರಿ 2 ಗಂಟೆಗೆ ಮನೆಗೆ ಬರುತ್ತಿದ್ದೆವು. ನನ್ನ ಹೆಂಡ್ತಿ ಕೇಳ್ತಾ ಇದ್ಲು. ಯಾವ ಸೆಟ್ಟಲ್ಲೂ ಹೀಗಿರಲ್ವಲ್ಲಾ ಅಂತಾ.. ಏನ್ಮಾಡೋದು ಹಿಂಗೆ ಆಗ್ತಿದೆಯಮ್ಮ ಅಂದ್ರೆ ನಂಬಿರಲಿಲ್ಲ. ನಾನು ನಿನ್ನ ನಂಬಲ್ಲ ಅಂತ ಒಂದು ವಾರ ಮನೆ ಬಿಟ್ಟು ಹೋಗಿದ್ದಳು ಎಂದು ಯೋಗಿ ಹೇಳಿದ್ದು ಖುದ್ದು ಡಾಲಿಗೇ..

    ಬೆಳಗ್ಗೆ 6.30ಕ್ಕೇ ಬಂದ್ರೂ ಮೊದಲ ಶಾಟ್ ಆಗ್ತಾ ಇದ್ದದ್ದು 12 ಗಂಟೆಗೆ. ಮೂಡ್ ಇಲ್ಲ ಅಂದ್ರೆ ಅದೂ ಇಲ್ಲ ಎಂದು ಡೈರೆಕ್ಟರ್ ಶೂನ್ಯ ಕುರಿತು ಹೇಳಿರೋ ಯೋಗಿ ಇದೂವರೆಗೆ 99 ಕಾಲ್ ಶೀಟ್ ಕೊಟ್ಟಿದ್ದೀನಿ. ಇದು 100ನೇದು. ಇವತ್ತಾದ್ರೂ ಸರಿಯಾದ ಟೈಮಿಗೆ ಮನೆಗೆ ಕಳಿಸು ಎಂದು ತಮಾಷೆ ಮಾಡಿದ್ದಾರೆ. ಡಾಲಿ ನಕ್ಕಿದ್ದಾರಷ್ಟೇ.

  • ನಾನು ಅದು ಮತ್ತು ಸರೋಜ : ಏನ್ ಕಥೆ ಗುರೂ..

    ನಾನು ಅದು ಮತ್ತು ಸರೋಜ : ಏನ್ ಕಥೆ ಗುರೂ..

    ಅವನಿಗೆ ಎಲ್ಲೆಂದರೆ ಅಲ್ಲಿ ನಿದ್ದೆ ಮಾಡೋ ಕಾಯಿಲೆ. ಆ ಅಜ್ಜನಿಗೆ ಎಲ್ಲವನ್ನೂ ಮರೆಯೋ ಕಾಯಿಲೆ. ಅವಳಿಗೆ ದುಡ್ಡಿನದ್ದೇ ಚಿಂತೆ. ಈ ಮೂವರೂ ಕೋಟ್ಯಧಿಪತಿಗಳಾಗೋ ಕನಸು ಕಾಣುತ್ತಾರೆ. ಮೋಸ, ವಂಚನೆ, ದ್ರೋಹ, ನಂಬಿಕೆ.. ಎಲ್ಲವೂ ಮುಖಾಮುಖಿಯಾಗುತ್ತವೆ. ನಾನು ಅದು ಮತ್ತು ಸರೋಜ ಕಥೆ ಶುರುವಾಗುವುದೇ ಹಾಗೆ..

    ಲೂಸ್ ಮಾದ ಯೋಗಿ, ದತ್ತಣ್ಣ, ಅಪೂರ್ವ ಭಾರದ್ವಾಜ್.. ಎಲ್ಲರೂ ಪೈಪೋಟಿಗೆ ಬಿದ್ದಿದ್ದಾರೆ. ಈ ಸಿನಿಮಾದಲ್ಲಿ ನನ್ನದು ಲೈಂಗಿಕ ಕಾರ್ಯಕರ್ತೆಯ ಪಾತ್ರ. ಸಾಮಾನ್ಯವಾಗಿ ಬೇರೆ ನಟಿಯರು ಈ ಪಾತ್ರ ಮಾಡಲು ಮುಜುಗರ ಪಡುತ್ತಾರೆ. ನನಗೂ ಮೊದಲು ಸ್ವಲ್ಪ ಮುಜಗರ ಎನಿಸಿತು. ಆದರೆ ಪಾತ್ರವನ್ನು ಪಾತ್ರ ಎಂದು ತಿಳಿದು, ನಟಿಸಿದೆ.  ಎಂದು ಹೇಳಕೊಂಡಿದ್ದಾರೆ ಅಪೂರ್ವ ಭಾರದ್ವಾಜ್.

    ತಮಿಳಿನಲ್ಲಿ  ವಿಜಯ್ ಸೇತುಪತಿ ಅವರ ಸಿನಿಮಾವೊಂದನ್ನು ನೋಡಿದ್ದೆ. ಆಗಿನಿಂದ ನನಗೂ ಆ ರೀತಿಯ ಪಾತ್ರ ಮಾಡಬೇಕೆಂಬ ಆಸೆ ಇತ್ತು.  ಆ ಸಮಯದಲ್ಲಿಯೇ ವಿನಯ್ ನನಗೆ ಈ ಸಿನಿಮಾದ ಕಥೆ  ಹೇಳಿದಾಗ ತುಂಬಾ ಇಷ್ಟವಾಯಿತು.  ನಾನು ಒಂದೇ ತರಹದ ಸಿನಿಮಾ ಮಾಡುವುದಕ್ಕಿಂತ ವಿಭಿನ್ನ ಕಥೆಯ ಸಿನಿಮಾಗಳಲ್ಲಿ ನಟಿಸಲು ಇಷ್ಟಪಡುತ್ತೇನೆ ಎಂದು ಹೇಳಿಕೊಂಡಿದ್ದಾರೆ ಲೂಸ್ ಮಾದ ಯೋಗಿ. ಮಡಮಕ್ಕಿ ಚಿತ್ರವನ್ನು ನಿರ್ದೇಶಿಸಿದ್ದ ವಿನಯ್ ಪ್ರೀತಮ್ ಈ ಚಿತ್ರದ ಡೈರೆಕ್ಟರ್. ಪೂಜಾ ವಸಂತ್ ಕುಮಾರ್ ನಿರ್ಮಾಣದ ಸಿನಿಮಾ ವರ್ಷದ ಕೊನೆಗೆ ಬಿಡುಗಡೆಯಾಗುತ್ತಿದೆ.

  • ಫಸ್ಟ್ ಸಿನಿಮಾ ರಿಲೀಸ್ ಫೀಲ್`ನಲ್ಲಿದ್ದೇನೆ : ಕೃಷಿ ತಾಪಂಡ

    ಫಸ್ಟ್ ಸಿನಿಮಾ ರಿಲೀಸ್ ಫೀಲ್`ನಲ್ಲಿದ್ದೇನೆ : ಕೃಷಿ ತಾಪಂಡ

    ಇದೇ ಗಣೇಶ ಹಬ್ಬಕ್ಕೆ ರಿಲೀಸ್ ಆಗುತ್ತಿರುವ ಲಂಕೆ ಚಿತ್ರದ ಹೀರೋಯಿನ್ ಕೃಷಿ ತಾಪಂಡ. ಯೋಗಿ ಹೀರೋ ಆಗಿರುವ ಚಿತ್ರದಲ್ಲಿ ನಾಲ್ವರು ನಾಯಕಿಯರಿದ್ದರೂ, ಲೀಡ್ ರೋಲ್ ಕೃಷಿ ತಾಪಂಡ ಅವರದ್ದೇ ಅಂತೆ. ಹೆಚ್ಚೂ ಕಡಿಮೆ ಒಂದು ವರ್ಷ ಲೇಟ್ ಆಗಿ ರಿಲೀಸ್ ಅಗುತ್ತಿರೋ ಲಂಕೆ, 2020ರಲ್ಲೇ ಥಿಯೇಟರಿಗೇ ಬರಬೇಕಿತ್ತು. ಈಗಲೂ ಅಷ್ಟೆ, ಕೊರೊನಾ ಭೀತಿಯ ನಡುವೆ ರಿಲೀಸ್ ಆಗುತ್ತಿರೋ ಮೊದಲ ಸ್ಟಾರ್ ಸಿನಿಮಾ ಲಂಕೆ.

    2018ರಲ್ಲಿ ಕನ್ನಡಕ್ಕಾಗಿ ಒಂದನ್ನು ಒತ್ತಿ ರಿಲೀಸ್ ಆಗಿದ್ದೇ ಕೊನೆ. 2019ರಲ್ಲಿ ಒಟ್ಟು 4 ಸಿನಿಮಾಗಳಲ್ಲಿ ನಟಿಸಿದೆ. ಎಲ್ಲವೂ ರೆಡಿ. 2020ಕ್ಕೆ ರಿಲೀಸ್ ಆಗಬೇಕಿದ್ದ ಆ ಯಾವ ಚಿತ್ರಗಳೂ ರಿಲೀಸ್ ಆಗಲಿಲ್ಲ. ಈಗ ಲಂಕೆ ರಿಲೀಸ್ ಆಗುತ್ತಿದೆ. ನಾನು ನನ್ನ ಮೊದಲ ಚಿತ್ರ ರಿಲೀಸ್ ಆಗುತ್ತಿದೆ ಎಂಬ ಟೆನ್ಷನ್‍ನಲ್ಲಿದ್ದೇನೆ ಎನ್ನುತ್ತಿದ್ದಾರೆ ಕೃಷಿ ತಾಪಂಡ.

    ಚಿತ್ರದಲ್ಲಿ ನನ್ನ ಪಾತ್ರಕ್ಕೆ ಹಲವಾರು ಶೇಡ್‍ಗಳಿಗೆ. ಬಬ್ಲಿ ಹುಡುಗಿ, ಅಳು, ನಗು, ಪ್ರೀತಿ, ಭಾವನೆ, ಫೈಟಿಂಗ್ ಸೀಕ್ವೆನ್ಸ್ ಎಲ್ಲವೂ ಇದೆ. ಇದೊಂದು ಮಾಸ್ ಸಿನಿಮಾ. ಎಲ್ಲ ಕಮರ್ಷಿಯಲ್ ಎಲಿಮೆಂಟ್ಸ್‍ಗಳೂ ಇವೆ ಎನ್ನುವ ಕೃಷಿ ತಾಪಂಡ, ಲಂಕೆ ದೊಡ್ಡ ಬ್ರೇಕ್ ನೀಡಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

  • ಬಿಡುಗಡೆಗೂ ಮೊದಲೇ ಕೋಟಿ ಬಾಚಿದ ಹೆಡ್ ಬುಷ್

    ಬಿಡುಗಡೆಗೂ ಮೊದಲೇ ಕೋಟಿ ಬಾಚಿದ ಹೆಡ್ ಬುಷ್

    ಹೆಡ್ ಬುಷ್ ನಾಳೆ ರಿಲೀಸ್. ಅಂಡರ್‍ವಲ್ರ್ಡ್ ಕಥೆ ಆಧರಿಸಿದ ಚಿತ್ರವಿದು. ಬೆಂಗಳೂರಿನ ಮೊದಲ ಡಾನ್ ಜೈರಾಜ್ ಬಯೋಪಿಕ್. ಕೊತ್ವಾಲ, ಗಂಗಾ ಕಥೆಯೂ ಚಿತ್ರದಲ್ಲಿ ಬರುತ್ತೆ. ಚಿತ್ರದ ಚಿತ್ರಕಥೆ ಸಂಭಾಷಣೆ ಮಾಜಿ ಡಾನ್ ಅಗ್ನಿ ಶ್ರೀಧರ್ ಅವರದ್ದಾಗಿರುವುದರಿಂದ ರಿಯಾಲಿಟಿಗೆ ಹತ್ತಿರದಲ್ಲಿಯೇ ಇರುತ್ತೆ. ಡಾಲಿ ಧನಂಜಯ್ ನಿರ್ಮಾಣದ 2ನೇ ಚಿತ್ರವಿದು. ಮೊದಲ ಚಿತ್ರ ಬಡವ ರಾಸ್ಕಲ್ ಚಿತ್ರದಲ್ಲಿ ಭರ್ಜರಿಯಾಗಿ ಗೆದ್ದಿದ್ದ ಡಾಲಿ 2ನೇ ಸಿನಿಮಾ ಹೆಡ್ ಬುಷ್ ಸಿನಿಮಾದಲ್ಲೂ ಗೆಲುವಿನ ಮೊದಲ ಸೂಚನೆ ಕೊಟ್ಟಿದ್ದಾರೆ. ಶೂನ್ಯ ನಿರ್ದೇಶನದ ಮೊದಲ ಚಿತ್ರವೇ 2 ಭಾಗಗಳಲ್ಲಿ ಬರುತ್ತಿದ್ದು ಚಿತ್ರ ಬಿಡುಗಡೆಗೂ ಮುನ್ನವೇ ಕೋಟಿ ಕೋಟಿ ಬಾಚಿದೆ.

    ಡಾಲಿ ಜೊತೆ ಚಿತ್ರದಲ್ಲಿ ವಸಿಷ್ಠ ಸಿಂಹ ಕೊತ್ವಾಲನಾಗಿ, ಲೂಸ್ ಮಾದ ಗಂಗ ಪಾತ್ರದಲ್ಲಿ ನಟಿಸಿದ್ದಾರೆ. ರಘು ಮುಖರ್ಜಿ, ದೇವರಾಜ್, ಶ್ರುತಿ ಹರಿಹರನ್, ಪಾಯಲ್ ರಜಪೂತ್.. ಮೊದಲಾದವರು ನಟಿಸಿರೋ ಚಿತ್ರದ ಹಬೀಬಿ ಹಾಡು ಈಗಾಗಲೇ ಹೈಲೈಟ್. ನಾಳೆ ರಿಲೀಸ್ ಆಗುತ್ತಿರೋ ಚಿತ್ರವನ್ನು ಝೀಟಿವಿ ಕೊಂಡುಕೊಂಡಿದೆ. ಚಿತ್ರದ ಟಿವಿ ರೈಟ್ಸ್, ಸ್ಯಾಟಲೈಟ್ ರೈಟ್ಸ್, ಒಟಿಟಿ ರೈಟ್ಸ್, ಹಿಂದಿ ಸೇರಿದಂತೆ ಸಿನಿಮಾ ಬಿಡುಗಡೆಯ ಎಲ್ಲ ಹಕ್ಕುಗಳನ್ನೂ ಝೀಟಿವಿ ಖರೀದಿ ಮಾಡಿದ್ದು 22 ಕೋಟಿ ಬಾಚಿಕೊಂಡಿದೆ. ಡಾಲಿ ಚಿತ್ರಗಳಲ್ಲೇ ಇದು ಸೂಪರ್ ಬಿಗ್ ಬಜೆಟ್ ಸಿನಿಮಾ ಆಗಲಿದೆ.

  • ಮರಿ ಟೈಗರ್ ಮೊದಲ ಕನಸಿನ ಲಂಕಾಸುರ ಸ್ಟೇಟಸ್ ಏನು?

    ಮರಿ ಟೈಗರ್ ಮೊದಲ ಕನಸಿನ ಲಂಕಾಸುರ ಸ್ಟೇಟಸ್ ಏನು?

    ಮರಿ ಟೈಗರ್ ಎಂದೇ ಪ್ರೀತಿಯಿಂದ ಅಭಿಮಾನಿಗಳಿಂದ ಕರೆಸಿಕೊಳ್ಳೋ ವಿನೋದ್ ಪ್ರಭಾಕರ್ ನಿರ್ಮಾಣದ ಮೊದಲ ಸಿನಿಮಾ ಲಂಕಾಸುರ. ಟೈಗರ್ ಟಾಕೀಸ್ ಬ್ಯಾನರ್‍ನಲ್ಲಿ ಚಿತ್ರಕ್ಕೆ ಬಂಡವಾಳ ಹೂಡಿರುವುದು ಪತ್ನಿ ನಿಶಾ ವಿನೋದ್ ಪ್ರಭಾಕರ್. ಚಿತ್ರದಲ್ಲಿ ಲೂಸ್ ಮಾದ ಯೋಗಿ ಕೂಡಾ ನಟಿಸಿದ್ದಾರೆ. ಇದೀಗ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.

    ಒಟ್ಟಾರೆ 65 ದಿನಗಳ ಶೂಟಿಂಗ್ ಮುಗಿದಿದ್ದು, ಬೆಂಗಳೂರು, ಗೋವಾದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಶೀಘ್ರದಲ್ಲೇ ಚಿತ್ರದ ಟೀಸರ್ ರಿಲೀಸ್ ಮಾಡೋ ಪ್ಲಾನ್‍ನಲ್ಲಿದ್ದಾರೆ ನಿಶಾ ವಿನೋದ್ ಪ್ರಭಾಕರ್.

    ಚಿತ್ರದಲ್ಲಿ ವಿನೋದ್, ಯೋಗಿ ಜೊತೆಗೆ ಪಾರ್ವತಿ ಅರುಣ್, ದೇವರಾಜ್, ರವಿಶಂಕರ್.. ಮೊದಲಾದವರು ನಟಿಸಿದ್ದು, ಪ್ರಮೋದ್ ಕುಮಾರ್ ನಿರ್ದೇಶಕ.

  • ಮೇ 27ಕ್ಕೆ ಕಿರಿಕ್ ಶಂಕರ್

    ಮೇ 27ಕ್ಕೆ ಕಿರಿಕ್ ಶಂಕರ್

    ಲೂಸ್ ಮಾದ ಯೋಗಿ ಮತ್ತು ಅದ್ವಿಕಾ ನಟಿಸಿರೋ ಸಿನಿಮಾ ಕಿರಿಕ್ ಶಂಕರ್. ಕಿರಿಕ್ ಶಂಕರ್ ಇದೇ ಮೇ 27ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರದ ಟ್ರೇಲರ್‍ನ್ನು ಖ್ಯಾತ ನಿರ್ದೇಶಕ ಆರ್.ಚಂದ್ರು ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

    ನನ್ನ ಮೊದಲ ಚಿತ್ರದಿಂದಲೂ ನನಗೆ ಬೆನ್ನೆಲುಬಾಗಿ ನಿಂತಿದ್ದವರು ಕುಮಾರಣ್ಣ. ಅವರು ಈಗ ಸಿನಿಮಾ ಮಾಡು ಎಂದರೂ ನಾನು ಮಾಡಲು ಸಿದ್ಧ ಎಂದರು ಆರ್.ಚಂದ್ರು. ಅಂದಹಾಗೆ ಚಂದ್ರು ಈ ಮಾತು ಹೇಳಿದ್ದು ಎಂ.ಎನ್.ಕುಮಾರ್ ಅವರ ಬಗ್ಗೆ. ಕಿರಿಕ್ ಶಂಕರ್ ಚಿತ್ರದ ನಿರ್ಮಾಪಕರು ಅವರೇ.. ಎಂ.ಎನ್.ಕುಮಾರ್.

    ಅಣ್ಣಾವ್ರ ಬ್ಯಾನರ್ ಬಿಟ್ಟರೆ ನಾನು ನಟಿಸಿದ ಅತೀ ದೊಡ್ಡ ಬ್ಯಾನರ್ ಇದೇ ಎಂದವರು ಯೋಗಿ. ಅನಂತರಾಜು ಚಿತ್ರದ ನಿರ್ದೇಶಕರು.

    ಏಪ್ರಿಲ್‍ನಲ್ಲಿಯೇ ರಿಲೀಸ್ ಮಾಡೋಕೆ ಸಿದ್ಧವಾಗಿದ್ದೆ. ಆದರೆ ಒಂದರ ಹಿಂದೊಂದು ತುಂಬಾ ಚಿತ್ರಗಳು ರಿಲೀಸ್ ಆದವು. ಹೀಗಾಗಿ ಮುಂದೆ ಹೋಗಿ ಈಗ ರಿಲೀಸ್ ಮಾಡುತ್ತಿದ್ದೇವೆ ಎಂದರು ಎಂ.ಎನ್.ಕುಮಾರ್. ವೀರ್ ಸಮರ್ಥ್ ನಿರ್ದೇಶನದ ಹಾಡುಗಳು ಪ್ರೇಕ್ಷಕರಿಗೆ ಇಷ್ಟವಾಗಿದ್ದು, ಈ ಹಾಡುಗಳೇ ಚಿತ್ರವನ್ನು ಪ್ರಮೋಟ್ ಮಾಡುತ್ತಿವೆ.

  • ಯೋಗಿಯ ‘ಒಂಭತ್ತನೇ ದಿಕ್ಕು’ ಆದಿತಿಯೇ ಅಧಿಪತಿ

    arya claps for ombattane dikku movie

    ಲೂಸ್ ಮಾದ ಯೋಗಿ ದಯಾಳ್ ಪದ್ಮನಾಭನ್ ಇದೇ ಮೊದಲ ಬಾರಿಗೆ ಜೊತೆಯಾಗಿದ್ದಾರೆ. ನಾಯಕಿ ಆದಿತಿ ಪ್ರಭುದೇವ ರಂಗನಾಯಕಿ ಚಿತ್ರದ ನಂತರ ಮತ್ತೊಮ್ಮೆ ದಯಾಳ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಒನ್ಸ್ ಎಗೇಯ್ನ್ ಒಂದು ಥ್ರಿಲ್ಲರ್ ಕಥೆಯನ್ನಿಟ್ಟುಕೊಂಡೇ ಬಂದಿದ್ದಾರೆ ದಯಾಳ್. ಚಿತ್ರಕ್ಕೆ ಮುಹೂರ್ತ ನೆರವೇರಿದ್ದು, ತಮಿಳು ನಟ ಆರ್ಯ ಚಿತ್ರಕ್ಕೆ ಕ್ಲಾಪ್ ಮಾಡಿದ್ದಾರೆ.

    ಸರಳವಾದ ಕಥೆಗಳನ್ನು ಮನಮುಟ್ಟುವಂತೆ ಹೇಳೋದ್ರಲ್ಲಿ ಯಶಸ್ಸು ಕಂಡಿರುವ ದಯಾಳ್, ರಂಗನಾಯಕಿ ಚಿತ್ರವನ್ನು ಮುಗಿಸಿದ್ದಾರೆ. ಅದು ರಿಲೀಸ್ ಆಗುವ ಮೊದಲೇ ಎಂದಿನಂತೆ ಹೊಸ ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಅಫ್ಕೋರ್ಸ್, ಈ ಚಿತ್ರದಲ್ಲೂ ದಯಾಳ್ ಜೊತೆ ನವೀನ್ ಕೃಷ್ಣ ಜೊತೆಯಾಗಿದ್ದಾರೆ.

  • ಯೋಗಿಯ 50ನೇ ಚಿತ್ರಕ್ಕೆ ಶಿವಣ್ಣನ ಚಿತ್ರದ ಟೈಟಲ್ : ಏನಿದು ಕಾಂಟ್ರವರ್ಸಿ..?

    ಯೋಗಿಯ 50ನೇ ಚಿತ್ರಕ್ಕೆ ಶಿವಣ್ಣನ ಚಿತ್ರದ ಟೈಟಲ್ : ಏನಿದು ಕಾಂಟ್ರವರ್ಸಿ..?

    ಇತ್ತೀಚೆಗೆ ಹೆಡ್ ಬುಷ್ ಖ್ಯಾತಿಯ ಶೂನ್ಯ ನಿರ್ದೇಶನದಲ್ಲಿ ಯೋಗಿಯ ಚಿತ್ರ ಸೆಟ್ಟೇರಿತ್ತು. ಅದು ಯೋಗಿಯ 50ನೇ ಸಿನಿಮಾ ಎಂಬ ಕಾರಣಕ್ಕೆ ಭರ್ಜರಿ ಸದ್ದನ್ನೂ ಮಾಡಿತ್ತು. ಆದರೆ ಇದೀಗ ಆ ಟೈಟಲ್ ವಿವಾದಕ್ಕೆ ಸಿಲುಕಿದೆ. ಇದು ನಮ್ಮ ಚಿತ್ರದ ಟೈಟಲ್ ಎಂದು ಧ್ವನಿಯೆತ್ತಿರುವವರು ಬೇರಾರೂ ಅಲ್ಲ, ಖ್ಯಾತ ನಿರ್ಮಾಪಕ ರಮೇಶ್ ರೆಡ್ಡಿ.

    ರಮೇಶ್ ರೆಡ್ಡಿ ಈಗಾಗಲೇ ಕನ್ನಡಿಗರಿಗೆ ಪರಿಚಿತರಾಗಿರುವ ನಿರ್ಮಾಪಕ. ಪಡ್ಡೆಹುಲಿ, 100, ನಾತಿಚರಾಮಿ, ಗಾಳಿಪಟ 2 ಚಿತ್ರಗಳನ್ನು ನಿರ್ಮಾಣ ಮಾಡಿದವರು. ಈಗ ಅರ್ಜುನ್ ಜನ್ಯ ಅವರು ನಿರ್ದೇಶನ ಮಾಡುತ್ತಿರೋ ರೋಸಿ-45 ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ.  ಇದೀಗ 'ಲೂಸ್ ಮಾದ' ಯೋಗಿ ಟೀಮ್ ಕೂಡ ಅದೇ ಶೀರ್ಷಿಕೆ ಇಟ್ಟಿರುವುದಕ್ಕೆ ಸೂರಜ್ ಪ್ರೊಡಕ್ಷನ್ಸ್ನ ರಮೇಶ್ ರೆಡ್ಡಿ ಮತ್ತು ನಿರ್ದೇಶಕ ಅರ್ಜುನ್ ಜನ್ಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. 'ಸೂರಜ್ ಪ್ರೊಡಕ್ಷನ್ಸ್ ಲಾಂಛನದ ಮೂಲಕ 'ರೋಸಿ 45' ಶೀರ್ಷಿಕೆಯನ್ನು ನೊಂದಾಯಿಸಲಾಗಿತ್ತು. ಈಗ ಡಿ ವೈ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೂ 'ರೋಸಿ' ಎಂದು ಶೀರ್ಷಿಕೆ ಇಡಲಾಗಿದೆ.

    ಈ ವಿಷಯವನ್ನು ಕರ್ನಾಟಕ ವಾಣಿಜ್ಯ ಮಂಡಳಿ ಗಮನಕ್ಕೆ ತರಲಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮೊದಲು ಶೀರ್ಷಿಕೆ ನೊಂದಾಯಿಸಿದವರು ಮಾತ್ರ ಶೀರ್ಷಿಕೆ ಬಳಸಿಕೊಳ್ಳಬಹುದು ಎಂದು ಹೇಳಿದೆ. ಹಾಗಾಗಿ, ಸೂರಜ್ ಪ್ರೊಡಕ್ಷನ್ಸ್ಗೆ 'ರೋಸಿ 45' ಶೀರ್ಷಿಕೆ ಸೇರಿದೆ. ಇನ್ನು ಮುಂದೆ ಯಾರು ಕೂಡ 'ರೋಸಿ' ಶೀರ್ಷಿಕೆ ಬಳಸುವ ಹಾಗಿಲ್ಲ ಹಾಗೂ ಶೀರ್ಷಿಕೆ ಪಕ್ಕದಲ್ಲಿ ಬೇರೆ ಪದ ಹಾಗೂ ನಂಬರ್ಗಳನ್ನಾಗಲಿ ಸೇರಿಸಿಕೊಂಡು ಸಹ ಬಳಸುವ ಹಾಗಿಲ್ಲ  ಎಂದು 'ರೋಸಿ 45' ಸಿನಿಮಾದ ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ತಿಳಿಸಿದ್ದಾರೆ.

    ಈಗ ರೋಸಿ ಟೈಟಲ್`ನ್ನೇ ಬಳಸಿಕೊಳ್ಳೋಕೆ ಯೋಗಿ, ಶೂನ್ಯ ಹಠ ಹಿಡೀತಾರಾ ಅಥವಾ ಶಿವಣ್ಣ ಮತ್ತು ಉಪೇಂದ್ರ ಒಟ್ಟಿಗೇ ನಟಿಸುತ್ತಿರುವ ಚಿತ್ರದ ಟೈಟಲ್ ಬಿಟ್ಟು ಹೊಸ ಟೈಟಲ್ ಇಟ್ಟುಕೊಳ್ತಾರಾ ಎನ್ನುವುದೇ ಕುತೂಹಲ.