` ramesh aravind, - chitraloka.com | Kannada Movie News, Reviews | Image

ramesh aravind,

  • ಮೊಬೈಲ್.. ಸೋಷಿಯಲ್ ಮೀಡಿಯಾ ಹುಚ್ಚರಿಗೆ 100 ವಾರ್ನಿಂಗ್

    ಮೊಬೈಲ್.. ಸೋಷಿಯಲ್ ಮೀಡಿಯಾ ಹುಚ್ಚರಿಗೆ 100 ವಾರ್ನಿಂಗ್

    ಇತ್ತೀಚೆಗೆ ಜನ ಮೊಬೈಲುಗಳಲ್ಲೇ ಕಳೆದುಹೋಗುತ್ತಿದ್ದಾರೆ. ಅದರಲ್ಲೂ ಯುವ ಜನಾಂಗ.. ಲೈಕು, ಕಮೆಂಟುಗಳ ಹುಚ್ಚಿನಲ್ಲಿ ತೇಲಿ ಹೋಗಿದೆ. ಈಗ ಹುಡುಗಿಯರನ್ನು ಚುಡಾಯಿಸೋವ್ರು, ಪಟಾಯಿಸೋವ್ರು.. ರೋಡ್ ಸೈಡಿನಲ್ಲಿ ಇರೋದಿಲ್ಲ. ನಿಮ್ಮ ಮೊಬೈಲ್‍ಗೇ ಬಂದುಬಿಡ್ತಾರೆ. ನಿಮ್ಮ ಮನೆಗೇ ಬರುತ್ತಾರೆ.. ಜಸ್ಟ್ ಮೊಬೈಲ್ ಮೂಲಕ. ಅಂತಹ ಸೈಬರ್ ಕ್ರಿಮಿನಲ್‍ಗಳ ಜಾಲಕ್ಕೆ ಬೀಳೋ ಹೆಣ್ಣು ಮಕ್ಕಳ ಭವಿಷ್ಯ ಯಾವ್ಯಾವ ರೀತಿಯಲ್ಲಿ ನರಳಬಹುದು ಅನ್ನೋ ಕಾನ್ಸೆಪ್ಟಿನಲ್ಲೇ ಸೃಷ್ಟಿಯಾಗಿರೋ ಕಥೆ 100.

    ನಿರ್ಮಾಪಕ ರಮೇಶ್ ರೆಡ್ಡಿ, ತಮ್ಮ ಫ್ರೆಂಡ್ ಮನೆಯಲ್ಲಿ ನಡೆದ ಘಟನೆಯನ್ನೇ ರಮೇಶ್ ಅವರಿಗೆ ಹೇಳಿದ್ದರಂತೆ. ಯುವ ಜನಾಂಗಕ್ಕೆ ಎಚ್ಚರಿಕೆಯೂ ಇರಬೇಕು. ಪೋಷಕರಿಗೂ ತಿಳಿಯಬೇಕು.. ಅಂತಾದ್ದೊಂದು ಸಿನಿಮಾ ಮಾಡಿಕೊಡಿ ಎಂದಾಗ.. ಅದನ್ನು ಮನರಂಜನೆಯ ಚೌಕಟ್ಟಿನಲ್ಲಿ ಹೇಳದಿದ್ದರೆ ಜನರಿಗೆ ರೀಚ್ ಆಗಲ್ಲ ಎಂದೇ ಒಂದು ಚೆಂದದ ಕಥೆ, ಚಿತ್ರಕಥೆ ಬರೆದು, ನಿರ್ದೇಶಿಸಿ ನಾಯಕರಾಗಿದ್ದಾರೆ ರಮೇಶ್ ಅರವಿಂದ್.

    ರಚಿತಾ ರಾಮ್, ಪೂರ್ಣ ರಮೇಶ್ ಜೊತೆಗೆ ನಟಿಸಿದ್ದಾರೆ. ಆ್ಯಕ್ಷನ್ ಸೀಕ್ವೆನ್ಸ್ ಮೈನವಿರೇಳಿಸುತ್ತಿವೆ. ಸಿನಿಮಾ ನವೆಂಬರ್ 19ಕ್ಕೆ ರಿಲೀಸ್ ಆಘುತ್ತಿದೆ. ಡಯಲ್ 100.

  • ರಚಿತಾ ರಾಮ್`ರ 100 ಅತ್ತಿಗೆ ಯಾರು ಗೊತ್ತಾ..? ಘೋಸ್ಟ್ ಕ್ವೀನ್

    ರಚಿತಾ ರಾಮ್`ರ 100 ಅತ್ತಿಗೆ ಯಾರು ಗೊತ್ತಾ..? ಘೋಸ್ಟ್ ಕ್ವೀನ್

    100. ಇದೇ ವಾರ ರಿಲೀಸ್ ಆಗುತ್ತಿರೋ ರಮೇಶ್ ನಟಿಸಿ ನಿರ್ದೇಶಿಸಿರುವ ಸಿನಿಮಾ. ಈ ಚಿತ್ರದಲ್ಲಿ ಸೈಬರ್ ಕ್ರೈಂ ಕಥೆ ಇದೆ. ಫ್ಯಾಮಿಲಿ ಥ್ರಿಲ್ಲರ್ ಸ್ಟೋರಿ ಎಂದು ರಮೇಶ್ ಹೇಳಿಕೊಂಡಿದ್ದಾರೆ. ಚಿತ್ರದಲ್ಲಿ ರಮೇಶ್ ಅವರಿಗೆ ತಂಗಿಯಾಗಿರೋದು ರಚಿತಾ ರಾಮ್. ಪುಷ್ಪಕವಿಮಾನದಲ್ಲಿ ಮಗಳಾಗಿದ್ದ ರಚಿತಾ, ಈಗ ತಂಗಿಯಾಗಿ ಪ್ರಮೋಷನ್ ಪಡೆದಿದ್ದಾರೆ. ಅವರಿಗೆ ಅತ್ತಿಗೆಯಾಗಿ ಬಂದಿರೋದು ಪೂರ್ಣ.

    ಈ ಪೂರ್ಣ ಮೂಲತಃ ಕೇರಳದವರು. ವೊರಿಜಿನಲ್ ಹೆಸರು ಶಮ್ನಾ ಕಾಸಿಮ್. ಹೆಚ್ಚು ಪ್ಯಾಪುಲರ್ ಆಗಿದ್ದು ತೆಲುಗಿನಲ್ಲಿ. ಅಲ್ಲಿ ಪೂರ್ಣ ಅವರನ್ನು ಘೋಸ್ಟ್ ಕ್ವೀನ್ ಎಂದೇ ಬ್ರಾಂಡ್ ಮಾಡಿದ್ದರು. ಕೆಲವು ದೆವ್ವದ ಚಿತ್ರಗಳಲ್ಲಿ ನಟಿಸಿ, ಅವೆಲ್ಲವೂ ಹಿಟ್ ಆದ ಕಾರಣ ಪೂರ್ಣ ಘೋಸ್ಟ್ ಕ್ವೀನ್ ಆಗಿದ್ದರು. ಕನ್ನಡದಲ್ಲಿ ಜೋಶ್ ಮತ್ತು ರಾಧನ್ ಗಂಡ ಚಿತ್ರದಲ್ಲಿ ನಟಿಸಿ ಹೋಗಿದ್ದವರು. ಈಗ 100 ಮೂಲಕ ಮತ್ತೆ ಬಂದಿದ್ದಾರೆ.

    ಚಿತ್ರದಲ್ಲಿ ನನ್ನದು ಗೃಹಿಣಿಯ ಪಾತ್ರ. ರಮೇಶ್ ಅವರಿಗೆ ಪತ್ನಿ. ಹಳ್ಳಿ ಬ್ಯಾಕ್‍ಗ್ರೌಂಡ್‍ನಿಂದ ಬಂದಿರೋ ಮುಗ್ಧೆ. ಗಂಡನಿಗಿಂತ ಹೆಚ್ಚು ನಾದಿನಿ ರಚಿತಾ ರಾಮ್ ಜೊತೆ ಒಳ್ಳೆ ಬಾಂಧವ್ಯ ಇರೋ ಅತ್ತಿಗೆಯ ಪಾತ್ರ. ಚಿತ್ರದ ಕಥೆ ಮತ್ತು ನನ್ನ ಪಾತ್ರ ಚೆನ್ನಾಗಿದೆ. ಥ್ರಿಲ್ ಆಗಿದ್ದೇನೆ ಎನ್ನುವ ಪೂರ್ಣ, ಅವಕಾಶ ಕೊಟ್ಟ ರಮೇಶ್ ಅವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ರಮೇಶ್ ರೆಡ್ಡಿ ನಿರ್ಮಾಣದ 100 ಇದೇ ವಾರ ರಿಲೀಸ್ ಆಗುತ್ತಿದೆ.

  • ರಣಗಿರಿ ರಹಸ್ಯ ಬೇಟೆಗೆ ಡಿಟೆಕ್ಟಿವ್ ರಮೇಶ್ ಅರವಿಂದ್

    ramesh aravind to play detective in his next

    ರಮೇಶ್ ಅರವಿಂದ್ ಡಿಟೆಕ್ಟಿವ್ ಆಗುತ್ತಿದ್ದಾರೆ. ಕನ್ನಡದಲ್ಲೀಗ ಪತ್ತೇದಾರನಾಗುವ ಹೊಸ ಟ್ರೆಂಡ್ ಶುರುವಾಗಿದೆ. ಅವರ ಚಿತ್ರದ ಹೆಸರೇ ಶಿವಾಜಿ ಸುರತ್ಕಲ್ - ದಿ ಕೇಸ್ ಆಪ್ ರಣಗಿರಿ ರಹಸ್ಯ. ರಮೇಶ್ ಅರವಿಂದ್ ಚಿತ್ರದಲ್ಲಿ ಶೆರ್ಲಾಕ್ ಹೋಮ್ಸ್ ಮಾದರಿಯ ಪತ್ತೇದಾರ.

    ಆಕಾಶ್ ಶ್ರೀವತ್ಸ ನಿರ್ದೇಶನದ ಚಿತ್ರಕ್ಕೆ ರಾಧಿಕಾ ಚೇತನ್, ಆರೋಹಿ ನಾರಾಯಣ್ ನಾಯಕಿಯರು. ರಣಗಿರಿ ಅನ್ನೋ ಊರಿನ ಹೆಸರು ಕೇಳಿದರೇನೇ ಎಲ್ಲರೂ ನಡುಗುತ್ತಾರೆ. ಕಾರಣ, ಅಲ್ಲಿ ನಡೆಯೋ ಕ್ರೈಂಗಳು. ಅ ನಿಗೂಢದ ಹುಡುಕಾಟಕ್ಕೆ ಸ್ಪೆಷಲ್ ಪತ್ತೇದಾರ ಶಿವಾಜಿ ಸುರತ್ಕಲ್ ಹೊರಡುತ್ತಾನೆ. ವಿಚಿತ್ರ ಕೇಸ್ ರಹಸ್ಯ ಬೇಧಿಸುತ್ತಾನೆ ಎಂದು ವಿವರ ಕೊಡ್ತಾರೆ ಆಕಾಶ್ ಶ್ರೀವತ್ಸ. ಚಿತ್ರ ಈಗಾಗಲೇ 10 ದಿನದ ಶೂಟಿಂಗ್ ಮುಗಿಸಿದೆಯಂತೆ.

  • ರಣಗಿರಿ ರಹಸ್ಯದಲ್ಲಿ ನಿಮಿಷಕ್ಕೊಂದು ಟ್ವಿಸ್ಟ್.. ಪ್ರೇಕ್ಷಕನೇ ಡಿಟೆಕ್ಟಿವ್..

    ranagiri rahasya ill hook audience till the end

    ಶಿವಾಜಿ ಸುರತ್ಕಲ್ ದಿ ಕೇಸ್ ಆಫ್ ರಣಗಿರಿ ರಹಸ್ಯದ ಕಥೆ ಏನು ಎಂದರೆ.. ಅದೊಂದು ಕೊಲೆ ಮತ್ತು ನಿಗೂಢ ಊರಿನ ಚರಿತ್ರೆ ಬಿಚ್ಚಿಕೊಳ್ಳುತ್ತೆ. ವಿಭಿನ್ನ ಕಥಾಹಂದರ ಇರುವ ಈ ಚಿತ್ರದಲ್ಲಿ ರಮೇಶ್ ಅಭಿನಯವೇ ಹೈಲೈಟ್. ಜೊತೆಗೆ ಹಿನ್ನೆಲೆ ಸಂಗೀತ ಚಿತ್ರದ ಅತಿದೊಡ್ಡ ಪ್ಲಸ್ ಎನ್ನುವ ನಿರ್ದೇಶಕ ಶ್ರೀವತ್ಸ, ಈ ಚಿತ್ರದಲ್ಲಿ ಸೌಂಡ್ ಎಫೆಕ್ಟ್ಗೆ ವಿಶೇಷ ಪ್ರಾಧಾನ್ಯತೆ ಕೊಟ್ಟಿದ್ದಾರೆ.

    ಇಲ್ಲಿಯವರೆಗೂ ಕೇಳದ ಕೆಲವು ಬಗೆಯ ಸದ್ದುಗಳನ್ನು ಚಿತ್ರದಲ್ಲಿ ಬಳಸಿದ್ದೇವೆ. ಪಿಲ್ಲೊ ಕವರ್‌, ಪೆನ್‌, ಪೆನ್ಸಿಲ್‌, ಕಾಡುಗಳಲ್ಲಿಕೇಳಿ ಬರುವ ಪ್ರಾಣಿಪಕ್ಷಿ, ಮಂಜಿನ ವಾತಾವರಣ ಹೀಗೆ ಸಣ್ಣ ಸಣ್ಣ ಸಂಗತಿಯೂ ಅನುಭವಕ್ಕೆ ಬರುವಂತೆ ಸೌಂಡ್‌ ಡಿಸೈನ್‌ ಮಾಡಿದ್ದೇವೆ. ರಮೇಶ್‌ ಅರವಿಂದ್ ಅವರಿಗೆ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದಾರೆ. ರಾಧಿಕಾ ನಾರಾಯಣ್ ಮತ್ತು ಆರೋಹಿ ನಾರಾಯಣ್. ಆದರೆ.. ಚಿತ್ರದ ಇನ್ನೊಂದು ವಿಶೇಷವೆಮದರೆ, ಪ್ರೇಕ್ಷಕನೂ ಪತ್ತೇದಾರನಾಗುತ್ತಾನೆ.

    ಪ್ರತಿ ನಿಮಿಷಕ್ಕೊಂದು ಸಾಕ್ಷಿ, ಕುತೂಹಲ ಇರುವ ಸಿನಿಮಾ ನೋಡುತ್ತಿರುವಾಗ ಪ್ರೇಕ್ಷಕನೂ ಡಿಟೆಕ್ಟಿವ್ ರೀತಿಯಲ್ಲೇ ಫೀಲ್ ಆಗ್ತಾನೆ. ಸಿನಿಮಾ ನೊಡುತ್ತಲೇ..  ಕೊಲೆ ರಹಸ್ಯ ಭೇದಿಸುವ ಅನುಭವ ಪ್ರೇಕ್ಷಕನಿಗೆ ಸಿಗಲಿದೆ ಎನ್ನುತ್ತಾರೆ ಶ್ರೀತ್ವಸ.

    ಈ ಸಿನಿಮಾವನ್ನು ಆಕಾಶ್‌ ಶ್ರೀವತ್ಸ ನಿರ್ದೇಶಿಸಿದ್ದರೆ, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ . ರೇಖಾ ಕೆಎನ್‌ ಹಾಗೂ ಅನೂಪ್‌ ಗೌಡ ನಿರ್ಮಾಪಕರು. ರಮೇಶ್ ಅರವಿಂದ್ ಮೇಕ್ ಓವರ್ ಅಚ್ಚರಿ ಹುಟ್ಟಿಸುವಂತಿದೆ.

     

  • ರಮೇಶ್ ಅರವಿಂದ್ ತಂಗಿ ರಚಿತಾ ರಾಮ್

    rachita plays ramesh's sister in 100

    ರಚಿತಾ ರಾಮ್ ಅವರಿಗೆ ಹೊಸ ಅಣ್ಣ ಸಿಕ್ಕಿದ್ದಾರೆ. ಅದು ರಮೇಶ್ ಅರವಿಂದ್ ರೂಪದಲ್ಲಿ. ಶಿವಾಜಿ ಸುರತ್ಕಲ್ ಸಕ್ಸಸ್ ಜೋಶ್‍ನಲ್ಲಿರುವ ರಮೇಶ್, 100 ಚಿತ್ರವನ್ನು ನಿರ್ದೇಶಿಸುತ್ತಿರುವುದು ಗೊತ್ತಿದೆಯಷ್ಟೇ.. ಆ ಚಿತ್ರದಲ್ಲಿ ರಮೇಶ್ ತಂಗಿಯ ಪಾತ್ರ ರಚಿತಾ ರಾಮ್ ಅವರದ್ದು.

    ಕಥೆ ಕೇಳಿದೆ, ರಮೇಶ್ ಸರ್ ಅವರದ್ದೇ ಡೈರೆಕ್ಷನ್ ಎಂದು ಗೊತ್ತಾಯ್ತು. ತಕ್ಷಣ ಓಕೆ ಎಂದೆ, ನಾನಿಲ್ಲಿ ರಮೇಶ್ ಸರ್ ತಂಗಿ. ಸೆಲ್ಫಿ ಹುಚ್ಚು, ಸೋಷಿಯಲ್ ಮೀಡಿಯಾ ಹುಚ್ಚು. ಮನೆಯಲ್ಲಿನ ಪ್ರತಿಯೊಂದನ್ನೂ ಸೆಲ್ಫಿ ತೆಗೆದು ಸೋಷಿಯಲ್ ಮೀಡಿಯಾಗೆ ಹಾಕುತ್ತಿರುತ್ತೇನೆ. ಅದು ಹೇಗೆ ಮಿಸ್ ಯೂಸ್ ಆಗುತ್ತೆ, ಅದರಿಂದ ಬಚಾವ್ ಆಗೋಕೆ ಏನೇನೆಲ್ಲ ಮಾಡಬೇಕಾಗುತ್ತೆ ಅನ್ನೋದು ಚಿತ್ರದ ಕಥೆ ಎನ್ನುತ್ತಾರೆ ರಚಿತಾ ರಾಮ್.

    ಅಂದಹಾಗೆ ಚಿತ್ರದಲ್ಲಿ ಇಷ್ಟೆಲ್ಲ ಸೆಲ್ಫಿ, ಸೋಷಿಯಲ್ ಮೀಡಿಯಾ ಹುಚ್ಚಿಯಾಗಿ ಕಾಣಿಸಿಕೊಳ್ತಿರೋ ರಚಿತಾ, ರಿಯಲ್ ಲೈಫಲ್ಲಿ ಸೆಲ್ಫಿ, ಸೋಷಿಯಲ್ ಮೀಡಿಯಾದಿಂದ ದೂರ ದೂರ. ಇನ್‍ಸ್ಟಾಗ್ರಾಮ್ ಬಿಟ್ಟರೆ, ಬೇರೆ ಯಾವುದೇ ಪೇಜ್‍ನಲ್ಲಿ ಅವರಿಲ್ಲ. ಇನ್‍ಸ್ಟಾಗ್ರಾಮ್‍ನಲ್ಲಿ ಕೂಡಾ ರೆಗ್ಯುಲರ್ ಆಕ್ಟಿವ್ ಇರಲ್ಲ. ಟ್ವಿಟರ್, ಎಫ್‍ಬಿಯಲ್ಲಿರೋ ರಚಿತಾ ರಾಮ್ ಪೇಜ್‍ಗಳು ಅವರದ್ದಲ್ಲ. 

     

  • ರಮೇಶ್ ಅರವಿಂದ್ ಮಗಳ ಲವ್ ಸ್ಟೋರಿ..!

    ರಮೇಶ್ ಅರವಿಂದ್ ಮಗಳ ಲವ್ ಸ್ಟೋರಿ..!

    ರಮೇಶ್ ಅರವಿಂದ್ ಅವರಿಗೆ ಈಗ 56 ವರ್ಷ. ಹಾಗೆ ಕಾಣಿಸೋದಿಲ್ಲವಾದರೂ ವಯಸ್ಸಾಗಿರೋದಂತೂ ಸತ್ಯ. ಸ್ಸೋ.. ಈ ವಯಸ್ಸಿಗೆ ಸಹಜವಾಗಿಯೇ ಅವರಿಗೆ ಪ್ರಮೋಷನ್ ಸಿಗುತ್ತಿದೆ. ಅವರೀಗ ಮಾವನಾಗುತ್ತಿದ್ದಾರೆ. ರಮೇಶ್ ಅವರ ಮಗಳು ನಿಹಾರಿಕಾಗೆ ಮದುವೆ ಫಿಕ್ಸ್ ಆಗಿದೆ. ಇದೇ ಡಿಸೆಂಬರ್ 28ಕ್ಕೆ ಮದುವೆ. ಜನವರಿ 15ಕ್ಕೆ ರಿಸೆಪ್ಷನ್. ಆ ಆರತಕ್ಷತೆಗೆ ಚಿತ್ರರಂಗದ ಗಣ್ಯರೆಲ್ಲ ಇರುತ್ತಾರೆ.

    ಅಂದಹಾಗೆ ನಿಹಾರಿಕಾ ಮದುವೆಯಾಗುತ್ತಿರುವ ಹುಡುಗ ಅಕ್ಷಯ್. ಖಾಸಗಿ ಕಂಪೆನಿಯೊಂದರಲ್ಲಿ ಡಿಜಿಟಲ್ ಎಕ್ಸ್‍ಪೀರಿಯನ್ಸ್ ಡಿಸೈನರ್. ಇನ್ನು ನಿಹಾರಿಕಾ ಪ್ರಾಡಕ್ಟ್ ಮ್ಯಾನೇಜರ್. ಇಬ್ಬರದ್ದೂ ಪ್ರೇಮ ವಿವಾಹ. ಒಂದೇ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರ ಮಧ್ಯೆ ಪರಿಚಯ, ಗೆಳೆತನ.. ಪ್ರೀತಿಯಾಯಿತು. ಆ ಪ್ರೀತಿಗೆ ರಮೇಶ್-ಅರ್ಚನಾ ದಂಪತಿಗಳ ಆಶೀರ್ವಾದವೂ ಸಿಕ್ಕು, ಈಗ ಹಸೆಮಣೆ ಏರುತ್ತಿದ್ದಾರೆ.

  • ರಮೇಶ್ ಅರವಿಂದ್`ಗೆ ಗೌರವ ಡಾಕ್ಟರೇಟ್

    ರಮೇಶ್ ಅರವಿಂದ್`ಗೆ ಗೌರವ ಡಾಕ್ಟರೇಟ್

    ಇತ್ತೀಚೆಗಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರಿಗೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಘೋಷಿಸಿದೆ. ಅಲ್ಲಿಗೆ ಗೌರವ ಡಾಕ್ಟರೇಟ್ ಸ್ವೀಕರಿಸಿದ ಡಾ.ರಾಜ್, ವಿಷ್ಣು, ಅಂಬಿ, ಶಿವಣ್ಣ, ರವಿಚಂದ್ರನ್.. ಮೊದಲಾದವರ ಸಾಲಿಗೆ ರಮೇಶ್ ಕೂಡಾ ಸೇರ್ಪಡೆಗೊಂಡಿದ್ದಾರೆ.

    ಚಿತ್ರರಂಗಕ್ಕೆ ಸಲ್ಲಿಸಿದ ಸೇವೆ ಮತ್ತು ಸಾಧನೆಗಾಗಿ ರಮೇಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. 1986ರಲ್ಲಿ ಸುಂದರ ಸ್ವಪ್ನಗಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು ರಮೇಶ್ ಅರವಿಂದ್. ಕನ್ನಡದಲ್ಲಿಯೇ 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ರಮೇಶ್ ತಮಿಳಿನಲ್ಲಿ 30ಕ್ಕೂ ಹೆಚ್ಚು, ತೆಲುಗಿನಲ್ಲಿ 10, ಹಿಂದಿಯಲ್ಲಿ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಅಂದಹಾಗೆ ಮೊದಲು ನಟಿಸಿದ್ದ ಚಿತ್ರ ಮೌನಗೀತೆಯಾದರೂ ಅಧಿಕೃತವಾಗಿ ರಿಲೀಸ್ ಆದ ಮೊದಲ ಸಿನಿಮಾ ಸುಂದರ ಸ್ವಪ್ನಗಳು. ಪುಷ್ಪಕ ವಿಮಾನ ರಮೇಶ್ ಅರವಿಂದ್ ಅವರ 100ನೇ ಸಿನಿಮಾ. ಅಮೆರಿಕಾ ಅಮೆರಿಕಾ, ನಮ್ಮೂರ ಮಂದಾರ ಹೂವೆ, ಉಲ್ಟಾ ಪಲ್ಟಾ, ಅಮೃತ ವರ್ಷಿಣಿ.. ರಮೇಶ್ ಅವರು ನಟಿಸಿದ ಒಂದು ವರ್ಷಕ್ಕೂ ಹೆಚ್ಚು ಪ್ರದರ್ಶನಗೊಂಡ ಚಿತ್ರಗಳು.

    ಹೂಮಳೆ, ಅಮೃತಧಾರೆ ಬರಹಗಾರರಾಗಿ ಗೆದ್ದ ರಮೇಶ್ ರಾಮಾ ಶಾಮ ಭಾಮಾ ಚಿತ್ರದ ಮೂಲಕ ನಿರ್ದೇಶಕರೂ ಆದರು.

    ನಿರೂಪಕರಾಗಿ ವೀಕೆಂಡ್ ವಿತ್ ರಮೇಶ್, ಪ್ರೀತಿಯಿಂದ ರಮೇಶ್, ರಾಜ ರಾಣಿ ರಮೇಶ್, ಕನ್ನಡದ ಕೋಟ್ಯಧಿಪತಿಗಳ ನಿರೂಪಕರಾಗಿಯೂ ಗೆದ್ದವರು ರಮೇಶ್ ಅರವಿಂದ್. ಕಿರುತೆರೆ ಧಾರಾವಾಹಿಗಳ ನಿರ್ಮಾಪಕರೂ ಹೌದು. ನಂದಿನಿ ಹಾಗೂ ಸುಂದರಿ ಧಾರಾವಾಹಿಗಳ ನಿರ್ಮಾಪಕರಲ್ಲಿ ಒಬ್ಬರು ರಮೇಶ್. ಸಾಹಿತಿಗಳೂ ಹೌದು.

    ಇದೀಗ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಏಷಿಯಾನೆಟ್ ಸುವರ್ಣ ನ್ಯೂಸ್ ಸಹಯೋಗದ 7 ವಂಡರ್ಸ್ ಕರ್ನಾಟಕ ಕ್ಯಾಂಪೇನ್`ನ ರಾಯಭಾರಿಯೂ ಹೌದು.

    ರಾಜ್ಯಪ್ರಶಸ್ತಿ, ಫಿಲ್ಮ್‍ಫೇರ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿರುವ ರಮೇಶ್ ಅರವಿಂದ್ ಅವರಿಗೆ ಈಗ ಗೌರವ ಡಾಕ್ಟರೇಟ್ ಕೂಡಾ ಸಂದಿದೆ. ಸೆಪ್ಟೆಂಬರ್ 14ರಂದು ಸುವರ್ಣ ಸೌಧದಲ್ಲಿ ನಡೆಯಲಿರುವ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ಕಾರ್ಯಕ್ರಮ ನಡೆಯಲಿದೆ.

  • ರಮೇಶ್ ಜೊತೆಗೆ ನಾಜರ್ ಸುರತ್ಕಲ್

    ರಮೇಶ್ ಜೊತೆಗೆ ನಾಜರ್ ಸುರತ್ಕಲ್

    ಶಿವಾಜಿ ಸುರತ್ಕಲ್ ಚಿತ್ರದ ಸೀಕ್ವೆಲ್‍ನಲ್ಲಿ ಹೊಸದೊಂದು ಪಾತ್ರ ಎಂಟ್ರಿ ಕೊಡ್ತಿದೆ. ಅದು ವಿಜಯೇಂದ್ರ ಸುರತ್ಕಲ್ ಪಾತ್ರ. ಶಿವಾಜಿ ಸುರತ್ಕಲ್ ತಂದೆ. ಈ ಪಾತ್ರದಲ್ಲಿ ನಟಿಸುತ್ತಿರೋದು ನಾಜರ್.

    ಶಿವಾಜಿಯಂತೆಯೇ ವಿಜಯೇಂದ್ರ ಕೂಡಾ ಪೊಲೀಸ್. ಐಜಿಯಾಗಿ ರಿಟೈರ್ ಆಗಿರುತ್ತಾರೆ. ಅವರ ಪಾತ್ರ ಇಲ್ಲಿ ಬಂದಿದ್ದು ಹೇಗೆ ಅನ್ನೋಕೆ ಕಥೆಯಲ್ಲಿ ಕಾರಣ ಸಿಗುತ್ತೆ. ಅಪ್ಪ ಮಗನಾಗಿದ್ದರೂ ಅವರಿಬ್ಬರೂ ಮಾತು ಬಿಟ್ಟಿರುತ್ತಾರೆ. ಯಾಕೆ.. ಅನ್ನೋದಕ್ಕೆಲ್ಲ ಉತ್ತರ ಒಂದು ಸ್ಪೆಷಲ್ ಸ್ಟೋರಿಯೊಂದಿಗೆ ಇಲ್ಲಿ ಸಿಗಲಿದೆ ಎನ್ನುತ್ತಾರೆ ಡೈರೆಕ್ಟರ್ ಆಕಾಶ್ ಶ್ರೀವತ್ಸ.

    ರಮೇಶ್ ಮತ್ತು ನಾಜರ್ ಅವರದ್ದು ದಶಕಗಳ ಗೆಳೆತನ. ಆದರೆ ಒಟ್ಟಿಗೇ ನಟಿಸುತ್ತಿರುವುದು ಇದೇ ಮೊದಲ ಬಾರಿ. ಶಿವಾಜಿ ಸುರತ್ಕಲ್ ಸೀಕ್ವೆಲ್‍ನಲ್ಲಿ ರಾಧಿಕಾ ನಾರಾಯಣ್ ಅವರಷ್ಟೇ ಅಲ್ಲದೆ ಮೇಘನಾ ಗಾಂವ್ಕರ್ ಕೂಡಾ ನಟಿಸುತ್ತಿದ್ದಾರೆ. ಅನೂಪ್ ಗೌಡ ಮತ್ತು ರೇಖಾ ಕೆ.ಎಸ್. ನಿರ್ಮಾಪಕರಾಗಿರುವ ಚಿತ್ರದ ಒಂದು ಹಂತದ ಶೂಟಿಂಗ್ ಈಗಾಗಲೇ ಮುಗಿದಿದೆ.

  • ರಮೇಶ್ ಡಿಶುಂ ಡಿಶುಂ

    ramesh aravinds stunts in 100

    ರಮೇಶ್ ಅರವಿಂದ್, ಅದ್ಭುತ ಕಲಾವಿದ. ಎಂಥದ್ದೇ ಪಾತ್ರವಿರಲಿ, ಲೀಲಾಜಾಲವಾಗಿ ನಟಿಸುರವ ರಮೇಶ್ ಅರವಿಂದ್, ಇದುವರಗೆ ಫೈಟಿಂಗ್ ಮಾಡಿಲ್ಲ ಎಂದರೆ  ನಂಬಲೇಬೇಕು. ಅಫ್‍ಕೋರ್ಸ್, ಕೆಲುವ ಚಿಯತ್ರಗಳಲ್ಲಿ ಅಂತಹ ದೃಶ್ಯಗಳಲ್ಲಿ ನಟಿಸಿದ್ದರೂ ಕಮರ್ಷಿಯಲ್ ಹೀರೋಗಳಂತೆ ಫೈಟ್ ಮಾಡಿಲ್ಲ ಎಂಬುದಂತೂ ಸತ್ಯ. ಇಂತಹ ರಮೇಶ್ ಈಗ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ. ಅದೂ 100 ಚಿತ್ರದಲ್ಲಿ.

    ಎಂ.ರಮೇಶ್ ರೆಡ್ಡಿ ನಿರ್ಮಾಣದ 100 ಚಿತ್ರದಲ್ಲಿ ರಮೇಶ್ ಅರವಿಂದ್, ಪೊಲೀಸ್ ಆಫೀಸರ್. ಖಡಕ್ ಅಧಿಕಾರಿ. ಅವರು ಈ ಚಿತ್ರದಲ್ಲಿ ವಿಲನ್ ವಿಶ್ವಕರ್ಣ ಜೊತೆಗೆ ಫೈಟ್ ಮಾಡಿದ್ದಾರೆ.

    `ಇದುವರೆಗೆ ನನ್ನ ಚಿತ್ರಗಳಲ್ಲಿ ಪರಿಸ್ಥಿತಿ, ಸನ್ನಿವೇಶವೇ ವಿಲನ್ ಆಗಿರುತ್ತಿತ್ತು. ಹೀಗಾಗಿ ವಿಲನ್ ಜೊತೆ ಹೊಡೆದಾಡುವ ಸನ್ನಿವೇಶವೇ ಸಿಗುತ್ತಿರಲಿಲ್ಲ. ಇನ್ನು ಮುಂದೆ ಆ್ಯಕ್ಷನ್ ಸಿನಿಮಾಗಳಿಗೂ ಆದ್ಯತೆ ಕೊಡುತ್ತೇನೆ ಎಂದಿದ್ದಾರೆ ರಮೇಶ್.

    100 ಚಿತ್ರಕ್ಕೆ ರಮೇಶ್ ಅರವಿಂದ್ ಅವರದ್ದೇ ನಿರ್ದೇಶನ. ರಚಿತಾ ರಾಮ್ ನಾಯಕಿ.

  • ರಮೇಶ್ ರಚಿತಾ 100 ನ.19ಕ್ಕೆ

    ರಮೇಶ್ ರಚಿತಾ 100 ನ.19ಕ್ಕೆ

    ರಮೇಶ್ ಅರವಿಂದ್, ರಚಿತಾ ರಾಮ್ ಮತ್ತೊಮ್ಮೆ ಜೊತೆಯಾಗಿರೋ ಸಿನಿಮಾ 100. ಇದು ಸೈಬರ್ ಕ್ರೈಂ ಕಥೆ ಇರೋ ಸಿನಿಮಾ. ಸೋಷಿಯಲ್ ಮೀಡಿಯಾ, ಸೈಬರ್ ಅಪರಾಧ, ಕೌಟುಂಬಿಕ ಸಂಬಂಧಗಳ ಸುತ್ತ ಇರೋ ಸಿನಿಮಾದ ನಿರ್ದೇಶಕ ಸ್ವತಃ ರಮೇಶ್ ಅರವಿಂದ್.

    ರಮೇಶ್, ರಚಿತಾ ರಾಮ್ ಜೊತೆ ನಟಿಸಿರುವ ಇನ್ನೊಬ್ಬ ನಟಿ ಪೂರ್ಣಿಮಾ. ಗಾಳಿಪಟ 2 ಚಿತ್ರ ನಿರ್ಮಾಪಕರೂ ಆಗಿರೋ ರಮೇಶ್ ರೆಡ್ಡಿ, ಈ ಚಿತ್ರಕ್ಕೂ ನಿರ್ಮಾಪಕರು. ನಮ್ಮ ಸೂರಜ್ ಪ್ರೊಡಕ್ಷನ್ಸ್‍ನ ದೊಡ್ಡ ಚಿತ್ರವಿದು. ಪ್ರತಿಯೊಬ್ಬರೂ ನೋಡಬೇಕಾದ, ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ಸಿನಿಮಾ 100. ರಮೇಶ್ ಅರವಿಂದ್ ಪೊಲೀಸ್ ಪಾತ್ರ, ರಚಿತಾ, ಪೂರ್ಣಿಮಾ ಕಾಂಬಿನೇಷನ್ ಚಿತ್ರದ ಹೈಲೈಟ್ ಎನ್ನುತ್ತಾರೆ ರಮೇಶ್ ರೆಡ್ಡಿ. ಚಿತ್ರ ನವೆಂಬರ್ 19ಕ್ಕೆ ರಿಲೀಸ್.

  • ರಾಧಾ-ರಮೇಶ್ ಗಂಡ ಹೆಂಡತಿ

    radhika to pair opposite ramesh aravind

    ರಮೇಶ್ ಅರವಿಂದ್‍ಗೆ ಹೊಸ ಪತ್ನಿ ಸಿಕ್ಕಿದ್ದಾರೆ. ಛೆ.. ಅವರಂತಹವರಲ್ಲ ಬಿಡಿ ಅನ್ನಬೇಡಿ. ನಾವ್ ಹೇಳ್ತಿರೋದು ಒನ್ಸ್ ಎಗೇಯ್ನ್ ಸಿನಿಮಾ ಬಗ್ಗೆನೇ. ಶಿವಾಜಿ ಸುರತ್ಕಲ್ ಚಿತ್ರದಲ್ಲಿ ರಮೇಶ್ ಅರವಿಂದ್‍ಗೆ ಜೋಡಿಯಾಗಿ ನಟಿಸುತ್ತಿರುವುದು ರಾಧಿಕಾ ಚೇತನ್.

    ರಮೇಶ್ ಚಿತ್ರದಲ್ಲಿ ಪತ್ತೇದಾರನಾಗಿದ್ದರೆ, ಅವರ ಪತ್ನಿ ಲಾಯರ್ ಜನನಿಯಾಗಿ ನಟಿಸುತ್ತಿರುವುದು ರಾಧಿಕಾ ಚೇತತ್. ಆಕಾಶ್ ಶ್ರೀವತ್ಸ ನಿರ್ದೇಶನದ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿದೆ. ಚಿತ್ರದಲ್ಲಿ ರಮೇಶ್ ಅರವಿಂದ್ ಗಡ್ಡಧಾರಿಯಾಗಿ ಹಾಗೂ ಕ್ಲೀನ್ ಶೇವ್‍ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಏಕೆ ಅನ್ನೋ ರಹಸ್ಯವನ್ನು ಸಿನಿಮಾದಲ್ಲಿ ಬಹಿರಂಗಪಡಿಸಲಿದ್ದಾರಂತೆ ಆಕಾಶ್ ಶ್ರೀವತ್ಸ. ಚಿತ್ರಕ್ಕೆ ರೇಖಾ, ಕೆ.ಎನ್.ಅನೂಪ್ ಗೌಡ ನಿರ್ಮಾಪಕರು.

  • ವಯಸ್ಸು 55.. ಡ್ಯೂಟಿ 16-18 ಗಂಟೆ.. ಬ್ಯೂಟಿ 18 ವರ್ಷ..!

    ramesh aravind celebrates his birthday today

    ರಮೇಶ್ ಅರವಿಂದ್. ತಮಿಳಿನವರು ಗುರುತಿಸಲು ಸುಲಭವಾಗಲಿ ಎಂಬ ಕಾರಣಕ್ಕೆ ಬಾಲಚಂದರ್ ಸೇರಿಸಿದ ಉಪನಾಮ ಅರವಿಂದ್. ಕನ್ನಡಿಗರಿಗೆ ಮಾತ್ರ ರಮೇಶ್. ಅವರಿಗೀಗ 55 ವರ್ಷ. ಈಗಲೂ ದಿನಕ್ಕೆ 16ರಿಂದ 18 ಗಂಟೆ ದುಡಿಯುವ, ಕಾಯಕವೇ ಕೈಲಾಸ ಎಂದುಕೊಂಡಿರುವ ನಟ. ನಿರ್ದೇಶಕ, ಸಂಭಾಷಣೆಗಾರ, ಕಿರುತೆರೆ ನಿರ್ಮಾಪಕ, ನಿರೂಪಕ.. ಎಲ್ಲವೂ..

    1986ರಲ್ಲಿ ಕೆ.ಬಾಲಚಂದರ್ ಅವರ ಸುಂದರ ಸ್ವಪ್ನಗಳು ರಮೇಶ್ ಅಭಿನಯಿಸಿದ ಮೊದಲ ಸಿನಿಮಾ. ಆ ಚಿತ್ರದಲ್ಲಿ ಅವರು ಹೀರೋ ಅಲ್ಲ, ವಿಲನ್. ಮಧುಮಾಸ ಹೀರೋ ಆಗಿ ನಟಿಸಿದ ಮೊದಲ ಚಿತ್ರ. ದೊಡ್ಡ ಮಟ್ಟದ ಹೆಸರು ತಂದುಕೊಟ್ಟ ಚಿತ್ರ ಪಂಚಮವೇದ. ಹೀಗಿದ್ದರೂ.. ಸೋಲೋ ಹೀರೋ ಆಗಿ ಸತತ ಅವಕಾಶಗಳು ಸಿಗಲಿಲ್ಲ. ಒಳ್ಳೆ ಚಿತ್ರಗಳಿಗೆ.. ಒಳ್ಳೆಯ ಪಾತ್ರಗಳಿಗೆ ಕೊರತೆಯೂ ಇರಲಿಲ್ಲ.

    ಅದೇನು ಅದೃಷ್ಟವೋ.. 1995ರಲ್ಲಿ ಅನುರಾಗ ಸಂಗಮ ಸೂಪರ್ ಹಿಟ್ ಆಯ್ತು. ಅದಾದ ನಂತರ ಬೆನ್ನು ಬೆನ್ನಿಗೆ ಸೂಪರ್ ಹಿಟ್ ಚಿತ್ರಗಳು. ಅತ್ತ ತಮಿಳಿನಲ್ಲೂ ಸಕ್ಸಸ್. ಇತ್ತ ಕನ್ನಡದಲ್ಲೂ ಸಕ್ಸಸ್. ಅಮೆರಿಕಾ ಅಮೆರಿಕಾ, ಕರ್ಪೂರದ ಗೊಂಬೆ, ನಮ್ಮೂರ ಮಂದಾರ ಹೂವೆ, ಅಮೃತವರ್ಷಿಣಿ, ಓ ಮಲ್ಲಿಗೆ, ಉಲ್ಟಾಪಲ್ಟಾ, ತುತ್ತಾ ಮುತ್ತಾ, ಹೂಮಳೆ, ಭೂಮಿ ತಾಯಿಯ ಚೊಚ್ಚಲ ಮಗ.. ಒಂದಲ್ಲ.. ಎರಡಲ್ಲ.. ಈ ವೇಳೆಯಲ್ಲಿ ಬಂದ ಹಲವು ಚಿತ್ರಗಳು ರಮೇಶ್ ಅವರಿಗೆ ತ್ಯಾಗರಾಜ ಅನ್ನೋ ಬಿರುದು ಕೊಟ್ಟವು. ಆ ಹೆಸರು ಈಗಲೂ ಇದೆ.

    ರಾಮ ಶ್ಯಾಮ ಭಾಮ ಚಿತ್ರದ ಮೂಲಕ ನಿರ್ದೇಶಕರಾದ ರಮೇಶ್, ಅಲ್ಲಿಯೂ ಯಶಸ್ಸು ಕಂಡಿದ್ದಾರೆ. ಕಿರುತೆರೆಯ ಜನಪ್ರಿಯ ನಿರೂಪಕರಾಗಿಯೂ ಗೆದ್ದಿದ್ದಾರೆ. ಅವರಿಗೀಗ 55 ವರ್ಷ.

    ಈಗಲೂ ಅವರ ಕೈಲಿ ಕೈತುಂಬಾ ಸಿನಿಮಾಗಳಿವೆ. ದಿನಕ್ಕೆ ಈಗಲೂ 16ರಿಂದ 18 ಗಂಟೆ ಕೆಲಸ ಮಾಡುವ ಕಾಯಕಯೋಗಿ ರಮೇಶ್ ಅರವಿಂದ್. ಶಿವಾಜಿ ಸುರತ್ಕಲ್ ದಿ ಕೇಸ್ ಆಫ್ ರಣಗಿರಿ ರಹಸ್ಯ, 100, ಭೈರಾದೇವಿ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರೇ ನಿರ್ದೇಶಿಸಿರುವ ಬಟರ್ ಫ್ಲೈ ರಿಲೀಸ್‍ಗೆ ರೆಡಿಯಾಗಿದೆ. ಇದರ ನಡುವೆಯೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ರಮೇಶ್ ಅರವಿಂದ್.

  • ಶಿವಣ್ಣನ ಫ್ಯಾನ್ ಆಗಿ ಬಂದಿದ್ದೇನೆ : ಯಶ್

    ಶಿವಣ್ಣನ ಫ್ಯಾನ್ ಆಗಿ ಬಂದಿದ್ದೇನೆ : ಯಶ್

    ಭಜರಂಗಿ 2 ಚಿತ್ರದ ಪ್ರೀ ರಿಲೀಸ್ ಈವೆಂಟ್‍ನಲ್ಲಿ ಯಶ್ ಹೇಳಿದ ಮಾತುಗಳಿವು. ನನಗೆ ಶಿವಣ್ಣ ಇಷ್ಟ. ಭಜರಂಗಿ ನೋಡೋಕೆ ತ್ರಿವೇಣಿ ಥಿಯೇಟರಿಗೆ ಹೋಗಿದ್ದೆ. ಫ್ಯಾನ್ ಆಗಿ ಹೋಗಿದ್ದೆ. ಇವತ್ತು ಭಜರಂಗಿ 2 ರಿಲೀಸ್‍ಗೆ ಬಂದಿದ್ದೇನೆ. ಈಗಲೂ ಫ್ಯಾನ್ ಆಗಿಯೇ ಬಂದಿದ್ದೇನೆ ಎಂದ ಯಶ್, ಶಿವಣ್ಣ ನಾನು ಹುಟ್ಟೋಕೆ ಮೊದಲಿನಿಂದಲೂ ಸಿನಿಮಾ ಮಾಡ್ತಾ ಬಂದಿದ್ದಾರೆ.

    ಇವರ ನಡವಳಿಕೆಗಳನ್ನ ನೋಡಿ ನಾವೆಲ್ಲ ಕಲೀಬೇಕು. ಅಮ್ಮನಿಗೆ ಡಾ.ರಾಜ್‍ಕುಮಾರ್ ಅಂದ್ರೆ ತುಂಬಾ ಇಷ್ಟ. ನನಗೆ ಅಪ್ಪು ತರಾ ಡ್ಯಾನ್ಸ್, ಫೈಟ್ ಮಾಡೋಕೆ ಇಷ್ಟ. ಅದಕ್ಕಾಗಿಯೇ ಇಂಡಸ್ಟ್ರಿಗೆ ಬಂದೆ ಎಂದ ಯಶ್ ಭಜರಂಗಿ 2 ಸೂಪರ್ ಹಿಟ್ ಆಗಲಿ ಎಂದು ಹಾರೈಸಿದರು.

  • ಶಿವಾಜಿ ದಿಗ್ವಿಜಯ : ಸಕ್ಸಸ್ ಸ್ಟೋರಿ

    shivaji suratkal running successfully

    ರಮೇಶ್ ಅರವಿಂದ್ ನಟಿಸಿರುವ 101ನೇ ಸಿನಿಮಾ ಶಿವಾಜಿ ಸುರತ್ಕಲ್. ಕನ್ನಡದ ಶೆರ್ಲಾಕ್ ಹೋಮ್ಸ್ ಅವತಾರದಲ್ಲಿ ಬಂದ ಶಿವಾಜಿ ಸುರತ್ಕಲ್, ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದೆ. ಅದು ಸಾಬೀತಾಗಿರುವುದು ಥಿಯೇಟರು ಮತ್ತು ಶೋಗಳ ಸಂಖ್ಯೆಯಲ್ಲಿ. ಬೆಂಗಳೂರಿನಲ್ಲಿ ರಿಲೀಸ್ ದಿನ ಕೇವಲ 90+ ಶೋಗಳಷ್ಟೇ ಇದ್ದ ಸಿನಿಮಾ, 2ನೇ ದಿನ.. 3ನೇ ದಿನ.. ಶೋಗಳ ಸಂಖ್ಯೆ ಹೆಚ್ಚಿಸಿಕೊಂಡಿದೆ. ಶೋಗಳ ಸಂಖ್ಯೆ ಹೆಚ್ಚೂ ಕಡಿಮೆ 150ನ್ನು ಸಮೀಪಿಸಿದೆ. ಕಾರಣ ಇಷ್ಟೆ.. ಶಿವಾಜಿ ಸುರತ್ಕಲ್ ನೋಡುವವರ, ನೋಡಲು ಬಯಸುವವರ ಸಂಖ್ಯೆ ಹೆಚ್ಚುತ್ತಿದೆ.

    ಈಗ ಗೆದ್ದಿರುವುದು ನಿರ್ದೇಶಕ ಆಕಾಶ್ ಶ್ರೀವತ್ಸ್ ಮತ್ತು ರಮೇಶ್ ಅರವಿಂದ್. ಕಾಸು ಕೊಟ್ಟು ಥಿಯೇಟರಿಗೆ ಬರುವ ಪ್ರೇಕ್ಷಕ, ಸಿನಿಮಾ ಶುರುವಾದಾಗಿನಿಂದ ಮುಗಿಯುವವರೆಗೆ ಸೀಟಿನ ತುದಿಯಲ್ಲಿಯೇ ಕುಳಿತಿರುತ್ತಾನೆ ಎನ್ನುವುದು ನಿರ್ದೇಶಕರು ಮತ್ತು ಚಿತ್ರಕಥೆಗೆ ಸಿಗುತ್ತಿರೋ ಬಹುಮಾನ. ಅಫ್‍ಕೋರ್ಸ್... ಇದು ಬಾಕ್ಸಾಫೀಸ್‍ನಲ್ಲೂ ವಂಡರ್ ತೋರಿಸಿದೆ.

  • ಶಿವಾಜಿ ಫುಲ್ ಹ್ಯಾಪಿ

    ramesh aravind ha[[y over shivaji suratkal's success

    ಶಿವಾಜಿ ಸುರತ್ಕಲ್ ಗೆದ್ದಿದೆ. ಇದು ರಮೇಶ್ ಅರವಿಂದ್ ಅವರಿಗೆ ಸಖತ್ ಖುಷಿ ಕೊಟ್ಟಿದೆ. ರಮೇಶ್ ಅರವಿಂದ್ ಅದನ್ನು ತಮ್ಮದೇ ಸ್ಟೈಲ್‍ನಲ್ಲಿ ಬಣ್ಣಿಸಿರೋದು ಹೀಗೆ.. `ನಾವು ಇಷ್ಟಪಟ್ಟ ಕೆಲಸವನ್ನು, ನಾವು ಇಷ್ಟಪಡುವ ಜನರ ಜೊತೆ, ಇಷ್ಟಪಡುವ ಜಾಗದಲ್ಲಿ, ಇಷ್ಟಪಟ್ಟು ಮಾಡುವುದೇ ಯಶಸ್ಸು. ನಾವು ಇಷ್ಟಪಟ್ಟು ಮಾಡಿದ ಕೆಲಸವನ್ನು ಜನರೂ ಇಷ್ಟಪಟ್ಟರೆ.. ಅದು ಅತಿ ದೊಡ್ಡ ಯಶಸ್ಸು'.

    ಥಿಯೇಟರುಗಳಿಗೆ ಭೇಟಿ ಕೊಟ್ಟಾಗ ಪ್ರೇಕ್ಷಕರು ನೀಡಿರುವ ಪ್ರತಿಕ್ರಿಯೆ, ಟಿಕ್‍ಟಾಕ್‍ನಲ್ಲಿ ಬರುತ್ತಿರುವ ರಿಯಾಕ್ಷನ್ಸ್ ಹಾಗೂ ರಾಹುಲ್ ದ್ರಾವಿಡ್ ಸಿನಿಮಾ ನೋಡಿ ಮೆಚ್ಚಿದ್ದು ಖುಷಿ ಕೊಟ್ಟಿದೆ ಎನ್ನುತ್ತಾರೆ ರಮೇಶ್.

    ನಿರ್ದೇಶಕ ಆಕಾಶ್ ಶ್ರೀವತ್ಸ ಅವರಿಗಂತೂ ಚಿತ್ರದ ರೀಮೇಕ್‍ಗೆ ಬರುತ್ತಿರುವ ಡಿಮ್ಯಾಂಡ್ ನೋಡಿಯೇ ಖುಷಿಯಾಗಿದೆ. ಬಾಲಿವುಡ್, ತಮಿಳು ಹಾಗೂ ತೆಲುಗಿನಲ್ಲಿ ಡಿಮ್ಯಾಂಡ್ ಇದೆ ಎಂದಿದ್ದಾರೆ ಶ್ರೀವತ್ಸ. ನಿರ್ಮಾಪಕ ಅನೂಪ್ ಗೌಡ ನಿಮ್ಮ ಸಹಕಾರ ಹೀಗೆಯೇ ಇರಲಿ ಎಂದು ಮನವಿ ಮಾಡಿದ್ದಾರೆ.

  • ಶಿವಾಜಿ ಸುರತ್ಕಲ್ -2 ಆರಂಭ

    ಶಿವಾಜಿ ಸುರತ್ಕಲ್ -2 ಆರಂಭ

    ಲಾಕ್ ಡೌನ್ ಶುರುವಾಗುವ ಮುನ್ನ ರಿಲೀಸ್ ಆಗಿ ಹಿಟ್ ಆಗಿದ್ದ ಚಿತ್ರ ಶಿವಾಜಿ ಸುರತ್ಕಲ್. ರಮೇಶ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದ ಚಿತ್ರವೀಗ 2ಭಾಗದಲ್ಲಿ ತೆರೆಗೆ ಬರುತ್ತಿದೆ. ಶಿವಾಜಿ ಸುರತ್ಕಲ್ 2 ಚಿತ್ರ ಶುರುವಾಗಿದೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರೋ ಬಂಡೆ ಗಣೇಶ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನೆರವೇರಿದೆ.

    ರಮೇಶ್, ರಾಧಿಕಾ ನಾರಾಯಣ್ ಜೊತೆಗೆ ಈ ಬಾರಿ ಮೇಘನಾ ಗಾಂವ್ಕರ್, ವಿನಾಯಕ್ ಜೋಷಿ, ರಾಕೇಶ್ ಸೇರ್ಪಡೆಗೊಂಡಿದ್ದಾರೆ. ಎಲ್ಲರದ್ದೂ ಪೊಲೀಸ್ ಪಾತ್ರಗಳೇ ಎನ್ನುವುದು ವಿಶೇಷ. ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ 2 ಚಿತ್ರೀಕರಣ ಡಿಸೆಂಬರ್‍ನಲ್ಲಿ ಶುರುವಾಗಲಿದೆ.

  • ಶಿವಾಜಿ ಸುರತ್ಕಲ್ : 60 ಚಿತ್ರಮಂದಿರಗಳಲ್ಲಿ 25 ದಿನ

    ಶಿವಾಜಿ ಸುರತ್ಕಲ್ : 60 ಚಿತ್ರಮಂದಿರಗಳಲ್ಲಿ 25 ದಿನ

    ಶಿವಾಜಿ ಸುರತ್ಕಲ್ ಚಿತ್ರವನ್ನ ಅಭಿಮಾನಿಗಳು ಪ್ರೀತಿಯಿಂದ ಅಪ್ಪಿದ್ದಾರೆ. ರಮೇಶ್ ಅರವಿಂದ್ ನಟನೆಯ ‘ಶಿವರಾಜಿ ಸುರತ್ಕಲ್ 2’ ಚಿತ್ರ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 25 ದಿನಗಳ ಸಂಭ್ರಮ ಆಚರಿಸುತ್ತಿದೆ. ಆಕಾಶ್ ಶ್ರೀವತ್ಸ ನಿರ್ದೇಶನದ ಈ ಚಿತ್ರದ ವಿಶೇಷವೆಂದರೆ ರಮೇಶ್ ಅರವಿಂದ್ ಕೈಲಿ ಗನ್ನು, ಪಿಸ್ತೂಲ್ ಇದ್ದದ್ದು ಮತ್ತು ಗೆದ್ದದ್ದು.

    ರಮೇಶ್ ಅರವಿಂದ್ ಎಂದರೆ ಥಟ್ಟನೆ ಕಣ್ಣ ಮುಂದೆ ಬರೋದು ಪ್ರೀತಿ, ಪ್ರೇಮ, ಗುಲಾಬಿ, ತ್ಯಾಗ, ಭಾವನೆ, ಫ್ಯಾಮಿಲಿ.. ಇವೇ.. ಇದನ್ನೆಲ್ಲದರ ಜೊತೆಯಲ್ಲಿ ಥ್ರಿಲ್ ಕೊಟ್ಟ ಆಕಾಶ್ ಶ್ರೀವತ್ಸ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕಂಟೆಂಟ್ ಮೂಲಕವೇ ಎಳೆದು ತಂದಿದ್ದಾರೆ.

    ಕೈಯಲ್ಲಿ ಗುಲಾಬಿ ಹಿಡಿದು ನಾಯಕಿಯರ ಜತೆಗೆ ತೆರೆ ಮೇಲೆ ಮುದ್ದಾಡಿಕೊಂಡು ಇದ್ದವನ ಕೈಗೆ ಪಿಸ್ತೂಲು, ಚಾಕು ಕೊಟ್ಟು ಮರ್ಡಮಿಸ್ಟ್ರಿ ಸಿನಿಮಾ ಮಾಡಿಸಿದ್ದಾರೆ. ನನ್ನ ಚಿತ್ರಗಳಲ್ಲಿ ರಕ್ತನೇ ಕಾಣುತ್ತಿಲ್ಲ. ಈಗ ನಾನೇ ಕೊಲೆಗಾರನಾಗಿದ್ದೇನೆ. ಗಡ್ಡನೇ ಇಲ್ಲದೆ ನೂರು ಸಿನಿಮಾಗಳನ್ನು ಮಾಡಿಬಿಟ್ಟೆ. ನಾನೂ ಚಿತ್ರವನ್ನು ನೋಡಲು ಥಿಯೇಟರ್ಗೆ ಹೋಗಿದ್ದೆ. ಅಲ್ಲಿ ಬಂದಿದ್ದ ಪ್ರೇಕ್ಷಕರನ್ನು ನೋಡಿ ನಿಜವಾದ ಪ್ರೇಕ್ಷಕರು ಸಿನಿಮಾ ನೋಡಲು ಬಂದಿದ್ದಾರೆ. ಯಾವುದೋ ಕಾರಣಕ್ಕೆ ಚಿತ್ರಮಂದಿರಗಳಿಂದ ದೂರವೇ ಉಳಿದ್ದ ಪ್ರೇಕ್ಷಕ ವರ್ಗ ಮತ್ತೆ ಚಿತ್ರಮಂದಿರಕ್ಕೆ ಬಂದ ಖುಷಿ ಸಿಕ್ಕಿತು ಎಂದಿದ್ದಾರೆ ರಮೇಶ್ ಅರವಿಂದ್.

    ಈ ಚಿತ್ರದ ನಂತರ ರಮೇಶ್ ಅರವಿಂದ್ ಹೊಸ ಚಿತ್ರಕ್ಕೆ ಪ್ಲಾನ್ ಮಾಡಿದ್ದಾರೆ. ಫೊರೆನ್ಸಿಕ್ ಸಬ್ಜೆಕ್ಟ್ ಇಟ್ಟುಕೊಂಡು ಮಾಡಿರುವ ಕಥೆಯಂತೆ. ಫೊರೆನ್ಸಿಕ್ ನಾಲೆಡ್ಜ್ ಇಟ್ಟುಕೊಂಡಿರುವ ಕೊಲೆಗಾರನ ಕಥೆ ಅದು. ಒಟ್ಟಿನಲ್ಲಿ ಶಿವಾಜಿ ಸುರತ್ಕಲ್, ರಮೇಶ್ ಅರವಿಂದ್ ಎಂಬ ಪ್ರೇಮಿಯನ್ನು, ತ್ಯಾಗರಾಜನನ್ನು ಕೊಲೆ, ಥ್ರಿಲ್ಲರ್, ಸಸ್ಪೆನ್ಸ್ ಎಂದು ಅಪರಾಧ ಲೋಕದ ಬಗ್ಗೆಯೇ ಯೋಚಿಸುವ ಹಾಗೆ ಮಾಡಿದೆ.

  • ಶಿವಾಜಿ ಸುರತ್ಕಲ್ ಚಿತ್ರ ವೀಕ್ಷಿಸಿದ ರಾಹುಲ್ ದ್ರಾವಿಡ್

    crickter rahul dravid watches shivaji suratkal movie

    ಶಿವಾಜಿ ಸುರತ್ಕಲ್ ಚಿತ್ರತಂಡ ಇಂದು ಅಂತಾರಾಷ್ಟ್ರೀಯ ಖ್ಯಾತಿಯ ಕ್ರಿಕೆಟಿಗರಾದ  ರಾಹುಲ್ ದ್ರಾವಿಡ್ ಅವರಿಗೊಂದು ವಿಶೇಷ ಪ್ರದರ್ಶನ ಏರ್ಪಡಿಸಿತ್ತು.  ದ್ರಾವಿಡ್ ರವರು  ಅದಕ್ಕೆ ಒಪ್ಪಿಕೊಂಡು ಚಿತ್ರದ ಮೊದಲ ಪ್ರೆಕ್ಷಕರಾದದ್ದಕ್ಕೆ, ಚಿತ್ರತಂಡದ ಎಲ್ಲರಿಗೂ ಸಂತೋಷವಾಯಿತು.

    ಪ್ರದರ್ಶನದ ನಂತರ ಚಿತ್ರದ ನಾಯಕರಾದ ರಮೇಶ್ ಅರವಿಂದ್ ಹಾಗೂ ನಿರ್ದೇಶಕ ಆಕಾಶ್ ಶ್ರೀವತ್ಸ ಅವರೊಂದಿಗೆ ಮಾತನಾಡಿದ ದ್ರಾವಿಡ್, ಮೆಚ್ಚುಗೆಯನ್ನು ಹಂಚಿಕೊಂಡರು. ರಮೇಶ್ ಅರವಿಂದ್ ಅವರಿಗೆ ಧನ್ಯವಾದಗಳನ್ನು ಹೇಳುತ್ತಾ, ಚಿತ್ರ ಅದ್ಭುತವಾಗಿದೆ ಎಂದರು. ಚಿತ್ರದ  climax  ತನ್ನನ್ನು ಬೆರಗುಗೊಳಿಸಿತು  ಎಂದರು.

    ವೀಕ್ಷಕರೆಲ್ಲರನ್ನೂ ಅದು ಆಶ್ಚರ್ಯ ಪಡಿಸುವುದು ಖಚಿತ ಎಂದು ಅಭಿಪ್ರಾಯ ಪಟ್ಟರು. ನಿರ್ದೇಶಕ ಆಕಾಶ್ ಅವರನ್ನು ಅಭಿನಂದಿಸುತ್ತಾ, ಚಿತ್ರವು ಖಂಡಿತ ಯಶಸ್ವಿಯಾಗುವುದು ಎಂದು ಹಾರೈಸಿದರು.

  • ಶಿವಾಜಿ ಸುರತ್ಕಲ್ ಟ್ರೇಲರ್ ಸೂಪರ್ : ಏ.14ಕ್ಕೆ ರಿಲೀಸ್

    ಶಿವಾಜಿ ಸುರತ್ಕಲ್ ಟ್ರೇಲರ್ ಸೂಪರ್ : ಏ.14ಕ್ಕೆ ರಿಲೀಸ್

    ರಮೇಶ್ ಅರವಿಂದ್ ನಾಯಕರಾಗಿ ನಟಿಸಿರುವ ಶಿವಾಜಿ ಸುರತ್ಕಲ್ 2 ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಆಕಾಶ್ ಶ್ರೀವತ್ಸ ನಿರ್ದೇಶಿಸಿರುವ ಈ ಚಿತ್ರವನ್ನು ರೇಖಾ ಕೆ.ಎನ್ ಹಾಗೂ ಅನೂಪ್ ಗೌಡ ನಿರ್ಮಿಸಿದ್ದಾರೆ. ಟ್ರೇಲರ್ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಶಿವಾಜಿ ಸುರತ್ಕಲ್ : ದಿ ಕೇಸ್ ಆಫ್ ರಣಗಿರಿ ರಹಸ್ಯ ಸಿನಿಮಾ ಭಾರೀ ಮೆಚ್ಚುಗೆ ಪಡೆದಿತ್ತು. ರಮೇಶ್ ಅರವಿಂದ್ ಅವರು ಡಿಟೆಕ್ಟಿವ್ ಆಗಿ ನಟನೆಯಲ್ಲಿ ದೊಡ್ಡ ಮಾರ್ಕ್ಸ್ ಗಳಿಸಿದ್ದರು. ಆರೋಹಿ ನಾರಾಯಣ್, ಅವಿನಾಶ್, ರಾಘು ರಾಮನಕೊಪ್ಪ, ವಿನಯ್ ಗೌಡ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು. ಈಗ ಪಾರ್ಟ್ 2 ಹೇಗಿರಲಿದೆ ಎಂಬ ಕುತೂಹಲ ಶುರುವಾಗಿದೆ.

    ಮಾಯಾವಿಯ ಹುಡುಕಾಟಕ್ಕೆ ಹೊರಡುವ ಶಿವಾಜಿ ಸುರತ್ಕಲ್, ಮಗಳ ಜೊತೆ ತುಂಟಾಟವಾಡುವ ಶಿವಾಜಿ, ಮೇಘನಾ ಗಾಂವ್ಕರ್ ಪಾತ್ರದ ಜೊತೆ ಸಂಥಿಂಗ್ ಈಸ್ ಸಸ್ಪೆನ್ಸ್.. ಟೋಟಲ್ಲಿ ಆಕಾಶ್ ಶ್ರೀವತ್ಸ ಬೇರೆಯದೇ ಕಥೆ ಹೇಳೋಕೆ ಹೊರಟಿದ್ದಾರೆ. ಮಾಯಾವಿ ಯಾರು..? ಅದು ರಮೇಶ್ ಅರವಿಂದ್ ಅವರೇನಾ..? ಡಬಲ್ ಆಕ್ಟಿಂಗ್ ಮಾಡಿದ್ದಾರಾ..? ಟ್ರೇಲರ್ ಹುಟ್ಟಿಸಿರುವ ಕುತೂಹಲ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದು ತರುವಂತಿದೆ. ದಟ್ಸ್ ಇಟ್.

  • ಶಿವಾಜಿ ಸುರತ್ಕಲ್ ಮಗಳಾಗಿ ಆರಾಧ್ಯ..!

    ಶಿವಾಜಿ ಸುರತ್ಕಲ್ ಮಗಳಾಗಿ ಆರಾಧ್ಯ..!

    ಆರಾಧ್ಯ. ಬಾಲನಟಿ. ಚುರುಕು ಮಾತಿನ ಚಿನಕುರುಳಿ. ಅವರೀಗ ಶಿವಾಜಿ ಸುರತ್ಕಲ್ ಮಗಳಾಗುತ್ತಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ಸೀಕ್ವೆಲ್ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ಭಾಗದಲ್ಲಿ ಶಿವಾಜಿಯ ಮಗಳು ಸಿರಿ ಸುರತ್ಕಲ್ ಪಾತ್ರದಲ್ಲಿ ಆರಾಧ್ಯ ನಟಿಸುತ್ತಿದ್ದಾಳೆ.

    ಆಕಾಶ್ ಶ್ರೀವತ್ಸ ನಿರ್ದೇಶನದ ಶಿವಾಜಿ ಸುರತ್ಕಲ್ ದಿ ಮಿಸ್ಟೀರಿಯಸ್ ಕೇಸ್ ಆಫ್ ಮಾಯಾವಿ ಚಿತ್ರದಲ್ಲಿ ರಮೇಶ್ ಅರವಿಂದ್ ಹೀರೋ. ಈ ಚಿತ್ರಕ್ಕೆ ರಾಧಿಕಾ ನಾರಾಯಣ್ ಜೊತೆ ಮೇಘನಾ ಗಾಂವ್ಕರ್ ಎಂಟ್ರಿ ಕೊಟ್ಟಿದ್ದಾರೆ. ನಾಜರ್ ಇದ್ದಾರೆ. 21 ದಿನಗಳ ಶೂಟಿಂಗ್ ಮುಗಿದು, ಮುಂದಿನ ಚಿತ್ರೀಕರಣ ಬೆಂಗಳೂರಿನಲ್ಲಿಯೇ ನಡೆಯಲಿದೆ.