` anup bhandari, - chitraloka.com | Kannada Movie News, Reviews | Image

anup bhandari,

  • ವಿಕ್ರಾಂತ್ ರೋಣನ ಸಕ್ಸಸ್ ಸಂಭ್ರಮಿಸಿದ ರಾಜಮೌಳಿ

    ವಿಕ್ರಾಂತ್ ರೋಣನ ಸಕ್ಸಸ್ ಸಂಭ್ರಮಿಸಿದ ರಾಜಮೌಳಿ

    ಜುಲೈ 28ಕ್ಕೆ ರಿಲೀಸ್ ಆದ ವಿಕ್ರಾಂತ್ ರೋಣ ಸಿನಿಮಾ ಎಲ್ಲ ದಾಖಲೆಗಳನ್ನೂ ಪುಡಿಗಟ್ಟಿ ಮುನ್ನುಗ್ಗುತ್ತಿದೆ. ಅಮಿತಾಭ್ ಬಚ್ಚನ್, ಮೋಹನ್`ಲಾಲ್ ಅಂತಹ ದಿಗ್ಗಜರು ಶುಭ ಹಾರೈಸಿದ್ದ ಸಿನಿಮಾ ವಿಕ್ರಾಂತ್ ರೋಣ. ಈಗ ಪ್ರೇಕ್ಷಕರು ದಿಬ್ಬಣದಲ್ಲಿ ಮೆರವಣಿಗೆ ಮಾಡುತ್ತಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಸಿನಿಮಾ ನೋಡುತ್ತೇನೆ ಎಂದು ಶುಭ ಹಾರೈಸಿದ್ದ ಭಾರತೀಯ ಚಿತ್ರರಂಗದ ದಿಗ್ಗಜ ರಾಜಮೌಳಿ ಸಿನಿಮಾ ನೋಡಿ ಮೆಚ್ಚಿದ್ದಾರೆ. ಜಕ್ಕಣ್ಣ ಏನು ಹೇಳಬಹುದು ಎಂಬ ನಿರೀಕ್ಷೆಯಲ್ಲಿ ಕಾದು ಕುಳಿತಿದ್ದ ಸುದೀಪ್ ಥ್ರಿಲ್ ಆಗಿದ್ದಾರೆ.

    ವಿಕ್ರಾಂತ್ ರೋಣದಂತಾ ಸಿನಿಮಾ ಮಾಡೋಕೆ ಧೈರ್ಯ ಬೇಕು. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಒಂದ್ಸಲ ಸೀಕ್ರೆಟ್ ರಿವೀಲ್ ಆದರೆ ಪ್ರೇಕ್ಷಕರು ಕುತೂಹಲ, ಉತ್ಸಾಹ ಎರಡನ್ನೂ ಕಳೆದುಕೊಳ್ತಾರೆ.ಆದರೆ ಇಲ್ಲಿ ಮಾತ್ರ ಪ್ರೇಕ್ಷಕರು ರಿಪೀಟ್ ಆಗುತ್ತಿದ್ದಾರೆ. ಇದು ಹೊಸ ಅಧ್ಯಾಯಕ್ಕೆ ಮುನ್ನುಡಿ ಎಂದಿದ್ದಾರೆ ರಾಜಮೌಳಿ.

    ಕಿಚ್ಚ ಖುಷ್ ಹುವಾ.. ಅನೂಪ್ ಭಂಡಾರಿ ಡಬಲ್ ಖುಷ್ ಹುವಾ.. ರಾಜಮೌಳಿ ಶಹಬ್ಬಾಸ್`ಗಿರಿ ನಂತರ ತೆಲುಗಿನಲ್ಲಿ ಚಿತ್ರಕ್ಕೆ ಡಿಮ್ಯಾಂಡ್ 40 ಪಟ್ಟು ಹೆಚ್ಚಾಗಿದೆ. ಹೀಗಾಗಿ ನಿರ್ಮಾಪಕ ಜಾಕ್ ಮಂಜು ಕೂಡಾ ಖುಷ್ ಹುವಾ.

    ಚಿತ್ರದ ಭಾಸ್ಕರ್ ಪಾತ್ರದ ಬಗ್ಗೆ ಮೆಚ್ಚುಗೆಯಿಂದ ಮಾತನಾಡಿರುವ ರಾಜಮೌಳಿ ಇಡೀ ವಿಕ್ರಾಂತ್ ರೋಣ ಚಿತ್ರಕ್ಕೆ ಖುಷಿ ಕೊಟ್ಟಿದ್ದಾರೆ.

  • ವಿಕ್ರಾಂತ್ ರೋಣನ ಹೊಸ ಬಿಸಿನೆಸ್ ಪ್ಲಾನ್

    ವಿಕ್ರಾಂತ್ ರೋಣನ ಹೊಸ ಬಿಸಿನೆಸ್ ಪ್ಲಾನ್

    ಒಂದು ಕಡೆ ವಿಕ್ರಾಂತ್ ರೋಣ ಸಿನಿಮಾ ದೇಶದಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಇದೇ ಮೊದಲ ಬಾರಿಗೆ ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿರೋ ಕನ್ನಡದ ಸಿನಿಮಾ ವಿಕ್ರಾಂತ್ ರೋಣ. ರಕ್ಕಮ್ಮ ಹಾಡಿನ ಕ್ರೇಜ್ ಒಂದು ಕಡೆಯಾದರೆ, ಉಳಿದ ಹಾಡುಗಳ ಕಿಚ್ಚು ಮತ್ತೊಂದು ಕಡೆ. ಸುದೀಪ್ ಮತ್ತು ಅನೂಪ್ ಭಂಡಾರಿ ಕಾಂಬಿನೇಷನ್`ನ ಸಿನಿಮಾ ಅಮಿತಾಭ್ ಬಚ್ಚನ್ ಸೇರಿದಂತೆ ಸ್ಟಾರ್ ನಟರನ್ನೆಲ್ಲ ಸೆಳೆಯುವಲ್ಲಿ ಗೆದ್ದಿದೆ. ಇದರ ಮಧ್ಯೆಯೇ ಕಿಚ್ಚ ಹೊಸ ಬಿಸಿನೆಸ್ ಆರಂಭಿಸುವ ಉತ್ಸಾಹ ತೋರಿಸಿದ್ದಾರೆ. ಇದು ಸಿನಿಮಾಗೆ ಸಂಬಂಧಿಸಿದ್ದಲ್ಲ. ಸಿನಿಮಾ ಹೊರತಾದ ಅಡುಗೆಗೆ ಸಂಬಂಧಿಸಿದ್ದು.

    ಕಿಚ್ಚ ಸುದೀಪ್ ಅವರ ಕ್ವಾಲಿಟಿಗಳಲ್ಲಿ ಇನ್ನೊಂದು.. ಸುದೀಪ್ ಒಳ್ಳೆಯ ಅಡುಗೆ ಭಟ್ಟ. ಮನೆಗೆ ಹೋದವರಿಗೆ ಪ್ರೀತಿಯಿಂದ ಅಡುಗೆ ಮಾಡಿ ಬಡಿಸುವುದು ಎಂದರೆ ಸುದೀಪ್‍ಗೆ ವಿಶೇಷ ಸಂಭ್ರಮ. ಆ ಸಂಭ್ರಮವೇ ಈಗ ಬಿಸಿನೆಸ್ ಆಗುತ್ತಿದೆ.

    ಕಾಫಿ & ಬನ್ಸ್ ಇನ್ನೋವೇಷನ್ಸ್ ಅನ್ನೋ ಹೋಟೆಲ್, ರೆಸ್ಟೋರೆಂಟ್ ಉದ್ಯಮ ಆರಂಭಿಸುತ್ತಿದ್ದಾರೆ ಸುದೀಪ್. ಈ ಉದ್ದಿಮೆಗೆ ಎಂದಿನಂತೆ ಸಾಥ್ ಕೊಟ್ಟಿರುವುದು ಪ್ರಿಯಾ ಸುದೀಪ್.

    ಅಪ್ಪ ಹೋಟೆಲ್ ಉದ್ಯಮಿ. ಅವರಂತೆ ಸರೋವರದಂತಾ ದೊಡ್ಡ ಸಂಸ್ಥೆ ಕಟ್ಟುತ್ತೇನೆಯೋ ಇಲ್ಲವೋ ಗೊತ್ತಿಲ್ಲ. ಒಂದಂತೂ ನಿಜ. ಅದರಲ್ಲಿ ಸ್ವಲ್ಪವನ್ನಾದರೂ ಸಾಧಿಸಬಲ್ಲೆ. ಈ ಸಂಸ್ಥೆಯ ಅಡಿಯಲ್ಲಿ ಹೋಟೆಲ್, ಕೆಫೆ, ರೆಸ್ಟೋರೆಂಟ್ ಶುರು ಮಾಡಲಿದ್ದೇವೆ ಎಂದಿದ್ದಾರೆ ಸುದೀಪ್. ಸಂಸ್ಥೆಯ ಚೇರ್ಮನ್ ಪ್ರಿಯಾ ಸುದೀಪ್.

    ಇದು ಸುದೀಪ್ ಅವರದ್ದೇ ಐಡಿಯಾ. ಹೆಸರೂ ಅವರದ್ದೇ ಸೆಲೆಕ್ಷನ್. 26 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲೇ ಇದ್ದಾರೆ. ಸಿನಿಮಾ, ಕ್ರಿಕೆಟ್, ಹೋಟೆಲ್ ಅವರ ಇಷ್ಟವಾದ ಪ್ಯಾಷನ್ ಎಂದಿದ್ದಾರೆ ಪ್ರಿಯಾ.

    ಹಾಗಂತ ಸುದೀಪ್ ಸಿನಿಮಾದಿಂದ ದೂರವಾಗುತ್ತಾರೆ ಎಂದಲ್ಲ. ಕೆಫೆ ಬಿಸಿನೆಸ್ ಪ್ರಿಯಾ ಅವರದ್ದಾದರೆ, ಸಿನಿಮಾ ಸುದೀಪ್ ಅವರದ್ದೇ.  ಪ್ರಿಯಾ ಸುದೀಪ್ ಅವರಿಗೆ ವ್ಯವಹಾರ ಚೆನ್ನಾಗಿಯೇ ಗೊತ್ತಿದೆ. ಹೀಗಾಗಿ ಸುದೀಪ್ ಅವರ ಬೆನ್ನ ಹಿಂದಿನ ಶಕ್ತಿಯಾಗಿರೋ ಪ್ರಿಯಾ ಸುದೀಪ್ ತಾವು ಬಿಸಿನೆಸ್ ನೋಡಿಕೊಂಡು ಸುದೀಪ್ ಅವರನ್ನು ಸಂಪೂರ್ಣ ಚಿತ್ರರಂಗಕ್ಕೆ ಬಿಡಲಿದ್ದಾರೆ.

    ಇದೆಲ್ಲದರ ಮಧ್ಯೆ ಸುದೀಪ್ ವಿಕ್ರಾಂತ್ ರೋಣ ಚಿತ್ರದ ಪ್ರಚಾರದಲ್ಲಿ ಬ್ಯುಸಿ. ಇದರ ಅಂಗವಾಗಿ ಜುಲೈ 25ಕ್ಕೆ ಕಿಚ್ಚವರ್ಸ್ ಲಾಂಚ್ ಆಗುತ್ತಿದೆ.

  • ವಿಕ್ರಾಂತ್ ರೋಣನಿಗೆ ಹೊಸ ಗುಮ್ಮ ಹಾಡು.. : ಇದು ಫ್ಯಾನ್ಸ್ ಸೃಷ್ಟಿ..!

    ವಿಕ್ರಾಂತ್ ರೋಣನಿಗೆ ಹೊಸ ಗುಮ್ಮ ಹಾಡು.. : ಇದು ಫ್ಯಾನ್ಸ್ ಸೃಷ್ಟಿ..!

    ವಿಕ್ರಾಂತ್ ರೋಣ ಚಿತ್ರದ ಡೆವಿಲ್ ಸಾಂಗ್ ರಿಲೀಸ್ ಆಗಿದ್ದು, ಟ್ರೆಂಡ್ ಆಗಿದ್ದು ಎಲ್ಲ ಓಲ್ಡ್. ಈಗ ಅದನ್ನೂ ಮೀರಿಸುವ ಇನ್ನೊಂದು ಹಾಡು ಬಂದಿದೆ. ಈ ಹಾಡಿನ ಸೃಷ್ಟಿಕರ್ತರು ಜಾಕ್ ಮಂಜು ಅಲ್ಲ. ಅನೂಪ್ ಭಂಡಾರಿ ಅಲ್ಲ. ಅಜನೀಶ್ ಲೋಕನಾಥ್ ಅಲ್ಲ. ಕಿಚ್ಚ ಸುದೀಪ್ ಕೂಡಾ ಅಲ್ಲ. ಫ್ಯಾನ್ಸ್. ಕಿಚ್ಚನ ಫ್ಯಾನ್ಸ್. ಹೀಗಾಗಿಯೇ.. ಇಡೀ ಚಿತ್ರತಂಡ ಡಬಲ್ ಖುಷಿಯಾಗಿದೆ.

    ಎಂ.ಎಸ್.ವಿಕ್ರಂ ಅನ್ನೋ ಕಿಚ್ಚ ಸುದೀಪ್ ಅಭಿಮಾನಿ ಸ್ವತಃ ಒಂದು ಗುಮ್ಮ ಹಾಡನ್ನು ಸೃಷ್ಟಿಸಿದ್ದಾರೆ. ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಲಿಖಿತ್ ಗೌಡ ಈ ಗುಮ್ಮ ಹಾಡಿಗೆ ಸಾಹಿತ್ಯ ನೀಡಿದ್ದಾರೆ. ಒಟ್ನಲ್ಲಿ ವಿಕ್ರಾಂತ ಹಬ್ಬ.

  • ಸುದೀಪ್ ಜೊತೆ ನಟಿಸೋ ಆಸೆನಾ..? - ಇಲ್ಲಿದೆ ಚಾನ್ಸ್

    casting call for auditions

    ಕಿಚ್ಚ ಸುದೀಪ್ ಜೊತೆ ನಟಿಸಬೇಕು ಅನ್ನೋದು ಹಲವು ಕಲಾವಿದರ ಬಯಕೆ. ಆಸೆ.. ಕನಸು.. ನಿರೀಕ್ಷೆ.. ಈಗ ಅಂತಹ ಕನಸು ಹೊತ್ತವರಿಗೆ ಇಲ್ಲಿದೆ ಒಂದು ಚಾನ್ಸ್. ಬಟ್.. ಕಂಡೀಷನ್ನುಗಳಿವೆ. ಈ ಅವಕಾಶ ಎಲ್ಲರಿಗೂ ಅಲ್ಲ.

    3ರಿಂದ 7 ವರ್ಷದೊಳಗಿನ ಮಕ್ಕಳಿಗೆ ಕಿಚ್ಚನ ಜೊತೆ ನಟಿಸುವ ಅವಕಾಶ ಸಿಗಲಿದೆ. ನಿರ್ದೇಶಕ ಅನೂಪ್ ಭಂಡಾರಿ ನಿರ್ದೇಶನದ ಹೊಸ ಚಿತ್ರದಲ್ಲಿ ಚಾನ್ಸ್ ಸಿಗಲಿದೆ. ಅಡಿಷನ್ ಕಡ್ಡಾಯವಾಗಿರುತ್ತೆ. ಇಂಥಾದ್ದೊಂದು ಪ್ರಕಟಣೆಯನ್ನು ಸ್ವತಃ ಅನೂಪ್ ಭಂಡಾರಿ ಕೊಟ್ಟಿದ್ದಾರೆ.

    ಅಂದಹಾಗೆ ಇದು ಬಿಲ್ಲಾರಂಗ ಸಿನಿಮಾ ಅಲ್ಲ. ಆ ಸಿನಿಮಾ ಮುಂದಕ್ಕೆ ಹೋಗಿದೆ. ಇದು ಮತ್ತೊಂದು ಸಿನಿಮಾ. ಜಾಕ್ ಮಂಜು ನಿರ್ಮಾಣದ ಸಿನಿಮಾದ ಚಿತ್ರೀಕರಣ ಸೆಪ್ಟೆಂಬರ್‍ನಲ್ಲಿ ಶುರುವಾಗಲಿದೆ. 

    ನೀವು ಮಾಡಬೇಕಿರೋದು ಇಷ್ಟೆ.. 

    This email address is being protected from spambots. You need JavaScript enabled to view it.  ಈ ವಿಳಾಸಕ್ಕೆ ಮಗುವಿನ ಫೋಟೋ ಮತ್ತಿತರ ವಿವರಗಳನ್ನು ಅಪ್‍ಲೋಡ್ ಮಾಡಿ. ಅಷ್ಟೆ.

  • ಹೈದರಾಬಾದ್`ನತ್ತ ಹೊರಟ ಕನ್ನಡ ಚಿತ್ರರಂಗ

    phantom movie team to fly hyderabad for shooting

    ಕರ್ನಾಟಕದಲ್ಲಿ ಸಿನಿಮಾಗಳಿಗೆ ಲಾಕ್ ಡೌನ್ ಸಡಿಲಿಕೆ ಮಾಡನಬೇಕು ಎಂಬ ಬೇಡಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುತ್ತಲೇ ಇಲ್ಲ. ಚಿತ್ರಮಂದಿರ ಓಪನ್ ಮಾಡೋದು ಬಿಡಿ, ಚಿತ್ರೀಕರಣಕ್ಕೂ ಅವಕಾಶ ಕೊಟ್ಟಿಲ್ಲ. ಆದರೆ ಪಕ್ಕದ ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಪುದುಚೇರಿಗಳಲ್ಲಿ ಸಿನಿಮಾಗಳಿಗಿದ್ದ ಕೊರೊನಾ ಲಾಕ್ ಓಪನ್ ಆಗಿದೆ. ಹೀಗಾಗಿ ಕನ್ನಡ ಚಿತ್ರಗಳೂ ಹೈದರಾಬಾದ್‍ನತ್ತ ತಿರುಗಿವೆ.

    ಸುದೀಪ್ ಅಭಿನಯದ ಫ್ಯಾಂಟಮ್ ಟೀಂ ಹೈದರಾಬಾದ್`ಗೆ ತೆರಳುತ್ತಿದೆ. ಅದೂ ಎಷ್ಟು ಸೀರಿಯಸ್ ಆಗಿ ಕೊರೊನಾ ರೂಲ್ಸ್ ಫಾಲೋ ಮಾಡ್ತಿದೆ ಅಂದ್ರೆ, ಸಿನಿಮಾ ಟೀಂ ಹೈದರಾಬಾದ್`ಗೆ ತೆರಳಿ ಮೊದಲ ಒಂದು ವಾರ ಸೆಲ್ಫ್ ಕ್ವಾರಂಟೈನ್ ಆಗಲಿದೆ. 40 ಜನಕ್ಕಿಂತ ಕಡಿಮೆ ಟೀಂ, ಶೂಟಿಂಗ್ ಮುಗಿಸಿದ ನಂತರ ತಂಡದವರು ನೇರ ರೂಂಗೆ ಹೋಗಬೇಕು. ಹೊರಗೆ ತೆರಳುವ ಹಾಗಿಲ್ಲ.. ಹೀಗೆ ಹತ್ತಾರು ಕಂಡೀಷನ್ನುಗಳ ನಡುವೆ ಶೂಟಿಂಗ್ ಶುರುವಾಗುತ್ತಿದೆ. ನಟ ಸುದೀಪ್, ತಮಗೆ ತಾವೇ ಮೇಕಪ್ ಮಾಡಿಕೊಳ್ಳೋದಾಗಿ ಹೇಳಿದ್ದಾರೆ.

    ಜೂನ್ 22 ಅಥವಾ 23ರಂದು ಹೈದರಾಬಾದ್‍ಗೆ ತೆರಳುತ್ತೇವೆ. ಜುಲೈ 1ರಿಂದ ಶೂಟಿಂಗ್ ಶುರು ಮಾಡುತ್ತೇವೆ ಎಂದು ತಿಳಿಸಿದ್ದಾರೆ ನಿರ್ಮಾಪಕ ಜ್ಯಾಕ್ ಮಂಜು.