` anup bhandari, - chitraloka.com | Kannada Movie News, Reviews | Image

anup bhandari,

  • ಜಾಕ್ ಮಂಜುಗೆ `ಜಾಕ್'ಪಾಟ್ : ವಿಕ್ರಾಂತ್ ರೋಣ ಫಸ್ಟ್ ಡೇ ಕಲೆಕ್ಷನ್ ಎಷ್ಟು?

    ಜಾಕ್ ಮಂಜುಗೆ `ಜಾಕ್'ಪಾಟ್ : ವಿಕ್ರಾಂತ್ ರೋಣ ಫಸ್ಟ್ ಡೇ ಕಲೆಕ್ಷನ್ ಎಷ್ಟು?

    ಗರಗರಗರಗರ ಗಗ್ಗರ ಜರ್ಬ.. ಪಿರನಲ್ಕುರಿ ನೆತ್ತರ ಪರ್ಬ..

    ರಾ.. ರಾ.. ರಕ್ಕಮ್ಮ.. ರಾ.. ರಾ.. ರಕ್ಕಮ್ಮ.. ಯಕ್ಕಸಕ್ಕ ಯಕ್ಕಸಕ್ಕ..

    ಗುಮ್ಮ ಬಂದ ಗುಮ್ಮ..

    ಹೀಗೆ ಹಲವು ಸೆನ್ಸೇಷನ್ ಹುಟ್ಟುಹಾಕಿದ್ದ ವಿಕ್ರಾಂತ್ ರೋಣ ಸುದೀಪ್ ಅವರ ಇದುವರೆಗಿನ ಎಲ್ಲ ಚಿತ್ರಗಳ ದಾಖಲೆಯನ್ನೂ ಮೀರಿ ಅದ್ಧೂರಿ ಬಿಡುಗಡೆ ಕಂಡಿತ್ತು. ಮೊದಲ ದಿನ ನಡೆದದ್ದು ಒಂಭತ್ತೂವರೆ ಸಾವಿರಕ್ಕೂ ಹೆಚ್ಚು ಶೋಗಳು. ರಾಜ್ಯದಲ್ಲಿಯೇ ಎರಡೂವರೆ ಸಾವಿರ ಶೋಗಳು. ಅದ್ಧೂರಿ.. ಅಬ್ಬರ..

    ಊರ್ವಶಿ ಚಿತ್ರಮಂದಿರಕ್ಕೆ ಖುದ್ದು ಪತ್ನಿ ಪ್ರಿಯಾ ಸುದೀಪ್ ಮತ್ತು ಕಿಚ್ಚನ ರಾಜಕುಮಾರಿ ಮಗಳು ಸಾನ್ವಿ ಸುದೀಪ್ ಬಂದಿದ್ದರು. ಪ್ರಿಯಾ ಅವರೊಂದಿಗೆ ನಿರೂಪ್ ಭಂಡಾರಿ ಕೂಡಾ ಚಿತ್ರಮಂದಿರದಲ್ಲೇ ಕೂತು ಸಿನಿಮಾ ನೋಡಿದರು. ಸುದೀಪ್ ಅವರ ಆರೋಗ್ಯ ಕೈಕೊಟ್ಟಿರುವ ಕಾರಣ ಸಾನ್ವಿ ಮಧ್ಯಾಹ್ನದ ಶೋಗೆ ಬಂದರು.

    ಊರ್ವಶಿ ಚಿತ್ರಮಂದಿರವೊಂದರ ಕಲೆಕ್ಷನ್ನೇ 25 ಲಕ್ಷಕ್ಕೂ ಹೆಚ್ಚು ಎನ್ನಲಾಗುತ್ತಿದೆ. ಎಲ್ಲ ಶೋಗಳೂ ಹೌಸ್‍ಫುಲ್. ಇನ್ನೊಂದು ಪ್ರಮುಖ ಚಿತ್ರಮಂದಿರ ವೀರೇಶ್‍ನಲ್ಲಿ ಎರಡು ಸ್ಕ್ರೀನ್ ಇವೆ. 2ಡಿ ಮತ್ತು 3ಡಿ ಎರಡರಲ್ಲೂ ನೋಡಬಹುದು. ಎರಡೂ ಸೇರಿ ಮೊದಲ ದಿನ ನಡೆದದ್ದು ಒಟ್ಟು 12 ಶೋಗಳು. ಎಲ್ಲ ಶೋಗಳೂ ಹೌಸ್‍ಫುಲ್. ರಾಜ್ಯದ ವಿವಿಧೆಡೆ ಕೂಡಾ ಅದ್ಭುತ ಪ್ರದರ್ಶನ ಕಂಡಿವೆ. ಎಲ್ಲೆಡೆ ಹೌಸ್‍ಫುಲ್ ಶೋಗಳು. ಇನ್ನು 2ನೇ ದಿನದ ಶೋಗಳೂ ಆಗಲೇ ಹೌಸ್‍ಫುಲ್ ಆಗುತ್ತಿವೆ. ವಿಮರ್ಶಕರಷ್ಟೇ ಅಲ್ಲ, ಚಿತ್ರ ನೋಡಿ ಬಂದವರೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಚಿತ್ರವನ್ನು ಹೊಗಳುತ್ತಿದ್ದಾರೆ. ತೆಲಂಗಾಣ, ಆಂಧ್ರದಲ್ಲೂ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.

    ಮೊದಲ ದಿನವೇ 55ರಿಂದ 60 ಕೋಟಿ ಕಲೆಕ್ಷನ್ ಆಗಿದೆ ಎನ್ನುವುದು ಪ್ರಾಥಮಿಕ ಮಾಹಿತಿ. ಕರ್ನಾಟಕದಲ್ಲಿ 15ರಿಂದ 20 ಕೋಟಿ ಕಲೆಕ್ಷನ್ ಎನ್ನಲಾಗಿದೆ.

    ಇದೆಲ್ಲದರಿಂದ ಖುಷಿಯಾಗಿರೋದು ಜಾಕ್ ಮಂಜು. 

  • ಡೈರೆಕ್ಟರ್‍ಗೂ ನಟಿಸೋ ಆಸೆ. ಆದರೆ.. ಆಕೆಯದ್ದೇ ಭಯ..!

    anup bhandari fears to act because of her

    ರಂಗಿತರಂಗ ಚಿತ್ರ ನೋಡಿದ್ದರೆ, ಆ ಚಿತ್ರದಲ್ಲಿ ಒಂದು ಪುಟ್ಟ ಪಾತ್ರದಲ್ಲಿ ನಿರ್ದೇಶಕ ಅನೂಪ್ ಭಂಡಾರಿ ಕಾಣಿಸಿಕೊಂಡಿದ್ದರು. ರಾಜರಥ ಚಿತ್ರದಲ್ಲೂ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ ಅನೂಪ್. ಆದರೆ, ನೀವು ಗುರುತಿಸೋಕೆ ಸಾಧ್ಯವಿಲ್ಲ. ಅಕಸ್ಮಾತ್ ಗುರುತಿಸಿದರೆ, ನಿಮಗೆ ಒಂದು ಅವಾರ್ಡ್ ಕೊಡ್ತೇನೆ ಎಂದು ಚಾಲೆಂಜ್ ಹಾಕ್ತಾರೆ ಅನೂಪ್.

    ಅನೂಪ್ ನಿರ್ದೇಶಕರೇ ಇರಬಹುದು, ನೋಡೋಕೆ ಸ್ಮಾರ್ಟ್ ಆಗಿಯೇ ಇದ್ದಾರೆ. ಹೀಗಿರುವಾಗ ಹೀರೋ ಆಗುವ ಚಾನ್ಸ್ ಬರಲಿಲ್ವಾ ಎಂದರೆ, ಬಂತು ಅಂತಾರೆ ಅನೂಪ್. ಯಾಕೆ ಒಪ್ಪಿಕೊಳ್ಳಲಿಲ್ಲ ಅಂದಾಗ ಗೊತ್ತಾಗಿದ್ದೇ ಅವರಿಗೆ ಆಕೆಯ ಭಯ ಇದೆ ಅನ್ನೋದು. 

    ಆಕೆ ಎಂದರೆ ಬೇರಾರೋ ಅಲ್ಲ. ಅವರ ಪತ್ನಿ. ಸಿನಿಮಾದಲ್ಲಿ ನಟಿಸೋದು ಎಂದರೆ ಒಂದಿಷ್ಟು ರೊಮ್ಯಾನ್ಸ್ ದೃಶ್ಯಗಳು ಇದ್ದೇ ಇರುತ್ತವೆ. ನಾಯಕಿಯ ಜೊತೆ ಹತ್ತಿರದಲ್ಲಿರುವ ದೃಶ್ಯಗಳಲ್ಲಿ ನಟಿಸಲೇಬೇಕಾಗುತ್ತೆ. ಹಾಗೇನಾದರೂ ನಾನು ನಟಿಸಿದರ ನನ್ನ ಪತ್ನಿ ನನ್ನನ್ನು ಮನೆಯಿಂದ ಹೊರಗೆ ಹಾಕ್ತಾಳೆ ಎಂದು ನಗ್ತಾರೆ ಅನೂಪ್. 

    ಆದರೆ, ನಿರ್ದೇಶನದಲ್ಲಿ ಬ್ಯುಸಿ ಇರುವುದು ಹಾಗೂ ನಟನೆಯಲ್ಲಿ ಅಷ್ಟು ಆಸಕ್ತಿ ಇಲ್ಲದೇ ಇರುವುದು ನಿಜವಾದ ಕಾರಣ.

     

  • ತಮಿಳು ಸ್ಟಾರ್ ಆರ್ಯ, ಕನ್ನಡದ ಮೊದಲ ಅನುಭವ

    rajaratha movie image

    ಆರ್ಯ. ತಮಿಳು ಚಿತ್ರರಂಗದ ಸ್ಟಾರ್ ನಟ. ಇವರು ಕನ್ನಡದಲ್ಲಿ ನಟಿಸಿರುವ ಮೊದಲ ಸಿನಿಮಾ ರಾಜರಥ. ಇದೇ ಶುಕ್ರವಾರ ತೆರೆಗೆ ಬರುತ್ತಿರುವ ರಾಜರಥ ಚಿತ್ರದಲ್ಲಿ ಆರ್ಯ ಅತ್ಯಂತ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ತಮ್ಮ ಮೊದಲ ಕನ್ನಡ ಚಿತ್ರದ ಅನುಭವವನ್ನೂ ಖುಷಿಯಿಂದ ಹೇಳಿಕೊಂಡಿದ್ದಾರೆ ಆರ್ಯ.

    ರಂಗಿತರಂಗ ನೋಡಿದಾಗ ಇಷ್ಟವಾಯ್ತು. ನಂತರ ಅನೂಪ್ ಅವರ ತಂದೆಯ ಸ್ನೇಹಿತರೊಬ್ಬರ ಮೂಲಕ ಚಿತ್ರದ ಬಗ್ಗೆ ನನ್ನ ಮೆಚ್ಚುಗೆ ತಿಳಿಸಿದೆ. ಅದಾದ ಮೇಲೆ ಅನೂಪ್ ನನಗೆ ಫೋನ್ ಮಾಡಿ, ನನ್ನ ಚಿತ್ರದಲ್ಲಿ ನೀವು ನಟಿಸಬೇಕು ಎಂದಾಗ ನಿಜಕ್ಕೂ ಥ್ರಿಲ್ ಆಗಿಬಿಟ್ಟೆ. ಓಕೆ, ಬ್ರದರ್. ಡನ್ ಎಂದಷ್ಟೇ ಹೇಳಿದ್ದೆ ಎಂದು ನೆನಪಿಸಿಕೊಳ್ತಾರೆ ಆರ್ಯ.

    ಚಿತ್ರದಲ್ಲಿ ನಟಿಸುವಾಗ ನಾನು ಒಬ್ಬ ಹೊಸಬ ಎಂದೇ ಫೀಲ್ ಆಯ್ತು. ಕನ್ನಡದಲ್ಲಿಯೂ ನಟಿಸಬೇಕು ಎನ್ನುವ ಕನಸು, ಈ ಚಿತ್ರದ ಮೂಲಕ ಈಡೇರಿದೆ. ಅನೂಪ್ ಅವರಲ್ಲಿ ಒಂದಿಷ್ಟು ಹೊಸತನವಿದೆ. ವಿಭಿನ್ನತೆಯಿದೆ. ಚಿತ್ರದಲ್ಲಿ ನನ್ನ ಪಾತ್ರವನ್ನು ತುಂಬಾ ಚೆನ್ನಾಗಿ ತೋರಿಸಲಾಗಿದೆ ಎಂದಿದ್ದಾರೆ ಆರ್ಯ.

    ಏನು ನಿಮ್ಮ ಪಾತ್ರ ಎಂದರೆ, ನಿರ್ದೇಶಕರು ಇದರ ಬಗ್ಗೆ ಬಾಯಿಬಿಡಬೇಡಿ ಎಂದಿದ್ದಾರೆ. ಹಾಗಾಗಿ ನಾನು ಬಾಯಿ ಹೊಲಿದುಕೊಂಡಿದ್ದೇನೆ ಅಂತಾರೆ ಆರ್ಯ.

    ತಮಿಳು ಹಾಗೂ ಕನ್ನಡದ ಮಧ್ಯೆ ಬಹಳಷ್ಟು ಹೋಲಿಕೆಗಳಿವೆ. ಇದು ಕನ್ನಡ ಗೊತ್ತಿಲ್ಲದೇ ಇದ್ದರೂ, ನನಗೆ ಡೈಲಾಗ್ ಹೇಳೋಕೆ ಸಹಾಯ ಮಾಡ್ತು ಎಂದು ಡೈಲಾಗ್ ಡೆಲಿವರಿ ಕಷ್ಟ ಹೇಳಿಕೊಂಡಿದ್ದಾರೆ ಆರ್ಯ. ಆರ್ಯ ಅವರಷ್ಟೇ ಅಲ್ಲ, ಇಡೀ ಚಿತ್ರತಂಡ ಎದುರು ನೋಡುತ್ತಿರುವುದು ಅಭಿಮಾನಿಗಳನ್ನ. ಶುಕ್ರವಾರ ರಿಲೀಸ್ ಆಗುವ ಸಿನಿಮಾ, ಜನರಿಗೆ ಇಷ್ಟವಾಗಿಬಿಟ್ಟರೆ, ರಾಜರಥದವರ ಖುಷಿಗೆ ನೋ ಲಿಮಿಟ್ಸ್.

  • ನಾನು ಆರ್ಯವರ್ಧನ್ ಆಗುತ್ತಿಲ್ಲ : ಅನೂಪ್ ಭಂಡಾರಿ

    ನಾನು ಆರ್ಯವರ್ಧನ್ ಆಗುತ್ತಿಲ್ಲ : ಅನೂಪ್ ಭಂಡಾರಿ

    ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಜತ್ಕರ್ ಅವರನ್ನು ತೆಗೆದ ನಂತರ ಆ ಪಾತ್ರಕ್ಕೆ ಯಾರು ಎಂಬ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಿರೋದು ನಿಜ. ಆ ಪಾತ್ರಕ್ಕೆ ಹಲವು ಹೆಸರುಗಳು ಕೇಳಿಬಂದವಾದರೂ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದು ರಂಗಿತರಂಗ, ವಿಕ್ರಾಂತ್ ರೋಣ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಅವರ ಹೆಸರು.

    ಜೊತೆ ಜೊತೆಯಲಿ ಚಿತ್ರೀಕರಣ ನಿಂತಿಲ್ಲ. ಆರ್ಯವರ್ಧನ್ ಪಾತ್ರವನ್ನು ಹೊರಗಿಟ್ಟುಕೊಂಡೇ ಕೆಲವು ಎಪಿಸೋಡ್ ಶೂಟ್ ಆಗುತ್ತಿವೆ. ಚಿತ್ರೀಕರಣವಂತೂಊ ಎಡಬಿಡದೆ ಸಾಗಿದೆ. ಈ ನಡುವೆಯೇ ಅನೂಪ್ ಭಂಡಾರಿ ತಮಗೆ ಆರ್ಯವರ್ಧನ್ ಪಾತ್ರಕ್ಕೆ ಆಫರ್ ಬಂದಿದ್ದು ನಿಜ ಎಂದಿದ್ದಾರೆ.

    ಆಫರ್ ಬಂದಿದ್ದು ನಿಜ. ನಾನು ನೋ ಎಂದಿದ್ದೂ ನಿಜ. ಸದ್ಯಕ್ಕೆ ನಾನು ಇನ್ನೊಂದು ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದೇನೆ. ಶೀಘ್ರದಲ್ಲೇ ಆ ಹೊಸ ಪ್ರಾಜೆಕ್ಟ್ ಅನೌನ್ಸ್ ಆಗಲಿದೆ ಎಂದಿದ್ದಾರೆ ಅನೂಪ್.

    ಅತ್ತ ಅನಿರುದ್ಧ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರು ನನ್ನನ್ನು ಬಿಟ್ಟಿರಬಹುದು, ನಾನು ಬಿಟ್ಟಿಲ್ಲ. ಅವರು ಕರೆದರೆ ಮತ್ತೆ ಹೋಗಲು ಸಿದ್ಧ ಎಂದಿದ್ದಾರೆ ಅನಿರುದ್ಧ್.

    ಇದರ ನಡುವೆ ಆರ್ಯವರ್ಧನ್ ಪಾತ್ರಕ್ಕೆ ವಿಜಯ್ ರಾಘವೇಂದ್ರ, ಜೆಕೆ ಸೇರಿದಂತೆ ಹಲವರ ಹೆಸರು ಚರ್ಚೆಯಾಗುತ್ತಿರುವುದಂತೂ ಸತ್ಯ. ಆದರೆ ಧಾರಾವಾಹಿ ತಂಡದವರು ಯಾವುದೇ ಹೆಸರನ್ನು ಎಸ್ ಎಂದೂ ಹೇಳ್ತಿಲ್ಲ. ನೋ ಎಂದೂ ಹೇಳ್ತಿಲ್ಲ.

  • ನಾನು ಮೇಘಾ, ಆವಂತಿಕಾ ಅಲ್ಲ - ಆವಂತಿಕಾ ಶೆಟ್ಟಿ

    avantika still in rajaratha character mood

    ನನಗೆ ಕನ್ನಡ ಬರುತ್ತದೆಯಾದರೂ, ಸ್ಪಷ್ಟವಾಗಿ, ಸರಾಗವಾಗಿ ಮಾತನಾಡುವುದು ಕಷ್ಟ. ನಟ ನಿರೂಪ್ ಭಂಡಾರಿ, ಚಿತ್ರದುದ್ದಕ್ಕೂ ನನ್ನನ್ನು ರೇಗಿಸುತ್ತಲೇ ಇದ್ದರು. ಆದರೆ, ಇದೇ ರಾಜರಥ ತೆಲುಗಿನಲ್ಲೂ ಪ್ರತ್ಯೇಕವಾಗಿ ಶೂಟ್ ಆಗಿದೆ. ಆಗ ನಿರೂಪ್ ಭಂಡಾರಿಗೆ ನಾನು ಅನುಭವಿಸಿದ ಕಷ್ಟ ಅರ್ಥವಾಯಿತು. ಏಕೆಂದರೆ, ತೆಲುಗು ಅವರಿಗೆ ಬರುತ್ತಿರಲಿಲ್ಲ. ಇಂಥಾದ್ದೊಂದು ಅನುಭವ ಹೇಳಿಕೊಳ್ಳುವ ಆವಂತಿಕಾ ಶೆಟ್ಟಿ, ಈಗಲೂ ರಾಜರಥದ ಮೇಘಾ ಪಾತ್ರದ ಗುಂಗಿನಿಂದ ಹೊರಬಂದಿಲ್ಲ.

    ನಾನು ಪಾತ್ರದೊಳಗೆ ಯಾವ ಮಟ್ಟಕ್ಕೆ ಇನ್‍ವಾಲ್ವ್ ಆಗಿದ್ದೆ ಎಂದರೆ, ನನಗೆ ಈಗಲೂ ಮೇಘಾ ಪಾತ್ರದ ಗುಂಗಿನಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಮೇಘನಾ.. ಅಲ್ಲಲ್ಲ.. ಆವಂತಿಕಾ ಶೆಟ್ಟಿ.

    ರಂಗಿತರಂಗದಲ್ಲೂ ಹೀಗೆಯೇ ಆಗಿತ್ತು. ಸಂಧ್ಯಾ ಪಾತ್ರದ ಗುಂಗು ಹಲವಾರು ತಿಂಗಳು ಉಳಿದುಕೊಂಡಿತ್ತು. ಈಗ ರಾಜರಥದಲ್ಲೂ ಹಾಗೆಯೇ ಆಗುತ್ತಿದೆ. ಆದರೆ, ರಂಗಿತರಂಗಕ್ಕಿಂತ ರಾಜರಥ ಸವಾಲು. ಆ ಚಿತ್ರದಲ್ಲಿ ಎಲ್ಲರೂ ಹೊಸಬರೇ. ಆದರೆ, ಈಗ ಎಲ್ಲರ ಮೇಲೂ ನಿರೀಕ್ಷೆ ಇದೆ. ಆ ನಿರೀಕ್ಷೆಗಳನ್ನು ಮುಟ್ಟಿದ್ದೇವೆ ಎಂಬ ನಂಬಿಕೆಯೂ ಇದೆ ಅಂತಾರೆ ಆವಂತಿಕಾ ಶೆಟ್ಟಿ.

    ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ, ಚಿತ್ರವನ್ನು ಜೀವಿಸಿದ್ದಾರೆ. ನಾಯಕ ನಟ ನಿರೂಪ್ ಭಂಡಾರಿ ಪಾತ್ರವೇ ತಾವಾಗಿ ಹೋಗಿದ್ದಾರೆ. ನನಗೂ ಇದೊಂದು ಕಂಫರ್ಟಬಲ್ ತಂಡ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ ಆವಂತಿಕಾ. ಆವಂತಿಕಾರ ಸಕಲ ನಿರೀಕ್ಷೆಗಳಿಗೂ ಉತ್ತರ ಸಿಗುವುದು ಬರುವ ಶುಕ್ರವಾರ.

  • ಪ್ಯಾಂಟಮ್ ಅವತಾರ ಎತ್ತಲಿದ್ದಾನೆ ಪೈಲ್ವಾನ್

    is ohanthom sudeep's next film

    ಕಿಚ್ಚ ಸುದೀಪ್, ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ಒಟ್ಟಿಗೇ ಸಿನಿಮಾ ಮಾಡಲಿದ್ದಾರೆ. ಅವರಿಬ್ಬರೂ ಈಗಾಗಲೇ ಘೋಷಿಸಿರುವ ಬಿಲ್ಲ ರಂಗ ಭಾಷಾ ಚಿತ್ರಕ್ಕೂ ಮೊದಲು ಇನ್ನೊಂದು ಚಿತ್ರ ಸೆಟ್ಟೇರಲಿದೆ ಎಂಬ ವಿಷಯ ಗೊತ್ತಿದೆಯಷ್ಟೇ. ಈಗ ಆ ಚಿತ್ರದ ಹೆಸರು ಪ್ಯಾಂಟಮ್ ಎಂಬ ಸುದ್ದಿ ಹೊರಬಿದ್ದಿದೆ.

    ಹೌದೇ ಎಂದರೆ ಅನೂಪ್ ಭಂಡಾರಿ ಯೆಸ್ ಅನ್ನಲ್ಲ.. ನೋ ಎಂದೂ ಹೇಳಲ್ಲ. ಎಲ್ಲವನ್ನೂ ಸುದೀಪ್ ಅವರೇ ಹೇಳಲಿದ್ದಾರೆ. ಯಾವ ರೀತಿಯ ಸಿನಿಮಾ, ಕಥೆ, ನಾಯಕಿಯ ಬಗ್ಗೆ ಅವರೇ ಅಧಿಕೃತವಾಗಿ ಹೇಳ್ತಾರೆ. ವೇಯ್ಟ್ ಎನ್ನುತ್ತಾರೆ.

    ಪೈಲ್ವಾನ್ ಗೆದ್ದ ಸಂಭ್ರಮದಲ್ಲಿರೋ ಸುದೀಪ್ ಅವರಿಗೆ ಈ ವಾರ ಸೈರಾ ಸಂಭ್ರಮ. ಅತ್ತ ದಬಾಂಗ್ 3, ಇತ್ತ ಕೋಟಿಗೊಬ್ಬ 3 ಚಿತ್ರೀಕರಣ. ಇವೆಲ್ಲ ಮುಗಿಯೋದು ಡಿಸೆಂಬರ್ ಹೊತ್ತಿಗೆ. ಅಷ್ಟು ಹೊತ್ತಿಗೆ ಎಲ್ಲವೂ ಫೈನಲ್ ಆಗಲಿದೆ.

  • ಫೆಬ್ರವರಿ 24ಕ್ಕೆ ಜಗತ್ತಿಗೆ ಪರಿಚಯವಾಗುತ್ತಾನೆ ಹೊಸ ಹೀರೋ

    ಫೆಬ್ರವರಿ 24ಕ್ಕೆ ಜಗತ್ತಿಗೆ ಪರಿಚಯವಾಗುತ್ತಾನೆ ಹೊಸ ಹೀರೋ

    ವಿಕ್ರಾಂತ್ ರೋಣ. ಫೆಬ್ರವರಿ 24ಕ್ಕೆ ರಿಲೀಸ್. ಆದರೆ ಈ ಚಿತ್ರದಲ್ಲಿರೋ ವಿಶೇಷತೆಗಳು ಒಂದೆರಡಲ್ಲ. ಕಿಚ್ಚ ಸುದೀಪ್ ಫ್ಯಾನ್ಸ್ ಥ್ರಿಲ್ ಆಗೋ ಚಿತ್ರದಲ್ಲಿರೋದು ಸ್ಪೆಷಲ್‍ಗಳ ಮೇಲೆ ಸ್ಪೆಷಲ್.

    ವಿಕ್ರಾಂತ್ ರೋಣ, ಒಂದಲ್ಲ..ಎರಡಲ್ಲ.. ಒಟ್ಟು 14 ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಅದೂ 3ಡಿ ರೂಪದಲ್ಲಿ. 3ಡಿ ಸ್ಪೆಷಲ್ ಕನ್ನಡಕ ಹಾಕ್ಕೊಂಡೇ ಸಿನಿಮಾ ನೋಡ್ಬೇಕು. ಆಗಲೇ ಸಿಗೋದು ಮಜಾ. ಒಟ್ಟು 55 ದೇಶಗಳಲ್ಲಿ ರಿಲೀಸ್ ಆಗುತ್ತಿದೆ ವಿಕ್ರಾಂತ್ ರೋಣ.

    ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರಕ್ಕೆ  ಜಾಕ್ ಮಂಜು, ಶಾಲಿನಿ ಮಂಜುನಾಥ್ ಮತ್ತು ಅಲಂಕಾರ್ ಪಾಂಡ್ಯನ್ ನಿರ್ಮಾಪಕರು. ಸುದೀಪ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರಂತೆ. ನಿರೂಪ್ ಭಂಡಾರಿ, ನೀತೂ ಅಶೋಕ್ ಮತ್ತು ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.

  • ಫ್ಯಾಂಟಮ್ ಜೊತೆ ಫಕೀರನೂ ಬಂದ..!

    meet fakira from the world of phantom

    ಫ್ಯಾಂಟಮ್ ಚಿತ್ರದ ವಿಕ್ರಾಂತ್ ರೋಣನ ಲುಕ್ ನೋಡಿ ಥ್ರಿಲ್ ಆಗಿದ್ದವರಿಗೆ ಈಗ ಫಕೀರನ ಲುಕ್ಕೂ ಸಿಕ್ಕಿದೆ. ಸರ್‍ಪ್ರೈಸ್ ಕೊಡುತ್ತೇನೆ ಎಂದಿದ್ದ ನಿರ್ದೇಶಕ ಅನೂಪ್ ಭಂಡಾರಿ, ಚಿತ್ರದ ಇನ್ನೊಬ್ಬ ಹೀರೋ ನಿರೂಪ್ ಭಂಡಾರಿಯ ಪಾತ್ರ ಬಹಿರಂಗ ಪಡಿಸಿದ್ದಾರೆ.

    ಚಿತ್ರದಲ್ಲಿ ನಿರೂಪ್ ಭಂಡಾರಿ ಪಾತ್ರದ ಹೆಸರು ಸಂಜೀವ್ ಗಂಭೀರ್. ಲಂಡನ್ನಿನಿಂದ ಭಾರತಕ್ಕೆ ವಾಪಸ್ ಆದ ಹುಡುಗ. ನಗುತ್ತಾ.. ನಗಿಸುತ್ತಾ.. ತರಲೆ ಮಾಡುತ್ತಾ ಇರುವ ಯುವಕ. ಹೆಸರು ಮಾತ್ರ ಸಂಜೀವ್ ಗಂಭೀರ್. ಅವರ ಪಾತ್ರಕ್ಕೆ ಇನ್ನೊಂದು ಹೆಸರೇ ಫಕೀರ.

    ನಟ ನಿರೂಪ್ ಅವರನ್ನು ಈ ಪೋಸ್ಟರ್ ಮೂಲಕ ಸ್ವಾಗತ ಕೋರಿದ್ದಾರೆ ಚಿತ್ರದ ಹೀರೋ ಕಿಚ್ಚ ಸುದೀಪ್, ನಿರ್ಮಾಪಕ ಜ್ಯಾಕ್ ಮಂಜು. ಫ್ಯಾಂಟಮ್ ಇನ್ನೂ ಶೂಟಿಂಗ್‍ನಲ್ಲಿದೆ.ಕೂಡಾ ಇದ್ದರು.

  • ಮೈ ರಾಜರಥ ಸೆಲ್ಫಿ ಚಾಲೆಂಜ್..!

    selfie challenge by rajaratha team

    ರಾಜರಥದ ರಾಜವಾಹನ ಬಸ್ಸು. ಅಂದಹಾಗೆ ನಿಮ್ಮ ರಾಜರಥ ಯಾವುದು..? ಸೈಕಲ್, ಬೈಕ್, ಕಾರ್.. ಹೀಗೆ ಯಾವುದೇ ಇರಲಿ.. ಅದು ನಿಮ್ಮ ರಾಜರಥ ತಾನೇ.. 

    ಈಗ ನೀವು ನಿಮ್ಮ ರಾಜರಥದ ಜೊತೆ ಒಂದು ಸೆಲ್ಫಿ ತೆಗೆದುಕೊಳ್ಳಿ. ರಾಜರಥದ ಅಧಿಕೃತ ಟ್ವಿಟರ್ ಅಥವಾ ಫೇಸ್‍ಬುಕ್ ಖಾತೆಗೆ ಟ್ಯಾಗ್ ಮಾಡಿ. ಗೆದ್ದ 10 ಮಂದಿಗೆ ಬಹುಮಾನವೂ ಇದೆ. ಮೈ ರಾಜರಥ ಅನ್ನೋ ಹ್ಯಾಷ್‍ಟ್ಯಾಗ್ ಇದ್ದರೆ ಅಯ್ತು.

    ಈ ಸೆಲ್ಫಿ ಚಾಲೆಂಜ್ ಶುರು ಮಾಡಿರುವುದು ಸ್ವತಃ ಪುನೀತ್ ರಾಜ್‍ಕುಮಾರ್. ರಾಜರಥದಲ್ಲಿನ ರಾಜರಥವೇ ಪುನೀತ್. ಅವರು ತಮ್ಮ ಸೈಕಲ್ ಜೊತೆ ಸೆಲ್ಫಿ ತೆಗೆದುಕೊಂಡು ಅಪ್‍ಲೋಡ್ ಮಾಡಿದ್ದಾರೆ. ಇನ್ನು ಅಭಿಮಾನಿಗಳ ಸರದಿ. 

    ಈ ಮೈ ರಾಜರಥ ಸ್ಪರ್ಧೆಯಲ್ಲಿ ಚಿತ್ರರಂಗದ ಬೇರೆ ಬೇರೆ ಸ್ಟಾರ್‍ಗಳೂ ಪಾಲ್ಗೊಳ್ಳುತ್ತಿದ್ದಾರೆ. 

  • ಯಾರಿವನು.. ವಿಕ್ರಾಂತ್ ರೋಣ..?

    sudeep'a look from phantom

    ವಿಕ್ರಾಂತ್ ರೋಣ. ಇವನು ಆರಡಿ ಕಟೌಟು. ಗಡ್ಡವಿದ್ದರೆ ಚೆಂದ ಚೆಂದ. ನಗುವಿದ್ದರೆ ಇನ್ನೂ ಚೆಂದ. ಚಿತ್ರರಂಗಕ್ಕೆ ಬಂದ ಕೆಲವೇ ದಿನಗಳಲ್ಲಿ ಕನ್ನಡಗರಿಂದ ಕಿಚ್ಚ ಎಂದೇ ಕರೆಸಿಕೊಂಡ ಸುದೀಪ್, ಈಗ ವಿಕ್ರಾಂತ್ ರೋಣ ಆಗುತ್ತಿದ್ದಾರೆ.

    ಯೆಸ್, ಇದು ಫ್ಯಾಂಟಮ್ ಚಿತ್ರದಲ್ಲಿ ಸುದೀಪ್ ನಟಿಸುತ್ತಿರುವ ಪಾತ್ರದ ಹೆಸರು. ಅನೂಪ್ ಭಂಡಾರಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಶಾಲಿನಿ ಮಂಜುನಾಥ್ ಮತ್ತು ಜಾಕ್ ಮಂಜು ನಿರ್ಮಾಪಕರು.

    ಚಿತ್ರದ ಕಥೆಯ ಬಹುಭಾಗದ ಚಿತ್ರೀಕರಣ ಸೆಟ್‍ಗಳಲ್ಲಿ ನಡೆಯಲಿದೆ. ಶೇ.20ರಷ್ಟು ಮಾತ್ರವೇ ಹೊರಾಂಗಣ ಚಿತ್ರೀಕರಣ. ಚಿತ್ರದಲ್ಲಿ ಸುದೀಪ್ ಇರೋದ್ರಿಂದ ಹಲವು ಭಾಷೆಗಳಲ್ಲಿ ಸಿನಿಮಾ ಬರೋದು ಪಕ್ಕಾ ಎಂದಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ.

  • ರಾಜರಥ ಟೀಂನಿಂದ ಪವರ್‍ಸ್ಟಾರ್ ಮಿಕ್ಸ್ ಉಡುಗೊರೆ

    powerstar mix to app by rajaratha tema

    ರಾಜರಥ ಚಿತ್ರದ ಟೈಟಲ್ ರೋಲ್ ಯಾರು..? ಹೀರೋ ನಿರೂಪ್ ಭಂಡಾರಿ ಅಲ್ಲ. ಅದು ಒಂದು ಬಸ್ಸು. ಆ ಬಸ್ಸಿನ ಹೆಸರೇ ರಾಜರಥ. ಆ ರಾಜರಥದ ಧ್ವನಿ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಅಂದರೆ ರಿಯಲ್ ರಾಜರಥ ಪುನೀತ್ ಅವರೇ. ತಮ್ಮ ಚಿತ್ರಕ್ಕೆ ಧ್ವನಿ ನೀಡಿ ಸಹಕರಿಸಿದ ಪುನೀತ್‍ಗೆ ರಾಜರಥ ಚಿತ್ರತಂಡ ಪವರ್‍ಸ್ಟಾರ್ ಮಿಕ್ಸ್ ಉಡುಗೊರೆ ನೀಡಿದೆ.

    ಪುನೀತ್ ರಾಜ್‍ಕುಮಾರ್, ಬಾಲ್ಯದಲ್ಲೇ ನಟನಾಗಿ ಮಿಂಚಿದವರು. ರಾಷ್ಟ್ರ ಪ್ರಶಸ್ತಿ ಪುರಸ್ಕಾರ ಪಡೆದವರು. ಹೀರೋ ಆದ ಮೇಲೆ ಸೂಪರ್ ಸ್ಟಾರ್ ಆದವರು. ಆದರೆ, ತಾನೊಬ್ಬ ಸ್ಟಾರ್ ಎಂಬ ಯಾವ ಹಮ್ಮು ಬಿಮ್ಮೂ ಇಲ್ಲದೆ ಬೆರೆಯುವ ಪುನೀತ್‍ಗೆ ಚಿತ್ರತಂಡ ಕೊಟ್ಟ ಉಡುಗೊರೆಯೇ ಪವರ್‍ಸ್ಟಾರ್ ಮಿಕ್ಸ್. ಅದು ಹುಟ್ಟುಹಬ್ಬದ ಕೊಡುಗೆ.

    ಪುನೀತ್ ಅಭಿನಯದ ಎಲ್ಲ ಚಿತ್ರಗಳ ಹೆಸರು ಮತ್ತು ಆ ಚಿತ್ರದಲ್ಲಿನ ಪುನೀತ್ ಲುಕ್ ಇರುವ ಫೋಟೋ ಬಳಸಿ ಸೃಷ್ಟಿಸಲಾಗಿರುವ ಪುಟ್ಟ ವಿಡಿಯೋದಲ್ಲಿ ರಾಜರಥ ಚಿತ್ರದ ಬಸ್ ಡೈಲಾಗುಗಳಿವೆ. 

    ರಾಜರ ವಂಶ ನಮ್ದು.. ನನ್ ಹೆಸರೇ ರಾಜರಥ ಅನ್ನೋ ಡೈಲಾಗ್‍ನೊಂದಿಗೆ ಎಂಡ್ ಆಗುವ ಈ ಪುಟ್ಟ ವಿಡಿಯೋ ಆನ್‍ಲೈನ್‍ನಲ್ಲಿ ಮ್ಯಾಜಿಕ್ ಸೃಷ್ಟಿಸಿದೆ. ಮೂರೇ ದಿನದಲ್ಲಿ ಲಕ್ಷಾಂತರ ಹಿಟ್ಸ್ ಗಿಟ್ಟಿಸಿರುವ ಪವರ್‍ಸ್ಟಾರ್ ಮಿಕ್ಸ್, ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದೆ. 

    ರಾಜರಥದಲ್ಲಿ ನಟನಾಗಿ ಅಲ್ಲದೆ, ಧ್ವನಿಯಾಗಿ ನಟಿಸಿರುವ ಪುನೀತ್, ರಾಜರಥದ ಹೀರೋಗಳಲ್ಲಿ ಒಬ್ಬರು ಎಂದರೆ ತಪ್ಪಾಗಲಿಕ್ಕಿಲ್ಲ. ರಾಜರಥ ಚಿತ್ರವನ್ನು ನೋಡೋಕೆ, ಅವರ ಅಭಿಮಾನಿಗಳೂ ಈಗ ತುದಿಗಾಲಲ್ಲಿ ಕಾಯುವಂತಾಗಿದೆ.

  • ರಾಜರಥದ ಮೇಲೆ ಭಾರೀ ನಿರೀಕ್ಷೆ ಏಕೆ ಗೊತ್ತಾ..?

    lot of expectations over rajaratha

    ರಾಜರಥ ಚಿತ್ರದ ಹೀರೋ ನಿರೂಪ್ ಭಂಡಾರಿಗೆ ಇದು ಕೇವಲ 2ನೇ ಸಿನಿಮಾ. ನಿರ್ದೇಶಕ ಅನೂಪ್ ಭಂಡಾರಿಗೂ ಇದು 2ನೇ ಸಿನಿಮಾ. ಹೀಗಿದ್ದರೂ ಚಿತ್ರದ ಬಗ್ಗೆ ನಿರೀಕ್ಷೆಗಳು ಮೌಂಟ್ ಎವರೆಸ್ಟ್ ರೇಂಜ್‍ನಲ್ಲಿರೋಕೆ ಕಾರಣಗಳಿವೆ. 

    ರಾಜರಥದಲ್ಲಿರೋದು ರಂಗಿತರಂಗ ಟೀಂ. ಬಾಹುಬಲಿಗೆ ಸಡ್ಡು ಹೊಡೆದು ಗೆದ್ದಿದ್ದ ಚಿತ್ರತಂಡವಾಗಿರೋ ಕಾರಣ, ಚಿತ್ರದ ಮೇಲೆ ನಿರೀಕ್ಷೆ ಸಹಜವಾಗಿಯೇ ಇದೆ.

    ಚಿತ್ರಕ್ಕೆ ಧ್ವನಿ ನೀಡಿರೋದು ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್. ರಾಜರಥ ಎನ್ನುವ ಬಸ್‍ನ ಪಾತ್ರಕ್ಕೆ ಧ್ವನಿಯಾಗಿದ್ದಾರೆ ಪುನೀತ್. ಬಸ್‍ನ ಹೆಸರನ್ನೇ ಚಿತ್ರಕ್ಕಿಟ್ಟಿರುವ ಕಾರಣ, ಕುತೂಹಲ ಜಾಸ್ತಿಯೇ ಇದೆ.

    ಇದೇ ಮೊದಲ ಬಾರಿಗೆ ಚಿತ್ರದಲ್ಲಿ ತಮಿಳು ನಟ ಆರ್ಯ ನಟಿಸಿದ್ದಾರೆ. ಕನ್ನಡದಲ್ಲಿ ಇದು ಅವರಿಗೆ ಮೊದಲ ಸಿನಿಮಾ. ಹೀಗಾಗಿ ಇದೂ ಕೂಡಾ ಚಿತ್ರವನ್ನು ನೋಡಲು ಪ್ರೇರೇಪಿಸುತ್ತಿದೆ.

    ರಾಜರಥ ಚಿತ್ರದಲ್ಲಿ ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲಿ ರಾಜರಥಂ ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ಎರಡೂ ಭಾಷೆಗೆ ಪ್ರತ್ಯೇಕವಾಗಿ ಶೂಟ್ ಮಾಡಲಾಗಿದೆ.

    ತೆಲುಗಿನಲ್ಲಿ ಬಸ್‍ಗೆ ಧ್ವನಿಯಾಗಿರೋದು ಬಾಹುಬಲಿಯ ಬಲ್ಲಾಳದೇವ ರಾಣಾ ದಗ್ಗುಬಾಟಿ.

    ರಂಗಿತರಂಗ ಚಿತ್ರದ ಸಕ್ಸಸ್‍ನ್ನು ಮರೆತು, ಈ ಚಿತ್ರ ನಿರ್ಮಿಸಿದ್ದೇವೆ ಎನ್ನುತ್ತಿದೆ ಚಿತ್ರತಂಡ. ಹೊಸತನದ ಕಥೆ, ಹೊಸ ಲೊಕೇಷನ್‍ಗಳು, ಹೊಸ ಶೈಲಿಯ ಸಂಗೀತ... ಗಮನ ಸೆಳೆಯುತ್ತಿದೆ. ಒಂದು ಚಿತ್ರ ನೋಡಲು ಇನ್ನೇನು ಬೇಕು..?

  • ರಾಜರಥದ ಸ್ಪೆಷಾಲಿಟಿ.. - ವಿತರಕರು ಕಂಡಂತೆ..

    rajaratha distributor's special

    ಸಾಮಾನ್ಯವಾಗಿ ಒಂದು ಸಿನಿಮಾ ರಿಲೀಸ್‍ಗೆ ರೆಡಿಯಾದಾಗ ಚಿತ್ರದ ನಿರ್ಮಾಪಕ, ನಿರ್ದೇಶಕ, ನಾಯಕ, ನಾಯಕಿ, ಪಾತ್ರಧಾರಿಗಳು, ಸಂಗೀತ ನಿರ್ದೇಶಕರು.. ಹೀಗೆ ಚಿತ್ರತಂಡದವರೆಲ್ಲ ಚಿತ್ರದ ವಿಶೇಷಗಳ ಬಗ್ಗೆ ಮಾತಾನಾಡ್ತಾರೆ. ಆದರೆ, ಈ ರಾಜರಥದ ಬಗ್ಗೆ ಚಿತ್ರತಂಡದವರಷ್ಟೇ ಪ್ರೀತಿಯಿಂದ ಮಾತನಾಡಿರುವುದು ಚಿತ್ರದ ವಿತರಣೆ ಜವಾಬ್ದಾರಿ ಹೊತ್ತಿರುವ ನಿರ್ಮಾಪಕ ಕಾರ್ತಿಕ್ ಗೌಡ.

    ಅನೂಪ್ ಅವರ ಜೊತೆ ನನ್ನ ಗೆಳೆತನ ಶುರುವಾಗಿದ್ದು ರಂಗಿತರಂಗದ ನಂತರ. ಅವರದ್ದು ಹೊಸತನದ ಮೇಕಿಂಗ್, ಹೊಸತನದ ಕಥೆಗಳು ಇಷ್ಟವಾದವು. ಇದು ರಾಜರಥ ಚಿತ್ರದ ವಿತರಣೆಯನ್ನು ತೆಗೆದುಕೊಳ್ಳಲು ಒಂದು ಕಾರಣ. ಇನ್ನೊಂದು ಚಿತ್ರದ ನಿರ್ಮಾಪಕರಾದ ಸತೀಶ್, ಅಜಯ್ ರೆಡ್ಡಿ ಕೂಡಾ ಸ್ನೇಹಿತರು. ಅಷ್ಟೇ ಅಲ್ಲ, ಕಾರ್ತಿಕ್ ಗೌಡ ಅವರ ರಾಜಕುಮಾರ ಹಾಗೂ ಮಾಸ್ಟರ್‍ಪೀಸ್ ಚಿತ್ರಗಳನ್ನು ವಿದೇಶದಲ್ಲಿ ರಿಲೀಸ್ ಮಾಡುವ ಹೊಣೆ ಹೊತ್ತಿದ್ದವರು ರಾಜರಥದ ನಿರ್ದೇಶಕ ಅನೂಪ್ ಭಂಡಾರಿ. ಹೀಗೆ ಚಿತ್ರದ ವಿತರಣೆಯ ಜೊತೆಗೆ ಸ್ನೇಹ ಹೇಗೆ ಕಾರಣವಾಯ್ತು ಎಂದು ಹೇಳಿಕೊಂಡಿದ್ದಾರೆ ಕಾರ್ತಿಕ್ ಗೌಡ.

    ರಾಜರಥ ಚಿತ್ರದಲ್ಲಿ ಪುನೀತ್ ಅವರ ಧ್ವನಿ ಬಳಸಿದ್ದು, ಒಂದು ಬಸ್ ಪ್ರೇಕ್ಷಕರ ಜೊತೆ ಮಾತನಾಡುವ ಕಲ್ಪನೆ.. ಕಾರ್ತಿಕ್ ಗೌಡ ಅವರಿಗೆ ಹಾಲಿವುಡ್ ಚಿತ್ರಗಳ ಸ್ಟೈಲ್ ನೆನಪಿಸಿದೆ. ಚಿತ್ರದಲ್ಲಿ ಬಳಸಿರುವ ಸೈಡ್ ಕಾರ್ ಇರುವ ಬೈಕ್‍ನ್ನು ತ್ರಿವೇಣಿ ಚಿತ್ರಮಂದಿರದಲ್ಲಿ ಪ್ರದರ್ಶನಕ್ಕಿಡಲಾಗುತ್ತಿದೆ. ಚಿತ್ರದ ಪ್ರೀಮಿಯರ್ ಶೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಬೆಂಗಳೂರು ಮತ್ತು ಮೈಸೂರು ಹೊರತುಪಡಿಸಿ, ಇನ್ನೊಂದು ಪ್ರೀಮಿಯರ್ ಶೋ ಮಾಡುವ ಯೋಜನೆ ಸದ್ಯಕ್ಕಿಲ್ಲ. ಇನ್ನು ಆನ್‍ಲೈನ್ ಬುಕ್ಕಿಂಗ್ ಅಂತೂ 

    ಸೂಪರ್ ಸ್ಟಾರ್‍ಗಳ ಚಿತ್ರಕ್ಕೆ ಸಿಗುವಂತೆಯೇ ಆಗಿದೆ ಎಂದು ಖುಷಿಯಾಗಿದ್ದಾರೆ ಕಾರ್ತಿಕ್ ಗೌಡ.

  • ರಾಜರಥದ ಹೀರೋ ನಿಮ್ಮಲ್ಲೂ ಇರಬಹುದು..!

    interesting facts about rajaratha;s hero character

    ರಾಜರಥ ಚಿತ್ರದ ಹೀರೋ ನಿರೂಪ್ ಭಂಡಾರಿ. ಅವರಿಗೆ ಇದು ಎರಡನೇ ಸಿನಿಮಾ. ಚಿತ್ರದ ಕಥೆ ಏನು ಎಂದರೆ, ಗುಟ್ಟು ಬಿಟ್ಟುಕೊಡದ ನಿರೂಪ್, ಹೀರೋ ವಿಶೇಷತೆಯೇನು ಎಂದಾಗ ಒಂದಿಷ್ಟು ಸ್ವಾರಸ್ಯಗಳನ್ನು ಬಿಟ್ಟುಕೊಟ್ಟಿದ್ದಾರೆ.

    ಚಿತ್ರದ ಹೀರೋ ಹೆಸರು ಅಭಿ. ಮೆಕ್ಯಾನಿಕಲ್ ಎಂಜಿನಿಯರ್ ಸ್ಟೂಡೆಂಟ್. ಕಾಲೇಜಿನಲ್ಲಿದ್ದಾಗ ಆವಂತಿಕಾ ಶೆಟ್ಟಿ ಜೊತೆ ಪ್ರೀತಿಗೆ ಬೀಳುವ ಪಾತ್ರ ಅದು. ಇನ್ನು ಆ ಪಾತ್ರ ಸ್ವಲ್ಪ ವಿಭಿನ್ನವಾಗಿದೆ. ಅಭಿಗೆ ಕವಿತೆ ಬರೆಯುವ ಹುಡುಗ. ಅಷ್ಟೇ ಅಲ್ಲ, ಗೆಳೆಯರ ಜೊತೆ ಮಾತನಾಡುವಾಗ ಹಳೆಯ ಸಿನಿಮಾಗಳ ಡೈಲಾಗ್‍ಗಳನ್ನು ಬಳಸಿಕೊಂಡೇ ಮಾತನಾಡುವ ಪಾತ್ರ. ಇದು ಸ್ವತಃ ನಿರೂಪ್ ಭಂಡಾರಿ ರಿಯಲ್ ಲೈಫ್‍ಗೆ ಹೋಲಿಕೆಯಾಗುತ್ತಿದೆ.

    ಸಿನಿಮಾ ನೋಡಿ. ಇಡೀ ಸಿನಿಮಾದ ಪ್ರತಿ ದೃಶ್ಯವೂ ಪೇಂಯ್ಟಿಂಗ್ ರೀತಿ ಬಂದಿದೆ. ಚಿತ್ರದ ಹಾಡು, ದೃಶ್ಯ ಶ್ರೀಮಂತಿಕೆಯಿಂದ ಕೂಡಿವೆ. ಡೋಂಟ್ ಮಿಸ್ ಎಂಬ ಪ್ರೀತಿಯ ಕರೆಯೋಲೆ ಕೊಟ್ಟಿದೆ ರಾಜರಥ ತಂಡ.

     

  • ವಿಕ್ಟರಿ ರೋಣ : 100 ಕೋಟಿ ಕ್ಲಬ್`ಗೆ ವರ್ಷದ 4ನೇ ಕನ್ನಡ ಸಿನಿಮಾ

    ವಿಕ್ಟರಿ ರೋಣ : 100 ಕೋಟಿ ಕ್ಲಬ್`ಗೆ ವರ್ಷದ 4ನೇ ಕನ್ನಡ ಸಿನಿಮಾ

    ವಿಕ್ರಾಂತ್ ರೋಣ ಚಿತ್ರದ ಟೈಟಲ್ ಬದಲಿಸಬಹುದು. ಏಕೆಂದರೆ ವಿಕ್ಟರಿ ಬಾರಿಸಿರೋ ಚಿತ್ರ ವಿಕ್ಟರಿ ರೋಣ. ಅಂದಹಾಗೆ ಈ ವರ್ಷದಲ್ಲಿ 100 ಕೋಟಿ ಕ್ಲಬ್ ಸೇರಿರುವ 4ನೇ ಕನ್ನಡ ಸಿನಿಮಾ ಆಗಿ ಹೊರಹೊಮ್ಮಿದೆ ವಿಕ್ರಾಂತ್ ರೋಣ. ವಿಕ್ಟರಿ ರೋಣ.

    ರಣಬೀರ್ ಕಪೂರ್, ಶ್ರದ್ಧಾ ಕಪೂರ್, ಅರ್ಜುನ್ ಕಪೂರ್,  ಜಾನ್ ಅಬ್ರಹಾಂತ್ ನಟಿಸಿರೋ ಶಂಷೇರಾ, ಏಕ್ ವಿಲನ್ ನಂತಹ ಚಿತ್ರಗಳನ್ನೆಲ್ಲ ಸೈಡಿಗೆ ಹೊಡೆದು ನುಗ್ಗುತ್ತಿರೋದು ವಿಕ್ಟರಿ ರೋಣ. ಈ ವಾರದ ಅಂತ್ಯಕ್ಕೆ 150 ಕೋಟಿ ಕ್ಲಬ್ ಸೇರುವ ಸಾಧ್ಯತೆಗಳಿವೆ.

    ಅಂದಹಾಗೆ  ಈ ವರ್ಷ 100 ಕೋಟಿ ಕ್ಲಬ್ ಓಪನ್ ಮಾಡಿದ ಮೊದಲ ಕನ್ನಡ ಸಿನಿಮಾ ಜೇಮ್ಸ್.

    ನಂತರ ಕೆಜಿಎಫ್ ಚಾಪ್ಟರ್ 2, ಸಾವಿರ ಕೋಟಿ ಕ್ಲಬ್ ಓಪನ್ ಮಾಡಿತು.

    ಅದಾದ ನಂತರ 777 ಚಾರ್ಲಿ ಕೂಡಾ 150 ಕೋಟಿ ಬಿಸಿನೆಸ್ ಮಾಡಿತು.

    ಈಗ ಕಿಚ್ಚ ಸುದೀಪ್ ಅವರ ವಿಕ್ಟರಿ ರೋಣ ಈ ಗುರಿ ಮುಟ್ಟಿದೆ.

  • ವಿಕ್ರಾಂತ್ ರೋಣ ಅಡ್ವಾನ್ಸ್ ಬುಕ್ಕಿಂಗ್ ಯಾವಾಗಿಂದ..?

    ವಿಕ್ರಾಂತ್ ರೋಣ ಅಡ್ವಾನ್ಸ್ ಬುಕ್ಕಿಂಗ್ ಯಾವಾಗಿಂದ..?

    ವಿಕ್ರಾಂತ್ ರೋಣ ಚಿತ್ರ ಸಂಚಲನ ಸೃಷ್ಟಿಸೋಕೆ ಶುರುವಾಗಿದೆ. ರಾ ರಾ ರಕ್ಕಮ್ಮ ಮೂಲಕವೇ ಹವಾ ಎಬ್ಬಿಸಿದ ಸಿನಿಮಾ ವಿಕ್ರಾಂತ್ ರೋಣ. ಚಿತ್ರ ಸೆನ್ಸಾರ್ ಪ್ರಕ್ರಿಯೆ ಮುಗಿಸಿದೆ. 147.39 ನಿಮಿಷದ ಸಿನಿಮಾ ವಿಕ್ರಾಂತ್ ರೋಣ. ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಸಿನಿಮಾ ರಿಲೀಸ್ ಆಗೋದು 28ಕ್ಕೆ. ಆದರೆ ಅಭಿಮಾನಿಗಳಿಂದ ಈಗಾಗಲೇ ಟಿಕೆಟ್ ಬುಕ್ಕಿಂಗ್ ಕ್ರೇಜ್ ಶುರುವಾಗಿದೆ.

    ಆದರೆ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗೋದು ಜುಲೈ 24ರಿಂದ. ರಿಲೀಸ್ ಆಗುವ ನಾಲ್ಕು ದಿನ ಮುಂಚಿನಿಂದ. ಅದೇ ದಿನ ಕಿಚ್ಚವರ್ಸ್ ಕೂಡಾ ಓಪನ್ ಆಗಲಿದೆ. ಎಂಜಾಯ್ ಮಾಡ್ತಾ ಮಾಡ್ತಾ ನೋಡಿ.. ಕಿಚ್ಚನ ಜೊತೆ ಮಾತಾಡ್ತಾ.. ಮಾತಾಡ್ತಾ.. ಟಿಕೆಟ್ ಬುಕ್ ಮಾಡಬಹುದು.

    ಇದೆಲ್ಲದರ ಮಧ್ಯೆ ಇವತ್ತು ಅಂದ್ರೆ ಜುಲೈ 21ರಂದು ಗುಮ್ಮನನ್ನು ತೋರಿಸಲಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. ವಿಕ್ರಾಂತ್ ರೋಣನ ಸೆನ್ಸೇಷನ್ ಶುರು ಮಾಡಿದ್ದೇ ಗುಮ್ಮ. ಆ ಗುಮ್ಮನ ಹಾಡಿನ ದರ್ಶನ ಇವತ್ತು ಆಗಲಿದೆ.

    ಉಳಿದಂತೆ.. ವೇಯ್ಟ್.. ವೇಯ್ಟ್.. ವೇಯ್ಟ್.. ಹಬ್ಬ ಶುರುವಾಗೋದು ಜುಲೈ 28ಕ್ಕೇ..

  • ವಿಕ್ರಾಂತ್ ರೋಣ ಟ್ರೇಲರ್ : ಅಬ್ಬಾ.. ಎಂದ ಇಡೀ ಚಿತ್ರರಂಗ

    ವಿಕ್ರಾಂತ್ ರೋಣ ಟ್ರೇಲರ್ : ಅಬ್ಬಾ.. ಎಂದ ಇಡೀ ಚಿತ್ರರಂಗ

    ಇಡೀ ಚಿತ್ರರಂಗವೇ ಅಲ್ಲಿತ್ತು. ಶಿವಣ್ಣ, ರವಿಚಂದ್ರನ್, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ಡಾಲಿ ಧನಂಜಯ್, ರಿಷಬ್ ಶೆಟ್ಟಿ, ರಾಜ್ ಬಿ.ಶೆಟ್ಟಿ, ಯೋಗರಾಜ್ ಭಟ್, ಯುವ ರಾಜಕುಮಾರ್,  ನಂದಕಿಶೋರ್, ಅರ್ಜುನ್ ಜನ್ಯ, ಇಂದ್ರಜಿತ್ ಲಂಕೇಶ್.. ಹೀಗೆ ಬಹುತೇಕ ಇಂಡಸ್ಟ್ರಿಯ ಗಣ್ಯರು ಅಲ್ಲಿದ್ದರು. ವಿಕ್ರಾಂತ್ ರೋಣನಿಗೆ ಶುಭ ಕೋರಿದರು. ಟ್ರೇಲರ್ ಎಲ್ಲೆಡೆ ರಿಲೀಸ್ ಆಗುವ ಮುನ್ನ ಚಿತ್ರರಂಗದ ಗಣ್ಯರಿಗೆ ಟ್ರೇಲರ್ ತೋರಿಸಿದರು ಕಿಚ್ಚ ಸುದೀಪ್, ಅನೂಪ್ ಭಂಡಾರಿ ಮತ್ತು ಜಾಕ್ ಮಂಜು.

    ರವಿಚಂದ್ರನ್ : ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ ಎನ್ನುತ್ತಿದ್ದರು. ಈಗ ಎಷ್ಟೊಳ್ಳೆ ಸಿನಿಮಾ ಬರುತ್ತಿವೆ ಎಂದರೆ ಜನ ಬರುತ್ತಿದ್ದಾರೆ. ಚಿತ್ರಮಂದಿರಗಳೇ ಸಾಲುತ್ತಿಲ್ಲ. ವಿಆರ್ ಎಂದರೆ ವಿಕ್ರಾಂತ್ ರೋಣ ಅಷ್ಟೇ ಅಲ್ಲ, ವಿ. ರವಿಚಂದ್ರ.

    ರಕ್ಷಿತ್ ಶೆಟ್ಟಿ : ಸುದೀಪ್ ಸರ್ ಅಂತಹ ಅದ್ಭುತ ಟ್ಯಾಲೆಂಟೆಡ್ ಕಲಾವಿದ ನನ್ನ ಪ್ರತಿ ಸಿನಿಮಾ ರಿಲೀಸ್ ಆದಾಗಲೂ ಮೆಸೇಜ್ ಮಾಡ್ತಾರೆ. ಭಾರತದ ಅದ್ಭುತ ಟ್ಯಾಲೆಂಟೆಡ್ ಆಕ್ಟರ್‍ಗಳಲ್ಲಿ 5 ಜನರ ಪಟ್ಟಿ ಮಾಡಿದರೆ ಅವರಲ್ಲಿ ಸುದೀಪ್ ಒಬ್ಬರು.

    ಶಿವರಾಜಕುಮಾರ್ : ಸುದೀಪ್ ನನ್ನ ಕ್ಲೋಸ್ ಫ್ರೆಂಡ್. ಬ್ರದರ್. ಫ್ಯಾಮಿಲಿ. ಅವರ ಶಾಂತಿನಿವಾಸಕ್ಕೆ ಸಣ್ಣದಾಗಿ ಧ್ವನಿ ನೀಡಿದ್ದೆ. ಅವರು ನನ್ನ ಹೃದಯಕ್ಕೆ ಹತ್ತಿರ. ಅನೂಪ್ ಅವರ ರಂಗಿತರಂಗ ಥಿಯೇಟರಿನಲ್ಲೇ ನೋಡಿದ್ದೆ. ಈ ಸಿನಿಮಾವನ್ನೂ ಚೆನ್ನಾಗಿ ಮಾಡಿದ್ದಾರೆ.

    ರಮೇಶ್ ಅರವಿಂದ್ : ಸಿನಿಮಾ ನೋಡಿದಾಗ ಇನ್ನೊಂದು ಜಗತ್ತು ತೆರೆದುಕೊಳ್ಳುತ್ತೆ. ಕ್ಯಾಮೆರಾ, ಮ್ಯೂಸಿಕ್ ಎಲ್ಲವೂ ಸಖತ್ತಾಗಿದೆ. ಸೂಪರ್ ಹಿಟ್ ಆಗುವ ಎಲ್ಲ ಸೂಚನೆ ಇದೆ.

    ಡಾಲಿ ಧನಂಜಯ್ : ಸರ್, ಅದ್ಭುತ. ಏನ್ ಹೇಳ್ಬೇಕು ಗೊತ್ತಾಗ್ತಿಲ್ಲ.  ಈಗ ನಾವು ಹೊರಗೆ ಹೋದಾಗ ಕನ್ನಡ ಇಂಡಸ್ಟ್ರಿ ಅಂತಾ ಹೇಳಿಕೊಳ್ಳೋಕೆ ಹೆಮ್ಮೆ. ನೀವು ಫೇಸ್. ಎಲ್ಲ ಕಡೆ ನಿಮ್ಮ ಹೆಸರಿದೆ. ಎಲ್ಲರಿಗೂ ಸಪೋರ್ಟ್ ಮಾಡ್ತೀರ. ಬೆಳೆಸ್ತೀರಾ. ಈ ಸಿನಿಮಾ ಒಟ್ಟಿಗೇ ಫ್ಯಾಮಿಲಿ ಸಮೇತ ನೋಡೋ ಸಿನಿಮಾ.

    ಯೋಗರಾಜ್ ಭಟ್ : ತುಂಬಾ ಹತ್ತಿರದ ಜೀವ ಸುದೀಪ್ ಅವರು. ಜಾಕ್ವೆಲಿನ್ ಕುಣಿತವನ್ನ ಮತ್ತೆಮತ್ತೆ ಮೊಬೈಲಿನಲ್ಲಿ ನೋಡ್ತೀವಿ. ಪ್ರೇಕ್ಷಕನಾಗಿ ಸಿನಿಮಾ ನೋಡೋಕೆ ಕಾಯ್ತಿದ್ದೇನೆ.

    ರಿಷಬ್ ಶೆಟ್ಟಿ : ನಾನು ಸುದೀಪ್ ಸರ್ ಫ್ಯಾನ್ ಅಸೋಸಿಯೇಷನ್ ಕಡೆಯಿಂದ ಬಂದದಿದ್ದೇನೆ. ಟ್ರೇಲರ್ ಅದ್ಬುತವಾಗಿದೆ. ಸುದೀಪ್ ಸರ್ ಜೊತೆ ಒಂದು ಸಿನಿಮಾ ಮಾಡೇ ಮಾಡ್ತೀನಿ.

    ಅರ್ಜುನ್ ಜನ್ಯ : ಸುದೀಪ್ ಸರ್ ನನ್ನ ಗಾಡ್ ಫಾದರ್.

    ರಾಜ್ ಬಿ.ಶೆಟ್ಟಿ : ಅವರ ಸಿನಿಮಾ ನೋಡೋಕೆ ಮನೆಯಲ್ಲಿ ಸುಳ್ಳು ಹೇಳಿ ಹೋಗ್ತಿದ್ದೆ. ಈಗ ಅವರ ಸಿನಿಮಾ ಟ್ರೇಲರ್‍ನ್ನ ಎಲ್ಲರಿಗಿಂತ ಮೊದಲು ನೋಡೋ ಭಾಗ್ಯ ಸಿಕ್ಕಿದೆ.

    ಜಾಕ್ ಮಂಜು : ಸುದೀಪ್ ಸರ್ ಇಲ್ಲದೆ ಈ ಸಿನಿಮಾ ಆಗ್ತಾ ಇರಲಿಲ್ಲ. ಪ್ರಿಯಾ ಮೇಡಂ ಸಹಾಯದಿಂದ ಈ ಕಥೆ ಹೇಳಿದವಿ. ಜಾಕ್ವೆಲಿನ್ ಕನ್ನಡದಲ್ಲಿಯೇ ಮಾತನಾಡಿದ್ದಾರೆ. ಸುದೀಪ್ ಸರ್‍ಗೆ ತುಂಬಾ ಥ್ಯಾಂಕ್ಸ್

    ಅನೂಪ್ ಭಂಡಾರಿ : ಈ ಚಿತ್ರ ಇಷ್ಟು ದೊಡ್ಡ ಮಟ್ಟಕ್ಕೆ ಆಗೋಕೆ ಕಾರಣ ಸುದೀಪ್. ಅವರಿಗೆ ನನ್ನ ಥ್ಯಾಂಕ್ಸ್.

    ವೇದಿಕೆಯಲ್ಲಿದ್ದವರೆಲ್ಲ ವಿಕ್ರಾಂತ್ ರೋಣ ಟ್ರೇಲರ್ ನೋಡಿದ್ದಾರೆ. ಇವತ್ತು ಇಡೀ ದೇಶ ಟ್ರೇಲರ್ ನೋಡಲಿದೆ. ಪ್ರತಿ ಭಾಷೆಯಲ್ಲೂ ಆಯಾ ಚಿತ್ರರಂಗದ ಸ್ಟಾರ್ ಕಲಾವಿದರೇ ಚಿತ್ರದ ಟ್ರೇಲರ್‍ನ್ನು ಡಿಜಿಟಲ್ ಲಾಂಚ್ ಮಾಡುತ್ತಿದ್ದಾರೆ.

  • ವಿಕ್ರಾಂತ್ ರೋಣ ನೋಡಿದವರು ಕೊಟ್ಟ ರಿಯಾಕ್ಷನ್ಸ್ ಇವು..

    ವಿಕ್ರಾಂತ್ ರೋಣ ನೋಡಿದವರು ಕೊಟ್ಟ ರಿಯಾಕ್ಷನ್ಸ್ ಇವು..

    ವಿಕ್ರಾಂತ್ ರೋಣ ಸಿನಿಮಾ ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗಿದೆ. ಬೆಂಗಳೂರಿನಲ್ಲಿ ಕೆಲವೆಡೆ ಪ್ರೇಕ್ಷಕರ ಡಿಮ್ಯಾಂಡ್ ಮೇಲೆ 3ಡಿ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ಬೇರೆ ಬೇರೆ ರಾಜ್ಯಗಳಿಂದ ಸಿನಿಮಾ ಬಗ್ಗೆ ಪಾಸಿಟಿವ್ ರಿವ್ಯೂಗಳು ಬರುತ್ತಿವೆ.

    ಇದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಬಗ್ಗೆ ವ್ಯಕ್ತವಾಗಿರೋ ಅಭಿಪ್ರಾಯಗಳು. ಸಿನಿಮಾ ನೋಡಿದವರು ತಮಗನ್ನಿಸಿದ್ದನ್ನು ಪೋಸ್ಟ್ ಮಾಡಿದ್ದಾರೆ. ಹೀಗೆ ಚಿತ್ರದ ಬಗ್ಗೆ ಹೇಳಿಕೊಂಡಿರುವವರು ಪತ್ರಕರ್ತರಲ್ಲ. ವಿಮರ್ಶಕರೂ ಅಲ್ಲ. ಕೇವಲ ಸಿನಿಮಾ ಪ್ರೇಮಿಗಳು ಮತ್ತು ಪ್ರೇಕ್ಷಕರು ಮಾತ್ರ. ಇಲ್ಲಿ ಹಾಕಿರೋದು ಕೇವಲ ಒಪೀನಿಯನ್ಸ್‍ಗಳನ್ನಷ್ಟೇ..

    ಸುದೀಪ್ ಎಂಟ್ರಿ.. ಆ ಕಾಡು.. ಕಾಡಿನೊಳಗಿನ ಆ ಫೈಟು.. ಚಿಂದಿ ಚಿಂದಿ ಚಿಂದಿ ಬಿಜಿಎಂ..

    ಇಂಟರ್‍ವೆಲ್ ಟ್ವಿಸ್ಟ್ ಕಿ ಥಿಯೇಟರ್ ಬದಲ್ ಆಯ್‍ಪೋಯಿ.. ಇದೆಕ್ಕಡಿ ಮಾಸ್ ಟ್ವಿಸ್ಟ್ ರಾ ಮಾವ..

    ಈ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿ ಇನ್ನೊಂದು ಲೆವೆಲ್ಲಿಗೆ ಹೋಗುತ್ತಿದೆ. ನಾನು ನೋಡಿದ ಬೆಸ್ಟ್ ಇಂಡಿಯನ್ 3ಡಿ ಸಿನಿಮಾ. ಫುಲ್ ಪೈಸಾ ವಸೂಲ್.

    ಇಂಟರ್‍ವಲ್ ಸೀನ್‍ಗೆ ಥಿಯೇಟರ್ ಫುಲ್ ಹಾವಳಿ.. ಬೆಸ್ಟ್ 3ಡಿ ಸಿನಿಮಾ.

    ಇಂಟರ್‍ವೆಲ್ ಊಹಿಸಬಹುದು. ಆದರೆ ಕಿಕ್ ಕೊಡುತ್ತೆ. ರೆಗ್ಯುಲರ್ ಥ್ರಿಲ್ಲರ್ ಸಿನಿಮಾ ಅಲ್ಲ. ಕ್ಲೈಮಾಕ್ಸ್ ಬೆಂಕಿ..

    ಕಿಚ್ಚ ಸುದೀಪ್ ಮತ್ತು ಅನೂಪ್ ಭಂಡಾರಿ.. ಟೇಕ್ ಎ ಬೋ..

    ಒಟ್ಟಿನಲ್ಲಿ ಚಿತ್ರದ ಬಗ್ಗೆ ವ್ಯಕ್ತವಾಗುತ್ತಿರೋ.. ವ್ಯಕ್ತವಾಗಿರೋ ಅಭಿಪ್ರಾಯಗಳೆಲ್ಲ ಪಾಸಿಟಿವ್. ಒಂದು ಚಿತ್ರ ಎಷ್ಟು ಕಲೆಕ್ಷನ್ ಮಾಡಿತು ಎನ್ನುವುದಕ್ಕಿಂತ ಎಷ್ಟು ಪಾಸಿಟಿವ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿತು ಎನ್ನುವುದರಲ್ಲೇ ಸಿನಿಮಾ ಸಕ್ಸಸ್ ಇದೆ. ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಮೇಲೆ ಮಿಕ್ಕ ದಾಖಲೆಗಳೆಲ್ಲ ಹಿಂದ್ ಹಿಂದೇನೇ ಓಡೋಡಿ ಬರ್ತವೆ..

  • ವಿಕ್ರಾಂತ್ ರೋಣ ಹೀರೋಗಳು ಇವರೇ..

    ವಿಕ್ರಾಂತ್ ರೋಣ ಹೀರೋಗಳು ಇವರೇ..

    ವಿಕ್ರಾಂತ್ ರೋಣ ರಿಲೀಸ್ ಆಗಿದ್ದಾಯ್ತು. ಪ್ರೇಕ್ಷಕರು ಕಣ್ತುಂಬಿಕೊಂಡಿದ್ದೂ ಆಯ್ತು. ಕಿಚ್ಚ ಸುದೀಪ್ ಹೀರೋ. ನಿರೂಪ್ ಭಂಡಾರಿ ಮತ್ತು ಕಿಚ್ಚನ ಹೊಡೆದಾಟ ಸಖತ್ತಾಗಿದೆ. ಜಾಕ್ವೆಲಿನ್ ಗ್ಲಾಮರ್ರು.. ಟೆಂಪರೇಚರ್ ಹೆಚ್ಚಿಸುವಲ್ಲಿ ಗೆದ್ದಿದೆ. ಹೆಣ್ಣು ಮಕ್ಕಳಿದ್ದವರಿಗೆ ಸಿನಿಮಾ ಇಷ್ಟವಾಗುತ್ತೆ. ಸಿನಿಮಾ ನೋಡುವವರಿಗೆ ಫುಲ್ ಮೀಲ್ಸ್. ಪೈಸಾ ವಸೂಲ್. ಇದೆಲ್ಲದರ ಮಧ್ಯೆ ಚಿತ್ರದ ಹೀರೋಗಳು ಯಾರ್ ಯಾರು ಎಂದು ನೋಡಿದರೆ.. ಪಟ್ಟಿ ಸ್ವಲ್ಪ ದೊಡ್ಡದೇ ಇದೆ.

    ಚಿತ್ರದ ಗ್ರಾಫಿಕ್ಸ್ ಅದ್ಭುತವಾಗಿದೆ. ನಿರ್ಮಲ್ ಕುಮಾರ್ ಇದರ ಉಸ್ತುವಾರಿ ವಹಿಸಿಕೊಂಡಿದ್ದವರು.

    ಈ ಗ್ರಾಫಿಕ್ಸ್‍ಗೆ ಸರಿಯಾದ ಸೆಟ್ ಸಪೋರ್ಟ್ ಸಿಕ್ಕದೇ ಹೋದರೆ ತಾಳಮೇಳವೇ ತಪ್ಪಿಹೋಗುತ್ತಿತ್ತು. ಚಿತ್ರದ ಬಹುತೇಕ ಚಿತ್ರೀಕರಣವಾಗಿರೋದು ಸೆಟ್‍ನಲ್ಲಿ. ಆ ಸೆಟ್‍ನ ಸೃಷ್ಟಿಕರ್ತ ಶಿವಕುಮಾರ್.

    ಸೆಟ್‍ನಲ್ಲಿಯೇ ಬಹುತೇಕ ಸಿನಿಮಾ ಚಿತ್ರೀಕರಣವಾದರೂ ಒಂದೊಂದು ದೃಶ್ಯವೂ ಅದ್ಭುತ ಎನ್ನುವಂತೆ ಸೆರೆ ಹಿಡಿದು ದೃಶ್ಯಕಾವ್ಯ ಸೃಷ್ಟಿಸಿರೋದು ವಿಲಿಯಂ ಡೇವಿಡ್.

    ಆಶಿಕ್ ಕುಸುಗಳ್ಳಿ ಇಡೀ ಚಿತ್ರದ ಎಡಿಟಿಂಗ್ ಮತ್ತು ಕಲರಿಂಗ್ ನೋಡಿಕೊಂಡಿದ್ದಾರೆ. ಚಿಕ್ಕ ಚಿಕ್ಕ ಅಂಶವನ್ನೂ ಗುರುತಿಸಿದ್ದಾರೆ.

    ಇವೆಲ್ಲವೂ ಸರಿಯಾಗಿದ್ದಾಗ ಬಿಜಿಎಂ ಕೆಟ್ಟರೆ ಸಕಲವೂ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆಯೇ. ಆದರೆ.. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಇಡೀ ಚಿತ್ರದ ತೂಕವನ್ನು ಹೆಚ್ಚಿಸಿದೆ. ಚಿತ್ರದೊಂದಿಗೇ ಕ್ಯಾರಿ ಆಗುವ ಮ್ಯೂಸಿಕ್ ಪ್ರೇಕ್ಷಕರನ್ನು ನೆತ್ತರ ಪರ್ಬದ ಲೋಕಕ್ಕೆ ನೇರವಾಗಿ ಕೊಂಡೊಯ್ದು ಕೂರಿಸಿ ಬಿಡುತ್ತದೆ.

    ಇವೆಲ್ಲದಕ್ಕೂ ಒಂದು ಕೊಂಡಿಯಾಗಿ ಕುಳಿತು.. ಕನಸು ಕಂಡು.. ಆ ಕನಸು ನನಸಾಗುವ ತಂಡವನ್ನು ರೂಪಿಸಿರುವುದು ಅನೂಪ್ ಭಂಡಾರಿ.

    ಅನೂಪ್ ಭಂಡಾರಿಯ ಎಲ್ಲ ಕನಸುಗಳಿಗೆ ತನುಮನ ಹಾಗೂ ವಿಶೇಷವಾಗಿ ಧನ ನೀಡಿರುವ ಜಾಕ್ ಮಂಜು ಚಿತ್ರದ ರಿಯಲ್ ಹೀರೋ.

    ಈ ಎಲ್ಲ ಹೀರೋಗಳೂ ಒಟ್ಟಾಗಿ ಕೆಲಸ ಮಾಡಿದ ಪ್ರತಿಫಲ ವಿಕ್ರಾಂತ್ ರೋಣ. ಒಂದು ಸಿನಿಮಾವನ್ನು ಯಾರೋ ಒಬ್ಬರು ಗೆಲ್ಲಿಸೋಕೆ ಆಗಲ್ಲ.. ಅದೊಂದು ಟೀಂ ವರ್ಕ್ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ ವಿಕ್ರಾಂತ್ ರೋಣ ಟೀಂ.

  • ವಿಕ್ರಾಂತ್ ರೋಣನ ಕ್ರಾಂತಿ : 100 ರೂ. 150 ರೂ.

    ವಿಕ್ರಾಂತ್ ರೋಣನ ಕ್ರಾಂತಿ : 100 ರೂ. 150 ರೂ.

    ವಿಕ್ರಾಂತ್ ರೋಣ ಚಿತ್ರ ಹೊಸ ಕ್ರಾಂತಿಯನ್ನೇ ಮಾಡೋಕೆ ಹೊರಟಿದೆ. ಲಾಭಕ್ಕಿಂತ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವುದೇ ದೊಡ್ಡದು ಎಂದು ಹೊರಟಿರುವ ಚಿತ್ರತಂಡ ಈಗ ಚಿತ್ರಕ್ಕೆ ರೇಟ್ ಫಿಕ್ಸ್ ಮಾಡಿದೆ. ಅದೂ 3ಡಿ ಚಿತ್ರಕ್ಕೆ.

    ಸೋಮವಾರದಿಂದ ವಿಕ್ರಾಂತ್ ರೋಣ ಚಿತ್ರವನ್ನು ನೀವು ಮಲ್ಟಿಪ್ಲೆಕ್ಸ್‍ಗಳಲ್ಲಿ ನೋಡಿದರೆ 150 ರೂ. ಸಿಂಗಲ್ ಸ್ಕ್ರೀನ್‍ನಲ್ಲಿ ನೋಡಿದರೆ 100 ರೂ. ಮಾತ್ರ. ವಿಕ್ರಾಂತ್ ರೋಣ ಚಿತ್ರದ 3ಡಿ ಕ್ವಾಲಿಟಿ ಬಗ್ಗೆ ಎಲ್ಲೆಡೆಯೂ ಪ್ರಶಂಸೆ, ಮೆಚ್ಚುಗೆಗಳಿವೆ. ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಎಲ್ಲೆಡೆ ಇಷ್ಟು ಅದ್ಭುತವಾಗಿ ಟೆಕ್ನಾಲಜಿಯನ್ನು ಬಳಸಿಕೊಂಡಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿಯೇ ಚಿತ್ರವನ್ನು ಇನ್ನಷ್ಟು ಪ್ರೇಕ್ಷಕರಿಗೆ ತಲುಪಿಸುವ ಗುರಿ ಹಾಕಿಕೊಂಡು ಹೊರಟಿದ್ದಾರೆ ಜಾಕ್ ಮಂಜು.

    ಅಷ್ಟೇ ಅಲ್ಲ, ಕೆಲವರು ಪೈರಸಿಯಲ್ಲಿ ಸಿನಿಮಾ ನೋಡುತ್ತಿದ್ದಾರಂತೆ. ಪೈರಸಿ ಯಾಕೆ, ಟಿಕೆಟ್ ದರ ನಾವೇ ಕಡಿಮೆ ಮಾಡಿದ್ದೇವೆ. ಬನ್ನಿ, ಥಿಯೇಟರಲ್ಲಿ ನೋಡಿ, ಖುಷಿ ಪಡಿ ಎಂದಿದ್ದಾರೆ ಜಾಕ್ ಮಂಜು.

    ಅಂದಹಾಗೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮಲ್ಟಿಪ್ಲೆಕ್ಸ್ ಟಿಕೆಟ್ ದರವನ್ನು ನಿಗದಿ ಮಾಡುವ ಬಗ್ಗೆ ಖಡಕ್ಕಾಗಿ ಮಾತನಾಡಿದ್ದರು. ಆದೇಶವನ್ನೂ ಪ್ರಕಟಿಸಿ, ಜಾರಿಗೆ ತರುವುದನ್ನು ಮಾತ್ರ ಮರೆತುಬಿಟ್ಟರು. ಈಗ ಸಿನಿಮಾದವರೇ ಆ ನಿರ್ಧಾರಕ್ಕೆ ಬಂದಿದ್ದಾರೆ.