` anup bhandari, - chitraloka.com | Kannada Movie News, Reviews | Image

anup bhandari,

  • 'Rajaratha' To Release In Europe On April 7th

    rajaratha's next stop is europe

    'Rangitaranga' fame Nirup Bhandari's new film 'Rajaratha' was released on 23rd in Karnataka, Andhra Pradesh, Telangana and America. The film is all set to release in Europe on the 07th of April.

    'Rajaratha' stars Nirup Bhandari and Avanthika Shetty in lead roles. One of the highlights of the film is, well known Kollywood actor Arya has made his debut in Kannada through 'Rajaratha'. Ravishankar, Vinaya Prasad and others play prominent roles in the film.

  • 100 ಕೋಟಿ ಆಫರ್ ಅಂತೆ.. ವಿಕ್ರಾಂತ್ ರೋಣ ಟಾಕೀಸಿಗೇ ಬರಲ್ವಂತೆ..!!!

    100 ಕೋಟಿ ಆಫರ್ ಅಂತೆ.. ವಿಕ್ರಾಂತ್ ರೋಣ ಟಾಕೀಸಿಗೇ ಬರಲ್ವಂತೆ..!!!

    ವಿಕ್ರಾಂತ್ ರೋಣ. ಈ ವರ್ಷ ರಿಲೀಸ್ ಆಗಬೇಕಿರುವ ಬಹುಭಾಷಾ ಸಿನಿಮಾ. ಬಹುನಿರೀಕ್ಷಿತ ಸಿನಿಮಾ. ಕಿಚ್ಚ ಸುದೀಪ್ ಅಭಿನಯದ ಅನೂಪ್ ಭಂಡಾರಿ ನಿರ್ದೇಶನದ ಸಿನಿಮಾ ವಿಕ್ರಾಂತ್ ರೋಣ. ಜಾಕ್ ಮಂಜು ನಿರ್ಮಾಣದ ಸಿನಿಮಾ ಫೆಬ್ರವರಿ 24ರಂದು ರಿಲೀಸ್ ಆಗಬೇಕಿತ್ತು. ಆದರೆ ಈಗ ಸಿನಿಮಾ ಡೈರೆಕ್ಟ್ ಆಗಿ ಒಟಿಟಿಗೇ ಬರಲಿದೆ ಎಂಬ ವದಂತಿ ಗಾಂಧಿನಗರದಲ್ಲಿ ಹಬ್ಬಿದೆ. ಒಂದು ಮೂಲದ ಪ್ರಕಾರ ಎರಡು ಒಟಿಟಿ ಸಂಸ್ಥೆಗಳು 100 ಕೋಟಿಗೂ ಹೆಚ್ಚು ಮೊತ್ತದ ಆಫರ್ ಕೊಟ್ಟಿವೆ.

    ದೊಡ್ಡ ಮೊತ್ತದ ಆಫರ್ ಬಂದಿರೋದು ನಿಜ. ಆದರೆ ಒಟಿಟಿಗೇ ಕೊಡಬೇಕಾ.. ಬೇಡವಾ.. ಅನ್ನೋದು ನಿರ್ಧಾರವಾಗಿಲ್ಲ. ಥಿಯೇಟರ್ ಪ್ರೇಕ್ಷಕರಿಗಾಗಿಯೇ 3ಡಿ ವರ್ಷನ್ ಸಿನಿಮಾ ಕೂಡಾ ಮಾಡಿದ್ದೇವೆ. ಹೀಗಾಗಿ ನಿರ್ಧಾರ ತೆಗೆದುಕೊಳ್ಳೋದರ ಬಗ್ಗೆ ಗೊಂದಲದಲ್ಲಿದ್ದೇನೆ. ಸುದೀಪ್ ಅವರ ಜೊತೆ ಮಾತನಾಡಿ ಇನ್ನೊಂದೆರಡು ವಾರದಲ್ಲಿ ಹೇಳುತ್ತೇನೆ ಎಂದಿದ್ದಾರೆ ಜಾಕ್ ಮಂಜು.

  • 100 ಕೋಟಿ ಕ್ಲಬ್ ಸೇರಿತಾ ವಿಕ್ರಾಂತ್ ರೋಣ?

    100 ಕೋಟಿ ಕ್ಲಬ್ ಸೇರಿತಾ ವಿಕ್ರಾಂತ್ ರೋಣ?

    ವಿಕ್ರಾಂತ್ ರೋಣ ಸಿನಿಮಾ ರಿಲೀಸ್ ಆಗಿ ಎಲ್ಲೆಡೆ ದಿಬ್ಬಣ ಹೊರಟಿದ್ದರೆ ಬಾಕ್ಸಾಫೀಸ್ ತುಂಬಿ ತುಳುಕುತ್ತಿದೆ. ಮೊದಲ ದಿನವೇ 35 ಕೋಟಿ ಬಿಸಿನೆಸ್ ಮಾಡಿದ್ದ ಚಿತ್ರ ಈಗ 5ನೇ ದಿನಕ್ಕೆ ಕಾಲಿಟ್ಟಿದೆ. ಸಿನಿಮಾ ಎಲ್ಲೆಡೆ ಅದ್ಭುತ ಕಲೆಕ್ಷನ್ ಮಾಡುತ್ತಿದೆ ಅನ್ನೋ ಖುಷಿಯಲ್ಲಿರೋದು ಇಡೀ ಸಿನಿಮಾ ಟೀಂ.

    ದೇಶದ ನಂ.1 ನಿರ್ದೇಶಕ ಎನಿಸಿಕೊಂಡಿರುವ ರಾಜಮೌಳಿಯವರೇ ಹೊಗಳಿದ್ದು ವಿಕ್ರಾಂತ್ ರೋಣ ಚಿತ್ರತಂಡದ ಗೆಲುವಿನ ಕಿರೀಟಕ್ಕೆ ಗರಿ ತೊಡಿಸಿದೆ. ಇದರ ಮಧ್ಯೆ ಬಾಕ್ಸಾಫೀಸ್ ಗಳಿಕೆ ಹೆಚ್ಚುತ್ತಿರೋದು ಚಿತ್ರತಂಡಕ್ಕೆ ಸಿಕ್ಕಿರೋ ಇನ್ನೊಂದು ಗೆಲುವು. ಒಂದೆಡೆ ವ್ಯವಸ್ಥಿತ ಅಪಪ್ರಚಾರದ ನಡುವೆಯೂ ಸಿನಿಮಾವನ್ನು ಗೆಲ್ಲಿಸಿರೋದು ಚಿತ್ರವನ್ನು ನೋಡಿದ ಪ್ರೇಕ್ಷಕರು ಮತ್ತು ಫ್ಯಾನ್ಸ್. ಚಿತ್ರದ ಬಗ್ಗೆ ಮೌತ್ ಪಬ್ಲಿಸಿಟಿ ಶುರುವಾಗಿದೆ.

    ಮೊದಲ ದಿನ : 35 ಕೋಟಿಗೂ ಹೆಚ್ಚು ಗಳಿಕೆ ಮಾಡಿದ್ದ ಸಿನಿಮಾ 2ನೇ ದಿನ ಕಲೆಕ್ಷನ್‍ನ್ನು ಇನ್ನಷ್ಟು ಹೆಚ್ಚಿಸಿಕೊಂಡಿತು. ಗುರುವಾರ ಮತ್ತು ಶುಕ್ರವಾರ ರಜಾದಿನಗಳಲ್ಲ. ಆದರೆ ಶನಿವಾರ ಮತ್ತು ಭಾನುವಾರ ಗಳಿಕೆ ಮತ್ತಷ್ಟು ಏರಿಕೆಯಾಗಿದೆ. ಒಂದು ಲೆಕ್ಕದ ಪ್ರಕಾರ ಭಾನುವಾರದ ಕಲೆಕ್ಷನ್ ನಂತರ ಚಿತ್ರದ ಕಲೆಕ್ಷನ್ 100 ಕೋಟಿ ದಾಟಿದೆ ಎನ್ನಲಾಗುತ್ತಿದೆ.

    ತೆಲುಗು ಮತ್ತು ಹಿಂದಿಯಲ್ಲಿ ಚಿತ್ರದ ಶೋಗಳ ಸಂಖ್ಯೆ ಏರಿಕೆಯಾಗಿದೆ. ರಣ್‍ಬೀರ್ ಕಪೂರ್ ನಟಿಸಿರೋ ಶಂಷೇರಾ ಚಿತ್ರದ ಗಳಿಕೆಯನ್ನೂ ಹಿಂದಿಕ್ಕಿ ಮುನ್ನುಗ್ಗಿದೆ ವಿಕ್ರಾಂತ್ ರೋಣ. ತೆಲುಗಿನಲ್ಲಿ ರವಿತೇಜಾ ನಟನೆಯ ರಾಮರಾವ್ ಚಿತ್ರಕ್ಕಿಂತ ವಿಕ್ರಾಂತ್ ರೋಣ ಚಿತ್ರದ ಕಲೆಕ್ಷನ್ ಹೆಚ್ಚು. ಡಬ್ಬಿಂಗ್ ಚಿತ್ರಗಳಲ್ಲಿ ವಿಕ್ರಾಂತ್ ರೋಣ ಸಕ್ಸಸ್ ನಂ.3 ಎನ್ನುತ್ತಿದ್ದಾರೆ ಟಾಲಿವುಡ್ ಪಂಡಿತರು.

  • 2ನೇ ವಾರಕ್ಕೆ ವಿಕ್ರಾಂತ್ ರೋಣ : 150 ಕೋಟಿ ಹೊಸ್ತಿಲಲ್ಲಿ..

    2ನೇ ವಾರಕ್ಕೆ ವಿಕ್ರಾಂತ್ ರೋಣ : 150 ಕೋಟಿ ಹೊಸ್ತಿಲಲ್ಲಿ..

    ವಿಕ್ಟರಿ ರೋಣನ ಗೆಲುವಿನ ನಾಗಾಲೋಟ ಮುಂದುವರೆದಿದೆ. ಎಲ್ಲೆಲ್ಲೂ ಚಿತ್ರದ ಬಗ್ಗೆ ಪ್ರಶಂಸೆ ಮತ್ತು ಪಾಸಿಟಿವ್ ಟಾಕ್`ಗಳೇ. ಚಿತ್ರದ ಬಗ್ಗೆ ಶುರುವಾದ ಅಪಪ್ರಚಾರ, ಅಪಸ್ವರಗಳನ್ನೆಲ್ಲ ಮೂಲೆಗುಂಪಾಗಿಸಿ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಈಗ 2ನೇ ವಾರಕ್ಕೆ ಕಾಲಿಟ್ಟಿದೆ.

    ಸಾಮಾನ್ಯವಾಗಿ 2ನೇ ವಾರಕ್ಕೆ ಚಿತ್ರಮಂದಿರ ಮತ್ತು ಶೋಗಳ ಸಂಖ್ಯೆ ಕಡಿಮೆಯಾಗುತ್ತೆ. ಆದರೆ ವಿಕ್ಟರಿ ರೋಣನ ವಿಕ್ಟರಿ ಶೋಗಳ ಸಂಖ್ಯೆ ಹೆಚ್ಚಾಗಿರೋದು ವಿಶೇಷ. ಅಲ್ಲದೆ ಇಂದ ವರಮಹಾಲಕ್ಷ್ಮಿ ಹಬ್ಬ. ಸೋಮವಾರ ಮೊಹರಂ. ನಡುವೆ 4 ದಿನ ರಜೆ. ಇದು ವಿಕ್ರಾಂತ್ ರೋಣ ಚಿತ್ರದ ಕಲೆಕ್ಷನ್‍ನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆ ಇದೆ.

    ಕನ್ನಡದಲ್ಲಿ ವಿಕ್ರಾಂತ್ ರೋಣನ ಕಲೆಕ್ಷನ್ 100 ಕೋಟಿ ಸಮೀಪದಲ್ಲಿದ್ದರೆ, ತೆಲುಗು ಮತ್ತು ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಈ ವಾರವೇ 150 ಕೋಟಿ ದಾಟಬಹುದು ಎಂಬ ನಿರೀಕ್ಷೆ ಚಿತ್ರರಂಗದಲ್ಲಿದೆ.

  • Anup, Gurudutta For Dabangg 3 In Kannada

    anup, gurudutt for dabangg 3 in kannada

    While Bollywood superstar Salman Khan is set to make his sandalwood debut with Dabangg 3, which is releasing in multiple languages including in Kannada, has two more sandalwood connections to it.

    Abhinaya Chakravarthy Kichcha Sudeepa who will be seen in a major role alongside Salman Khan, the Kannada version of Dabangg 3 has two more Kannada filmmakers working for it. One of the youngest filmmakers Gurudutta Ganiga of 'Ambi Ninge Vayassaytho' is penning the Kannada dialogues while another talented filmmaker Anup Bhandari of Rangitaranga has penned the lyrics for the Dabangg 3 in Kannada.

    Salam Khan who is dubbing his own voice after learning it from Namma Kichcha, is another thing to watch out for. Meanwhile, distributor Jack Manju is gearing up for Kannada Dabangg 3 release across the state from December 20.

  • Anup's next is 'Ashwatthama'; To Be Produced By Sudeep

    Anup bandari's next is 'Ashwatthama'; To Be Produced By Sudeep

    The shooting for 'Phantom' is in full progress in Hyderabad. Meanwhile, director Anup Bhandari has announced a new film called 'Ashwatthama' on Monday. One of the highlights is, Sudeep will be producing the film under Kichcha Creations.

    Anup on Monday took to his Twitter account and announced the new film. 'Ashwatthama - one of the greatest warriors and a cursed immortal. Another ambitious project. Thanks Sudeep sir for presenting this and always being there' tweeted Anup Bhandari.

    Sudeep also tweeted that he is happy and excited to announce 'Ashwatthama' to be produced by Kichcha Creations.

    Currently, Anup is busy with 'Phantom', after which he is likely to move on to 'Billa Ranga Basha'. After that 'Ashwatthama' is likely to start. More details are yet awaited.

     

  • RJ Rapid Rashmi Apologises

    rj rapid rashmi apologises in kfcc

    Radio Jockey Rapid Rashmi on Wednesday apologized in front of Karnataka Film Chamber of Commerce president Sa Ra Govindu for provoking Anup Bhandari and Nirup Bhandari hereby hurting the sentiments of Kannadigas.

    Anup Bhandari's latest film 'Rajaratha' starring his brother Nirup Bhandari was released two weeks back and before the release, the Bhandari brothers had participated in a interview with RJ Rapid Rashmi. During the interview, when asked about what will the brothers do if the audience does not watch the film, the brothers had said derogatory remarks. The interview had become viral and the brothers had apologized in social media. Sa Ra Govindu had urged the producers not to attend Rashmi's show.

    On Wednesday afternoon, the RJ came over to KFCC and apologized. Rapid Rashmi said she had no intention of hurting anybody's sentiments and if anybody was hurt she would apologies.

    Related Articles :-

    ಕನ್ನಡಿಗರ ಕ್ಷಮೆ ಕೇಳಿದ ರಾಜರಥ

    Rapid ರಶ್ಮಿ ಡ್ಯಾಶ್ ಸೃಷ್ಟಿಸಿದ ರಾಜರಥ ರಾದ್ಧಾಂತ

    Bhandari Brothers Apologises For Their Remarks

     

  • Shraddha Srinath Bags Phantom

    shraddha srinath bags phantom

    A day after Abhinaya Chakravarthy Kichcha Sudeepa's latest 'Phantom' went on the floors, the film team has confirmed that actress Shraddha Srinath will be playing the female lead in the movie.

    The actress who was last seen alongside Hat-trick Hero and Karunda Chakravarthy Dr. Shivrajkumar in Rustum has Godhra film starring Satish Ninasam up for release in the coming months.

    The first look of Kichcha has gone viral despite the actor keeping it suspense, his overall look as Vikranth Rona in Phantom. 

    According to producer Jack Manju, Shraddha Srinath will be playing the female lead while the team is yet to reveal the character and from when the actress is expected to join the shooting of the film.

     

  • Sudeep takes you to 'The World of Phantom'

    phantom image

    Actor Sudeep on Friday released yet another video of his forthcoming film 'Phantom' which is being currently shot at the Annapurna Studio in Hyderabad.

    Sudeep had recently released a video of the film, and had said that is not a teaser, but an excitement of having started shooting. The half a minute video is a first glimpse into the film and had become viral.

    you_tube_chitraloka1.gif

    Sudeep released yet another sneak-peek into 'The world of Phantom' on Friday. The video was released through social media and Sudeep has said that it is not a teaser, but this is just him taking everybody into 'The World of Phantom'.

    'Phantom' stars Sudeep, Shraddha Srinath and others in prominent roles. The film is written and directed by Anup Bhandari. Jack Manju is producing the film under the Shalini Arts Banner.

  • Vikrant Rona sets OTT on fire 

    Vikrant Rona sets OTT on fire 

    Sudeep starrer Vikrant Rona, which release on Zee 5 OTT for his birthday on September 2 has notched up a record opening. In 24 hours of release, film has witnessed 500 million minutes of streaming. 

    OTT streaming is calculated on how many minutes a content has been watched by all the audience who start watching it put together. 

    Only the Kannada version of the film has been released on September 2. The Telugu version of the film will be released on September 16 in Disney+ Hotstar. The release in Hindi, Tamil and Malayalam has not been announced yet. 

    The 3D version of the film continues to be screened in a few theatres despite the OTT release. The film has become the highest grossing Kannada film for Sudeep. The Anup Bhandari directed film has grossed over Rs.200 crore at the box office.

  • ಅಬ್ಬಬ್ಬಾ..ರಾಜರಥ ಅನೂಪ್ ಟೆನ್ಷನ್ನೇ ಬೇರೆ..!

    rajaratha team had a challenge

    ರಾಜರಥ, ರಂಗಿತರಂಗದ ನಂತರ.. ಅದೇ ಚಿತ್ರತಂಡದಿಂದ  ಬರುತ್ತಿರುವ 2ನೇ ಸಿನಿಮಾ. ಚಿತ್ರದ ಟ್ರೇಲರ್ ಅದ್ಭುತವಾಗಿದೆ. ಪ್ರೇಕ್ಷಕರಿಂದಲೂ ವಂಡರ್‍ಫುಲ್ ರೆಸ್ಪಾನ್ಸ್ ಸಿಕ್ಕಿದೆ. ಆದರೆ, ಚಿತ್ರತಂಡದ, ಅದರಲ್ಲೂ ನಿರ್ದೇಶಕ ಅನೂಪ್ ಅವರ ಟೆನ್ಷನ್ನೇ ಬೇರೆ. ಅವರ ಈ ಟೆನ್ಷನ್‍ಗೆ ಕಾರಣ, ರಂಗಿತರಂಗ.

    ಸುಮಾರು 3 ವರ್ಷಗಳ ಹಿಂದೆ ತೆರೆಕಂಡಿದ್ದಾಗ, ಇಡೀ ಚಿತ್ರತಂಡವೇ ಚಿತ್ರರಂಗಕ್ಕೆ ಹೊಸದು. ಆಗ ಅವರೂ ಹತ್ತರಲ್ಲಿ ಒಬ್ಬರು. ಆದರೆ, ರಂಗಿತರಂಗದ ಮ್ಯಾಜಿಕ್, ಅವರನ್ನು ಹತ್ತರಲ್ಲಿ ಹನ್ನೊಂದಾಗಿಸಿತು. ಈಗ 2ನೇ ಸಿನಿಮಾ. 

    ರಂಗಿತರಂಗ ಚಿತ್ರದ ಸಕ್ಸಸ್ ಆಕಸ್ಮಿಕ ಅಲ್ಲ ಅನ್ನೋದನ್ನು ಪ್ರೂವ್ ಮಾಡಬೇಕಾದ ಹೊಣೆ, ಈಗ ಅನೂಪ್ ಅವರ ಮೇಲಿದೆ. ಚಿತ್ರದ ಬಗ್ಗೆ ಅನೂಪ್ ಅವರಿಗೆ ಆತ್ಮವಿಶ್ವಾಸ ಇದೆ.

    ಚಿತ್ರದ ಹೀರೋ ನಿರೂಪ್ ಅವರಲ್ಲಿ ನಿಮ್ಮನ್ನು ನೀವೇ ನೋಡಿಕೊಳ್ತೀರಿ. ಆತನದ್ದು ಹೆದರುವವರನ್ನು ಹೆದರಿಸುವ, ಹೆದರಿಸುವವರ್ನು ಕಂಡರೆ ತಾನೇ ಹೆದರಿಕೊಳ್ಳುವ ಪಾತ್ರ. ಇನ್ನು ಬಸ್‍ವೊಂದು ಕಥೆ ಹೇಳುವ ಶೈಲಿಯೇ ಹೊಸದು. ಚಿತ್ರದ ಫಸ್ಟ್‍ಹಾಫ್‍ನಲ್ಲಿ ಬರುವ ದೃಶ್ಯಗಳಿಗೆ ಲಿಂಕ್ ಸಿಗುವುದು ದ್ವಿತೀಯಾರ್ಧದಲ್ಲಿ. ಚಿತ್ರದ ಚಿತ್ರೀಕರಣ ನೋಡಿದರೆ, ಅದೊಂದು ಟೂರ್‍ಗೆ ಹೋಗಿ ಬಂದ ಅನುಭವ. ವಿಭಿನ್ನವಾದ ಸಿನಿಮಾ ಇಷ್ಟವಾಗೋದು ಗ್ಯಾರಂಟಿ ಅಂತಾರೆ ಅನೂಪ್.

    ಪ್ರೇಕ್ಷಕರಲ್ಲೂ ಅಂಥದ್ದೇ ಕುತೂಹಲ ಹಾಗೂ ರಾಜರಥ ಟೀಂ ಚೆನ್ನಾಗಿ ಸಿನಿಮಾ ಮಾಡಿರುತ್ತೆ ಅನ್ನೋ ವಿಶ್ವಾಸ ಇದೆ. ಇನ್ನೇನು ಕೆಲವೇ ಗಂಟೆ... ರಾಜರಥದ ಮ್ಯಾಜಿಕ್ ಪ್ರೇಕ್ಷಕರ ಎದುರು ಅನಾವರಣಗೊಳ್ಳಲಿದೆ.

  • ಆಗ ಅಕ್ಕ..ಪಕ್ಕ.. ಈಗ ಗಂಡಕ.. ರವಿಶಂಕರ್ ಗಾಯಕ..!

    rajaratha's gandakka song goes viral

    ಅಕ್ಕ ಪಕ್ಕ ಸಿಕ್ಕಿ ನಕ್ಕ.. ಹಕ್ಕಿ ಪುಕ್ಕ ಹೆಕ್ಕಿ ಮುಕ್ಕ.. ರಾಗಿ ನಕ್ಕು ಕಿಕ್ಕಿರಿದ ಟಕರಕ ಟಕಟ.. ಒಂದ್ಸಲ ಈ ಹಾಡನ್ನು ಯಾವುದೇ ಗ್ಯಾಪ್ ಇಲ್ಲದೆ, ತಡವರಿಸದ ಹೇಳಿ ಬಿಡಿ.. ಕಷ್ಟವಾಗುತ್ತೆ ಅಲ್ವಾ..? ರಂಗಿತರಂಗದಲ್ಲಿ ಇಂಥಾದ್ದೊಂದು ಟಂಗ್ ಟ್ವಿಸ್ಟರ್ ಹಾಡನ್ನಿಟ್ಟು ಪ್ರೇಕ್ಷಕರನ್ನು ಆಕರ್ಷಿಸಿದ್ದ ಅನೂಪ್ ಭಂಡಾರಿ, ರಾಜರಥದಲ್ಲೂ ಅಂಥದ್ದೆ ಮ್ಯಾಜಿಕ್ ಮಾಡೋಕೆ ಹೊರಟಿದ್ದಾರೆ. ಗಂಡಕ ಹಾಡಿನ ಮೂಲಕ ಅಂಥದ್ದೇ ಮ್ಯಾಜಿಕ್ ಸೃಷ್ಟಿಸಿದ್ದಾರೆ.

    ಅಂದಹಾಗೆ ನಿಮಗೆ ಗೊತ್ತಿರಲಿ.. ಗಂಡಕ ಎಂದರೆ ಬೇರೇನೋ ಅಲ್ಲ. ಅದು ಘೇಂಡಾಮೃಗಕ್ಕೆ ಕನ್ನಡದಲ್ಲಿಯೇ ಇರುವ ಪದ. ಹೀಗೆ ಮರೆಯಾಗುತ್ತಿರುವ ಕನ್ನಡದ ಪದವನ್ನು ಹಾಡಿನಲ್ಲಿ ತಂದು ಹೇಳುವ ಸಾಹಸ ಮಾಡಿದೆ ರಾಜರಥ ಚಿತ್ರತಂಡ. ಪ್ರಾಸಕ್ಕೇ ಹೆಚ್ಚು ಒತ್ತು ನೀಡಿರುವ ಹಾಡಿನಲ್ಲಿ ಇಂತಹ ಅಪರೂಪದ ಪದಗಳು ಬರುತ್ತವೆ. ಕನ್ನಡ ಎಷ್ಟು ಸೊಗಸಾಗಿದೆ ಎಂದು ಥ್ರಿಲ್ಲಾಗುವಂತಿದೆ ಎನ್ನುತ್ತಿದ್ದಾರೆ ಅನೂಪ್.

    ಈ ಹಾಡು ಹಾಡಿರುವುದು ರವಿಶಂಕರ್. ಬಹುತೇಕರಿಗೆ ಗೊತ್ತಿರೋ ಹಾಗೆ ರವಿಶಂಕರ್‍ಗೆ ಶಾಸ್ತ್ರೀಯ ಸಂಗೀತದ ಸ್ಪರ್ಶವಿದೆ. ಹೀಗಾಗಿಯೇ ಈ ಹಾಡನ್ನು ಸರಾಗವಾಗಿ ಹಾಡಲು ಸಾಧ್ಯವಾಗಿದೆ. ಸ್ವತಃ ರವಿಶಂಕರ್ ಥ್ರಿಲ್ಲಾಗಿದ್ದಾರೆ. ಆ ಥ್ರಿಲ್ ಪ್ರೇಕ್ಷಕರಿಗೆ ಮಾರ್ಚ್ 23ನೇ ತಾರೀಕು ಸಿಗಲಿದೆ. ಅದು ರಾಜರಥ ಚಿತ್ರಮಂದಿರಕ್ಕೆ ಬರುವ ದಿನ. 

  • ಇಂಗ್ಲಿಷ್'ನಲ್ಲೂ ಬರ್ತಾನೆ ವಿಕ್ರಾಂತ್ ರೋಣ

    ಇಂಗ್ಲಿಷ್'ನಲ್ಲೂ ಬರ್ತಾನೆ ವಿಕ್ರಾಂತ್ ರೋಣ

    ಕನ್ನಡದಲ್ಲಿ ಹೊಸ ದಾಖಲೆ ಬರೆಯಲಿದೆ ಎಂದು ನಿರೀಕ್ಷೆ ಇಟ್ಟುಕೊಂಡಿರೋ ಸಿನಿಮಾ ವಿಕ್ರಾಂತ್ ರೋಣ. ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ಹಲವು ದೇಶಗಳಲ್ಲಿ ರಿಲೀಸ್ ಮಾಡಿ ದಾಖಲೆ ಬರೆಯಲು ಹೊರಟಿರೋ ಚಿತ್ರವಿದು. ಈ ಕನ್ನಡದ ಚಿತ್ರ ಈಗ ಇಂಗ್ಲಿಷ್‍ನಲ್ಲೂ ಬರಲಿದೆ ಅನ್ನೋದು ಪಕ್ಕಾ ನ್ಯೂಸ್. ಚಿತ್ರದ ಇಂಗ್ಲಿಷ್ ಡಬ್ಬಿಂಗ್‍ನ್ನು ಸ್ವತಃ ಸುದೀಪ್ ಈಗಾಗಲೇ ಮುಗಿಸಿಕೊಟ್ಟಿದ್ದಾರೆ. ಇದೂ ಒಂದು ದಾಖಲೆಯೇ. ಇಂಗ್ಲಿಷ್ ಭಾಷೆಗೆ ಡಬ್ಬಿಂಗ್ ಮಾಡಿದ ಮೊದಲ ಕನ್ನಡ ನಟ ಸುದೀಪ್.

    ಕಿಚ್ಚ ಸುದೀಪ್, ಅನೂಪ್ ಭಂಡಾರಿ ಕಾಂಬಿನೇಷನ್‍ನ ಸಿನಿಮಾ ವಿಕ್ರಾಂತ್ ರೋಣ. ನಿರೂಪ್ ಭಂಡಾರಿ, ನೀತು ಅಶೋಕ್, ರವಿಶಂಕರ್ ಗೌಡ, ಜಾಕ್ವೆಲಿನ್ ಫರ್ನಾಂಡಿಸ್ ನಟಿಸಿರೋ ಚಿತ್ರವಿದು.

    ಜಾಕ್ ಮಂಜು ನಿರ್ಮಾಣದ ಚಿತ್ರ 3ಡಿ ವರ್ಷನ್‍ನಲ್ಲೂ ಬರಲಿದೆ. ಕನ್ನಡ, ಇಂಗ್ಲಿಷ್ ಸೇರಿದಂತೆ ಒಟ್ಟು 10 ಭಾಷೆಗಳಲ್ಲಿ ರಿಲೀಸ್ ಆಗಲಿದೆ.

  • ಏಪ್ರಿಲ್ 7ರಿಂದ ಯೂರೋಪ್‍ನಲ್ಲಿ ರಾಜರಥ 

    rajaratha to show in europe

    ರಾಜರಥ. ಅನೂಪ್ ಭಂಡಾರಿ ನಿರ್ದೇಶನದ, ನಿರೂಪ್ ಭಂಡಾರಿ, ಆವಂತಿಕಾ ಶೆಟ್ಟಿ ಅಭಿನಯದ ಈ ಸಿನಿಮಾ, ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿಮರ್ಶೆಗಳು ವಿಭಿನ್ನವಾಗಿದ್ದರೂ, ಪ್ರೇಕ್ಷಕರ ಪ್ರತಿಕ್ರಿಯೆ ಅದ್ಭುತವಾಗಿದೆ ಎಂದು ಖುಷಿಯಾಗಿದ್ದಾರೆ ನಿರ್ದೇಶಕ ಅನೂಪ್. ಚಿತ್ರ ಇದೇ ಏಪ್ರಿಲ್ 7ನೇ ತಾರೀಕು ಯೂರೋಪ್‍ನಲ್ಲಿ ಬಿಡುಗಡೆಯಾಗುತ್ತಿದೆ. ಅಮೆರಿಕದಲ್ಲಿ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ಗಿಟ್ಟಿಸಿದೆ ರಾಜರಥ.

    ಇನ್ನು ಚಿತ್ರಕ್ಕೆ ಇನ್ನಷ್ಟು ಪ್ರಚಾರ ಬೇಕಿದೆ ಎಂದು ನಿರ್ಧರಿಸಿರುವ ಚಿತ್ರತಂಡ, ಈ ವಾರದಿಂದಲೇ ರಥಯಾತ್ರೆ ಶುರು ಮಾಡುತ್ತಿದೆ. ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗ.. ಹೀಗೆ ಎಲ್ಲ ಕಡೆ ರಾಜರಥದ ಯಾತ್ರೆ ಶುರುವಾಗಲಿದೆ.

    ಅಷ್ಟೇ ಅಲ್ಲ, ಚಿತ್ರದಲ್ಲಿ ಬಳಸಿರುವ ಬೈಕ್‍ನ್ನು ಅದೃಷ್ಟಶಾಲಿ ಪ್ರೇಕ್ಷಕರಿಗೆ ಉಡುಗೊರೆಯಾಗಿ ನೀಡಲು ಚಿತ್ರತಂಡ ನಿರ್ಧರಿಸಿದೆ. ನೀವು ಸಿನಿಮಾ ನೋಡಿ ಬರುವಾಗ ಚಿತ್ರದ ಟಿಕೆಟ್ ಮೇಲೆ ನಿಮ್ಮ ಹೆಸರು, ನಂಬರ್ ಬರೆದು ಚಿತ್ರತಂಡ ಇಟ್ಟಿರುವ ಬಾಕ್ಸ್‍ನಲ್ಲಿ ಹಾಕಿ ಬನ್ನಿ. ಅದೃಷ್ಟ ಅದ್ಭುತವಾಗಿದ್ದರೆ, ನಿಮಗೆ ಆ ಬೈಕ್ ಸಿಗುತ್ತೆ. 

  • ಕನ್ನಡಿಗರ ಕ್ಷಮೆ ಕೇಳಿದ ರಾಜರಥ

    bhandari brothers apologises

    ಭಂಡಾರಿ ಬ್ರದೡೞ ತಂಡದ ರಾಜರಥ ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆ ವಿವಾದಾತ್ಮಕವಾಗಿತ್ತು. ಈ ಹಿನ್ನೆಲೆಯಲ್ಲಿ ಚಿತ್ರತಂಡ ಕನ್ನಡಗಿರ ಕ್ಷಮೆ ಕೇಳಿದೆ.

    ಆರ್‌.ಜೆ ರಶ್ಮಿ ನಡೆಸಿಕೊಡುವ ಕಾರ್ಯಕ್ರಮವೊಂದರಲ್ಲಿ 'ರಾಜರಥ ನೋಡಿಲ್ಲ ಅಂದ್ರೆ ಅಂತಹ ಆ ಪ್ರೇಕ್ಷಕನನ್ನು ಡ್ಯಾಶ್ ಅನ್ನುತ್ತೀರಾ ಎಂಬ ಪ್ರಶ್ನೆಗೆ , ನಿರ್ದೇಶಕ ಅನೂಪ್‌ ಮತ್ತು ನಟ ನಿರೂಪ್‌ ಇಬ್ಬರು 'ಕಚಡ ನನ್‌ ಮಗ', 'ಕಚಡ ಲೋಫರ್‌ ನನ್‌ ಮಕ್ಳು' ಅಂತ ಹೇಳುತ್ತಾರೆ. ಆ ಹೇಳಿಕೆಯಿರುವ ವಿಡಿಯೋ  ವೈರಲ್ ಆಗಿತ್ತು. ಕನ್ನಡಿಗರು ರಾಜರಥ ತಂಡದವರನ್ನು ತರಾಟೆಗೆ ತೆಗೆದುಕೊಂಡಿದ್ದರು.  ಈ ಕುರಿತು ಚಿತ್ರತಂಡ ಈಗ ಕನ್ನಡಿಗರ ಕ್ಷಮೆ ಕೇಳಿದೆ. 

    'ರಾಜರಥ ಚಿತ್ರದ ಬಿಡುಗಡೆಗೆ ಮುನ್ನ ಭಾಗವಹಿಸಿದ ಒಂದು ಹಾಸ್ಯಮಯ ಕಾರ್ಯಕ್ರಮದ ಸಣ್ಣ ತುಣುಕು ನಿಮ್ಮೆಲ್ಲರಿಗು ನೋವುಂಟು ಮಾಡಿರುವುದಕ್ಕೆ ಕ್ಷಮೆ ಯಾಚಿಸುತ್ತೇವೆ. ಸಂದರ್ಶನಕ್ಕೂ ಮುನ್ನ, ಹಲವರು ಕನ್ನಡ ಸಿನಿಮಾ ನೋಡುವುದಿಲ್ಲ, ಹಲವಾರು ಒಳ್ಳೆ ಚಿತ್ರಗಳು ಬರುತ್ತಿವೆ ಆದರು ಏಕೆ ಹೀಗೆ, ಎಂದು ಚರ್ಚಿಸಿದ್ದೆವು. ಹಾಗೆ ಸಂದರ್ಶನದಲ್ಲಿ ಬಂದ ಪ್ರಶ್ನೆಗೆ ಆ ಹಿನ್ನೆಲೆಯಲ್ಲಿ ಕೊಟ್ಟ ತಪ್ಪು ಉತ್ತರ ಅದು. ಇದು ಖಂಡಿತವಾಗಿಯು ಕನ್ನಡ ಪ್ರೇಕ್ಷಕರನ್ನು ಉದ್ದೇಶಿಸಿ ಹೇಳಿದ ಮಾತಲ್ಲ' ಎಂದಿದ್ದಾರೆ ಅನೂಪ್ ಭಂಡಾರಿ. 

    ನಿರೂಪ್ ಭಂಡಾರಿ ಸಹ ಈ ಕುರಿತು ಕ್ಷಮೆಯಾಚಿಸಿದ್ದಾರೆ. ಫೇಸ್‌ಬುಕ್ ಲೈವ್ ಶೋನಲ್ಲಿ ನಮ್ಮ ಕಾಮೆಂಟ್‌ನಿಂದ ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿ. ಇದು ಉದ್ದೇಶಪೂರ್ವಕ ಅಲ್ಲ. ಪ್ರೇಕ್ಷಕರ ಬಗ್ಗೆ ನಮಗೆ ತುಂಬಾ ಕಾಳಜಿ ಇದೆ. ಎಲ್ಲಾ ಸಂದರ್ಶನಗಳಲ್ಲೂ ನಾವು ಇದನ್ನು ಒತ್ತಿ ಹೇಳಿದ್ದೇವೆ. ಇಂದು ನಾವು ಈ ಸ್ಥಿತಿಯಲ್ಲಿದ್ದೇವೆ ಎಂದರೆ ಅದಕ್ಕೆ ಪ್ರೇಕ್ಷಕರೇ ಕಾರಣ ಎಂದಿದ್ದಾರೆ.

    ಬಹುಶಃ ಪೂರ್ತಿ ಸಂದರ್ಶನವನ್ನು ನೋಡಿದ್ದರೆ, ಇದೊಂದು ಹಾಸ್ಯಮಯ ಎಂದು ಅರಿವಾಗುತ್ತಿತ್ತೇನೋ.. ಆದರೆ, ಸಂದರ್ಶನದ ಅಷ್ಟು ಭಾಗವನ್ನಷ್ಟೇ ಎಡಿಟ್ ಮಾಡಿ, ಅದು ವೈರಲ್ ಆದ ಕಾರಣ, ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿದೆ. 

    Related Articles :-

    Rapid ರಶ್ಮಿ ಡ್ಯಾಶ್ ಸೃಷ್ಟಿಸಿದ ರಾಜರಥ ರಾದ್ಧಾಂತ

    Bhandari Brothers Apologises For Their Remarks

  • ಕೆಜಿಎಫ್ ನಂತರ ಶಿವಕುಮಾರ್ ಸೃಷ್ಟಿಸಿದ ವಿಕ್ರಾಂತ್ ರೋಣನ ಜಗತ್ತು..!

    ಕೆಜಿಎಫ್ ನಂತರ ಶಿವಕುಮಾರ್ ಸೃಷ್ಟಿಸಿದ ವಿಕ್ರಾಂತ್ ರೋಣನ ಜಗತ್ತು..!

    ಎಲ್ಲವೂ ಕಾಡು.. ಕಾಡಿನ ಮಧ್ಯೆ ಒಂದು ಜಲಪಾತ.. ಗುಹೆಗಳು.. ಎಲ್ಲವೂ ಕಾಡಿನಂತೆಯೇ ಕಾಣುತ್ತಿದೆ. ಆದರೆ.. ಅದು ಕಾಡಲ್ಲ. ಕಾಡಿನ ತರಾ.. ಏಕೆಂದರೆ ಈ ಕಾಡು ಸೃಷ್ಟಿಸಿದ್ದು ಶಿವಕುಮಾರ್. ಕೆಜಿಎಫ್ ಚಾಪ್ಟರ್ 2ನಲ್ಲಿ ಸಂಚಲನ ಸೃಷ್ಟಿಸಿದ್ದ ಶಿವಕುಮಾರ್ ವಿಕ್ರಾಂತ್ ರೋಣನಿಗಾಗಿ ಸೃಷ್ಟಿಸಿರುವ ಜಗತ್ತು ಇನ್ನೂ ಒಂದು ಕೈಮೇಲೆ ಎನ್ನುವಂತಿದೆ.

    ಈ ಚಿತ್ರಕ್ಕಾಗಿ ಕಾಡಿನ ಸೆಟ್ಟಿಗಾಗಿ 22 ಟ್ರಕ್‍ಗಳಲ್ಲಿ ಗಿಡ ತರಿಸಿಕೊಂಡಿದ್ದೇವೆ ಎನ್ನುತ್ತಾರೆ ಶಿವಕುಮಾರ್. 22 ಟ್ರಕ್ ಸಸಿಗಳು ಎನ್ನುವಾಗಲೇ ಚಿತ್ರದ ದೊಡ್ಡ ಕ್ಯಾನ್‍ವಾಸ್ ಅರ್ಥವಾಗಿ ಬಿಡುತ್ತದೆ. ಗಿಡಗಳನ್ನು ನೋಡಿಕೊಳ್ಳಲೆಂದೇ ಕೆಲವರನ್ನು ಕೆಲಸಕ್ಕಿಟ್ಟಿದ್ದರಂತೆ. ಪ್ರತಿ 20 ದಿನಗಳಿಗೊಮ್ಮೆ ಸೆಟ್`ನ ವಾತಾವರಣ ಬದಲಾಗದಂತೆ ಅಷ್ಟೂ ಗಿಡಗಳನ್ನು ಬದಲಿಸಬೇಕಿತ್ತು. ಮೊದಲು ಚೀನಾದಿಂದ ಕೃತಕ ಗಿಡಗಳನ್ನು ತರಿಸುವ ಪ್ಲಾನ್ ಇತ್ತು. ಕೊರೊನಾ ಎಲ್ಲವನ್ನೂ ಬದಲಿಸಿತು. ಇಲ್ಲಿಯೇ ಫಾರ್ಮ್‍ಗಳಿಂದ ತರಿಸಿಕೊಳ್ಳಲಾಯಿತು. ಕಾಡಿನ ಮಾದರಿಯ ನೆಲವನ್ನು ಸೃಷ್ಟಿಸೋಕೆ ವಿವಿಧ ಲೇಯರ್‍ಗಳನ್ನು ಸೃಷ್ಟಿಸಿ ಸಹಜವೆಂಬಂತೆ ಮಾಡಲಾಯಿತು ಎಂದೆಲ್ಲ ವಿವರ ನೀಡಿದ್ದಾರೆ ಶಿವಕುಮಾರ್.

    ಇದುವರೆಗೆ ರಿಲೀಸ್ ಆಗಿರುವ ಟೀಸರ್, ಟ್ರೇಲರುಗಳಲ್ಲಿಯೇ ಶಿವಕುಮಾರ್ ಸೃಷ್ಟಿಸಿರುವ ಹೊಸ ಜಗತ್ತು ಬೆರಗು ಹುಟ್ಟಿಸಿದೆ. ನಿರ್ದೇಶಕ ಅನೂಪ್ ಭಂಡಾರಿಯವರ ಕನಸಿನ ಲೋಕವನ್ನು ಯಥಾವತ್ತು ಕಟ್ಟಿಕೊಟ್ಟಿದ್ದೇನೆ ಎನ್ನುವ ವಿಶ್ವಾಸ ಶಿವಕುಮಾರ್ ಮಾತಿನಲ್ಲಿದೆ. ಚಿತ್ರಕ್ಕಾಗಿ ಇದೇ ಮಾದರಿಯ ಒಟ್ಟು 14 ಸೆಟ್‍ಗಳನ್ನು ಸೃಷ್ಟಿಸಲಾಗಿತ್ತಂತೆ..

  • ಗರಗರಗರ ಜರ್ಬ : ಅವರೆಲ್ಲರನ್ನೂ ಪರಿಚಯ ಮಾಡ್ಕೊಂಡ್ರಾ?

    ಗರಗರಗರ ಜರ್ಬ : ಅವರೆಲ್ಲರನ್ನೂ ಪರಿಚಯ ಮಾಡ್ಕೊಂಡ್ರಾ?

    ಗರಗರಗರ ಗಗ್ಗರ ಜರ್ಬ

    ಪಿರನಲ್ಕುರಿ ನೆತ್ತರ ಪರ್ಬ..

    ವಿಕ್ರಾಂತ್ ರೋಣ. ತೆರೆಯ ಮೇಲೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ನೋಡಿದವರೆಲ್ಲ ಫುಲ್ ಖುಷ್. ಅನೂಪ್ ಭಂಡಾರಿ ಸೃಷ್ಟಿಸಿರುವ 3ಡಿ ಜಗತ್ತು ನಮ್ಮ ಅಕ್ಕಪಕ್ಕವೇ ನಡೆಯುತ್ತಿರುವಂತೆ ಭಾಸವಾಗುತ್ತದೆ. ಪ್ರೇಕ್ಷಕರೂ ಖುಷಿ ಖುಷಿ. ಅಂದಹಾಗೆ ಚಿತ್ರದಲ್ಲಿ ವಿಕ್ರಾಂತ್ ರೋಣ ಪ್ರಮುಖ ಪಾತ್ರಧಾರಿ. ಆದರೆ.. ಅವರ ಸುತ್ತಲೂ ಇರೋ ಪಾತ್ರಗಳ ಗತ್ತು ಗೈರತ್ತುಗಳೇ ಬೇರೆ.

    ನಿರೂಪ್ ಭಂಡಾರಿ ಅವರದ್ದು ಇಲ್ಲಿ ಸಂಜೀವ್ ಗಾಂಭಿರ ಅನ್ನೋ ಪಾತ್ರ. ಹೆಸರಲ್ಲಷ್ಟೇ ಗಾಂಭೀರ್ಯ. ಮಿಕ್ಕಂತೆ ಫುಲ್ ತರಲೆ.

    ಪನ್ನ ಅಂದ್ರೆ ಅಪರ್ಣಾ ಬಲ್ಲಾಳ್. ಚಿನಕುರುಳಿ ಪಟಾಕಿ ಹುಡುಗಿ. ನೀತಾ ಅಶೋಕ್ ನಟಿಸಿರುವ ಪಾತ್ರ ಫುಲ್ ಅಡ್ವೆಂಚರಸ್ ಕ್ಯಾರೆಕ್ಟರ್.

    ಈಕೆಯ ಜೊತೆ ಇರುವ ಪಾತ್ರವೇ ಮುನ್ನ. ಈಕೆಯ ಅವಳಿ ಸಹೋದರ. ಸಿದ್ದು ಮೂಲಿಮನಿ ನಟಿಸಿರೋ ಪಾತ್ರ.

    ವಿಶ್ವನಾಥ್ ಬಲ್ಲಾಳ್ ಪಾತ್ರದಲ್ಲಿ ರವಿಶಂಕರ್ ಗೌಡ ನಟಿಸಿದ್ದಾರೆ. ಕಾಮಿಡಿ ಜಾನರ್ ಬಿಟ್ಟು ಬೇರೆಯದೇ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಮಧುಸೂಧನ್ ರಾವ್ ಜನಾರ್ಧನ್ ಗಾಂಭೀರ ಪಾತ್ರದಲ್ಲಿ ನಟಿಸಿದ್ದಾರೆ. ವಾಸುಕಿ ವೈಭವ್ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ರಕ್ಕಮ್ಮನ ಕಥೆ ಬಿಡಿ.. ಯಕ್ಕಸಕ್ಕ.. ಯಕ್ಕಸಕ್ಕ..

  • ಗುಮ್ಮ ಬಂದೇಬಿಟ್ಟ..

    ಗುಮ್ಮ ಬಂದೇಬಿಟ್ಟ..

    ವಿಕ್ರಾಂತ್ ರೋಣ ಚಿತ್ರದ ನಾಲ್ಕನೇ ಹಾಡು ಇದು. ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣನ ಬಗ್ಗೆ ದಿನೇ ದಿನೇ ಕುತೂಹಲ ಹೆಚ್ಚುತ್ತಲೇ ಹೋಗುತ್ತಿದೆ. ಚಿತ್ರದ ಮೊದಲ ಕುತೂಹಲವೇ ಗುಮ್ಮ. ಏನಿದು ಗುಮ್ಮ ಎಂಬ ಕುತೂಹಲ ಹುಟ್ಟಿಸಿಯೇ ಚಿತ್ರದ ಬಗ್ಗೆ ಕ್ರೇಜ್ ಹೆಚ್ಚಿಸಿದ್ದ ಅನೂಪ್ ಭಂಡಾರಿ ಈಗ ಚಿತ್ರದ 4ನೇ ಹಾಡಿನ ಲಿರಿಕಲ್ ವಿಡಿಯೋ ಬಿಟ್ಟಿದ್ದಾರೆ.

    ದ ಡೆವಿಲ್ಸ್ ಫ್ಯುರಿ ಹೆಸರಿನ ಈ ಹಾಡು ವಿಕ್ರಾಂತ್ ರೋಣ ಚಿತ್ರದ ಥೀಮ್ ಸಾಂಗ್ ಕೂಡಾ. ಅಜನೀಶ್ ಲೋಕನಾಥ್ ಸಂಗೀತದ ಹಾಡಿಗೆ ಸಾಹಿತ್ಯ ನಿರ್ದೇಶಕ ಅನೂಪ್ ಭಂಡಾರಿ ಅವರದ್ದೇ. ಅನೂಪ್, ಅಜನೀಶ್ ಕೂಡಾ ಹಾಡುಗಾರರ ಲಿಸ್ಟಿನಲ್ಲಿದ್ದು, ದೀಪಕ್ ಬ್ಲೂ ಮತ್ತು ಹರ್ಷಿಕಾ ವೇದಾಂತ್ ಹಾಡಿಗೆ ದನಿಗೂಡಿಸಿದ್ದಾರೆ.

    ಈಗಾಗಲೇ ರಾರಾ ರಕ್ಕಮ್ಮ, ರಾಜಕುಮಾರಿ, ಹೇ ಫಕೀರ ಹಾಡುಗಳು ಕ್ರೇಜ್ ಹುಟ್ಟುಹಾಕಿವೆ. ಈಗ ಗುಮ್ಮನ ಟೈಮು.

    ರಂಗಿತರಂಗ ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಚಿತ್ರಕ್ಕೆ ಬಂಡವಾಳ ಹೂಡಿರೋದು ಜಾಕ್ ಮಂಜು. ನಿರೂಪ್ ಭಂಡಾರಿ, ನೀತು ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಕೂಡಾ ನಟಿಸಿರೋ ಚಿತ್ರ ಜುಲೈ 28ಕ್ಕೆ ರಿಲೀಸ್ ಆಗಲಿದೆ. ಇನ್ನೊಂದೇ ಒಂದು ವಾರ.. ಗುಮ್ಮನ್ನ ನೋಡೇಬಿಡೋಣ...

  • ಗೊತ್ತಿಲ್ಲದೆ ಆದ ತಪ್ಪಿಗೆ ಕ್ಷಮೆ ಇರಲಿ - ಆವಂತಿಕಾ ಶೆಟ್ಟಿ

    avantika shetty apologises to kannadadigas

    ರಾಜರಥ ಚಿತ್ರದ ನಾಯಕಿ ಆವಂತಿಕಾ ಶೆಟ್ಟಿ ರಾಜರಥ ಚಿತ್ರದ `ಕ.....ಕ್ಳು' ವಿವಾದದ ಬಗ್ಗೆ ಕನ್ನಡಿಗರ ಕ್ಷಮೆ ಕೇಳಿದ್ದಾರೆ. ನನಗೆ ಅದು ಅಷ್ಟು ಕೆಟ್ಟ ಪದ ಎಂಬುದು ಗೊತ್ತಿರಲಿಲ್ಲ. ನಾನು ಇನ್ನೂ ಈಗ ಕನ್ನಡ ಕಲಿಯುತ್ತಿದ್ದೇನೆ. ಗೊತ್ತಿಲ್ಲದೇ ಆದ ತಪ್ಪಿಗೆ ಕ್ಷಮಿಸಿಬಿಡಿ ಎಂದು ಕೇಳಿಕೊಂಡಿದ್ದಾರೆ.

    ಆವಂತಿಕಾ ಶೆಟ್ಟಿ ಮೂಲತಃ ಕನ್ನಡದವರೇ ಆದರೂ, ಹುಟ್ಟಿ ಬೆಳೆದಿರುವುದು ಮುಂಬೈನಲ್ಲಿ. ಹೀಗಾಗಿ ಈಗ ಕನ್ನಡ ಕಲಿಯುತ್ತಿರುವ ಆವಂತಿಕಾ ಶೆಟ್ಟಿ, `ಕ.....ಕ್ಳು' ಡೈಲಾಗ್‍ಗೆ ಕ್ಷಮೆ ಕೇಳಿದ್ದಾರೆ. ಇನ್ನು ಮುಂದೆ ಈ ರೀತಿಯ ವಿವಾದಗಳು ಆಗುವುದಿಲ್ಲ. ಗೊತ್ತಿಲ್ಲದೆ ಆದ ತಪ್ಪನ್ನು ಮನ್ನಿಸಿಬಿಡಿ. ಇದೀಗ ತಾನೆ ಬೆಳೆಯುತ್ತಿರುವ ನಮ್ಮನ್ನು ಹರಸಿ ಆಶೀರ್ವದಿಸಿ ಎಂದು ಮನವಿ ಮಾಡಿದ್ದಾರೆ.

     

  • ಚಡ್ಡಿ ತೊಟ್ಟ ನಾಯಕನ ಕಟೌಟ್ - ರಾಜರಥ ಸ್ಪೆಷಲ್

    rajaratha's cut out is also different

    ಹೊಸ ಸಿನಿಮಾವೊಂದು ರಿಲೀಸ್ ಆಗುವಾಗ ಚಿತ್ರದ ಹೀರೋ ಕಟೌಟ್ ನಿಲ್ಲಿಸೋದು ಸಾಮಾನ್ಯ. ಕೆಲವೊಮ್ಮೆ ನಿರ್ದೇಶಕರ ಕಟೌಟ್‍ನ್ನೂ ಹಾಕ್ತಾರೆ. ನಾಯಕರ ಕಟೌಟ್‍ನ್ನು ವಿಭಿನ್ನವಾಗಿ, ವಿಶಿಷ್ಟವಾಗಿ ಮಾಡಿಸಿ, ಎತ್ತರದ ಕಟೌಟ್ ಮಾಡಿಸಿ ಪ್ರಮುಖ ಥಿಯೇಟರ್‍ಗಳ ಎದುರು ನಿಲ್ಲಿಸೊದು ಹೊಸದನೇನಲ್ಲ. ಆದರೆ, ಇಲ್ಲಿಯೂ ರಾಜರಥ ಚಿತ್ರತಂಡ ವಿಭಿನ್ನತೆ ಮೆರೆದಿದೆ.

    ರಾಜರಥ ಚಿತ್ರದ ಹೀರೋ ನಿರೂಪ್ ಭಂಡಾರಿ ಕಟೌಟ್‍ನ್ನು ಥಿಯೇಟರ್‍ಗಳ ಮುಂದೆ ಹಾಕಲಾಗಿದೆ. ಆದರೆ, ಹೀರೋ ಇರೋದು ಸೂಪರ್‍ಮ್ಯಾನ್ ಶೈಲಿಯಲ್ಲಿ. ಆದರೆ, ಚಡ್ಡಿಯಲ್ಲಿ. ಬಹುಶಃ, ಚಡ್ಡಿಯಲ್ಲಿ ನಿಂತ ನಾಯಕನ ಕಟೌಟ್ ಹಾಕಿರೋದು ಇದೇ ಮೊದಲಿರಬೇಕು. 

    ಕಟೌಟ್‍ನಲ್ಲಿ ಪುನೀತ್ ಅವರೂ ಇದ್ದಾರೆ. ಅಂದಹಾಗೆ ಚಿತ್ರದಲ್ಲಿ ರಾಜರಥ ಎಂದರೆ, ಪುನೀತ್ ಅವರೇ. ಈಗಾಗಲೇ ಟಿಕೆಟ್ ಬುಕಿಂಗ್ ಶುರುವಾಗಿದ್ದು, ರಾಜರಥದ ಜೋರು ಕಾಣುತ್ತಿದೆ.