` natasarvabhowma, - chitraloka.com | Kannada Movie News, Reviews | Image

natasarvabhowma,

  • ನಿರ್ದೇಶಕ ಪವನ್ ಒಡೆಯರ್ ಬಿಚ್ಚಿಟ್ಟ ನಟಸಾರ್ವಭೌಮ ರಹಸ್ಯ

    pavan wadeyar talks about natasarvabhouma

    ನಟ, ನಿರ್ದೇಶಕ ಪವನ್ ಒಡೆಯರ್, ಈಗ ನಟಸಾರ್ವಭೌಮನ ಜೋಶ್‍ನಲ್ಲಿದ್ದಾರೆ. ಸಿನಿಮಾ ಮೇಲಿನ ನಿರೀಕ್ಷೆ ದಿನೇ ದಿನೇ ಹೆಚ್ಚುತ್ತಲೇ ಇದೆ. ರಾಕ್‍ಲೈನ್-ಪುನೀತ್-ಪವನ್-ರಚಿತಾ-ಬಿ.ಸರೋಜಾದೇವಿ.. ಹೀಗೆ ಸಿನಿಮಾ ನೋಡೋಕೆ ಒಬ್ಬೊಬ್ಬರಿಗೂ ಹತ್ತು ಹತ್ತು ಕಾರಣಗಳಿವೆ. ಹೀಗಿರುವಾಗಲೇ ನಟಸಾರ್ವಭೌಮ ಚಿತ್ರದ ಕುರಿತು ಕೆಲವು ಸ್ವಾರಸ್ಯಗಳನ್ನು ಪವನ್ ಒಡೆಯರ್ ಹೊರಹಾಕಿದ್ದಾರೆ.

    ನಟಸಾರ್ವಭೌಮದಲ್ಲಿ ಇಬ್ಬರು ನಾಯಕಿಯರು. ಹಾಗಂತ ತ್ರಿಕೋನ ಪ್ರೇಮಕಥೆ ಎಂದು ಹೇಳೋಕೆ ಸಾಧ್ಯವಿಲ್ಲ. ಹಾರರ್ ಸಿನಿಮಾ ಎನ್ನುವುದಂತೂ ಹೌದು. ಇದು ತಮಿಳಿನ ಕೋ ಚಿತ್ರದ ರೀಮೇಕ್ ಅಲ್ಲ. ನಾನು ರೀಮೇಕ್ ಮಾಡಿಲ್ಲ. ಮಾಡುವುದೂ ಇಲ್ಲ.

    ನಟಸಾರ್ವಭೌಮ ಚಿತ್ರದ ಶೀರ್ಷಿಕೆಗೆ ಮೊದಲು ನೋ ಎಂದವರೇ ಪುನೀತ್. ಕೊನೆಗೆ ಕಥೆ, ಚಿತ್ರಕಥೆ ಕೇಳಿದ ಮೇಲೆ ಒಪ್ಪಿಕೊಂಡರು. ಚಿತ್ರದಲ್ಲಿ ಪುನೀತ್ ಪಾತ್ರ ಕ್ಷಣಕ್ಕೊಮ್ಮೆ ಬದಲಾಗುತ್ತಿರುತ್ತೆ. ಪುನೀತ್ ಅಭಿನಯಕ್ಕೆ ಸಿನಿಮಾದಲ್ಲಿ ಸ್ಕೋಪ್ ಹೆಚ್ಚು. ಆ ಸವಾಲನ್ನು ಪುನೀತ್ ಅದ್ಭುತವಾಗಿ ನಿರ್ವಹಿಸಿದ್ದಾರೆ.

    ಚಿತ್ರದ ಕಥೆಯ ಜರ್ನಿ ಬೆಂಗಳೂರಿನಿಂದ ಕೋಲ್ಕತ್ತಾವರೆಗೆ ಹೋಗಲಿದೆ. ಇದು ಸಿನಿಮಾ ಅಷ್ಟೇ ಅಲ್ಲ, ಒಂದು ಸುಂದರ ಜರ್ನಿ ಎನ್ನುತ್ತಾರೆ ಪವನ್.

  • ಪವರ್ ಡ್ಯಾನ್ಸ್‍ಗೆ ಪೈಲ್ವಾನ್ ಕಿಚ್ಚ ವೇಯ್ಟಿಂಗ್..!

    pailwan awaiting for natasarvabhouma's power dance

    ಕಿಚ್ಚ ಸುದೀಪ್‍ರ ಡೆಡಿಕೇಷನ್, ಕುಸ್ತಿಯ ಪಟ್ಟುಗಳಿಗೆ ದೇಶದ ಚಿತ್ರೋದ್ಯಮದ ಗಣ್ಯರೆಲ್ಲ ವ್ಹಾವ್ ಎನ್ನುತ್ತಿದ್ದಾರೆ. ಸುದೀಪ್‍ಗೆ ಸಲಾಂ ಎನ್ನುತ್ತಿದ್ದಾರೆ. ಹಾಗೆಯೇ.. ಕನ್ನಡದ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಕೂಡಾ ಸುದೀಪ್‍ರ ಪೈಲ್ವಾನ್ ಟೀಸರ್‍ನ್ನು ಹೊಗಳಿದ್ದರು. ಇಂತಹ ಸಾಧನೆಗಳ ಮೂಲಕವೇ ನೀವು ನಮಗೆಲ್ಲ ಸ್ಫೂರ್ತಿ ಎಂದು ಹೇಳಿ ಶುಭ ಹಾರೈಸಿದ್ದರು.

    ಸಂತೋಷ್ ಶುಭ ಹಾರೈಕೆಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್,  ನಿಮ್ಮ ಮುಂದಿನ ಚಿತ್ರ ಯುವರತ್ನಕ್ಕಾಗಿ ಎದುರು ನೋಡುತ್ತಿರುವೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಸ್ಪೀಡ್ ಡ್ಯಾನ್ಸ್‍ಗೆ ಕಾಯುತ್ತಿರುವೆ ಎಂದಿದ್ದಾರೆ.

  • ಪುನೀತ್ ಎದುರು ಕಾಲಕೇಯನ ಆರ್ಭಟ

    puneeth's face off with baahubali's kalakeya

    ಬಾಹುಬಲಿ 2 ಸಿನಿಮಾದಲ್ಲಿ ಜಿಬರಿಷ್ ಭಾಷೆಯ ಮೂಲಕ ಗಮನ ಸೆಳೆದಿದ್ದ ಕಾಲಕೇಯ ಪ್ರಭಾಕರ್, ಈಗ ಪುನೀತ್ ಎದುರು ನಟಿಸೋಕೆ ಬರುತ್ತಿದ್ದಾರೆ. ನಟಸಾರ್ವಭೌಮ ಸಿನಿಮಾದಲ್ಲಿ ಪುನೀತ್ ಎದುರು ವಿಲನ್ ಆಗಿರುವುದು ಪ್ರಭಾಕರ್. ಪ್ರಭಾಕರ್‍ಗೆ ಕನ್ನಡ ಚಿತ್ರಗಳು ಹೊಸದೇನಲ್ಲ. 

    ಬಾಹುಬಲಿಗೂ ಮುನ್ನ ಪ್ರಭಾಕರ್, ಆರ್.ಚಂದ್ರು ನಿರ್ದೇಶನದ ಕೋಕೋ, ಲಕ್ಷ್ಮಣ ಸಿನಿಮಾದಲ್ಲಿ ನಟಿಸಿದ್ದರು. ಚೌಕ ಚಿತ್ರದಲ್ಲಿ ದರ್ಶನ್ ಎದುರು ನಟಿಸಿದ್ದ ಪ್ರಭಾಕರ್, ಈಗ ನಟಸಾರ್ವಭೌಮ ಚಿತ್ರಕ್ಕೆ ಬರುತ್ತಿದ್ಧಾರೆ.

    ರಾಕ್‍ಲೈನ್ ನಿರ್ಮಾಣದ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದೆ. ರಚಿತಾರಾಮ್ ನಾಯಕಿ. ಈ ಎಲ್ಲರ ಟೀಂನಲ್ಲಿ ಪ್ರಭಾಕರ್ ವಿಲನ್.

  • ಪುನೀತ್ ಕೈಲಿರುವ ದಾರದ ಕಥೆ..

    story if ouneeth's wrist band

    ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರ, ಸಹಜವಾಗಿಯೇ ಕುತೂಹಲದ ಮೂಟೆ ಹೊತ್ತಿರುವ ಸಿನಿಮಾ. ಚಿತ್ರದ ನಿರ್ದೇಶಕ ಪವನ್ ಒಡೆಯರ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ನಾಯಕಿ ರಚಿತಾ ರಾಮ್, ವಿಶೇಷ ಪಾತ್ರದಲ್ಲಿ ಹಲವು ವರ್ಷಗಳ ನಂತರ ಬಿ.ಸರೋಜಾದೇವಿ ನಟಿಸಿರುವ ಸಿನಿಮಾ. ಈ ಸಿನಿಮಾದಲ್ಲಿ ಪುನೀತ್ ಫೋಟೋಗ್ರಾಫರ್ ಪಾತ್ರ ಮಾಡುತ್ತಿದ್ದಾರೆ.

    ಪುನೀತ್ ಅವರ ಫೋಟೋಗಳಲ್ಲಿ ಎದ್ದು ಕಾಣ್ತಿರೋದು ಅವರ ಕೈಲಿರುವ ಒಂದು ದಾರ. ಕಪ್ಪುದಾರದ ಬ್ಯಾಂಡ್‍ನಲ್ಲಿ ಒಂದು ಪುಟ್ಟ ಪದಕವೂ ಇದೆ. ಅದೇನು ಅದೃಷ್ಟದ ಸಂಕೇತವಾ ಎಂದರೆ, ನಿರ್ದೇಶಕ ಪವನ್ ಹಾಗೇನಿಲ್ಲ. ಅದಕ್ಕೂ ಚಿತ್ರದಲ್ಲಿ ಒಂದು ಕಥೆಯಿದೆ ಅಂತಾರೆ.

    ಸಿನಿಮಾದಲ್ಲಿ ಆ ಕಪ್ಪುದಾರದ ಬ್ಯಾಂಡ್‍ಗೂ ಒಂದು ಕಥೆಯಿದೆ. ಅದರ ಸ್ವಾರಸ್ಯವನ್ನು ನೀವು ಸಿನಿಮಾದಲ್ಲಿಯೇ ನೋಡಬೇಕು. ಹೇಳೋಕೆ ಹೋದರೆ ಇಡೀ ಸಿನಿಮಾ ಕಥೆಯನ್ನೇ ಹೇಳಬೆಕಾಗುತ್ತೆ ಅಂತಾರೆ ಪವನ್ ಒಡೆಯರ್.

    ಈಗಾಗಲೇ ಚಿತ್ರದ ಶೇ.40ರಷ್ಟು ಶೂಟಿಂಗ್ ಮುಗಿದಿದೆ. ಬೆಂಗಳೂರು, ಮೈಸೂರು ಶೂಟಿಂಗ್ ಮುಗಿಸಿರುವ ಚಿತ್ರತಂಡ, ಬಳ್ಳಾರಿಯತ್ತ ಹೊರಟಿದೆ.

  • ಪುನೀತ್ ಜೊತೆ ನಟಿಸಿದ ಹುಡುಗಿಗೆ ಅದೊಂದೇ ಬೇಸರ..!

    anupama talks about her natasarvabhouma working experience

    ನಟಸಾರ್ವಭೌಮ ಚಿತ್ರ ಆನ್‍ಲೈನ್‍ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಚಿತ್ರದ ಟ್ರೇಲರ್ ಸೃಷ್ಟಿಸಿರುವ ಹವಾಗೆ ಬಾಲಿವುಡ್ ಕೂಡಾ ಶೇಕ್ ಶೇಕ್. ಚಿತ್ರದ ಬಿಡುಗಡೆ ಸಂಭ್ರಮದಲ್ಲಿರುವಾಗಲೇ ಚಿತ್ರದ ನಾಯಕಿ ಮಲೆಯಾಳಿ ಹುಡುಗಿ ಅನುಪಮಾ ಪರಮೇಶ್ವರನ್‍ಗೆ ಒಂದು ಬೇಸರ ಕಾಡುತ್ತಿದೆ. 

    `ನಾನು ನಟಿಸಿದ ಎಲ್ಲ ಭಾಷೆಯ ಚಿತ್ರಗಳಿಗೂ ನಾನೇ ಡಬ್ ಮಾಡಿದ್ದೇನೆ. ಭಾಷೆಯನ್ನು ಕಲಿತು ನನ್ನದೇ ಧ್ವನಿ ಕೊಟ್ಟಿದ್ದೇನೆ. ಆದರೆ, ನಟಸಾರ್ವಭೌಮ ಚಿತ್ರಕ್ಕೆ ಅದು ಸಾಧ್ಯವಾಗಲಿಲ್ಲ. ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾದ ಕಾರಣ, ನಟಸಾರ್ವಭೌಮ ಚಿತ್ರದ ನನ್ನ ಪಾತ್ರಕ್ಕೆ ಡಬ್ ಮಾಡೋಕೆ ಆಗಲಿಲ್ಲ'' ಎಂದು ಬೇಸರಿಸಿಕೊಂಡಿದ್ದಾರೆ ಅನುಪಮಾ.

    ಚಿತ್ರದಲ್ಲಿ ಅನುಪಮಾ ಅವರದ್ದು ಲಾಯರ್ ಪಾತ್ರ. ಚಿತ್ರದ ಇನ್ನೊಬ್ಬ ನಾಯಕಿ ರಚಿತಾ ರಾಮ್. ಡೀಟೈಲ್ಸ್ ಏನಮ್ಮಾ ಅಂದ್ರೆ, ನೋ ನೋ.. ಇಷ್ಟೆ.. ಇದಕ್ಕಿಂತ ಜಾಸ್ತಿ ನಾನು ಹೇಳೋ ಹಾಗಿಲ್ಲ. ಡೈರೆಕ್ಟರ್ ಕಂಡೀಷನ್ನು ಅಂತಾರೆ. 

    ನಿರ್ದೇಶಕ ಪವನ್ ಒಡೆಯರ್ ಕೂಡಾ ಚಿತ್ರದ ಕಥೆಯ ಗುಟ್ಟು ಹೇಳಲ್ಲ. ಅಷ್ಟೇ ಅಲ್ಲ, ಕಥೆಯ ಸೀಕ್ರೆಟ್ ಹೊರಹಾಕದಂತೆ ಇಡೀ ಚಿತ್ರ ತಂಡಕ್ಕೆ ದಿಗ್ಬಂಧನ ಹಾಕಿಬಿಟ್ಟಿದ್ದಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ ಫೆಬ್ರವರಿ 7ರಂದು ರಿಲೀಸ್ ಆಗುತ್ತಿದೆ. 

  • ಪುನೀತ್ ಜೊತೆ ಸರೋಜಾ ಫೈಟ್

    triveni rao joins yuvaratna team

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್‍ಗೆ ಕಾನ್‍ಸ್ಟೇಬಲ್ ಸರೋಜಾ ಖ್ಯಾತಿಯ ತ್ರಿವೇಣಿ ಜೊತೆಯಾಗುತ್ತಿದ್ದಾರೆ. ಅದೂ ಯುವರತ್ನ ಚಿತ್ರದಲ್ಲಿ. ಸಂತೋಷ್ ಆನಂದರಾಮ್ ನಿರ್ದೇಶನದ ಯುವರತ್ನ ಚಿತ್ರದ ಕ್ಯಾಂಪ್‍ಗೆ ಹೊಸದಾಗಿ ಸೇರಿರುವ ತ್ರಿವೇಣಿ, ಪುನೀತ್ ಜೊತೆ ನಟಿಸಲು ಎಕ್ಸೈಟ್ ಆಗಿದ್ದಾರೆ.

    ಚಿತ್ರದಲ್ಲಿ ನನಗೆ ಪುನೀತ್ ಜೊತೆ ಒಂದು ಫೈಟಿಂಗ್ ಕೂಡಾ ಇದೆ. ಪಾತ್ರದ ವಿವರಗಳ ಬಗ್ಗೆ ಈಗಲೇ ಹೇಳೋಕಾಗಲ್ಲ. ನಾನಂತೂ ಎಕ್ಸೈಟ್ ಆಗಿದ್ದೇನೆ ಎಂದಿದ್ದಾರೆ ತ್ರಿವೇಣಿ.

    ಯುವರತ್ನ ಚಿತ್ರದಲ್ಲಿ ಸರೋಜಾ ಡಾರ್ಲಿಂಗ್ ಡಾಲಿ ಧನಂಜಯ್ ಕೂಡಾ ಪ್ರಮುಖ ಪಾತ್ರದಲ್ಲಿದ್ದು, ಧನಂಜಯ್‍ಗೆ ತ್ರಿವೇಣಿ ಜೋಡಿಯಾ ಎನ್ನುವ ಕುತೂಹಲ ಮೂಡಿದೆ.

  • ಪುನೀತ್ ಸಿನಿಮಾ ನೋಡಬೇಕು.. ರಜೆ ಕೊಡಿ ಸರ್.. ವಿದ್ಯಾರ್ಥಿನಿಯ ರಜಾ ಪತ್ರ 

    puneeth fans applies for leave

    ಸೀತಾರಾಮ ಕಲ್ಯಾಣ ಚಿತ್ರ ನೋಡೋಕೆ ರಜಾ ಕೊಡಿ ಎಂದು ಬಿಎಂಟಿಸಿ ಕಂಡಕ್ಟರ್ ಒಬ್ಬರು ಅಧಿಕಾರಿಗೆ ಪತ್ರ ಬರೆದು ಸುದ್ದಿಯಾಗಿದ್ದರು. ಈಗ ನಟಸಾರ್ವಭೌಮ ಚಿತ್ರದ ಅಭಿಮಾನಿಯ ಸರದಿ. ಮೈಸೂರಿನ ನಿಸರ್ಗ ಎಂಬ ಹುಡುಗಿ ತಮ್ಮ ಪ್ರಾಧ್ಯಾಪಕರಿಗೆ ಫೆಬ್ರವರಿ 7ರಂದು ರಜೆ ಕೊಡಿ ಎಂದು ಪತ್ರ ಬರೆದು ಸುದ್ದಿಯಾಗಿದ್ದಾರೆ.

    ಮೈಸೂರಿನ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ನಿಸರ್ಗ ನಮ್ಮ ರಾಜ್‍ಕುಮಾರ್ ಅವರ ಹೆಮ್ಮೆಯ ತೃತೀಯ ಪುತ್ರನಾದ ಪುನೀತ್ ರಾಜ್‍ಕುಮಾರ್ ಈಗಿನ ಮಕ್ಕಳಿಗೂ ಅಚ್ಚುಮೆಚ್ಚು. ಅದು ಖಂಡಿತಾ ಎಲ್ಲ ವಯಸ್ಸಿನವರೂ ಕೌಟುಂಬಿಕವಾಗಿ ನೋಡುವ ಚಿತ್ರವಾಗಿರಲಿದೆ. ಫೆಬ್ರವರಿ 7ರಂದು ಸಿನಿಮಾ ಬಿಡುಗಡೆಯಾಗುತ್ತಿದ್ದು, ನಾನು ತರಗತಿಗೆ ಬರಲು ಸಾಧ್ಯವಿಲ್ಲ. ರಜೆ ಕೊಡಿ ಎಂದು ಕೇಳಿಕೊಂಡಿದ್ದಾರೆ.

  • ಪುನೀತ್ ಸ್ಟೈಲ್ ಹಿಂದಿನ ಸ್ಟಾರ್ ಯಾರು ಗೊತ್ತಾ..?

    he is the secret star behind puneeth's style

    ಪುನೀತ್ ರಾಜ್‍ಕುಮಾರ್ ಅಂದ್ರೆ ಪವರ್ ಸ್ಟಾರ್. ಆದರೆ ನಟಸಾರ್ವಭೌಮ ನೋಡಿದವರಿಗೆ ಅಚ್ಚರಿಯಾಗುತ್ತಿರುವುದು ಪುನೀತ್ ಸ್ಟೈಲ್. ಕಣ್ಣಿಗೊಂದು ಚೆಂದದ ಕನ್ನಡಕ ಹಾಕಿಕೊಂಡು ಸಿಕ್ಕಾಪಟ್ಟೆ ಸ್ಟೈಲಿಷ್ ಆಗಿ ಕಾಣುತ್ತಿದ್ದಾರೆ ಅಪ್ಪು. ಅಪ್ಪು ಬದಲಾಗುತ್ತಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ಅವರ ಸ್ಟೈಲ್, ಲುಕ್, ಮ್ಯಾನರಿಸಂ ಬದಲಾಗುತ್ತಲೇ ಇವೆ. ಈ ಎಲ್ಲದರ ಹಿಂದಿರುವ ಸೀಕ್ರೆಟ್ ಸ್ಟಾರ್ ಯಾರು ಗೊತ್ತಾ..?

    ಯೋಗಿ ಜಿ.ರಾಜ್. ಖುಷಿಖುಷಿಯಾಗಿ & ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದ ನಿರ್ದೇಶಕ ಯೋಗಿ, ಪುನೀತ್ ಅವರ ಸ್ಟೈಲ್ ಹಿಂದಿರೋ ಸೀಕ್ರೆಟ್ ಸ್ಟಾರ್. ಮೂಲತಃ ಯೋಗಿ ಕಾಸ್ಟ್ಯೂಮ್ ಡಿಸೈನರ್. ತಮ್ಮ ಕೈಚಳಕವನ್ನು ಪುನೀತ್ ಮೇಲೆ ಪ್ರಯೋಗಿಸಿರುವ ಯೋಗಿ, ಪುನೀತ್‍ರನ್ನು ಸ್ಟೈಲಿಷ್ ನಟಸಾರ್ವಭೌಮನಾಗಿಸಿದ್ದಾರೆ.

  • ಪುಷ್ಕರಣಿಯಲ್ಲಿ ನಟಸಾರ್ವಭೌಮ ಶೂಟಿಂಗ್‍ಗೆ ಅಡ್ಡಿ

    natasarwabhowma movie shooting in trouble

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಚಿತ್ರೀಕರಣಕ್ಕೆ ಬಾಗಲಕೋಟೆಯಲ್ಲಿ ಅಪಸ್ವರ ಕೇಳಿಬಂದಿದೆ. ಬಾಗಲಕೋಟೆಯ ಬಾದಾಮಿಯಲ್ಲಿರೋ ಮಹಾಕೂಟೇಶ್ವರ ಪುಷ್ಕರಿಣಿಯಲ್ಲಿ ನಟಸಾರ್ವಭೌಮ ಚಿತ್ರತಂಡ ಸೆಟ್ ಹಾಕಿ ಚಿತ್ರೀಕರಣ ಮಾಡುತ್ತಿದೆ. ಆದರೆ, ಈ ಶೂಟಿಂಗ್ ವೇಳೆ ಪುಷ್ಕರಣಿಯಲ್ಲಿರುವ ನೀರನ್ನು ಹೊರಹಾಕಿ ಸೆಟ್ ಹಾಕಲಾಗಿದೆ ಅನ್ನೋದು ಗ್ರಾಮಸ್ಥರ ಆರೋಪ. ಏಕೆಂದರೆ, ಈ ಪುಷ್ಕರಣಿ, ಸ್ಥಳೀಯರಿಗೆ ಜಲಮೂಲ. ಈ ಪುಷ್ಕರಣಿಯಲ್ಲಿ ನೀರು ಬತ್ತುವುದಿಲ್ಲ. ಈ ಪುಷ್ಕರಣಿಯಿಂದಾಗಿ ಸುತ್ತಮುತ್ತಲ ಪ್ರದೇಶಗಳಲ್ಲಿ ಅಂತರ್ಜಲ ಚೆನ್ನಾಗಿದೆ. 

    ಹೀಗಿರುವಾಗ ಪುಷ್ಕರಣಿಯನ್ನು ಡಿಗ್ಗಿಂಗ್ ಮಾಡಿ, ನೀರನ್ನು ಹೊರತೆಗೆದು ಸೆಟ್ ಹಾಕಿದರೆ, ಅಂತರ್ಜಲಕ್ಕೆ ಸಮಸ್ಯೆಯಾಗುತ್ತೆ ಅನ್ನೋದು ಸ್ಥಳೀಯರ ಆತಂಕ. ಈ ಕುರಿತು ನಿರ್ದೇಶಕ ಪವನ್ ಒಡೆಯರ್ ಸ್ಪಷ್ಟನೆ ಕೊಟ್ಟಿದ್ದಾರೆ. ಐತಿಹಾಸಿಕ ಸ್ಥಳಗಳ ಬಗ್ಗೆ ನಮಗೂ ಗೌರವ ಇದೆ. ಕಾಳಜಿ ಇದೆ. ಈ ಪ್ರದೇಶವನ್ನು ಇನ್ನಷ್ಟು ಚೆನ್ನಾಗಿ ತೋರಿಸಬೇಕು ಅನ್ನೋದು ನಮ್ಮ ಆಸೆ. ಪುಷ್ಕರಣಿಗೆ, ಅಂತರ್ಜಲಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ, ಆತಂಕ ಬೇಡ ಎಂದು ಭರವಸೆ ಕೊಟ್ಟಿದ್ದಾರೆ.

  • ಫೆ.3ರಿಂದಲೇ ನಟಸಾರ್ವಭೌಮನ ಟಿಕೆಟ್ ಬುಕ್ ಮಾಡಿ

    natasarvabhouma booking from feb 3rd

    ನಟಸಾರ್ವಭೌಮ ಚಿತ್ರ ಕ್ರೇಜ್ ಸೃಷ್ಟಿಸುತ್ತಿದೆ. ಟ್ರೆಂಡಿಂಗ್‍ನಲ್ಲಿ ಈಗಲೂ ಟಾಪ್ 10ನಲ್ಲಿರೋ ನಟಸಾರ್ವಭೌಮ ಚಿತ್ರಕ್ಕೆ ಒಂದು ವಾರ ಮೊದಲೇ ಬುಕ್ಕಿಂಗ್ ಶುರುವಾಗಲಿದೆ. ಫೆಬ್ರವರಿ 3ನೇ ತಾರೀಕಿನಿಂದ ಅಂದರೆ, ಭಾನುವಾರದಿಂದಲೇ ನಟಸಾರ್ವಭೌಮ ಚಿತ್ರಕ್ಕೆ ಟಿಕೆಟ್ ಬುಕ್ ಮಾಡಬಹುದು.

    ಕನ್ನಡದಲ್ಲಿ ಮೊದಲ ದಿನವೇ ಫ್ಯಾಮಿಲಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಬರುವಂತೆ ಮಾಡುವ ಶಕ್ತಿ ಇರುವ ನಟ ಪುನೀತ್. ಇದರ ಜೊತೆಗೆ ವಾರಕ್ಕೆ ಮೊದಲೇ ಬುಕ್ಕಿಂಗ್ ಶುರುವಾದರೆ ಮೊದಲ ದಿನವೇ ಹೌಸ್‍ಫುಲ್ ಬೋರ್ಡ್ ಗ್ಯಾರಂಟಿ.

    ರಚಿತಾ ರಾಮ್, ಅನುಪಮಾ, ಬಿ.ಸರೋಜಾದೇವಿ, ರವಿಶಂಕರ್, ಸಾಧುಕೋಕಿಲ, ಚಿಕ್ಕಣ್ಣ ಅಭಿನಯದ ಸಿನಿಮಾಗೆ ಪವನ್ ಒಡೆಯರ್ ನಿರ್ದೇಶಕರಾದರೆ, ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ.

     

  • ಬಿ.ಸರೋಜಾದೇವಿ ಜೊತೆ ಪುನೀತ್

    b sarojadevi plays herself in natasarwabhowma

    ನಟಸಾರ್ವಭೌಮ. ಇದು ಪುನೀತ್ ರಾಜ್‍ಕುಮಾರ್ ಅಭಿನಯದ ಸಿನಿಮಾ. ರಣವಿಕ್ರಮ ನಂತರ ಮತ್ತೆ ನಿರ್ದೇಶಕ ಪವನ್ ಒಡೆಯರ್ ಮತ್ತು ಪುನೀತ್ ಒಂದಾಗಿರುವ ಚಿತ್ರ. ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕರಾದರೆ, ರಚಿತಾ ರಾಮ್ ನಾಯಕಿ. ಈ ಚಿತ್ರದಲ್ಲಿ ಬಿ.ಸರೋಜಾದೇವಿ, ಚಿತ್ರನಟಿಯಾಗಿಯೇ ನಟಿಸಿದ್ದಾರೆ ಅನ್ನೋದು ವಿಶೇಷ.

    ಸಿನಿಮಾದಲ್ಲಿ ಪುನೀತ್ ಪತ್ರಕರ್ತರಾಗಿ ನಟಿಸಿದ್ದಾರೆ. ಪತ್ರಕರ್ತನಾಗಿ ಬಿ.ಸರೋಜಾದೇವಿಯವರನ್ನು ಪುನೀತ್ ಸಂದರ್ಶನ ಮಾಡುವ ದೃಶ್ಯ ಚಿತ್ರದಲ್ಲಿದೆ. ನನಗೆ ಇದೊಂದು ಹೆಮ್ಮೆಯ ಕ್ಷಣ. ಇಬ್ಬರು ಶ್ರೇಷ್ಟರನ್ನು ಒಟ್ಟಿಗೇ ನಿರ್ದೇಶಿಸುವ ಸೌಭಾಗ್ಯ ನನ್ನದು ಎಂದು ಬರೆದುಕೊಂಡಿದ್ದಾರೆ ಪವನ್ ಒಡೆಯರ್.

    ಪುನೀತ್ ರಾಜ್‍ಕುಮಾರ್ ಮತ್ತು ಬಿ.ಸರೋಜಾದೇವಿ ಎಂದರೆ ತಕ್ಷಣ ನೆನಪಾಗೋದು ಯಾರಿವನು ಚಿತ್ರದ ಕಣ್ಣಿಗೆ ಕಾಣುವ ದೇವರು ಎಂದರೆ ಅಮ್ಮನು ತಾನೇ ಹಾಡು.. ಆಗ ಪುನೀತ್ ಮಾಸ್ಟರ್ ಲೋಹಿತ್ ಆಗಿದ್ದರು. ಈಗ ಪವರ್‍ಸ್ಟಾರ್ ಆಗಿದ್ದಾರೆ. ಮತ್ತೊಮ್ಮೆ ಸರೋಜಾದೇವಿ ಎದುರು ನಟಿಸಿದ್ದಾರೆ. 

  • ಬೆಟ್ಟದ ಹೂವಿನ ಊರಲ್ಲಿ ಪುನೀತ್ ಹುಡುಕಾಟ

    puneeth rajkumar walks through bettada hoovu shooting experience

    ಬೆಟ್ಟದ ಹೂವು. 1984ರಲ್ಲಿ ಬಂದಿದ್ದ ಸಿನಿಮಾ. ಪಾರ್ವತಮ್ಮ ರಾಜ್‍ಕುಮಾರ್ ನಿರ್ಮಾಣದ ಆ ಸಿನಿಮಾ, ಇವತ್ತಿಗೂ ಕನ್ನಡದ ಅತ್ಯುತ್ತಮ ಮಕ್ಕಳ ಚಿತ್ರಗಳಲ್ಲಿ ಒಂದು. ಪುನೀತ್ ರಾಜ್‍ಕುಮಾರ್‍ಗೆ ರಾಷ್ಟ್ರಪ್ರಶಸ್ತಿ ದೊರಕಿಸಿಕೊಟ್ಟಿದ್ದ ಸಿನಿಮಾ ಅದು. ಸಿನಿಮಾ ಬಂದಾಗ ಪುನೀತ್‍ಗೆ 10 ವರ್ಷ. ಈಗ.. 34 ವರ್ಷಗಳ ನಂತರ ಪುನೀತ್, ಬೆಟ್ಟದ ಹೂವಿನ ಚಿತ್ರೀಕರಣ ನಡೆದ ಜಾಗ ಅತ್ತಿಬೆಲೆಯಲ್ಲಿ ಆ ದಿನಗಳ  ಹುಡುಕಾಟ ನಡೆಸಿದ್ದಾರೆ. ನಟಸಾರ್ವಭೌಮ ಚಿತ್ರದ ಚಿತ್ರೀಕರಣಕ್ಕಾಗಿ ಹೋಗಿದ್ದ ಅಪ್ಪುಗೆ, ಇಲ್ಲಿಯೇ ಅಲ್ಲವಾ ಬೆಟ್ಟದ ಹೂವು ಚಿತ್ರೀಕರಣ ನಡೆಸಿದ್ದು ಎಂಬ ಬಾಲ್ಯದ ನೆನಪು ಮರುಕಳಿಸಿಬಿಟ್ಟಿದೆ. ತಕ್ಷಣವೇ ಹುಡುಕಾಟಕ್ಕೆ ನಿಂತುಬಿಟ್ಟಿದ್ದಾರೆ.

    ಚಿತ್ರದ ನಿರ್ದೇಶಕ ಲಕ್ಷ್ಮೀನಾರಾಯಣ್, ಚಿತ್ರೀಕರಣದ ವೇಳೆ ತಮ್ಮನ್ನು ನೋಡಿಕೊಂಡಿದ್ದ ಚಿಕ್ಕಪ್ಪ ವರದಪ್ಪ, ಬಾಲಣ್ಣ, ಹೊನ್ನವಳ್ಳಿ ಕೃಷ್ಣ, ಗೌರಿಶಂಕರ್, ಪದ್ಮಾವಾಸಂತಿ, ಬ್ರಹ್ಮಾವರ್.. ಹೀಗೆ ಎಲ್ಲರ ಜೊತೆ ಕಳೆದ ಕ್ಷಣಗಳನ್ನೂ ಮೆಲುಕು ಹಾಕಿದ್ದಾರೆ. ಕೆಲವು ಜಾಗಗಳು ನೆನಪಿಗೆ ಬಂದಿಲ್ಲ. ಊರಿನವರನ್ನು ಮಾತನಾಡಿಸಿ, ಜಾಗಗಳನ್ನೆಲ್ಲ ನೋಡಿ ಖುಷಿಪಟ್ಟಿದ್ದಾರೆ ಪುನೀತ್.

    ಅನಿರೀಕ್ಷಿತವಾಗಿ ಬಂದ ರಾಜಕುಮಾರನನ್ನು ಅಭಿಮಾನದಿಂದ ಸ್ವಾಗತಿಸಿದ ಅತ್ತಿಬೆಲೆ ಗ್ರಾಮದ ಜನ, ಅಪ್ಪು ಜೊತೆ ಫೋಟೋ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ. ತಮ್ಮ ನೆನಪಿನ ಕಥೆಗಳನ್ನೂ ಹೇಳಿದ್ದಾರೆ.

    ಬೆಟ್ಟದ ಹೂವು.. ಮುಗ್ದ ಬಾಲಕನೊಬ್ಬನ ರಾಮಾಯಣ ಓದುವ ಕನಸು ಹೊತ್ತವನ ಸಿನಿಮಾ. ರಾಮಾಯಣ ಪುಸ್ತಕ ಕೊಳ್ಳಲೆಂದು ದಿನಕ್ಕೆ 10 ಪೈಸೆ ಕೂಡಿಟ್ಟು, 10 ರೂಪಾಯಿ ಆದ ಮೇಲೆ ರಾಮಾಯಣ ಕೊಳ್ಳದೆ, ಅಮ್ಮನಿಗೆ ರಗ್ಗು ತಂದುಕೊಡುವ ಬಾಲಕನ ಚಿತ್ರ. 

    ಆ ಚಿತ್ರದ ತಾಯಿ ಶಾರದೆ ಲೋಕ ಪೂಜಿತೆ.. ಇಂದಿಗೂ ಹಲವಾರು ಶಾಲೆಗಳಲ್ಲಿ ಪ್ರಾರ್ಥನಾ ಗೀತೆ. ಬಿಸಿಲೇ ಇರಲಿ.. ಮಳೆಯೇ ಬರಲಿ.. ಹಾಗೂ ಪಟ್ಟೆಹುಲಿ ಬಲು ಕೆಟ್ಟಹುಲಿ ಹಾಡುಗಳು ಇವತ್ತಿಗೂ ಜನಪ್ರಿಯ ಗೀತೆಗಳು. 

  • ಯಶ್, ಅಪ್ಪು ಸಿನಿಮಾಗೆ ಕಿಚ್ಚನ ಪಟಾಕಿ

    sudeep wishes good luck to kgf and natasarvabhouma

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ, ಜನವರಿಯಲ್ಲಿ ತೆರೆಗೆ ಬರುವ ನಿರೀಕ್ಷೆ ಇದೆ. ವರ್ಷದ ಕೊನೆಯಲ್ಲಿ ಯಶ್ ಅಭಿನಯದ ಕೆಜಿಎಫ್ ಬರಲಿದೆ. ಸ್ಸೋ.. ಬೆಳ್ಳಿತೆರೆಯ ಮೇಲೆ ವರ್ಷವಿಡೀ ದೀಪಾವಳಿ ಎಂಬರ್ಥದಲ್ಲಿ ಸುದೀಪ್ ಟ್ವೀಟ್ ಮಾಡಿದ್ದರು.

    ಅಂದಹಾಗೆ ಆಯುಧಪೂಜೆಯಲ್ಲಿ ಶುರುವಾದ ಚಿತ್ರರಂಗದ ಹಬ್ಬ.. ದೀಪಾವಳಿ ನಂತರವೂ ಸದ್ದು ಮಾಡುತ್ತಲೇ ಇದೆ. ದಿ ವಿಲನ್ ಸಿನಿಮಾದಿಂದ ಶುರುವಾದ ಸ್ಟಾರ್ ಸಿನಿಮಾಗಳ ಕ್ರೇಜ್ ಹಾಗೆಯೇ ಮುಂದುವರಿಯುತ್ತಿದೆ. ಸುದೀಪ್ ಹಾರೈಕೆ ನಿಜವಾಗಿ ರಿಲೀಸ್ ಆದ ಸಿನಿಮಾಗಳೆಲ್ಲವೂ ಸಕ್ಸಸ್ ಕಾಣಲಿ.

    ಅಂದಹಾಗೆ ನಟಸಾರ್ವಭೌಮ ಚಿತ್ರದ ಡಬ್ಬಿಂಗ್ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಿರುಸಾಗಿ ನಡೆಯುತ್ತಿವೆ. 

    ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶಕ. ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಾಯಕಿಯರು. ಬಿ.ಸರೋಜಾದೇವಿ ಹಲವು ವರ್ಷಗಳ ನಂತರ ನಟಿಸಿರುವ ಸಿನಿಮಾ ನಟಸಾರ್ವಭೌಮ.

  • ರಾತ್ರಿ 10.30ಕ್ಕೆ ಕರೆ ಬಂತು.. ರಚಿತಾ ರಾಮ್ ಓಕೆ ಅಂದ್ರು..!

    rachitha ram gets surprise call

    ರಚಿತಾ ರಾಮ್, ನಟಸಾರ್ವಭೌಮ ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಆ ಚಿತ್ರಕ್ಕೆ ರಚಿತಾ ಆಯ್ಕೆಯಾಗಿದ್ದು ಹೇಗೆ..? ಅದೊಂಥರಾ ಇಂಟ್ರೆಸ್ಟಿಂಗ್ ಸ್ಟೋರಿ. ಏಕೆಂದರೆ ನಟಸಾರ್ವಭೌಮ ಚಿತ್ರಕ್ಕೆ ಮೊದಲು ನಾಯಕಿಯಾಗಿದ್ದವರು ರಚಿತಾ ಅಲ್ಲ. ಆದರೆ, ಆ ನಾಯಕಿಯನ್ನು ಒಂದು ದಿನದ ನಂತರ ಚೇಂಜ್ ಮಾಡಲಾಯ್ತು. ಅದಾದ ನಂತರ ರಚಿತಾ ಚಿತ್ರಕ್ಕೆ ಬಂದಿದ್ದೇ ಇಂಟ್ರೆಸ್ಟಿಂಗ್.

    ನಟಸಾರ್ವಭೌಮ ಚಿತ್ರದ ಮುಹೂರ್ತವಾದ ಮರುದಿನ ರಾತ್ರಿ 10.30ರ ಸುಮಾರಿಗೆ ರಚಿತಾ ರಾಮ್ ಅವರಿಗೆ ರಾಕ್‍ಲೈನ್ ವೆಂಕಟೇಶ್ ಅವರಿಂದ ಒಂದು ಮೆಸೇಜ್ ಬಂತು. ಫೋನ್ ಮಾಡಬಹುದಾ ಎಂದು ಕೇಳಿದ್ದರು ರಾಕ್‍ಲೈನ್ ವೆಂಕಟೇಶ್. ಓಕೆ ಎಂದ ನಂತರ ಫೋನ್ ಬಂತು. ನಟಸಾರ್ವಭೌಮ ಚಿತ್ರಕ್ಕೆ ಆಫರ್. ಪುನೀತ್ ಜೊತೆ. ನಾನು ಓಕೆ ಎಂದುಬಿಟ್ಟೆ. ಮರುದಿನ ಬೆಳಗ್ಗೆ ನಿರ್ದೇಶಕ ಪವನ್ ಅವರಿಂದ ಫೋನ್. ಶೂಟಿಂಗ್ ಸ್ಪಾಟ್‍ಗೆ ಬನ್ನಿ ಅಂತಾ.  ಹೋದೆ.. ರಚಿತಾ ರಾಮ್ ನಟಸಾರ್ವಭೌಮ ಚಿತ್ರಕ್ಕೆ ಆಯ್ಕೆಯಾಗಿದ್ದು ಹೀಗೆ.

    ನಾನು ಯಾವುದೇ ಚಿತ್ರಕ್ಕೆ ಶೂಟಿಂಗ್‍ಗೆ ಹೋಗುವಾಗ ಪ್ರಿಪೇರ್ ಆಗಿ ಹೋಗ್ತೇನೆ. ಅದರಲ್ಲೂ ಪುನೀತ್ ಸರ್. ಆದರೆ, ಅದೇ ಮೊದಲ ಬಾರಿಗೆ ಪುನೀತ್ ಸರ್ ಎದುರು ಪ್ರಿಪರೇಷನ್ ಇಲ್ಲದೆ ನಿಂತಿದ್ದೆ. ಹೇಗೋ ನಿಭಾಯಿಸಿದೆ. ಅದರ ನಂತರವೇ ಕಥೆಯ ವಿವರ ಪಡೆದುಕೊಂಡಿದ್ದು ಎಂದು ನೆನಪಿಸಿಕೊಂಡಿದ್ದಾರೆ ರಚಿತಾ.

    ಸದ್ಯಕ್ಕೆ ರಚಿತಾ ನಟಸಾರ್ವಭೌಮ ಚಿತ್ರವಷ್ಟೇ ಅಲ್ಲದೆ, ಸೀತಾರಾಮ ಕಲ್ಯಾಣ, ಅಯೋಗ್ಯ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಇದರ ಮಧ್ಯೆ ಕಾಮಿಡಿ ಟಾಕೀಸ್‍ನಲ್ಲಿ ನಗುವ ಗೊಂಬೆಯಾಗಿದ್ದಾರೆ. ಸಿಕ್ಕಾಪಟ್ಟೆ ಬ್ಯುಸಿ.

  • ಶ್ರಾವಣ ಬಂತು.. ಶಿವಲಿಂಗ.. ನಟಸಾರ್ವಭೌಮ.. ಏನಿದು ಹೋಲಿಕೆ..?

    link between sravana banthu, shivalinga and natasarvabhouma

    ಶ್ರಾವಣ ಬಂತು. 1984ರಲ್ಲಿ ತೆರೆಗೆ ಬಂದಿದ್ದ ಚಿತ್ರ. ಮೇರಿ ಮೇರಿ ಮೇರಿ ಐ ಲವ್ ಯೂ, ಬಾನಿನ ಅಂಚಿದ ಬಂದೆ, ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ, ಶ್ರಾವಣ ಮಾಸ ಬಂದಾಗ.. ಹೀಗೆ ಆ ಚಿತ್ರದ ಹಾಡುಗಳು ಇಂದಿಗೂ ಜನಪ್ರಿಯ. ಊರ್ವಶಿ, ರಾಜ್ ಜೋಡಿಯಾಗಿ ನಟಿಸಿದ್ದರು. ಆ ಚಿತ್ರದಲ್ಲಿ ಡಾ.ರಾಜ್ ಗೆಳೆಯ ಹಾಗೂ ಆತ್ಮದ ಪಾತ್ರದಲ್ಲಿ ನಟಿಸಿದ್ದವರು ಪ್ರಣಯ ರಾಜ ಶ್ರೀನಾಥ್.

    ಅದೇ ರಾಗ ಅದೇ ಹಾಡು, ಶಿವರಾಜ್ ಕುಮಾರ್ ಅಭಿನಯದ ಸಿನಿಮಾ. ಆ ಚಿತ್ರದಲ್ಲಿ ಪುನರ್ಜನ್ಮ ಹಾಗೂ ದೆವ್ವದ ಕಥೆಯಿತ್ತು.

    ಸಂಯುಕ್ತ ಚಿತ್ರದಲ್ಲಿ ದೆವ್ವದ ಎಳೆಯಿದ್ದರೂ, ದೆವ್ವದ ಸಿನಿಮಾ ಆಗಿರಲಿಲ್ಲ. ಅದೊಂದು ಸಸ್ಪೆನ್ಸ್ ಥ್ರಿಲ್ಲರ್ ಆಗಿತ್ತು. ತಂಗಾಳಿಯಾಗಿ ಹೋದೆ ಎಂಬ ಹಾಡಂತೂ ಬೆಚ್ಚಿ ಬೀಳಿಸುತ್ತಿತ್ತು.

    ಇನ್ನು ಇತ್ತೀಚೆಗೆ ಬಂದ ಶಿವಣ್ಣ ಅಭಿನಯದ ಶಿವಲಿಂಗ ಚಿತ್ರ ಅಪ್ಪಟ ದೆವ್ವದ ಸಿನಿಮಾ. ವಾಸು ನಿರ್ದೇಶನದ ಸಿನಿಮಾದಲ್ಲಿ ದೆವ್ವ, ಥ್ರಿಲ್ಲರ್ ಕಥೆಯನ್ನು ಹದವಾಗಿ ಬೆರೆಸಲಾಗಿತ್ತು.

    ಈಗ ನಟಸಾರ್ವಭೌಮ ಚಿತ್ರ. ಹೋಲಿಕೆ ಒಂದೇ.. ಅದು ಆತ್ಮ.

    ಪುನೀತ್ ರಾಜ್‍ಕುಮಾರ್ ಮೈಮೇಲೆ ಈ ಚಿತ್ರದಲ್ಲಿ ಆತ್ಮವೊಂದು ಬರುತ್ತಾ..? ಆತ್ಮದ ಕೈಗೊಂಬೆಯಾಗಿರ್ತಾರಾ ಪುನೀತ್ ರಾಜ್‍ಕುಮಾರ್..? 

    ನಿರ್ದೇಶಕ ಪವನ್ ಒಡೆಯರ್, ಅದ್ಯಾವ ರಹಸ್ಯವನ್ನೂ ಬಿಟ್ಟುಕೊಡ್ತಿಲ್ಲ. ರಚಿತಾ ರಾಮ್, ಅನುಪಮಾ ನಾಯಕಿಯಾಗಿರುವ ಚಿತ್ರದಲ್ಲಿ ದೆವ್ವದ ಕಥೆ ಹೇಳುವುದು ಚಿಕ್ಕಣ್ಣ, ಸಾಧು ಮತ್ತು ಅಚ್ಯುತ್ ಕುಮಾರ್.  ಉಳಿದಂತೆ.. ರಹಸ್ಯ ತಿಳಿದುಕೊಳ್ಳೋಕೆ ಫೆಬ್ರವರಿ 7ರವರೆಗೆ ಕಾಯಲೇಬೇಕು.

  • ಸೆಕೆಂಡ್ ಶೋನ ಟೈಮಲ್ಲಿ ನಟಸಾರ್ವಭೌಮ ಫಸ್ಟ್ ಶೋ

    natasarvabhouma released last night itself

    ನಟಸಾರ್ವಭೌಮ ಸಿನಿಮಾ, ನಿನ್ನೆ ರಾತ್ರಿಯೇ ರಿಲೀಸ್ ಆಗಿಬಿಟ್ಟಿದೆ. ಹೌದು, 7ನೇ ತಾರೀಕು ಅಂದರೆ ಇವತ್ತು ರಿಲೀಸ್ ಆಗಬೇಕಿದ್ದ ಸಿನಿಮಾವನ್ನು 6ನೇ ತಾರೀಕು ಪ್ರದರ್ಶನವಾಗುವಂತೆ ಮಾಡಿರೋದು ಅಪ್ಪು ಫ್ಯಾನ್ಸ್.

    ದೇವರು ಭಕ್ತರ ಎದುರು ಶರಣಾಗುವಂತೆ ಅಪ್ಪು ಅಭಿಮಾನಿಗಳ ಎದುರು ರಾಕ್‍ಲೈನ್ ಶರಣಾಗಿದ್ದಾರೆ. ಹೀಗಾಗಿ ರಾತ್ರಿ 10.30ಕ್ಕೆ ಪ್ರಸನ್ನ ಥಿಯೇಟರ್‍ನಲ್ಲಿ ಮೊದಲ ಶೋ ಪ್ರದರ್ಶನಗೊಂಡಿದೆ. 

    ಇನ್ನು ಶ್ರೀನಿವಾಸ, ಊರ್ವಶಿ ಹಾಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಧ್ಯರಾತ್ರಿಯೇ ನಟಸಾರ್ವಭೌಮನಿಗೆ ಉಘೇ ಉಘೇ ಎಂದಿದ್ದಾರೆ ಪ್ರೇಕ್ಷಕರು. ಅಪ್ಪು ಜೊತೆ ರಚಿತಾ ರಾಮ್, ಅನುಪಮಾ ಜೋಡಿ ಮೋಡಿಯನ್ನೇ ಮಾಡುತ್ತಿದೆ. ಪವನ್ ಒಡೆಯರ್ ಮತ್ತೊಮ್ಮೆ ಗೆದ್ದಿದ್ದಾರೆ.

  • ಹುಬ್ಬಳ್ಳಿಯಲ್ಲಿಂದು ನಟಸಾರ್ವಭೌಮ ಬರೋದು ಗ್ಯಾರಂಟಿ

    puneeth at natasarvabhouma audio launch in hubbali

    ಐಟಿ ದಾಳಿ ಹಿನ್ನೆಲೆಯಲ್ಲಿ ಪುನೀತ್ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್, ಹುಬ್ಬಳ್ಳಿಗೆ ಬರುತ್ತಾರೋ ಇಲ್ಲವೋ.. ನಟಸಾರ್ವಭೌಮ ಆಡಿಯೋ ರಿಲೀಸ್ ಆಗುತ್ತೋ.. ಇಲ್ಲವೋ ಎಂಬ ಎಲ್ಲ ಗೊಂದಲಗಳಿಗೆ ಈಗ ತೆರೆ ಬಿದ್ದಿದೆ. ಪುನೀತ್ ರಾಜ್‍ಕುಮಾರ್ ಮನೆಯಲ್ಲಿ ಗುರುವಾರ ಬೆಳಗ್ಗೆ ಶುರುವಾದ ಐಟಿ ತನಿಖೆ, ಶುಕ್ರವಾರ ರಾತ್ರಿ ಮುಗಿದಿದೆ. ಎಲ್ಲ ತನಿಖೆ, ವಿಚಾರಣೆ ಮುಗಿದ ಮೇಲೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಪುನೀತ್ ರಾಜ್‍ಕುಮಾರ್, ತನಿಖೆಗೆ ಎಲ್ಲ ಸಹಕಾರ ನೀಡಿದ್ದೇವೆ. ಅವರ ಕರ್ತವ್ಯ ಅವರು ಮಾಡಿದ್ದಾರೆ ಎಂದಿದ್ದಾರೆ.

    ಇಂದು ಹುಬ್ಬಳ್ಳಿಯಲ್ಲಿ ನಡೆಯಲಿರುವ ನಟಸಾರ್ವಭೌಮ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಹೋಗುವುದಾಗಿಯೂ ಹೇಳಿದ್ದಾರೆ. ಇಂದಿನ ಕಾರ್ಯಕ್ರಮದಲ್ಲಿ ಪುನೀತ್ ಜೊತೆ ಯುವರಾಜ್ ಕುಮಾರ್ ಕೂಡಾ ಸ್ಟೆಪ್ ಹಾಕಲಿದ್ದಾರೆ. ಪವನ್ ಒಡೆಯರ್ ಈಗಾಗಲೇ ತಮ್ಮ ದೊಡ್ಡ ತಂಡದ ಜೊತೆ ಹುಬ್ಬಳ್ಳಿ ತಲುಪಿದ್ದಾರೆ. ರಾಕ್‍ಲೈನ್ ವೆಂಕಟೇಶ್ ಮನೆಯಲ್ಲಿ ಐಟಿ ವಿಚಾರಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಅವರು ಬರುವ ಸಾಧ್ಯತೆ ಇನ್ನೂ ಅನುಮಾನ.