` natasarvabhowma, - chitraloka.com | Kannada Movie News, Reviews | Image

natasarvabhowma,

  • ಅಪ್ಪು ಅಭಿಮಾನಿಗಳ ಸೈನ್ಯಕ್ಕೆ ರಾಕ್‍ಲೈನ್ ಮನವಿ ಇದು

    rockline venkatesh requests fans to help curb piracy

    ನಟಸಾರ್ವಭೌಮ ಚಿತ್ರದ ರಿಲೀಸ್ ಆಗುವುದಕ್ಕೂ ಮುನ್ನವೇ ಚಿತ್ರತಂಡವನ್ನು ಕಾಡುತ್ತಿರುವುದು ಪೈರಸಿ. ಇದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಅವರನ್ನೂ ಕಂಗೆಡಿಸಿದೆ. ಹೀಗಾಗಿಯೇ.. ಅವರು ಎಲ್ಲ ಮುಂಜಾಗ್ರತೆ ಕ್ರಮಗಳನ್ನು ಕೈಗೊಂಡರೂ ಸಹ, ಅವರು ಒಂದು ದೊಡ್ಡ ಸೈನ್ಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ಅದು ಅಪ್ಪು ಅಭಿಮಾನಿಗಳ ಸೈನ್ಯ.

    ನಟಸಾರ್ವಭೌಮ ಅಭಿಮಾನಿಗಳಿಗಾಗಿಯೇ ಮಾಡಿರುವ ಸಿನಿಮಾ. ಚಿತ್ರವನ್ನು ಚಿತ್ರಮಂದಿರದಲ್ಲಿಯೇ ನೋಡಿ. ಪೈರಸಿ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಡಬೇಡಿ. ಹಾಗೆ ಹರಡುವವರನ್ನು ಕಂಡರೆ, ತಕ್ಷಣ ನಮಗೆ ಮಾಹಿತಿ ನೀಡಿ. ಅಭಿಮಾನಿಗಳೇ ಬೆನ್ನೆಲುಬು. ಅವರೇ ಇಂತಹ ಪೈರಸಿಯನ್ನು ತಡೆಯಬೇಕು ಎಂದು ಮನವಿ ಮಾಡಿದ್ದಾರೆ ರಾಕ್‍ಲೈನ್ ವೆಂಕಟೇಶ್. ನಟಸಾರ್ವಭೌಮ ಸಿನಿಮಾ, ನಾಳೆ ರಿಲೀಸ್ ಆಗುತ್ತಿದೆ.

  • ಅಪ್ಪು ಅಭಿಮಾನಿಯಿಂದ ಇಡೀ ಥಿಯೇಟರ್ ಬುಕ್..!

    puneeth's fans buys total natasarvabhouma tickets

    ನಟಸಾರ್ವಭೌಮ ಚಿತ್ರದ ಬುಕ್ಕಿಂಗ್ ಶುರುವಾಗಿದ್ದೇ ತಡ, ಅಪ್ಪು ಅಭಿಮಾನಿಯೊಬ್ಬ ಇಡೀ ಥಿಯೇಟರ್‍ನ್ನೇ ಬುಕ್ ಮಾಡಿದ್ದಾನೆ. ಪುನೀತ್ ಅಭಿಮಾನಿಯಾಗಿರುವ ಅಭಿಷೇಕ್ ಎಂಬ ಈ ಹುಡುಗ ತನ್ನ ಹಾಗೂ ತನ್ನ ಗೆಳೆಯರಿಗಾಗಿ ಊರ್ವಶಿ ಥಿಯೇಟರ್‍ನ ಎಲ್ಲ 1200 ಸೀಟುಗಳನ್ನೂ ಬುಕ್ ಮಾಡಿದ್ದಾನೆ.

    ಸಾಮಾನ್ಯವಾಗಿ ಇಂಥದ್ದೊಂದು ಕ್ರೇಜ್ ತಮಿಳುನಾಡು ಅಭಿಮಾನಿಗಳಲ್ಲಿದೆ. ರಜನಿಕಾಂತ್, ವಿಜಯ್, ಅಜಿತ್ ಚಿತ್ರಗಳಿಗೆ ಈ ರೀತಿ ಇಡೀ ಥಿಯೇಟರನ್ನೇ ಬುಕ್ ಮಾಡುವ ಅಭಿಮಾನಿಗಳಿದ್ದಾರೆ. ಕನ್ನಡಕ್ಕಿದು ಹೊಸದು.

    ಪುನೀತ್ ಸಿನಿಮಾ ಯಾವುದೇ ರಿಲೀಸ್ ಆಗಲಿ. ಮೊದಲ ದಿನ, ಮೊದಲ ಶೋ ನೋಡಿದರೇನೇ ಸಮಾಧಾನ. ಈ ಬಾರಿ ನಾವೆಲ್ಲ ಗೆಳೆಯರೂ ಪ್ಲಾನ್ ಮಾಡಿಕೊಂಡು ಮೊದಲ ದಿನ ಎಲ್ಲರೂ ಒಟ್ಟಿಗೇ ಸಿನಿಮಾ ನೋಡಲು ಈ ರೀತಿ ಮಾಡಿದೆವು. ಕರ್ನಾಟಕದಲ್ಲೂ ಇಂತಹ ಫ್ಯಾನ್ಸ್ ಇದ್ದಾರೆ ಎನ್ನುವುದು ಬೇರೆ ಭಾಷೆಯವರಿಗೆ ಗೊತ್ತಾಗಲಿ ಬಿಡಿ ಎಂದು ಹೆಮ್ಮೆಯಿಂದ ಹೇಳಿದ್ದಾರೆ ಅಭಿ.

    ನಟಸಾರ್ವಭೌಮ ಚಿತ್ರ ಫೆಬ್ರವರಿ 7ರಂದು ರಿಲೀಸ್ ಆಗುತ್ತಿದ್ದು, ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಾಯಕಿಯರು. ಪವನ್ ಒಡೆಯರ್ ನಿರ್ದೇಶನದ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ.

  • ಅಪ್ಪು ಕೇಳಿದ್ದಾರೆ.. ಅಭಿಮಾನಿಗಳೇ ಉತ್ತರ ಕೊಡಿ..

    appu asks fans one question

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ, ಥಿಯೇಟರುಗಳಿಗೆ ಲಗ್ಗೆಯಿಟ್ಟು, ಪ್ರೇಕ್ಷಕರ ಮನಸ್ಸನ್ನೂ ಗೆದ್ದಿದೆ. ಚಿತ್ರದ ಕಥೆ, ಪುನೀತ್ ಅಭಿನಯ, ಪವನ್ ಒಡೆಯರ್ ಡೈರೆಕ್ಷನ್.. ಎಲ್ಲದಕ್ಕೂ ಪ್ರೇಕ್ಷಕರು ಜೈಕಾರ ಹಾಕುತ್ತಿರುವುದು ಸ್ವತಃ ಪುನೀತ್ ಅವರನ್ನೂ ಖುಷಿಗೊಳಿಸಿದೆ. ಹೀಗಾಗಿಯೇ ಅವರು ಚಿತ್ರವನ್ನು ವೀಕ್ಷಿಸುತ್ತಿರುವವರಿಗೆ, ಈಗಾಗಲೇ ನೋಡಿ ಮೆಚ್ಚಿದವರಿಗೆ ಧನ್ಯವಾದ ಅರ್ಪಿಸಿದ್ದಾರೆ.

    `ನಿಮ್ಮ ಈ ಪ್ರೀತಿ, ವಿಶ್ವಾಸಕ್ಕೆ ನಾನು, ನಮ್ಮ ಕುಟುಂಬ ಸದಾ ಋಣಿಯಾಗಿರುತ್ತೇವೆ. ಈ ಪ್ರೀತಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ' ಎಂದಿದ್ದಾರೆ ಪುನೀತ್.

    ಇದೆಲ್ಲದರ ಜೊತೆಗೆ ಅವರು ಅಭಿಮಾನಿಗಳ ಎದುರು ಪುಟ್ಟದೊಂದು ಪ್ರಶ್ನೆಯಿಟ್ಟಿದ್ದಾರೆ. ಪುನೀತ್, ಕನ್ನಡಕಧಾರಿಯಾಗಿ ನಟಿಸಿರುವುದು ಇದೇ ಮೊದಲು. ಹೀಗಾಗಿಯೇ.. ಕನ್ನಡಕದ ಲುಕ್ ಹೇಗಿದೆ..? ದಯವಿಟ್ಟು ತಿಳಿಸಿ ಎಂದು ಕೇಳಿಕೊಂಡಿದ್ದಾರೆ ಅಪ್ಪು.

  • ಅಪ್ಪು ಮೇಲೆ ರಚಿತಾಗಿರೋ ಬೇಸರ ಅದೊಂದೇ..

    rachita's dream dance with appu still pending

    ನಟಸಾರ್ವಭೌಮ ಚಿತ್ರದಲ್ಲಿ ಪುನೀತ್ ರಾಜ್‍ಕುಮಾರ್ ಎದುರು ನಟಿಸಿರುವ ರಚಿತಾ ರಾಮ್‍ಗೆ, ಅಪ್ಪು ಜೊತೆ ಇದು 2ನೇ ಸಿನಿಮಾ. ಪುನೀತ್ ಜೊತೆ 2 ಚಿತ್ರಗಳಲ್ಲಿ ನಟಿಸಿರುವ ಖುಷಿಯಿದ್ದರೂ, ಅವರ ಆಸೆ ಕಂಪ್ಲೀಟ್ ಈಡೇರಿಲ್ಲ. ಈಗಲೂ ರಚಿತಾಗೆ ಅದೊಂದು ಬೇಸರ ಇದೆಯಂತೆ.

    ಚಿತ್ರರಂಗಕ್ಕೇ ಗೊತ್ತಿರೋ ಹಾಗೆ ಅಪ್ಪು ಅದ್ಭುತ ಡ್ಯಾನ್ಸರ್. ಆದರೆ, 2 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದರೂ, ರಚಿತಾಗೆ ಪುನೀತ್ ಜೊತೆ ಡ್ಯಾನ್ಸ್ ಮಾಡುವ ಅವಕಾಶ  ಸಿಕ್ಕಿಲ್ಲ. 

    ನನಗೆ ಇನ್ನೂ ಒಂದು ಚಿತ್ರದಲ್ಲಿ ಅಪ್ಪು ಜೊತೆ ನಟಿಸುವ ಅವಕಾಶ ಸಿಕ್ಕೇ ಸಿಗುತ್ತೆ. ಆಗ ನನ್ನ ಮೊದಲ ಡಿಮ್ಯಾಂಡ್, ಅಪ್ಪು ಜೊತೆ ಒಂದು ಡ್ಯಾನ್ಸ್ ಬೇಕು ಅನ್ನೋದು ಅಂತಾರೆ ರಚಿತಾ.

  • ಅಪ್ಪುಗೆ ಚುಟು ಚುಟು ಡ್ಯಾನ್ಸರ್ ಸ್ಟೆಪ್

    natasarvabhouma introductions song being shot

    ಚುಟು ಚುಟು ಅಂತೈತಿ.. ಹಾಡಿನಷ್ಟೇ ಹಿಟ್ ಆಗಿದ್ದುದು ಚುಟು ಚುಟು ಹಾಡಿಗೆ ಮಾಡಿಸಿದ್ದ ಡ್ಯಾನ್ಸ್. ಶರಣ್ ಮತ್ತು ಅಶಿಕಾರ ಮೈಮೂಳೆಯ ಬಗ್ಗೆ ಅಚ್ಚರಿ ಪಡುವಂತೆ ಸ್ಟೆಪ್ಸ್ ಹಾಕಿಸಿದ್ದ ನೃತ್ಯ ನಿರ್ದೇಶಕ ಭೂಷಣ್, ಈಗ ಪುನೀತ್ ರಾಜ್‍ಕುಮಾರ್‍ಗೆ ಡ್ಯಾನ್ಸ್ ಮಾಸ್ಟರ್ ಆಗಿದ್ದಾರೆ.

    ನಟಸಾರ್ವಭೌಮ ಚಿತ್ರದ ಇಂಟ್ರೊಡಕ್ಷನ್ ಸಾಂಗ್ ಶೂಟಿಂಗ್  ನಡೆಯುತ್ತಿದೆ. ಸ್ಟೆಪ್ಟ್ ಹೇಳಿಕೊಡ್ತಿರೋದು ಭೂಷಣ್. ಎಪಿಕ್ ಮಾದರಿಯ ಸೆಟ್‍ಗಳಲ್ಲಿ ಹಾಡಿನ ಶೂಟಿಂಗ್ ನಡೆಯುತ್ತಿದ್ದು, ಜನವರಿ ಹೊತ್ತಿಗೆ ಸಿನಿಮಾ ತೆರೆಗೆ ತರಲು ಸಿದ್ಧತೆ ನಡೆದಿದೆ. ಈ ಹಾಡು ಮುಗಿದರೆ ನಟಸಾರ್ವಭೌಮನ ಶೂಟಿಂಗ್ ಮುಗಿದಂತೆ ಎಂದಿದ್ದಾರೆ ಪವನ್ ಒಡೆಯರ್. 

    ಪುನೀತ್‍ಗೆ ಸಿನಿಮಾದಲ್ಲಿ ಇಬ್ಬರು ನಾಯಕಿಯರು. ರಚಿತಾ ರಾಮ್ ಮತ್ತು ಅನುಪಮಾ ಪರಮೇಶ್ವರನ್. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾದಲ್ಲಿ ಪುನೀತ್ ಪತ್ರಕರ್ತರಾಗಿ ಕಾಣಿಸಿಕೊಂಡಿದ್ದಾರೆ.

  • ಅಪ್ಪುಗೆ ರಚಿತಾ ಜೊತೆ ಅನುಪಮಾ ಕೂಡಾ ಜೋಡಿ..!

    natasarvabhowma gets his second heroine

    ಪುನೀತ್ ರಾಜ್‍ಕುಮಾರ್, ಪವನ್ ಒಡೆಯರ್ ಹಾಗೂ ರಾಕ್‍ಲೈನ್ ವೆಂಕಟೇಶ್ ಕಾಂಬಿನೇಷನ್‍ನ ಸಿನಿಮಾ ನಟಸಾರ್ವಭೌಮ. ಚಿತ್ರದ ಶೂಟಿಂಗ್ ಈಗಾಗಲೇ ಬಿರುಸಿನಿಂದ ನಡೆಯುತ್ತಿದೆ. ಚಿತ್ರದ ನಾಯಕಿ ರಚಿತಾ ರಾಮ್. ಚಿತ್ರಕ್ಕೆ ಇನ್ನೊಬ್ಬ ನಾಯಕಿ ಬರಲಿದ್ದಾರೆ ಎಂಬ ಸುದ್ದಿಯಿತ್ತು. ಅದೀಗ ಅಧಿಕೃತ. ಅಪ್ಪುಗೆ ಜೋಡಿಯಾಗುತ್ತಿರುವ ಇನ್ನೊಬ್ಬ ಹುಡುಗಿ ಮಲೆಯಾಳಿ ಅನುಪಮಾ ಪರಮೇಶ್ವರನ್.

    ಮಲಯಾಳಂನ ಸೂಪರ್ ಡ್ಯೂಪರ್ ಹಿಟ್ ಸಿನಿಮಾ ಪ್ರೇಮಂ ಖ್ಯಾತಿಯ ಹುಡುಗಿ. ಚಿತ್ರದಲ್ಲಿ ಅವರದ್ದು ಜೂನಿಯರ್ ಲಾಯರ್ ಪಾತ್ರವಂತೆ. ಚಿತ್ರದ ಕಥೆ ಕೇಳಿ ಇಷ್ಟಪಟ್ಟಿದ್ದಾರಂತೆ. ರಚಿತಾ ರಾಮ್ ಇದ್ದರೂ, ಇಬ್ಬರ ಪಾತ್ರಗಳಿಗೂ ಅಭಿನಯಕ್ಕೆ ಅವಕಾಶವಿದೆ. ಪ್ರಾಧಾನ್ಯತೆಯೂ ಇದೆ ಎಂದಿದ್ದಾರೆ ಪವನ್ ಒಡೆಯರ್.

    ಪುನೀತ್ ರಾಜ್‍ಕುಮಾರ್ ಚಿತ್ರದ ಮೂಲಕ ಕನ್ನಡಕ್ಕೆ ಎಂಟ್ರಿಯಾಗುತ್ತಿದ್ದೇನೆ. ಪುನೀತ್ ಅವರ ಬಗ್ಗೆ ಕೇಳಿ ತಿಳಿದಿದ್ದೇನೆ. ಅವಾರ್ಡ್ ಫಂಕ್ಷನ್‍ಗಳಲ್ಲಿ ನೋಡಿದ್ದೇನೆ. ಸದ್ಯಕ್ಕಂತೂ ಥ್ರಿಲ್ ಆಗಿದ್ದೇನೆ ಎಂದು ಹೇಳಿಕೊಂಡಿರೋದು ಅನುಪಮಾ.

    ಅಗ್ರಿಮೆಂಟ್‍ಗೆ ಇನ್ನೂ ಸೈನ್ ಆಗಿಲ್ಲ. ಆದರೆ, ನಟಿಸೋದು ಹೆಚ್ಚೂ ಕಡಿಮೆ ಪಕ್ಕಾ ಆಗಿದೆ. 

  • ಅಬ್ಬಾ..! ನಟಸಾರ್ವಭೌಮ ಚಿತ್ರದಲ್ಲಿ 11 ಹಾಡುಗಳು..!

    natasarvabhouma has 11 songs

    ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದಲ್ಲಿ ಎಷ್ಟು ಹಾಡುಗಳಿರಬಹುದು..? ನಾಲ್ಕು.. ಐದು.. ಆರು.. ಅಲ್ಲಲ್ಲ.. ಬರೋಬ್ಬರಿ 11 ಹಾಡುಗಳಿವೆ. ಲಹರಿ ಹೊರತಂದಿರುವ ಆಡಿಯೋ ಆಲ್ಬಂನಲ್ಲಿ ಒಟ್ಟು 11 ಸಾಂಗುಗಳಿವೆ.

    ಪವನ್ ಒಡೆಯರ್ ನಿರ್ದೇಶನದ ಚಿತ್ರ ಮ್ಯೂಸಿಕಲ್ ಸಿನಿಮಾ ಆಗಲಿದೆಯಾ..? ಹಾಗೇನಿಲ್ಲ ಎನ್ನುತ್ತಿದೆ ಚಿತ್ರತಂಡ. ಚಿತ್ರದಲ್ಲಿರೋದು 4 ಹಾಡುಗಳು ಮಾತ್ರ ಅಂತೆ. ಉಳಿದಂತೆ ಹಾಡುಗಳು ಜಸ್ಟ್ ಫಾರ್ ಫ್ಯಾನ್ಸ್.

    ಚಿತ್ರದಲ್ಲಿ ಅಪ್ಪುಗೆ ರಚಿತಾ ರಾಮ್, ಅನುಪಮಾ ಪರಮೇಶ್ವರನ್ ಜೋಡಿಯಾಗಿ ನಟಿಸಿದ್ದು, ಬಿ.ಸರೋಜಾದೇವಿ ಸುದೀರ್ಘ ಅವಧಿಯ ನಂತರ ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ.

     

  • ಅಭಿಮಾನಿ ದೇವರುಗಳೇ.. ನೀವೂ ನಟಸಾರ್ವಭೌಮರಾಗಿ..

    natasarvabhouma challenge to fans

    ನೀವು ಮಾಡಬೇಕಾದ್ದು ಇಷ್ಟೆ. ನಟಸಾರ್ವಭೌಮ ಚಿತ್ರದ ಟೀಸರ್ ನೋಡಿದ್ದೀರಲ್ವಾ..? ಅ ಟೀಸರ್‍ನಲ್ಲಿ ಪುನೀತ್ ರಾಜ್‍ಕುಮಾರ್ ಕಾಣಿಸಿಕೊಂಡಿದ್ರಲ್ಲಾ.. ಅದೇ ಸ್ಟೈಲ್‍ನಲ್ಲಿ ನೀವು ಪುಟ್ಟದೊಂದು ವಿಡಿಯೋ ಮಾಡಬೇಕು. ಆ ವಿಡಿಯೋವನ್ನ #Natasarvabhouma ಹ್ಯಾಷ್‍ಟ್ಯಾಗ್ ಬಳಸಿ, ಸೋಷಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಬೇಕು.

    ಹೀಗೆ ಮಾಡಿದ ವಿಡಿಯೋಗಲ್ಲಿ ದಿ ಬೆಸ್ಟ್ ವಿಡಿಯೋಗಳನ್ನ ನಟಸಾರ್ವಭೌಮ ಚಿತ್ರತಂಡ ಸೆಲೆಕ್ಟ್ ಮಾಡುತ್ತೆ. ಆ ಅಭಿಮಾನಿ ದೇವರುಗಳು ನಟಸಾರ್ವಭೌಮ ಚಿತ್ರದ ಆಡಿಯೋ ಬಿಡುಗಡೆ ದಿನದ ಕಾರ್ಯಕ್ರಮದಲ್ಲಿ ಅಪ್ಪು ಜೊತೆ ಸ್ಟೇಜ್ ಮೇಲಿರ್ತಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರಕ್ಕೆ ಪವನ್ ಒಡೆಯರ್ ನಿರ್ದೇಶನವಿದೆ. ರಚಿತಾ ರಾಮ್-ಅನುಪಮಾ ಪರಮೇಶ್ವರನ್ ನಾಯಕಿಯಾಗಿರುವ ಚಿತ್ರದಲ್ಲಿ ಬಿ.ಸರೋಜಾದೇವಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  • ಅವತಾರ್ ಪುರುಷ ಶರಣ್

    sharan's next is avatar purusha

    ಅವತಾರ ಪುರುಷ ಶರಣ್ ಅವರನ್ನು ಅಕ್ಷರಶಃ ಅವತಾರ್ ಪುರುಷ ಮಾಡಿಬಿಟ್ಟಿದ್ದಾರೆ ಸಿಂಪಲ್ ಸುನಿ. ಸುನಿ ನಿರ್ದೇಶನದಲ್ಲಿ ನಟಿಸುತ್ತಿರುವ ಶರಣ್ ಹೊಸ ಚಿತ್ರದ ಟೈಟಲ್ಲೇ ಅವತಾರ್ ಪುರುಷ.

    ಅವತಾರ ಪುರುಷ ಎಂದರೆ ತಕ್ಷಣ ನೆನಪಿಗೆ ಬರೋದು ಅಂಬರೀಷ್ ಸಿನಿಮಾ. 1991ರಲ್ಲಿ ರಿಲೀಸ್ ಆಗಿದ್ದ ಅಂಬಿ-ಸುಮಲತಾ ಜೋಡಿಯ ಸಿನಿಮಾ. ಅದೇ ಹೆಸರಲ್ಲಿ ಶರಣ್ ಸಿನಿಮಾ ಮಾಡುತ್ತಿರುವುದು ವಿಶೇಷ. ಅಷ್ಟೆ ಅಲ್ಲ, ಅವತಾರ್ ಎಂದರೆ ನೆನಪಿಗೆ ಬರೋದು ಹಾಲಿವುಡ್‍ನ ಜೇಮ್ಸ್ ಕ್ಯಾಮರೂನ್ ಸಿನಿಮಾ. 

    ಎರಡನ್ನೂ ನೆನಪಿಸುವಂತೆ ಪೋಸ್ಟರ್ ಹೊರಬಿಟ್ಟಿದ್ದಾರೆ ಸಿಂಪಲ್ ಸುನಿ. ಅಂದಹಾಗೆ ಇದು ಶರಣ್ ಅವರಿಗೆ ಹುಟ್ಟುಹಬ್ಬದ ಗಿಫ್ಟು.

    ಪುಷ್ಕರ್ ಮಲ್ಲಿಕಾರ್ಜುನಯ್ಯ, ಶರಣ್ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್ನಿನ ಮೊದಲ ಚಿತ್ರ ಇದು. ಚಿತ್ರದಲ್ಲಿ ಶರಣ್ ಜ್ಯೂನಿಯರ್ ಆರ್ಟಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

  • ಆ 3 ಕಾರಣ ಸಾಕಿತ್ತು.. ರಚಿತಾ ಓಕೆ ಎನ್ನೋಕೆ..!

    main reason why rachita accepted natasarvabhouma

    ರಚಿತಾ ರಾಮ್, ಈಗ ಡಿಂಪಲ್ ಸ್ಟಾರ್. ಬೆನ್ನು ಬೆನ್ನಿಗೇ ಅವರ ಚಿತ್ರಗಳು ರಿಲೀಸ್ ಆಗುತ್ತಿವೆ. ಸೀತಾರಾಮ ಕಲ್ಯಾಣ, ಚಿತ್ರಮಂದಿರಗಳಲ್ಲಿ ಯಶಸ್ಸಿನ ಸಂಭ್ರಮದಲ್ಲಿರುವಾಗಲೇ ನಟಸಾರ್ವಭೌಮ ರಿಲೀಸ್ ಆಗುತ್ತಿದೆ. ನಟಸಾರ್ವಭೌಮ ಚಿತ್ರದ ಮೊದಲ ಆಯ್ಕೆ ರಚಿತಾ ಆಗಿರಲಿಲ್ಲ. ಆದರೂ.. ಅವರು ಪಾತ್ರದ ಆಫರ್ ಬಂದ ಕೂಡಲೇ ಓಕೆ ಎಂದಿದ್ದೇಕೆ ಗೊತ್ತಾ..?

    ಕಾರಣ ನಂ.1 - ಪುನೀತ್ ರಾಜ್ ಕುಮಾರ್

    ಪುನೀತ್ ಜೊತೆ ಅದಾಗಲೇ ಚಕ್ರವ್ಯೂಹ ಚಿತ್ರದಲ್ಲಿ ಅಭಿನಯಿಸಿದ್ದ ರಚಿತಾ ರಾಮ್, ಸಿಗುತ್ತಿರುವ 2ನೇ ಅವಕಾಶವನ್ನೂ ಬಿಡೋಕೆ ತಯಾರಿರಲಿಲ್ಲ. ಪುನೀತ್ ಹೀರೋ ಎಂದ ಕೂಡಲೇ ಓಕೆ ಎಂದರು.

    ಕಾರಣ ನಂ. 2 - ಪವನ್ ಒಡೆಯರ್ 

    ಪವನ್ ಒಡೆಯರ್ ಅವರ ಸಿನಿಮಾಗಳ ಬಗ್ಗೆ ಕೇಳಿದ್ದೆ. ಸಿನಿಮಾಗಳನ್ನು ನೋಡಿ ಇಷ್ಟಪಟ್ಟಿದ್ದೆ. ಆದರೆ, ಅವಕಾಶಗಳು ಸಿಕ್ಕಿರಲಿಲ್ಲ. ಅವಕಾಶ ಸಿಕ್ಕಾಗ ಬಿಡಬೇಕು ಎನ್ನಿಸಲಿಲ್ಲ.

    ಕಾರಣ ನಂ.3 - ರಾಕ್‍ಲೈನ್ ವೆಂಕಟೇಶ್

    ಕನ್ನಡದ ಅತಿದೊಡ್ಡ ನಿರ್ಮಾಪಕರು ಅವರು. ಅವರ ಬ್ಯಾನರ್‍ನಲ್ಲಿ ನಟಿಸುವ ಅವಕಾಶ ಮಿಸ್ ಮಾಡಿಕೊಳ್ಳೋಕೆ ಸಾಧ್ಯವೇ ಇರಲಿಲ್ಲ. ಅವರು ಕೇಳಿದ ಕೂಡಲೇ, ಯೆಸ್ ಎಂದುಬಿಟ್ಟೆ.

    ಅದಕ್ಕೆ ತಕ್ಕಂತೆ, ಕಥೆ, ಪಾತ್ರ ಎಲ್ಲವೂ ಅದ್ಭುತವಾಗಿದೆ ಎನ್ನುತ್ತಾರೆ ರಚಿತಾ ರಾಮ್.

  • ಉಪ್ಪಿ ಸ್ಟೈಲ್‍ನಲ್ಲಿ ನಟಸಾರ್ವಭೌಮ ಅಪ್ಪು

    natasarvabhouma imitates upendra's styles

    ಉಪೇಂದ್ರ ಅವರ ಸ್ಟೈಲ್ ಎಂದರೆ ಕೆಲವೊಂದು ಟಿಪಿಕಲ್ ಸ್ಟೈಲ್ ನೆನಪಿಗೆ ಬರುತ್ತವೆ. ಉಪ್ಪಿ ಅವರ ಬರಿವೋಳು ಡ್ಯಾನ್ಸ್ ಸ್ಟೆಪ್, ನಡಿಗೆಯ ಶೈಲಿ, ಡೈಲಾಗ್ ಡೆಲಿವರಿ ಸ್ಟೈಲ್, ಉದ್ದನೆಯ ಕೂದಲು, ಕುರುಚಲು ಗಡ್ಡ.. ಹೀಗೆ.. ಈ ಎಲ್ಲದರ ಜೊತೆಗೆ ಗಮನ ಸೆಳೆಯುವುದು ಅವರ ಕಣ್ಣುಗಳು.

    ಉಪೇಂದ್ರ ಚಿತ್ರದಲ್ಲಿ ಎರಡೂ ಕಣ್ಣು ಗುಡ್ಡೆಗಳನ್ನು ಅತ್ತಿಂದಿತ್ತ.. ಇತ್ತಿಂದತ್ತ.. ಚಕಚಕನೆ ಚಲಿಸಿ ಪ್ರೇಕ್ಷಕರಿಗೆ ಶಾಕ್ ಕೊಟ್ಟಿದ್ದರು ಉಪೇಂದ್ರ. ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದಾಗ ತಮ್ಮ ಕಣ್ಣಿನ ಚಿಕಿತ್ಸೆಯ ಕಥೆಯನ್ನು ಬಿಚ್ಚಿಟ್ಟಿದ್ದರು. ತಮಗಿರುವ ನ್ಯೂನತೆಯನ್ನೇ ಪ್ಲಸ್ ಮಾಡಿಕೊಂಡಿದ್ದರು ಉಪ್ಪಿ. ಆದರೆ, ವಿಷಯ ಅದಲ್ಲ.

    ಉಪೇಂದ್ರ ಅವರ ಅಭಿಮಾನಿಯೂ ಆಗಿರುವ ಪುನೀತ್ ರಾಜ್‍ಕುಮಾರ್, ಆ ಸ್ಟೈಲ್‍ನ್ನು ಅಷ್ಟೇ ಅದ್ಭುತವಾಗಿ ಪ್ರೆಸೆಂಟ್ ಮಾಡಿದ್ದಾರೆ. ನಟಸಾರ್ವಭೌಮ ಟ್ರೇಲರ್‍ನಲ್ಲಿ ಎಲ್ಲಲರನ್ನೂ ಬೆರಗುಗೊಳಿಸಿದ್ದಾರೆ. ಪುನೀತ್ ರಾಜ್‍ಕುಮಾರ್ ಕಣ್ಣು ಕೂಡಾ ಚಕಚಕನೆ ಕದಲುವುದನ್ನು ನೋಡಿದವರು ಬೆರಗುಗೊಂಡಿದ್ದಾರೆ. 

    ನೋಡುವುದಕ್ಕೆ ಸಿಂಪಲ್ ಆಗಿ ಕಂಡರೂ, ಅದು ಅಷ್ಟು ಸುಲಭವಲ್ಲ. ಹಾಗೆ ಚಕಚಕನೆ ಕಣ್ಣಿನ ಗುಡ್ಡೆಗಳನ್ನು ಮೂವ್ ಮಾಡುವುದರಿಂದ ತಲೆನೋವು, ಕಣ್ಣುಗಳಲ್ಲಿ ಅಪಾರ ನೋವು ಸೃಷ್ಟಿಯಾಗುತ್ತೆ. ಆದರೂ, ಸಿನಿಮಾಗಾಗಿ ಆ ರಿಸ್ಕ್ ತೆಗೆದುಕೊಂಡು ಗೆದ್ದಿದ್ದಾರೆ ಅಪ್ಪು.

  • ಕಥೆ ಕೇಳಿದಾಗ ಅಪ್ಪುಗೆ ನೆನಪಾಗಿದ್ದೇ ಆ ಇಬ್ಬರು..!

    puneeth remembered rajkumar and amabreesh when he heard natasarvabhouma script

    ನಟಸಾರ್ವಭೌಮ ಚಿತ್ರದ ಕಥೆ ಕೇಳಿದಾಗ ಥ್ರಿಲ್ಲಾದೆ. ಜರ್ನಲಿಸ್ಟ್ ಪಾತ್ರ ನನಗೂ ಹೊಸದು. ಹೀಗಾಗಿ ಕ್ಯೂರಿಯಾಸಿಟಿ ಶುರುವಾಯ್ತು. ಜೊತೆಗೆ ಹಾರರ್ ಎಲಿಮೆಂಟ್ಸ್ ಇವೆ ಎಂದಾಗ ಇನ್ನಷ್ಟು ಕುತೂಹಲ ಹುಟ್ಟಿತು... ಎಂದು ಕಥೆ ಕೇಳಿದಾಗಿನ ಅನುಭವ ಹೇಳಿಕೊಂಡಿದ್ದಾರೆ ಪುನೀತ್.

    ಅಂದಹಾಗೆ ಕನ್ನಡದಲ್ಲಿ ಜರ್ನಲಿಸ್ಟ್ ಪಾತ್ರಗಳನ್ನು ಹಲವರು ಮಾಡಿದ್ದಾರೆ. ಆದರೆ, ಇವತ್ತಿಗೂ ಕನ್ನಡ ಸಿನಿಮಾಗಳಲ್ಲಿ ಜರ್ನಲಿಸ್ಟ್ ಪಾತ್ರ ಎಂದರೆ ತಕ್ಷಣ ನೆನಪಿಗೆ ಬರುವ 2 ಚಿತ್ರಗಳು ಜ್ವಾಲಾಮುಖಿ ಮತ್ತು ನ್ಯೂ ಡೆಲ್ಲಿ.

    `ನನಗೂ ಅಷ್ಟೆ, ಕಥೆ ಕೇಳಿದ ತಕ್ಷಣ ಅಪ್ಪಾಜಿಯ ಜ್ವಾಲಾಮುಖಿ ಸಿನಿಮಾ ಮತ್ತು ಅಂಬರೀಷ್ ಅಂಕಲ್ ಅಭಿನಯದ ನ್ಯೂ ಡೆಲ್ಲಿ ಸಿನಿಮಾ ನೆನಪಾಯ್ತು. ಆದರೆ, ಇದು ಅಂತಹ ಪಾತ್ರ ಅಲ್ಲ. ನಾನಿಲ್ಲಿ ಫೋಟೋ ಜರ್ನಲಿಸ್ಟ್ ಎಂದಿದ್ದಾರೆ ಪುನೀತ್.

  • ಕೆಜಿಎಫ್ ಜೊತೆಯಲ್ಲೇ ಶಿವಣ್ಣ, ಅಪ್ಪು ಕಿಕ್

    natasarvabhouma, kavacha teaser - trailer during kgf

    ಕೆಜಿಎಫ್ ರಿಲೀಸ್ ಆದ ದಿನ ಥಿಯೇಟರಿಗೆ ಅಕ್ಷರಶಃ ನುಗ್ಗಿ ಚಿತ್ರವನ್ನು ಕಣ್ತುಂಬಿಕೊಂಡ ಚಿತ್ರರಸಿಕರಿಗೆ ಇನ್ನೆರಡು ಗಿಫ್ಟ್‍ಗಳೂ ಜೊತೆಯಲ್ಲಿದ್ದವು. ಒಂದು ಶಿವರಾಜ್‍ಕುಮಾರ್ ಅವರದ್ದು. ಇನ್ನೊಂದು ಪುನೀತ್ ರಾಜ್‍ಕುಮಾರ್‍ದು.

    ಮುಂದಿನ ತಿಂಗಳು ರಿಲೀಸ್‍ಗೆ ರೆಡಿಯಾಗಿರುವ ಕವಚ ಚಿತ್ರದ ಟ್ರೇಲರ್‍ನ್ನು ಕೆಜಿಎಫ್ ಜೊತೆಯಲ್ಲಿಯೇ ರಿಲೀಸ್ ಮಾಡಲಾಗಿದೆ. ಶಿವಣ್ಣ ಮೊದಲ ಬಾರಿಗೆ ಅಂಧನಾಗಿ ನಟಿಸಿರುವ, 14 ವರ್ಷಗಳ ನಂತರ ರೀಮೇಕ್‍ನಲ್ಲಿ ನಟಿಸಿರುವ ಚಿತ್ರ ಕವಚ.

    ಇನ್ನು ಪುನೀತ್ ರಾಜ್‍ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರದ ಟೀಸರ್ ಕೂಡಾ ಕೆಜಿಎಫ್ ಜೊತೆಯಲ್ಲೇ ಹೊರಬಂದಿದೆ. ಡ್ಯಾನ್ಸ್ ವಿತ್ ಅಪ್ಪು ಎಂಬ ಹಾಡಿನಲ್ಲಿ ಅಪ್ಪು ಮತ್ತೊಮ್ಮೆ ಮೈನವಿರೇಳಿಸುವ ಸ್ಟೆಪ್ ಹಾಕಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ.

  • ಗಣರಾಜ್ಯೋತ್ಸವಕ್ಕೆ ನಟಸಾರ್ವಭೌಮ

    natasarvahouma may release on republic day

    ಪುನೀತ್‍ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್, ಪವನ್ ಒಡೆಯರ್, ರಚಿತಾ ರಾಮ್ ಕಾಂಬಿನೇಷನ್‍ನ ಸಿನಿಮಾ ನಟಸಾರ್ವಭೌಮ. ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ನಟಸಾರ್ವಭೌಮ, ಗಣರಾಜ್ಯೋತ್ಸವಕ್ಕೆ ರಿಲೀಸ್ ಆಗುವುದು ಪಕ್ಕಾ ಆಗಿದೆ. ಜನವರಿ 24ಕ್ಕೆ ಚಿತ್ರವನ್ನು ರಿಲೀಸ್ ಮಾಡುವ ಸಾಧ್ಯತೆಗಳಿವೆ. ಚಿತ್ರದ ಟೀಸರ್ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ.

    ರಚಿತಾ ರಾಮ್, ಅನುಪಮಾ ಪರಮೇಶ್ವರನ್ ನಾಯಕಿಯರಾಗಿದ್ದು, ಬಿ.ಸರೋಜಾದೇವಿ ಹಲವಾರು ವರ್ಷಗಳ ನಂತರ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ. 1984ರಲ್ಲಿ ಯಾರಿವನು ಚಿತ್ರದಲ್ಲಿ ಪುನೀತ್ ಅವರಿಗೆ ತಾಯಿಯಾಗಿ ನಟಿಸಿದ್ದ ಬಿ.ಸರೋಜಾದೇವಿ, ಈ ಚಿತ್ರದಲ್ಲಿ ಸರೋಜಾದೇವಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.

  • ಚಿಕ್ಕಪ್ಪ-ದೊಡ್ಡಪ್ಪ ಇಬ್ಬರನ್ನೂ ಮೀರಿಸುವ ಯುವರಾಜನ ಡ್ಯಾನ್ಸ್

    yuva rajkumar to love perform at natasarvabhouma's audio launch

    ಸ್ಯಾಂಡಲ್‍ವುಡ್‍ನ ನಂ.1 ಡ್ಯಾನ್ಸರ್ ಯಾರು ಎಂದರೆ ಅನುಮಾನವೇ ಇಲ್ಲದಂತೆ ಕಣ್ಣ ಮುಂದೆ ಬರೋದು ಪುನೀತ್ ರಾಜ್‍ಕುಮಾರ್. ಅವರ ಪ್ರತಿ ಚಿತ್ರದಲ್ಲೂ ಒಂದಲ್ಲ ಒಂದು ವಿಶೇಷ ಸ್ಟೆಪ್ ಇದ್ದೇ ಇರುತ್ತೆ. ಈಗ ಅವರನ್ನೂ ಮೀರಿಸುವ ಸುಳಿವು ಕೊಡುತ್ತಾ ಬಂದಿದೆ ಯುವ ಕುಡಿ. ಇನ್ನು ಶಿವಣ್ಣನ ಡ್ಯಾನ್ಸ್ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅಗತ್ಯವೇ ಇಲ್ಲ. 

    ರಾಘವೇಂದ್ರ ರಾಜ್‍ಕುಮಾರ್ ಅವರ 2ನೇ ಪುತ್ರ ಯುವ ರಾಜ್ ಕುಮಾರ್ ಅವರ ಡ್ಯಾನ್ಸ್, ಚಿಕ್ಕಪ್ಪ, ದೊಡ್ಡಪ್ಪ ಇಬ್ಬರನ್ನೂ ಮೀರಿಸುವಂತಿದೆ. ನಟಸಾರ್ವಭೌಮ ಚಿತ್ರದ ಪುನೀತ್ ಡ್ಯಾನ್ಸ್‍ಗೆ ಯುವರಾಜ್ ಕುಮಾರ್ ಸ್ಟೆಪ್ ಹಾಕಿದ್ದು, ಹುಬ್ಬೇರಿಸುವಂತಿದೆ. ಜನವರಿ 5ರಂದು ಹುಬ್ಬಳ್ಳಿಯಲ್ಲಿ ನಟಸಾರ್ವಭೌಮ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮವಿದ್ದು, ಆ ದಿನ ಯುವರಾಜ್ ಕುಮಾರ್ ಸ್ಟೇಜ್ ಮೇಲೆ ಶೋ ಕೊಡಲಿದ್ದಾರಂತೆ. 

    ಈಗಾಗಲೇ ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ಯುವರಾಜ್ ಕುಮಾರ್, ಸಮಾಜಸೇವೆ ಕಾರ್ಯಗಳಲ್ಲಿಯೇ ಹೆಚ್ಚು ತೊಡಗಿಸಿಕೊಂಡಿದ್ದಾರೆ. ಬಹಿರಂಗವಾಗಿ ಹೆಚ್ಚು ಕಾಣಿಸಿಕೊಳ್ಳದ ಯುವರಾಜ್, ಚಿಕ್ಕಪ್ಪನ ಬಹು ನಿರೀಕ್ಷೆಯ ಚಿತ್ರದ ಆಡಿಯೋ ರಿಲೀಸ್‍ನಲ್ಲಿ ಮಿಂಚಲಿದ್ದಾರೆ.

  • ಜನವರಿ 5ಕ್ಕೆ ಆಡಿಯೋ.. ಫೆಬ್ರವರಿ 7ಕ್ಕೆ ವಿಡಿಯೋ..

    natasarvabhouma audio on jan 5th

    ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಬಹುನಿರೀಕ್ಷಿತ ಚಿತ್ರ 2019ರ ಆರಂಭದಲ್ಲೇ ತೆರೆಗೆ ಬರುವುದು ಅಧಿಕೃತವಾಗಿದೆ. ನಟಸಾರ್ವಭೌಮ ಚಿತ್ರದ ಬಿಡುಗಡೆಗೆ ವೇದಿಕೆ ಸಿದ್ಧಗೊಳ್ಳುತ್ತಿದ್ದು, ಜನವರಿ 5ರಂದು ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ. ಸಿನಿಮಾ ರಿಲೀಸ್ ಆಗುವುದು ಫೆಬ್ರವರಿ 7ನೇ ತಾರೀಕಿಗೆ. ಅಂದರೆ, ಆಡಿಯೋ ರಿಲೀಸ್ ಆದ ಬರೋಬ್ಬರಿ 1 ತಿಂಗಳ ಚಿತ್ರ, ಪ್ರೇಕ್ಷಕರ ಎದುರು ಬರಲಿದೆ. ಕಳೆದ ವರ್ಷವಿಡೀ ಪುನೀತ್ ಸಿನಿಮಾ ಇರಲಿಲ್ಲ. ಹೀಗಾಗಿ ಅಪ್ಪು ಅಭಿಮಾನಿಗಳ ನಿರೀಕ್ಷೆ ಆಕಾಶದಲ್ಲಿದೆ.

    ಪವನ್ ಒಡೆಯರ್ ನಿರ್ದೇಶನದ ಚಿತ್ರಕ್ಕೆ ರಾಕ್‍ಲೈನ್ ವೆಂಕಟೇಶ್ ನಿರ್ಮಾಪಕ. ರಚಿತಾ ರಾಮ್ ಮತ್ತೊಮ್ಮೆ ಅಪ್ಪು ಜೋಡಿಯಾಗಿದ್ದರೆ, ಅನುಪಮಾ ಪರಮೇಶ್ವರ್ ಗಮನ ಸೆಳೆಯುತ್ತಿದ್ದಾರೆ. ಬಿ.ಸರೋಜಾದೇವಿ ಹಲವು ವರ್ಷಗಳ ನಂತರ ತೆರೆ ಮೇಲೆ ಬರುತ್ತಿದ್ದಾರೆ. ಅಪ್ಪು ಜೊತೆ ಡ್ಯಾನ್ಸ್ ಮಾಡೋಕೆ ಸಿದ್ಧರಾ

  • ಜೋಪಾನ.. ಹೃದಯ ಕದ್ದೇಬಿಟ್ಟ ನಟಸಾರ್ವಭೌಮ

    natasarvabhouma duet song wins lover's heart

    ನಟಸಾರ್ವಭೌಮ ಚಿತ್ರದ ಯುಗಳ ಗೀತೆ ಹೊರಬಿದ್ದಿದೆ. ಪವರ್ ಸ್ಟಾರ್ ಪುನೀತ್-ಪವನ್ ಒಡೆಯರ್-ರಾಕ್‍ಲೈನ್ ವೆಂಕಟೇಶ್-ರಚಿತಾ ರಾಮ್ ಕಾಂಬಿನೇಷನ್ನಿನ ಸಿನಿಮಾ. ಫೆಬ್ರವರಿ 7ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾದ ಯುಗಳ ಗೀತೆಯನ್ನು ತೇಲಿಬಿಟ್ಟಿದೆ ಚಿತ್ರತಂಡ.

    ಜೋಪಾನ.. ಜೋಕೆ ಜೋಪಾನ.. ನನ್ನ ಹೃದಯ ಕದಿಯೋ ಕಳ್ಳ ಬಂದ ಜೋಪಾನ.. ಸೋತೆ ನಾ.. ಪೂರ್ತಿ ಸೋತೆ ನಾ.. ಇವನ ನಡತೆ ನೋಡಿ ಮತ್ತೆ ಮತ್ತೆ ಸೋತೆ ನಾ.. ಸುಳಿದರು ಕಣ್ಣ ಮುಂದೆ.. ಹುಡುಗರು ನೂರು.. ಸರಿಸಮ ಯಾರಿಲ್ಲ ಇವನಿಗೆ ಚೂರು.. ಇವನನು ಹೆತ್ತವರು ಯಾರು.. 

    ಯಾರೋ ನಾನು.. ಯಾರೋ ನೀನು.. ನಂದೂ ನಿಂದೂ ಒಂದೇ ಏನು..?

    ಕವಿರಾಜ್ ಬರೆದಿರುವ ಹಾಡಿಗೆ ಅಷ್ಟೇ ಮಧುರ ಧ್ವನಿ ಕೊಟ್ಟಿರೋದು ಶ್ರೇಯಾ ಘೋಷಾಲ್. ಇಮಾನ್ ಮ್ಯೂಸಿಕ್ ನೀಡಿರುವ ಸಿನಿಮಾದ ಹಾಡು, ಹೃದಯ ಕದಿಯುವಂತಿದೆ.

  • ತಾಜಾ ಸಮಾಚಾರ.. ನಟಸಾರ್ವಭೌಮನ 50ನೇ ದಿನದ ಕಾಣಿಕೆ

    natasarvabhouma celebrates 50 days

    ಪುನೀತ್ ರಾಜ್‍ಕುಮಾರ್, ರಚಿತಾ ರಾಮ್, ಅನುಪಮಾ, ರವಿಶಂಕರ್, ಚಿಕ್ಕಣ್ಣ, ಸಾಧುಕೋಕಿಲ, ಬಿ.ಸರೋಜಾದೇವಿ.. ಹೀಗೆ ದೊಡ್ಡ ದೊಡ್ಡ ಕಲಾವಿದರೇ ತುಂಬಿದ್ದ, ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಚಿತ್ರ ಯಶಸ್ವಿಯಾಗಿ 50 ದಿನ ಪೂರೈಸಿದೆ. 

    ರಾಕ್‍ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರ ಈ ಸಕ್ಸಸ್ ಖುಷಿಯನ್ನು ಚಿತ್ರದ ಸೂಪರ್ ಹಿಟ್ ಸಾಂಗ್ ತಾಜಾ ಸಮಾಚಾರ.. ಹಾಡಿನ ವಿಡಿಯೋ ಬಿಡುಗಡೆ ಮಾಡುವುದರ ಮೂಲಕ ಹಂಚಿಕೆಕೊಂಡಿದೆ.

    ಪುನೀತ್, ಅನುಪಮಾ ನಡುವಿನ ಸರಸ ಸಲ್ಲಾಪದ ಈ ಗೀತೆಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದರೆ, ಜಿತಿನ್ ರಾಜ್ ಹಾಡಿದ್ದಾ

  • ಥ್ಯಾಂಕ್ಯೂ ಯಶ್ - ಪುನೀತ್ ರಾಜ್ ಕುಮಾರ್

    yash wishes good luck to natasarvabhouma

    ನಟಸಾರ್ವಭೌಮ ಚಿತ್ರಕ್ಕೆ ಶುಭ ಹಾರೈಸಿದವರಲ್ಲಿ ಸ್ಯಾಂಡಲ್‍ವುಡ್ ಸ್ಟಾರ್‍ಗಳ ದೊಡ್ಡ ಕ್ಯೂ ಇದೆ. ಕಿಚ್ಚ ಸುದೀಪ್, ಅಪ್ಪು ಡ್ಯಾನ್ಸ್ ನೋಡೋಕೆ ಕಾಯುತ್ತಿದ್ದೇನೆ ಎಂದು ಹೇಳೋ ಮೂಲಕ ನಿರೀಕ್ಷೆಯ ಕಿಚ್ಚು ಹೊತ್ತಿಸಿದ್ದರು. ಈಗ ಯಶ್ ಕೂಡಾ ಅಪ್ಪು ಸಿನಿಮಾಗೆ ಶುಭ ಹಾರೈಸಿದ್ದಾರೆ.

    ಅಪ್ಪು ಸರ್ ತಮ್ಮ ವಿಶಿಷ್ಟ, ವಿಭಿನ್ನ ಡ್ಯಾನ್ಸ್, ಪಾತ್ರಪೋಷಣೆಯ ಮೂಲಕ ಅಪಾರ ನಿರೀಕ್ಷೆ ಹುಟ್ಟುಹಾಕಿದ್ದಾರೆ. ನಟಸಾರ್ವಭೌಮ ಯಶಸ್ಸು ಕಾಣಲಿ ಎಂದು ಶುಭ ಕೋರಿದ್ದಾರೆ ಯಶ್.

    ಪುನೀತ್ ರಾಜ್‍ಕುಮಾರ್, ಥ್ಯಾಂಕ್ಯೂ ಯಶ್ ಎಂದಿದ್ದಾರೆ. ಕೆಜಿಎಫ್ ಚಿತ್ರದ ಬಿಡುಗಡೆ ವೇಳೆ, ಪುನೀತ್ ರಾಜ್‍ಕುಮಾರ್, ಯಶ್ ಚಿತ್ರಕ್ಕೆ ಶುಭ ಕೋರಿ ವಿಡಿಯೋ ಸಂದೇಶ ಕಳುಹಿಸಿದ್ದರು.

  • ದಟ್ ಈಸ್ ಪುನೀತ್ ಪವರ್ 

    natasarvabhouma rules box office on weekdays too

    ಸಾಮಾನ್ಯವಾಗಿ ಸ್ಟಾರ್‍ಗಳ ಚಿತ್ರಗಳು ರಿಲೀಸ್ ಆದರೆ ಮೊದಲೆರಡು ದಿನ, ವೀಕೆಂಡ್ ಭರ್ಜರಿ ಹೌಸ್‍ಫುಲ್ ಶೋ ಇರುತ್ತವೆ. ಥಿಯೇಟರುಗಳು ತುಂಬಿ ತುಳುಕುತ್ತವೆ. ಪುನೀತ್ ಸಿನಿಮಾಗಳೂ ಅದಕ್ಕೆ ಹೊಸದಲ್ಲ. ಆದರೆ, ಪುನೀತ್ ಸಿನಿಮಾಗಳು ಬೇರೆಯವರಿಗಿಂತ ಡಿಫರೆಂಟ್ ಎನ್ನುವುದಕ್ಕೆ ಸಾಕ್ಷಿ ನುಡಿಯುತ್ತಿದೆ ನಟಸಾರ್ವಭೌಮ.

    ಕನ್ನಡದಲ್ಲಿ ಮೊದಲ ದಿನವೇ ಮಹಿಳಾ ಪ್ರೇಕ್ಷಕರು ಮತ್ತು ಕುಟುಂಬದವರನ್ನು ಥಿಯೇಟರಿಗೆ ಕರೆತರುವ ಶಕ್ತಿ ಇರುವುದು ಪುನೀತ್ ರಾಜ್‍ಕುಮಾರ್‍ಗೆ. ಈಗ ವೀಕೆಂಡ್ ನಂತರ ಅಂದರೆ, ಸೋಮವಾರ, ಮಂಗಳವಾರವೂ ಹೌಸ್‍ಫುಲ್ ಪ್ರದರ್ಶನ ಕಾಣುತ್ತಿದೆ ನಟಸಾರ್ವಭೌಮ.

    ಹೀಗಾಗಿ ಥಿಯೇಟರುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಶೋಗಳ ಸಂಖ್ಯೆಯೂ ಹೆಚ್ಚಿದೆ. ವಿದೇಶದಲ್ಲೂ ಬಿಡುಗಡೆಯಾಗುತ್ತಿರುವ ನಟಸಾರ್ವಭೌಮ, ಪುನೀತ್ ಸಿನಿಮಾಗಳ ಹಿಂದಿನವುಗಳಿಗಿಂತ ಡಿಫರೆಂಟ್ ಎನ್ನುವುದೇ ವಿಶೇಷ. ದಟ್ ಈಸ್ ಪುನೀತ್ ರಾಜ್‍ಕುಮಾರ್.