` katheyondhu shuruvagidhe, - chitraloka.com | Kannada Movie News, Reviews | Image

katheyondhu shuruvagidhe,

  • 25 ಪ್ರೇಮಿಗಳ ಪ್ರೇಮಕಥೆ ನೋಡಿದಿರಾ..?

    katheyondhu shuruvagidhe

    ಕಥೆಯೊಂದು ಶುರುವಾಗಿದೆ ಚಿತ್ರ ವಿದೇಶಗಳಲ್ಲೊಂದು ಸುತ್ತು ಪ್ರಯಾಣ ಮುಗಿಸಿ, ಕರ್ನಾಟಕಕ್ಕೆ ಬಂದಿದೆ. ನಾಳೆ (ಆಗಸ್ಟ್ 2) ಚಿತ್ರದ ಪ್ರೀಮಿಯರ್ ಶೋ ಬೆಂಗಳೂರಿನ ಜಿಟಿ ಮಾಲ್‍ನಲ್ಲಿ ಪ್ರೀಮಿಯರ್ ಶೋ ಇದೆ. ಈ ಪ್ರೀಮಿಯರ್ ಶೋ ಪ್ರೇಮಿಗಳಿಗಾಗಿ ಎಂದು ಷರತ್ತು ಹಾಕಿತ್ತು ಚಿತ್ರತಂಡ. ಸಾವಿರಾರು ಮಂದಿ ಪ್ರೇಮಿಗಳು ತಮ್ಮ ತಮ್ಮ ಲವ್‍ಸ್ಟೋರಿಗಳನ್ನು ವಿಡಿಯೋ ಮಾಡಿ ಕಳಿಸಿದ್ದಾರೆ. ಹಾಗೆ ಕಳುಹಿಸಿದವರಲ್ಲಿ 25 ಪ್ರೇಮಜೋಡಿಯನ್ನು ಚಿತ್ರತಂಡ ಆಯ್ಕೆ ಮಾಡಿದೆ.

    ಅಮೆರಿಕ, ಇಂಗ್ಲೆಂಡ್, ಜರ್ಮನಿ, ಆಸ್ಟ್ರೇಲಿಯ ಸೇರಿದಂತೆ ವಿವಿಧ ದೇಶಗಳಲ್ಲಿ 11 ಪ್ರೀಮಿಯರ್ ಶೋ ಮುಗಿಸಿ ಬಂದಿರುವ ಚಿತ್ರತಂಡ ನಾಳೆ ಬೆಂಗಳೂರಿನಲ್ಲಿ ಪ್ರೀಮಿಯರ್ ಶೋ ಇಟ್ಟುಕೊಂಡಿದೆ. ಹೀಗೆ ವಿಭಿನ್ನ ವಯೋಮಾನದ ಜೋಡಿಗಳನ್ನು ಆಯ್ಕೆ ಮಾಡಿಕೊಳ್ಳೋಕೆ ಕಾರಣ, ಚಿತ್ರದ ಕಥೆ.

    ಚಿತ್ರದಲ್ಲಿ ದಿಗಂತ್, ಪೂಜಾ ದೇವರಿಯಾ, ಅರುಣಾ ಬಾಲರಾಜ್, ಬಾಬು ಹಿರಣ್ಣಯ್ಯ ಸೇರಿದಂತೆ ನಾಲ್ಕು ವಯೋಮಾನದ ಪ್ರೇಮಜೋಡಿಗಳ ಕಥೆಯಿದೆ. ಹೀಗಾಗಿ.. ಇದು ಪ್ರೇಮಿಗಳಿಗಾಗಿ.. ಪ್ರೀತಿಸುವವರಿಗಾಗಿ.. ವಯಸ್ಸು.. ಎಷ್ಟೇ ಇರಲಿ.. ಪ್ರೀತಿ ಮಾಡ್ತಿರೋದು ಮುಖ್ಯ.

  • 4 ದಿನ, 7 ಪಾತ್ರ.. ಕಥೆಯೊಂದು ಶುರುವಾಗಿದೆ

    diganth, pooja devariya in katheyondhu shuruvagidhe

    ಕಥೆಯೊಂದು ಶುರುವಾಗಿದೆ.. ಇದು ದಿಗಂತ್ ಅಭಿನಯದ ಸಿನಿಮಾ. ಚಿತ್ರಕ್ಕೆ ಸನ್ನಾ ಹೆಗ್ಡೆ ನಿರ್ದೇಶನವಿದೆ. ಪರಂವಾ ಸ್ಟುಡಿಯೋಸ್ ನಿರ್ಮಾಣದ ಈ ಸಿನಿಮಾದ ವಿಶೇಷವೇ 7 ಪಾತ್ರ, ಇಡೀ ಸಿನಿಮಾದ ಕಥೆಯಲ್ಲಿ 4 ದಿನದ ಘಟನೆಗಳಿರುತ್ತವೆ. ಸೋಮವಾರ ಶುರುವಾಗುವ ಕಥೆ, ಗುರುವಾರ ಅಂತ್ಯಗೊಳ್ಳುತ್ತೆ. ಈ 4 ದಿನದಲ್ಲಿ 7 ಪಾತ್ರಗಳು ಹೇಗೆಲ್ಲ ವರ್ತಿಸುತ್ತವೆ, ಬದಲಾಗುತ್ತವೆ ಅನ್ನೋದೇ ಚಿತ್ರದ ಸ್ವಾರಸ್ಯ.

    3 ಜನರೇಷನ್‍ನ ಕಥೆ ಇಲ್ಲಿದೆಯಂತೆ. 20+ನ ಒಂದು ಜೋಡಿ, 30+ನ ಇನ್ನೊಂದು ಜೋಡಿ ಹಾಗೂ 60+ನ  ಮತ್ತೊದು ಜೋಡಿ.. ಅವರ ಚಿಂತನೆ, ಬದುಕು.. ಹೀಗೆ ಕಥೆ ಮನಸ್ಸಿಗೆ ನಾಟುತ್ತಾ ಹೋಗುತ್ತೆ.

    ಶ್ರೇಯಾ ಅಂಚನ್ ಹಾಗೂ ಅಶ್ವಿನ್ ರಾವ್ ಅವರದ್ದು 20+ ಜೋಡಿಯಾದರೆ, ದಿಗಂತ್ ಹಾಗೂ ಪೂಜಾ ದೇವರಿರಯಾ 30+ ಜೋಡಿ. ಅರುಣಾ ಬಾಲರಾಜ್, ಬಾಲರಾಜ್ ಹಿರಣ್ಣಯ್ಯ 60+ ವಯೋಮಾನಕ್ಕೆ. ಮತ್ತೊಂದು ಪಾತ್ರ ಸಪೋರ್ಟಿವ್ ಆಗಿರುತ್ತೆ.

    ಹೀಗೆ 7 ಪಾತ್ರಗಳ ಮುಖಾಂತರ ಬದುಕಿನ ಕಥೆ ಹೇಳುತ್ತೇವೆ. ಕಥೆಯೊಂದು ಶುರುವಾಗಿದೆ ಎನ್ನುವ ಟೈಟಲ್‍ನಲ್ಲೇ ಸಿನಿಮಾದ ಕಥೆಯೂ ಇದೆ. ಇದು ಸನ್ನಾ ಹೆಗ್ಡೆ ನಿರ್ದೇಶನದ ಕಥೆಯೊಂದು ಶುರುವಾಗಿದೆ ವಿಶೇಷಗಳಲ್ಲಿ ಒಂದು.

  • Diganth's 'Katheyondu Shuruvagide' on July 20th

    katheyondhu shuruvagidhe on july 20th

    Diganth starrer 'Katheyondu Shuruvagide' which is  produced by Pushkar and Rakshith Shetty jointly is all set to release on the 20th of July.

    'Katheryondu Shuruvagide' is a travel story featuring three generations prominently. The film revolves around three couples of different age group and background. The film has been shot in Bangalore, Mangalore, Pondicherry and other places.

    'Katheyondu Shuruvagide' stars Diganth, Pooja Deveriya, Babu Hirannaiah, Aruna Balaji, Ashwin, Shreya and others in prominent roles. The film is being scripted and directed by Senna Hegde.

     

  • Katheyondhu Shuruvagidhe Review - 3.5/5

    katheyondhu shuruvagidhe movie review

    Diganth has given his best ever performance in Katheyondu Shuruvaagide. It is very unlike any of the films he has ever acted in. It is not the kind of film you generally associate with him. It is not also the kind of film you get in Sandalwood regularly. It is surprising how director Senna Hegde has managed to tell so much about life by confining his story to a single location. It is a miracle of story telling. 

    Diganth plays the owner of a resort which is not doing good business. In fact there are hardly any guests he has a tough time financially. The leading lady played by Pooja is one of the guests in the resort. She too has her own background story. But the film is only about the present. The few days she stays in the resort and what happens between the various characters. There are six main characters and the bond and conflict between them makes for an engrossing film. 

    There are no special effects, drama or emotional overdose in the film. Everything is normal and what you would see in normal human beings not in film characters. The film slowly unravels the characters and the unfolding story happens like in normal life. 

    Among the performances, the director has allowed the actors to evolve their own style which is stunningly natural. The performance of Diganth in the climax is so good. You have already forgotten that he is an actor and is a real resort owner somewhere far away whom you are watching out through the film screen. 

    It is one of the best directorial debuts. Though Senna Hegde has made one more film earlier, this is a full-length feature for him and he is one big find for Sandalwood. He shows maturity of thought and reason. Sandalwood fans will look forward to many more good films from him.

    Superb music, brilliant camerawork and perfect editing has made Katheyondu Shuruvaagide one of the best films of the year. Do not miss it. It is a fresh commercial wave in Kannada.

  • Katheyondu Shuruvagide Releasing on August 3rd 

    katheyobdhu shuruvagidhe to release on august 3rd

    Diganth starrer 'Katheyondu Shuruvagide' which is  produced by Pushkar and Rakshith Shetty jointly has been censored with U/A and is all set to release on the August 3rd.

    'Katheryondu Shuruvagide' is a travel story featuring three generations prominently. The film revolves around three couples of different age group and background. The film has been shot in Bangalore, Mangalore, Pondicherry and other places.

    'Katheyondu Shuruvagide' stars Diganth, Pooja Deveriya, Babu Hirannaiah, Aruna Balaji, Ashwin, Shreya and others in prominent roles. The film is being scripted and directed by Senna Hegde.

     

  • Katheyondu Shuruvagide' Postponed To August 3rd

    katheyondhu shuruvagidhe release postponed

    If everything had gone right, then Diganth starrer 'Katheyondu Shuruvagide' was supposed to release on the 20th of July. However, due to various reasons, the film's release has been postponed and now the film is all set to hit the screens on the 03rd of August across Karnataka.

    'Katheryondu Shuruvagide' is a travel story featuring three generations prominently. The film revolves around three couples of different age group and background. The film has been shot in Bangalore, Mangalore, Pondicherry and other places.

    'Katheyondu Shuruvagide' stars Diganth, Pooja Deveriya, Babu Hirannaiah, Aruna Balaji, Ashwin, Shreya and others in prominent roles. The film is being scripted and directed by Senna Hegde.  The film is  produced by Pushkar and Rakshith Shetty jointly.

     

  • Katheyondu Shuruvagide' Premiered In England And America

    katheyondhu shuruvagidhe premeierd abroad

    Diganth starrer 'Katheyondu Shuruvagide' is all set to hit the screens on the 03rd of August across Karnataka. Meanwhile, the film has been premiered in England, America, Australia and Germany and the film has got good response from premier shows.

    'Katheyondu Shuruvagide' stars Diganth, Pooja Deveriya, Babu Hirannaiah, Aruna Balaji, Ashwin, Shreya and others in prominent roles. The film is being scripted and directed by Senna Hegde.  The film is  produced by Pushkar and Rakshith Shetty jointly.

    'Katheryondu Shuruvagide' is a travel story featuring three generations prominently. The film revolves around three couples of different age group and background. The film has been shot in Bangalore, Mangalore, Pondicherry and other places.

  • ಎಲ್ಲರಿಗೂ ಇಷ್ಟವಾಗಿದೆ.. ಕಥೆಯೊಂದು ಶುರುವಾಗಿದೆ

    katheyondhu shuruvagidhe wins peoples hearts

    ಕಥೆಯೊಂದು ಶುರುವಾಗಿದೆ.. ಸೆನ್ನಾ ಹೆಗ್ಡೆ ಎಂಬ ನವನಿರ್ದೇಶಕನ ಪ್ರಯತ್ನ, ಎಲ್ಲರಿಗೂ ಇಷ್ಟವಾಗಿಬಿಟ್ಟಿದೆ. ಚಿತ್ರರಂಗದ ಮಾಮೂಲಿ ಸಿದ್ಧಸೂತ್ರಗಳನ್ನೆಲ್ಲ ಕಟ್ಟಿಟ್ಟು ಮೂಟಿಕಟ್ಟಿ, ಹೊಸತನದಲ್ಲಿ ಹೇಳಿದ ಕಥೆ ಪ್ರೇಕ್ಷಕರಿಗೆ ಇಷ್ಟವಾಗುತ್ತಿರುವುದು ಹೌದು. ಕಥೆಯೊಂದು ಶುರುವಾಗಿದೆ ಚಿತ್ರಕ್ಕೆ ಚಿತ್ರಲೋಕ ಸೇರಿದಂತೆ ಎಲ್ಲ ಮಾಧ್ಯಮಗಳಲ್ಲೂ ಉತ್ತಮ ವಿಮರ್ಶೆಗಳು ಬಂದಿರುವುದು ವಿಶೇಷ. 

    ಸುಮಾರು ಒಂದೂವರೆ ವರ್ಷದ ನಂತರ ದಿಗಂತ್ ನಾಯಕತ್ವದ ಸಿನಿಮಾವೊಂದು ತೆರೆಕಂಡಿದ್ದು ಇನ್ನೊಂದು ವಿಶೇಷ. ಜೀವನದಲ್ಲಿ ಕಷ್ಟ ಸುಖ ಹಂಚಿಕೊಳ್ಳೋಕೆ ಒಂದು ಪ್ರೀತಿಸುವ ಜೀವ ಇರಬೇಕು ಎನ್ನುವುದು ಚಿತ್ರದ ಥಿಯರಿ. ಅದನ್ನು ಪ್ರೀತಿಯಷ್ಟೇ ನಿಧಾನವಾಗಿ ಹೇಳಿ ಗೆದ್ದಿದ್ದಾರೆ ನಿರ್ದೇಶಕ ಸೆನ್ನಾ ಹೆಗ್ಡೆ. ರಕ್ಷಿತ್ ಶೆಟ್ಟಿ ಹೇಳಿದ್ದು ನಿಜ, ಕನ್ನಡಕ್ಕೊಬ್ಬ ಭರವಸೆಯ ನಿರ್ದೇಶಕ ಸಿಕ್ಕಿದ್ದಾನೆ.

    ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರದ ನಿರ್ಮಾಪಕರೂ ಹೌದು. ಈ ಚಿತ್ರವನ್ನು ಥಿಯೇಟರ್‍ಗೆ ಹೋಗಿ, ನೋಡಿ, ಪ್ರೋತ್ಸಾಹಿಸಿ ಎಂದಿದ್ದರು ರಕ್ಷಿತ್ ಶೆಟ್ಟಿ. ನಾನು ಈ ಮಾತನ್ನು ನಿರ್ಮಾಪಕನಾಗಿ ಹೇಳುತ್ತಿಲ್ಲ. ಈ ಚಿತ್ರ ಗೆದ್ದರೆ, ಇಂತಹ ಹಲವು ವಿಭಿನ್ನ ಪ್ರಯೋಗಗಳು ಕನ್ನಡಕ್ಕೆ ದಕ್ಕಲಿವೆ ಎಂದಿದ್ದರು. 

    ಚಿತ್ರತಂಡದ ನಿರೀಕ್ಷೆಯನ್ನು ಕನ್ನಡದ ಪ್ರೇಕ್ಷಕ ಹುಸಿಗೊಳಿಸಲಿಲ್ಲ. ಚಿತ್ರವನ್ನು ಗೆಲ್ಲಿಸಿಬಿಟ್ಟಿದ್ದಾನೆ. ಕರ್ನಾಟಕ ಹಾಗೂ ವಿದೇಶಗಳಲ್ಲಿ ಚಿತ್ರದ ಬಗ್ಗೆ ಉತ್ತಮ ಫಲಿತಾಂಶ ಹೊಮ್ಮುತ್ತಿದೆ. ಬಾಕ್ಸಾಫೀಸ್‍ನಲ್ಲೂ ಹೊಸ ಕಥೆಯೊಂದು ಶುರುವಾಗಿದೆ.

  • ಕತೆಯೊಂದು ಶುರುವಾಗಿದೆ.. ಶೂಟಿಂಗ್ ಮುಗಿದೋಗಿದೆ

    dinganth;s katheyondhu shuruvagidhe

    ಕತೆಯೊಂದು ಶುರುವಾಗಿದೆ.. ಇದು ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ಕಾಂಬಿನೇಷನ್‍ನ ಸಿನಿಮಾ. ಕಥೆ, ಚಿತ್ರಕಥೆಗಳಿಗೇ ಹೆಚ್ಚು ಆದ್ಯತೆ ಕೊಡುತ್ತಿರುವ ಪುಷ್ಕರ್-ರಕ್ಷಿತ್ ಜೋಡಿ, ಈ ಚಿತ್ರವನ್ನೂ ಹಾಗೆಯೇ ಒಪ್ಪಿಕೊಂಡು ನಿರ್ಮಿಸಿದೆ. ಚಿತ್ರಕ್ಕೆ ಅವರು ಎಷ್ಟರಮಟ್ಟಿಗೆ ಸಿದ್ಧರಾಗಿದ್ದರು ಎಂದರೆ, ಮೂವತ್ತೇ ದಿನಕ್ಕೆ ಶೂಟಿಂಗ್ ಮುಗಿದೇ ಹೋಗಿದೆ.

    ಚಿತ್ರದ ಬಗ್ಗೆ ಸಂಪೂರ್ಣ ಪೂರ್ವತಯಾರಿ ಆಗಿತ್ತು. ಯಾವ ಸೀನ್‍ಗೆ ಎಷ್ಟು ಶಾಟ್ ಬೇಕು ಎನ್ನುವುದು ಕೂಡಾ ನಿರ್ಧಾರವಾಗಿ ಹೋಗಿತ್ತು. ಪ್ರತಿಯೊಂದನ್ನೂ ತಯಾರಿ ಮಾಡಿಕೊಂಡರೆ, 30 ದಿನಗಳಲ್ಲಿ ಶೂಟಿಂಗ್ ಮುಗಿಸುವುದು ಕಷ್ಟವೇನಲ್ಲ ಅಂತಾರೆ ನಿರ್ದೇಶಕ ಸೆನ್ನಾ ಹೆಗ್ಡೆ.

    ಚಿತ್ರಕ್ಕೆ ದಿಗಂತ್ ಹೀರೋ ಆದರೆ, ಪೂಜಾ ದೇವರಿಯಾ ನಾಯಕಿ. ಸಚಿನ್ ವಾರಿಯರ್ ಸಂಗೀತವಿರುವ ಚಿತ್ರಕ್ಕೆ ಕಿರಣ್ ಕಾವೇರಪ್ಪ ಸಾಹಿತ್ಯ ಹಾಗೂ ಅಭಿಜಿತ್ ಮಹೇಶ್ ಸಂಭಾಷಣೆ ಇದೆ.

  • ಕಥೆ ಶುರುವಾಯ್ತು..

    katheyondhu shuruvagidhe starts

    ಕಥೆಯೊಂದು ಶುರುವಾಗಿದೆ.. ದಿಗಂತ್, ಪೂಜಾ ದೇವರಿಯಾ ಅಭಿನಯದ ಈ ಸಿನಿಮಾದ ಕಥೆ ಶುರುವಾಗಿಯೇಬಿಟ್ಟಿದೆ. ವಿದೇಶಗಳಲ್ಲಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಸಿನಿಮಾ, ಪ್ರೀಮಿಯರ್ ಶೋನಲ್ಲಿಯೂ ಚಿತ್ರಪ್ರೇಮಿಗಳ ಮನ ಗೆದ್ದಿದೆ. ಈಗ.. ಕನ್ನಡಿಗರ ಮನ ಗೆಲ್ಲೋ ಗುರಿ.

    ಚಿತ್ರದ ಕಥೆ ಡಿಫರೆಂಟ್ ಮತ್ತು ವಿಶೇಷವಾಗಿದೆ. ನಾನು ಸಿನಿಮಾ ನೋಡಿದ್ದೇನೆ. ನನಗಂತೂ ಇಷ್ಟವಾಗಿದೆ. ಮೂರು ವರ್ಗದವರ ಪ್ರೇಮಕಥೆ ಪ್ರತಿಯೊಬ್ಬರಿಗೂ ಇಷ್ಟವಾಗುತ್ತೆ. ಒಂದೊಳ್ಳೆ ಸಿನಿಮಾಗೆ ಹಣ ಹೂಡಿದ ತೃಪ್ತಿ ನನ್ನದು. ಇದು ನಿರ್ಮಾಪಕ ರಕ್ಷಿತ್ ಶೆಟ್ಟಿ ಪ್ರತಿಕ್ರಿಯೆ.

    ಯುವಕರು, ಮಧ್ಯವಯಸ್ಕರು, ವೃದ್ಧರು ಎಲ್ಲರಿಗೂ ಇಷ್ಟವಾಗುವ ಕಥೆ ಚಿತ್ರದಲ್ಲಿದೆ ಅನ್ನೋ ಕಾನ್ಫಿಡೆನ್ಸ್ ಕೊಡ್ತಾರೆ ಇನ್ನೊಬ್ಬ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿರುವ ಚಿತ್ರ, ಪ್ರೇಕ್ಷಕರ ಎದೆಯಲ್ಲಿ ಲವ್ ಯೂ ಹೇಳುತ್ತಿದೆ.

  • ಕಥೆಯೊಂದರ ನಿರ್ದೇಶಕ ಸೆನ್ನಾ ಹೆಗ್ಡೆ ಕಥೆ ಏನು..?

    senna hegde's specialty in kateyondhu shuruvagidhe

    ಕಥೆಯೊಂದು ಶುರುವಾಗಿದೆ ಚಿತ್ರಕ್ಕೆ ಸನ್ನಾ ಹೆಗಡೆ ನಿರ್ದೆಶಕ. ಅಂದಹಾಗೆ ಇವರಿಗೆ ಇದು ನಿರ್ದೇಶಕರಾಗಿ ಮೊದಲ ಅನುಭವ. ಆದರೆ, ಚಿತ್ರರಂಗಕ್ಕೆ ರಕ್ಷಿತ್ ಶೆಟ್ಟಿಗೆ ಇವರು ಹೊಸಬರೇನೂ ಅಲ್ಲ. ರಕ್ಷಿತ್ ಶೆಟ್ಟಿಗೆ ಹೆಸರು ತಂದು ಕೊಟ್ಟ ಉಳಿದವರು ಕಂಡಂತೆ ಚಿತ್ರದ ಬರಹಗಾರರಲ್ಲಿ ಇವರೂ ಒಬ್ಬರು. ಆದರೆ, ನಂತರ ಊರಿಗೆ ವಾಪಸ್ ಹೋದ ಸೆನ್ನಾ, 0-41 ಅನ್ನೋ ಸಾಕ್ಷ್ಯ ಚಿತ್ರ ನಿರ್ಮಿಸಿದ್ರು. 

    ಇದೆಲ್ಲಕ್ಕೂ ಮೊದಲು ಅಂತಾರಾಷ್ಟ್ರೀಯ ಜಾಹೀರಾತು ಕಂಪೆನಿಯಲ್ಲಿ 8 ವರ್ಷ, ಅಮೆರಿಕ, ದುಬೈಗಳಲ್ಲಿ ಬ್ಯುಸಿನೆಸ್ ಸಲಹೆಗಾರರಾಗಿ ಕೆಲಸ ಮಾಡಿದ ಅನುಭವವೂ ಇದೆ. 

    ಜಾಹೀರಾತು, ಬ್ಯುಸಿನೆಸ್ ಕ್ಷೇತ್ರಗಳಲ್ಲಿ ಸಕ್ಸಸ್ ಕಂಡಿದ್ದ ಸೆನ್ನಾಗೆ ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ದೇಶನದ ಅವಕಾಶ ಕೊಟ್ಟಿದ್ದಾರೆ. ದಿಗಂತ್, ಪೂಜಾ ದೇವರಿಯಾ, ಅಶ್ವಿನ್ ರಾವ್, ಶ್ರೇಯಾ ಅಂಚನ್ ಮೊದಲಾದವರು ನಟಿಸಿದ್ದಾರೆ. 3 ಜನರೇಷನ್‍ಗಳ ಪ್ರೀತಿಯ ಕಥೆ ಚಿತ್ರದಲ್ಲಿದೆ.

  • ಕಥೆಯೊಂದು ಶುರುವಾಗಿದೆ ಹಾಡುಗಳ ಮೋಡಿಗಾರನ ಕಥೆ

    katheyondhu shuruvagidhe music director

    ಕಥೆಯೊಂದು ಶುರುವಾಗಿದೆ ಚಿತ್ರದ ಹಾಡುಗಳಲ್ಲಿ ಅಬ್ಬರವಿಲ್ಲ. ಆದರೆ, ಹೃದಯಕ್ಕೆ ಇಳಿಯುತ್ತಿವೆ. ಟಪ್ಪಾಂಗುಚ್ಚಿ ಇಲ್ಲ. ಎದೆಯೊಳಗಿನ ಲಬ್ ಡಬ್‍ಗೆ ಹತ್ತಿರವಾಗುತ್ತಿವೆ. ವಿಭಿನ್ನ ಎನ್ನಿಸುತ್ತಿರುವ ಈ ಹಾಡುಗಳ ಹಿಂದಿನ ಮೋಡಿಗಾರನ ಹೆಸರು ಸಚಿನ್ ವಾರಿಯರ್. ಮಲಯಾಳಂ ಚಿತ್ರರಂಗದ ಸಂಗೀತ ನಿರ್ದೇಶಕ.

    ಮಲಯಾಳಂನಲ್ಲಿ ಆನಂದಂ ಚಿತ್ರಕ್ಕೆ ಸಚಿನ್ ವಾರಿಯರ್ ಸಂಗೀತ ನೀಡಿದ್ದರು. ಆ ಹಾಡು ಕೇಳಿದ್ದ ಕಥೆಯೊಂದು ಶುರುವಾಗಿದೆ ನಿರ್ದೇಶಕ ಸನ್ನಾ ಹೆಗ್ಡೆ,  ಅವರಿಂದಲೇ ತಮ್ಮ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿಸೋಕೆ ಮನಸ್ಸು ಮಾಡಿಬಿಟ್ಟರು. `ಸೆನ್ನಾ ಆಫರ್ ಬಂದಾಗ ನನಗೆ ಇನ್ನೂ ಕನ್ನಡ ಚಿತ್ರಗಳಿಗೂ ಸಂಗೀತ ನೀಡುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ಆಕಸ್ಮಿಕವಾಗಿ ಸಿಕ್ಕ ಅವಕಾಶ ಅದು. ಚಿತ್ರದ ಸ್ಕ್ರಿಪ್ಟ್ ಕೇಳಿದಾಗ, ಅದು ನಾನು ಇಷ್ಟಪಡುವಂತಹಾ ಕಥೆಯೇ ಆಗಿತ್ತು. ಹೀಗಾಗಿ ಮ್ಯೂಸಿಕ್ ಕೊಡೋಕೆ ಒಪ್ಪಿಕೊಂಡೆ' ಇದು ಸಚಿನ್ ವಾರಿಯರ್ ಮಾತು.

    ಚಿತ್ರಕ್ಕೆ ಹಲವು ಟ್ಯೂನ್ ಕೊಟ್ಟಿದ್ದೇನೆ. ಕೆಲವು ಟ್ಯೂನ್‍ಗಳನ್ನು ಹಾಡುಗಳಲ್ಲಿ ಬಳಸಿಕೊಂಡಿದ್ದಾರೆ. ಇನ್ನೂ ಕೆಲವು ಟ್ಯೂನ್‍ಗಳನ್ನು ಹಿನ್ನೆಲೆ ಸಂಗೀತಕ್ಕೆ ಬಳಸಿಕೊಂಡಿದ್ದಾರೆ. ಇಂಟರ್‍ನ್ಯಾಷನಲ್ ಮ್ಯೂಸಿಕ್ ಮತ್ತು ಸ್ಥಳೀಯ ಸಂಗೀತ..ಎರಡೂ ಮಿಕ್ಸ್ ಆಗಿರುವ ಸಂಗೀತ ಚಿತ್ರದಲ್ಲಿದೆ ಎನ್ನುತ್ತಾರೆ ಸಚಿನ್ ವಾರಿಯರ್.

    ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರಕ್ಕೆ ದಿಗಂತ್ ಹೀರೋ. ಪೂಜಾ ದೇವರಿಯಾ ನಾಯಕಿ. ನಾಲ್ಕು ವಯೋಮಾನದವರ ಪ್ರೇಮಕಥೆ ಹೊಂದಿರುವ ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. ಕರ್ನಾಟಕದಲ್ಲಿ ಬಿಡುಗಡೆಯಾಗುವ ಮುನ್ನವೇ, ವಿದೇಶಗಳಲ್ಲಿ ಪ್ರೀಮಿಯರ್ ಶೋ ಆಯೋಜಿಸಿಲಾಗಿದೆ. ಅಷ್ಟೇ ಅಲ್ಲ, ಬಿಡುಗಡೆಗೆ ಮುನ್ನಾ ದಿನ ತಮ್ಮ ತಮ್ಮ ಪ್ರೇಮಕಥೆ ಹೇಳಿಕೊಂಡಿರುವ ಆಯ್ದ ಪ್ರೇಮಿಗಳಿಗೆ ಸಿನಿಮಾ ತೋರಿಸುವುದಕ್ಕೂ ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

  • ಕಥೆಯೊಂದು ಶುರುವಾಗಿದೆ.. ನಾಯಕಿಗೆ ಕನ್ನಡ ಕಲಿಸಿದ ಕಥೆ

    katheyondhu shuruvagidhe learns kannada while shooting

    ಕಥೆಯೊಂದು ಶುರುವಾಗಿದೆ.. ಚಿತ್ರದ ನಾಯಕಿ ಪೂಜಾ ದೇವರಿಯಾ. ಪೂಜಾ ಅವರ ತಾಯಿ ಕನ್ನಡದವರಾದರೂ, ಹುಟ್ಟಿದ್ದು, ಬೆಳೆದಿದ್ದು ತಮಿಳುನಾಡಿನಲ್ಲಿ. ಕನ್ನಡದಲ್ಲಿ ನಟಿಸಬೇಕು ಎಂಬ ಆಸೆಯಿತ್ತು. ನಿರ್ದೇಶಕಿ ಸೆನ್ನಾ ಕಥೆ ಹೇಳಿದಾಗ ಇಷ್ಟವಾಯ್ತು. ನನ್ನ ಅಜ್ಜಿ ಮತ್ತು ಸ್ನೇಹಿತರ ಸಹಾಯದಿಂದ ಕನ್ನಡ ಕಲಿತಿದ್ದಷ್ಟೇ ಅಲ್ಲ, ಸೆಟ್‍ನಲ್ಲಿ ಕನ್ನಡದಲ್ಲಿಯೇ ಮಾತನಾಡುತ್ತಿದ್ದೆ ಎಂದು ನೆನಪು ಹಂಚಿಕೊಂಡಿದ್ದಾರೆ ಪೂಜಾ ದೇವರಿಯಾ.

    ಚಿತ್ರದ ಡೈಲಾಗುಗಳೂ ಇಷ್ಟವಾದವು. ನಾಯಕಿಯಾಗಿ ನಟಿಸಿರುವುದಷ್ಟೇ ಅಲ್ಲ, ಗುಡ್‍ಮಾರ್ನಿಂಗ್ ಹಾಡಿಗೆ ಕೊರಿಯಾಗ್ರಫಿ ಕೂಡಾ ಮಾಡಿದ್ದೇನೆ. ಸಹಜವಾದ ಸ್ಟೆಪ್ಪುಗಳನ್ನೇ ಬಳಸಿ ಹಾಡು ಮಾಡಿದ್ದೇವೆ ಎಂದು ಹಾಡಿನ ಬಗ್ಗೆಯೂ ಹೇಳಿಕೊಂಡಿದ್ದಾರೆ ಪೂಜಾ.

    ಕನ್ನಡದಲ್ಲಿ ಉಚ್ಚಾರಣೆ ತಪ್ಪಾದಾಗ,ನಾಯಕ ದಿಗಂತ್ ತಿದ್ದುತ್ತಿದ್ದರಂತೆ. ಚಿತ್ರದಲ್ಲಿ ನನ್ನದು ಮಹತ್ವಾಕಾಂಕ್ಷೆಯ ಹುಡುಗಿಯ ಪಾತ್ರ. 4 ದಿನಗಳಲ್ಲಿ ನಡೆಯುವ ಕಥೆಯನ್ನೇ ಸಿನಿಮಾ ಮಾಡಲಾಗಿದೆ. ಚಿತ್ರದ ಬಗ್ಗೆ ಭಾರಿ ಕುತೂಹಲವಿದೆ ಎಂದಿದ್ದಾರೆ ಪೂಜಾ.

    ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದ ಚಿತ್ರದ ಬಗ್ಗೆ ಪೂಜಾ ಅವರಿಗಷ್ಟೇ ಅಲ್ಲ, ಕನ್ನಡ ಚಿತ್ರರಸಿಕರಿಗೂ ಕುತೂಹಲವಿದೆ.

  • ಜುಲೈ 20ಕ್ಕೆ ಕಥೆಯೊಂದು ಶುರುವಾಗಲಿದೆ

    katheyondhu shuruvagidhe on july 20th

    ಕಥೆಯೊಂದು ಶುರುವಾಗಿದೆ.. ಇದು ದಿಗಂತ್ ಅಭಿನಯದ ಸಿನಿಮಾ. ಸನ್ನಾ ಹೆಗ್ಡೆ ನಿರ್ದೇಶನದ, ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾ ಬಿಡುಗಡೆಗೆ ಸಿದ್ಧಗೊಂಡಿದೆ. ಜುಲೈ 20ಕ್ಕೆ ಸಿನಿಮಾ ರಿಲೀಸ್ ಆಗಲಿದೆ.

    ದಿಗಂತ್‍ಗೆ ಪೂಜಾ ದೇವರಿಯಾ ನಾಯಕಿ. ಅರುಣಾ ಬಾಲರಾಜ್, ಬಾಬು ಹಿರಣ್ಣಯ್ಯ ಮೊದಲಾದವರು ನಟಿಸಿರುವ ಚಿತ್ರ, ವಿಭಿನ್ನ ಟೈಟಲ್ ಮೂಲಕವೇ ನಿರೀಕ್ಷೆ ಹುಟ್ಟಿಸಿದೆ.

  • ದುಬೈನಲ್ಲಿ ಶುರುವಾಗಲಿದೆ ಕಥೆ..

    katheyondhu shuruvagidhe to release in uae

    ರಾಜ್ಯಾದ್ಯಂತ ಬಾಕ್ಸಾಫೀಸ್ ಮತ್ತು ಪ್ರೇಮಿಗಳ ಹೃದಯದಲ್ಲಿ ಹೊಸ ಕಥೆ ಬರೆಯುತ್ತಿರುವ ಕಥೆಯೊಂದು ಶುರುವಾಗಿದೆ ಚಿತ್ರ, ಈಗ ದುಬೈನಲ್ಲಿ ತೆರೆ ಕಾಣುತ್ತಿದೆ. ಇಂದಿನಿಂದ ದುಬೈನಲ್ಲಿ ಕಥೆಯೊಂದು ಶುರುವಾಗಿದೆ ಚಿತ್ರ ರಿಲೀಸ್.

    ದುಬೈ, ಶಾರ್ಜಾ, ಅಲೈನ್ ಹಾಗೂ ಅಬುದಾಬಿಯಲ್ಲಿ ಚಿತ್ರ ಪ್ರದರ್ಶನ ಶುರುವಾಗುತ್ತಿದೆ. ದುಬೈನಲ್ಲೇ 10 ಸ್ಕ್ರೀನ್‍ಗಳಲ್ಲಿ ರಿಲೀಸ್ ಆಗುತ್ತಿರುವುದು ವಿಶೇಷ. ದಿಗಂತ್‍ರ ಕಮ್‍ಬ್ಯಾಕ್ ಸಿನಿಮಾ ಎನ್ನಲಾಗುತ್ತಿರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಪಕರು. ಸೆನ್ನಾ ಹೆಗ್ಡೆ ನಿರ್ದೇಶನದ ಮೊದಲ ಸಿನಿಮಾ ಕಥೆಯೊಂದು ಶುರುವಾಗಿದೆ.

  • ನಾಯಕಿಯೇ ಕೊರಿಯೋಗ್ರಾಫರ್ ಅದ ಕಥೆ

    katheyondhu shuruvagidhe

    ಕಥೆಯೊಂದು ಶುರುವಾಗಿದೆ.. ದಿಗಂತ್ ನಾಯಕತ್ವದ ಈ ಸಿನಿಮಾ ತೆರೆಗೆ ಬರೋಕೆ ಸಿದ್ಧವಾಗಿದೆ. ಅದರಲ್ಲೂ ಚಿತ್ರದ ಗುಡ್‍ಮಾರ್ನಿಂಗ್ ಹಾಡು ಗಮನ ಸೆಳೆಯುತ್ತಿದೆ. ಹಾಡಿನಷ್ಟೇ ವಿಶೇಷವಾಗಿ ಪ್ರೇಕ್ಷಕರನ್ನು ಮರುಳು ಮಾಡಿರುವುದು ಹಾಡಿನ ಕೊರಿಯೋಗ್ರಫಿ. ಆದರೆ, ಅಚ್ಚರಿಯೇನು ಗೊತ್ತಾ..? ಈ ಹಾಡಿಗೆ ಕೊರಿಯೋಗ್ರಫಿ ಮಾಡಿರೋದು ಚಿತ್ರದ ನಾಯಕಿ ಪೂಜಾ ದೇವರಿಯಾ.

    ಚಿತ್ರದ ಹಾಡು ರಿಯಲೆಸ್ಟಿಕ್ ಆಗಿ ಬರಬೇಕು ಅನ್ನೋದು ನಿರ್ದೇಶಕಿ ಸನ್ನಾ ಹೆಗ್ಡೆ ಯೋಜನೆಯಾಗಿತ್ತು. ಅದನ್ನೇ ಅವರು ಪೂಜಾ ಬಳಿ ಹೇಳಿಕೊಂಡಾಗ, ದಿಗಂತ್ ಜೊತೆ ಕೂಡಿಕೊಂಡು ಅವರೇ ಒಂದಷ್ಟು ಪ್ಲಾನ್ ಮಾಡಿದರಂತೆ. ಯಾವುದೇ ರಿಹರ್ಸಲ್ ಇಲ್ಲದೆ ಶೂಟ್ ಮಾಡಿದ ಹಾಡು ಅದು. ಹಾಡಿನ ಮಧ್ಯೆ ಬರುವ ಮಕ್ಕಳಿಗೂ ರಿಹರ್ಸಲ್ ಮಾಡಿಸಿಲ್ಲ ಎಂದು ಥ್ರಿಲ್ಲಾಗಿ ಹೇಳಿಕೊಂಡಿದ್ದಾರೆ ಸನ್ನಾ.

    ಪರಂವಾ ಸ್ಟುಡಿಯೋಸ್‍ರವರ ಕಥೆಯೊಂದು ಶುರುವಾಗಿದೆ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ. ವಿಭಿನ್ನ ಕಥೆಗಳನ್ನೇ ಹುಡುಕಿ ಹುಡುಕೀ ಸಿನಿಮಾ ಮಾಡುವ ಮಲ್ಲಿಕಾರ್ಜುನಯ್ಯ, ಮತ್ತೊಂದು ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ.

  • ನಿಮ್ ಲವ್ ಸ್ಟೋರಿ ಹೇಳಿ, ಕಥೆಯೊಂದು ಶುರುವಾಗಿದೆ ಟಿಕೆಟ್ ಗೆಲ್ಲಿ..!

    katheyondhy shuruvagidhe movie contest

    ಕಥೆಯೊಂದು ಶುರುವಾಗಿದೆ. ಪರಂವಾ ಸ್ಟುಡಿಯೋಸ್‍ನ ಹೊಸ ಸಿನಿಮಾ. ಆಗಸ್ಟ್ 3ಕ್ಕೆ ರಿಲೀಸ್ ಆಗುತ್ತಿರುವ ಚಿತ್ರದಲ್ಲಿ ದಿಗಂತ್ ಹೀರೋ. ಪೂಜಾ ದೇವರಿಯಾ ಹೀರೋಯಿನ್. ಜೀವನದ ವಿವಿಧ ಹಂತಗಳ ಲವ್‍ಸ್ಟೋರಿಯನ್ನು ಹೇಳುತ್ತಿರುವ ಈ ಸಿನಿಮಾ ಪ್ರೇಕ್ಷಕರಿಗೆ ಒಂದು ಇಂಟರೆಸ್ಟಿಂಗ್ ಸ್ಪರ್ಧೆಯನ್ನಿಟ್ಟಿದೆ. ಆ ಸ್ಪರ್ಧೆಯಲ್ಲಿ ನೀವೂ ಭಾಗವಹಿಸಬಹುದು. ಗೆದ್ದರೆ, ಕಥೆಯೊಂದು ಶುರುವಾಗಿದೆ ಸಿನಿಮಾ ಥಿಯೇಟರ್‍ಗಳಲ್ಲಿ ರಿಲೀಸ್ ಆಗುವ ಒಂದು ದಿನ ಮೊದಲೇ (ಆಗಸ್ಟ್ 2) ಸಿನಿಮಾ ನೋಡಬಹುದು. ಫ್ರೀಯಾಗಿ. ಹಾಗಾದರೆ, ನೀವೇನ್ ಮಾಡ್ಬೇಕು ಗೊತ್ತೇ...

    ನಿಮ್ಮದೇ ಲವ್ ಸ್ಟೋರಿಯನ್ನ ಪುಟ್ಟದಾಗಿ ಹೇಳಿ, ವಿಡಿಯೋ ರೆಕಾರ್ಡ್ ಮಾಡಿ. ಆ ವಿಡಿಯೋವನ್ನು ನಿಮ್ಮದೇ ಪೇಜ್‍ನಲ್ಲಿ ಅಪ್‍ಲೋಡ್ ಮಾಡಿ, ಕಥೆಯೊಂದು ಶುರುವಾಗಿದೆ ಪೇಜ್‍ಗೆ ಲಿಂಕ್ ಮಾಡಿ. ಕಥೆಯೊಂದು ಶುರುವಾಗಿದೆ ಹ್ಯಾಶ್‍ಟ್ಯಾಗ್ ಬಳಸಿ ಪೋಸ್ಟ್ ಮಾಡಿ. ನಂತರ ನಿಮ್ಮ ಲಕ್ ಚೆನ್ನಾಗಿದ್ದರೆ, ನಿಮಗೆ ಆಗಸ್ಟ್ 2ನೇ ತಾರೀಕು, ಬೆಂಗಳೂರಿನ ಮಲ್ಟಿಪ್ಲೆಕ್ಸ್‍ವೊಂದರಲ್ಲಿ ಸಿನಿಮಾ ನೋಡೋಕೆ ಬನ್ನಿ ಅನ್ನೋ ಮೆಸೇಜ್ ಕೊಡುತ್ತೆ ಸಿನಿಮಾ ಟೀಂ.

    ಈ ವಿಡಿಯೋ ಅಪ್‍ಲೋಡ್ ಮಾಡೋಕೆ ನಿಮಗೆ ಕೆಲವು ಅರ್ಹತೆಗಳಿರಬೇಕು. ನೀವು ಪ್ರೀತಿ ಮಾಡಿರಲೇಬೇಕು. ಪ್ರೀತಿ ಮಾಡದೇ ಇರುವವರಿಗೆ ಕಥೆಯೊಂದು ಶುರುವಾಗಿದೆ ಸ್ಪರ್ಧೆಗೆ ನೋ ಎಂಟ್ರಿ. ಹಾಗೆ ಆಯ್ಕೆಯಾದವರನ್ನು ವಿವಿಧ ವಿಭಾಗಗಳಲ್ಲಿ ವಿಭಜಿಸಿ, ಟಿಕೆಟ್ ಕೊಟ್ಟು ಸಿನಿಮಾ ತೋರಿಸ್ತಾರೆ.

    ಮೊದಲ ಆಡಿಟೋರಿಯಂನಲ್ಲಿ - ಪ್ರೀತಿಸಿ ಮದುವೆಯಾಗಿರಬೇಕು.

    2ನೇ ಆಡಿಟೋರಿಯಂನಲ್ಲಿ - ಮದುವೆಯಾಗಿ ಪ್ರೀತಿಸಿರಬೇಕು. ಅರೇಂಜ್ಡ್ ಮ್ಯಾರೇಜ್ ಜೋಡಿ

    3ನೇ ಆಡಿಟೋರಿಯಂನಲ್ಲಿ - ಭಗ್ನಪ್ರೇಮಿಗಳಿಗೆ ಮಾತ್ರ. ಹುಡುಗ/ಹುಡುಗಿ ಇಬ್ಬರಿಗೂ ಅವಕಾಶ

    4ನೇ ಆಡಿಟೋರಿಯಂನಲ್ಲಿ - ಮದುವೆಯಾಗಿ ಯಶಸ್ವಿಯಾಗಿ 25 ವರ್ಷ ಸಂಸಾರ ನಡೆಸಿರುವ ಜೋಡಿಗಳು.

    ಪ್ರತೀ ಆಡಿಟೋರಿಯಂನಲ್ಲಿ ಅಂದ್ರೆ, ಪ್ರೇಮಜೋಡಿ, ಮದುವೆ ಜೋಡಿ, ಭಗ್ನಪ್ರೇಮಿ ಹಾಗೂ ಯಶಸ್ವೀ ದಂಪತಿ ಜೋಡಿಗಳಲ್ಲಿ ತಲಾ 250 ಜನರಿಗೆ ಸಿನಿಮಾ ನೋಡೋಕೆ ಅವಕಾಶ ಇದೆ. ಅದ್ಸರಿ.. ನೀವು ಯಾವ ಗ್ರೂಪಿಗೆ ಬರುತ್ತೀರಿ..?

  • ಪೂಜಾ ದೇವರಿಯಾ ಕಥೆ ಶುರುವಾಗಿದ್ದು ಹೀಗೆ..

    pooja remembers her katheyondhu shuruvagidhe

    ಕಥೆಯೊಂದು ಶುರುವಾಗಿದೆ ಚಿತ್ರದ ನಾಯಕಿ ಪೂಜಾ ದೇವರಿಯಾ. ಓದಿದ್ದು ಬೆಳೆದಿದ್ದು ಮುಂಬೈನಲ್ಲಾದರೂ ತಾಯಿ ಕನ್ನಡದವರಂತೆ. ಹೀಗಾಗಿ ಮುಂಬೈನಲ್ಲಿದ್ದರೂ ಅಲ್ಪಸ್ವಲ್ಪ ಕನ್ನಡವೂ ಬರುತ್ತಿತ್ತು. ಆದರೆ, ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ತಮಿಳು ಚಿತ್ರದ ಮೂಲಕ. ತಮಿಳು ಚಿತ್ರದ ಪ್ರಮೋಷನ್‍ನಲ್ಲಿ ಭಾಗವಹಿಸಿದ್ದಾಗ ರಕ್ಷಿತ್ ಶೆಟ್ಟಿ ಭೇಟಿ ಮಾಡಿದ್ದರಂತೆ ಪೂಜಾ. ಕನ್ನಡದಲ್ಲಿ ಅವಕಾಶ ಸಿಕ್ಕರೆ ನಟಿಸುವ ಆಸೆಯನ್ನೂ ಹೇಳಿಕೊಂಡಿದ್ದರಂತೆ. ಲೂಸಿಯಾ, ಉಳಿದವರು ಕಂಡಂತೆ ಹಾಗೂ ಯು ಟರ್ನ್,ನಾನು ನೋಡಿ ಮೆಚ್ಚಿದ ಕನ್ನಡ ಚಿತ್ರಗಳು. ಇಂತಹ ಸಬ್ಜೆಕ್ಟ್ ಸಿಕ್ಕರೆ ಕನ್ನಡದಲ್ಲಿ ನಟಿಸಬೇಕು ಎಂದುಕೊಳ್ಳುತ್ತಿದ್ದಾಗಲೇ, ಕಥೆಯೊಂದು ಶುರುವಾಗಿದೆ ಚಿತ್ರದ ಆಫರ್ ಬಂತು ಎಂದು ಹೇಳಿಕೊಳ್ತಾರೆ ಪೂಜಾ.

    ಇದು ಎಂಥಹವರೂ ನಾನು ಮಾಡಬೇಕು ಎಂದು ಇಷ್ಟಪಡುವ ಪಾತ್ರ. ಇನ್ನು ಚಿತ್ರದ ಶೂಟಿಂಗ್ ಅಂತೂ ಗೆಳೆಯರ ಜೊತೆ ಟ್ರಿಪ್ ಹೋದ ಹಾಗಿತ್ತು. ಒಬ್ಬರಿಗೊಬ್ಬರು ತಮಾಷೆ ಮಾಡಿಕೊಳ್ಳುತ್ತಾ, ಎಂಜಾಯ್ ಮಾಡಿದೆವು. ಒಂದೇ ಮನೆಯವರು ಎಂಬ ಫೀಲ್ ಇತ್ತು ಎಂದು ಶೂಟಿಂಗ್ ಅನುಭವ ನೆನಪಿಸಿಕೊಳ್ತಾರೆ ಪೂಜೆ.

    ಕಥೆಯೊಂದು ಶುರುವಾಗಿದೆ ಚಿತ್ರದಲ್ಲಿ ತೊಡಗಿಸಿಕೊಂಡ ಮೇಲೆ, ಅಲ್ಪಸ್ವಲ್ಪವಷ್ಟೇ ಬರುತ್ತಿದ್ದ ಕನ್ನಡ ಈಗ ಶೇ.70ರಷ್ಟು ಸುಧಾರಿಸಿದೆಯಂತೆ. ಸೆನ್ನಾ ಹೆಗ್ಡೆ ನಿರ್ದೇಶನದ ಚಿತ್ರದಲ್ಲಿ ಪೂಜಾಗೆ ದಿಗಂತ್ ಹೀರೋ. ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾ, ನಾಳೆ ತೆರೆ ಕಾಣುತ್ತಿದೆ.

     

  • ಫಾರಿನ್ ಕನ್ನಡಿಗರ ಮನಗೆದ್ದ ಕಥೆಯೊಂದು ಶುರುವಾಗಿದೆ

    katheyondhu shuruvagidhe gets good response

    ಕಥೆಯೊಂದು ಶುರುವಾಗಿದೆ. ದಿಗಂತ್ ಅಭಿನಯದ ಸಿನಿಮಾ. ಪೂಜಾ ದೇವರಿಯಾ ನಾಯಕಿ. ಸನ್ನಾ ಹೆಗ್ಡೆ ನಿರ್ದೇಶನದ ಮೊದಲ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಪಕರು. ಆಗಸ್ಟ್ 3ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾವನ್ನು ವಿದೇಶಗಳಲ್ಲಿ ಪ್ರೀಮಿಯರ್ ಶೋ ಮೂಲಕ ಪ್ರದರ್ಶನ ಮಾಡಿದೆ ಚಿತ್ರತಂಡ. 

    ವಿದೇಶದಲ್ಲಿರುವ ಕನ್ನಡಿಗರು ಈಗಾಗಲೇ ಚಿತ್ರ ನೋಡಿ ಮೆಚ್ಚಿಕೊಂಡಿರುವುದು ನಿರ್ಮಾಪಕರ ಖುಷಿಗೆ ಕಾರಣವಾಗಿದೆ. ಡಬಲ್ ಮೀನಿಂಗ್ ಇಲ್ಲ. ಬಿಲ್ಡಪ್ ಇಲ್ಲ. ಹೈ ಬೇಸ್ ಮ್ಯೂಸಿಕ್ ಇಲ್ಲ. ಸಿಂಪಲ್ ಕಥೆ, ಫ್ರೆಶ್ ಆದ ನಿರೂಪಣೆ. ಒಂದೊಳ್ಳೆ ಸಿನಿಮಾ ಅನ್ನೋದು ಹಲವು ಪ್ರೇಕ್ಷಕರ ಅಭಿಪ್ರಾಯ. 

    ವಿದೇಶಿ ಪ್ರೇಕ್ಷಕರಿಗೆ ಇಷ್ಟವಾಗಿರೋದು ದಿಗಂತ್‍ರ ಫ್ರೆಶ್ ಲುಕ್. ಕನ್ನಡದಲ್ಲಿ ಇಂತಹ ಇನ್ನಷ್ಟು ಸಿನಿಮಾಗಳು ಬರಲಿ ಎಂದು ಹಾರೈಸಿದ್ದಾರೆ ಫಾರಿನ್ ಕನ್ನಡಿಗರು. 

  • ಬ್ಯಾಡ್ ನ್ಯೂಸ್‍ನಿಂದ ಗುಡ್ ನ್ಯೂಸ್‍ಗೆ ಕಥೆಯೊಂದು ಶುರುವಾಗಿದೆ

    katheyondhu shuruvagidhe is a love philosophical story

    ಕಥೆಯೊಂದು ಶುರುವಾಗಿದೆ ಚಿತ್ರದಲ್ಲಿ ಕೇವಲ 3 ಲವ್‍ಸ್ಟೋರಿಗಳಷ್ಟೇ ಅಲ್ಲ, ಜೀವನ ಸಂದೇಶವೂ ಇದೆ. ತತ್ವಜ್ಞಾನವೂ ಇದೆ. ಹರೆಯ, ಮಧ್ಯವಯಸ್ಸು ಮತ್ತು ವೃದ್ಧಾಪ್ಯದ ಪ್ರೇಮ, ಜೀವನದಲ್ಲಿ ಸೋತಿರುವ ಮನಸ್ಸುಗಳು.. ಚಿತ್ರದ ಕಥೆಯ ಪಾತ್ರಗಳು.

    ರೆಸಾರ್ಟ್‍ನ ಕರೆಂಟು, ಫೋನ್ ಬಿಲ್ ಕೂಡಾ ಕಟ್ಟಲಾಗದೆ ಲಾಸಿನಲ್ಲಿರುವ ಮಾಲೀಕನಾಗಿ ದಿಗಂತ್, ಯಾವುದೋ ನೋವು ಮರೆಯಲು ರೆಸಾರ್ಟ್‍ಗೆ ಬರುವ ನಾಯಕಿ.. ಅವರಿಬ್ಬರ ನಡುವೆ ಶುರುವಾಗುವ ಬಾಂಧವ್ಯ, ಅದು ಪ್ರೇಮವಾ..? ಇಂತಹ ಕಥೆಗಳು ಮುಗಿಯುವುದೂ ಇಲ್ಲ. ಮುಗಿಯುವ ಹಂತದಲ್ಲೇ ಇನ್ನೊಂದು ಕಥೆ ಶುರುವಾಗುತ್ತೆ. 

    ಕಥೆಯೊಂದು ಶುರುವಾಗಿದೆ ಚಿತ್ರದ ಕಥಾ ಹಂದರವೂ ಅದೇ. ದಿಗಂತ್, ಪೂಜಾ ದೇವರಿಯಾ ಪ್ರಮುಖ ಪಾತ್ರದಲ್ಲಿರೋ ಚಿತ್ರ, ಅಬ್ಬರವಿಲ್ಲದ ಸೂಕ್ಷ್ಮ ಸಿನಿಮಾ. ಆಗಸ್ಟ್ ಮೊದಲ ವಾರದಲ್ಲಿ ತೆರೆಗೆ ಬರುತ್ತಿರುವ ಚಿತ್ರ, ಯುವ ಮನಸ್ಸುಗಳನ್ನೇ ಉದ್ದೇಶವಾಗಿಟ್ಟುಕೊಂಡು ಚಿತ್ರೀಕರಿಸಿದ ಹಾಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ, ರಕ್ಷಿತ್ ಶೆಟ್ಟಿ ನಿರ್ಮಾಣದ ಸಿನಿಮಾಗೆ ಸೆನ್ನಾ ಹೆಗಡೆ ನಿರ್ದೇಶನವಿದೆ.