` yajamana, - chitraloka.com | Kannada Movie News, Reviews | Image

yajamana,

  • ಅಪ್ಪಾಜಿ ಸಂಸ್ಕಾರಕ್ಕೆ ಬರಲು ಯಜಮಾನ ಖರ್ಚು ಮಾಡಿದ್ದೆಷ್ಟು..?

    yajamana team returns from sweden

    ಅಂಬರೀಷ್ ಮೃತಪಟ್ಟ ದಿನ ಸ್ವೀಡನ್‍ನಲ್ಲಿದ್ದ ದರ್ಶನ್, ತರಾತುರಿಯಲ್ಲಿ ಬೆಂಗಳೂರಿಗೆ ಬಂದರು. ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಿದರು. ಅಮ್ಮ ಸುಮಲತಾ, ಅಭಿಷೇಕ್‍ಗೆ ಆಸರೆಯಾದರು.

    ಆದರೆ, ಸ್ವೀಡನ್‍ನಿಂದ ಬೆಂಗಳೂರಿಗೆ ಬರುವುದು ಸುಲಭವಾಗಿರಲಿಲ್ಲ. ಭಾರತ ಮತ್ತು ಸ್ವೀಡನ್ ನಡುವೆ ಸಂಚಾರ ಕಡಿಮೆ. ಹೀಗಾಗಿ ವಿಮಾನಗಳೂ ಕಡಿಮೆ. ಟಿಕೆಟ್ ಸಿಗುವುದಿಲ್ಲ. ವಿಷಯ ಗೊತ್ತಾದ ಕ್ಷಣದಿಂದ ಚಡಪಡಿಸುತ್ತಿದ್ದ ದರ್ಶನ್, ಪತ್ನಿ ವಿಜಯಲಕ್ಷ್ಮಿಯನ್ನು ತಕ್ಷಣ ಅಂಬಿ ಮನೆಗೆ ಕಳಿಸಿದರು. ಸುಮಲತಾರನ್ನು ಬಿಟ್ಟು ಹೋಗದಂತೆ ಸೂಚಿಸಿದರು. ಇತ್ತ ನಾವು ಟಿಕೆಟ್ ಹೊಂದಿಸಲು ಒದ್ದಾಡುತ್ತಿದ್ದೆವು ಎಂದು ಆ ದಿನದ ಘಟನೆ ಹೇಳಿದ್ದಾರೆ ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್.

    ಬಿ.ಸುರೇಶ್, ಸ್ವೀಡನ್‍ನಿಂದ ಫ್ಲೈಟ್ ಸಿಗದೆ ಸ್ವೀಡನ್‍ನಿಂದ ದುಬೈಗೆ ಒಂದು, ದುಬೈನಿಂದ ಬೆಂಗಳೂರಿಗೆ ಒಂದು ಫ್ಲೈಟ ಬುಕ್ ಮಾಡಿದ್ರು. ಬೇರೆ ಮಾರ್ಗವೇ ಇರಲಿಲ್ಲ. ದುಬೈನಲ್ಲಿ ಬೆಂಗಳೂರಿನ ವಿಮಾನಕ್ಕಾಗಿಯೇ 4 ಗಂಟೆ ಕಾಯಬೇಕಾಯ್ತು. ಎಮರ್ಜೆನ್ಸಿಯಲ್ಲಿ ಟಿಕೆಟ್ ಬುಕ್ ಮಾಡಿದ್ದರಿಂದಾಗಿ 4 ಲಕ್ಷ ರೂ. ಖರ್ಚಾಯ್ತು. ಹಣ ಮುಖ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ ಶೈಲಜಾ ನಾಗ್.

    ಸ್ವೀಡನ್‍ನಲ್ಲಿ ನಡೆಯಬೇಕಿದ್ದ ಯಜಮಾನ ಚಿತ್ರದ ಇನ್ನೊಂದು ಹಾಡನ್ನು ಬೆಂಗಳೂರಿನಲ್ಲೇ ಚಿತ್ರೀಕರಿಸಲು ಚಿತ್ರತಂಡ ನಿರ್ಧರಿಸಿದೆ. ಇಡೀ ಚಿತ್ರತಂಡ ಈಗ ಬೆಂಗಳೂರಿಗೆ ವಾಪಸ್ ಆಗಿದೆ. ಜನವರಿ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆ ಇದೆ.

  • ಅಭಿಮಾನಿಯಾಗಿ.. ಅಭಿಮಾನದಿಂದ ದರ್ಶನ್‍ಗೆ ನಾಗೇಂದ್ರ ಪ್ರಸಾದ್ ಹಾಡಿನ ಕಾಣಿಕೆ

    darshan receives gift from v nagendra prasad

    ಚಿತ್ರ ಸಾಹಿತಿ ನಾಗೇಂದ್ರ ಪ್ರಸಾದ್, ಈ ಬಾರಿಯ ದರ್ಶನ್ ಹುಟ್ಟುಹಬ್ಬಕ್ಕೆ ವಿಶೇಷ ಗಿಫ್ಟ್ ಕೊಡುತ್ತಿದ್ದಾರೆ. ಈ ಹಾಡು ಅಭಿಮಾನಿಗಳ ಕಣ್ಣಲ್ಲಿ ದರ್ಶನ್ ಹೇಗೆ ಕಾಣ್ತಾರೆ ಅನ್ನೋದ್ರ ಮೇಲೆಯೇ ರಚಿತವಾಗಿದೆ. ಫೆಬ್ರವರಿ 16ರಂದು ಈ ಹಾಡನ್ನು ನಾಗೇಂದ್ರ ಪ್ರಸಾದ್ ದರ್ಶನ್  ಅವರಿಗಾಗಿ ಅರ್ಪಿಸಲಿದ್ದಾರೆ.

    ದರ್ಶನ್ ಚಿತ್ರಗಳಲ್ಲಿ ಬಹುತೇಕ ಚಿತ್ರಗಳಿಗೆ ಹಾಡು ಬರೆದಿರುವ ನಾಗೇಂದ್ರ ಪ್ರಸಾದ್, ಪ್ರತಿ ವರ್ಷವೂ ಗೆಳೆಯನಿಗೆ ಒಂದಲ್ಲಾ ಒಂದು ವಿಶೇಷ ಉಡುಗೊರೆ ಕೊಡುತ್ತಾರೆ. ಕಳೆದ ಬಾರಿ ಗೆಳೆಯನಿಗೆ `ಶತಸೋದರಾಗ್ರಜ ಶರವೀರ' ಅನ್ನೋ ಬಿರುದು ಕೊಟ್ಟಿದ್ದ ನಾಗೇಂದ್ರ ಪ್ರಸಾದ್, ಈಗ ಹಾಡಿಗೆ ಅಂತಿಮ ರೂಪ ಕೊಡುತ್ತಿದ್ದಾರೆ.

    ಈ ಹಾಡು ಅಭಿಮಾನಿಗಳಿಗೆ ಖಂಡಿತಾ ಇಷ್ಟವಾಗಲಿದೆ. ಹಾಡಿಗೆ ಸಂಗೀತವನ್ನೂ ನಾನೇ ನೀಡುತ್ತಿದ್ದೇನೆ ಎಂದಿದ್ದಾರೆ ನಾಗೇಂದ್ರ ಪ್ರಸಾದ್.

  • ಆ ಯಜಮಾನನಂತೆಯೇ.. ಈ ಯಜಮಾನನೂ ಗೆದ್ದ : ಗೆದ್ದಾ ನೋಡೋ ಅಭಿಮಾನಿ..

    yajamana's true story in real life

    ಯಜಮಾನ ಸಿನಿಮಾ ನೋಡಿ ಮೆಚ್ಚಿದ್ದವರಿಗೆ ನಂದಿ ಬ್ರಾಂಡ್ ಪರಿಚಯ ಚೆನ್ನಾಗಿಯೇ ಇರುತ್ತೆ. ಮಲ್ಟಿನ್ಯಾಷನಲ್ ಕಂಪೆನಿಯ ಸಂಚಿನ ವಿರುದ್ಧ ನಂದಿ ಬ್ರಾಂಡ್ ಮೂಲಕ ಹೋರಾಡುತ್ತಾನೆ ಯಜಮಾನ ಅರ್ಥಾತ್ ದರ್ಶನ್. ನಮಗೆ ನಾವೇ ಮಾಲೀಕರಾಬೇಕು ಅನ್ನೋ ಯಜಮಾನ ಚಿತ್ರದ ಡೈಲಾಗ್, ಹುಬ್ಬಳ್ಳಿಯಲ್ಲೊಬ್ಬ ಅಭಿಮಾನಿಗೆ ಸ್ಫೂರ್ತಿ ತುಂಬಿದೆ.

    ಹುಬ್ಬಳ್ಳಿಯಲ್ಲಿ ಈಗ ನಂಬಿ ಬ್ರಾಂಡ್ ಹೆಸರಿನ ಎಣ್ಣೆ ಬ್ರಾಂಡ್ ಶುರುವಾಗಿದೆ. ಅಂದಹಾಗೆ ವಿಷ್ಣುವರ್ಧನ್ ಅವರ ಯಜಮಾನ ಚಿತ್ರ ಬಂದಾಗ ಯಜಮಾನ ಉಪ್ಪಿನಕಾಯಿ ಬ್ರಾಂಡ್ ಶುರುವಾಗಿತ್ತು. ಆ ಯಜಮಾನ ಚಿತ್ರವೂ ಉದ್ಯಮಿಯೊಬ್ಬರಿಗೆ ಸ್ಫೂರ್ತಿ ಕೊಟ್ಟಿತ್ತು. ಯಶಸ್ವಿಯೂ ಆಗಿತ್ತು. ಈಗ ಈ ಯಜಮಾನ ಸಿನಿಮಾನೂ ಅದೇ ರೀತಿ ಸ್ಫೂರ್ತಿ ತುಂಬಿದೆ. ಇಂತಹ ಇನ್ನಷ್ಟು ಸ್ವಾಭಿಮಾನದ ಉದ್ಯಮಿಗಳು ಗೆದ್ದು ನಿಲ್ಲಲಿ

  • ಆ ಯಜಮಾನನಂತೆಯೇ.. ಈ ಯಜಮಾನನೂ ಗೆದ್ದ : ಗೆದ್ದಾ ನೋಡೋ ಅಭಿಮಾನಿ..

    yajamana real life story comes true

    ಯಜಮಾನ ಸಿನಿಮಾ ನೋಡಿ ಮೆಚ್ಚಿದ್ದವರಿಗೆ ನಂದಿ ಬ್ರಾಂಡ್ ಪರಿಚಯ ಚೆನ್ನಾಗಿಯೇ ಇರುತ್ತೆ. ಮಲ್ಟಿನ್ಯಾಷನಲ್ ಕಂಪೆನಿಯ ಸಂಚಿನ ವಿರುದ್ಧ ನಂದಿ ಬ್ರಾಂಡ್ ಮೂಲಕ ಹೋರಾಡುತ್ತಾನೆ ಯಜಮಾನ ಅರ್ಥಾತ್ ದರ್ಶನ್. ನಮಗೆ ನಾವೇ ಮಾಲೀಕರಾಬೇಕು ಅನ್ನೋ ಯಜಮಾನ ಚಿತ್ರದ ಡೈಲಾಗ್, ಹುಬ್ಬಳ್ಳಿಯಲ್ಲೊಬ್ಬ ಅಭಿಮಾನಿಗೆ ಸ್ಫೂರ್ತಿ ತುಂಬಿದೆ.

    ಹುಬ್ಬಳ್ಳಿಯಲ್ಲಿ ಈಗ ನಂದಿ ಬ್ರಾಂಡ್ ಹೆಸರಿನ ಎಣ್ಣೆ ಬ್ರಾಂಡ್ ಶುರುವಾಗಿದೆ. ಅಂದಹಾಗೆ ವಿಷ್ಣುವರ್ಧನ್ ಅವರ ಯಜಮಾನ ಚಿತ್ರ ಬಂದಾಗ ಯಜಮಾನ ಉಪ್ಪಿನಕಾಯಿ ಬ್ರಾಂಡ್ ಶುರುವಾಗಿತ್ತು. ಆ ಯಜಮಾನ ಚಿತ್ರವೂ ಉದ್ಯಮಿಯೊಬ್ಬರಿಗೆ ಸ್ಫೂರ್ತಿ ಕೊಟ್ಟಿತ್ತು. ಯಶಸ್ವಿಯೂ ಆಗಿತ್ತು. ಈಗ ಈ ಯಜಮಾನ ಸಿನಿಮಾನೂ ಅದೇ ರೀತಿ ಸ್ಫೂರ್ತಿ ತುಂಬಿದೆ. ಇಂತಹ ಇನ್ನಷ್ಟು ಸ್ವಾಭಿಮಾನದ ಉದ್ಯಮಿಗಳು ಗೆದ್ದು ನಿಲ್ಲಲಿ.

  • ಆಕ್ಟಿಂಗ್ ನನ್ನ ವೃತ್ತಿ.. ಕ್ಯಾಮೆರಾ ಇಲ್ಲದಿದ್ದಾಗ ಆ್ಯಕ್ಟಿಂಗ್ ಮಾಡಲ್ಲ - ದರ್ಶನ್

    i am an actor only when camera is on

    ಚಾಲೆಂಜಿಂಗ್ ಸ್ಟಾರ್ ದರ್ಶನ್, ಸಾಮಾನ್ಯವಾಗಿ ಮಾಧ್ಯಮಗಳಂದ ದೂರ ದೂರ. ಪುರುಸುತ್ತಿದ್ದರೂ ಸಿಕ್ಕಲ್ಲ. ಈಗ ಯಜಮಾನ ರಿಲೀಸ್ ಟೈಂ. ಹಾಗಾಗಿ ಮಾಧ್ಯಮಗಳ ಎದುರು ಬಂದಿದ್ದಾರೆ. ಹಾಗಂತ ದರ್ಶನ್ ಸುದ್ದಿಯೇ ಇರಲ್ಲ ಅಂತಲ್ಲ. ಯಾವುದಕ್ಕೂ ಅವರು ಉತ್ತರ ಕೊಡಲ್ಲ. ಸೈಲೆಂಟ್. ಹೀಗೇಕೆ.. ಎಂದರೆ ದರ್ಶನ್ ಹೇಳೋದಿಷ್ಟು.

    ನಾನೊಬ್ಬ ನಟ. ನಟನೆ ನನ್ನ ವೃತ್ತಿ. ಬೆಳಗ್ಗೆ 9ರಿಂದ ಸಂಜೆ 6ರವರೆಗೆ ನಾನು ಕ್ಯಾಮೆರಾ ಎದುರು ನಟಿಸುತ್ತೇನೆ. ಅದರ ಹೊರತಾಗಿ ನನಗೆ ನನ್ನದೇ ಆದ ಲೈಫ್ ಇದೆ. ಫ್ರೆಂಡ್ಸ್ ಜೊತೆ ಇರುತ್ತೇನೆ. ಚೆನ್ನಾಗಿ ತಿಂತೇನೆ. ಒಳ್ಳೆ ನಿದ್ದೆ ಮಾಡ್ತೇನೆ. ನಟನೆ ನನ್ನ ಜೀವನದ ಒಂದು ಭಾಗ. ಕ್ಯಾಮೆರಾ ಎದುರು ನಟಿಸುವುದು ನನ್ನ ವೃತ್ತಿ. ಅದರ ಹೊರತಾಗಿ ನಾನೂ ಒಬ್ಬ ಮನುಷ್ಯ ಎನ್ನುತ್ತಾರೆ ದರ್ಶನ್.

    ಕ್ಯಾಮೆರಾ ಇಲ್ಲದೇ ಇರುವಾಗ ನನಗೆ ನಟಿಸೋಕೆ ಬರಲ್ಲ. ನಾನು ಇರೋದೇ ಹೀಗೆ. ನಾನು ಮಾತನಾಡೋದು ಕಡಿಮೆ. ಹಾಗಂತ, ನಾನು ಯಾರಿಗೂ ಸಿಕ್ಕಲ್ಲ ಎಂದಲ್ಲ. ಅಭಿಮಾನಿಗಳ ಜೊತೆ ಟಚ್‍ನಲ್ಲಿರುತ್ತೇನೆ. ಇನ್ನೊಬ್ಬರ ಎದುರು ಶೋಆಫ್ ಮಾಡೋಕೆ ನನಗೆ ಬರಲ್ಲ ಎಂದಿದ್ದಾರೆ ದರ್ಶನ್.

  • ಆಗೋಯ್ತು ಮರ್ಯಾದೆ ಸಸ್ತಾ ಮಾಲು..

    yajamana shooting completed

    ಯಜಮಾನ ಚಿತ್ರದ ಹಾಡುಗಳ ಶೂಟಿಂಗ್ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಆಗೋಯ್ತು ಮರ್ಯಾದೆ ಸಸ್ತಾ ಮಾಲು.. ಹಾಡನ್ನು ದರ್ಶನ್ ಮತ್ತು ರಶ್ಮಿಕಾ ಮಂದಣ್ಣ ಮೇಲೆ ಚಿತ್ರೀಕರಿಸಲಾಗಿದ್ದು, ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯವಿದೆ. ಈ ಹಾಡಿನೊಂದಿಗೆ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಸೆನ್ಸಾರ್ ಮುಂದೆ ಬರಲಿದ್ದಾನೆ ಯಜಮಾನ.

    ಯಜಮಾನ ಮುಗಿಯುತ್ತಿದ್ದಂತೆ ಚುರುಕಾಗುವುದು ಒಡೆಯ ಚಿತ್ರದ ಚಿತ್ರೀಕರಣ. ಜೊತೆ ಜೊತೆಯಲ್ಲೇ ರಾಬರ್ಟ್ ಚಿತ್ರದ ಚಿತ್ರೀಕರಣ ಶುರುವಾಗಲಿದೆ. 2019ರಲ್ಲಿ ಯಜಮಾನ ಚಿತ್ರವೇ ಮೊದಲು ತೆರೆಗೆ ಬರಲಿದ್ದು, ಕುರುಕ್ಷೇತ್ರ ಆನಂತರ ರಿಲೀಸ್ ಆಗಲಿದೆ ಎನ್ನಲಾಗಿದೆ.

  • ಉಘೇ.. ಉಘೇ.. ಉಘೇ.. ಯಜಮಾನ

    yajamana trailer breaks all records

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ವೇಯ್ಟಿಂಗ್ ಮುಗಿಯುವ ಕಾಲ ಹತ್ತಿರ ಬಂದಿದೆ. ಯಜಮಾನನ ಟ್ರೇಲರ್ ಹೊರಬಿದ್ದಿದೆ. ಟ್ರೇಲರ್ ಸಿಂಪ್ಲಿ ಸೂಪರ್ಬ್. ಇದುವರೆಗಿನ ದರ್ಶನ್ ಚಿತ್ರದ ಟ್ರೇಲರ್‍ಗಳಿಗಿಂತ ಡಿಫರೆಂಟ್ ಆಗಿದೆ ಅಷ್ಟೇ ಅಲ್ಲ, ಟೆಕ್ನಿಕಲಿ ಸೂಪರ್ ಆಗಿದೆ. ಹೀಗಾಗಿಯೇ.. ಸಂತಸದ ಮುಗಿಲು ಮುಟ್ಟಿರುವ ಅಭಿಮಾನಿಗಳು ಯಜಮಾನನ ಟ್ರೇಲರ್‍ನ್ನೇ ನೋಡಿ ನೋಡಿ.. ಆನಂದಿಸುತ್ತಿದ್ದಾರೆ.

    ದರ್ಶನ್ ಅವರ ಲುಕ್, ಗೆಟಪ್ ಎಲ್ಲವೂ ಮಾಸ್ ಆಗಿದೆ. ಆಕಾಶಕ್ಕೆ ತಲೆಕೊಟ್ಟು, ಭೂಮಿಗೆ ಬೆವರಿಳಿಸಿ, ನಿಯತ್ತಿನಿಂದ ಕಟ್ಟಿದ ಸ್ವಂತ ಬ್ರ್ಯಾಂಡ್ ಇದು ಎನ್ನುವ ಡೈಲಾಗ್ ಕಿಕ್ಕೇರಿಸುತ್ತೆ. ರಶ್ಮಿಕಾ ಮಂದಣ್ಣ, ದೇವರಾಜ್, ಡಾಲಿ ಧನಂಜಯ್, ರವಿಶಂಕರ್, ಅನೂಪ್ ಸಿಂಗ್ ಮೊದಲಾದವರು ನಟಿಸಿರುವ ಯಜಮಾನನ ಹಬ್ಬ ಮಾರ್ಚ್ 1ರಿಂದ ಆರಂಭ. 

  • ಒಂದು ವಾರ ಮೊದಲೇ ಶುರುವಾಗುತ್ತೆ ಯಜಮಾನನ ಕ್ರೇಜ್..!

    yajamana movie craze will begin soon

    ದರ್ಶನ್ ಅಭಿನಯದ ಯಜಮಾನ ಚಿತ್ರ ರಿಲೀಸ್ ಆಗುವುದು ಮಾರ್ಚ್ 01ಕ್ಕೆ. ಮಾರ್ಚ್ 1ರವರೆಗೂ ಕಾಯೋಕ್ ಆಗಲ್ಲ. ನೀವು ಅವತ್ತೇ ರಿಲೀಸ್ ಮಾಡಿ. ಆದರೆ, ನಮಗೆ ಮೊದಲು ಟಿಕೆಟ್ ಕೊಡಿ. ಒಂದು ವಾರ ಮೊದಲೇ ನಮಗೆ ಟಿಕೆಟ್ ಬೇಕು ಎಂದು ಡಿಮ್ಯಾಂಡ್ ಇಟ್ಟಿರೋದು ದರ್ಶನ್ ಫ್ಯಾನ್ಸ್.

    ನಿರ್ಮಾಪಕಿ ಶೈಲಜಾ ನಾಗ್ ಕೂಡಾ ದರ್ಶನ್ ಅಭಿಮಾನಿಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನೇ ಕೊಟ್ಟಿದ್ದಾರೆ. ಒಂದು ವಾರ ಮೊದಲೇ ಆನ್‍ಲೈನ್ ಟಿಕೆಟ್ ಮಾರಾಟಕ್ಕೆ ರೆಡಿಯಾಗುತ್ತಿದ್ದಾರೆ. ಅದಕ್ಕೆ ಸಂಬಂಧಪಟ್ಟಂತೆ ತಾಂತ್ರಿಕ ಕೆಲಸಗಳೂ ಆಗಬೇಕಲ್ಲವೇ.. ಹೀಗಾಗಿ ಶೈಲಜಾ ನಾಗ್ ಈಗ ರಿಲೀಸ್ ಆಗುವುದಕ್ಕೂ ಮುನ್ನಾ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿ.

    ಒಟ್ಟಿನಲ್ಲಿ ದರ್ಶನ್, ರಶ್ಮಿಕಾ ಮಂದಣ್ಣ, ದೇವರಾಜ್, ಧನಂಜಯ್ ಅಭಿನಯದ, ಹರಿಕೃಷ್ಣ ನಿರ್ದೇಶನದ ಸಿನಿಮಾದ ಕ್ರೇಜ್ ರಿಲೀಸ್ ಆಗುವುದಕ್ಕೂ ಒಂದು ವಾರ ಮೊದಲೇ ಶುರುವಾಗಲಿದೆ. ಹಬ್ಬ ಏನಿದ್ದರೂ, ಮಾರ್ಚ್ 1ನೇ ತಾರೀಕಿಗೇ..

  • ಕನ್ನಡ ಕಲಿತೇಬಿಟ್ಟರು ಬಸಣ್ಣಿ

    tanya hope learns kananda dring yajamana shooting

    ತಾನ್ಯಾ ಹೋಪ್ ಅಂದ್ರೆ ಯಾರು ಎನ್ನುವವರಿಗೆ ಬಸಣ್ಣಿ ಎಂದರೆ.. ಬಸಣ್ಣಿ ಬಾ.. ಬಾ.. ಎನ್ನುತ್ತಾರೆ.. ಅಷ್ಟರಮಟ್ಟಿಗೆ ಸಾಂಗ್ ಹಿಟ್ ಆಗಿದೆ. ಯಜಮಾನ ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬರು ರಶ್ಮಿಕಾ ಮಂದಣ್ಣ, ಮತ್ತೊಬ್ಬರು ತಾನ್ಯಾ ಹೋಪ್. ಮೂಲತಃ ಮುಂಬೈನವರು. 

    ವೃತ್ತಿಯಲ್ಲಿ ಮಾಡೆಲ್ ಆಗಿದ್ದ ತಾನ್ಯಾ ಹೋಪ್, ತೆಲುಗು, ಹಿಂದಿಯಲ್ಲೂ ನಟಿಸಿದ್ದಾರೆ. ಕನ್ನಡದಲ್ಲಿ ಯಜಮಾನನ ಜೊತೆಗೆ ಯಜಮಾನನ ತಮ್ಮ ಅಮರ್ ಚಿತ್ರಕ್ಕೂ ಅವರೇ ನಾಯಕಿ. ಸುನಿಲ್ ಕುಮಾರ್ ದೇಸಾಯಿಯವರ ಉದ್ಘರ್ಷ ಚಿತ್ರದಲ್ಲೂ ತಾನ್ಯಾ ಇದ್ದಾರೆ. ಹೀಗಾಗಿಯೇ.. ಅವರು ಕನ್ನಡ ಕಲಿತೂಬಿಟ್ಟಿದ್ದಾರೆ.

    `ಮೊದ ಮೊದಲು ತುಂಬಾ ಕಷ್ಟವಾಗುತ್ತಿತ್ತು. ಆದರೆ, ಸುತ್ತಲಿನ ವಾತಾವರಣ ಎಲ್ಲ ಕನ್ನಡಮಯ. ಎಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ನಾನೂ ಪ್ರಯತ್ನ ಪಟ್ಟು ಪಟ್ಟೂ.. ಕನ್ನಡ ಕಲಿತೇಬಿಟ್ಟೆ. ಈಗ ಕನ್ನಡವನ್ನು ಆರಾಮ್ ಆಗಿ ಮಾತಾಡ್ತೀನಿ. ಅಷ್ಟೇ ಏಕೆ, ಕನ್ನಡದಲ್ಲೇ ಮೆಸೇಜ್ ಮಾಡ್ತೀನಿ' ಅಂತಾರೆ ತಾನ್ಯಾ ಹೋಪ್. 

    ಯಜಮಾನ ರಿಲೀಸ್ ದಿನ ಅವರಿಗೆ ತ್ರಿಪಲ್ ಧಮಾಕಾ ಇದೆ. ಅದೇ ದಿನ ಅವರ ತಮಿಳು ಚಿತ್ರವೊಂದು ರಿಲೀಸ್ ಆಗುತ್ತಿದೆ. ಜೊತೆಯಲ್ಲೇ ಅವರೇ ನಾಯಕಿಯಾಗಿರುವ ಅಮರ್ ಚಿತ್ರದ ಟ್ರೇಲರ್, ಯಜಮಾನ ಚಿತ್ರದ ಜೊತೆಯಲ್ಲೇ ಬರುತ್ತಿದೆ.

  • ಕೆಜಿಎಫ್, ನಟಸಾರ್ವಭೌಮನಿಗೆ ಆದ ಗತಿಯೇ ಯಜಮಾನನಿಗೂ ಆಯ್ತು..!

    piracy criminals attack yajaman too

    ಭಾರತಾದ್ಯಂತ ಸದ್ದು ಸುದ್ದಿ ಮಾಡಿದ ಕೆಜಿಎಫ್‍ಗೂ ಪೈರಸಿ ಕಾಟ ತಪ್ಪಿರಲಿಲ್ಲ. ರಾಕ್‍ಲೈನ್ ಬ್ಯಾನರ್‍ನ ನಟಸಾರ್ವಭೌಮ ಚಿತ್ರವನ್ನೂ ಕಳ್ಳರು ಕದ್ದಿದ್ದರು. ಅಂಥದ್ದೇ ಶಾಕ್ ಯಜಮಾನನಿಗೂ ಕೊಟ್ಟಿದ್ದಾರೆ ಪೈರಸಿ ಕಿರಾತಕರು.

    ದರ್ಶನ್ ಅಭಿನಯದ ಯಜಮಾನ, ಬಾಕ್ಸಾಫೀಸಲ್ಲಿ ಅಬ್ಬರಿಸುತ್ತಿದ್ದರೆ, ಅದೇ ವೇಳೆಯಲ್ಲಿ ಯಜಮಾನನ ಪೈರಸಿ ಸಿಡಿ ಮಾಡಿದ್ದಾರೆ. ಆನ್‍ಲೈನ್‍ಗೂ ವಿಡಿಯೋ ಬಿಟ್ಟಿದ್ದಾರೆ.

    ಭರ್ಜರಿ ಬೆಳೆ ನಿರೀಕ್ಷೆಯಲ್ಲಿದ್ದ ನಿರ್ಮಾಪಕಿ ಶೈಲಜಾ ನಾಗ್‍ಗೆ ಇದು ಶಾಕ್ ಕೊಟ್ಟಿರುವುದು ಹೌದು. ಪೈರಸಿ ಮಟ್ಟ ಹಾಕುವ ನಿಟ್ಟಿನಲ್ಲಿ ಹೋರಾಟ ನಿರಂತರವಾಗಿ ಜಾರಿಯಲ್ಲಿಟ್ಟಿರುವ ನಿರ್ಮಾಪಕರು ಚಿತ್ರವನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಆದರೆ, ಪೈರಸಿ ಮಾಡುವವರೋ.. ಥೇಟು ಭಯೋತ್ಪಾದಕರಂತೆ. ಹಿಡಿಯಬಹುದು. ಕೊಲ್ಲಲೂಬಹುದು. ಆದರೆ, ಅದು ನಿರ್ವಂಶವಾಗಲ್ಲ.

     

  • ಗಾಯದ ನಡುವೆಯೂ ಸಿನಿಮಾ ಮುಗಿಸಿದ ದರ್ಶನ್

    darshan completes yajamana shooting

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ ರಿಲೀಸ್ ಆಗಿದ್ದುದು 2017ರಲ್ಲಿ. 2018ರಲ್ಲಿ ದರ್ಶನ್ ಅವರ ಒಂದೇ ಒಂದು ಸಿನಿಮಾ ಬರಲಿಲ್ಲ. 2019ಕ್ಕೆ ಮೊದಲನೆಯದಾಗಿ ತೆರೆಗೆ ಬರುತ್ತಿರುವ ಚಿತ್ರ ಯಜಮಾನ. 

    ಚಿತ್ರದ ಶೂಟಿಂಗ್ ಮುಕ್ತಾಯವಾಗಿದ್ದು, ಗಾಯದ ನಡುವೆಯೂ ದರ್ಶನ್ ಚಿತ್ರೀಕರಣ ಮುಗಿಸಿಕೊಟ್ಟಿರೋದು ವಿಶೇಷ. `ನಾವು ಇನ್ನೂ ಕೆಲವು ದಿನ ರೆಸ್ಟ್ ಮಾಡುವಂತೆ ಹೇಳಿದರೂ ಕೇಳದೆ.. ಶೂಟಿಂಗ್ ಮುಗಿಸಿಕೊಟ್ಟರು. ಅದು ಅವರ ವೃತ್ತಿಪರತೆಯ ಸಂಕೇತ. ಥ್ಯಾಂಕ್ಯೂ ದರ್ಶನ್' ಎಂದಿದ್ದಾರೆ ನಿರ್ಮಾಪಕಿ ಶೈಲಜಾ ನಾಗ್.

    ಸೆಪ್ಟೆಂಬರ್‍ನಲ್ಲಿ ಅಪಘಾತಕ್ಕೊಳಗಾಗಿದ್ದ ದರ್ಶನ್ ಬಹುತೇಕ ಚೇತರಿಸಿಕೊಂಡಿದ್ದರೂ, ಹೆಬ್ಬೆರಳಿಗೆ ಆಗಿರುವ ಗಾಯ ವಾಸಿಯಾಗಿಲ್ಲ. ವಿ. ಹರಿಕೃಷ್ಣ ನಿರ್ದೇಶನದ ಚಿತ್ರ ಇದಾಗಿದ್ದು, ದರ್ಶನ್‍ಗೆ ಎದುರಾಗಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. 

  • ಚಂದಮಾಮ ಓದೋ ವಯಸ್ಸಲ್ಲೇ ಕೃಷ್ಣಂಗೂ, ಕಾವೇರಿಗೂ ಲವ್ವು..!

    love stroy between krishna and kauveri in yajamana

    ದರ್ಶನ್ ಚಿತ್ರಗಳಲ್ಲಿ ಕಾವೇರಿ ಅನ್ನೋ ಹೀರೋಯಿನ್ ಹೆಚ್ಚು. ಯಜಮಾನನಲ್ಲೂ ಅಷ್ಟೆ, ದರ್ಶನ್ ಕೃಷ್ಣನಾದರೆ, ರಶ್ಮಿಕಾ ಕಾವೇರಿ. ಇಬ್ಬರೂ ಪ್ರೀತಿಗೆ ಬೀಳ್ತಾರೆ. ಹೋಲ್ಡಾನ್..

    ಅವರಿಬ್ಬರಿಗೂ ಆಗೋದು ಲವ್ ಅಟ್ ಫಸ್ಟ್ ಸೈಟ್ ಅಲ್ಲ. ಅವರಿಬ್ಬರದ್ದೂ ಬಾಲ ಪ್ರೇಮ ಕಥೆ. ಬಾಲಮಿತ್ರ, ಚಂದಮಾಮ ಓದೋ ವಯಸ್ಸಲ್ಲೇ ಇಬ್ರಿಗೂ ಲವ್ವಾಗುತ್ತಂತೆ. ದೊಡ್ಡವರಾದ್ ಮೇಲೆ ಮರ ಸುತ್ತುತ್ತಾರೆ.. ಅಷ್ಟೆ..

    ಇಷ್ಟೆಲ್ಲ ಹೇಳಿರೋದು ಕಾವೇರಿ ರಶ್ಮಿಕಾ ಮಂದಣ್ಣ. ಮುಂದಿನದ್ದೆಲ್ಲ ಹೇಳೋಕೆ ಶೈಲಜಾ ನಾಗ್, ಹರಿಕೃಷ್ಣ ಬಿಟ್ಟಿಲ್ವಂತಣ್ಣ.

  • ಚಿತ್ರರಂಗಕ್ಕೆ ಅವರೊಬ್ಬರೇ ಯಜಮಾನ.. ನನಗೆ ಅಂಬರೀಷಣ್ಣ

    he is the one and only yajamana and will remain the same

    ಚಿತ್ರರಂಗಕ್ಕೆ ಆವತ್ತು.. ಇವತ್ತು.. ಮುಂದೆ.. ಯಾವತ್ತಿಗೂ ಅಷ್ಟೆ. ವಿಷ್ಣುವರ್ಧನ್ ಒಬ್ಬರೇ ಯಜಮಾನ. ಇದು ದರ್ಶನ್ ಅವರ ಖಡಕ್ ಮಾತು. 

    ಯಜಮಾನ ಚಿತ್ರದ ಟೈಟಲ್ ಕುರಿತು ಕೇಳಿ ಬರುವ ಮಾತುಗಳಿಗೆ ಉತ್ತರ ಕೊಟ್ಟಿರೋ ದರ್ಶನ್, ಚಿತ್ರದ ಕಥೆಗೆ ಯಜಮಾನ ಟೈಟಲ್ ಸೂಕ್ತವಾಗಿದೆ. ಹಾಗಾಗಿ ಇಟ್ಟಿದ್ದೇವೆ. ಕಥೆಗಾಗಿ ಯಜಮಾನ ಟೈಟಲ್ ಹೊರತೂ, ದರ್ಶನ್‍ಗಾಗಿ ಯಜಮಾನ ಅಲ್ಲ ಎಂದಿದ್ದಾರೆ ದರ್ಶನ್.

    ಇಷ್ಟೆಲ್ಲ ಆದ ಮೇಲೆ ನಿಮ್ಮ ಯಜಮಾನ ಯಾರು ಎಂದರೆ, ಅಷ್ಟೇ ನೇರ ಉತ್ತರ ದರ್ಶನ್ ಅವರದ್ದು. ದರ್ಶನ್ ಪಾಲಿಗೆ ಯಾವತ್ತಿದ್ರೂ ಅಂಬರೀಷ್ ಅವರೇ ಯಜಮಾನ.

  • ಚಿತ್ರರಂಗಕ್ಕೆ ಒಬ್ಬರೇ ಯಜಮಾನ, ನಾನಲ್ಲ - ದರ್ಶನ್

    i am not yajamana

    ದರ್ಶನ್ ಅಭಿನಯದ 51ನೇ ಚಿತ್ರದ ಟೈಟಲ್ ಯಜಮಾನ. ಅದು ವಿಷ್ಣುವರ್ಧನ್ ಅವರ ಸೂಪರ್ ಹಿಟ್ ಚಿತ್ರದ ಟೈಟಲ್. ಅದೇ ಟೈಟಲ್‍ನಲ್ಲಿ ಅಭಿನಯಿಸುತ್ತಿರುವ ದರ್ಶನ್, ಚಿತ್ರದ ಟೈಟಲ್ ಮತ್ತು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.

    ನನ್ನ ಚಿತ್ರದ ಟೈಟಲ್ ಯಜಮಾನ ಎಂದೇ ಇರಬಹುದು. ಆದರೆ, ಇಂದಿಗೂ...ಎಂದೆಂದಿಗೂ ಚಿತ್ರರಂಗಕ್ಕೆ ಒಬ್ಬರೇ ಯಜಮಾನ. ಅದು ವಿಷ್ಣುವರ್ಧನ್ ಮಾತ್ರ ಎಂದಿದ್ದಾರೆ ದರ್ಶನ್. ಯಜಮಾನ ಟೈಟಲ್‍ನ  ಚಿತ್ರದಲ್ಲಿ ನಟಿಸುತ್ತಿದ್ದೇನೆ ಎನ್ನುವುದೇ ಖುಷಿಯ ವಿಚಾರ ಎಂದು ಖುಷಿಗೊಂಡಿದ್ದಾರೆ ದರ್ಶನ್.

  • ಜನವರಿಗೆ ಬರ್ತಾನಾ ಯಜಮಾನ..?

    will yajamana release in january ?

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಚಿತ್ರದ ಶೂಟಿಂಗ್ ಮತ್ತೆ ಬಿರುಸಿನಿಂದಲೇ ಶುರುವಾಗಿದೆ. ದರ್ಶನ್‍ಗೆ ಆದ ಆ್ಯಕ್ಸಿಡೆಂಟ್ ಮತ್ತು ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ಅನಿರೀಕ್ಷಿತ ಬ್ರೇಕ್ ಎದುರಿಸಿದ್ದ ಯಜಮಾನ ಚಿತ್ರದ ಹಾಡುಗಳ ಶೂಟಿಂಗ್ ಶುರುವಾಗಿದೆ. ಕೆಲವೇ ದಿನಗಳಲ್ಲಿ ಮುಗಿಯಲಿದೆ.

    ಶೂಟಿಂಗ್ ಮುಗಿಯಿತು ಎಂದರೆ ಸಿನಿಮಾ ರೆಡಿ ಎಂದು ಅರ್ಥವಲ್ಲ. ಚಿತ್ರದ ಗ್ರಾಫಿಕ್ಸ್ ಕೆಲಸಗಳು, ಎಡಿಟಂಗ್, ಡಬ್ಬಿಂಗ್ ಇನ್ನೂ ಬಾಕಿ ಇದೆ. ಬಹುಶಃ ಡಿಸೆಂಬರ್ ಕೊನೆಯಲ್ಲಿ ಚಿತ್ರದ ರಿಲೀಸ್ ಯಾವಾಗ ಎಂದು ನಿರ್ಧರಿಸುತ್ತೇವೆ. ಚಿತ್ರದ ಆಡಿಯೋ, ಟೀಸರ್, ಟ್ರೇಲರ್‍ಗಳ ಬಿಡುಗಡೆಯೂ ಅದ್ಧೂರಿಯಾಗಿರಲಿದೆ ಎಂದಿದ್ದಾರೆ ನಿರ್ಮಾಪಕಿ ಶೈಲಜಾ ನಾಗ್.

    ಒಟ್ಟಿನಲ್ಲಿ ಜನವರಿ ತಿಂಗಳಲ್ಲಿ ಕನ್ನಡ ಸಿನಿಮಾ ರಸಿಕರಿಗೆ ಫುಲ್ ಮೀಲ್ಸ್. 

  • ದರ್ಶನ್ ಅಂದ್ರೆ ಸ್ಯಾಂಡಲ್‍ವುಡ್ ಸಲ್ಮಾನ್

    yajamana producer calls darshan sandalwood salman khan

    ಚಾಲೆಂಜಿಂಗ್ ಸ್ಟಾರ್ ದರ್ಶನ್, ಸ್ಯಾಂಡಲ್‍ವುಡ್ ಸಲ್ಮಾನ್ ಖಾನ್. ಬಾಲಿವುಡ್‍ಗೆ ಸಲ್ಮಾನ್ ಹೇಗೋ ಹಾಗೆ ಕನ್ನಡಕ್ಕೆ ದರ್ಶನ್. ದರ್ಶನ್ ಚಿತ್ರದ ನಂದಿ ಹಾಡು ಸೃಷ್ಟಿಸುತ್ತಿರುವ ದಾಖಲೆಗಳೇ ಎಲ್ಲವನ್ನೂ ಹೇಳುತ್ತಿವೆ. ಹೀಗೆ ಹೇಳಿರುವುದು ಬೇರ್ಯಾರೂ ಅಲ್ಲ, ಚಿತ್ರದ ನಿರ್ಮಾಪಕಿ ಶೈಲಜಾ ಸುರೇಶ್.

    ಬಿ.ಸುರೇಶ್ ಬ್ಯಾನರ್‍ನಲ್ಲಿ ಬರುತ್ತಿರುವ ಮೊದಲ ಕಮರ್ಷಿಯಲ್ ಸಿನಿಮಾ ಹಾಗೂ ಭಾರಿ ಬಜೆಟ್‍ನ ಸಿನಿಮಾ ಯಜಮಾನ. ದರ್ಶನ್‍ಗೆ ಕಥೆ ಹೇಳೋಕೆ ಹೋದಾಗ ಎರಡು ಕಥೆ ರೆಡಿ ಮಾಡಿಟ್ಟುಕೊಂಡು ಹೋಗಿದ್ದರಂತೆ. ಎರಡೂ ಕಥೆ ಕೇಳಿದ ದರ್ಶನ್, ಯಜಮಾನ ಕಥೆಗೆ ಓಕೆ ಎಂದಿದ್ದಾರೆ. ಅಷ್ಟೆ ಅಲ್ಲ, ಎರಡನೇ ಕಥೆಯೂ ಇಷ್ಟವಾಗಿ, ಆ ಕಥೆಗೂ ಕಾಲ್‍ಶೀಟ್ ಕೊಟ್ಟಿದ್ದಾರೆ ದರ್ಶನ್. ಇವೆಲ್ಲವನ್ನೂ ಖುಷಿಯಿಂದ ಹೇಳಿಕೊಂಡಿರೋ ನಿರ್ಮಾಪಕಿ ಶೈಲಜಾ ನಾಗ್, ಫೆಬ್ರವರಿಯಲ್ಲಿ ಚಿತ್ರದ ರಿಲೀಸ್ ಖಚಿತ ಎಂದಿದ್ದಾರೆ. 

  • ದರ್ಶನ್ ಇದ್ರೆ ನಗುವಿಗೆ ಬರವಿಲ್ಲ - ರಶ್ಮಿಕಾ

    rashmika praises darshan

    ಚಾಲೆಂಜಿಂಗ್ ಸ್ಟಾರ್ ದರ್ಶನ್, ಸೆಟ್‍ನಲ್ಲಿದ್ರೆ, ನಗು ತುಂಬಿಕೊಂಡಿರುತ್ತೆ. ಮುಖ ಊದಿಸಿಕೊಂಡು ಸೀರಿಯಸ್ ಆಗಿರಲ್ಲ. ಸದಾ ಎಲ್ಲರನ್ನೂ ಮಾತನಾಡಿಸುತ್ತಾ, ನಗುತ್ತಾ.. ನಗಿಸುತ್ತಾ ಇರುತ್ತಾರೆ. ಇದು ರಶ್ಮಿಕಾ ಮಂದಣ್ಣ ಅವರು ಹೇಳಿರೋ ಮಾತು. 

    ದರ್ಶನ್ ಅಭಿನಯದ ಯಜಮಾನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಹೀರೋಯಿನ್. ಮೊದಲು ಕಥೆ ಇಷ್ಟವಾಯ್ತು. ನಂತರ, ದರ್ಶನ್, ನಿರ್ಮಾಪಕರಾದ ಶೈಲಜಾನಾಗ್, ನಿರ್ದೇಶಕ ಪಿ.ಕುಮಾರ್.. ಹೀಗೆ ಒಳ್ಳೆಯ ತಂಡ ಇರುವ ಚಿತ್ರ. ಹಾಗಾಗಿ ಚಿತ್ರವನ್ನು ಒಪ್ಪಿಕೊಂಡೆ ಎಂದು ಹೇಳಿಕೊಂಡಿದ್ದಾರೆ ರಶ್ಮಿಕಾ.

    ಸದ್ಯಕ್ಕೆ ಯಜಮಾನ ಬಿಟ್ಟರೆ, ಬೇರ್ಯಾವುದೇ ಕನ್ನಡ ಚಿತ್ರದಲ್ಲಿ ರಶ್ಮಿಕಾ ನಟಿಸುತ್ತಿಲ್ಲ. ಬೇರೆ ಯಾವ ಚಿತ್ರವನ್ನು ಒಪ್ಪಿಕೊಂಡೂ ಇಲ್ಲ. ಕೆಲವು ಚಿತ್ರಗಳ ಮಾತುಕತೆ ನಡೆದಿದೆಯಾದರೂ ಫೈನಲ್ ಆಗಿಲ್ಲ ಎಂದು ತಿಳಿಸಿದ್ದಾರೆ ರಶ್ಮಿಕಾ ಮಂದಣ್ಣ.

  • ದರ್ಶನ್ ಎಡಗೈಗೆ ಗಾಯ.. ಸದ್ಯಕ್ಕೆ ರೆಸ್ಟ್

    darshan's hand injured

    ಚಾಲೆಂಜಿಂಗ್ ಸ್ಟಾರ್ ದರ್ಶನ್, ತಮ್ಮ ಎಡಗೈಗೆ ಪೆಟ್ಟು ಮಾಡಿಕೊಂಡಿದ್ದಾರೆ. ಯಜಮಾನ ಚಿತ್ರದ ಶೂಟಿಂಗ್ ವೇಳೆ ದರ್ಶನ್ ಎಡಗೈಗೆ ಪೆಟ್ಟಾಗಿದೆ. ಚಿಕ್ಕಮಗಳೂರಿನಲ್ಲಿ ಚಿತ್ರೀಕರಿಸಲಾಗುತ್ತಿದ್ದ ಸಾಹಸ ದೃಶ್ಯವೊಂದರಲ್ಲಿ ನಿರ್ದೇಶಕರು ಸ್ಪೆಷಲ್ ಕಂಪೋಸಿಂಗ್ ಮಾಡಿದ್ದರಂತೆ. ಆ ಸಾಹಸ ದೃಶ್ಯದ ಚಿತ್ರೀಕರಣದಲ್ಲಿ ದರ್ಶನ್ ಎಡಗೈಗೆ ಪೆಟ್ಟಾಗಿದೆ. ಬ್ಯಾಂಡೇಜ್ ಬಿದ್ದಿದೆ. ಸದ್ಯಕ್ಕೆ ಮೂರು ದಿನ ವಿಶ್ರಾಂತಿಯಲ್ಲಿದ್ದಾರೆ ದರ್ಶನ್.

    ದರ್ಶನ್‍ಗೆ ಶೂಟಿಂಗ್ ವೇಳೆ ಗಾಯವಾಗೋದು ಹೊಸದೇನೂ ಅಲ್ಲ. ಸಾರಥಿ ಚಿತ್ರದ ಶೂಟಿಂಗ್ ವೇಳೆ ಕುದುರೆಯಿಂದ ಬಿದ್ದಿದ್ದ ದರ್ಶನ್, ವಿರಾಟ್ ಚಿತ್ರದಲ್ಲೂ ಗಾಯ ಮಾಡಿಕೊಂಡಿದ್ದರು. ಸದ್ಯಕ್ಕಂತೂ ದರ್ಶನ್ ಸರಿಹೋಗುವವರೆಗೆ ಚಿತ್ರೀಕರಣದಲ್ಲಿ ಭಾಗವಹಿಸೋದಿಲ್ಲ. ವಿಶ್ರಾಂತಿ ಪಡೆಯಲಿದ್ದಾರೆ.

  • ದರ್ಶನ್ ಎದುರು ಮಿಠಾಯಿ ಸೂರಿ

    dolly dhananjay as mitayi soori in yajamana

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರದಲ್ಲಿ ಸ್ಟಾರ್‍ಗಳಿದ್ದಾರೆ. ದೇವರಾಜ್, ರವಿಶಂಕರ್, ಅನೂಪ್ ಸಿಂಗ್, ರಶ್ಮಿಕಾ ಮಂದಣ್ಣ.. ಹೀಗೆ ಹಲವು ಸ್ಟಾರ್‍ಗಳು ನಟಿಸಿರುವ ಚಿತ್ರದಲ್ಲಿ ಡಾಲಿ ಧನಂಜಯ್ ಕೂಡಾ ನಟಿಸಿದ್ದಾರೆ. ಒನ್ಸ್ ಎಗೇಯ್ನ್ ವಿಲನ್.

    ಚಿತ್ರದಲ್ಲಿ ಡಾಲಿ ಧನಂಜ್ ಅವರ ಪಾತ್ರದ ಹೆಸರು ಮಿಠಾಯಿ ಸೂರಿ. ಧನಂಜಯ್ ಅವರ ಹೇರ್ ಸ್ಟೈಲ್, ಮ್ಯಾನರಿಸಂ ಎಲ್ಲವೂ ಡಿಫರೆಂಟ್ ಆಗಿಯೇ ಇದೆ. ದರ್ಶನ್ ಎದುರು ವಿಲನ್ ಆಗುವವರೂ ಅಷ್ಟೇ ಖಡಕ್ ಆಗಿರಬೇಕು. ಒಟ್ಟಿನಲ್ಲಿ ಕೇಡಿಗೆ ಕೇಡಿಯಾಗಿ ಯಜಮಾನನನಿಗೆ ಠಕ್ಕರ್ ಕೊಟ್ಟಿದ್ದಾರೆ ಧನಂಜಯ್. ಹೇಗೆ ಠಕ್ಕರ್ ಕೊಟ್ಟಿದ್ದಾರೆ ಅನ್ನೋದು ಮಾರ್ಚ್ 1ಕ್ಕೆ ಗೊತ್ತಾಗಲಿದೆ.

  • ದರ್ಶನ್ ಜೊತೆ ನಟಿಸಿದ ಮೇಲೆ ರಶ್ಮಿಕಾಗೆ ಗೊತ್ತಾಗಿದ್ದು ಏನೆಂದರೆ..

    rashmika learns one important thing from darshan

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಯಜಮಾನ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. ಕಿರಿಕ್ ಪಾರ್ಟಿ ಚೆಲುವೆ ಚಮಕ್ ತೋರಿಸಿ ಹೋದ ನಂತರ ಕನ್ನಡದಲ್ಲಿ ಕಾಣಿಸಿಕೊಂಡೇ ಇಲ್ಲ. 2018ರಲ್ಲಿ ರಶ್ಮಿಕಾರ ಒಂದೇ ಒಂದು ಕನ್ನಡ ಸಿನಿಮಾ ಇರಲಿಲ್ಲ. 2019ರ ಆರಂಭದಲ್ಲೇ ಯಜಮಾನ ಜೊತೆ ಕಾಣಿಸಿಕೊಳ್ತಿರೋ ರಶ್ಮಿಕಾ ಮಂದಣ್ಣ, ಚಿತ್ರದ ಅನುಭವ ಹಂಚಿಕೊಂಡಿದ್ದಾರೆ.

    ಚಿತ್ರದ ಹಾಡುಗಳ ಚಿತ್ರೀಕರಣದ ವೇಳೆ ದರ್ಶನ್ ಅವರಿಗೆ ಆ್ಯಕ್ಸಿಡೆಂಟ್ ಆಗಿ ಕೈಗೆ ಪೆಟ್ಟಾಗಿತ್ತು. ಕೆಲವೇ ದಿನ ವಿಶ್ರಾಂತಿ ಬಳಿಕ ಅವರು ಶೂಟಿಂಗಿಗೆ ಬಂದರು. ಯಾವುದೇ ನೆಪ ಹೇಳಲಿಲ್ಲ. ನಮ್ಮ ನೋವು ಏನೇ ಇದ್ದರೂ, ನೆಪ ಹೇಳದೆ ಕೆಲಸ ಮಾಡಬೇಕು ಅನ್ನೋದು ದರ್ಶನ್ ಅವರನ್ನು ನೋಡಿದ ನಂತರ ಗೊತ್ತಾಯಿತು ಎಂದಿದ್ದಾರೆ ರಶ್ಮಿಕಾ.

    ನಮ್ಮ ನೋವನ್ನು ಒಳಗೇ ಇಟ್ಟುಕೊಂಡು ಮುಂದುವರಿಯಬೇಕು. ಇಲ್ಲದೇ ಹೋದರೆ ನಾವು ಕೆಲಸಕ್ಕೆ ಗೌರವ ಕೊಡುತ್ತಿಲ್ಲ ಎಂದರ್ಥ. ದರ್ಶನ್ ಎಷ್ಟು ಶ್ರಮಜೀವಿ ಅನ್ನೋದು ಆಮೇಲೆ ಗೊತ್ತಾಯ್ತು ಎಂದಿದ್ದಾರೆ ರಶ್ಮಿಕಾ.

    ಯಜಮಾನ ಚಿತ್ರದ ಒಂದು ಮುಂಜಾನೆ.. ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದ್ದು ಭರ್ಜರಿ ಸದ್ದು ಮಾಡುತ್ತಿದೆ.