` bhairadevi, - chitraloka.com | Kannada Movie News, Reviews | Image

bhairadevi,

  • ಅದೇ ಸ್ಮಶಾನ.. ರಾಧಿಕಾ ಕುಮಾರಸ್ವಾಮಿ ಮತ್ತೆ ಕಾಳಿ ಗೆಟಪ್

    radhika kumaraswamy resumes shooting

    ಭೈರಾದೇವಿ ಚಿತ್ರದ ಚಿತ್ರೀಕರಣದ ವೇಳೆ ಸ್ಮಶಾನದಲ್ಲಿ ಬಿದ್ದು ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದ ನಟಿ ರಾಧಿಕಾ ಕುಮಾರಸ್ವಾಮಿ, ಮತ್ತೊಮ್ಮೆ ಗಾಳಿ ಗೆಟಪ್‍ನಲ್ಲಿ ಅದೇ ಸ್ಮಶಾನದಲ್ಲಿ ಎದ್ದು ನಿಲ್ಲುತ್ತಿದ್ದಾರೆ. ಶಾಂತಿನಗರದ ಸ್ಮಶಾನದಲ್ಲಿ ಬಿದ್ದಿದ್ದ ರಾಧಿಕಾ, ಅದೇ ಜಾಗದಲ್ಲಿ ಕಾಳಿ ಗೆಟಪ್‍ನಲ್ಲಿ ಹಾಡಿಗೆ ನೃತ್ಯ ಮಾಡಲಿದ್ದಾರೆ.

    ಒಟ್ಟು 100 ಮಂದಿ ರಾಧಿಕಾ ಜೊತೆ ಕಾಳಿ ಗೆಟಪ್‍ನಲ್ಲಿ ಹೆಜ್ಜೆ ಹಾಕಲಿದ್ದಾರೆ ಎಂದು ತಿಳಿಸಿದ್ದಾರೆ ನಿರ್ದೇಶಕ ಶ್ರೀಜಯ್. ಮಾರ್ಚ್ 21ರಿಂದ ಶೂಟಿಂಗ್ ಶುರುವಾಗಲಿದೆ. ಚಿತ್ರದಲ್ಲಿ ರಮೇಶ್ ಅರವಿಂದ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ.

  • ದಮಯಂತಿಗಿಂತ ಭಯಂಕರ ಭೈರಾದೇವಿ..!

    radhika kumaraswamy in aghori avatar

    ರಾಧಿಕಾ ಕುಮಾರಸ್ವಾಮಿ ಅಭಿನಯದ ದಮಯಂತಿ ಚಿತ್ರದ ಫಸ್ಟ್‍ಲುಕ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಆಯುಧಪೂಜೆಯ ಮುನ್ನಾ ದಿನ ದಮಯಂತಿಯಲ್ಲಿ ಅರುಂಧತಿಯ ಲುಕ್ ನೆನಪಿಸುವಂತೆ ಕಾಣಿಸಿಕೊಂಡಿದ್ದರು ರಾಧಿಕಾ ಕುಮಾರಸ್ವಾಮಿ. ಈಗ ಆ ಲುಕ್‍ನ್ನೂ ಬೆಚ್ಚಿಬೀಳಿಸುವಂತೆ ಭೈರಾದೇವಿಯಲ್ಲಿ ಕಾಣಿಸಿಕೊಂಡಿದ್ದಾರೆ.

    ಭೈರಾದೇವಿಯಲ್ಲಿ ರಾಧಿಕಾ ಅವರದ್ದು ಅಘೋರಿಯ ಪಾತ್ರವಂತೆ. ಅಘೋರಿಗಳು ಶಿವನ ಆರಾಧಕರು. ಹೀಗಾಗಿಯೇ ಪಾರ್ವತಿಯನ್ನು ತಾಯಿಯಂತೆ ಪೂಜಿಸುತ್ತಾರೆ. ಆ ತಾಯಿಯ ಒಂದು ಆವತಾರಸ್ವರೂಪಿಣಿಯೇ ಭೈರಾದೇವಿ. 

    ಶ್ರೀಜೈ ನಿರ್ದೇಶನದ ಚಿತ್ರಕ್ಕೆ ರಾಧಿಕಾ ಕುಮಾರಸ್ವಾಮಿಯೇ ನಿರ್ಮಾಪಕಿ. ರಮೇಶ್ ಅರವಿಂದ್, ಅನುಪ್ರಭಾಕರ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ.

    ರಾಧಿಕಾ ಕುಮಾರಸ್ವಾಮಿಗೆ ಈ ಮೇಕಪ್ ಮಾಡಿದವರು ರಾಘವೇಂದ್ರ ಮತ್ತು ನಾಗೇಂದ್ರ. ಈ ಮೇಕಪ್ ಮಾಡೋಕೆ 5 ಗಂಟೆ ಬೇಕಾಯ್ತಂತೆ.

  • ದೇವತೆಯ ಅವತಾರದಲ್ಲಿ ರಾಧಿಕಾ ಕುಮಾರಸ್ವಾಮಿ

    radhika kumaraswamy's bhairadevi

    ರಾಧಿಕಾ ಕುಮಾರಸ್ವಾಮಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಬಬ್ಲಿ ಬಬ್ಲೀ ಪಾತ್ರಗಳ ಮೂಲಕ. ಅದಾದ ನಂತರ ಹಲವು ಅವತಾರಗಳಲ್ಲಿ ಕಾಣಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ, ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲಿಯೂ ಕೂಡಾ ದೈವಭಕ್ತೆಯ ಪಾತ್ರದಲ್ಲಿ ನಟಿಸಿದ್ದಾರೆ. ಆದರೆ, ಈಗ ಸ್ವತಃ ದೇವತೆಯ ಪಾತ್ರದಲ್ಲಿ ನಟಿಸಲು ಸಿದ್ಧರಾಗಿದ್ದಾರೆ ರಾಧಿಕಾ.

    ಶಮಿಕಾ ಎಂಟರ್‍ಪ್ರೈಸಸ್ ಮೂಲಕ ನಿರ್ಮಾಣವಾಗುತ್ತಿರುವ `ಭೈರಾದೇವಿ' ಚಿತ್ರಕ್ಕೆ ರಾಧಿಕಾ ನಾಯಕಿ ಮತ್ತು ನಿರ್ಮಾಪಕಿ. ರಾಧಿಕಾ ಜೊತೆ ರಮೇಶ್ ಅರವಿಂದ್ ಹಾಗೂ ಅನು ಪ್ರಭಾಕರ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಆರ್.ಎಕ್ಸ್. ಸೂರಿ ಚಿತ್ರ ನಿರ್ದೇಶಿಸಿದ್ದ ಶ್ರೀಜೈ, ಭೈರಾದೇವಿ ಚಿತ್ರದ ನಿರ್ದೇಶಕ.

    ಈ ಚಿತ್ರ ಕನ್ನಡದಲ್ಲಷ್ಟೇ ಅಲ್ಲ, ಏಕಕಾಲದಲ್ಲಿ ತೆಲುಗು ಹಾಗೂ ತಮಿಳಿನಲ್ಲಿಯೂ ನಿರ್ಮಾಣವಾಗಲಿದೆ. ಒಂದೊಳ್ಳೆ ಕಥೆ. ಇಷ್ಟವಾಯಿತು. ಪಾತ್ರವೂ ವಿಭಿನ್ನವಾಗಿತ್ತು. ಹೀಗಾಗಿ ನಾನೇ ನಿರ್ಮಾಣದ ಜವಾಬ್ದಾರಿಯನ್ನೂ ವಹಿಸಿಕೊಂಡೆ ಎಂದಿದ್ದಾರೆ ರಾಧಿಕಾ ಕುಮಾರಸ್ವಾಮಿ.

     

  • ಬಂದಾಳಮ್ಮಾ ಕಾಳಿಕಾ.. ಅರೆರೆರೆ.. ರಾಧಿಕಾ ಕುಮಾರಸ್ವಾಮಿ

    bhairavdeiv song released

    ರಾಧಿಕಾ ಕುಮಾರಸ್ವಾಮಿ ಅಘೋರಿಯಾಗಿ ಕಾಣಿಸಿಕೊಂಡಿರುವ ಚಿತ್ರ ಭೈರಾದೇವಿ. ಶಮಿಕಾ ಎಂಟರ್‍ಪ್ರೈಸಸ್ ನಿರ್ಮಾಣದಲ್ಲಿ ರೆಡಿಯಾಗಿರುವ ಭೈರಾದೇವಿ ಚಿತ್ರದ ಹಾಡಿನ ಲಿರಿಕಲ್ ವಿಡಿಯೋ, ಚಾಮುಂಡೇಶ್ವರಿ ಸನ್ನಿಧಿಯಲ್ಲೇ ರಿಲೀಸ್ ಆಗಿದೆ. ಯುವ ದಸರಾದಲ್ಲಿ ಭೈರಾದೇವಿ ಚಿತ್ರದ ಬಂದಾಳಮ್ಮಾ ಕಾಳಿಕಾ.. ಅನ್ನೋ ಲಿರಿಕಲ್ ಹಾಡು ಬಿಡುಗಡೆಯಾಗಿದೆ.

    ಬಂದಾಳಮ್ಮ ಕಾಳಿಕಾ.. ದುಷ್ಟರನ್ನು ಕೊಲ್ಲುತಾ.. ಬಂದಾಳಮ್ಮ ಕಾಳಿಕಾ.. ಶಿಷ್ಟರನ್ನು ಕಾಯುತಾ.. ಎಂಬ ಹಾಡು ರೋಮಾಂಚನ ಹುಟ್ಟಿಸುವಂತಿದೆ. ನಿರ್ದೇಶಕ ಶ್ರೀಜೈ ಅವರೇ ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ರಮೇಶ್ ಅರವಿಂದ್-ರಾಧಿಕಾ ಕುಮಾರಸ್ವಾಮಿ ಇದೇ ಮೊದಲ ಬಾರಿ ಬೆಳ್ಳಿತೆರೆಯ ಮೇಲೆ ಒಂದಾಗಿದ್ದಾರೆ.

  • ರಾಧಿಕಾ ಕುಮಾರಸ್ವಾಮಿ ಪಾತ್ರಕ್ಕೆ ಮಂಗಳಮುಖಿ ವಾಯ್ಸ್

    radhika kumaraswamya gets a voicoover from transgender

    ಭೈರಾದೇವಿ. ರಾಧಿಕಾ ಕುಮಾರಸ್ವಾಮಿ ಅಘೋರಿಯಾಗಿ ನಟಿಸುತ್ತಿರುವ ಸಿನಿಮಾ. ಮೇಕಪ್ ಮೂಲಕ, ರಾಧಿಕಾ ಅವರ ಅಗಲವಾದ ಕಣ್ಣುಗಳ ಮೂಲಕ ಅಘೋರಿಯನ್ನಾಗಿ ತೋರಿಸುವುದು ಸುಲಭ. ಅದ್ಭುತ ನಟಿಯಾಗಿರುವ ರಾಧಿಕಾಗೆ ಅದು ಕಷ್ಟವೇನಲ್ಲ. ಆದರೆ.. ಧ್ವನಿ. 

    ಹೌದು, ಅಘೋರಿ ಪಾತ್ರಕ್ಕೆ ಧ್ವನಿ ಕರ್ಕಶವಾಗಿರಬೇಕು. ಗಟ್ಟಿಯಾಗಿರಬೇಕು. ಹೈ ಪಿಚ್‍ನಲ್ಲಿರಬೇಕು. ಹೀಗಾಗಿಯೇ ಅಘೋರಿ ಪಾತ್ರಕ್ಕೆ ನಿರ್ದೇಶಕ ಶ್ರೀ ಜೈ ಹೊಸ ಪ್ರಯತ್ನ ಮಾಡಿದ್ದಾರೆ. ಮಂಗಳಮುಖಿಯರನ್ನು ಕರೆಸಿ ಟೆಸ್ಟ್ ಮಾಡಿಸಿದ್ದಾರೆ. ಅವರಲ್ಲಿ ಭೂಮಿಕಾ ಎಂಬ ಮಂಗಳಮುಖಿಯ ಧ್ವನಿ ರಾಧಿಕಾ ಅವರ ಪಾತ್ರಕ್ಕೆ ಮ್ಯಾಚ್ ಆಗಿದೆ. ಅವರಿಗೇ ತರಬೇತಿ ನೀಡಿ ಡಬ್ಬಿಂಗ್ ಮಾಡಲು ನಿರ್ಧರಿಸಿದೆ ಭೈರಾದೇವಿ ಚಿತ್ರತಂಡ.

  • ರುದ್ರಭೂಮಿಯಲ್ಲಿ ಜಾರಿಬಿದ್ದ ರಾಧಿಕಾ ಕುಮಾರಸ್ವಾಮಿ

    radhika kumaraswamy injured while shooting for bhairadevi

    ಭೈರಾದೇವಿ ಚಿತ್ರದಲ್ಲಿ ಅಘೋರಿಯ ಪಾತ್ರದಲ್ಲಿ ನಟಿಸುತ್ತಿರುವ  ರಾಧಿಕಾ ಕುಮಾರಸ್ವಾಮಿ, ಬಿದ್ದು ಬೆನ್ನುಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಸ್ಪೈನಲ್ ಕಾರ್ಡ್ ಡ್ಯಾಮೇಜ್ ಆಗಿದ್ದು, ಒಂದು ತಿಂಗಳು ಬೆಡ್ ರೆಸ್ಟ್ ಹೇಳಿದ್ದಾರಂತೆ ವೈದ್ಯರು. ಹೀಗಾಗಿ ಭೈರಾದೇವಿ ಚಿತ್ರದ ಶೂಟಿಂಗ್ ಕೂಡಾ ಒಂದು ತಿಂಗಳು ಪೋಸ್ಟ್‍ಪೋನ್ ಆಗಿದೆ.

    ಬೆಂಗಳೂರಿನ ಶಾಂತಿನಗರದ ಸ್ಮಶಾನದಲ್ಲಿ ಸಮಾಧಿಯ ಮೇಲೆ ಕುಳಿತು, ಆತ್ಮಗಳನ್ನು ಆವಾಹನೆ ಮಾಡಿಕೊಳ್ಳುವ ದೃಶ್ಯದ ಶೂಟಿಂಗ್ ವೇಳೆಯಲ್ಲಿಯೇ ಈ ಅವಘಡ ಸಂಭವಿಸಿದೆ. 

  • ಸ್ಮಶಾನದಲ್ಲಿ ಮತ್ತೆ ರಾಧಿಕಾ ಕುಮಾರಸ್ವಾಮಿ ಡ್ಯಾನ್ಸ್

    radhika kumaraswamy back to shooting post injury

    ಭೈರಾದೇವಿ ಚಿತ್ರದ ಚಿತ್ರೀಕರಣ ವೇಳೆ ಸ್ಮಶಾನದಲ್ಲಿ ಬಿದ್ದು ಒಂದು ತಿಂಗಳು ವಿಶ್ರಾಂತಿಯಲ್ಲಿದ್ದ ರಾಧಿಕಾ ಕುಮಾರಸ್ವಾಮಿ ರಿಕವರ್ ಆಗಿದ್ದಾರೆ. ಬಿದ್ದು ಏಟು ಮಾಡಿಕೊಂಡಿದ್ದ ಜಾಗದಲ್ಲಿಯೇ, ಅದೇ ಸ್ಮಶಾನದಲ್ಲಿ ಮತ್ತೊಮ್ಮೆ ಅಘೋರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. 

    ಶ್ರೀಜಯ್ ನಿರ್ದೇಶನದ ಚಿತ್ರದಲ್ಲಿ ರಾಧಿಕಾ, 400ಕ್ಕೂ ಹೆಚ್ಚು ಸಹಕಲಾವಿದರು, 150ಕ್ಕೂ ಹೆಚ್ಚು ನೃತ್ಯಗಾರರೊಂದಿಗೆ ಕಾಳಿಯಂತೆ ಹೆಜ್ಜೆ ಹಾಕಿದ್ದಾರೆ. ಅಂದಹಾಗೆ, ಈ ಚಿತ್ರಕ್ಕೆ ನಿರ್ಮಾಪಕಿಯೂ ಅವರೇ.

  • ಸ್ಮಶಾನದಲ್ಲಿ ರಾಧಿಕಾ ಕುಮಾರಸ್ವಾಮಿ

    radhika kumaraswamy in burial ground

    ರಾಧಿಕಾ ಕುಮಾರಸ್ವಾಮಿ ಬೆಂಗಳೂರಿನ ಹೊರವಲಯದಲ್ಲಿರೋ ಸ್ಮಶಾನವೊಂದರಲ್ಲಿ ಬೀಡುಬಿಟ್ಟಿದ್ದಾರೆ. ಅವರ ಊಟವೂ ಅಲ್ಲೆ. ಸ್ಮಶಾನದಲ್ಲಿಯೇ ಹಣ್ಣು ತಿಂದುಕೊಂಡು, ಬರಿಗಾಲಿನಲ್ಲಿ ಓಡಾಡಿಕೊಂಡು, ಭಂಗಿ ಸೇದುತ್ತಿದ್ದಾರೆ ರಾಧಿಕಾ ಕುಮಾರಸ್ವಾಮಿ. ನಿದ್ರೆಯೂ ಅಲ್ಲೇ..

    ಇದೆಲ್ಲವನ್ನೂ ಅವರು ಮಾಡ್ತಿರೋದು ಭೈರಾದೇವಿ ಚಿತ್ರಕ್ಕಾಗಿ. ಶ್ರೀ ಜೈ ನಿರ್ದೇಶನದ ಭೈರಾದೇವಿ ಚಿತ್ರದಲ್ಲಿ ರಾಧಿಕಾ ಅಘೋರಿಯಾಗಿ ನಟಿಸುತ್ತಿದ್ದಾರೆ. ಹೆಣ ಸುಡುವ ಜಾಗದಲ್ಲಿನ ಚಿತ್ರೀಕರಣ ನಿಜಕ್ಕೂ ವಿಭಿನ್ನ ಅನುಭವ. ಥ್ರಿಲ್ ಕೊಡುತ್ತಿದೆ ಎಂದು ಹೇಳಿಕೊಂಡಿದ್ದಾರೆ ರಾಧಿಕಾ.