` darshan fan, - chitraloka.com | Kannada Movie News, Reviews | Image

darshan fan,

  • ಅಭಿಮಾನಿಗಳಿಗೆ ಮತ್ತೊಮ್ಮೆ ದಾಸನಾದ ದರ್ಶನ್

    darshan autographs on fans auto

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೊಮ್ಮೆ ದಾಸನಾಗಿದ್ದಾರೆ. ಒನ್ಸ್ ಎಗೇಯ್ನ್.. ಅಭಿಮಾನಿಗಳ ಎದುರು. ಇತ್ತೀಚೆಗೆ ದರ್ಶನ್ ಅವರ ಆಟೋ ಡ್ರೈವರ್ ಅಭಿಮಾನಿಗಳು ಸೀದಾ ಅವರ ಮನೆಗೇ ಹೋಗುತ್ತಿದ್ದಾರೆ. ಮನೆಯಲ್ಲಿದ್ದರೆ ಅಭಿಮಾನಿಗಳನ್ನು ಸದಾ ಭೇಟಿ ಮಾಡುವ ದರ್ಶನ್‍ಗೆ ಅಭಿಮಾನಿಗಳದ್ದು ಒಂದೇ ಡಿಮ್ಯಾಂಡ್. ಆಟೊಗ್ರಾಫ್ ಪ್ಲೀಸ್.. ಅದೂ ಆಟೋ ಮೇಲೆ.

    ಇದು ದರ್ಶನ್ ಅಭಿಮಾನಿಗಳ ಕ್ರೇಜ್. ಇಷ್ಟು ದಿನ ಆಟೋಗಳ ಹಿಂದೆ, ದರ್ಶನ್ ಚಿತ್ರದ ಹೆಸರು, ಬಿರುದು, ಫೋಟೋ, ಚಿತ್ರ ಹಾಕಿಕೊಂಡು ಖುಷಿ ಪಡುತ್ತಿದ್ದ ಅಭಿಮಾನಿಗಳು, ಈಗ ದರ್ಶನ್ ಅವರಿಂದಲೇ ಆಟೋಗ್ರಾಫ್ ಹಾಕಿಸಿಕೊಳ್ಳುವ ಐಡಿಯಾ ಕಂಡುಕೊಂಡಿದ್ದಾರೆ.

  • ಅಭಿಮಾನಿಯ ಕೊನೆಯ ಆಸೆ ಈಡೇರಿಸಿದ ದರ್ಶನ್

    darshan fulfills his last wish

    ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಮಾನಿಗಳ ಪ್ರೀತಿಯ ದಾಸ. ಇತ್ತೀಚೆಗೆ ತಾನೆ ಚಿತ್ರಲೋಕದಲ್ಲಿ ದರ್ಶನ್ ಅಭಿಮಾನಿಯೊಬ್ಬನ ಕೊನೆಯ ಆಸೆ ಸ್ಟೋರಿ ನೋಡಿದ್ದಿರಿ. ಶಿವಮೊಗ್ಗದ ರೇವಂತ್ ಎಂಬ ದರ್ಶನ್ ಅಭಿಮಾನಿ, ಮೂಳೆ ಕ್ಯಾನ್ಸರ್‍ನಿಂದ ಬಳಲುತ್ತಿದ್ದು, ಸಾವಿನ ಸನಿಹದಲ್ಲಿದ್ದಾರೆ. ಆದರೆ, ಕೊನೆಯದಾಗಿ ದರ್ಶನ್ ಅವರನ್ನೊಮ್ಮೆ ನೋಡಬೇಕು ಅನ್ನೋದು ಅವರ ಆಸೆಯಾಗಿತ್ತು. ಅಭಿಮಾನಿಯ ಅಂತಿಮ ಆಸೆಯನ್ನು ದರ್ಶನ್ ಈಡೇರಿಸಿದ್ದಾರೆ.

    ಆದರೆ, ವೈಯಕ್ತಿಕವಾಗಿ ಶಿವಮೊಗ್ಗಕ್ಕೆ ಹೋಗಲು ಸಾಧ್ಯವಾಗಿಲ್ಲ. ವಿಡಿಯೋ ಕಾಲ್ ಮೂಲಕ ಅಭಿಮಾನಿಯ ಜೊತೆ ಮಾತನಾಡಿದ ದರ್ಶನ್, ವೈದ್ಯರು ಹೇಳುವ ಸೂಚನೆಗಳನ್ನು ಪಾಲಿಸುವಂತೆ ಹೇಳಿದ್ದಾರೆ. ರೇವಂತ್ ತಂದೆ, ತಾಯಿಗೂ ಧೈರ್ಯ ಹೇಳಿದ್ದಾರೆ. ಶೀಘ್ರದಲ್ಲೇ ಶಿವಮೊಗ್ಗಕ್ಕೆ ಬಂದು ಭೇಟಿ ಮಾಡುತ್ತೇನೆ ಎಂದು ಧೈರ್ಯ ತುಂಬಿದ್ದಾರೆ ದರ್ಶನ್. 

     

     

  • ದರ್ಶನ್ ಅಭಿಮಾನಿ ಕೊನೆಯುಸಿರು

    darshan's fan special kid apoorva no more

    ಅಪೂರ್ವ. ಮಂಡ್ಯದ ಬೆಸಗರಹಳ್ಳಿ ಸಮೀಪದಲ್ಲಿರೋ ಮದ್ದೂರು ತಾಲೂಕಿನ ಪಣ್ಣೆದೊಡ್ಡಿ ಗ್ರಾಮದ ಪುಟ್ಟ ಬಾಲಕಿ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅಪೂರ್ವ ವೈದ್ಯಲೋಕಕ್ಕೂ ಸವಾಲಾಗಿದ್ದ ಬಾಲಕಿ. ಈ 10 ವರ್ಷದ ಹುಡುಗಿ ದರ್ಶನ್ ಅಭಿಮಾನಿ.

    ಇತ್ತೀಚೆಗೆ.. ಅಂದರೆ ಡಿಸೆಂಬರ್‍ನಲ್ಲಿ ಈಕೆಯನ್ನು ಒಡೆಯ ಚಿತ್ರದ ಸೆಟ್ಟಿಗೆ ಕರೆಸಿಕೊಂಡಿದ್ದರು ದರ್ಶನ್. ದರ್ಶನ್‍ರನ್ನು ಒಮ್ಮೆಯಾದರೂ ನೋಡಬೇಕು ಎಂದು ಬಯಸಿದ್ದ ಬಾಲಕಿಯ ಆಸೆ ನೆರವೇರಿಸಿದ್ದರು. ಈಗ.. ಆ ಬಾಲಕಿ ಅಪೂರ್ವ ಇಹಲೋಕ ತ್ಯಜಿಸಿದ್ದಾಳೆ. ಡಿಸೆಂಬರ್‍ನಲ್ಲಿ ದರ್ಶನ್ ಅವರ ಜೊತೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಅಪೂರ್ವ ಇನ್ನಿಲ್ಲ.

  • ದರ್ಶನ್ ಅಭಿಮಾನಿಯ ಕೊನೆಯ ಆಸೆ

    darshan fan revanth in death bed

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಕೊರತೆಯೇನೂ ಇಲ್ಲ. ಅಭಿಮಾನಿಗಳನ್ನೇ ಯಜಮಾನರಂತೆ ಗೌರವಿಸುವ ದರ್ಶನ್ ಅಭಿಮಾನಿಯೊಬ್ಬ, ಈಗ ಸಾವಿನ ಜೊತೆ ಸೆಣಸುತ್ತಿದ್ದಾರೆ. ಶಿವಮೊಗ್ಗದ ರೇವಂತ್ ಎಂಬ ಈ ಯುವಕನಿಗೆ ಕ್ಯಾನ್ಸರ್. ಇನ್ನು ಬದುಕುವ ಸಾಧ್ಯತೆ ಇಲ್ಲ ಎಂದು ವೈದ್ಯರೂ ಕೈಚೆಲ್ಲಿಬಿಟ್ಟಿದ್ದಾರೆ.

    ಪ್ರತಿ ವರ್ಷ ದರ್ಶನ್ ಹುಟ್ಟುಹಬ್ಬಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ಬಂದು ಶುಭ ಹಾರೈಸಿ ಸಂಭ್ರಮಿಸುತ್ತಿದ್ದ ರೇವಂತ್, ಈಗ ಹಾಸಿಗೆ ಬಿಟ್ಟೇಳಲು ಆಗದ ಸ್ಥಿತಿಯಲ್ಲಿದ್ದಾರೆ. ದರ್ಶನ್ ಹುಟ್ಟುಹಬ್ಬ ಹತ್ತಿರ ಬರುತ್ತಿರುವಂತೆಯೇ ಈ ಬಾರಿ ಹುಟ್ಟುಹಬ್ಬಕ್ಕೆ ತಾನು ಹೋಗೋಕೆ ಸಾಧ್ಯವಾಗುತ್ತಿಲ್ಲ ಎಂಬ ನೋವು ಕಾಡೋಕೆ ಶುರುವಾಗಿದೆ.

    ಸಾಯುವ ಮುನ್ನ ಒಮ್ಮೆ ದರ್ಶನ್ ಅವರನ್ನು ನೋಡಬೇಕು ಅನ್ನೋದು ಈ ಅಭಿಮಾನಿಯ ಆಸೆ. ಅಭಿಮಾನಿಗಳ ದಾಸ ದರ್ಶನ್, ಈ ಅಭಿಮಾನಿಯ ಬಯಕೆ ಈಡೇರಿಸ್ತಾರಾ..?

  • ದಾಸನಿಗೆ ಮಂಗಳೂರು ಅಭಿಮಾನಿಗಳ ಜಗ್ಗುದಾದಾ ಗಿಫ್ಟ್

    fans gives wonderfull gift to darshan

    ಚಾಲೆಂಜಿಂಗ್ ಸ್ಟಾರ್ ದರ್ಶನ್, ಅತೀ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ಸ್ಟಾರ್. ಇತ್ತೀಚೆಗೆ ಮಂಗಳೂರಿನಲ್ಲಿ ಅಭಿಮಾನಿಗಳಿಗಾಗಿಯೇ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಹೋಗಿದ್ದರು ದರ್ಶನ್. ಈ ವೇಳೆ ಅಭಿಮಾನಿಗಳು ಕೊಟ್ಟ ಕಾಣಿಕೆ, ದರ್ಶನ್ ಅವರನ್ನ ಮೂಕವಿಸ್ಮಿತರನ್ನಾಗಿಸಿದೆ.

    ಯಕ್ಷ ಧ್ರುವ ಪಟ್ಲ ಸಂಭ್ರಮದ ಸಮಾರಂಭಕ್ಕೆ ದರ್ಶನ್ ಅತಿಥಿಯಾಗಿ ಹೋಗಿದ್ದರು.

    ಈ ವೇಳೆ ಅಭಿಮಾನಿಗಳು ದರ್ಶನ್‍ಗೆ ಜಗ್ಗುದಾದಾನನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಏನಿಲ್ಲಾರೀ.. ಜಗ್ಗುದಾದ ಚಿತ್ರದ ಸ್ಟೈಲಿಷ್ ಲುಕ್‍ನ ಪೇಂಟಿಂಗ್‍ವೊಂದನ್ನು ದರ್ಶನ್‍ಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ.

  • ಬಾಯ್ಕಾಟ್ ಚೀನಾ ಯುದ್ಧ : ಎಂದಿನಂತೆ.. ದರ್ಶನ್ ಫ್ಯಾನ್ಸ್ ಒಂದು ಹೆಜ್ಜೆ ಮುಂದೆ..

    darshan's fan boycott china products

    ದೇಶಾದ್ಯಂತ ಬಾಯ್ಕಾಟ್ ಚೀನಾ ಅಭಿಯಾನ ಶುರುವಾಗಿದೆ. ಮೇಡ್ ಇನ್ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಕೂಗು ಬಲವಾಗಿ ಕೇಳಿ ಬರ್ತಾ ಇದೆ. ಚೀನಾ ಯೋಧರ ವಿಕೃತಿಗೆ ನಮ್ಮ 20 ಸೈನಿಕರು ಬಲಿಯಾಗಿದ್ದು ಜನರನ್ನೂ ರೊಚ್ಚಿಗೆಬ್ಬಿಸಿದೆ. ಚೀನಾಗೆ ನಾವೇ ದುಡ್ಡು ಕೊಟ್ಟು, ಲಾಭ ಮಾಡಿಕೊಟ್ಟು.. ನಮ್ಮವರ ಹತ್ಯೆಗೆ ಕಾರಣರಾದೆವಲ್ಲ ಎನ್ನುವ ಪಾಪಪ್ರಜ್ಞೆಯೂ ಕಾಡುತ್ತಿದೆ. ಹೀಗಾಗಿಯೇ ಇದನ್ನು ಭಾವನಾತ್ಮಕವಾಗಿ ಸ್ವೀಕರಿಸಿರುವ ಕೋಟ್ಯಂತರ ಜನ ವಿವಿಧ ರೀತಿಯಲ್ಲಿ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ಎಂದಿನಂತೆ.. ದರ್ಶನ್ ಫ್ಯಾನ್ಸ್ ಒಂದು ಹೆಜ್ಜೆ ಮುಂದೆ.

    ಡಿ ಬಾಸ್ ಅಭಿಮಾನಿಗಳು ಟಿಕ್ ಟಾಕ್ ಆ್ಯಪ್‍ನ್ನು ಡಿಲೀಟ್ ಮಾಡುತ್ತಿದ್ದಾರೆ. ಅದರಿಂದ ತಮ್ಮ ದೊಡ್ಡ ಮಟ್ಟದ ಫಾಲೋವರ್ಸ್ ಕಳೆದುಕೊಳ್ಳುತ್ತಿದ್ದೇವೆ ಎನ್ನುವುದನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಅಷ್ಟೇ ಅಲ್ಲ.. ತಮ್ಮ ಸರ್ಕಲ್‍ನಲ್ಲಿ ದೊಡ್ಡ ಮಟ್ಟದಲ್ಲಿಯೇ ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂದು ಅಭಿಯಾನ ಮಾಡುತ್ತಿದ್ದಾರೆ.

    ಚೀನಾ ವಸ್ತುಗಳು, ಪ್ರಾಡಕ್ಟ್‍ಗಳು, ಆ್ಯಪ್‍ಗಳಿಗೆ ಪರ್ಯಾಯವಾಗಿ ಮೇಡ್ ಇನ್ ಇಂಡಿಯಾ ಬಳಸುವುದಕ್ಕೆ ಜನರನ್ನು ಪ್ರೋತ್ಸಾಹಿಸುತ್ತಿದ್ದಾರೆ. 

  • ಮರಳಿ ಬಾರದ ಲೋಕಕ್ಕೆ ದರ್ಶನ್ ಅಭಿಮಾನಿ 

    darshan fan revanth no more

    ಮೂಳೆ ಕ್ಯಾನ್ಸರ್‍ನಿಂದ ಬಳಲುತ್ತಿದ್ದ, ಸಾವಿನ ಹೊಸ್ತಿಲಲ್ಲಿದ್ದುಕೊಂಡು ದರ್ಶನ್‍ರನ್ನು ನೋಡಬೇಕು, ಮಾತನಾಡಬೇಕು ಎಂದು ಹಂಬಲಿಸುತ್ತಿದ್ದ ದರ್ಶನ್ ಅವರ ಅಭಿಮಾನಿ ರೇವಂತ್ ಚಿರನಿದ್ರೆಗೆ ಜಾರಿದ್ದಾರೆ. ಶಿವಮೊಗ್ಗದ ರೇವಂತ್, ಸಾಯುವ ಮುನ್ನ ಒಮ್ಮೆ ದರ್ಶನ್‍ರನ್ನು ನೋಡಬೇಕು ಎಂದು ಬಯಸಿದ್ದರು. ಶಿವಮೊಗ್ಗಕ್ಕೆ ಬರಲು ಸಾಧ್ಯವಾಗುತ್ತಿಲ್ಲ, ತಪ್ಪದೇ ಬರುತ್ತೇನೆ ಎಂದು ಹೇಳಿದ್ದ ದರ್ಶನ್, ಅಭಿಮಾನಿಯ ಜೊತೆ ವಿಡಿಯೋ ಕಾಲ್‍ನಲ್ಲಿ ಮಾತನಾಡಿ ಸಾಂತ್ವನ ಹೇಳಿದ್ದರು. 

    ಸಾರಿ ಅಣ್ಣಾ, ನಿಮಗೆ ತೊಂದರೆ ಕೊಟ್ಟೆ ಎಂದು ಹೇಳಿದ್ದ ರೇವಂತ್‍ಗೆ ಏನೂ ಆಗಿಲ್ಲ, ಸರಿಯಾಗಿ ಚಿಕಿತ್ಸೆ ತೆಗೆದುಕೊ ಎಂದು ಸಾಂತ್ವನ ಹೇಳಿದ್ದರು ದರ್ಶನ್. ರೇವಂತ್ ತಂದೆ, ತಾಯಿಗೂ ಸಮಾಧಾನ ಪಡಿಸಿದ್ದರು. ಈಗ ಫೆಬ್ರವರಿ 10ರಂದು ರೇವಂತ್ ನಿಧನರಾಗಿದ್ದಾರೆ. ತಮ್ಮ ಆಸೆಯಂತೆ ದರ್ಶನ್ ಜೊತೆ ಮಾತನಾಡಿದ ನಂತರ ರೇವಂತ್ ಚಿರನಿದ್ರೆಗೆ ಜಾರಿದ್ದಾರೆ.

    Related Articles :-

    ಅಭಿಮಾನಿಯ ಕೊನೆಯ ಆಸೆ ಈಡೇರಿಸಿದ ದರ್ಶನ್

    ದರ್ಶನ್ ಅಭಿಮಾನಿಯ ಕೊನೆಯ ಆಸೆ

  • ಮೃತಪಟ್ಟ ಅಭಿಮಾನಿ ಕುಟುಂಬಕ್ಕೆ ಮನೆ ಮಗನಾದ ದರ್ಶನ್

    darshan stands by the family member of hi deceased fan

    ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಮಾನಿಗಳ ಪಾಲಿನ ಪ್ರೀತಿಯ ದಾಸ. ಅಭಿಮಾನಿಗಳಿಗಾಗಿ ಸದಾ ಮಿಡಿಯುವ ದರ್ಶನ್, ಮತ್ತೊಮ್ಮೆ ಅದನ್ನು ಸಾಬೀತು ಮಾಡಿದ್ದಾರೆ. ಇತ್ತೀಚಿಗಷ್ಟೇ ಮಗ ವಿನೀಶ್ ಹುಟ್ಟುಹಬ್ಬದ ಹಿಂದಿನ ದರ್ಶನ್ ಒಂದು ಪೋಸ್ಟ್ ಮಾಡಿದ್ದರು. ನೆನಪಿರಬೇಕಲ್ಲ. ವಾಹನ ಚಲಾಯಿಸುವಾಗ ಹುಷಾರು ಎಂದು ಮನವಿ ಮಾಡಿದ್ದರು. ಅದಕ್ಕೆ ಕಾರಣವೂ ಇತ್ತು. ಕಳೆದ ವರ್ಷ ವಿನೀಶ್ ಹುಟ್ಟುಹಬ್ಬಕ್ಕೆಂದು ಬಂದಿದ್ದ ರಾಕೇಶ್ ಎಂಬ ಅಭಿಮಾನಿ, ವಾಪಸ್ ಹೋಗುವಾಗ ಅಪಘಾತದಲ್ಲಿ ಮೃತಪಟ್ಟಿದ್ದರು.

    ಈ ಬಾರಿಯ ಹುಟ್ಟುಹಬ್ಬಕ್ಕೆ ರಾಕೇಶ್ ಕುಟುಂಬದವರನ್ನು ಮನೆಗೆ ಕರೆಸಿಕೊಂಡಿದ್ದ ದರ್ಶನ್, ಅವರ ಮನೆ ಮಗನಾಗಿದ್ದಾರೆ.  ರಾಕೇಶ್ ಅಪ್ಪ ನರಸಿಂಹಯ್ಯ, ತಾಯಿ ಗಂಗಮ್ಮರನ್ನು ಕರೆಸಿಕೊಂಡ ದರ್ಶನ್,

    ರಾಕೇಶ್ ಅವರ ಮೂವರು ಸೋದರಿಯ ಮದುವೆಯ ದೊಡ್ಡ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ರಾಕೇಶ್ ಅವರಿಗೆ ಕೀರ್ತನಾ, ನಾಗವೇಣಿ ಎಂಬ ಸೋದರಿಯರಿದ್ದು, ಅವರ ಮದುವೆ ಖರ್ಚಿಗೆ ಏನೇ ಖರ್ಚಿದ್ದರೂ ನನ್ನನ್ನು ಬಂದು ಕೇಳಿ, ನಾನು ಸಹಾಯ ಮಾಡ್ತೀನಿ ಅಂತ ದರ್ಶನ್ ಭರವಸೆ ನೀಡಿದ್ದಾರೆ. ರಾಕೇಶ್ ಮೃತಪಟ್ಟಾಗ ಅವರ ಕುಟುಂಬಕ್ಕೆ 2 ಲಕ್ಷ ರೂ. ಸಹಾಯ ಮಾಡಿದ್ದರಂತೆ.

  • ಯಾರ್ ಏನೇ ಹೇಳಲಿ.. ದರ್ಶನ್ನೇ ಬಾಸ್..!

    darshan fans decorate his name with flowers

    ಸ್ಯಾಂಡಲ್‍ವುಡ್‍ನಲ್ಲಿ ಇತ್ತೀಚೆಗೆ ತುಂಬಾ ಚರ್ಚೆಯಾದ ವಿಚಾರ ಸ್ಯಾಂಡಲ್‍ವುಡ್‍ನ ಬಾಸ್ ಯಾರು ಅನ್ನೋದು. ಅದು ನಡೆದದ್ದು ಅಭಿಮಾನಿಗಳ ಮಧ್ಯೆ. ಶಿವರಾಜ್‍ಕುಮಾರ್ ಸ್ವತಃ ಮುಂದೆ ಬಂದು ಅವರವರ ಅಭಿಮಾನಿಗಳಿಗೆ ಅವರವರೇ ಬಾಸ್. ಯಾರನ್ನು ಬೇಕಾದರೂ ಬಾಸ್ ಎನ್ನಿ. ಕನ್ನಡ ಸಿನಿಮಾ ನೋಡಿ. ಅತಿರೇಕ ಬೇಡ ಎಂದು ಮನವಿ ಮಾಡಿಕೊಂಡರು. ಈಗ ಅದಕ್ಕೆ ತಕ್ಕಂತೆ ಯಶ್ ಬಾಸ್ ನಂಬರ್‍ನ್ನು ಹರಾಜಿನಲ್ಲಿ ಖರೀದಿಸಿದ್ದು, ದರ್ಶನ್, 8055 ನಂಬರ್ ಇದ್ದ ಬೈಕ್‍ನ್ನು ಸವಾರಿ ಮಾಡಿದ್ದೂ ಆಯ್ತು. 

    ಈಗ ದರ್ಶನ್ ಅಭಿಮಾನಿಗಳು ಇನ್ನೂ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ. ನೇರವಾಗಿ ದರ್ಶನ್ ಮನೆಗೇ ಹೋಗಿ, ಹೂವುಗಳಲ್ಲಿ ದರ್ಶನ್ ಸ್ಯಾಂಡಲ್‍ವುಡ್ ಬಾಸ್ ಎಂದು ರಸ್ತೆಯ ಮೇಲೆ ಅಲಂಕರಿಸಿ ಬಂದಿದ್ದಾರೆ.

    ಒನ್ ಅಂಡ್ ಓನ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸ್ಯಾಂಡಲ್‍ವುಡ್ ಬಾಸ್ ಅನ್ನೋದು ಅಭಿಮಾನಿಗಳು ಅರಳಿಸಿದ ಹೂವುಗಳು ಹೇಳುತ್ತಿರುವ ಕಥೆ. ಹೂವು ಒಣಗಬಹುದು, ಅಭಿಮಾನಿಗಳ ಪ್ರೀತಿಯಲ್ಲ. ಹೌದು, ಅವರವರ ಅಭಿಮಾನಿಗಳಿಗೆ ಅವರವರೇ ಬಾಸ್‍ಗಳು.

  • ರ್ಶನ್‍ಗೇ ದುರ್ಯೋಧನನ ಉಡುಗೊರೆ

    darshan gets special gift from his fan

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ದುರ್ಯೋಧನನಾಗಿರುವುದು ಹೊಸ ವಿಷಯವೇನೂ ಅಲ್ಲ. ದರ್ಶನ್ ಅವರ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರದಲ್ಲಿ ದರ್ಶನ್ ಅವರ ದುರ್ಯೋಧನನ ಲುಕ್ಕು ಮತ್ತು ಅವರ ಆ ನಗು ಅಭಿಮಾನಿಗಳನ್ನು ಇನ್ನಷ್ಟು ಮತ್ತಷ್ಟು ಹುಚ್ಚೆಬ್ಬಿಸಿರುವುದು ನಿಜ. ಈಗ ಆ ದುರ್ಯೋಧನನಿಗೇ ದುರ್ಯೋಧನನ ಉಡುಗೊರೆ ಕೊಟ್ಟಿದ್ದಾರೆ ದರ್ಶನ್‍ರ ಒಬ್ಬ ಅಭಿಮಾನಿ.

    ಕಿರಣ್ ಎಂಬ ಈ ಯುವಕ ದರ್ಶನ್‍ರ ಅಭಿಮಾನಿ. ಇವರ ಮದುವೆಗೆ ದರ್ಶನ್ ಅವರಿಗೆ ಆಹ್ವಾನ ಪತ್ರಿಕೆ ಕೊಡಲು ಹೋಗುವಾಗ, ಏನಾದರೂ ಗಿಫ್ಟ್ ತೆಗೆದುಕೊಂಡು ಎಂದುಕೊಂಡರಂತೆ. ಆಗ ದರ್ಶನ್ ಅವರು ದುರ್ಯೋಧನನ ಗೆಟಪ್ಪಿನಲ್ಲಿರುವ ಈ ಫೋಟೋವನ್ನು ಡಿಸೈನ್ ಮಾಡಿಸಿ, ದರ್ಶನ್‍ಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ ದರ್ಶನ್.

    ಪೇಂಯ್ಟಿಂಗ್‍ನಲ್ಲಿ ಅರಳಿರುವ ಈ ಫೋಟೋ ದರ್ಶನ್ ಅವರಿಗೂ ಇಷ್ಟವಾಗಿದೆ. 

  • ಹಸಿದವರಿಗೆ ಅನ್ನ ನೀಡಿದ ದರ್ಶನ್ ಫ್ಯಾನ್ಸ್

    darshan's fans help people in distres

    ಕೊರೋನಾ ಎಫೆಕ್ಟ್‍ನಿಂದಾಗಿ ಯಾರ್ಯಾರು ಎಲ್ಲೆಲ್ಲಿದ್ದರೋ.. ಅಲ್ಲಲ್ಲಿಯೇ ಲಾಕ್ ಆಗಿಬಿಟ್ಟಿದ್ದಾರೆ. ದುಡ್ಡಿದ್ದವರು ಬದುಕಿಕೊಳ್ತಾರೆ, ದುಡ್ಡಿಲ್ಲದೆ ಕೂಲಿನಾಲಿ ಮಾಡಿಕೊಂಡಿದ್ದವರ ಕಥೆ ಏನು..? ಮೈಸೂರಿನಲ್ಲಿ ಅಂತಹ ಕಷ್ಟದಲ್ಲಿದ್ದ ಕೆಲವು ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ್ದಾರೆ ದರ್ಶನ್ ಫ್ಯಾನ್ಸ್.

    ಮೈಸೂರಿನ ಬೀದಿಗಳಲ್ಲಿ ಪರದಾಡುತ್ತಿದ್ದ ಬೇರೆ ಬೇರೆ ಕಡೆಯಿಂದ ಬಂದಿದ್ದ ಕೂಲಿಗಳ ಕುಟುಂಬಕ್ಕೆ ಟೊಮ್ಯಾಟೋ ಬಾತ್, ಮೊಸರನ್ನ ತಯಾರಿಸಿ ಹಂಚಿದ್ದಾರೆ. ಕುಡಿಯುವ ನೀರಿನ ಜೊತೆಗೆ. ಅಷ್ಟೇ ಅಲ್ಲ, ಅಗತ್ಯವಿದ್ದರು ತಮ್ಮ ನಂಬರ್‍ಗೆ ಕರೆ ಮಾಡುವಂತೆ ನಂಬರ್ ಕೊಟ್ಟು, ಸಹಾಯಕ್ಕಾಗಿ ಕರೆ ಮಾಡಿದವರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ.