` pm narendra modi, - chitraloka.com | Kannada Movie News, Reviews | Image

pm narendra modi,

  • India Under Total Lockdown for 21 Days!

    india under total lock down for 2 days

    In an unprecedented move and a first for India, Prime Minister Narendra Modi has announced a total lock down for the entire country for a period of 21 days until April 14 starting from midnight today.

    Addressing the nation, Mr. Narendra Modi has requested the citizens to stay safe inside their homes and not to come on the roads, to fight effectively against the spread of Coronavirus.

    The PM has announced fifteen thousand crores special package to stop the spread of COVID-19. He requested as a member of every family in the nation to stay safe while saying that developed European countries with best health care are finding it face the deadly Coronavirus.

    He goes on to refer to Corona in Hindi as "Koi Road Par Na Nekle" which translates to as no one should come to the roads. He even cites saying 'Jaan Hai To Jahan Hai' which means life is most important than anything.

  • ಕಿರಾತಕ ಹೀರೋಯಿನ್ ಮೇಲೆ ಮೋದಿ ಭಕ್ತರ ಕೆಂಗಣ್ಣು

    ಕಿರಾತಕ ಹೀರೋಯಿನ್ ಮೇಲೆ ಮೋದಿ ಭಕ್ತರ ಕೆಂಗಣ್ಣು

    ಕಿರಾತಕ ಚಿತ್ರದಲ್ಲಿ ನಟಿಸಿದ್ದ ನಟಿ ಓವಿಯಾ ಹೆಲನ್ ಈಗ ಮೋದಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅದಕ್ಕೆಲ್ಲ ಕಾರಣವಾಗಿದ್ದು ಒಂದೇ ಒಂದು ಟ್ವೀಟ್.

    ಇತ್ತೀಚೆಗೆ ಮೋದಿ ತಮಿಳುನಾಡಿಗೆ ಹೋಗಿದ್ದಾಗ, ಗೋಬ್ಯಾಕ್‍ಮೋದಿ ಅನ್ನೋ ಟ್ವಿಟರ್ ಅಭಿಯಾನ ನಡೆದಿತ್ತು. ಆಗ ಈ ಓವಿಯಾ ಕೂಡಾ ಟ್ವೀಟ್ ಮಾಡಿದ್ದರು. ಅದಕ್ಕೆ ಸುಮಾರು 20 ಸಾವಿರ ರೀ-ಟ್ವೀಟು, 60 ಸಾವಿರ ಲೈಕುಗಳೂ ಬಿದ್ದಿದ್ದವು. ಈಗ ಅವರ ವಿರುದ್ಧ ಮೋದಿ ಅಭಿಮಾನಿಗಳು ಕೇಸ್ ಹಾಕಿದ್ದಾರೆ.

    ದೇಶದ ಪ್ರಧಾನಿಯನ್ನು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಿ ಅನ್ನೋದು ಬಿಜೆಪಿ ಕಾರ್ಯಕರ್ತರ ಆಗ್ರಹ.

    ಸದ್ಯಕ್ಕೆ ಓವಿಯಾ ವಿರುದ್ಧ ಐಟಿ ಕಾಯ್ದೆ 69ಎ, 124ಎ, 153ಎ, 294 ಅಡಿ ಕೇಸು ದಾಖಲಿಸಲಾಗಿದೆ. 

  • ಜಗ್ಗೇಶ್ ನಿರ್ಮಾಣದ ವಂದೇ ಮಾತರಂಗೆ ಮೋದಿ ಮೆಚ್ಚುಗೆ

    ಜಗ್ಗೇಶ್ ನಿರ್ಮಾಣದ ವಂದೇ ಮಾತರಂಗೆ ಮೋದಿ ಮೆಚ್ಚುಗೆ

    ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕಾಗಿ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಮಿಲೇ ಸುರ್ ಮೇರಾ ತುಮ್ಹಾರಾ.. ಹಾಡನ್ನು ಸ್ಫೂರ್ತಿಯಾಗಿಟ್ಟುಕೊಡು ವಂದೇಮಾತರಂ ಗೀತೆ ನಿರ್ಮಾಣ ಮಾಡಿದ್ದರು.ಎಸ್.ಎಲ್.ಭೈರಪ್ಪ, ಸಾಲುಮರದ ತಿಮ್ಮಕ್ಕ, ವೆಂಕಟೇಶ್ ಪ್ರಸಾದ್, ಜೋಗತಿ ಮಂಜಮ್ಮ ಅವರಂತಹ ಸಾಧಕರು.. ಕಿಚ್ಚ ಸುದೀಪ್, ಶಿವಣ್ಣ, ರವಿಚಂದ್ರನ್, ಜಗ್ಗೇಶ್, ರಮೇಶ್ ಅರವಿಂದ್, ಧೃವ ಸರ್ಜಾ, ಅರ್ಜುನ್ ಸರ್ಜಾ, ಗಣೇಶ್, ಶ್ರೀಮುರಳಿ, ರಿಷಬ್ ಶೆಟ್ಟಿ, ಧನಂಜಯ, ಅನಂತನಾಗ್.. ಹೀಗೆ ಚಿತ್ರರಂಗದ ಕಲಾವಿದರು.. ಒಟ್ಟಿಗೇ ಸೇರಿ ಹಾಡಿರುವ ಹಾಡು.. ವಂದೇಮಾತರಂ.

    ಈ ಹಾಡನ್ನು ಮುಖ್ಯಮಂತ್ರಿ, ರಾಜ್ಯ ಸಚಿವರು ಸೇರಿದಂತೆ ಹಲವರು ಮೆಚ್ಚಿಕೊಂಡಿದ್ದರು. ರಾಷ್ಟ್ರೀಯ ಗೀತೆಗೆ ಪ್ರವೀಣ್ ಡಿ.ರಾವ್ ಸಂಗೀತ ಸಂಯೋಜಸಿದ್ದರೆ, ಅದ್ಭುತ ಧ್ವನಿ ನೀಡಿದ್ದವರು  ವಿಜಯ್ ಪ್ರಕಾಶ್. ಈ ಹಾಡನ್ನು ನಿರ್ದೇಶನ ಮಾಡಿದ್ದವರು ಖ್ಯಾತ ನಿರ್ದೇಶಕ ಸಂತೋಷ್ ಆನಂದರಾಮ್.

    ಇಂತಾದ್ದೊಂದು ಹಾಡು ಮಾಡೋಣ ಎಂದು ಗೆಳೆಯ ಶ್ರೀನಿಧಿ ಹೇಳಿದರು. ಎಲ್ಲರನ್ನೂ ಫೋನ್ ಮೂಲಕವೇ ಸಂಪರ್ಕಿಸಿದೆ. ಮಿಲ್ ಸುರ್ ಮೇರಾ ತುಮ್ಹಾರಾ ಹಾಡು ನನಗೆ ಚಿಕ್ಕಂದಿನಿಂದಲೂ ಇಷ್ಟ. ಇಂತಹ ಹಾಡನ್ನು ಕನ್ನಡದಲ್ಲಿ ಮಾಡುವ ಆಸೆಯಿತ್ತು. ಅದು ಈಗ ಈಡೇರಿದೆ ಎಂದಿದ್ದ ಜಗ್ಗೇಶ್ ಅವರಿಗೆ ಈ ಹಾಡನ್ನು ಖುದ್ದು ಮೋದಿಯವರಿಗೆ ತೋರಿಸುವ ಅಭಿಲಾಷೆಯಿತ್ತು.

    ಈ ಹಾಡಿನ ಬಗ್ಗೆ ಖುದ್ದು ಮೋದಿ ಟ್ವೀಟ್ ಮಾಡಿದ್ದಾರೆ.ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಕರ್ನಾಟಕದ ಅಪ್ರತಿಮ ಸಾಧಕರ ಅತ್ಯುತ್ತಮ ಪ್ರಯತ್ನ ಎಂದು ಹಾಡನ್ನು ರೀಟ್ವೀಟ್ ಮಾಡಿದ್ದಾರೆ ಮೋದಿ. ಅದನ್ನು ಕನ್ನಡದಲ್ಲಿಯೇ ಟ್ವೀಟ್ ಮಾಡಿರುವುದು ಜಗ್ಗೇಶ್ ಅವರ ಖುಷಿಯನ್ನು ಇನ್ನಷ್ಟು ಹೆಚ್ಚಿಸಿದೆ.

  • ಪ್ರಧಾನಿ ಮೋದಿ ಜೊತೆ ಅಶ್ವಿನಿ ಪುನೀತ್, ಯಶ್, ರಿಷಬ್ ಡಿನ್ನರ್

    ಪ್ರಧಾನಿ ಮೋದಿ ಜೊತೆ ಅಶ್ವಿನಿ ಪುನೀತ್, ಯಶ್, ರಿಷಬ್ ಡಿನ್ನರ್

    ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿದ್ದಾರೆ.  ಇಂದು ನಡೆಯಲಿರುವ ಏರ್ ಶೋ ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬಂದು ರಾಜಭವನದಲ್ಲಿ ವಾಸ್ತವ್ಯ ಹೂಡಿರುವ ಮೋದಿ ರಾಜಭವನದಲ್ಲಿ ವಾಸ್ತವ್ಯ ಹೂಡಿದ್ದರು. ಈ ವೇಳೆ ಕರ್ನಾಟಕದ ಕೆಲವು ಗಣ್ಯರ ಜೊತೆ ಔತಣಕೂಟ ಏರ್ಪಡಿಸಿದ್ದು, ಹಲವರು ಔತಣಕೂಟದಲ್ಲಿ ಭಾಗಿಯಾಗಿದ್ದಾರೆ. ವಿಜಯ್ ಕಿರಗಂದೂರು, ರಿಷಭ್ ಶೆಟ್ಟಿ, ಪ್ರಶಾಂತ್ ನೀಲ್, ಯಶ್, ಅಶ್ವಿನಿ ಪುನೀತ್ ರಾಜಕುಮಾರ್, ಆರ್.ಜೆ.ಶ್ರದ್ಧಾ, ಕ್ರಿಕೆಟಿಗರಾದ ವೆಂಕಟೇಶ್ ಪ್ರಸಾದ್, ಕುಂಬ್ಳೆ ದಂಪತಿ, ಜಾವಗಲ್ ಶ್ರೀನಾಥ್, ಮಯಾಂಕ್ ಅಗರ್ವಾಲ್, ಮನೀಷ್ ಪಾಂಡೆ, ಉದ್ಯಮ ವಲಯದಿಂದ ನಿತಿನ್ ಕಾಮತ್, ತರುಣ್ ಮೆಹ್ತಾ ಸೇರಿ ಇತರರಿಗೆ ಆಹ್ವಾನವಿತ್ತು.

    ಕಾಂತಾರಾ ಸಿನಿಮಾ ನಿರ್ಮಾಣ ಕುರಿತು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದು, 20 ನಿಮಿಷಗಳ ಕಾಲ ರಾಜ್ಯದ ಪ್ರಸಕ್ತ ಬೆಳವಣಿಗೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗಿದೆ. ಸಿನಿಮಾ ಕ್ಷೇತ್ರದ ಬೆಳವಣಿಗೆಯಲ್ಲಿ ಸರ್ಕಾರಗಳ ಸಹಕಾರಕ್ಕೆ ಬದ್ಧ ಎಂದ ಪ್ರಧಾನಿ, ನಿರೀಕ್ಷೆಗಳೇನಾದರೂ ಇದೆಯಾ ಎಂದು ಕೇಳಿದ್ದಾರೆ. ನಂತರ ಕ್ರೀಡಾ ಕ್ಷೇತ್ರದ ಗಣ್ಯರ ಜೊತೆಗೆ ಮೋದಿ ಮಾತುಕತೆ ನಡೆಸಿದ್ದಾರೆ. ಮೋದಿ ಅವರೊಂದಿಗೆ ಭೋಜನಕೂಟದಲ್ಲಿ ಭಾಗಿಯಾದ ಪಿಎಂಓ ಕಚೇರಿ ಅಧಿಕಾರಿಗಳು ನಂತರ ಪ್ರಧಾನಿ ರಾಜಭವನದ ಸಿಬ್ಬಂದಿ ಜೊತೆಗೆ ಪೋಟೋ ತೆಗೆಸಿಕೊಂಡಿದ್ದಾರೆ.

  • ಮೋದಿ ಕೊಟ್ಟರೂ.. ಮಲ್ಟಿಪ್ಲೆಕ್ಸ್‍ನವರು ಕೊಡ್ತಿಲ್ಲ..!

    no change in movie ricket price ever after cut in gst

    ಸಿನಿಮಾ ಟಿಕೆಟ್‍ಗಳ ಮೇಲಿನ ಜಿಎಸ್‍ಟಿ ತೆರಿಗೆಯನ್ನು ಕೇಂದ್ರ ಸರ್ಕಾರ ಇಳಿಕೆ ಮಾಡಿದೆ. 100 ರೂ.ಗಿಂತ ಕಡಿಮೆ ಬೆಲೆಯ ಟಿಕೆಟ್‍ಗಳ ಮೇಲೆ ಶೇ.12 ಹಾಗೂ 100 ರೂ. ಮೇಲ್ಪಟ್ಟ ಟಿಕೆಟ್ ದರ ಶೇ.18 ಎಂದು ನಿಗದಿ ಮಾಡಿದೆ ಕೇಂದ್ರ ಸರ್ಕಾರ. ಆದರೆ, ವಾಸ್ತವ ಪರಿಸ್ಥಿತಿ ಬೇರೆಯೇ ಇದೆ. ಹೊಸ ನೀತಿ ಜನವರಿ 1ರಿಂದಲೇ ಜಾರಿಗೆ ಬಂದಿದ್ದರೂ, ಅದರ ಲಾಭ ಪ್ರೇಕ್ಷಕರಿಗೆ ಸಿಗುತ್ತಿಲ್ಲ. 

    ಹಳೆಯ ಮುದ್ರಿತ ಟಿಕೆಟ್‍ಗಳನ್ನು ನೀಡಿದ್ದೇವೆ ಎಂಬ ಸಮುಜಾಯಿಷಿ ಬರುತ್ತಿದ್ದರೂ, ಜನವರಿ 1ರಿಂದ ನೂತನ ಜಿಎಸ್‍ಟಿ ಜಾರಿಗೆ ಬರಲಿದೆ ಎನ್ನುವುದು ಗುಟ್ಟಾಗಿರಲಿಲ್ಲ. ಸರ್ಕಾರ ಕೆಲವು ದಿನ ಮೊದಲೇ ಘೋಷಿಸಿತ್ತು. ಆ ಕುರಿತಂತೆ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಬರುವಷ್ಟು ದಿನ ಬರಲಿ ಬಿಡಿ ಎಂದು ಶೇ.28ರ ಜಿಎಸ್‍ಟಿ ವಿಧಿಸಿಯೇ ಪ್ರೇಕ್ಷಕರನ್ನು ಸುಲಿಗೆ ಮಾಡಲಾಗುತ್ತಿದೆ ಎನ್ನುವುದು ಪ್ರೇಕ್ಷಕರ ದೂರು. 

  • ಮೋದಿಗೆ ಅಮಲು ಎಂದ ರಮ್ಯಾಗೆ ಕ್ಲಾಸ್

    ramya's comments

    ನಟಿ ರಮ್ಯಾಗೂ, ವಿವಾದಗಳಿಗೂ ಎಲ್ಲಿಲ್ಲದ ನಂಟು. ಏನಾದರೊಂದು ಹೇಳಿಕೆ ಕೊಡುವುದು, ಅದು ವಿವಾದವಾದ ನಂತರ, ಸ್ಪಷ್ಟನೆ ಕೊಡೋದು, ಕ್ಷಮೆ ಕೇಳೋದು, ಸಮರ್ಥನೆ ಮಾಡಿಕೊಳ್ಳೋದು ರಮ್ಯಾ ಅವರಿಗೆ ಅಭ್ಯಾಸವೇ ಆಗಿಬಿಟ್ಟಿದೆ. ಈ ಬಾರಿ ಕೂಡಾ ಅವರು ವಿವಾದವೊಂದನ್ನು ಮೈಮೇಲೆಳೆದುಕೊಂಡಿದ್ದಾರೆ. ನರೇಂದ್ರ ಮೋದಿಗೆ ಅಮಲು ಎಂದು ಹೇಳಿ ಹಿಗ್ಗಾಮುಗ್ಗಾ ಟೀಕೆಗೆ ಗುರಿಯಾಗಿದ್ದಾರೆ.

    ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ರಮ್ಯಾ, ಬೆಂಗಳೂರಿನಲ್ಲಿನ ನರೇಂದ್ರ ಮೋದಿ ಭಾಷಣವನ್ನು ಟೀಕಿಸಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಮೋದಿ ನಮ್ಮ ಟಾಪ್ ಪ್ರಿಯಾರಿಟಿ ಟೊಮ್ಯಾಟೋ, ಆನಿಯನ್ ಹಾಗೂ  ಪೊಟ್ಯಾಟೋ. ರೈತರನ್ನು ನಾವು ಕಾಪಾಡುತ್ತೇವೆ ಎಂದು ಮಾತನಾಡಿದ್ದರು. ಅದನ್ನೇ ಉಲ್ಟಾ ಮಾಡಿ ಹೇಳಿರುವ ರಮ್ಯಾ, ಮೋದಿ ಅಮಲಿನಲ್ಲಿದ್ದಾಗ ಈ ರೀತಿ ಮಾತನಾಡ್ತಾರೆ ಎಂದು ಟ್ವೀಟ್ ಮಾಡಿಬಿಟ್ಟಿದ್ದಾರೆ. ಅಂದಹಾಗೆ ಇಂಗ್ಲಿಷ್‍ನಲ್ಲಿ ಪಾಟ್ ಅಂದರೆ, ಮಡಕೆ ಎಂದಷ್ಟೇ ಅಲ್ಲ, ಮರಿಜುವಾನ (ಮಾದಕ ದ್ರವ್ಯ) ಅನ್ನೋ ಡ್ರಗ್ಸ್ ಸೇವಿಸಿ ಅಮಲಿನಲ್ಲಿರುವವರನ್ನು ಪಾಟ್ ಎಂದು ಹೇಳ್ತಾರೆ. ಪ್ರಧಾನಿಯೊಬ್ಬರನ್ನು ಟೀಕಿಸುವ ಪದ ಅದಾಗಿರಲಿಲ್ಲ. ಆದರೆ, ಇಲ್ಲಿ ರಮ್ಯಾ, ಟೀಕಿಸುವ ಭರದಲ್ಲಿ ಸಂಯಮದ ಗಡಿ ದಾಟಿಬಿಟ್ಟಿದ್ದಾರೆ. ಸಹಜವಾಗಿಯೇ ಹಲವರು ರಮ್ಯಾ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

    ಚಿತ್ರ ನಿರ್ಮಾಪಕಿ ಶಿಲ್ಪಾ ಗಣೇಶ್, ಸತತ ಸೋಲಿಗೆ ತಲೆಕೆಟ್ಟು ಆಗಾಗ ವಿದೇಶಕ್ಕೆ ಹೋಗುವವರಿಗೆ ನಶೆಯ ವಿಚಾರ ಚೆನ್ನಾಗಿಯೇ ತಿಳಿದಿರುತ್ತದೆ. ನಟಿ ರಮ್ಯಾ ಹೆಸರಿನಲ್ಲಿಯೇ ರಮ್ ಇದೆ. ಬಹುಶಃ ಆಕೆ ಟ್ವೀಟ್ ಮಾಡುವಾಗಲೆಲ್ಲ ಕುಡಿದೇ ಇರುತ್ತಾರೇನೋ ಎಂದು ಜಾಡಿಸಿದ್ದಾರೆ.

    ನಟ ಜಗ್ಗೇಶ್ `ಮೋದಿಯನ್ನು ಟೀಕಿಸುವ ಯೋಗ್ಯತೆ ರಮ್ಯಾಗಿಲ್ಲ. ಕನ್ನಡ ಮಾತನಾಡಲು ಬಾರದ ಕಾಡುಪಾಪ ಈಕೆ. ಕ್ಯಾಚ್ ಹಾಕ್ಕೊಂಡು ಸಿನಿಮಾ, ದೊಡ್ಡವರ ಆಶೀರ್ವಾದದಲ್ಲಿ ರಾಜಕೀಯ ಮಾಡಿದವರಿಗೆ ಮೋದಿಯವರ ಬಗ್ಗೆ ಮಾತನಾಡೋಕೆ ಯೋಗ್ಯತೆ ಇಲ್ಲ ಎಂದು ಟೀಕಿಸಿದ್ದಾರೆ.

    ಟೀಕೆಗಳ ನಂತರವೂ ರಮ್ಯಾ ಕ್ಷಮೆಯನ್ನೇನೂ ಕೇಳಿಲ್ಲ. ಪಾಟ್ ಎಂದರೆ ಪೊಟ್ಯಾಟೋ, ಆನಿಯನ್, ಟೊಮ್ಯಾಟೋ ಎಂದೇ ಹೇಳಿದ್ದೇನೆ. ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ಎನ್ನುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.

  • ಮೋದಿಯೇ ಕರೆದರೂ ರಾಜಕೀಯಕ್ಕೆ ಹೋಗಲಿಲ್ಲ ಅಪ್ಪು..!

    ಮೋದಿಯೇ ಕರೆದರೂ ರಾಜಕೀಯಕ್ಕೆ ಹೋಗಲಿಲ್ಲ ಅಪ್ಪು..!

    ಪುನೀತ್ ರಾಜ್‍ಕುಮಾರ್ ನಿಧನರಾಗುವವರೆಗೆ ಅವರ ಸರಳತೆ ಗೊತ್ತಿತ್ತೇ ಹೊರತು ಸಮಾಜಸೇವೆಗಳು ಜನಕ್ಕೆ ಗೊತ್ತಿರಲಿಲ್ಲ. ಎಲ್ಲ ರಾಜಕೀಯ ನಾಯಕರೊಂದಿಗೆ ಅಂತರ ಕಾಯ್ದುಕೊಂಡಿದ್ದ ಅಪ್ಪು ರಾಜಕೀಯದಿಂದ ದೂರವೇ ಇದ್ದರು. ಆ ವಿಷಯದಲ್ಲಿ ಅಪ್ಪನ ಹಾದಿಯಲ್ಲೇ ನಡೆದಿದ್ದರು ಅಪ್ಪು.

    ಹಾಗೆಂದು ಪುನೀತ್ ಅವರಿಗೆ ರಾಜಕೀಯ ನಾಯಕರು ಪರಿಚಯವೇ ಇರಲಿಲ್ಲ ಎಂದಲ್ಲ. ಸಿದ್ದರಾಮಯ್ಯ ಅವರನ್ನು ಮಾಮ ಎನ್ನುತ್ತಿದ್ದ ಅಪ್ಪು, ಅಂಬರೀಷ್ ಅವರನ್ನು ಕೂಡಾ ಮಾಮ ಎಂದೇ ಕರೆಯುತ್ತಿದ್ದರು. ಡಿಕೆ ಶಿವಕುಮಾರ್ ಮನೆ ಎದುರೇ ಅವರ ಮನೆಯಿತ್ತು. ಅತ್ತಿಗೆ ಗೀತಾ ಅವರ ತಂದೆ ಬಂಗಾರಪ್ಪ ಮಾಜಿ ಸಿಎಂ. ಅತ್ತಿಗೆಯ ಸೋದರರಿಬ್ಬರೂ ರಾಜಕೀಯದಲ್ಲಿದ್ದವರು. ಇರುವವರು. ಅತ್ತಿಗೆ ಗೀತಾ ಚುನಾವಣೆಗೆ ನಿಂತಾಗಲೂ ಪ್ರಚಾರಕ್ಕೆ ಹೋಗಲಿಲ್ಲ. ತಾವು ಹಲವು ಬಾರಿ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ಮಾಡಿದ್ದೆವು. ಅವರು ಇಷ್ಟವಿಲ್ಲ ಎಂದಿದ್ದರು ಎಂಬ ವಿಷಯವನ್ನು ಡಿಕೆಶಿ, ಸಿದ್ದು, ಡಿಕೆ ಸುರೇಶ್ ಸೇರಿದಂತೆ ಹಲವು ಹೇಳಿಯೂ ಇದ್ದಾರೆ. ಆದರೆ, ಈಗ ಬಂದಿರೋ ಸುದ್ದಿ ಅದಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಪುನೀತ್ ಅವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ಮಾಡಿದ್ದರಂತೆ.

    ಪುನೀತ್ ಅವರ ಆಪ್ತ ಸಹಾಯಕರೂ ಆಗಿದ್ದ ರಾಜಕುಮಾರ್ ಈ ವಿಷಯ ಬಹಿರಂಗಪಡಿಸಿದ್ದಾರೆ. ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಬಿ.ಎಲ್.ಸಂತೋಷ್, ಜಗ್ಗೇಶ್, ಎಸ್.ವಿ.ಬಾಬು ಪುನೀತ್ ಅವರನ್ನು ಭೇಟಿ ಮಾಡಿದ್ದರು.  ರಾಜಕೀಯಕ್ಕೆ ಆಹ್ವಾನಿಸಿದ್ದರು. ಪುನೀತ್ ಸ್ಪಷ್ಟವಾಗಿ ನನಗೆ ರಾಜಕೀಯಕ್ಕೆ ಸೇರುವ ಇಷ್ಟವಿಲ್ಲ ಎಂದಿದ್ದರು.

    ನಂತರ ಗುಜರಾತ್ ಬಿಜೆಪಿಯ ಬಿ.ವಿ.ಎಸ್.ಶರ್ಮಾ, ಆಂಧ್ರಪ್ರದೇಶದ ಬಿಜೆಪಿ ಮುಖಂಡ ಸೋಮು ವಿ.ರಾಜು ಕೂಡಾ ಪ್ರಯತ್ನ ಪಟ್ಟರು. ರಾಜಕೀಯಕ್ಕೆ ಸೇರದಿದ್ದರೂ ಪರವಾಗಿಲ್ಲ, ಒಂದ್ಸಲ ದೆಹಲಿಗೆ ಬಂದು ಮೋದಿಯನ್ನು ಭೇಟಿ ಮಾಡಿಸಿ ಎಂದಿದ್ದರು. ಪುನೀತ್ ಅವರ ಪರವಾಗಿ ನಾನೇ ಈ ವಿಷಯದಲ್ಲಿ ಅವರನ್ನು ಒಪ್ಪಿಸುವುದು ಅಸಾಧ್ಯ ಎಂದು ತಿಳಿಸಿದ್ದೆ.

    ಒತ್ತಡ ಹೆಚ್ಚುತ್ತಾ ಹೋದಾಗ ನಾನೇ ಒಂದು ಸಲಹೆ ಕೊಟ್ಟೆ. ಬಿಜೆಪಿ ನಾಯಕನ್ನು ಭೇಟಿ ಮಾಡಿದೆ ಎಂದುಕೊಳ್ಳಬೇಡಿ. ದೇಶದ ಪ್ರಧಾನಿಯನ್ನು ಭೇಟಿ ಮಾಡಿದೆ ಎಂದುಕೊಳ್ಳಿ. ಅವರಿಗೆ ಡಾ.ರಾಜ್ ಬಗ್ಗೆ ಅವರೇ ಬರೆದಿದ್ದ ರಾಜ್‍ಕುಮಾರ್ ದಿ ಪರ್ಸನ್ ಬಿಹೈಂಡ್ ಪರ್ಸನಾಲಿಟಿ ಪುಸ್ತಕವನ್ನು ಕೊಡುವ ವೇಳೆ ಭೇಟಿ ಮಾಡಿದರು. ಸುಮಾರು 7 ನಿಮಿಷ ಮೋದಿ ಮತ್ತು ಪುನೀತ್ ಮಧ್ಯೆ ಮಾತುಕತೆ ನಡೆಯಿತು. ನಿಮ್ಮಂತ ಯುವಕರು ರಾಜಕೀಯಕ್ಕೆ ಬರಬೇಕು ಎಂದರು ಮೋದಿ. ಅಪ್ಪು ಏನೂ ಮಾತನಾಡದೆ ಮುಗುಳ್ನಕ್ಕು ವಂದನೆ ಸಲ್ಲಿಸಿದ್ದರು ಎಂದು ಅಂದಿನ ಘಟನೆ ಹಂಚಿಕೊಂಡಿದ್ದಾರೆ ರಾಜಕುಮಾರ್.

    ನನಗೆ ಎಲ್ಲ ಪಕ್ಷದವರೂ ಬೇಕು. ಎಲ್ಲ ಪಕ್ಷದಲ್ಲೂ ಅಭಿಮಾನಿಗಳಿದ್ದಾರೆ.  ಯಡಿಯೂರಪ್ಪ,  ಸಿದ್ದರಾಮಯ್ಯ, ಹೆಚ್‍ಡಿ ಕುಮಾರಸ್ವಾಮಿ.. ಎಲ್ಲರೂ ಬೇಕು. ಮೋದಿಯವರನ್ನು ಭೇಟಿ ಮಾಡಿದರೆ ಅದು ರಾಜಕೀಯವಾಗುತ್ತದೆ ಎಂಬ ಆತಂಕ ಅಪ್ಪುಗೆ ಇತ್ತಂತೆ.

  • ಯಾವ ಭಾಷೆ ದೊಡ್ಡದು..? : ಸುದೀಪರಿಂದ ಮೋದಿ.. ಮೋದಿಯಿಂದ ಅಕ್ಷಯ್ ಕುಮಾರ್..ವರೆಗೆ..

    ಯಾವ ಭಾಷೆ ದೊಡ್ಡದು..? : ಸುದೀಪರಿಂದ ಮೋದಿ.. ಮೋದಿಯಿಂದ ಅಕ್ಷಯ್ ಕುಮಾರ್..ವರೆಗೆ..

    ಯಾವ ಭಾಷೆ ದೊಡ್ಡದು.. ಯಾವುದೂ ಚಿಕ್ಕದು.. ಯಾವ ಭಾಷೆ ಕಲಿಯೋದು.. ಯಾವುದ್ ಬಿಡೋದು..

    ಜಯಭಾರತಿ ಮಡಿಲಲ್ಲಿವೆ ನೂರಾರು ಭಾಷೆಗಳು.. ನೂರಾರಲು ಗುರಿಯಿಲ್ಲದ ನೂರಾರು ಕವಲುಗಳು.. ನೋಟಿನಲ್ಲಿ ಕಾಣುವುದು 14 ರಾಜ್ಯಗಳ ಲಿಪಿಗಳು.. ಕನ್ನಡಕ್ಕೆ ಅಲ್ಲಿಹುದು 4ನೆಯ ದೊಡ್ಡ ಸ್ಥಾನಮಾನಗಳು..

    ಹೀಗೆ ಬರೋದು ಸಾಮ್ರಾಟ್ ಚಿತ್ರದ ಹಾಡಿನ ಸಾಲು. ಪುಷ್ಪ.. ಬೆನ್ನಲ್ಲೇ ಆರ್.ಆರ್.ಆರ್. .. ಜೊತೆಯಲ್ಲೇ ಬಂದ ಕೆಜಿಎಫ್ ಚಾಪ್ಟರ್ 2. ಚಿತ್ರಗಳ ಭರ್ಜರಿ ಯಶಸ್ಸು ಯಾವ ಇಂಡಸ್ಟ್ರಿ ದೊಡ್ಡದು.. ಯಾವುದು ಚಿಕ್ಕದು ಎಂಬ ವಿವಾದ ಹುಟ್ಟುಹಾಕಿತ್ತು. ಈ ಹಿಂದೆ ಹಿಂದಿ ಭಾಷಾ ಚಿತ್ರರಂಗದವರು ನಡೆದುಕೊಂಡಿದ್ದ ರೀತಿ ನೆನಪಿದ್ದವರಿಗೆ ಇದು ವಿಚಿತ್ರ ಸಂತೋಷವನ್ನೂ ಕೊಟ್ಟಿತ್ತು. ಜೊತೆಗೆ ಹಿಂದಿ ನ್ಯಾಷನಲ್ ಲಾಂಗ್ವೇಜು ಎಂಬ ಸುಳ್ಳನ್ನು ಸತ್ಯದ ಮೇಲೆ ಹೊಡೆದಂತೆ ಹೇಳುತ್ತಿದ್ದವರಿಗೂ ಇದು ಚುರುಕು ಮುಟ್ಟಿಸಿತ್ತು. ನಾನು ದಕ್ಷಿಣದ ಯಾವುದೇ ಭಾಷೆಯ ಚಿತ್ರದಲ್ಲಿ ನಟಿಸೋದಿಲ್ಲ ಎಂಬ ಜಾನ್ ಅಬ್ರಹಾಂ ಅಹಂಕಾರದ ಹೇಳಿಕೆಗೂ ಇಂತಹ ಭ್ರಮೆಗಳೇ ಕಾರಣ.

    ಹಿಂದಿ ರಾಷ್ಟ್ರಭಾಷೆಯೇನಲ್ಲ ಎಂಬ ಸುದೀಪ್ ಹೇಳಿಕೆ, ಅದಕ್ಕೆ ಅಜಯ್ ದೇವಗನ್ ಕೊಟ್ಟ ತಿರುಗೇಟು.. ಮೆಗಾಸ್ಟಾರ್ ಚಿರಂಜೀವಿ ಹೇಳಿದ ಅವಮಾನದ ಕಥೆ.. ಕಂಗನಾ ರಾವತ್ ವಿಚಿತ್ರ ಸ್ಟೇಟ್‍ಮೆಂಟು.. ವಿವಾದವನ್ನು ದೊಡ್ಡದಾಗಿ ಮಾಡಿತ್ತು. ಹಿಂದಿಯವರಿಗೆ ಸುದೀಪ್ ಅವರಿಗೆ ಸಿಕ್ಕಂತಹ ಬೆಂಬಲ ಸಿಗಲಿಲ್ಲ. ಅಷ್ಟು ಹೊತ್ತಿಗೆ ಅಜಯ್ ದೇವಗನ್ ವಿಷಾದ ವ್ಯಕ್ತಪಡಿಸಿದರಾದರೂ.. ಬಿಜೆಪಿಯ ಕೆಲವು ರಾಜಕೀಯ ನಾಯಕರು, ಅರ್ಜುನ್ ರಾಂಪಾಲ್ ರಂತಹ ನಟರು ವಿವಾದವನ್ನು ಜೀವಂತವಾಗಿಟ್ಟರು. ವಿವಾದ ಬೆಳೆಯುತ್ತಿದ್ದಂತೆಲ್ಲ ಮನೋಜ್ ಬಾಜಪೇಯಿ, ಸೋನು ನಿಗಮ್, ಮಾಧವನ್, ಸಿದ್ದಾರ್ಥ.. ಮೊದಲಾದವರು ರಾಷ್ಟ್ರೀಯ ಮಟ್ಟದಲ್ಲಿ ಸುದೀಪ್ ಬೆಂಬಲಕ್ಕೆ ಬಂದರೆ, ಸಂಪೂರ್ಣ ಕನ್ನಡ ಚಿತ್ರರಂಗವೇ ಸುದೀಪ್ ಬೆನ್ನಿಗಿತ್ತು. ಅದಕ್ಕೆ ಒಂದು ಹಂತದ ಬ್ರೇಕ್ ಹಾಕಿರೋದು ಪ್ರಧಾನಿ ನರೇಂದ್ರ ಮೋದಿ.

    ಯಾವುದೇ ಭಾಷೆ ಮೇಲಲ್ಲ. ಯಾವುದೇ ಭಾಷೆ ಕೀಳೂ ಅಲ್ಲ. ಎಲ್ಲ ಭಾಷೆಗಳೂ ಪೂಜನೀಯ. ಭಾರತದ ಸಂಸ್ಕøತಿ ಇರುವುದೇ ಈ ಪ್ರಾದೇಶಿಕ ಭಾಷೆಗಳಲ್ಲಿ ಎನ್ನುವ ಮೂಲಕ ನರೇಂದ್ರ ಮೋದಿ ಭಾಷಾ ಭಾವೈಕ್ಯತೆಯ ಸಂದೇಶ ಸಾರಿದ್ದರು. ಸುದೀಪ್ ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿದ್ದರು. ಈಗ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ.

    ಬ್ರಿಟಿಷರು ಭಾರತವನ್ನು ಒಡೆದಿದ್ದೇ ಇಂತಹವುಗಳಿಂದ. ಬ್ರಿಟಿಷರನ್ನು ಓಡಿಸಿದ ನಂತರವೂ ನಾವು ಇನ್ನೂ ಪಾಠ ಕಲಿತಿಲ್ಲ. ಮೊದಲಿಗೆ ಉತ್ತರ ಭಾರತ, ದಕ್ಷಿಣ ಭಾರತ ಎನ್ನುವುದನ್ನು ನಾವು ಮೊದಲು ಬಿಡಬೇಕು. ಚಿತ್ರರಂಗ ಎಂದರೆ ಎಲ್ಲರೂ ಒಂದೇ. ಇಷ್ಟಕ್ಕೂ ಇಲ್ಲಿನ ಚಿತ್ರಗಳು ಸಕ್ಸಸ್ ಆದಾಗ, ನಮಗೆ ಇಷ್ಟವಾದಾಗ ಅವುಗಳನ್ನು ರೀಮೇಕ್ ಮಾಡಿದರೆ ತಪ್ಪೇನಿದೆ. ಚಿತ್ರರಂಗ ಒಂದೇ ಅಲ್ಲವೇ. ಮೊದಲು ದಕ್ಷಿಣ ಭಾರತ ಚಿತ್ರರಂಗ, ಉತ್ತರ ಭಾರತ ಚಿತ್ರರಂಗ ಅನ್ನೋದನ್ನು ಬಿಡೋಣ ಎಂದಿದ್ದಾರೆ ಅಕ್ಷಯ್ ಕುಮಾರ್.

    ವಿವಾದ ಇಲ್ಲಿಗೇ ಮುಗಿಯುತ್ತಾ..? ಗೊತ್ತಿಲ್ಲ..

  • ಹುಟ್ಟುಹಬ್ಬಕ್ಕೆ ಮುನ್ನ ಮೋದಿ ಆಶೀರ್ವಾದ ಪಡೆದ ಜಗ್ಗೇಶ್ ಕುಟುಂಬ

    ಹುಟ್ಟುಹಬ್ಬಕ್ಕೆ ಮುನ್ನ ಮೋದಿ ಆಶೀರ್ವಾದ ಪಡೆದ ಜಗ್ಗೇಶ್ ಕುಟುಂಬ

    ಮಾರ್ಚ್ 17. ಪುನೀತ್ ರಾಜಕುಮಾರ್ ಅವರದ್ದಷ್ಟೇ ಅಲ್ಲ, ಜಗ್ಗೇಶ್ ಹುಟ್ಟುಹಬ್ಬವೂ ಹೌದು. ಹುಟ್ಟುಹಬ್ಬಕ್ಕೆ ಮುನ್ನವೇ ಜಗ್ಗೇಶ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಜಗ್ಗೇಶ್ ಜೊತೆ ಅವರ ಇಡೀ ಕುಟುಂಬ ಇತ್ತು ಎನ್ನುವುದು ವಿಶೇಷ. ರಾಜ್ಯಸಭಾ ಸದಸ್ಯರೂ ಆಗಿರುವ ಜಗ್ಗೇಶ್ ಅವರ ಕುಟುಂಬದ ಜೊತೆ ಸಮಯ ಕಳೆದ ಮೋದಿ, ಕುಟುಂಬದವರನ್ನೆಲ್ಲ ಹರಸಿ ಹಾರೈಸಿದ್ದಾರೆ. ಈ ಹುಟ್ಟುಹಬ್ಬ ಜಗ್ಗೇಶ್ ಅವರ 60ನೇ ಹುಟ್ಟುಹಬ್ಬ ಎನ್ನುವುದು ವಿಶೇಷ.

    ದೆಹಲಿಯ ಪಿಎಂ ನಿವಾಸದಲ್ಲಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಿರುವ ಜಗ್ಗೇಶ್, ಆ ಭೇಟಿಗೆ ವಿಶೇಷ ಅರ್ಥವೊಂದನ್ನೂ ನೀಡಿದ್ದಾರೆ. ‘ನನ್ನ ಬದುಕಿನ ಶ್ರೇಷ್ಠದಿನ ಇಂದು. ಮಾರ್ಚ್ 17 ನನ್ನ ಹುಟ್ಟುದಿನ. ಈ ವರ್ಷ ನನಗೆ 60ನೇ ವಸಂತ. ನನ್ನ ನೆಚ್ಚಿನ ಪ್ರಧಾನಿಗಳು ನನ್ನ ಹಾಗೂ ಹೆಂಡತಿ ಮಗನ ಮನತುಂಬಿ ಹರಸಿದರು. ನನ್ನ ಗುರುಗಳು ರಾಯರ ವಿಗ್ರಹ ಸಮರ್ಪಿಸಿದೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಕಿರಿಯ ಪುತ್ರ ಯತಿರಾಜ್ , ಪತ್ನಿ ಪರಿಮಳಾ ಜೊತೆ ಪ್ರಧಾನಿಯನ್ನು ಭೇಟಿ ಮಾಡಿ, ಮಂತ್ರಾಲಯದಿಂದ ತೆಗೆದುಕೊಂಡು ಹೋಗಿದ್ದ ರಾಯರ ವಿಗ್ರಹ ಮತ್ತು ವಿಶೇಷ ಶಾಲನ್ನು ಮೋದಿಗೆ ಅರ್ಪಿಸಿದ್ದಾರೆ. ಪ್ರತೀ ವರ್ಷ ತಮ್ಮ ಹುಟ್ಟುಹಬ್ಬದ ದಿನ ಮಂತ್ರಾಲಯದ ಗುರುರಾಯರ ಸನ್ನಿಧಿಯಲ್ಲಿರುವುದನ್ನು ಜಗ್ಗೇಶ್ ಸಂಪ್ರದಾಯದಂತೆ ಪಾಲಿಸಿಕೊಂಡು ಬಂದಿದ್ದಾರೆ. ಈ ಬಾರಿಯೂ ರಾಯರ ದರ್ಶನದ ಜೊತೆಯಲ್ಲೇ 60ನೇ ಹುಟ್ಟುಹಬ್ಬ ಸಂಭ್ರಮ ನೆರವೇರಲಿದೆ.