` tirupathi temple, - chitraloka.com | Kannada Movie News, Reviews | Image

tirupathi temple,

  • ತಾರಾ ಹೇಳಿದ ತಿರುಪತಿ ಪ್ರವಾಹದ ಅನುಭವ

    ತಾರಾ ಹೇಳಿದ ತಿರುಪತಿ ಪ್ರವಾಹದ ಅನುಭವ

    ಹಿರಿಯ ನಟಿ ತಾರಾ ಅನುರಾಧಾ ತಿರುಪತಿಗೆ ಹೋಗಿ ಪ್ರವಾಹದಲ್ಲಿ ಸಿಲುಕಿ ಅಲ್ಲಿಂದ ಬಚಾವ್ ಆಗಿ ಬಂದ ಕಥೆ ಹೇಳಿದ್ದಾರೆ. ತಿರುಪತಿಯಲ್ಲಿ ಈ ರೀತಿಯ ಪ್ರವಾಹ ಶುರುವಾಗುವ ಒಂದು ದಿನ ಮೊದಲು ತಿರುಪತಿಗೆ ಹೊರಟಿದ್ದರು. ಮಳೆ ಇತ್ತಾದರೂ ಪ್ರವಾಹದ ಭೀಕರ ಸ್ಥಿತಿ ಇರಲಿಲ್ಲ.

    ಪರಿಚಯಸ್ಥರೊಬ್ಬರು ಬನ್ನಿ ಪರವಾಗಿಲ್ಲ ಎಂದರು. ನಾನು, ಅಮ್ಮ, ಮಗ, ಅಣ್ಣ, ನನ್ನ ಪಿಎ ಮತ್ತು ಡ್ರೈವರ್ ಇದ್ದರು. ತಿರುಪತಿಗೆ ಹೋಗುವ ವೇಳೆಗೆ ಕತ್ತಲಾಗಿತ್ತು. ನೀರು ಸೊಂಟದವರೆಗೆ ಇತ್ತು. ನಮಗೆ ಮಾತನಾಡಿದ್ದವರಿಗೆ ಕರೆ ಮಾಡಿದೆ. ಈಗ ರೆಡ್ ಅಲರ್ಟ್ ಘೋಷಣೆಯಾಗಿದೆ. ಅಲ್ಲಿಯೇ ಎಲ್ಲಾದರೂ ಉಳಿದುಕೊಳ್ಳಿ ಎಂದರು. ರೂಂ ಮಾಡೋಣ ಎಂದರೆ ಎಲ್ಲಿ ಮಾಡೋದು? ಯಾವ ಹೋಟೆಲ್ಲೂ ಓಪನ್ ಇಲ್ಲ. ನೀರಿನ ಸೆಳೆತ ಹೆಚ್ಚುತ್ತಾ ಹೋಯ್ತು. ನಿಂತಿದ್ದ ಕಾರುಗಳು ಕಣ್ಣೆದುರೇ ತೇಲೋಕೆ ಆರಂಭಿಸಿದವು.

    ನಮ್ಮ ಕಾರೂ ತೇಲೋಕೆ ಶುರುವಾಯ್ತು. ಎಲ್ಲಿಯಾದರೂ ಸರಿ, ಸೇಫ್ ಜಾಗದಲ್ಲಿ ಕಾರು ನಿಲ್ಲಿಸಿ ಸಾಕು ಎಂದು ಡ್ರೈವರ್‍ಗೆ ಹೇಳಿದೆ. ಡ್ರೈವರ್ ಕೂಡಾ ಕಷ್ಟಪಟ್ಟು ಕಾರನ್ನು ಹೇಗೋ ಕಂಟ್ರೋಲ್ ಮಾಡಿಕೊಂಡು ಒಂದು ಸುರಕ್ಷಿತ ಸ್ಥಳಕ್ಕೆ ತಂದು ನಿಲ್ಲಿಸಿದರು. ಎಷ್ಟೋ ಕಡೆ ಕಾರು ನಮ್ಮ ನಿಯಂತ್ರಣದಲ್ಲೇ ಇರಲಿಲ್ಲ. ನೀರು ಕರೆದುಕೊಂಡು ಹೋದಲ್ಲಿಗೆ ಹೋಗಿದ್ದೆವು. ಕೊನೆಗೆ ನಿಂತ ಜಾಗ ಎಲ್ಲಿ ಎಂದು ನೋಡಿದರೆ.. ಅದು ಬೆಂಗಳೂರು ಹೈವೇ. ದೇವರೇ ನಮ್ಮನ್ನು ಇಲ್ಲಿಗೆ ಕರೆತಂದಿದ್ದಾರೆ ಎಂದುಕೊಂಡು ಅದೇ ಹಾದಿ ಹಿಡಿದು ವಾಪಸ್ ಬಂದುಬಿಟ್ಟೆವು.

  • ತಿಮ್ಮಪ್ಪನಿಗೆ ಮುಡಿ ಕೊಟ್ಟ ಗೀತಾ ಶಿವರಾಜ್ ಕುಮಾರ್

    geetha shivarajkuamar in tirupathi

    ಡಾ.ರಾಜ್ ಕುಟುಂಬದವರು ಅಪ್ಪಟ ದೈವಭಕ್ತರು. ಅದರಲ್ಲೂ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಾಗ್ಗೆ ಹೋಗುತ್ತಲೇ ಇರುತ್ತಾರೆ. ಆದರೆ, ಈ ಬಾರಿ ಗೀತಾ ಶಿವರಾಜ್ ಕುಮಾರ್ ಯಾವುದೊ ಹರಕೆ ತೀರಿಸಿದ್ದಾರೆ. ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ.

    ಪತ್ನಿ ಸಮೇತರಾಗಿ  ಶಿವರಾಜ್ ಕುಮಾರ್ ಕೂಡಾ ತಿರುಪತಿಯಲ್ಲಿದ್ದರು. ಜೀವದ ಗೆಳೆಯ ಗುರುದತ್, ನಟ ರಘುರಾಮ್ ಕೂಡಾ ಜೊತೆಯಲ್ಲಿದ್ದರು. ಆದರೆ, ಗೀತಾ ಯಾವ ಹರಕೆ ಹೊತ್ತುಕೊಂಡಿದ್ದರು ಎನ್ನುವುದು ಗೊತ್ತಾಗಿಲ್ಲ. ಅದು ನಮ್ಮ ಮನಸ್ಸಿನ, ಕುಟುಂಬದ ವೈಯಕ್ತಿಕ ವಿಷಯ. ಸುದ್ದಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದೆ ಕುಟುಂಬ. ಏನೇ ಇರಲಿ, ತಿಮ್ಮಪ್ಪನ ಆಶೀರ್ವಾದ ಕುಟುಂಬದ ಮೇಲೆ ಸದಾ ಇರಲಿ.

  • ತಿರುಪತಿಯಲ್ಲಿ ನಯನತಾರಾ ಮದುವೆಗೆ ಮುಹೂರ್ತ

    ತಿರುಪತಿಯಲ್ಲಿ ನಯನತಾರಾ ಮದುವೆಗೆ ಮುಹೂರ್ತ

    ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಟಿ ನಯನತಾರಾ ಮದುವೆಗೆ ಮುಹೂರ್ತ ಫಿಕ್ಸ್ ಆಗಿದೆ. ಜೂನ್ 9ರಂದು ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಮದುವೆಯಾಗಲಿದ್ದಾರೆ. ಇದು ಹಲವೆಡೆ ಹರಿದಾಡುತ್ತಿರುವ ಸುದ್ದಿಯಾಗಿದ್ದರೂ, ಅಧಿಕೃತವಲ್ಲ. ಹಾಗಂತ ಇದು ಸುಳ್ಳು ಎಂದು ಇಬ್ಬರೂ ನಿರಾಕರಿಸಿಲ್ಲ. ಮೂಲಗಳ ಪ್ರಕಾರ ಈ ಮದುವೆ ವೈಯಕ್ತಿಕ ಬಂಧುಗಳ ಸಮ್ಮುಖದಲ್ಲಿ ನೆರವೇರಲಿದೆ. ನಯನತಾರಾ ಮದುವೆ ಬಗ್ಗೆ ಸುದ್ದಿ ಚಿತ್ರರಂಗಕ್ಕೆ ಹೊಸದೇನಲ್ಲ. ಸದ್ಯದ ಮಟ್ಟಿಗೆ ಜೂನ್ 9ರಂದು ಮದುವೆ ನಡೆಯಲಿದೆ. ಅಷ್ಟೆ.

    ಇತ್ತೀಚೆಗಷ್ಟೇ ನಯನತಾರಾ ಅಭಿನಯದ ವಿಘ್ನೇಶ್ ನಿರ್ದೇಶನದ ಕಾತುವಾಕುಲಾರೆಂಡು ಕಾದಲ್ ಸಿನಿಮಾ ರಿಲೀಸ್ ಆಗಿತ್ತು. ವಿಜಯ್ ಸೇತುಪತಿ ಹೀರೋ ಆಗಿರುವ ಚಿತ್ರದಲ್ಲಿ ನಯನತಾರಾ ಜೊತೆಗೆ ಸಮಂತಾ ಕೂಡಾ ನಟಿಸಿದ್ದರು. ಚಿತ್ರ ಹಿಟ್ ಆಗುವ ಹಾದಿಯಲ್ಲಿದೆ.

    ಕನ್ನಡದಲ್ಲಿ ಸೂಪರ್ ಚಿತ್ರದಲ್ಲಿ ನಟಿಸಿರುವ ನಯನತಾರಾ ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಸ್ಟಾರ್ ಹಿರೋಯಿನ್. ಅತೀ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಾಯಕಿ. ಈಗ ಶಾರೂಕ್ ಜೊತೆ ನಟಿಸುವ ಮೂಲಕ ಬಾಲಿವುಡ್‍ಗೂ ಕಾಲಿಡುತ್ತಿದ್ದಾರೆ. ನಯನತಾರಾ, ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಾನುಂ ರೌಡಿದಾನ್ ಚಿತ್ರದಲ್ಲಿ ನಟಿಸಿದ ನಂತರ ಪ್ರೀತಿಗೆ ಬಿದ್ದಿದ್ದರು. ಇಬ್ಬರೂ ಸುಮಾರು 5 ವರ್ಷಗಳಿಂದ ಲಿವಿಂಗ್ ಟುಗೆದರ್`ನಲ್ಲಿದ್ದಾರೆ.

  • ಬೆಟ್ಟ ಹತ್ತಿ ತಿಮ್ಮಪ್ಪನ ದರ್ಶನ ಪಡೆದ ಹರಿಪ್ರಿಯಾ

    haripriya in thirupathi

    ಸೆಲಬ್ರಿಟಿಗಳು ದೇವಸ್ಥಾನಕ್ಕಷ್ಟೇ ಅಲ್ಲ, ಎಲ್ಲಿಯೇ ಹೋದರೂ ಅಭಿಮಾನಿಗಳು ಮುತ್ತಿಕೊಳ್ಳುವುದು ಮಾಮೂಲು. ಹೀಗಾಗಿಯೇ ಸಾಮಾನ್ಯವಾಗಿ ಸೆಲಬ್ರಿಟಿಗಳು ದೇವಸ್ಥಾನಗಳಿಗೆ ಹೋದಾಗ ಸ್ವಲ್ಪ ಮುಂಜಾಗ್ರತೆ ವಹಿಸಿ, ಪೂರ್ವ ಸಿದ್ಧತೆ ಮಾಡಿಕೊಂಡೇ ಬರುತ್ತಾರೆ. ಹೀಗೆ ಬಂದವರು ಹಾಗೆ ಮರೆಯಾಗಿಬಿಡುತ್ತಾರೆ. ಆದರೆ, ಹರಿಪ್ರಿಯಾ ಹಾಗಲ್ಲ.

    ಹರಿಪ್ರಿಯಾ ತಿರುಪತಿ ತಿಮ್ಮಪ್ಪನದ ಭಕ್ತೆ. ಸಾಮಾನ್ಯವಾಗಿ ಸೆಲಬ್ರಿಟಿಗಳು ತಿರುಪತಿಗೆ ಹೋದರೆ ವಿಐಪಿ ದರ್ಶನಕ್ಕೆ ಹೋಗ್ತಾರೆಯೇ ಹೊರತು, ಬೆಟ್ಟ ಹತ್ತುವ ಸಾಹಸ ಮಾಡುವುದಿಲ್ಲ. ಆದರೆ, ಹರಿಪ್ರಿಯಾ 11 ಕಿ.ಮೀ. ಬೆಟ್ಟವನ್ನು ಹತ್ತಿ, 3550 ಮೆಟ್ಟಿಲುಗಳನ್ನೇರಿ ತಿರುಪತಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ. ಮುಂಜಾನೆಯ ಚುಮು ಚುಮು ಚಳಿಯಲ್ಲೇ ಬೆಟ್ಟ ಹತ್ತಿ ದರ್ಶನ ಮುಗಿಸಿಕೊಂಡು ವಾಪಸ್ ಬಂದಿದ್ದಾರೆ.

    ಸದ್ಯಕ್ಕೆ ತೆಲುಗಿನಲ್ಲಿ ಹರಿಪ್ರಿಯಾ ಅಭಿನಯದ ಜೈಸಿಂಹ ಚಿತ್ರ ಭರ್ಜರಿಯಾಗಿ ಓಡುತ್ತಿದ್ದರೆ, ಕನ್ನಡದಲ್ಲಿ ಸಂಹಾರ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.