` rip, - chitraloka.com | Kannada Movie News, Reviews | Image

rip,

  • Uncle Loknath no more

    uncle lokanath no more

    Veteran actor Uncle Loknath is no more. He passed away this morning at the age of 91. He leaves behind four daughters and a son. CH Loknath debuted at the age of 42 and soon came to be referred to as Uncle in film circles.

    He was a popular theatre person and was first cast in the classic film Samskara. He went on to act in many commercial films and the role of a cobbler in Bhootayyana Maga Aiyyu gave him instant game and recognition. His character constantly yearns for pickles in the film. Uncle has performed in over one thousand stage plays and nearly 700 films.

    lokanath5_18.jpgHe acted in Kaada Beladingalu produced by Chitraloka.com editor KM Veeresh, Siddalingaiah and BS Lingadevaru. This movie got Nationala and State award.

    Public and fans can pay respect to Uncle Lokanath today at the Ravindra Kalakshetra between 12 and 2.30 pm today. He performed in hundreds of plays in this very theatre.

  • Veteran Actor Akki Channabasappa No More

    akki channabasappa no more

    Veteran actor Akki Channabasappa who has acted in numerous films, apart from plays has breathed his last on Tuesday afternoon.

    Akki Channabasappa died due to bad health at the old age home run by stage actor and Junior Rajakumar Ashok Basthi in Bangalore. Channabasappa will be cremated today afternoon by the Kannada Film Supporting Artistes Association headed by Dingri Nagaraj.

  • Veteran Actor Shivaram No More

    Veteran Actor Shivaram No More

    Senior actor Shivaram, aged 84 years old, has passed away today after being met with an accident recently. He was admitted to a private hospital and his condition was then critical and was undergoing treatment in ICU.

    Shivaram is an Indian actor, producer and director whose Kannada cinema career has spanned six decades. He has played roles including lead hero performances, character roles, comedic roles, as well as supporting roles.

    Chitraloka Mourns the death of Veteran actor Sri Shivaram.

     

  • Veteran Actress Jayanthi No More

    Veteran Actress Jayanthi No More

    Senior actress Jayanthi, aged 76  passed away on Monday at her residence due to ill health. 

    Jaynthi was prominent actress in kannada film industry. she was popularly knows as 'Abhinaya Sharade'. Jayanthi has acted over 500 + films and has bagged 6 State Awards for her outstanding performance.

    Chitraloka mourns the death of Abhinaya Sharade Jayanthi

  • Veteran M Bhaktavatsalam No More

    m bhaktavatsala no more

    Well known Producer, Distributor and Exhibitor M Bhaktavatsalam is no more. He breathed his last at a private hospital. He was the recipient of Dr Rajkumar Award, 2012, for Lifetime Achievement. 

    Bhaktavatsalam was running the Minerva and Lavanya Theater in Bengaluru and at Mysore Lakshmi theater.  In 1971 He produced Sampoorna Ramayana and Kanneshwara Rama directed by MS Sathyu starring Ananthnag, BV Karanth, Amul Palekar, Shabana Ajmi. this movie became national news.

    Mr M Bhaktavatsala, was president of the Karnataka Film Chamber of Commerce (KFCC) for seven years, the youngest president of the Film Federation of India and two-time president of the South Indian Film Chamber of Commerce, he has held various senior posts in the industry.

    Chitraloka mourn the death of legend.

  • Veteran Still Photographer Shekar Wali Expired

    veteran still photographer shekar wali expired

    Veteran Kannada movie still photographer Shekar Wali has expired today at the age of 62 years. He was health and his last breath came because of the sudden heart attack. 

    Shekar Wali was the still photographer from

    1980 and has worked the director S Narayan movies from the last 18 years and he has captured more than 300 movies in his lens in his career. Shekar was the favorite still photographer for many legendary actors

    Chitraloka mourn the death of Shekar Wali

  • Writer-Director K Nanjunda No More

    k nanjunda no more

    Well known writer-director K Nanjunda who was hospitalised for ill health died today night in Bangalore.

    K Nanjunda came to the Kannada film industry in the 90s and worked in many films as assistant director. He went on to write dialogues for films like 'Server Somanna', 'Police Power', 'O Mallige', 'Mangalyam Tanthu Nanena' and others. He turned independent director with 'Kanasaloo Neene Manasaloo Neene' released in 1998. However, the film did not do well at the box-office, after which it took 14 years for Nanjunda to direct another film. After 'Kanasaloo Neene Manasaloo Neene' directed another film called 'Melody' which was released a few years back.

    After 'Melody', Nanjunda had returned back to writing and had written dialogues for few films in the past years. Off late, Nanjunda was not well and was recently admitted to Bowring Hospital in Bangalore. Nanjunda breathed his last on Tuesday night.

  • ಅಂಕಲ್ ಲೋಕನಾಥ್ ಇನ್ನಿಲ್ಲ

    veteran actor lokanath no more

    ಹಿರಿಯ ನಟ, ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಉಪ್ಪಿನಕಾಯಿ ಎಂದೇ ಹೆಸರಾಗಿದ್ದ ಲೋಕನಾಥ್ ನಿಧನರಾಗಿದ್ದಾರೆ. ಮಧ್ಯರಾತ್ರಿ 12.15ಕ್ಕೆ ಕೊನೆಯುಸಿರೆಳೆದಿದ್ದಾರೆ. ಲೋಕನಾಥ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ. 2018ರ ಕೊನೆಯ ದಿನ ಚಿತ್ರರಂಗಕ್ಕೆ ಲೋಕನಾಥ್ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಎರಗಿದೆ.

    ಲೋಕನಾಥ್ ಮೂಲತಃ ರಂಗಭೂಮಿ ಕಲಾವಿದ. ರವಿ ಕಲಾವಿದರು, ನಟರಂಗ, ಸಮುದಾಯ, ಸೂತ್ರಧಾರ ಸೇರಿದಂತೆ ಹಲವು ತಂಡಗಳಲ್ಲಿ 1000ಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದವರು. 650ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದ ಲೋಕನಾಥ್‍ಗೆ, ಭೂತಯ್ಯನ ಮಗ ಅಯ್ಯು, ಮಿಂಚಿನ ಓಟ ಚಿತ್ರಗಳು ಹೆಸರು ತಂದುಕೊಟ್ಟಿದ್ದವು. ಭೀಮಾತೀರದಲ್ಲಿ.. ಲೋಕನಾಥ್ ಅಭಿನಯದ ಕೊನೆಯ ಚಿತ್ರವಿರಬೇಕು. 

    ಆಗಸ್ಟ್ 8, 1929, ಲೋಕನಾಥ್ ಅವರ ಜನ್ಮದಿನ. ಸ್ವಾತಂತ್ರ್ಯ ಹೋರಾಟವನ್ನೂ ಕಣ್ಣಾರೆ ಕಂಡಿದ್ದ ಲೋಕನಾಥ್, ಚಿತ್ರರಂಗವನ್ನು ಬಿಟ್ಟು ಅಗಲಿದ್ದಾರೆ.

  • ಅಚ್ಚಕನ್ನಡದ ನಿರೂಪಕ ಚಂದನ್ ಅಪಘಾತದಲ್ಲಿ ಸಾವು

     anchor chandan dies in accident

    ಚಂದನ್ ಅಲಿಯಾಸ್ ಚಂದ್ರಶೇಖರ್. ಉದಯ ಟಿವಿ, ಉದಯ ಮ್ಯೂಸಿಕ್, ರಾಜ್ ಮ್ಯೂಸಿಕ್ ಸೇರಿದಂತೆ ಹಲವು ವಾಹಿನಿಗಳಲ್ಲಿ ಆ್ಯಂಕರ್ ಆಗಿದ್ದ ಚಂದನ್, ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ. ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿ ಸಂಭವಿಸಿದ ಅಪಘಾತದಲ್ಲಿ ಚಂದನ್ ಹಾಗೂ ಗಾಯಕಿ ಸಂತೋಷಿ ಮೃತಪಟ್ಟಿದ್ದಾರೆ. ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಚಂದನ್ ಹಾಗೂ ಸಂತೋಷಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಾಲಕ ಹಾಗೂ ಸುನೀತಾ ಎಂಬುವವರಿಗೆ ತೀವ್ರ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಬೈಲಹೊಂಗಲ ಬಳಿಯಲ್ಲಿ ಕಾರ್ಯಕ್ರಮವೊಂದರ ನಿರೂಪಣೆಗೆ ತೆರಳುತ್ತಿದ್ದ ಚಂದನ್ ಹಾಗೂ ಸಂತೋಷಿ,  ಹಿಂದಿನ ಸೀಟ್‍ನಲ್ಲಿ ಕುಳಿತಿದ್ದರು. ಕಾರ್‍ನ ಏರ್‍ಬ್ಯಾಗ್ ಓಪನ್ ಆಗಿದ್ದರಿಂದ ಚಾಲಕ ಹಾಗೂ ಮುಂದೆ ಕುಳಿತಿದ್ದ ಸುನೀತಾ ಪ್ರಾಣಾಪಾಯದಿಂದ ಪಾರಾದರು.

    ಅಚ್ಚಕನ್ನಡದಲ್ಲಿಯೇ ಮಾತನಾಡುತ್ತಿದ್ದ ಚಂದನ್, ತಮ್ಮ ನಿರೂಪಣೆಯಲ್ಲಿ ಎಲ್ಲಿಯೂ ಇಂಗ್ಲಿಷ್ ಬಳಸುತ್ತಿರಲಿಲ್ಲ. ಹೀಗಾಗಿಯೇ ಚಂದನ್ ಅಚ್ಚಕನ್ನಡದ ನಿರೂಪಕ ಎಂದೇ ಖ್ಯಾತರಾಗಿದ್ದರು.

     

  • ಅಣ್ಣ ಸತ್ತ ಒಂದು ವರ್ಷಕ್ಕೆ ಅಂಬಿ ನಿಧನ

    ambi dies on same day his elder brother passed away one year ago

    ಸರಿಯಾಗಿ ಒಂದು ವರ್ಷದ ಹಿಂದೆ.. 2017ರ ನವೆಂಬರ್ 24ರಂದು ಅಂಬರೀಷ್ ಅವರ ಅಣ್ಣ ಡಾ.ಹರೀಶ್ ನಿಧನರಾಗಿದ್ದರು. ಆಗ ಹರೀಶ್ ಅವರಿಗೆ 69 ವರ್ಷ ವಯಸ್ಸು. ದೊಡ್ಡರಸಿನಕೆರೆಯಲ್ಲೇ ಕ್ಲಿನಿಕ್ ಇಟ್ಟುಕೊಂಡು ಹಳ್ಳಿಯಲ್ಲಿಯೇ ವೈದ್ಯಸೇವೆ ಮಾಡುತ್ತಿದ್ದ ಹರೀಶಣ್ಣ ಎಂದರೆ ಅಂಬಿಗೆ ವಿಶೇಷ ಪ್ರೀತಿ. 

    ಈಗ ಸರಿಯಾಗಿ ಒಂದು ವರ್ಷದ ನಂತರ ಅದೇ ನವೆಂಬರ್ 24ರಂದು ಅಂಬಿ, ಅಣ್ಣನನ್ನು ಹಿಂಬಾಲಿಸಿದ್ದಾರೆ. ಇದಲ್ಲವೇ ಕಾಕತಾಳೀಯ.

  • ಅಣ್ಣಾವ್ರ ಪಕ್ಕದಲ್ಲೇ ಅಂಬಿ ಚಿರನಿದ್ರೆ

    ambi to be cremated next to dr raj samadhi

    ಡಾ.ರಾಜ್ಕುಮಾರ್ ಎಂದರೆ ಅಂಬರೀಷ್ಗೆ ಅಪಾರ ಗೌರವ. ಅಂಬಿ ಎಂದರೆ ರಾಜ್ಗೆ ವಿಶೇಷ ಪ್ರೀತಿ. ಆ ಪ್ರೀತಿಗೆ ಕಾರಣವೂ ಇತ್ತು. ಉಳಿದವರಂತೆ ಅಂಬರೀಷ್, ರಾಜ್ರನ್ನು ಭಯ ಭಕ್ತಿಯಿಂದ ಮಾತನಾಡಿಸುತ್ತಿರಲಿಲ್ಲ. ಒಬ್ಬ ಆತ್ಮೀಯ ಸ್ನೇಹಿತನನ್ನು ಮಾತನಾಡಿಸುವಷ್ಟೇ ಸಲೀಸಾಗಿ ಮಾತನಾಡಿಸುತ್ತಿದ್ದರು. ಹೀಗಾಗಿಯೇ ನನಗೆ ಅಂಬಿ  ಅಂದ್ರೆ ವಿಶೇಷ ಪ್ರೀತಿ ಎಂದು ಹಲವು ಬಾರಿ ಹೇಳಿಕೊಂಡಿದ್ದರು ಡಾ.ರಾಜ್.

    ಈಗ ಅಣ್ಣಾವ್ರ ಸ್ಮಾರಕ ಇರುವ ಕಂಠೀರವ ಸ್ಟುಡಿಯೋದಲ್ಲಿಯೇ ಅಂಬರೀಷ್ ಅವರ ಅಂತ್ಯ ಸಂಸ್ಕಾರ ಮಾಡಲು ಸರ್ಕಾರ ನಿರ್ಧರಿಸಿದೆ. ಸ್ಟುಡಿಯೋದ ಎಡಭಾಗದಲ್ಲಿ ರಾಜ್ ಸಮಾಧಿ, ಬಲಭಾಗದಲ್ಲಿರುವ ಒಂದೂವರೆ ಎಕರೆ ಭೂಮಿಯಲ್ಲಿ ಅಂಬರೀಷ್ ಅವರ ಸ್ಮಾರಕ ಮಾಡಲಾಗುವುದು ಎಂದು ಸಿಎಂ ಕುಮಾರಸ್ವಾಮಿ ತಿಳಿಸಿದ್ದಾರೆ.

    ಒಡಹುಟ್ಟಿದವರು ಸಿನಿಮಾ ಮಾಡೋಕೆ ಮುಂದಾದಾಗ, ನನ್ನ ಅಶಿಸ್ತು ರಾಜ್ರ ಬದ್ಧತೆಗೆ ಸಮಸ್ಯೆಯಾಗಬಾರದು ಎಂದು ಹಿಂದೇಟು ಹಾಕಿದ್ದರು ಅಂಬಿ. ನೀನು ಯಾವಾಗ ಬೇಕಾದರೂ ಬಾ ಎಂದು ಪ್ರೀತಿಯಿಂದ ಒಪ್ಪಿಸಿದ್ದರು ಡಾ.ರಾಜ್. ರಾಜ್ ಮೇಲೆ ಕೈ ಎತ್ತುವ ಸೀನ್ ಇದ್ದರೆ ಮಾಡಲ್ಲ ಎಂದು ಅಂಬಿ ಮತ್ತೊಮ್ಮೆ ಹಠ ಹಿಡಿದಾಗ, ಚಿತ್ರಕಥೆಯನ್ನು ತಿದ್ದಲಾಗಿತ್ತು. ಚಿತ್ರ ರಿಲೀಸ್ ವೇಳೆ ಹಾಕುವ ಕಟೌಟ್ ಯಾವುದೇ ಕಾರಣಕ್ಕೂ ನನ್ನ ಕಟೌಟ್ಗಿಂತ ಕಡಿಮೆ ಇರಬಾರದು ಎಂದು ಕಂಡೀಷನ್ ಹಾಕಿದ್ದರು ಡಾ.ರಾಜ್. ಈಗ ಇಬ್ಬರೂ ಒಂದೇ ಜಾಗದಲ್ಲಿ.. ಚಿರನಿದ್ರೆಯಲ್ಲಿ..

  • ಅತಿಲೋಕ ಸುಂದರಿಯ ಅಂತಿಮ ಯಾತ್ರೆ

    sridevi;s body cremated

    ಅತಿಲೋಕ ಸುಂದರಿ ಶ್ರೀದೇವಿಯ ಇಹಲೋಕ ಯಾತ್ರೆ ಮುಗಿಸಿದ್ದಾರೆ. ಭಾನುವಾರ ದುಬೈನಲ್ಲಿ ಮೃತಪಟ್ಟಿದ್ದ ಶ್ರೀದೇವಿ ಅವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ, ಮುಂಬೈನಲ್ಲಿ ನೆರವೇರಿತು. ವಿಲೆ ಪಾರ್ವೆ ಸೇವಾ ನಮಾಜ್ ಚಿತಾಗಾರದಲ್ಲಿ ಶ್ರೀದೇವಿ ಅವರನ್ನು ಅಯ್ಯಂಗಾರ್ ಸಂಪ್ರದಾಯಂತೆ ಸಂಸ್ಕಾರ ಮಾಡಲಾಯಿತು.

    ತಮಿಳುನಾಡಿನವರಾದ ಶ್ರೀದೇವಿಯರಿಗೆ ಕಾಂಜೀವರಂ ರೇಷ್ಮೆ ಸೀರೆ ತೊಡಿಸಿ, ಮೋಹನ ಮಾಲೆ, ಕುಂಕುಮವಿಟ್ಟು, ಮಲ್ಲಿಗೆ ಹೂ ಮುಡಿಸಿ, ಮಾಂಗಲ್ಯದೊಂದಿಗೇ ಸಂಸ್ಕಾರ ನೆರವೇರಿಸಲಾಯಿತು. ಬದುಕಿದ್ದಾಗ ಹೇಗಿದ್ದರೋ, ಅದೇ ರೀತಿ ಅವರ ಪಾರ್ಥಿವ ಶರೀರಕ್ಕೂ ಅಲಂಕಾರ ಮಾಡಲಾಗಿತ್ತು.

    ಪಾರ್ಥಿವ ಶರೀರಕ್ಕೆ ರಸ್ತೆಯ ಇಕ್ಕೆಲಗಳಲ್ಲೂ ಸೇರಿದ್ದ ಜನಸ್ತೋಮ, ನಟಿಯ ಅಂತಿಮ ದರ್ಶನ ಪಡೆಯಿತು. ಬಾಲಿವುಡ್‍ಗೆ ಬಾಲಿವುಡ್ಡೇ ಶ್ರೀದೇವಿಯ ಅಂತಿಮಯಾತ್ರೆಯಲ್ಲಿ ಭಾಗವಹಿಸಿ, ಅಗಲಿದ ಕಲಾವಿದೆಗೆ ಆಶ್ರುತರ್ಪಣ ಸಲ್ಲಿಸಿತು.

    ಪದ್ಮಶ್ರೀ ಪುರಸ್ಕøತ ಕಲಾವಿದೆ, ಸರ್ಕಾರಿ ಗೌರವದೊಂದಿಗೆ ಅಂತಿಮ ಸಂಸ್ಕಾರಗಳು ನಡೆದವು. ಪತಿ ಬೋನಿ ಕಪೂರ್, 2ನೇ ಪತ್ನಿಯ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.

  • ಅಂಬಿ ಬೈತಿದ್ರೇನೇ ಚೆಂದ ಚೆಂದ.. ಇಲ್ಲಾಂದ್ರೆ.

    ambi's sweet scoldings was his trade mark

    ಅಂಬರೀಷ್ : ಹಲೋ.. ಯಾರು ಬೇಕಾಗಿತ್ತು..ಅತ್ತ ಕಡೆಯಿಂದ.. ಮಂಡ್ಯದ ಅಭಿಮಾನಿ : ಅಂಬ್ರೀಸಣ್ಣ ಬೇಕಿತ್ತು. ವಸಿ ಅವ್ರಿಗೆ ಫೋನ್ ಕೊಡ್ರಣ್ಣೋ..

    ಅಂಬರೀಷ್ : ನಾನೇ ಹೇಳಪ್ಪ..

    ಅತ್ತ ಕಡೆಯಿಂದ.. ಮಂಡ್ಯದ ಅಭಿಮಾನಿ : ಯ್ಯೋವ್.. ಬುಡ್ರಿ.. ಅಂಬ್ರೀಸಣ್ಣುಂಗ್ ಫೋನ್ ಕೊಡ್ರಿ..

    ಅಂಬರೀಷ್ : ಇಲ್ಲ ಕಣಪ್ಪ.. ನಾನೇ ಅಂಬರೀಷ್. ಏನಾಗ್ಬೇಕಿತ್ತು ಹೇಳು..

    ಅತ್ತ ಕಡೆಯಿಂದ.. ಮಂಡ್ಯದ ಅಭಿಮಾನಿ : ಸ್ಸಾ.. ಬುಡಿ ಸಾ.. ನಮ್ ಅಂಬ್ರೀಸಣ್ಣ ನಮಿಗ್ ಗೊತ್ತಿಲ್ವಾ.. ಫೋನ್ ಅಂಬ್ರೀಸಣ್ಣುಂಗ್ ಕೊಡಣ್ಣೋ..

    ಅಂಬರೀಷ್ : ಹೇಳೋ.. ಬೋ.. ಮಗ್ನೇ.. ನಾನೇ ಅಂಬರೀಷ್ ಅಂದ್ರೂ ಮಾತಾಡಕ್ ಏನ್ಲಾ ಪ್ರಾಬ್ಲಮ್ಮು ನಿಂಗೆ.. ನನ್ ಮಗ್ನೇ ಏನಾಗ್ಬೇಕಿತ್ಲಾ..

    ಅತ್ತ ಕಡೆಯಿಂದ.. ಮಂಡ್ಯದ ಅಭಿಮಾನಿ : ನಮ್ಸ್ಕಾರ ಕಣಣ್ಣೋ.. ನೀವ್ ಯಿಂಗ್ ಮಾತಾಡಿರೆಯಾ ಅಂಬ್ರೀಸಣ್ಣ ಅಂತಾ ಗೊತ್ತಾಗದು. 

    ಹೌದು.. ಬೈಗುಳ ಅಂಬರೀಷ್ ಟ್ರೇಡ್ಮಾರ್ಕ್. ನಿಮಗೆ ಅಚ್ಚರಿಯಾಗಬಹುದು. ಅಂಬರೀಷ್ ಅವರು ತಮ್ಮ ಅಭಿಮಾನಿಗಳನ್ನು ಬೈದಷ್ಟು ಯಾವುದೇ ನಟ ತಮ್ಮ ಅಭಿಮಾನಿಗಳನ್ನು ಬೈದಿಲ್ಲ. ಪತ್ರಕರ್ತರ ಮಾತು ಬಿಡಿ.. ಏಕವಚನವೇ ಮಹಾಪ್ರಸಾದ. ಆದರೆ.. ಯಾರೊಬ್ಬರೂ ಅದಕ್ಕೆ ಬೇಸರ ಪಟ್ಟುಕೊಳ್ಳುತ್ತಿರಲಿಲ್ಲ. ಪ್ರತಿಯೊಬ್ಬರಿಗೂ ಅದೊಂದು ವಿಷಯ ಸ್ಪಷ್ಟವಾಗಿ ಗೊತ್ತಿರುತ್ತಿತ್ತು. ಅಂಬಿ ಹೃದಯದಲ್ಲಿ ಕಲ್ಮಷಕ್ಕೆ ಜಾಗವಿಲ್ಲ ಅನ್ನೋದು ಗೊತ್ತಾಗಿ ಹೋಗಿತ್ತು. ಬೈದರೂ.. ಮುದ್ದಿಸಿದರೂ.. ಹೊಟ್ಟೆ ತುಂಬಾ ಊಟ ಬಡಿಸಿದರೂ.. ಕಷ್ಟಕ್ಕೆ ನೆರವಾದರೂ.. ಅಲ್ಲಿ ಪ್ರೀತಿ ಇದ್ದೇ ಇರುತ್ತಿತ್ತು. ಎಲ್ಲರನ್ನೂ ಪ್ರೀತಿಸುವುದು ಅಂಬರೀಷ್ರ ಶಕ್ತಿಯಾಗಿತ್ತು. 

    ಅಂದಹಾಗೆ ನೀವು ಮೇಲೆ ಓದಿದ್ದು ಕಾಲ್ಪನಿಕ ಘಟನೆಯೇನೂ ಅಲ್ಲ. ಅಂಬರೀಷ್ ಮಂತ್ರಿಯಾಗಿದ್ದಾಗ, ಅವರ ಗೆಳೆಯ ವಿಷ್ಣು.. ಇನ್ನಾದರೂ ಜನರ ಜೊತೆ ನೆಟ್ಟಗೆ ಮಾತಾಡು. ಸಭ್ಯತೆ, ಸಜ್ಜನಿಕೆಯಿರಲಿ ಎಂದಿದ್ದರಂತೆ. ಗೆಳೆಯನ ಮಾತಿಗೆ ಓಕೆ ಎಂದಿದ್ದ ಅಂಬಿ, ಅದೇ ವೇಳೆ ತಮಗೆ ಕರೆ ಮಾಡಿದ ಅಭಿಮಾನಿಯ ಜೊತೆ ಮಾತನಾಡಿದ್ದಾಗ ನಡೆದಿದ್ದ ಘಟನೆ ಇದು. 

    ನಿನ್ ತರಾನೇ ನಿನ್ ಫ್ಯಾನ್ಸೂ ಒರಟು.. ಎಂದು ನಕ್ಕಿದ್ದರಂತೆ ವಿಷ್ಣು

  • ಅರ್ಧಕ್ಕೇ ನಿಂತಿರುವ ಚಿರು ಚಿತ್ರಗಳ ಕಥೆ ಏನು..?

    chiranjeevi sarja's upcoming movies

    ಚಿರಂಜೀವಿ ಸರ್ಜಾ ಫುಲ್ ಬ್ಯುಸಿಯಿದ್ದರು. ಬಹುಶಃ ಲಾಕ್ ಡೌನ್ ಸಮಯದಲ್ಲಿ ಮಾತ್ರವೇ ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆದಿದ್ದರು ಎನಿಸುತ್ತದೆ. ಅಷ್ಟರಮಟ್ಟಿಗೆ ಬ್ಯುಸಿಯಿದ್ದರು. ಈ ವರ್ಷವನ್ನೇ ತೆಗೆದುಕೊಂಡರೆ, ಲಾಕ್ ಡೌನ್ ಆಗುವುದಕ್ಕೂ ಮುನ್ನ ಚಿರು ಅಭಿನಯದ 4 ಚಿತ್ರಗಳು ರಿಲೀಸ್ ಆಗಿದ್ದವು. ಸಿಂಗ, ಆದ್ಯ, ಶಿವಾರ್ಜುನ, ಖಾಕಿ ಚಿತ್ರಗಳು ರಿಲೀಸ್ ಆಗಿದ್ದವು. ಇನ್ನೂ ಹಲವು ಚಿತ್ರಗಳು ನಿರ್ಮಾಣದ ವಿವಿಧ ಹಂತದಲ್ಲಿದ್ದವು.

    ರಾಜಮಾರ್ತಾಂಡ : ಇದು ರಾಮ್ ನಾರಾಯಣ್ ನಿರ್ದೇಶನದ ಸಿನಿಮಾ. ಚಿತ್ರೀಕರಣ ಮುಗಿದಿತ್ತು. ಪೋಸ್ಟ್ ಪ್ರೊಡಕ್ಷನ್ ಕೆಲಸವೂ ಶೇ.90ರಷ್ಟು ಮುಗಿದಿತ್ತು. ಒಂದು ಹಾಡಿನ ಚಿತ್ರೀಕರಣ ಬಾಕಿಯಿತ್ತು. ಈಗ ಆ ಹಾಡು ಇಲ್ಲದೆಯೇ ಸಿನಿಮಾ ರಿಲೀಸ್ ಆಗಬಹುದು.

    ಕ್ಷತ್ರಿಯ : ಇದು ಹೊಸ ನಿರ್ದೇಶಕ ಅನಿಲ್ ಮಂಡ್ಯ ನಿರ್ದೇಶನದ ಸಿನಿಮಾ. ರಾಮ್ ನಾರಾಯಣ್ ಅವರಂತೆಯೇ ಇವರಿಗೂ ಅವಕಾಶ ಕೊಡಿಸಿದ್ದವರು ಸ್ವತಃ ಚಿರಂಜೀವಿ ಸರ್ಜಾ. 30 ದಿನಗಳ ಶೂಟಿಂಗ್ ಮುಗಿದಿತ್ತು. ಮುಂದೇನು ಅನ್ನೋದು ಇನ್ನೂ ನಿರ್ಧಾರವಾಗಿಲ್ಲ.

    ಏಪ್ರಿಲ್ : ಹೆಚ್ಚೂ ಕಡಿಮೆ ನಿಂತೇ ಹೋಗಿದ್ದ ಸಿನಿಮಾ ಅದು. ಚಿರುಗೆ ಕಥೆ ಇಷ್ಟವಾಗಿ ಹಾಲಿವುಡ್ ಸ್ಟೈಲ್‍ನಲ್ಲಿದೆ. ಬ್ರೇಕ್ ಕೊಡುತ್ತೆ. ಮಾಡೋಣ ಎಂದು ತಂಡವನ್ನು ಹುರಿದುಂಬಿಸಿ ಹೊರಟಿದ್ದರು. ರಚಿತಾ ರಾಮ್ ನಾಯಕಿಯಾಗಿದ್ದ ಚಿತ್ರಕ್ಕೆ ಮುಹೂರ್ತವೂ ನೆರವೇರಿತ್ತು. ಚಿರು ಪಾತ್ರದ ಶೂಟಿಂಗ್ ಶುರು ಮಾಡುವ ಹೊತ್ತಿಗೆ ಲಾಕ್ ಡೌನ್ ಬಂತು. ಈಗ ಚಿರು ಜಾಗಕ್ಕೆ ಯಾರು ಸೂಟ್ ಆಗುತ್ತಾರೆ ಎಂದು ನಿರ್ದೇಶಕ ಸತ್ಯ ರಾಯಲ ತಲೆ ಕೆಡಿಸಿಕೊಂಡಿದ್ದಾರೆ. ಏಕೆಂದರೆ ಅವರಿಗೆ ಚಿರು ಸ್ಥಾನದಲ್ಲಿ ಇನ್ನೊಬ್ಬರನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ.

    ಧೀರಂ : ಈ ಚಿತ್ರದ ಕಥೆಯನ್ನು ಲಾಕ್ ಡೌನ್ ಸಮಯದಲ್ಲಿ ಕೇಳಿ ಇಷ್ಟಪಟ್ಟಿದ್ದರು ಚಿರು. ರಮೇಶ್ ಬಾಬು ನಿರ್ದೇಶನದ ಈ ಚಿತ್ರ ನಿಲ್ಲಬಹುದು ಅಥವಾ ಬೇರೊಬ್ಬರೊಂದಿಗೆ ಟೇಕಾಫ್ ಕೂಡಾ ಆಗಬಹುದು.

    ರಣಂ : ಇದು ಚಿರಂಜೀವಿ ಸರ್ಜಾ ಮತ್ತು ಆ ದಿನಗಳು ಚೇತನ್ ಒಟ್ಟಿಗೇ ನಟಿಸಿರುವ ಚಿತ್ರ. ಎಲ್ಲವೂ ಸಿದ್ಧವಾಗಿರುವ ಚಿತ್ರ, ಕೆಲವೇ ದಿನಗಳಲ್ಲಿ ರಿಲೀಸ್ ಆಗುವ ಸಾಧ್ಯತೆಗಳಿವೆ.

  • ಎರಡು ಹಾಡು.. ಬೀದರ್‍ನಲ್ಲಿ ತಂದೆ ಹೆಸರಲ್ಲಿ ಕಾಲೇಜು.. ಲತಾ ಮಂಗೇಶ್ಕರ್ ಕನ್ನಡ ನಂಟು

    ಎರಡು ಹಾಡು.. ಬೀದರ್‍ನಲ್ಲಿ ತಂದೆ ಹೆಸರಲ್ಲಿ ಕಾಲೇಜು.. ಲತಾ ಮಂಗೇಶ್ಕರ್ ಕನ್ನಡ ನಂಟು

    ಸಾಮಾನ್ಯವಾಗಿ ಲತಾ ಮಂಗೇಶ್ಕರ್ ಕನ್ನಡದ ಹಾಡು ಎಂದರೆ ಎಲ್ಲರೂ ನೆನಪಿಸಿಕೊಳ್ಳೋದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಚಿತ್ರದ ಬೆಳ್ಳನೆ ಬೆಳಗಾಯಿತು ಹಾಡನ್ನು ಮಾತ್ರ. ಆದರೆ ಅದೇ ಚಿತ್ರದಲ್ಲಿ ಇನ್ನೂ ಒಂದು ಹಾಡಿದೆ. ಎಲ್ಲಾರೆ ಇರುತೀರೋ ಎಂದಾರೆ ಬರುತೀರೋ.. ಹಾಡು. ಅದು 1966ರಲ್ಲಿ ಬಂದ ಸಿನಿಮಾ. ಆ ಚಿತ್ರಕ್ಕೆ ನಿರ್ದೇಶನ ಮಾಡಿದ್ದವರ ಹೆಸರು ಬಿ.ಟಿ.ಅಥಣಿ ಗುರು ಬಾಳ. ಲಕ್ಷ್ಮಣ್ ಬರ್ಲೇಕರ್ ಎಂಬುವವರು ಸಂಗೀತ ನೀಡಿದ್ದರೆ ಭುಜೇಂದ್ರ ಮಹಿಶವಾಡಿ ಎಂಬುವವರು ಸಾಹಿತ್ಯ ಬರೆದಿದ್ದರು. ಬೆಳ್ಳನೆ ಬೆಳಗಾಯಿತು ಹಾಡು ಹಿಟ್ ಆಗಿತ್ತು. ಕನ್ನಡಿಗರಿಗೆ ಬೆಳಗಿನ ಸುಪ್ರಭಾತವಾಗಿತ್ತು.

    ಅದು ಸ್ವಾತಂತ್ರ್ಯ ಹೋರಾಟಗಾರರ ಚಿತ್ರ. ಆ ಚಿತ್ರದಲ್ಲಿ ಲತಾ ಅವರ ಸೋದರಿಯರಾದ ಆಶೋ ಭೋಂಸ್ಲೆ ಹಾಗೂ ಉಷಾ ಮಂಗೇಶ್ಕರ್ ಕೂಡಾ ಹಾಡಿದ್ದರು. ದೇಶಾಭಿಮಾನ ಸಾರುವ ಚಿತ್ರ ಎಂದು ಗೊತ್ತಾದ ಮೇಲೆ ಸಂಭಾವನೆ ಪಡೆಯಲಿಲ್ಲ ಲತಾ.

    ಅದಾದ ಮೇಲೆ ಲತಾ ಅವರನ್ನು ಕನ್ನಡಕ್ಕೆ ತರುವಲ್ಲಿ ಯಾರೊಬ್ಬರೂ ಯಶಸ್ಸು ಕಾಣಲಿಲ್ಲ. ಕೆಲವರು ನಾವು ಕರೆತರುತ್ತೇವೆ ಎಂದು ಹೊರಟು ಪ್ರಚಾರ ಪಡೆದುಕೊಂಡರಾದರು ಕರೆದು ತರಲಿಲ್ಲ.

    ಅಂದಹಾಗೆ ಬೀದರ್ ಸಮೀಪದ ಹುಲಸೂರು ತಾಲೂಕಿನ ಸಮೀಪದಲ್ಲಿರೋ ಶಹಾಜನಿ ಔರಾದ್ ಎಂಬಲ್ಲಿ ಲತಾ ಮಂಗೇಶ್ಕರ್ ಅವರ ತಂದೆ ದೀನನಾಥ್ ಮಂಗೇಶ್ಕರ್ ಹೆಸರಲ್ಲಿ ಒಂದು ಮೆಡಿಕಲ್ ಕಾಲೇಜು ಇದೆ. ಹುಲಸೂರಿನಿಂದ ಸುಮಾರು 10 ಕಿ.ಮೀ. ದೂರದ ಪ್ರದೇಶವದು. ಅಲ್ಲಿರುವುದು ಬಹುತೇಕ ಕನ್ನಡಿಗರೇ. ಆ ಆಸ್ಪತ್ರೆಗೆ ಲತಾ ಆಗಾಗ್ಗೆ ಭೇಟಿ ನೀಡುತ್ತಿದ್ದರು.

    ಮತ್ತೊಂದು ಅದೇ ಬೀದರ್‍ನ ಮಾಣಿಕಪ್ರಭು ಸಂಸ್ಥಾನದ ಜೊತೆ ಇದೆ. ಹುಮ್ನಾಬಾದ್ ತಾಲೂಕಿನ ಮಾಣಿಕನಗರದಲ್ಲಿರೋ ಮಾಣಿಕಪ್ರಭು ಸಂಸ್ಥಾನಕ್ಕೆ ಲತಾ ಅವರ ತಂದೆ ಭಕ್ತರಾಗಿದ್ದರು. ಸಂಸ್ಥಾನದ 5ನೇ ಪೀಠಾಧಿಪತಿ ಸಿದ್ಧರಾಜ ಪ್ರಭು ಲತಾ ಅವರ ತಂದೆಯ ಆಧ್ಯಾತ್ಮಿಕ ಗುರುಗಳು. ಲತಾ ಅವರು ತಂದೆಯನ್ನು ತಮ್ಮ 13ನೇ ವಯಸ್ಸಿಗೇ ಕಳೆದುಕೊಂಡರು ಸಂಸ್ಥಾನದ ಜೊತೆ ನಂಟನ್ನು ಉಳಿಸಿಕೊಂಡಿದ್ದರು. ಮಠಕ್ಕೆ ಆಗಾಗ್ಗೆ ಸೋದರಿಯರ ಜೊತೆ ಬರುತ್ತಿದ್ದ ಲತಾ, ಮಠದ ಕಾರ್ಯಕ್ರಮಗಳಿಗೆ ಮಿಸ್ ಮಾಡುತ್ತಿರಲಿಲ್ಲ. ತಮ್ಮ ಮನೆಯ ಹೆಸರನ್ನು ಪ್ರಭುಕುಂಜ ಎಂದು ಬರೆಸಲೂ ಕೂಡಾ ಈ ಮಠವೇ ಕಾರಣ.

  • ಕರುನಾಡಿಗೆ ಆಘಾತ : ಅಪ್ಪು ಇನ್ನಿಲ್ಲ

    ಕರುನಾಡಿಗೆ ಆಘಾತ : ಅಪ್ಪು ಇನ್ನಿಲ್ಲ

    ಕರ್ನಾಟಕದ ಮನೆ ಮನೆಗೂ ಮಗನಂತಿದ್ದ ನಟ ಪುನೀತ್ ರಾಜ್ಕುಮಾರ್ ವಿಧಿವಶರಾಗಿದ್ದಾರೆ. ಶುಕ್ರವಾರ ಬೆಳಗ್ಗೆ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾರೆ. ಪುನೀತ್ ಅವರನ್ನು ಆಸ್ಪತ್ರೆಗೆ ಕರೆತರುವ ವೇಳೆಗಾಗಲೇ ವಿಧಿ ತನ್ನ ಆಟ ಮುಗಿಸಿತ್ತು. ಪುನೀತ್ ರಾಜ್ಕುಮಾರ್ ಇನ್ನಿಲ್ಲ. 

    ಭಾನುವಾರ ಅಂತ್ಯಕ್ರಿಯೆ ನೆರವೇರಲಿದೆ. ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಪುನೀತ್ ಅವರ ಪುತ್ರಿ ನ್ಯೂಯಾರ್ಕ್ನಲ್ಲಿದ್ದು, ಅವರು ಬಂದ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳು ನೆರವೇರಲಿವೆ.

  • ಕವಿರತ್ನ ಕಾಳಿದಾಸ ನಿರ್ದೇಶಕ ರೇಣುಕಾಶರ್ಮ ಕೋವಿಡ್'ಗೆ ಬಲಿ

    meet the prime suspect behind bangalore drug mafia

    ಕೋವಿಡ್ ಕನ್ನಡ ಚಿತ್ರರಂಗದ ಮತ್ತೊಂದು ಹಿರಿಯ ಜೀವವನ್ನು ಬಲಿ ತೆಗೆದುಕೊಂಡಿದೆ. ಕನ್ನಡದ ಐತಿಹಾಸಿಕ ಮತ್ತು ಹಲವಾರು ಕ್ಲಾಸಿಕ್ ಚಿತ್ರಗಳನ್ನು ನಿರ್ದೇಶಿಸಿದ್ದ ರೇಣುಕಾಶರ್ಮ ಕೋವಿಡ್‍ನಿಂದಾಗಿ ಮೃತಪಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ಕೋವಿಡ್‍ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ರೇಣುಕಾಶರ್ಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

    ಲೋ ಬಿಪಿಯಿದ್ದ ಕಾರಣದಿಂದಾಗಿ ತೀವ್ರ ಉಸಿರಾಟದ ತೊಂದರೆಗೂ ತುತ್ತಾಗಿದ್ದರು ರೇಣುಕಾಶರ್ಮ. ಹೀಗಾಗಿಯೇ ಕೊರೊನಾ ಪಾಸಿಟಿವ್ ಬಂದ ನಂತರ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. 2008ರಲ್ಲಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಪಾತ್ರರಾಗಿದ್ದ ರೇಣುಕಾಶರ್ಮ ಇನ್ನು ನೆನಪು ಮಾತ್ರ.

    ಅನುಪಮ ಚಿತ್ರದ ಮೂಲಕ ನಿರ್ದೇಶಕರಾದ ರೇಣುಕಾಶರ್ಮ, ಕವಿರತ್ನ ಕಾಳಿದಾಸ, ಶಬರಿಮಲೆ ಸ್ವಾಮಿ ಅಯ್ಯಪ್ಪ, ಅಂಜದಗಂಡು, ಕಿಂದರಿಜೋಗಿ, ಕೊಲ್ಲೂರು ಶ್ರೀಮೂಕಾಂಬಿಕಾ, ಮಹಾಸಾಧ್ವಿ ಮಲ್ಲಮ್ಮ, ಹಠಮಾರಿ ಹೆಣ್ಣು ಕಿಲಾಡಿ ಗಂಡು, ಸತ್ಕಾರ, ಶಭಾಶ್ ವಿಕ್ರಂ.. ಹೀಗೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದರು

  • ಕೊಡುಗೈ ಕರ್ಣ ಅಂಬರೀಷ್ ಕಥೆಗಳು

    ambareesh the kaliyugadha karna

    ಅಂಬರೀಷ್ರನ್ನು ಕಲಿಯುಗ ಕರ್ಣ ಎನ್ನುತ್ತಾರೆ. ತಾಯಿಗೊಬ್ಬ ಕರ್ಣ ಸಿನಿಮಾ ಮಾಡಿದ್ದಕ್ಕೆ ಆ ಹೆಸರು ಬಂದಿದೆ ಎಂದುಕೊಂಡಿದ್ದರೆ, ಅದು ತಪ್ಪು. ಅಂಬರೀಷ್ ಇದ್ದುದೇ ಹಾಗೆ. ಅವರಿಂದ ನೆರವು ಪಡೆದವರ ಸಂಖ್ಯೆ ಅಸಂಖ್ಯ. ತಾವು ಮಾಡಿದ ಯಾವುದೇ ನೆರವನ್ನು ಅವರು ಹೊರಗೆ ಹೇಳಿಕೊಂಡವರಲ್ಲ. ಸಹಾಯ ಪಡೆದವರ ಸ್ವಾಭಿಮಾನಕ್ಕೆ ಘಾಸಿಯಾಗಬಾರದು ಎನ್ನುವುದು ಅವರು ಇಟ್ಟುಕೊಂಡಿದ್ದ ನಂಬಿಕೆ. ಸಹಾಯ ಪಡೆದವರೇ, ಬೆನ್ನಿಗೆ ಇರಿದಾಗಲೂ.. ಹೋಗ್ಲಿ ಬಿಡು ಎಂದಿದ್ದಾರೆ. ಬೆನ್ನಿಗೆ ಇರಿದವರೇ ಸಹಾಯ ಕೇಳಿದಾಗಲೂ ಥಟ್ಟನೆ ಎದ್ದು ನಿಂತು ನೆರವು ಕೊಟ್ಟಿದ್ದಾರೆ. ಅದು ಅಂಬರೀಷ್. ಮಾತಷ್ಟೇ ಒರಟು. ಮನಸು.. ಅಪ್ಪಟ ಮಂಡ್ಯದ ಸಕ್ಕರೆ.

    ಗುರುವಿನ ಎದುರು : ಮಸಣದ ಹೂವು ಸಿನಿಮಾ ನೋಡಿರುತ್ತೀರಿ. ಅದು ಅಂಬಿಯ ಗುರು ಪುಟ್ಟಣ್ಣನವರ ಕೊನೆಯ ಸಿನಿಮಾ. ಆ ಸಿನಿಮಾ ಮಾಡುವಾಗ ಅಂಬಿ ರೆಬಲ್ಸ್ಟಾರ್. ಯಶಸ್ಸಿನ ಉತ್ತುಂಗದಲ್ಲಿದ್ದ ದಿನಗಳು. ಆಗ ಪುಟ್ಟಣ್ನ, ಮಸಣದ ಹೂವು ಚಿತ್ರಕ್ಕೆ ಅಂಬಿಯವರನ್ನು ಕೇಳಿದರು. ಗುರುವಿಗೆ ಓಕೆ ಎಂದರು ಅಂಬಿ. ಪುಟ್ಟಣ್ಣ ಕಥೆ ಹೇಳೋಕೆ ಹೋದಾಗ.. ಗುರುಗಳೇ.. ನೀವು ಕಥೆ ಹೇಳಬೇಡಿ. ನೀವು ಯಾವ ಪಾತ್ರವನ್ನಾದರೂ ಕೊಡಿ. ಮಾಡೋಕೆ ನಾನು ರೆಡಿ ಎಂದಿದ್ದರು ಅಂಬಿ. ನಿಮಗೆ ನೆನಪಿರಲಿ.. ಆ ಚಿತ್ರದಲ್ಲಿ ಅಂಬರೀಷ್ ಪಿಂಪ್ ಪಾತ್ರ ಮಾಡಿದ್ದರು. ಸ್ಟಾರ್ಗಿರಿಯನ್ನು ಪಕ್ಕಕ್ಕಿಟ್ಟು, ಪೋಷಕ ನಟನಾಗಿ ನಟಿಸಿದ್ದರು. ಆ ಪಾತ್ರ ಅವರಿಗೆ ಪ್ರಶಸ್ತಿ ಕೊಡಿಸಿತ್ತು.

    ಪ್ರಭಾಕರ್ ಸಂಸ್ಕಾರದ ವೇಳೆ : ಟೈಗರ್ ಪ್ರಭಾಕರ್, ಬದುಕಿರುವ ಅಷ್ಟೂ ದಿನ ಟೈಗರ್ ಆಗಿಯೇ ಇದ್ದವರು. ಕೊನೆ ದಿನಗಳಲ್ಲಿ ದುಡ್ಡನ್ನೆಲ್ಲ ಕಳೆದುಕೊಂಡಿದ್ದರು. ಮಲ್ಯ ಆಸ್ಪತ್ರೆಯಲ್ಲಿ ನಿಧನರಾದಾಗ ಅವರ ಮೃತದೇಹವನ್ನು ಕೊಡಲು ನಿರಾಕರಿಸಿದ್ದರು. ಕಾರಣ, ಬಿಲ್ ಕಟ್ಟಿರಲಿಲ್ಲ. ವಿಷಯ ಗೊತ್ತಾಗಿದ್ದೇ ತಡ, ಆಸ್ಪತ್ರೆಯವರಿಗೆ ಫೋನ್ ಮಾಡಿ, ಬಿಲ್ ಎಷ್ಟಾದರೂ ಆಗಿರಲಿ. ಬಿಲ್ ನಾನು ಕಟ್ಟುತ್ತೇನೆ ಎಂದು ಹೇಳಿದ್ದರು ಅಂಬಿ. ಪ್ರಭಾಕರ್ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದ್ದರು.

    ಸುಧೀರ್ ಮನೆ ಅಂಬರೀಷ್ ನಿಲಯ : ಅದನ್ನು ಅಂಬಿ ಮುಚ್ಚಿಟ್ಟರೂ, ಸುಧೀರ್ ಮುಚ್ಚಿಡಲಿಲ್ಲ. ಕಷ್ಟದ ದಿನಗಳಲ್ಲಿ ಮನೆ ಕಟ್ಟಿಸಿಕೊಳ್ಳಲು ನೆರವಾಗಿದ್ದ ಗೆಳೆಯನ ನೆನಪಿಗಾಗಿ ಸುಧೀರ್, ತಮ್ಮ ಮನೆಗೆ ಅಂಬರೀಷ್ ನಿಲಯ ಎಂದೇ ಹೆಸರಿಟ್ಟಿದ್ದಾರೆ.

    ವಜ್ರಮುನಿಗೆ ಜೀವ ನೀಡಿದ್ದರು : ವಜ್ರಮುನಿ ನಿರ್ಮಾಪಕರಾಗಿ ಲಾಸ್ ಆಗಿದ್ದಾಗ, ಅವರಿಗೆ ಗಂಡಭೇರುಂಡ ಚಿತ್ರ ನಿರ್ಮಿಸು ಎಂದು ಹೇಳಿ, ಸಂಭಾವನೆ ತೆಗೆದುಕೊಳ್ಳದೇ ನಟಿಸಿದ್ದರು ಅಂಬಿ. ತಾವಷ್ಟೇ ಅಲ್ಲ, ಆ ಚಿತ್ರದಲ್ಲಿ ನಟಿಸಿದ್ದ ಶಂಕರ್ನಾಗ್, ಶ್ರೀನಾಥ್ರನ್ನೂ ಕಡಿಮೆ ಸಂಭಾವನೆಗೆ ಒಪ್ಪಿಸಿದ್ದರು. ಚಿತ್ರ ಯಶಸ್ವಿಯಾಗಿತ್ತು. ವಜ್ರಮುನಿ ಸಾಲಭಾದೆ ತೀರಿತ್ತು.

    ಇದೆಲ್ಲ ನೆನಪಾಗಿದ್ದು ಅಂತ್ಯ ಸಂಸ್ಕಾರದ ವೇಳೆ ಕಾಣಿಸಿಕೊಂಡ ಅಂಗವಿಕಲ ಯುವತಿಯೊಬ್ಬಳ ಮಾತಿನಿಂದ. ಆಕೆಗೆ ಅಂಬರೀಷ್, ಸಾಲ, ಜಾಗ ಎಲ್ಲವನ್ನೂ ಕೊಡಿಸಿ ಜೀವನಕ್ಕೆ ದಾರಿ ಕಲ್ಪಿಸಿದ್ದರು. ಅಂತಹ ಋಣಗಳನ್ನು ಅದೆಷ್ಟು ಜನರ ಮೇಲೆ ಹೊರಿಸಿ ಹೋಗಿದ್ದಾರೋ ಅಂಬಿ.

  • ಕೊರೊನಾ : ಶಂಖನಾದ ಅರವಿಂದ್ ವಿಧಿವಶ

    ಕೊರೊನಾ : ಶಂಖನಾದ ಅರವಿಂದ್ ವಿಧಿವಶ

    ಕನ್ನಡ ಚಿತ್ರರಂಗ ಕೊರೊನಾದಿಂದಾಗಿ ಮತ್ತೊಬ್ಬ ಪ್ರತಿಭಾನ್ವಿತ ಕಲಾವಿದನನ್ನು ಕಳೆದುಕೊಂಡಿದೆ. ಶಂಖನಾದ ಅರವಿಂದ್ ಕೊರೊನಾಗೆ ಬಲಿಯಾಗಿದ್ದಾರೆ. ಅರವಿಂದ್ ಅವರಿಗೆ 10 ದಿನಗಳ ಹಿಂದೆ ಕೊರೊನಾ ಪಾಸಿಟಿವ್ ಬಂದಿತ್ತು. 2 ದಿನಗಳ ಹಿಂದಷ್ಟೇ ವಿಕ್ಟೋರಿಯಾಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅರವಿಂದ್ ಮೃತಪಟ್ಟಿದ್ದಾರೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.

    ಶಂಖನಾದ ಚಿತ್ರದ ಮೂಲಕ ಅವರ ಹೆಸರಿನ ಜೊತೆಗೆ ಶಂಖನಾದವೂ ಸೇರಿಕೊಂಡಿತ್ತು. ಬೆಟ್ಟದ ಹೂ ಚಿತ್ರದ ಪಾತ್ರವೂ ಖ್ಯಾತವಾಗಿತ್ತು. ಗಪ್‍ಚುಪ್ ಎಂಬ ಸಿನಿಮಾವನ್ನೂ ನಿರ್ಮಾಣ ಮಾಡಿದ್ದ ಅರವಿಂದ್, ಮತ್ತೊಂದು ಚಿತ್ರದ ನಿರ್ಮಾಣದ ತಯಾರಿಯಲ್ಲಿದ್ದರು. ಕಾಶಿನಾಥ್ ಚಿತ್ರಗಳಲ್ಲಿ ಖಾಯಮ್ಮಾಗಿರುತ್ತಿದ್ದ ಅರವಿಂದ್ ಅಪರಿಚಿತ, ಆಗಂತುಕ.. ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಅವಕಾಶಗಳು ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಪಕ್ಕ ವಾದ್ಯ ನುಡಿಸುವ ಕೆಲಸ ಮಾಡುತ್ತಿದ್ದರು.

    ಅರವಿಂದ್ ನಟಿಸಿರುವ ಕೊನೆಯ ಚಿತ್ರ ಸಾರಾ. ನಟಿಸಬೇಕಿದ್ದ ಚಿತ್ರ ಜೇಮ್ಸ್. ಜೇಮ್ಸ್ ಚಿತ್ರದಲ್ಲಿನ ಅವರ ಪಾತ್ರದ ಚಿತ್ರೀಕರಣ ಇನ್ನೂ ಮುಗಿದಿರಲಿಲ್ಲ.

  • ಗಿಮಿಕ್ ನಿರ್ಮಾಪಕ ದೀಪಕ್ ಕೊರೊನಾದಿಂದ ವಿಧಿವಶ

    ಗಿಮಿಕ್ ನಿರ್ಮಾಪಕ ದೀಪಕ್ ಕೊರೊನಾದಿಂದ ವಿಧಿವಶ

    ಕೊರೊನಾದಿಂದಾಗಿ ಚಿತ್ರರಂಗ ಪ್ರತಿದಿನ ಸಾವುಗಳನ್ನು ನೋಡುತ್ತಲೇ ಇದೆ. ಈಗ ಗಿಮಿಕ್ ಚಿತ್ರ ನಿರ್ಮಿಸಿದ್ದ ದೀಪಕ್ ಸಾಮಿದೊರೈ ಕೂಡಾ ವಿಧಿವಶರಾಗಿದ್ದಾರೆ.

    2019ರಲ್ಲಿ ದೀಪಕ್ ಗಣೇಶ್ ಅವರ ಗಿಮಿಕ್ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಸಾಮಿ ಪಿಕ್ಚರ್ಸ್ ಮತ್ತು ಸೌಥ್ ಎಂಡ್ ಸ್ಟುಡಿಯೋಗಳಲ್ಲಿ ನಿರ್ಮಾಪಕ ಮತ್ತು ವಿತರಕರಾಗಿದ್ದರು. ದೀಪಕ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.