` jayanth kaikini, - chitraloka.com | Kannada Movie News, Reviews | Image

jayanth kaikini,

  • ಕಾಯ್ಕಿಣಿ ಕಥೆಗೆ ಕಾಸರವಳ್ಳಿ ನಿರ್ದೇಶನ 

    girish kasaravalli back to direction

    ಗಿರೀಶ್ ಕಾಸರವಳ್ಳಿ ಮತ್ತೆ ನಿರ್ದೇಶಕರಾಗುತ್ತಿದ್ದಾರೆ. 2012ರಲ್ಲಿ ಬಂದ ಕೂರ್ಮಾವತಾರ ಚಿತ್ರವೇ ಕೊನೆ, ಕಾಸರವಳ್ಳಿ ಮತ್ತೆ ಸಿನಿಮಾ ನಿರ್ದೇಶನ ಮಾಡಿರಲಿಲ್ಲ. 13 ರಾಷ್ಟ್ರಪ್ರಶಸ್ತಿ ಪಡೆದಿರುವ ಗಿರೀಶ್ ಕಾಸರವಳ್ಳಿ ಈಗ ಮತ್ತೆ ನಿರ್ದೇಶಕರಾಗುತ್ತಿದ್ದಾರೆ.

    ಜಯಂತ್ ಕಾಯ್ಕಿಣಿ ಬರೆದಿರುವ ಹಾಲಿನ ಮೀಸೆ ಕಥೆಯನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ ಗಿರೀಶ್. ಮನೆ ಕೆಲಸದ ಹುಡುಗನ ಕಥೆ ಇದು. ಚಿತ್ರಕ್ಕೆ ಇಲ್ಲಿರಲಾರೆ.. ಅಲ್ಲಿಗೆ ಹೋಗಲಾರೆ ಎಂದು ಟೈಟಲ್ ಇಡಲಾಗಿದೆ.

    ಶಿವಕುಮಾರ್ ಚಿತ್ರದ ನಿರ್ಮಾಪಕರಾಗಿದ್ದು, ಎಚ್.ಎಂ.ರಾಮಚಂದ್ರ ಛಾಯಾಗ್ರಹಣವಿರಲಿದೆ. ಮಳೆ ಸಂಪೂರ್ಣ ನಿಂತ ಮೇಲೆ ಚಿತ್ರೀಕರಣ ಶುರುವಾಗಲಿದೆ ಎಂದಿದ್ದಾರೆ ಕಾಸರವಳ್ಳಿ. ಚಿತ್ರದ ತಾರಾಬಳಗ ಸದ್ಯಕ್ಕೆ ಗುಟ್ಟಾಗಿಯೇ ಇದೆ.

  • ಕಾಯ್ಕಿಣಿ ಪುತ್ರನೂ ಸಾಹಿತಿ ಆಗಿಬಿಟ್ರು..!

    jayanth kaikini writes a song for popcorn monkey tiger

    ಕನ್ನಡದ ಮಧುರ ಪ್ರೇಮಗೀತೆಗಳಿಗೆ ಹೊಸದೊಂದು ಸ್ಪರ್ಶ ಕೊಟ್ಟವರು ಜಯಂತ್ ಕಾಯ್ಕಿಣಿ. ಈಗ ಅವರ ಪುತ್ರ ಋತ್ವಿಕ್ ಕೂಡಾ ಚಿತ್ರಸಾಹಿತಿಯಾಗಿದ್ದಾರೆ. ನಟನ ಮಗ ನಟನಾಗುವುದು, ನಿರ್ದೇಶಕರ ಮಕ್ಕಳು ನಿರ್ದೇಶಕರಾಗುವುದು, ರಾಜಕಾರಣಿಯ ಮಕ್ಕಳು ರಾಜಕಾರಣಿಯೇ ಆಗುವುದು, ಡಾಕ್ಟರ್ ಮಗ ಡಾಕ್ಟರ್, ಟೀಚರ್ ಮಗ ಟೀಚರ್ ಆಗುವುದು ಅಪರೂಪವೇನಲ್ಲ. ಆದರೆ, ಸಾಹಿತಿಯ ಮಗ ಸಾಹಿತಿಯಾಗುವುದು ಅಪರೂಪದಲ್ಲಿ ಅಪರೂಪ. ಆ ವಿಶಿಷ್ಟ ಸಾಧನೆ ಬರೆದಿರೋ ಋತ್ವಿಕ್ ಬರೆದಿರೋ ಹಾಡು ಮಾದೇಶ..

    ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಕ್ಕೆ ಋತ್ವಿಕ್ ಕಾಯ್ಕಿಣಿ ಬರೆದಿರುವ ಮಾದೇಶ ಹಾಡು ಮೋಡಿ ಮಾಡಿಬಿಟ್ಟಿದೆ. ಸೂರಿ ನಿರ್ದೇಶನ, ಚರಣ್ ರಾಜ್ ಸಂಗೀತ, ಸಂಚಿತ್ ಹೆಗ್ಡೆ ಧ್ವನಿಯಲ್ಲಿಮೆರಗು ಹೆಚ್ಚಿಸಿಕೊಂಡಿದೆ.

    ಅಂದಹಾಗೆ ಋತ್ವಿಕ್ ಕಾಯ್ಕಿಣಿ, ಅಮೆರಿಕದಲ್ಲಿ ಓದಿದವರು. ಆಟ್ರ್ಸ್ & ಟೆಕ್ನಾಲಜಿ ಪದವೀಧರ. ಸೌಂಡ್ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಎಕ್ಸ್‍ಪರ್ಟ್. ಈಗ ಚಿತ್ರರಂಗಕ್ಕೆ ಬಂದಿದ್ದಾರೆ. ಋತ್ವಿಕ್ ರಾಜ್ ಮತ್ತು ಹನುಮಾನ್ ಬರೆದ ಹಾಡು ಈಗ ಚಿತ್ರಕ್ಕೆ ಹೊಸ ರೂಪ ಕೊಟ್ಟಿದೆ.

    ಇದು ಪ್ಲಾನ್ ಪ್ರಕಾರ ಆಗಿದ್ದಲ್ಲ. ನಮಗೆ ಚಿತ್ರದಲ್ಲಿ ಹಾಡು ಹಾಕುವ ಯೋಚನೆಯೇ ಇರಲಿಲ್ಲ. ಆದರೆ, ಈ ಹುಡುಗರು ಚಿತ್ರದ ಶೂಟಿಂಗ್ ಮತ್ತು ದೃಶ್ಯಗಳನ್ನು ನೋಡಿಕೊಂಡು ಹಾಡು ಕೊಟ್ಟಿದ್ದಾರೆ. ಹೀಗಾಗಿಯೇ ಇದು ಸ್ಪೆಷಲ್ ಎಂದಿದ್ದಾರೆ ಸೂರಿ.

  • ಕಾಯ್ಕಿಣಿ ಸಾಹಿತ್ಯಕ್ಕೆ ನಿಮ್ಮ ಸಾಹಿತ್ಯ ಬರೆಯಿರಿ. ಬಹುಮಾನ ಗೆಲ್ಲಿ

    jayanth kaikini's competition

    ಜಯಂತ್ ಕಾಯ್ಕಿಣಿ ಸಾಹಿತ್ಯಕ್ಕೆ ನಮ್ಮ ಸಾಹಿತ್ಯ ಬರೆಯೋದಾ..? ಅದೇನು ಸುಮ್ಮನೆ ಮಾತಾ..? ಅವರ ಅಕ್ಷರಗಳ ಮೋಡಿಗೆ ನಮ್ಮ ಅಕ್ಷರ ಜೋಡಿಸೋದು ಅಂದ್ರೆ ಹೇಗೆ..? ಅದೆಲ್ಲ ಚಿಂತೆ ಪಕ್ಕಕ್ಕಿಡಿ. ಈ ಸ್ಪರ್ಧೆಯಲ್ಲಿ ನೀವು ಗೆದ್ದರೆ ನಿಮಗೆ ಬಹುಮಾನ ಕೊಡೋದು ಬೇರೆ ಯಾರೋ ಅಲ್ಲ, ಸ್ವತಃ ಜಯಂತ ಕಾಯ್ಕಿಣಿ.

    ಇದು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಚಿತ್ರತಂಡದ ಸ್ಪರ್ಧೆ. ನಿಮಗೆ ಟಿ.ಆರ್. ಚಂದ್ರಶೇಖರ್ ಗೊತ್ತಲ್ಲ.. ಚಮಕ್, ಅಯೋಗ್ಯ, ಬೀರ್‍ಬಲ್ ಚಿತ್ರಗಳ ನಿರ್ಮಾಪಕ. ಅವರು ಈಗ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಅನ್ನೋ ಚಿತ್ರ ನಿರ್ಮಿಸುತ್ತಿದ್ದಾರೆ. ಆ ಚಿತ್ರದ ಒಂದು ಹಾಡನ್ನು ಬಿಡುಗಡೆ ಕೂಡಾ ಮಾಡಿದ್ದಾರೆ. ಆ ಹಾಡಿನ ಪಲ್ಲವಿ ಹಾಗೂ ಚರಣಗಳಿಗೆ ನೀವು ಹೊಸ ಸಾಹಿತ್ಯ ಬರೆಯಬೇಕು. ಆ ಹಾಡಿನ ಸಾಹಿತ್ಯ ಜಯಂತ ಕಾಯ್ಕಿಣಿಯವರದ್ದು.

    ಮಣಿಕಾಂತ್ ಕದ್ರಿ ಸಂಗೀತ ನೀಡಿರುವ ಹಾಡುಗಳಿಗೆ, ಕಾಯ್ಕಿಣಿ ಬರೆದಿರುವ ಸಾಹಿತ್ಯಕ್ಕೆ ಪರ್ಯಾಯವಾಗಿ ನೀವೊಂದು ಹಾಡು ಸೃಷ್ಟಿಸಿ. ಮೆಚ್ಚುಗೆ ಪಡೆದ 3 ಪಲ್ಲವಿ ಹಾಗೂ ಸಾಹಿತ್ಯಕ್ಕೆ ಸ್ವತಃ ಜಯಂತ ಕಾಯ್ಕಿಣಿಯವರೇ ಬಹುಮಾನ ನೀಡಲಿದ್ದಾರೆ.

    ಅಂದಹಾಗೆ ಸ್ಪರ್ಧೆ ಈಗಾಗಲೇ ಶುರುವಾಗಿ ಹೋಗಿದೆ. 23ರಿಂದಲೇ ಶುರುವಾಗಿರುವ ಸ್ಪರ್ಧೆ ಇದು. ಜೂನ್ 28ಕ್ಕೆ ಸ್ಪರ್ಧೆ ಮುಕ್ತಾಯ. ತಡ ಮಾಡಬೇಡಿ.

  • ಕಾಯ್ಕಿಣಿಯ ಪ್ರೀತಿಯ ಸಂಗೀತ ನಿರ್ದೇಶಕ ಗಾಳಿಪಟ ನೋಡಿ ಕಣ್ಣೀರಿಟ್ಟಾಗ..

    ಕಾಯ್ಕಿಣಿಯ ಪ್ರೀತಿಯ ಸಂಗೀತ ನಿರ್ದೇಶಕ ಗಾಳಿಪಟ ನೋಡಿ ಕಣ್ಣೀರಿಟ್ಟಾಗ..

    ಜಯಂತ ಕಾಯ್ಕಿಣಿ. ಅಪರೂಪದ ಕಥೆಗಳ ಸಾಹಿತಿ ಹಾಗೂ ಅಪರೂಪದ ಪ್ರೇಮಕವಿ. ಎಂದಿನಂತೆ ಗಾಳಿಪಟ 2 ಚಿತ್ರದ ಹಾಡುಗಳೂ ವಿಶಿಷ್ಟವಾಗಿ.. ಹೃದಯ ತಟ್ಟಿವೆ. ಪ್ರೇಮಿಗಳ ಎದೆಯ ಬಾಗಿಲು ಮುಟ್ಟಿವೆ. ಒಂದೆಡೆ ಚಿತ್ರವೂ ಸಕ್ಸಸ್. ಸೂಪರ್ ಸಕ್ಸಸ್ ಆಗಿದೆ. ಇದೇ ವೇಳೆ ಜಯಂತ ಕಾಯ್ಕಿಣಿಯವರಿಗೆ ಅವರ ಅಚ್ಚುಮೆಚ್ಚಿನ ಸಂಗೀತ ನಿರ್ದೇಶಕರು ಗಾಳಿಪಟ 2 ನೋಡಿ, ಫೋನ್ ಮಾಡಿ ಕಣ್ಣೀರಿಟ್ಟರಂತೆ.

    ಕೆಲಸವಿಲ್ಲದೆ, ಕೊರೊನಾದಲ್ಲಿ ಇನ್ನಷ್ಟು ಜರ್ಝರಿತರಾಗಿದ್ದ ಮನಸ್ಸುಗಳನ್ನು ಈ ಚಿತ್ರ ತಟ್ಟಿದೆ ಎಂದು ಕಣ್ಣೀರಿಟ್ಟರಂತೆ. ಅಂದಹಾಗೆ ಕಾಯ್ಕಿಣಿಯವರ ಮೆಚ್ಚಿನ ಸಂಗೀತ ನಿರ್ದೇಶಕ ಯಾರು ಅಂದ್ಕೊಂಡ್ರಾ? ಪೂರ್ಣಚಂದ್ರ ತೇಜಸ್ವಿ.

    ಲೂಸಿಯಾ, ಬಬ್ರೂ, ಯು ಟರ್ನ್‍ನಂತ ಚಿತ್ರಗಳಿಗೆ ಸಂಗೀತ ನೀಡಿರುವ ಪೂರ್ಣಚಂದ್ರ ಗಾಳಿಪಟ 2 ಚಿತ್ರವನ್ನು ನೋಡಿ ಖುಷಿ ಪಟ್ಟು ಕಣ್ಣಿರಿಟ್ಟು ಫೋನ್ ಮಾಡಿದ್ದರಂತೆ.

    ಗಾಳಿಪಟ 2 ಹಾಗೆಯೇ ಇದೆ. ನಗುತ್ತಾ.. ನಗಿಸುತ್ತಾ.. ಅಳುತ್ತಾ.. ಅಳಿಸುತ್ತಾ.. ಸಾಗುವ ಕಥೆ ಪ್ರೇಕ್ಷಕರ ಹೃದಯ ಕಣ್ಣೀರಿಡುವಂತೆ ಮಾಡಿದೆ. ಆದರೆ.. ಯೋಗರಾಜ್ ಭಟ್-ಗಣೇಶ್ ಜೋಡಿಯ ಸಕ್ಸಸ್ ರಮೇಶ್ ರೆಡ್ಡಿಯವರಿಗೆ ಖುಷಿ ಕೊಟ್ಟಿದೆ. ಸಿನಿಮಾ ಗೆದ್ದಾಗ ಖುಷಿ ಪಡುವ ಮೊದಲ ವ್ಯಕ್ತಿ ನಿರ್ಮಾಪಕ ಅಲ್ವಾ?

  • ಜಯಂತ್ ಕಾಯ್ಕಿಣಿ ಅಭಿನಯದ ಟಗರು..!

    jayanth kaikini's selfie in tagaru

    ಅಕ್ಷರಗಳ ಗಾರುಡಿಗ ಜಯಂತ್ ಕಾಯ್ಕಿಣಿ ಬರಹಗಾರರಾಗಿ ಗೊತ್ತು. ನಟರಾಗಿದ್ದು ಯಾವಾಗ..? ಇಷ್ಟಕ್ಕೂ ಟಗರು ಶಿವರಾಜ್ ಕುಮಾರ್ ಅಭಿನಯದ ಸಿನಿಮಾ. ಆ ಚಿತ್ರದಲ್ಲಿ ಕಾಯ್ಕಿಣಿ ಅವರ ಪಾತ್ರವೇನು..? ಜಯಂತ್ ಕಾಯ್ಕಿಣಿ ಇನ್ನು ಮುಂದೆ ಕಲಾವಿದರಾಗಿಯೂ ಕಾಣಿಸಿಕೊಳ್ತಾರಾ..? ಹೀಗೆ ಹಲವು ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಿಯೇ ಮೂಡಿರುತ್ವೆ. 

    ಟಗರು ಚಿತ್ರದಲ್ಲಿಕಾಯ್ಕಿಣಿ ಕಾಣಿಸಿಕೊಂಡಿರುವುದು ನಿಜ. ಆದರೆ, ಪಾತ್ರವಾಗಿ ಅಲ್ಲ. ಹಾಡಿನ ದೃಶ್ಯವೊಂದರಲ್ಲಿ ಸಾಹಿತಿಯಾಗಿಯೇ ಕಾಣಿಸಿಕೊಂಡಿದ್ದಾರೆ ಜಯಂತ್ ಕಾಯ್ಕಿಣಿ. ಶಿವರಾಜ್ ಕುಮಾರ್ ಮತ್ತು ಭಾವನಾ ಮಳೆಯಲ್ಲಿಯೇ ಕಾಯ್ಕಿಣಿ ಜೊತೆ ಒಂದು ಸೆಲ್ಫಿ ತೆಗೆಸಿಕೊಳ್ತಾರೆ. ಕಾಯ್ಕಿಣಿ ಚಿತ್ರದಲ್ಲಿ ತೆರೆಯ ಮೇಲೆ ಬರೋದು ಅಷ್ಟೆ.

    ಕಾಯ್ಕಿಣಿ ಯೆಸ್ ಎಂದುಬಿಟ್ಟರೆ, ಬಣ್ಣ ಹಚ್ಚಿಸುವ ನಿರ್ದೇಶಕರಿಗೇನೂ ಕೊರತೆ ಇಲ್ಲ. ಈ ಹಿಂದೆ ಯೋಗರಾಜ್ ಭಟ್ಟರು ತಮ್ಮ ಪಂಚರಂಗಿ ಸಿನಿಮಾದಲ್ಲಿ ಒಂದ್ಸಲ ಹೀಗೇ ತೋರಿಸಿದ್ದರು. ಈ ಬಾರಿ ಸೂರಿ ಇನ್ನೂ ಒಂದು ಹೆಜ್ಜೆ ಮುಂದಿಟ್ಟು ಹೇಗೋ ಒಪ್ಪಿಸಿ, ಈ ದೃಶ್ಯದಲ್ಲಿ ಕಾಣಿಸಿಕೊಳ್ಳುವಂತೆ ಮಾಡಿದ್ದಾರೆ.

  • ತಾಯಿಗೆ ತಕ್ಕ ಮಗ ಶಶಾಂಕ್, ಕಾಯ್ಕಿಣಿಗೆ ತಕ್ಕ ನಿರ್ದೇಶಕ

    thayige thakka maga team image

    ಈ ಮಾತು ಹೇಳೋಕೆ ಕಾರಣ ಇದೆ. ಏಕೆಂದರೆ ಈ ಚಿತ್ರದ ನಿರ್ದೇಶಕ ಶಶಾಂಕ್. ಸಿಕ್ಸರ್‍ನಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿದೇಶಕ ಶಶಾಂಕ್, ತಮ್ಮ ಮೊದಲ ಚಿತ್ರದಿಂದಲೂ ಹೊಸಬರಿಗೆ ಬೆನ್ನು ತಟ್ಟುತ್ತಲೇ ಬಂದವರು. ಶಶಾಂಕ್ ಅವರ ಪ್ರತಿ ಚಿತ್ರದಲ್ಲೂ ಕನಿಷ್ಠ ಐದಾರು ಹೊಸ ಪ್ರತಿಭೆಗಳಿರುತ್ತವೆ. ಕಲಾವಿದರು, ತಂತ್ರಜ್ಞರು, ಸಾಹಿತಿಗಳು.. ಹೀಗೆ ಪ್ರತಿ ಕಡೆಯಲ್ಲೂ ಹೊಸ ಹೊಸಬರನ್ನು ಪರಿಚಯಿಸುತ್ತಲೇ ಇರುತ್ತಾರೆ. 

    ಇನ್ನು ಕಾಯ್ಕಿಣಿಗೆ ತಕ್ಕ ನಿರ್ದೇಶಕ ಎಂದಿದ್ದು ಇದೇ ಕಾರಣಕ್ಕೆ. ತಾಯಿಗೆ ತಕ್ಕ ಮಗ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಜಯಂತ್ ಕಾಯ್ಕಿಣಿ ``ಪ್ರತಿ ಚಿತ್ರದಲ್ಲೂ ಒಬ್ಬೊಬ್ಬ ಸಾಹಿತಿಗೆ, ಹೊಸ ಪ್ರತಿಭೆಗೆ ಅವಕಾಶ ಕೊಟ್ಟರೂ ಸಾಕು. ವರ್ಷಕ್ಕೆ ಕನಿಷ್ಠ 100 ಸಾಹಿತಿಗಳು ಬೆಳಕಿಗೆ ಬರುತ್ತಾರೆ. ಚಿತ್ರ ನಿರ್ದೇಶಕರು ಈ ಬಗ್ಗೆ ಮನಸ್ಸು ಮಾಡಬೇಕು'' ಎಂದಿದ್ದರು.

    ಆದರೆ, ಕಾಯ್ಕಿಣಿ ಹೇಳಿದ್ದನ್ನು ಜಾರಿಗೇ ತಂದಿರೋ ಶಶಾಂಕ್, ತಾಯಿಗೆ ತಕ್ಕ ಮಗ ಚಿತ್ರದಲ್ಲೂ ಅದನ್ನು ಮುಂದವರೆಸಿದ್ದಾರೆ. ಚಿತ್ರದಲ್ಲಿನ ಎದೆಯ ಒಳಗೆ ಬಲಗಾಲಿಟ್ಟು ಒಳಗೆ ಬಂದೇ ನೀನು ಹಾಡನ್ನು ಬರೆದಿರುವುದು ಹೊಸ ಪ್ರತಿಭೆ ರಾಘವೇಂದ್ರ. ಹಾಡು ಹಿಟ್ ಆಗಿದೆ. 

    ಸಿಕ್ಸರ್, ಮೊಗ್ಗಿನ ಮನಸ್ಸು, ಕೃಷ್ಣಲೀಲ, ಕೃಷ್ಣನ್ ಲವ್ ಸ್ಟೋರಿ.. ಹೀಗೆ ಪ್ರತಿ ಚಿತ್ರದಲ್ಲೂ ಹೊಸಬರನ್ನು ಪರಿಚಯಿಸಿ ಗೆದ್ದಿರುವ ಶಶಾಂಕ್, ಈ ಚಿತ್ರದಲ್ಲೂ ಭರ್ಜರಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

  • ಪ್ರೇಮಸುಧೆ ಹರಿಸಿದ ಜಯಂತ್ ಕಾಯ್ಕಿಣಿ

    ಪ್ರೇಮಸುಧೆ ಹರಿಸಿದ ಜಯಂತ್ ಕಾಯ್ಕಿಣಿ

    ಒಂದೊಂದು ಪದದ ಅರ್ಥವನ್ನೂ ಜಯಂತ್ ಕಾಯ್ಕಿಣಿ ಬಿಡಿಸಿ ಬಿಡಿಸಿ ಹೇಳಿದ್ದಾರೆ ಎಂದಿದ್ದರು ಯೋಗರಾಜ್ ಭಟ್. ಭಟ್ಟರು ಹಾಗೇಕೆ ಹೇಳಿದರು ಎಂದು ತಲೆ ತುರಿಸಿಕೊಂಡವರಿಗೆ ಗಾಳಿಪಟ 2 ಚಿತ್ರದ ಈ ಹಾಡು ಉತ್ತರ ನೀಡಿದೆ. ಜಯಂತ್ ಕಾಯ್ಕಿಣಿ ಪ್ರೇಮಸುಧೆಯನ್ನೇ ಹರಿಸಿದ್ದಾರೆ.

    ಆಡದ ಮಾತನ್ನೆಲ್ಲ ಕದ್ದು ಕೇಳು..

    ಅದನ್ನು ನನಗೆ ಹೇಳದೆ ಒದ್ದಾಡುವಂತೆ ಮಾಡು

    ಮುಂಗೋಪದಿಂದ ಒದ್ದಾಡುವಂತೆ ಮಾಡು..

    ನಾನು ಓದದ ಪುಸ್ತಕ.. ಎದೆಗೊತ್ತಿಕೊಳ್ಳುವೆಯಾ..

    ಈ ಪುಸ್ತಕದ ಪ್ರತಿ ಸಾಲಿಗೂ ಬಿಸಿಯುಸಿರು ನೀಡಿ ಕಥೆಯಾಗಿಸು..

    ಈ ಅರ್ಥದ ಸಾಲುಗಳನ್ನು ಅರೆದು..ಅರೆದು..ಸೋಸಿ ಬರೆದಿದ್ದಾರೆ ಪ್ರೇಮಿಗಳಿಗಾಗಿ.. ಪ್ರೇಮಿಗಳ ಹೃದಯಕ್ಕಾಗಿ. ಕಾಯ್ಕಿಣಿಯವರ ಪದಗಳನ್ನು ಅಷ್ಟೇ ಸಮರ್ಥವಾಗಿ ಎದೆಗೆ ದಾಟಿಸಿರೋದು ಸೋನು ನಿಗಮ್ ಅವರ ಕಂಠ ಮತ್ತು ಅರ್ಜುನ್ ಜನ್ಯಾ ಅವರ ಸಂಗೀತ.

    ರಮೇಶ್ ರೆಡ್ಡಿ ನಿರ್ಮಾಣದ ಚಿತ್ರದಲ್ಲಿ ಗಣೇಶ್, ವೈಭವಿ ಶಾಂಡಿಲ್ಯ, ದಿಗಂತ್, ಶರ್ಮಿಳಾ ಮಾಂಡ್ರೆ, ಪವನ್ ಕುಮಾರ್, ಅನಂತ್ ನಾಗ್, ಬುಲೆಟ್ ಪ್ರಕಾಶ್ ನಟಿಸಿದ್ದಾರೆ. ಗಾಳಿಪಟ 2 ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ.