` mahadayi, - chitraloka.com | Kannada Movie News, Reviews | Image

mahadayi,

  • KFCC Supports Mahadayi; To Hold A Meeting Today

    kfcc to hold mahadayi meeting

    The Karnataka Film Chamber of Commerce has come in full support of the farmers protest about the implementation of the Kalasa-Banduri canal project in North Karnataka. The Karnataka Film Chamber of Commerce has also decided to support the implementation of the canal project and has supported the bundh called in North Karnataka.

    Meanwhile, the KFCC has held a meeting at 3 PM today afternoon to discuss about the industry's stand regarding the issue. Many celebrities including Shivarajakumar, Jaggesh, Dhruva Sarja and others has been invited by the KFCC to attend the meeting and discuss about the issue.

  • ಮಹದಾಯಿ - ಶಿವರಾಜ್ ಕುಮಾರ್ ಹೇಳಿದ ಜವಾಬ್ದಾರಿಯ ಪಾಠ

    shivarajkumar image

    ಮಹದಾಯಿ ಕಿಚ್ಚು ಈಗ ರಾಜ್ಯದ ರಾಜಕೀಯ ಪಕ್ಷಗಳನ್ನು ಸುಡಲಾರಂಭಿಸಿದೆ. ಆರಂಭದಲ್ಲಿ ಇದು ಬಿಜೆಪಿಗಷ್ಟೇ ಸಮಸ್ಯೆ ಎಂದು ಖುಷಿಪಟ್ಟಿದ್ದ ಕಾಂಗ್ರೆಸ್, ಜೆಡಿಎಸ್‍ಗೂ ಬಿಸಿ ತಟ್ಟೋಕೆ ಶುರುವಾಗಿದೆ. ಚಿತ್ರರಂಗದವರು ಬೆಂಬಲ ನೀಡುತ್ತಿಲ್ಲ ಎಂಬ ಕೂಗಿಗೆ ಸ್ಪಂದಿಸಿದ್ದ ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು ಚಿತ್ರರಂಗದ ಎಲ್ಲ ಸದಸ್ಯರ ಸಭೆ ಕರೆದಿದ್ದರು. ಸಭೆಯ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಮಹದಾಯಿ ಹೋರಾಟಗಾರ ವೀರೇಂದ್ರ ಸೊಬರದಮಠ ಅವರನ್ನೂ ಜೊತೆಯಲ್ಲೇ ಕೂರಿಸಿಕೊಂಡಿದ್ದು, ಹೋರಾಟಗಾರರಿಗೆ ನೀಡಿದ ಗೌರವ.

    ಜನವರಿಯಲ್ಲಿ ಇಡೀ ಚಿತ್ರರಂಗ ನರಗುಂದಕ್ಕೆ ಬಂದು ಹೋರಾಟಕ್ಕೆ ಬೆಂಬಲ ನೀಡಲಿದೆ ಎಂದು ಘೋಷಿಸಿದ ಸಾ.ರಾ.ಗೋವಿಂದು, ಶಿವರಾಜ್ ಕುಮಾರ್ ಅವರೊಂದಿಗೆ ಚರ್ಚಿಸಿ ದಿನಾಂಕ ನಿಗದಿಪಡಿಸುವುದಾಗಿ ತಿಳಿಸಿದರು.

    ನಟ ಜಗ್ಗೇಶ್, ಕಲಾವಿದರನ್ನು ರಾಜಕೀಯಕ್ಕೆ ಎಳೆದುತರಬೇಡಿ ಎನ್ನುತ್ತಲೇ, ನಟ ಚೇತನ್ ನೀಡಿದ್ದ ಹೇಳಿಕೆಯನ್ನು ಖಂಡಿಸಿದರು. ಅದಾದ ಮೇಲೆ ಮಾತನಾಡಿದ್ದು ಶಿವರಾಜ್ ಕುಮಾರ್. ಹಿರಿಯರು ಮಾತನಾಡಿದ್ದಾರೆ, ನನ್ನದೇನಿದೆ ಮಾತನಾಡೋಕೆ ಎನ್ನುತ್ತಲೇ, ಎಲ್ಲರನ್ನೂ ತರಾಟೆಗೆ ತೆಗೆದುಕೊಂಡರು. ಎಲ್ಲರಿಗೂ ಜವಾಬ್ದಾರಿಯನ್ನು ನೆನಪಿಸಿದರು.

    ಕಲಾವಿದರನ್ನು ರಾಜಕೀಯಕ್ಕೇಕೆ ಎಳೆಯುತ್ತೀರಿ. ಒಂದು ಪಕ್ಷದ ಎದುರು ನಡೆಯುವ ಹೋರಾಟಕ್ಕೆ ಬನ್ನಿ, ಬೆಂಬಲ ನೀಡಿ ಎಂದರೆ ನಾವು ಬರುವುದು ಹೇಗೆ..? ಎಂದು ಪ್ರಶ್ನಿಸಿದ ಶಿವಣ್ಣ, ನಾವು ಬಂದರೆ ಸಮಸ್ಯೆ ಬಗೆಹರಿಯುತ್ತೆ ಎಂದಾದರೆ ನಾವು ಬಂದು ನಿಲ್ಲುತ್ತೇವೆ. ಆದರೆ, ಮಹದಾಯಿ ವಿಚಾರದಲ್ಲಿ ನಮಗೆ ಯಾವ ಅಧಿಕಾರವಿದೆ..? ನೀವೇಕೆ ರಾಜಕಾರಣಿಗಳನ್ನು ಕೇಳೋದಿಲ್ಲ. ವೋಟು ಪಡೆದವರನ್ನು ಬಿಟ್ಟು, ಚಿತ್ರರಂಗದವರು ಬಂದು ಬಗೆಹರಿಸಲಿ ಎಂದರೆ ಹೇಗಾಗುತ್ತೆ..? ಎಂದು ಪ್ರಶ್ನಿಸಿದರು.

    ಕೋಟ್ಯಂತರ ಜನ ಕೊಟ್ಟ ಅಭಿಮಾನದ ಭಿಕ್ಷೆಯಿಂದಲೇ ನಾವು ಸ್ಟಾರ್ ಆಗಿರುವುದು. ಜವಾಬ್ದಾರಿ ನಮ್ಮದಷ್ಟೇ ಅಲ್ಲ, ಪ್ರತಿಯೊಬ್ಬರದ್ದೂ ಇದೆ ಎಂದ ಶಿವಣ್ಣ, ಹೋರಾಟಕ್ಕೆ ಬಂದವರು ನಮ್ಮೊಂದಿಗೆ ಸೆಲ್ಫಿ ತೆಗೆದುಕೊಂಡು ಹೋಗುತ್ತಾರೆ. ಅದರಿಂದ ಲಾಭವೇನು ಎಂದು ಪ್ರಶ್ನಿಸಿದಾಗ ಹೌದಲ್ಲವೇ ಎನಿಸಿದ್ದು ನಿಜ.

    ಈಗ ಕಲಾವಿದರೆಲ್ಲರನ್ನೂ ಒಟ್ಟುಗೂಡಿಸುವ ಜವಾಬ್ದಾರಿಯನ್ನು ಸಾ.ರಾ.ಗೋವಿಂದು ಹಾಗೂ ಶಿವರಾಜ್ ಕುಮಾರ್ ಹೊತ್ತುಕೊಂಡಿದ್ದಾರೆ. ಜನವರಿ ತಿಂಗಳಲ್ಲಿ ಒಂದು ದಿನ ಹುಬ್ಬಳ್ಳಿ ಬಳಿಯ ನರಗುಂದದಲ್ಲಿ ಚಿತ್ರರಂಗದ ಸ್ಟಾರ್‍ಗಳೆಲ್ಲ ಜಮಾಯಿಸಲಿದ್ದಾರೆ. ಹೋರಾಟಕ್ಕೆ ಕಳೆ ತರಲಿದ್ದಾರೆ.

    ನಾವು ಬಣ್ಣ ಹಚ್ಚಿದಾಗ ಮಾತ್ರವೇ ಕಲಾವಿದರು. ಮೇಕಪ್ ತೆಗೆದ ಮೇಲೆ ನಾವೂ ಸಾಮಾನ್ಯ ಮನುಷ್ಯರು ಎಂದ ಶಿವಣ್ಣ ಮಾತಿನಲ್ಲಿ ಪ್ರತಿಯೊಂದಕ್ಕೂ ಚಿತ್ರರಂಗದವರನ್ನು ಟೀಕಿಸುವವರ ವಿರುದ್ಧ ಸಾತ್ವಿಕ ಆಕ್ರೋಶವಿತ್ತು.

    Related Articles :-

    KFCC Supports Mahadayi; To Hold A Meeting Today

  • ಮಹದಾಯಿ ಸಮಸ್ಯೆಗೆ ಉಪ್ಪಿ ಹೇಳಿದ ಸಾಯಿಬಾಬಾ ಪರಿಹಾರವೇನು..?

    upendra suggests solution to mahadayi

    ಪ್ರಜಾಕೀಯದ ಮೂಲಕ ಹೊಸ ರಾಜಕೀಯ ಸೃಷ್ಟಿಸುತ್ತಿರುವ ಉಪೇಂದ್ರ, ಈಗ ರಾಜ್ಯದ್ಯಂತ ಕಿಚ್ಚು ಹಚ್ಚಿಸಿರುವ ಮಹದಾಯಿಗೆ ತಮ್ಮದೇ ಆದ ಪರಿಹಾರವೊಂದನ್ನು ಮುಂದಿಟ್ಟಿದ್ದಾರೆ. ಆ ಪರಿಹಾರದಲ್ಲಿ ಅವರು ಹೇಳಿರುವುದು ಎರಡು ಕಥೆಗಳನ್ನು. ಆ ಎರಡೂ ಕಥೆಗಳ ಹೀರೋ ಸಾಯಿಬಾಬಾ ಎನ್ನುವುದು ವಿಶೇಷ.

    ಕಥೆ 01 - ಆಂಧ್ರಪ್ರದೇಶದ ರಾಯಲಸೀಮೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರವಿತ್ತು. 1995ರಲ್ಲಿ ಪುಟ್ಟಪರ್ತಿಯ ಸತ್ಯಸಾಯಿಬಾಬಾ ಸತತ ಒಂದೂವರೆ ವರ್ಷ ಕೆಲಸ ಮಾಡಿದರು. 18 ತಿಂಗಳಲ್ಲಿ 2000 ಕಿ.ಮೀ. ಪೈಪ್‍ಲೈನ್ ಹಾಕಿಸಿ, 43 ನೀರಿನ ತೊಟ್ಟಿ ನಿರ್ಮಿಸಿದರು. ಒಂದೊಂದು ನೀರಿನ ತೊಟ್ಟಿಗೂ ಒಂದೂವರೆ ಲಕ್ಷ ಲೀ.ನಿಂದ ಎರಡೂವರೆ ಲಕ್ಷ ಲೀ. ಸಾಮಥ್ರ್ಯವಿತ್ತು. ಇದರಿಂದ ರಾಯಲಸೀಮೆಯ ಕುಡಿಯುವ ನೀರಿನ ಸಮಸ್ಯೆಯ ಪರಿಹಾರ ಶೇ.70ರಷ್ಟು ನಿವಾರಣೆಯಾಯ್ತು.

    ಕಥೆ 02 - ಚೆನ್ನೈನಲ್ಲಿಯೂ ಕೂಡಾ ಇದೇ ರೀತಿ ನೀರಿನ ಸಮಸ್ಯೆ ಎದುರಾದಾಗ ಕೃಷ್ನಾ ನದಿಯ ನೀರನ್ನು ಚೆನ್ನೈಗೆ ಹರಿಸಿ ಸಮಸ್ಯೆ ನೀಗಿಸಿದರು. ಆ ಕೆಲಸದಲ್ಲಿಯೂ ಸಾಯಿಬಾಬಾ ಅವರ ಪಾತ್ರ ದೊಡ್ಡದಾಗಿತ್ತು.

    ಈ ಎರಡು ಕಥೆಗಳಲ್ಲಿ ಪರಿಹಾರವಿದೆ. ಮಹದಾಯಿ ಹೋರಾಟದ ಜೊತೆಯಲ್ಲೇ, ಅದರ ಹೊರತಾದ ಪರ್ಯಾಯ ಮಾರ್ಗವೊಂದನ್ನು ಹುಡುಕಿಕೊಳ್ಳಬೇಕಾದ ಅಗತ್ಯವಿದೆ. ಉಪ್ಪಿ ಹೇಳುತ್ತಿರುವ ಪರಿಹಾರ ಇದೇ.

    Related Articles :-

    ಮಹದಾಯಿ - ಶಿವರಾಜ್ ಕುಮಾರ್ ಹೇಳಿದ ಜವಾಬ್ದಾರಿಯ ಪಾಠ

    KFCC Supports Mahadayi; To Hold A Meeting Today

  • ಮೋದಿಗೆ ಸಿಗಲಿದೆ ಮಹದಾಯಿ ಬಂದ್ ಸ್ವಾಗತ

    bundh will welcome modi

    ಮಹದಾಯಿ ಕುರಿತ ವಿಚಾರದಲ್ಲಿ ಕನ್ನಡ ಚಿತ್ರರಂಗ ಬೆಂಬಲ ನೀಡುತ್ತಿಲ್ಲ ಎಂಬ ಆರೋಪ ಇತ್ತೀಚೆಗೆ ಕೇಳಿಬಂದಿತ್ತು. ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಮಹದಾಯಿ ಹೋರಾಟಗಾರರಿಗೆ ಚಿತ್ರರಂಗದ ಹಲವರು ಬೆಂಬಲ ವ್ಯಕ್ತಪಡಿಸಿದ್ದರಾದರೂ, ಒಂದು ಪಕ್ಷದ ವಿರುದ್ಧ ನಡೆಯುವ ಹೋರಾಟ ಸರಿಯಲ್ಲ ಎಂದು ವಿರೋಧಿಸಿದ್ದರು. ಎಲ್ಲ ಪಕ್ಷಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡುವ ಘೋಷಣೆ ಮೊಳಗಿಸಿದ್ದರು. ಈಗ ನಿರ್ಧಾರ ಹೊರಬಿದ್ದಿದೆ.

    ಮಹದಾಯಿಗೆ ಬೆಂಬಲ ಸೂಚಿಸಿ ಜನವರಿ 27ರಂದು ಕರ್ನಾಕಟ ಬಂದ್‍ಗೆ ಕರೆ ನೀಡಲಾಗಿದೆ. ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‍ಗೆ ಕರೆ ಕೊಟ್ಟಿವೆ. ಫಿಲಂ ಚೇಂಬರ್ ಕೂಡಾ ಬೆಂಬಲ ಘೋಷಿಸಿದೆ. ಆ ದಿನ ಕನ್ನಡ ಚಿತ್ರರಂಗದಲ್ಲಿ ಯಾವುದೇ ಸಿನಿಮಾದ ಶೂಟಿಂಗ್ ಸಹಾ ಇರುವುದಿಲ್ಲ ಎಂದು ಘೋಷಿಸಿದ್ದಾರೆ ಫಿಲಂ ಚೇಂಬರ್ ಅಧ್ಯಕ್ಷ ಸಾ.ರಾ.ಗೋವಿಂದು. 

    ಅಂದಹಾಗೆ ಪ್ರಧಾನಿ ನರೇಂದ್ರ ಮೋದಿ ಜನವರಿ 28ರಂದು ಕರ್ನಾಟಕಕ್ಕೆ ಬರುತ್ತಿದ್ದಾರೆ. ಮೋದಿ ಬರುವ ಒಂದು ದಿನ ಮುನ್ನ, ಪ್ರಧಾನಿಗೆ ಮಹದಾಯಿ ವಿಚಾರ ತಲುಪಿಸಲೆಂದೇ ಈ  ಬಂದ್‍ಗೆ ಕರೆ ನೀಡಲಾಗಿದೆ. ಅಂದಹಾಗೆ ಬಂದ್ ಒಬ್ಬರ ವಿರುದ್ಧ ಅಲ್ಲ. ಗೋವಾ ಸಿಎಂ ಪತ್ರವನ್ನಿಟ್ಟುಕೊಂಡು ಬಿಜೆಪಿ ಮಾಡಿದ ರಾಜಕೀಯದ ವಿರುದ್ಧ. ಒಂದು ಪತ್ರ ಕೈ ಸೇರಿದ ನಂತರ, ಅದನ್ನು ರಾಜಕಾರಣಕ್ಕಷ್ಟೇ ಬಳಸಿ, ಹೇಗೋ ಸಿಕ್ಕಿದ್ದ ಒಂದು ಅವಕಾಶವನ್ನು ಹಾಳು ಮಾಡಿದ ಕಾಂಗ್ರೆಸ್ ವಿರುದ್ಧ. ಎರಡೂ ಪಕ್ಷಗಳನ್ನು ಟೀಕಿಸುವುದರಲ್ಲೇ ಕಾಲಕಳೆದ ಜೆಡಿಎಸ್ ವಿರುದ್ಧ. ಹೀಗೆ ಎಲ್ಲ ಪಕ್ಷಗಳ ವಿರುದ್ಧವೂ ಈ ಬಂದ್ ನಡೆಯುತ್ತಿದೆ.