` election, - chitraloka.com | Kannada Movie News, Reviews | Image

election,

  • Darshan And Yash Pledge Support To Sumalatha Ambarish

    darshan and yash pledge support to sumalatha ambareesh

    Actress Sumalatha Ambarish has announced that she will be contesting the Lok Sabha elections as an independent candidate from the Mandya Constituency.

    Meanwhile, actors Darshan and Yash have pledged support to the actress and will be campaigning for her. Both the actors were present at the press meet held at the Atria Hotel in Bangalore and has announced that they will be campaigning for her.

    Sumalatha Ambarish will be contesting opposite actor Nikhil Kumaraswamy in the forthcoming Lok Sabha polls. Nikhil will be contesting in the Mandya constituency under Janata Dal Secular.

  • ಚುನಾವಣೆಯಿಂದ ದೂರ ಸರಿದ ಗೀತಾ ಶಿವರಾಜ್ ಕುಮಾರ್

    geetha shivarajkumar quits election politics

    ಕಳೆದ ಬಾರಿ ಶಿವಮೊಗ್ಗ ಜಿಲ್ಲೆಯಲ್ಲಿ ಗೀತಾ ಶಿವರಾಜ್ ಕುಮಾರ್ ಸಾಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಜೆಡಿಎಸ್ ಟಿಕೆಟ್‍ನಲ್ಲಿ ಕಣಕ್ಕಿಳಿದಿದ್ದ ಗೀತಾ ಅವರ ಪರ ಚಿತ್ರರಂಗದ ಹಲವು ನಾಯಕರು ಪ್ರಚಾರವನ್ನೂ ನಡೆಸಿದ್ದರು. ಆದರೆ, ರಾಜಕೀಯವೇ ಬೇರೆ. ಸಿನಿಮಾ ಕ್ಷೇತ್ರವೇ ಬೇರೆ. ದೊಡ್ಮನೆಯ ಸೊಸೆಯಾಗಿ ಕಣಕ್ಕಿಳಿದಿದ್ದ ಗೀತಾಗೆ ಗೆಲುವು ಸಿಕ್ಕಿರಲಿಲ್ಲ. ಈ ಬಾರಿಯ ಪರಿಸ್ಥಿತಿಯೇ ಬೇರೆ. ಆದರೆ, ಗೀತಾ ಶಿವರಾಜ್ ಕುಮಾರ್ ಚುನಾವಣೆಯಲ್ಲಿ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದಾರೆ.

    ಹಾಗೆ ನೋಡಿದರೆ, ದೇವೇಗೌಡ ಹಾಗೂ ಕುಮಾರಸ್ವಾಮಿಯವರ ಜೊತೆ ಶಿವರಾಜ್ ಕುಮಾರ್ ಉತ್ತಮ ಸ್ನೇಹವಿಟ್ಟುಕೊಂಡಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರ ತಮ್ಮ ಮಧು ಬಂಗಾರಪ್ಪ, ಈಗಲೂ ಜೆಡಿಎಸ್‍ನಲ್ಲಿ ಪ್ರಭಾವಿ ಶಾಸಕ, ಅಲ್ಲದೆ ಕುಮಾರಸ್ವಾಮಿಯವರ ಆಪ್ತ ಕೂಡಾ. ಹಾಗೆಂದು ಈ ಸ್ನೇಹ ಜೆಡಿಎಸ್ ನಾಯಕರಿಗಷ್ಟೇ ಸೀಮಿತವಾಗಿಲ್ಲ. ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಸೇರಿದಂತೆ ಎಲ್ಲ ಪಕ್ಷದ ನಾಯಕರ ಜೊತೆಯಲ್ಲೂ ಸ್ನೇಹವಿಟ್ಟುಕೊಂಡಿದೆ ರಾಜ್ ಕುಟುಂಬ. ಪಾರ್ವತಮ್ಮ ರಾಜ್‍ಕುಮಾರ್ ನಿಧನರಾದಾಗ ಖುದ್ದು ರಾಹುಲ್ ಗಾಂಧಿಯವರೇ ಸಾಂತ್ವನ ಹೇಳಲು ಬಂದಿದ್ದರು. ಅದು ದೊಡ್ಡ ಸುದ್ದಿಯಾಗಿತ್ತು.

    ಅವುಗಳನ್ನೆಲ್ಲ ಪಕ್ಕಕ್ಕಿಟ್ಟು ಚುನಾವಣೆಯಿಂದ ದೂರ ಉಳಿಯಲು ಗೀತಾ ಶಿವರಾಜ್ ಕುಮಾರ್ ನಿರ್ಧರಿಸಿದ್ದಾರೆ. ಒಂದೇ ಚುನಾವಣೆಗೆ ಗೀತಾ ಅವರಿಗೆ ರಾಜಕೀಯ ಸಾಕು ಸಾಕು ಎನ್ನುವಂತಾಗಿ ಹೋಯ್ತೇನೋ.

  • ನೋ ಪಾಲಿಟಿಕ್ಸ್.. ನೋ ಪ್ರಚಾರ.. - ಯಶ್

    yash will not even campaign this elesctions

    ಯಶ್ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡ ದಿನದಿಂದಲೂ ಎಲ್ಲರೂ ಅವರನ್ನು ಕೇಳುತ್ತಿರುವ ಪ್ರಶ್ನೆಯೇ ಅದು. ನೀವು ರಾಜಕೀಯಕ್ಕೆ ಬರ್ತೀರಾ ಅಂತಾ. ಅದಕ್ಕೆ ಯಶ್ ಹಲವು ಬಾರಿ ನೋ ಎಂದು ಸ್ಪಷ್ಟವಾಗಿ ಉತ್ತರ ಕೊಟ್ಟಾಗಿದೆ. ಈಗ ಯಶ್ ಅವರಿಗೆ ಎದುರಾಗಿರುವ ಪ್ರಶ್ನೆ, ರಾಜಕೀಯಕ್ಕೆ ಬರಲ್ಲ ಓಕೆ, ಪ್ರಚಾರ ಮಾಡ್ತೀರಾ ಅನ್ನೋದು.

    ಏಕೆಂದರೆ.. ವಿಷ್ಣುವರ್ಧನ್, ಸುದೀಪ್, ದರ್ಶನ್ ಸೇರಿದಂತೆ ಹಲವರು ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಂಡಿಲ್ಲ. ಆದರೆ, ತಮಗಿಷ್ಟವಾದ ವ್ಯಕ್ತಿಗಳ ಪ್ರಚಾರ ಮಾಡಿದ ಉದಾಹರಣೆಗಳಿವೆ. ಹೀಗಾಗಿಯೇ ಯಶ್ ಅವರಿಗೂ ಇಂಥಾದ್ದೊಂದು ಪ್ರಶ್ನೆ ಎದುರಾಗಿದೆ.

    ನಾನು ಯಾವುದೇ ರಾಜಕೀಯ ಪಕ್ಷದ ಪರ ಪ್ರಚಾರ ಮಾಡಲ್ಲ. ವ್ಯಕ್ತಿಗಳು ಇಷ್ಟವಾದರೆ, ಒಳ್ಳೆಯವರು ಎನಿಸಿದರೆ ಖಂಡಿತಾ ಮಾಡುತ್ತೇನೆ. ಆದರೆ, ಅಂತಹವರ್ಯಾರೂ ನನಗೆ ವೈಯಕ್ತಿಕವಾಗಿ  ಗೊತ್ತಿಲ್ಲ ಎಂದಿದ್ದಾರೆ ಯಶ್. ಅಲ್ಲಿಗೆ ಯಾರಾದರೂ ನಾಯಕರ ಪರ ಯಶ್ ಪ್ರಚಾರ ಮಾಡಬಹುದು ಎಂಬ ನಿರೀಕ್ಷೆಯೂ ಹುಸಿಯಾಗಿದೆ.

  • ಸುಮಲತಾ ಪರ ಪ್ರಚಾರ - ಯಶ್, ದರ್ಶನ್‍ಗೆ ಕೆಡುತ್ತಾ ಗ್ರಹಚಾರ..?

    jds mla warns sumalatha supporters

    ಮಂಡ್ಯದಿಂದ ಚುನಾವಣಾ ಅಖಾಡಕ್ಕಿಳಿಯುತ್ತಿರುವ ಸುಮಲತಾ ಪರ ಬಹುತೇಕ ಚಿತ್ರರಂಗದ ಸ್ಟಾರ್ ನಟರು ಒಗ್ಗೂಡುತ್ತಿದ್ದಾರೆ. ಕೆಲವರು ಹೋಗಲಾಗದೇ ಇದ್ದರೂ, ಬೆಂಬಲ ನೀಡುತ್ತಿದ್ದಾರೆ. ಹೀಗಿರುವಾಗಲೇ, ಸುಮಲತಾ ಪರ ಪ್ರಚಾರಕ್ಕೆ ಹೋದವರಿಗೆ ಗ್ರಹಚಾರ ಕೆಡುತ್ತಾ..? ಅಂಥಾದ್ದೊಂದು ಅನುಮಾನ ಮೂಡಿಸಿರುವುದು ಜೆಡಿಎಸ್ ಶಾಸಕ ಕೆ.ಸಿ. ನಾರಾಯಣ ಗೌಡ ಹೇಳಿಕೆ.

    ಸುಮ್ಮನೆ ದೇವೇಗೌಡ, ಕುಮಾರಸ್ವಾಮಿ ಬಗ್ಗೆ ಮಾತನಾಡಬೇಡಿ. ನಿಮ್ಮ ಪಾಡಿಗೆ ನೀವು ಶೂಟಿಂಗ್ ಮಾಡಿಕೊಂಡಿರಿ. ನಿಮಗೂ ರಾಜಕಾರಣಕ್ಕೂ ಸಂಬಂಧ ಇಲ್ಲ. ಗೌರವದಿಂದ ಮನೆಯಲ್ಲಿರಿ. ಇಲ್ಲದೇ ಹೋದರೆ, ನಿಮ್ಮ ಆಸ್ತಿಪಾಸ್ತಿ ತನಿಖೆ ಮಾಡಿಸಬೇಕಾಗಬಹುದು. ಸರ್ಕಾರ ನಮ್ಮದಿದೆ ಎಂದಿದ್ದಾರೆ ನಾರಾಯಣ ಗೌಡ. 

    ಸಿನಿಮಾ ನಟರು ಒಬ್ಬ ವ್ಯಕ್ತಿಯ ಪರ ಪ್ರಚಾರಕ್ಕೆ ಬಂದ್ರೆ ಹುಷಾರ್. ಪರಿಣಾಮ ನೆಟ್ಟಗಿರಲ್ಲ ಎಂದಿದ್ದಾರೆ ನಾರಾಯಣ ಗೌಡ. ಈ ಹಿಂದೆ ಸಚಿವ ಡಿ.ಸಿ.ತಮ್ಮಣ್ಣ, ಎಚ್.ಡಿ.ರೇವಣ್ಣ, ಶಾಸಕ ಕೆ.ಟಿ.ಶ್ರೀಕಂಠೇಗೌಡ ಸುಮಲತಾ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈಗ ಜೆಡಿಎಸ್ ಶಾಸಕ ಚಿತ್ರರಂಗದವರಿಗೆ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಿದ್ದಾರೆ.

    ಹಾಗಾದರೆ, ಸುಮಲತಾ ಪರ ಬಹಿರಂಗವಾಗಿ ಬೆಂಬಲ ಘೋಷಿಸಿರುವ ದರ್ಶನ್, ಯಶ್, ರಾಕ್‍ಲೈನ್ ವೆಂಕಟೇಶ್, ದೊಡ್ಡಣ್ಣ, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್ ಹಾಗೂ ಶುಭ ಹಾರೈಸಿರುವ ಕಿಚ್ಚ ಸುದೀಪ್, ಶಿವರಾಜ್‍ಕುಮಾರ್, ಜೋಗಿ ಪ್ರೇಮ್ ಸೇರಿದಂತೆ ಚಿತ್ರರಂಗದ ಬಹುತೇಕರ ಮೇಲೆ ಸರ್ಕಾರ ಕೆಂಗಣ್ಣು ಬೀರುತ್ತಾ..? ನೋಡಬೇಕಷ್ಟೆ.