` ambi ninage vaisaithu - chitraloka.com | Kannada Movie News, Reviews | Image

ambi ninage vaisaithu

  • ಅಂಬಿ ಸ್ಟೈಲ್‍ಗೆ ಕಿಚ್ಚನ ಟಚ್

    sudeep's schedule completed for ambi ninge vaisaitho

    ಕಿಚ್ಚ ಸುದೀಪ್, ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿನ ತಮ್ಮ ಪಾತ್ರದ ಶೂಟಿಂಗ್ ಮುಗಿಸಿದ್ದಾರೆ. ಚಿತ್ರದಲ್ಲಿ ಸುದೀಪ್ ಯಂಗ್ ಅಂಬರೀಷ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಥಾತ್, ಸುದೀಪ್ ಅಕ್ಷರಶಃ ಅಂಬರೀಷ್ ಪಾತ್ರಕ್ಕೆ ಪರಕಾಯ ಪ್ರವೇಶವನ್ನೇ ಮಾಡಬೇಕು. 

    ಅಂಬರೀಷ್‍ರನ್ನು ಅನುಸರಿಸೋದು, ಅವರಂತೆ ನಟಿಸೋದು ಸುಲಭವಲ್ಲ. ಆದರೆ, ನನಗೆ ಇದ್ದ ಟಾಸ್ಕ್ ಅದೇ ಆಗಿತ್ತು. ಅಂಬರೀಷ್ ಅವರ ಸ್ಟೈಲ್‍ಗೆ ನನ್ನದೇ ಆದ ಟಚ್ ಕೊಟ್ಟಿದ್ದೇನೆ. ಹಾಗೆ ಮಾಡುವಾಗಲೇ ನನಗೆ ಅರ್ಥವಾಗಿದ್ದು, ಇದು ಸುಲಭದ ಕೆಲಸ ಅಲ್ಲ ಅಂತಾ.

    ಖುಷಿಯಿಂದ ವಿಷಯ ಹಂಚಿಕೊಂಡಿರುವ ಸುದೀಪ್, ನಿರ್ಮಾಪಕ ಜಾಕ್ ಮಂಜು, ನಿರ್ದೇಶಕ ಗುರುದತ್ ಸೇರಿದಂತೆ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

  • ಅಂಬಿ ಸ್ವಾಗತಕ್ಕೆ ಸಿದ್ಧರಾಗಿ..

    ambi ninge vaisaitho release date fixed

    ದೊಡ್ಡ ಸಿನಿಮಾ ಕಾಲ ಮತ್ತೆ ಆರಂಭವಾಗುತ್ತಿದೆ. ಈ ವರ್ಷದ ಆರಂಭದಿಂದ ದೊಡ್ಡ ಸ್ಟಾರ್‍ಗಳ ಸಿನಿಮಾಗಳು ಬಂದೇ ಇರಲಿಲ್ಲ. ಇದು ಬಾಕ್ಸಾಫೀಸ್‍ನಲ್ಲೂ ಎದ್ದು ಕಂಡಿತ್ತು. ವರ್ಷದ ಕೊನೆ ಹತ್ತಿರವಾಗುತ್ತಿರುವಾಗ ದೊಡ್ಡ ದೊಡ್ಡ ಸಿನಿಮಾಗಳು ಥಿಯೇಟರ್‍ಗೆ ಲಗ್ಗೆಯಿಡುತ್ತಿವೆ. ಅದರ ಆರಂಭ, ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಿಂದ.

    ಸೆಪ್ಟೆಂಬರ್ 28ಕ್ಕೆ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ರಿಲೀಸ್ ಆಗುತ್ತಿದೆ. ಜಾಕ್ ಮಂಜು ನಿರ್ಮಾಣದ ಸಿನಿಮಾಗೆ ಗುರುದತ್ ಗಾಣಿಗ ನಿರ್ದೇಶನವಿದೆ. ಅಂಬರೀಷ್, ಸುಹಾಸಿನಿ, ಕಿಚ್ಚ ಸುದೀಪ್ ಹಾಗೂ ಶೃತಿ ಹರಿಹರನ್ ಪ್ರಮುಖ ಪಾತ್ರದಲ್ಲಿರುವ ಸಿನಿಮಾ ಇದು. 

    ಸೆಪ್ಟೆಂಬರ್ 28ಕ್ಕೆ ಸಿನಿಮಾ ರಿಲೀಸ್ ಆದ್ರೆ, ಅದಕ್ಕೂ ಮುನ್ನ ಸೆಪ್ಟೆಂಬರ್ 16ಕ್ಕೆ ಆಡಿಯೋ ಲಾಂಚ್ ಇದೆ. ಈಗಾಗಲೇ ಹೇ ಜಲೀಲ ಹಾಡು ಸೂಪರ್ ಹಿಟ್ ಆಗಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಹಾಡುಗಳನ್ನು ಲಾಂಚ್ ಮಾಡುವ ಕಾರ್ಯಕ್ರಮಕ್ಕೆ ಇಡೀ ಚಿತ್ರರಂಗ ಸಾಕ್ಷಿಯಾಗಲಿದೆ. ಏಕೆಂದರೆ, ಇದು ಹಲವು ವರ್ಷಗಳ ನಂತರ ಅಂಬರೀಷ್ ಹೀರೋ ಆಗಿ ನಟಿಸಿರುವ ಚಿತ್ರ.

  • ಅಂಬಿ.. ಟೀಂಗೆ ನಿಫಾ ವೈರಸ್ ಭಯ ಇಲ್ಲವಾ..?

    ambi ninge vaisaito shooting image

    ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ಶೂಟಿಂಗ್ ಈಗ ಕೇರಳದಲ್ಲಿದೆ. ಕೇರಳದಲ್ಲಿ ಈಗ ನಿಫಾ ವೈರಸ್ ಭಯ. ನಿಫಾ ವೈರಸ್ ಮೊದಲ ಬಲಿ ಪಡೆದಿರುವುದೇ ಕೇರಳದಲ್ಲಿ. ಹೀಗಾಗಿ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರತಂಡ ಕೇರಳದಲ್ಲೇ ಇರೋದ್ರಿಂದ ಇಲ್ಲಿರೋವ್ರಿಗೆ ಟೆನ್ಷನ್ ಶುರುವಾಗಿದೆ. ಸಹಜವಾಗಿಯೇ ಅಭಿಮಾನಿಗಳಲ್ಲಿಯೂ ಒಂದಿಷ್ಟು ಆತಂಕಗಳಿವೆ. ಇವುಗಳಿಗೆಲ್ಲ ಚಿತ್ರತಂಡವೇ ಉತ್ತರ ನೀಡಿದೆ. 

    ಆತಂಕಗೊಳ್ಳುವ ಅಗತ್ಯವಿಲ್ಲ. ನಾವು ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇಡೀ ತಂಡದ ಯಾರೊಬ್ಬರೂ ಈಗ ಹಣ್ಣು, ಜ್ಯೂಸ್ ಕುಡಿಯುತ್ತಿಲ್ಲ. ಪ್ರತಿಯೊಬ್ಬರೂ ಕುದಿಸಿ ಆರಿಸಿದ ನೀರನ್ನೇ ಕುಡಿಯುತ್ತಿದ್ದೇವೆ ಎಂದು ತಿಳಿಸಿದ್ದಾರೆ ಚಿತ್ರದ ನಿರ್ಮಾಪಕ ಜಾಕ್ ಮಂಜು.

    ನಿಫಾ ವೈರಸ್ ಬಲಿ ತೆಗೆದುಕೊಂಡ ಜಾಗಕ್ಕೂ, ಶೂಟಿಂಗ್ ಸ್ಪಾಟ್‍ಗೂ 250 ಕಿ.ಮೀ. ಅಂತರವಿದೆ. ಇಲ್ಲಿನ ಜನರೂ ಆರಾಮಾಗಿದ್ದಾರೆ. ಅವರು ಹಣ್ಣು, ಜ್ಯೂಸ್.. ಎಲ್ಲವನ್ನೂ ತಿಂತಾರೆ. ಕುಡೀತಾರೆ. ಅವರಿಗೇ ಭಯ ಇಲ್ಲ ಎಂದು ತಿಳಿಸಿದ್ದಾರೆ ಜಾಕ್ ಮಂಜು.

    ಎರಡು ಶಿಫ್ಟ್‍ಗಳಲ್ಲಿ ಕೆಲಸ ಮಾಡುತ್ತಿರುವ ಚಿತ್ರತಂಡ ಶೀಘ್ರದಲ್ಲೇ ಶೂಟಿಂಗ್ ಮುಗಿಸುವ ಉತ್ಸಾಹದಲ್ಲಿದೆ. ಇದಾದ ನಂತರ ಸುದೀಪ್ ಮೇಲೊಂದು ಹಾಡು ಹಾಗೂ ಒಂದು ಫೈಟ್ ಸೀನ್ ಚಿತ್ರೀಕರಣ ಬಾಕಿ ಇರುತ್ತೆ.

  • ಅಂಬಿ.. ಟೀಂಗೆ ಸುದೀಪ್, ಶೃತಿ

    sudeep sruthi hariharan in ambi ninge vaisaito

    ರೆಬಲ್‍ಸ್ಟಾರ್ ಅಂಬರೀಷ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಅಂಬಿ ನಿಂಗೆ ವಯಸ್ಸಾಯ್ತೋ. ಕಿಚ್ಚ ಕ್ರಿಯೇಷನ್ಸ್‍ನಲ್ಲಿ ಸಿದ್ಧವಾಗುತ್ತಿರುವ ಸಿನಿಮಾಗೆ ಈಗ ಸುದೀಪ್ ಮತ್ತು ಶೃತಿ ಹರಿಹರನ್ ಎಂಟ್ರಿ ಕೊಟ್ಟಿದ್ದಾರೆ.

    ಚಿತ್ರದಲ್ಲಿ ಸುದೀಪ್, ಯೌವ್ವನದ ಅಂಬರೀಷ್ ಆಗಿ ಕಾಣಿಸಿಕೊಳ್ತಾರೆ. ಜೋಡಿಯಾಗಿ ಶೃತಿ ಹರಿಹರನ್ ಇರ್ತಾರೆ. ಇಬ್ಬರ ಪಾತ್ರಗಳ ಶೂಟಿಂಗ್ ಶುರುವಾಗಿದೆ. ತಮಿಳಿನ ಪವರ್ ಪಾಂಡಿ ಚಿತ್ರದ ರೀಮೇಕ್ ಆಗಿರುವ ಚಿತ್ರಕ್ಕೆ ಗುರುದತ್ ಗಾಣಿಗ ನಿರ್ದೇಶನವಿದೆ. 

     

  • ಅಂಬಿ.. ಸಂಭ್ರಮಕ್ಕೆ ದಕ್ಷಿಣ ಚಿತ್ರರಂಗದ ಸೂಪರ್‍ಸ್ಟಾರ್ಸ್

    ambi ninge vaisaitho audio launch on aug 10th

    ಅಂಬಿ ನಿಂಗೆ ವಯಸ್ಸಾಯ್ತೋ.. ರೆಬಲ್‍ಸ್ಟಾರ್ ಅಂಬರೀಷ್ ಹಲವು ವರ್ಷಗಳ ನಂತರ ಹೀರೋ ಆಗಿ ನಟಿಸಿರುವ ಸಿನಿಮಾ. ಸುದೀಪ್ ಚಿತ್ರದಲ್ಲಿ ಯಂಗ್ ಅಂಬರೀಷ್ ಆಗಿ ನಟಿಸಿದ್ದಾರೆ. ಜಾಕ್ ಮಂಜು ನಿರ್ಮಾಣದ ಚಿತ್ರಕ್ಕೆ ಗುರುದತ್ ಗಾಣಿಗ ಎಂಬ ಹೊಸ ಪ್ರತಿಭೆಯ ನಿರ್ದೇಶನವಿದೆ. ಶೃತಿ ಹರಿಹರನ್, ಚಿತ್ರದಲ್ಲಿ ಯಂಗ್ ಸುಹಾಸಿನಿಯಾಗಿ ನಟಿಸಿದ್ದಾರೆ. ಇಷ್ಟೆಲ್ಲ ವಿಶೇಷಗಳಿರೋ ಚಿತ್ರದ ಆಡಿಯೋ ಬಿಡುಗಡೆಯನ್ನೂ ಅದ್ಧೂರಿಯಾಗಿಯೇ ಮಾಡೋಕೆ ನಿರ್ಧರಿಸಿದೆ ಚಿತ್ರತಂಡ.

    ಆಗಸ್ಟ್ 10ಕ್ಕೆ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ಇಟ್ಟುಕೊಳ್ಳಲಾಗಿದೆ. ಆ ಸಮಾರಂಭಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದ ಹಲವು ತಾರೆಯರು ಆಗಮಿಸುವ ನಿರೀಕ್ಷೆ ಇದೆ. 

    ಇನ್ನು ಕನ್ನಡ ಚಿತ್ರರಂಗದ ಬಹುತೇಕ ಎಲ್ಲ ಸ್ಟಾರ್‍ಗಳೂ, ಕಲಾವಿದರು, ತಂತ್ರಜ್ಞರು ತಂಡೋಪತಂಡವಾಗಿ ಅಂಬಿ.. ಹಾಡುಗಳ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. 

    ಚಿತ್ರದ ಟೈಟಲ್ ನೋಡಿ, ನಂಗೆ ವಯಸ್ಸಾಯ್ತು ಅಂದ್ಕೋಬೇಡಿ. ಸಿನಿಮಾ ನೋಡಿ ಡಿಸೈಡ್ ಮಾಡಿ. ವಯಸ್ಸಾಗಿದ್ಯೋ ಇಲ್ವೋ ಅನ್ನೋದನ್ನ ಎಂದು ಅಂಬಿ ಸ್ಟೈಲ್‍ನಲ್ಲೇ ಚಾಲೆಂಜ್ ಹಾಕಿದ್ದಾರೆ ಅಂಬರೀಷ್. ಈ ಚಿತ್ರದ ಹಿಂದಿನ ಶಕ್ತಿ ಸುದೀಪ್. ಅವನಿಲ್ಲದಿದ್ದರೆ ಈ ಚಿತ್ರ ಬರುತ್ತಿರಲಿಲ್ಲ ಎಂದು ಸುದೀಪ್‍ರನ್ನು ಹೊಗಳಿದ್ದಾರೆ.

  • ಅಂಬಿ.. ಸಿನಿಮಾ.. ಕಿಚ್ಚ, ಶಿವಣ್ಣ, ಪ್ರೇಮ್ ಕಂಡಂತೆ..

    ambi ninge vaisiatho is awaited by film industry too

    ಅಂಬಿ ನಿಂಗ್ ವಯಸ್ಸಾಯ್ತೋ.. ಸಿನಿಮಾ ಮುಂದಿನ ವಾರ ರಿಲೀಸ್. ಅಂಬರೀಷ್ 14 ವರ್ಷಗಳ ನಂತರ ಮತ್ತೊಮ್ಮೆ ಹೀರೋ ಆಗಿ ನಟಿಸಿದ್ದಾರೆ ಎನ್ನುವುದೇ ಅಭಿಮಾನಿಗಳಲ್ಲಿ ಥ್ರಿಲ್. ಅಭಿಮಾನಿಗಳಂತೆಯೇ ಸ್ಯಾಂಡಲ್‍ವುಡ್ ತಾರೆಗಳೂ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

    ಶಿವರಾಜ್‍ಕುಮಾರ್ ಅವರಿಗೆ ಅಂಬಿ ನಿಂಗ್ ವಯಸ್ಸಾಯ್ತೋ.. ಚಿತ್ರದ ಟೈಟಲ್ ಹೇಳೋದು ಸ್ವಲ್ಪ ಕಷ್ಟ. ಯಾಕಂದ್ರೆ, ಅವರಿಗೆ ವಯಸ್ಸೇ ಆಗಲ್ಲ. ಈಗಾಗಲೇ ಹಾಡು ಕೇಳಿದ್ದೇನೆ. ಚೆನ್ನಾಗಿ ಬಂದಿದೆ. ಸಿನಿಮಾ ಕೂಡಾ ಚೆನ್ನಾಗಿ ಬಂದಿರುತ್ತೆ ಅನ್ನೋದು ನನ್ನ ನಂಬಿಕೆ. ನಿದೇಶಕ ಗುರುದತ್ ಗಾಣಿಗ ಅವರಿಗೆ ವಿಶ್ ಮಾಡಿದ್ದೇನೆ. ಸಿನಿಮಾ ನೋಡಲು ಕಾಯುತ್ತಿದ್ದೇನೆ ಎಂದಿದ್ದಾರೆ ಶಿವಣ್ಣ.

    ಈ ಸಿನಿಮಾದಲ್ಲಿ ಅಂಬರೀಷ್ ಅವರನ್ನು ನೋಡಿದ ಜನ ನಿಜಕ್ಕೂ ಖುಷಿ ಪಡ್ತಾರೆ. ಸಿನಿಮಾದಲ್ಲಿ ಅಂಬರೀಷ್ ಅಪ್ಪಟ ಮಗುವಿನಂತೆ ನಟಿಸಿದ್ದಾರೆ. ಅದರಲ್ಲೂ ಸುಹಾಸಿನಿಯವರನ್ನು ಭೇಟಿ ಮಾಡುವ ದೃಶ್ಯಗಳಲ್ಲಿ ಸುದೀಪ್ ಅಪ್ಪಟ ಮಗು. ಅದನ್ನು ಗುರುದತ್ ಗಾಣಿಗ ಅದ್ಭುತವಾಗಿ ಸೆರೆಹಿಡಿದಿದ್ದಾರೆ. ಇದು ಕಿಚ್ಚ ಸುದೀಪ್ ಮಾತು. ಸಿನಿಮಾದಲ್ಲಿ ಯಂಗ್ ಅಂಬರೀಷ್ ಆಗಿ ಕಾಣಿಸಿಕೊಂಡಿರೋ ಸುದೀಪ್ ಚಿತ್ರದ ನಿರ್ಮಾಪಕರೂ ಹೌದು.

    ನೆನಪಿರಲಿ ಪ್ರೇಮ್ ಅವರಂತೂ ಸಿನಿಮಾ ನೋಡೋಕೆ ಕಾಯುತ್ತಿದ್ದಾರೆ. ಅದಕ್ಕೆ ವಿಶೇಷ ಕಾರಣವೂ ಇದೆ. ಸಿನಿಮಾದಲ್ಲಿ ಸುದೀಪ್ ಮಾಡಿರುವ ಪಾತ್ರದಲ್ಲಿ ಮೊದಲು ಪ್ರೇಮ್ ನಟಿಸಬೇಕಾಗಿತ್ತಂತೆ. ಆಗ ನಿರ್ಮಾಪಕರು ಬೇರೆ ಇದ್ದರು. ಸುದೀಪ್ ಟೇಕ್ ಓವರ್ ಮಾಡಿದ ಮೇಲೆ ಬದಲಾವಣೆಗಳಾದವು. ಹೀಗಾಗಿ ಅಂಬಿಯಣ್ಣನ ಜೊತೆ ನಟಿಸೋ ಚಾನ್ಸ್ ಮಿಸ್ಸಾಯ್ತು ಎನ್ನುವ ಪ್ರೇಮ್, ಚಿತ್ರವನ್ನು ನೋಡೋಕೆ ತುದಿಗಾಲಲ್ಲಿ ನಿಂತಿದ್ದೇನೆ ಎಂದಿದ್ದಾರೆ.

  • ಅಂಬಿಗೆ ಡೈರೆಕ್ಷನ್.. ಹೇಗಿತ್ತು ಹೊಸ ಹುಡುಗನ ಅನುಭವ..?

    gurudutt ganiga talks about amabreesh

    ಅಂಬಿ ನಿಂಗೆ ವಯಸ್ಸಾಯ್ತೋ.. ಈ ಸಿನಿಮಾ ಹಲವು ಕಾರಣಕ್ಕೆ ಗಮನ ಸೆಳೆದಿದೆ. ಮೊದಲಿಗೆ ಬಹಳ ಕಾಲದ ನಂತರ ಅಂಬಿ ಹೀರೋ ಆಗಿ ನಟಿಸಿದ್ದಾರೆ. ಯಂಗ್ ಅಂಬಿಯಾಗಿ ನಟಿಸಿರೋದು ಸುದೀಪ್. ಒಬ್ಬನೇ ವ್ಯಕ್ತಿಯ ಯೌವ್ವನ ಹಾಗೂ ವೃದ್ದಾಪ್ಯವನ್ನು ಇಬ್ಬರು ನಟರು ನಿರ್ವಹಿಸುವುದು ಕನ್ನಡಕ್ಕೆ ಇದೇ ಮೊದಲ ಪ್ರಯೋಗ. ಅಷ್ಟೇ ಅಲ್ಲ, ನಾಯಕಿಯರಲ್ಲೂ ಅಷ್ಟೆ, ಶೃತಿ ಹರಿಹರನ್.. ಯಂಗ್ ಸುಹಾಸಿನಿಯಾಗಿದ್ದಾರೆ. ಚಿತ್ರದಲ್ಲಿ ಇಷ್ಟೆಲ್ಲ ಸ್ಟಾರ್‍ಗಳಿದ್ದರೂ ಸುದೀಪ್ ಮತ್ತು ಜಾಕ್‍ಮಂಜು ನಿರ್ದೇಶನದ ಅವಕಾಶ ಕೊಟ್ಟಿರೋದು ಹೊಸ ಹುಡುಗನಿಗೆ. ಗುರುದತ್‍ಗೆ ಇದು ಮೊದಲ ಸಿನಿಮಾ.

    ಸಿನಿಮಾ ಮಾಡುವುದು ಒಂದು ತೂಕವಾದರೆ, ಅಂಬರೀಷ್‍ರನ್ನು ನಿಭಾಯಿಸುವುದೇ ಇನ್ನೊಂದು ತೂಕ. ಅಂತಾದ್ದೊಂದು ಸವಾಲನ್ನು ಗುರುದತ್ ಅತ್ಯಂತ ಸಲೀಸಾಗಿ ನಿಭಾಯಿಸಿಬಿಟ್ಟಿದ್ದಾರೆ.

    ನನಗೆ ಅದೊಂದು ಸವಾಲು ಎನಿಸಲೇ ಇಲ್ಲ. ಅವರು ಮಗುವಂತೆ ನಟಿಸಿ, ಶಾಟ್ ಓಕೆನಾ ಎನ್ನುತ್ತಿದ್ದರು. ಸರಿ ಬರಲಿಲ್ಲ ಎಂದರೆ, ತಕ್ಷಣ ಇನ್ನೊಂದು ಟೇಕ್‍ಗೆ ರೆಡಿಯಾಗಿಬಿಡುತ್ತಿದ್ದರು. ನನಗೆ ನನ್ನ ತಂದೆಗೇ ನಿರ್ದೇಶನ ಮಾಡುತ್ತಿದ್ದೇನೆ ಎನಿಸುತ್ತಿತ್ತು ಎಂದು ಹೇಳಿಕೊಂಡಿದ್ದಾರೆ ಗುರುದತ್.

    ಅಂಬಿ ಬೈದರೂ ಅದು ಬೈಗುಳ ಎನಿಸಲಿಲ್ಲವಂತೆ. ಅಫ್‍ಕೋರ್ಸ್.. ಅಂಬಿ ಬಯ್ಯೋದಯ್ಯ ಯಾರೊಬ್ಬರೂ ಬೈಗುಳ ಅಂದುಕೊಳ್ಳೋದಿಲ್ಲ ಅನ್ನೋದಂತೂ ಸತ್ಯ. ಅಂಬರೀಷ್‍ರನ್ನು ನಿರ್ದೇಶಿಸಿದ್ದು ನನ್ನ ಬದುಕಿನ ಅತ್ಯಂತ ಅದ್ಭುತ ಕ್ಷಣಗಳು ಎಂದು ಖುಷಿಗೊಂಡಿದ್ದಾರೆ ಗುರುದತ್. 

  • ಅಂಬಿಗೆ ವಯಸ್ಸಾಗುವ ಮುನ್ನ.. ಹಳ್ಳಿ ಹೈದ ಕಿಚ್ಚ.. 

    ambi ninge vaisaitho shooting image

    ಅಂಬಿ ನಿಂಗೆ ವಯಸ್ಸಾಯ್ತೊ... ಬಹಳ ವರ್ಷಗಳ ನಂತರ ಅಂಬರೀಷ್ ಪೋಷಕ ಪಾತ್ರ ಬಿಟ್ಟು, ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಸಿನಿಮಾ. ಅಂಬರೀಷ್ ಅವರನ್ನು ಹೀರೋ ಮಾಡಿರುವ ಜಾಕ್ ಮಂಜು, ಯಂಗ್ ಅಂಬರೀಷ್ ಪಾತ್ರದಲ್ಲಿ ತೋರಿಸಿರೋದು ಸುದೀಪ್ ಅವರನ್ನ. 

    ಚಿತ್ರದಲ್ಲಿ ಸುದೀಪ್ ಹೇಗೆ ಕಾಣ್ತಾರೆ ಅನ್ನೋಕ್ಕೆ ಇನ್ನೊಂದು ಫೋಟೋ ಹೊರಗೆ ಬಿಟ್ಟಿದ್ದಾರೆ. ಅದರಲ್ಲಿ ಸುದೀಪ್ ಮತ್ತು ಶೃತಿ ಹರಿಹರನ್, ಅಪ್ಪಟ ಹಳ್ಳಿಯ ಪ್ರೇಮಿಗಳಾಗಿ ಕಾಣಿಸಿಕೊಂಡಿದ್ದಾರೆ. ಸುದೀಪ್ ಮತ್ತು ಶೃತಿ, ಇಬ್ಬರಿಗೂ ಇಂಥಾದ್ದೊಂದು ಲುಕ್ ಹೊಸದೇ.. ಹೀಗಾಗಿಯೇ ಪೋಸ್ಟರ್‍ನಲ್ಲಿ ಫ್ರೆಶ್‍ನೆಸ್ ಇದೆ.

    ಗುರುದತ್ ನಿರ್ದೇಶನದ ಚಿತ್ರದಲ್ಲಿ 2 ಕಥೆಗಳಿವೆ. ಒಂದು 70-80ರ ದಶಕದ ಕಥೆ. ಇನ್ನೊಂದು ಈಗಿನ ಕಥೆ. 70ರ ದಶಕಕ್ಕೆ ಸುದೀಪ್, ಈಗಿನ ಕಾಲಕ್ಕೆ ಅಂಬರೀಷ್. ಸ್ಸೋ.. ಅಂಬಿಗೆ ವಯಸ್ಸಾಗುವ ಮುನ್ನ.. ಸುಹಾಸಿನಿಗೂ ವಯಸ್ಸಾಗೋ ಮೊದಲು, ತೆರೆ ಮೇಲೆ ಕಾಣಿಸಿಕೊಳ್ಳೋದು ಸುದೀಪ್ ಮತ್ತು ಶೃತಿ. ಚಿತ್ರ ಆಗಸ್ಟ್‍ನಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  • ಅಂಬಿಯನ್ನು ಮೆಚ್ಚಿಕೊಂಡ ಶಿವಣ್ಣ, ಕೆ.ಎಲ್.ರಾಹುಲ್..

    ambi ninge vaisaitho

    ಅಂಬಿ ನಿಂಗ್ ವಯಸ್ಸಾಯ್ತೋ.. ಚಿತ್ರ ಬಾಕ್ಸಾಫೀಸ್‍ನಲ್ಲಿ ಝೂಮ್‍ನಲ್ಲಿ ಹೋಗ್ತಾ ಇದೆ. ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿರೋದು ಅಭಿಮಾನಿಗಳಷ್ಟೇ ಅಲ್ಲ, ಚಿತ್ರರಂಗದ ತಾರೆಯರು, ವಿವಿಧ ಕ್ಷೇತ್ರದ ಸೆಲಬ್ರಿಟಿಗಳೂ ಸಿನಿಮಾ ನೋಡಿದ್ದಾರೆ.

    ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್, ಓರಿಯನ್ ಮಾಲ್‍ನಲ್ಲಿ ಸಿನಿಮಾ ನೋಡಿ ಅಂಬಿಯ ಅಭಿನಯಕ್ಕೆ ಹ್ಯಾಟ್ಸಾಫ್ ಎಂದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಕೆ.ಎಲ್.ರಾಹುಲ್ ಕೂಡಾ, ಕ್ರಿಕೆಟ್ ಮಧ್ಯೆಯೇ ಬಿಡುವು ಮಾಡಿಕೊಂಡು ಬಂದು ಸಿನಿಮಾ ನೋಡಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್ ಸಿನಿಮಾ ನೋಡಿ, ಸೀದಾ ಅಂಬರೀಷ್ ಮನೆಗೇ ಹೋಗಿ ಸಿನಿಮಾ ಬಗ್ಗೆ ಮೆಚ್ಚುಗೆ ತಿಳಿಸಿದ್ದಾರೆ. ಮಂಡ್ಯದ ಹೈದ ಚಿಕ್ಕಣ್ಣ ಕೂಡಾ ಅಂಬರೀಷ್ ಅಣ್ಣನ ಮನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

    ನಿರ್ದೇಶಕ ಪವನ್ ಒಡೆಯರ್, ಬಾಲಿವುಡ್ ನಟ ಸುನಿಲ್ ಶೆಟ್ಟಿ, ಯಶ್, ರಾಧಿಕಾ ಪಂಡಿತ್, ಭಾವನಾ ರಾವ್, ಭಾರತಿ ವಿಷ್ಣುವರ್ಧನ್, ಶರತ್ ಕುಮಾರ್, ವಿಜಯಲಕ್ಷ್ಮೀ ಸಿಂಗ್, ಹರ್ಷಿಕಾ ಪೂಣಚ್ಚ, ಕವಿರಾಜ್, ಟಿ.ಎಸ್.ನಾಗಾಭರಣ, ಬಿ.ಸರೋಜಾ ದೇವಿ, ರವಿಶಂಕರ್ ಗೌಡ.. 

    ಪಟ್ಟಿ ತುಂಬಾ ದೊಡ್ಡದಿದೆ. ಅಂಬಿಯನ್ನು ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳಷ್ಟೇ ಅಲ್ಲ, ಚಿತ್ರರಂಗದವರೂ ಕಾಯುತ್ತಿದ್ದರು ಅನ್ನೋಕೆ ಇದೇ ಸಾಕ್ಷಿ.

  • ಅಭಿಮಾನಿಗಳೇ ನಮಸ್ಕಾರ.. ಅಂಬರೀಷ್ ಒಲವಿನ ಉಡುಗೊರೆ

    ambi's letter to fans

    ಅಂಬರೀಷ್ ಮಾತು ಯಾವತ್ತೂ ಹಾಗೆಯೇ.. ಒರಟು. ಹೃದಯದ ಮಾತು ಬೇರೆ. ಆ ಒರಟುತನವನ್ನು ಬಿಟ್ಟು, ಅಂಬರೀಷ್ ಏನಾದರೂ ನಯವಿನಯದಿಂದ ಮಾತನಾಡಿದರೆ, ಮಾತನಾಡಿಬಿಟ್ಟರೆ... ಅವರನ್ನು ಹತ್ತಿರದಿಂದ ಬಲ್ಲವರು ಏನೋ ಪ್ರಾಬ್ಲಂ ಆಗಿರಬೇಕು ಎಂದುಕೊಳ್ತಾರೆ. ಅಷ್ಟರಮಟ್ಟಿಗೆ ಅಂಬರೀಷ್ ಅವರ ಒರಟುತನದ ಮಂಡ್ಯ ಭಾಷೆಯೂ ಫೇಮಸ್. ಅಂಥ ಅಂಬರೀಷ್, ಅಭಿಮಾನಿಗಳೇ ನಮಸ್ಕಾರ ಎಂದಿದ್ದಾರೆ. ಅಭಿಮಾನಿಗಳಿಗೆ ಪತ್ರವನ್ನೂ ಬರೆದಿದ್ದಾರೆ.

    ಇದು `ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರದ ಪ್ರಥಮ ಟೀಸರ್. ನಾನೇಕೆ ಈ ಪಾತ್ರವನ್ನು ಒಪ್ಪಿಕೊಂಡೆ ಅನ್ನೋದನ್ನು ಅಂಬರೀಷ್ ಹೇಳ್ತಾ ಹೋಗ್ತಾರೆ. ಅಂಬರೀಷ್ ನಟನಾಗಬೇಕು, ಸ್ಟಾರ್ ಆಗಬೇಕೆಂದು ಚಿತ್ರರಂಗಕ್ಕೆ ಬಂದವರಲ್ಲ. ಪುಟ್ಟಣ್ಣನವರ ಗರಡಿಯಲ್ಲಿ ಅವರ ಶಿಷ್ಯನಾಗಿ, ಬಂದದ್ದನ್ನು ಬಂದಂತೆಯೇ ಸ್ವೀಕರಿಸಿ ರೆಬಲ್‍ಸ್ಟಾರ್ ಆದವರು. ಶಾಸಕರಾಗಿ, ಸಂಸದರಾಗಿ, ಕೇಂದ್ರದಲ್ಲಿ, ರಾಜ್ಯದಲ್ಲಿ ಮಂತ್ರಿಯಾಗಿ.. ರಾಜಕಾರಣದ ದೊಡ್ಡ ಮೆಟ್ಟಿಲುಗಳನ್ನೂ ಹತ್ತಿದವರು ಅಂಬರೀಷ್.

    ಇದೆಲ್ಲದರ ಮಧ್ಯೆ ಎರಡು ವರ್ಷದ ಹಿಂದೆ ಅಂಬರೀಷ್ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿದರಲ್ಲ.. ಆಗ ಅಂಬರೀಷ್‍ರೊಳಗಿನ ಕಲಾವಿದನ ಚಡಪಡಿಕೆ ಶುರುವಾಯಿತಂತೆ. ನನ್ನ ವಯಸ್ಸಿಗೆ ತಕ್ಕಂತ ಪಾತ್ರಗಳಲ್ಲಿ ನಟಿಸಬೇಕು ಎಂಬ ಚಡಪಡಿಕೆ ತುಡಿಯುತ್ತಿದ್ದಾಗ ಬಂದ ಚಿತ್ರವೇ `ಅಂಬಿ ನಿಂಗೆ ವಯಸ್ಸಾಯ್ತೋ'.

    ಇಂಥಾದ್ದೊಂದು ಪಾತ್ರ ಕೊಟ್ಟ ಸುದೀಪ್‍ಗೆ ಥ್ಯಾಂಕ್ಸ್ ಹೇಳುವ ಅಂಬಿ, ಸುದೀಪ್ ನನ್ನ ಮಗನಿದ್ದ ಹಾಗೆ ಎಂದು ಪ್ರೀತಿಯಿಂದ ಹೇಳಿಕೊಳ್ತಾರೆ. ಸಿನಿಮಾ ರೆಡಿಯಾಗುತ್ತಿದೆ. ಬೇಗ ಬರ್ತೇವೆ. ಬಂದು ನೋಡಿ ಹಾರೈಸಿ ಎಂದು ತಮ್ಮ ಜೀವನದಲ್ಲಿಯೇ ಮೊತ್ತ ಮೊದಲ ಬಾರಿಗೆ ಅಭಿಮಾನಿಗಳಿಗೆ ನಮಸ್ಕಾರ ಹೇಳಿ ಕೇಳಿಕೊಂಡಿದ್ದಾರೆ. ಅಫ್‍ಕೋರ್ಸ್.. ಹಿಂಗೇ ಹೇಳಿಬಿಟ್ರೆ ಕನ್‍ಫ್ಯೂಸ್ ಆಗಿಬಿಟ್ಟಾರು ಎಂದು ಕೊನೆಗೆ ತಮ್ಮದೇ ಸ್ಟೈಲ್‍ನಲ್ಲಿ ಅಭಿಮಾನಿಗಳಿಗೊಂದು ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ. 

  • ಆದಿ ಲೋಕೇಶ್ ಹಿಂದೆ ಸೈಡ್ ಆ್ಯಕ್ಟರ್ ಅಂಬರೀಷ್?

    is ambi side actor to adi lokes

    ಅಂಬರೀಷ್ ಸೈಡ್ ಆ್ಯಕ್ಟರ್ ಆಗೋದಾ..? ಏನ್ ಹೇಳ್ತಿದ್ದೀರಾ ನೀವು..? ರೆಬಲ್‍ಸ್ಟಾರ್ ಅಂಬಿ, ಆದಿ ಲೋಕೇಶ್ ಹಿಂದೆ ಸಹನಟರಾಗಿ ಕಾಣಿಸಿಕೊಳ್ತಿದ್ದಾರಾ..? ನೀವೆಲ್ಲೋ ರಾಂಗ್ ಇರಬೇಕು. ಇನ್ನೊಂದ್ಸಲ ಚೆಕ್ ಮಾಡಿಕೊಳ್ಳಿ ಅಂತೀರಾ..? ಅನುಮಾನವೇ ಇಲ್ಲ. ಅಂಬರೀಷ್ ಸೈಡ್ ಆ್ಯಕ್ಟರ್ ಆಗಿ ನಟಿಸ್ತಾ ಇರೋದು ನಿಜ.

    ಅಂಬಿ ನಿಂಗೆ ವಯಸ್ಸಾಯ್ತೋ ಸಿನಿಮಾದಲ್ಲಿ ಸಿನಿಮಾದೊಳಗೊಂದು ಸಿನಿಮಾ ಇದೆ. ಅದರಲ್ಲಿ ಅಂಬಿ ಸೈಡ್ ಆ್ಯಕ್ಟರ್. ಉಳಿದಂತೆ ಚಿತ್ರದ ಹೀರೋ ಅವರೇ. ಹೀಗಾಗಿಯೇ ಆದಿ ಲೋಕೇಶ್ ಹಿಂದೆ ಆಜ್ಞಾನುವರ್ತಿಯ ಗೆಟಪ್‍ನಲ್ಲಿ ನಿಂತಿದ್ದಾರೆ ಅಂಬರೀಷ್. ಕಿಚ್ಚ ಸುದೀಪ್ ಬ್ಯಾನರ್‍ನಲ್ಲಿ ಜಾಕ್ ಮಂಜು ನಿರ್ಮಿಸುತ್ತಿರುವ ಚಿತ್ರ ಅಂಬಿ ನಿಂಗೆ ವಯಸ್ಸಾಯ್ತೋ.

    ನಿರ್ದೇಶಕ ಗುರುದತ್ತ್ ಗಾಣಿಗ ಅಂಬರೀಷ್, ಸುಹಾಸಿನಿ ಅಭಿಯನಯದ ದೃಶ್ಯಗಳನ್ನೆಲ್ಲ ಶೂಟ್ ಮಾಡಿಕೊಳ್ಳುತ್ತಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಸುದೀಪ್ & ಶೃತಿ ಹರಿಹರನ್ ಶೂಟಿಂಗ್‍ನಲ್ಲಿ ಭಾಗಿಯಾಗಲಿದ್ದಾರೆ.

  • ಆನ್‍ಲೈನ್‍ನಲ್ಲಿ ಅಂಬಿ ಲೀಕ್ - ಪೈರಸಿ ಪರಾಕ್ರಮಿಗೆ ಕಿಚ್ಚನ ಎಚ್ಚರಿಕೆ

    sudeep fights against piracy makers

    ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿವಿಧ ಭಾಷೆಯ ಚಿತ್ರರಂಗದ ಸೆಲಬ್ರಿಟಿಗಳೂ ಸಿನಿಮಾ ನೋಡಿ ಥ್ರಿಲ್ಲಾಗುತ್ತಿದ್ದಾರೆ. ಎಂದಿನಂತೆ ಈ ಚಿತ್ರಕ್ಕೂ ಪೈರಸಿ ದುರುಳರ ಕಾಟ ತಟ್ಟಿದೆ. ಇಡೀ ಚಿತ್ರವನ್ನು ಆನ್‍ಲೈನ್‍ನಲ್ಲಿ ಬಿಡುಗಡೆ ಮಾಡಿ ವಿಕೃತ ಸಂತೋಷ ಅನುಭವಿಸಿದ್ದಾನೆ ಒಬ್ಬ ಕಿರಾತಕ. ಆ ಕಿರಾತಕನಿಗೆ ಸುದೀಪ್ ತಮ್ಮದೇ ಶೈಲಿಯಲ್ಲಿ ವಾರ್ನಿಂ ಕೊಟ್ಟಿದ್ದಾರೆ.

    ಮೈ ಫ್ರೆಂಡ್, ನೀನು ಎಲ್ಲೇ ಇರು. ನಿನ್ನ ಮೂಲ ಪತ್ತೆ ಹಚ್ಚುತ್ತೇನೆ. ಇದು ಕೋಪ ಅಲ್ಲ, ಸರಿ ತಪ್ಪಿನ ವಿಚಾರ ಅಷ್ಟೆ. ಶೀಘ್ರದಲ್ಲೇ ನಿನ್ನನ್ನು ಕಾಣುತ್ತೇನೆ.

    ಇದು ಸುದೀಪ್ ಪೈರಸಿ ಪರಾಕ್ರಮಿಗೆ ನೀಡಿರುವ ಎಚ್ಚರಿಕೆ. ಸಾತ್ವಿಕರ ಸಿಟ್ಟೂ ಅಪಾಯಕಾರಿ. 

  • ಆರಡಿ ಕಟೌಟು, ಕುಳ್ಳ ಆಗೋದು ಹೇಗೆ..?

    sudeep in ambi ninage vaisaitu

    ಅಂಬಿ ನಿಂಗೆ ವಯಸ್ಸಾಯ್ತೋ.. ಚಿತ್ರ ಟೇಕಾಫ್ ಆಗಿದೆ. ಸಿನಿಮಾದಲ್ಲಿ ಹೀರೋ ಅಂಬರೀಷ್. ಅಂಬರೀಷ್ ಯುವಕರಾಗಿದ್ದಾಗಿನ ಪಾತ್ರ ಮಾಡೋದು ಕಿಚ್ಚ ಸುದೀಪ್. 

    ಈಗ ಅಭಿಮಾನಿಗಳನ್ನು ಕಾಡ್ತಾ ಇರೋ ಪ್ರಶ್ನೆ ಇದು. ಸುದೀಪ್ ಆರಡಿ ಕಟೌಟು. ಅಂಬರೀಷ್ 5+ ಅಡಿ ಕಟೌಟು. ಹೀಗಿರೋವಾಗ ಸುದೀಪ್ ಅದು ಹೇಗೆ ಕುಳ್ಳರಾಗ್ತಾರೆ..? ಇನ್ನೊಂದು ಪ್ರಶ್ನೆ ಕಣ್ಣುಗಳದ್ದು. ಇಬ್ಬರ ಕಣ್ಣುಗಳ ನಡುವೆ ಹೋಲಿಕೆಯೇ ಇಲ್ಲ. ಇದನ್ನೆಲ್ಲ ಹೇಗೆ ಮಾಡ್ತಾರೆ..? 

    ಈ ಪ್ರಶ್ನೆಗೆ ಉತ್ತರ ಟೆಕ್ನಾಲಜಿ. ಶಾರುಕ್ ಖಾನ್‍ರ ಫ್ಯಾನ್ ಚಿತ್ರಕ್ಕೆ ಕೆಲಸ ಮಾಡಿದ್ದ ಮುಂಬೈನ ದಿ ಬೆಸ್ಟ್ ಎನ್ನುವ ಗ್ರಾಫಿಕಲ್ ಟೀಂ ಜೊತೆ ಮಾತುಕತೆ ನಡೆಯುತ್ತಿದೆಯಂತೆ. ಕಿಚ್ಚ ಕ್ರಿಯೇಷನ್ಸ್ ಅರ್ಪಿಸುತ್ತಿರುವ ಸಿನಿಮಾಗೆ ಜಾಕ್ ಮಂಜು ನಿರ್ಮಾಪಕರು.

    ಟೆಕ್ನಾಲಜಿಯಲ್ಲಿ ಇನ್ನೂ ಏನೇನು ಅದ್ಭುತ ಹೊರಬೀಳಲಿವೆಯೋ.. ಕಾದು ನೋಡೋಣ.

  • ನಾಳೆಯಿಂದ ಅಂಬಿ ನಿಂಗ್ ವಯಸ್ಸಾಯ್ತೋ..

    ambi ninge vaisaitho to release tomorrow in abroad

    ರೆಬಲ್‍ಸ್ಟಾರ್ ಅಂಬರೀಷ್ ಅಭಿನಯದ ಕೊನೆಯ ಚಿತ್ರ (ಕುರುಕ್ಷೇತ್ರ ಇನ್ನೂ ಬಿಡುಗಡೆಯಾಗಿಲ್ಲ) ಅಂಬಿ ನಿಂಗ್ ವಯಸ್ಸಾಯ್ತೋ.. ನಾಳೆ ವಿದೇಶಗಳಲ್ಲಿ ರಿಲೀಸ್ ಆಗುತ್ತಿದೆ. ಅಂಬರೀಷ್ ನಿಧನದ ಬೆನ್ನಲ್ಲೇ ಚಿತ್ರವನ್ನು ಮತ್ತೊಮ್ಮೆ ಬಿಡುಗಡೆ ಮಾಡೋದಾಗಿ ಹೇಳಿದ್ದ ನಿರ್ಮಾಪಕ ಜಾಕ್ ಮಂಜು, ವಿದೇಶಗಳಲ್ಲಿಯೇ ಚಿತ್ರ ಬಿಡುಗಡೆಗೆ ಮುಂದಾಗಿದ್ದಾರೆ. 

    ಕೆನಡಾದ ಅಟ್ಲಾಂಟಾ, ಮಿಲ್ಪಿಟಾಸ್, ಐರ್ಲೆಂಡ್,ಅಮೆರಿಕದ ಚಿಕಾಗೋ, ಡಲ್ಲಾಸ್ ಸೇರಿದಂತೆ ಹಲವು ಕಡೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.ಸೀಟಲ್, ಸ್ಯಾಂಡಿಯಾಗೋ, ತಂಪಾ, ಲಾಸ್‍ಏಂಜಲೀಸ್, ಸ್ಯಾನ್‍ಜೋಸ್‍ಗಳಲ್ಲಿ ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡಕ್ಕಿದೆ.

    ಇನ್ನೊಂದು ವಿಶೇಷವೆಂದರೆ, ಈ ಪ್ರದರ್ಶನದಿಂದ ಬರುವ ಸಂಪೂರ್ಣ ಲಾಭಾಂಶ ಅಂಬರೀಷ್ ನಿಧನರಾದ ದಿನವೇ ಮಂಡ್ಯದಲ್ಲಿನ ಕನಗನ ಮರಡಿ  ಬಸ್  ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನೀಡಲು ಚಿತ್ರತಂಡ ನಿರ್ಧರಿಸಿದೆ.

  • ನಿರ್ದೇಶಕರಿಗೆ ಅಂಬಿಯೇ ಧೈರ್ಯ ತುಂಬಿದ್ದರು..!

    ambi talks about ambi ninge vaiaitho

    ಅಂಬಿ ನಿಂಗ್ ವಯಸ್ಸಾಯ್ತೋ ಚಿತ್ರದ ನಿರ್ದೇಶಕ ಗುರುದತ್ ಗಾಣಿಗ, ಅಂಬರೀಷ್‍ರ ವಯಸ್ಸಿನ ಅರ್ಧಕ್ಕಿಂತ ಚಿಕ್ಕ ವಯಸ್ಸಿನ ಹುಡುಗ. ಸುದೀಪ್ ಅಂಬರೀಷ್ ಬಳಿ `ಮಾಮ, ನನ್ನ ಬಳಿ ಒಬ್ಬ ಹುಡುಗ ಇದ್ದಾನೆ. ತುಂಭಾ ಟ್ಯಾಲೆಂಟೆಡ್ ಫೆಲೋ. ನೋಡಿದ್ರೆ ಚಿಕ್ಕ ಹುಡುಗನ ಥರಾ ಕಾಣ್ತಾನೆ. ಆದರೆ ಒಳ್ಳೆಯ ಕೆಲಸಗಾರ' ಎಂದು ಹೇಳಿ ಗುರುದತ್‍ನನ್ನು ಕಳಿಸಿಕೊಟ್ಟಿದ್ದರಂತೆ. ಮೇಲಿಂದ ಕೆಳಗೆ ನೋಡಿದ ಅಂಬರೀಷ್, ಇವನ್ಯಾರೋ.. ಒಳ್ಳೆ ಮಗು ಥರಾ ಇದ್ದಾನೆ. ಹೇಗಪ್ಪ ಎಂದುಕೊಂಡಿದ್ದರಂತೆ.

    ಮೊದಲನೇ ದಿನ ಸೆಟ್‍ಗೆ ಹೋದರೆ, ಏನಾದರೂ ಹೇಳಿಕೊಳ್ಳೋಕೂ ಹೆದರುತ್ತಿದ್ದ ಹುಡುಗನಿಗೆ ನಂತರ ಅಂಬರೀಷ್ ಅವರೇ ಧೈರ್ಯ ಹೇಳಿದ್ರಂತೆ. ಡೈರೆಕ್ಟರೇ.. ಹೆದರಿಕೊಳ್ಳಬೇಡಿ. ನಾನು ಹೊರಗೆ ಮಾತ್ರ ಅಂಬರೀಷ್. ಸೆಟ್‍ನಲ್ಲಿ ಡೈರೆಕ್ಟರ್ ಹೇಳಿದಂತೆ ಕೇಳುವ ನಟ ಅಷ್ಟೆ ಎಂದು ಧೈರ್ಯ ತುಂಬಿದರಂತೆ. ಅದಾದ ಮೇಲೆ ಸರಿ ಹೋಯ್ತು ಎಂದು ಹೇಳಿಕೊಂಡಿದ್ದಾರೆ ಅಂಬಿ. ಎಷ್ಟೆಂದರೂ ಪುಟ್ಟಣ್ಣ ಗರಡಿಯಲ್ಲಿ ಬೆಳೆದವರು. ನಿರ್ದೇಶಕರನ್ನು ಗೌರವಿಸುವ ಗುಣ, ಸಹಜವಾಗಿಯೇ ಬಂದಿದೆ.

    ಅಷ್ಟೇ ಅಲ್ಲ, ದಿಲೀಪ್ ರಾಜ್‍ಗೆ ಚಿತ್ರದಲ್ಲಿ ಅಂಬರೀಷ್‍ರನ್ನು ಬೈಯ್ಯುವ ದೃಶ್ಯಗಳಿವೆ. ಆ ದೃಶ್ಯಗಳನ್ನು ಮಾಡೋಕೆ ಹೆದರುತ್ತಿದ್ದ ದಿಲೀಪ್ ರಾಜ್‍ಗೆ `ನೀನು ಬೈತಿರೋದು ಅಂಬರೀಷ್‍ಗೆ ಅಲ್ಲ, ಸಿನಿಮಾದಲ್ಲಿರೋ ಅಂಬಿಯ ಪಾತ್ರಕ್ಕೆ' ಎಂದು ಹೇಳಿ ಧೈರ್ಯ ತುಂಬಿದರಂತೆ.

    ಹೀಗೆ ಕಿರಿಯರ ಜೊತೆ ಪ್ರೀತಿಯಿಂದ ಕೆಲಸ ಮಾಡಿಸಿ ತಂದಿರುವ ಸಿನಿಮಾ ಈಗ ಥಿಯೇಟರಿನಲ್ಲಿದೆ. ಜಾಕ್ ಮಂಜು ನಿರ್ಮಾಣದ ಚಿತ್ರದಲ್ಲಿ ಸುದೀಪ್ ನಿರ್ಮಾಪಕರೂ ಹೌದು. ಕಲಾವಿದರೂ ಹೌದು. ಶೃತಿ ಹರಿಹರನ್, ಯಂಗ್ ಸುಹಾಸಿನಿಯಾಗಿ ನಟಿಸಿದ್ದಾರೆ. 

    ನನ್ನ ವಯಸ್ಸಿಗೆ ತಕ್ಕಂತೆ ಕಥೆ, ಸ್ಕ್ರಿಪ್ಟ್ ಬಂದರೆ ನಟಿಸೋಕೆ ಸಿದ್ಧ ಎಂದಿರೋ ಅಂಬರೀಷ್, ಹೊಸ ಪ್ರತಿಭೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  • ಮತ್ತೊಬ್ಬ ಹೊಸ ನಿರ್ದೇಶಕನಿಗೆ ಸುದೀಪ್ ಚಾನ್ಸ್

    sudeep gives chance to gurudutt ganiga

    ಹೊಸ ಪ್ರತಿಭೆಗಳನ್ನು ಗುರುತಿಸುವ, ಅವಕಾಶ ನೀಡುವುದರಲ್ಲಿ ಸದಾ ಮುಂದಿರುವ ಕಿಚ್ಚ ಸುದೀಪ್, ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸದ್ಯಕ್ಕೆ ವಿಲನ್ ಚಿತ್ರದ ಶೂಟಿಂಗ್‍ನಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿರುವ ಸುದೀಪ್, ಆನಂತರ ಪೈಲ್ವಾನ್ ಸಿನಿಮಾಗೆ ರೆಡಿಯಾಗಬೇಕು. ಅದರ ಮಧ್ಯೆಯೇ ಕೋಟಿಗೊಬ್ಬ-3 ಸಿನಿಮಾ ಶುರುವಾಗಲಿದೆ. 

    ಮೊನ್ನೆ ಮೊನ್ನೆಯಷ್ಟೇ `ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾ ನಿರ್ದೇಶನದ ಅವಕಾಶವನ್ನು ಗುರುದತ್ತ ಗಾಣಿಗ ಎಂಬ ಯುವಕನಿಗೆ ನೀಡಿದ್ದ ಸುದೀಪ್, ತಮ್ಮ ಕೋಟಿಗೊಬ್ಬ-3 ಚಿತ್ರ ನಿರ್ದೇಶನದ ಅವಕಾಶವನ್ನು ಕಾರ್ತಿಕ್ ಎಂಬ ಹೊಸ ಪ್ರತಿಭೆಗೆ ನೀಡಿದ್ದಾರೆ. ಕಾರ್ತಿಕ್ ಕಥೆ ಹೇಳಿದ ಶೈಲಿ ಇಷ್ಟವಾಗಿ ಸುದೀಪ್‍ಗೆ ಕಾರ್ತಿಕ್‍ಗೆ ಅವಕಾಶ ಕೊಟ್ಟಿದ್ದಾರಂತೆ.

    ಕಾರ್ತಿಕ್ ಈಗಾಗಲೇ ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವನ್ನೂ ಸಿದ್ಧ ಮಾಡಿಟ್ಟುಕೊಂಡು ಕಾಯುತ್ತಿದ್ದಾರೆ. ನಿರ್ಮಾಪಕ ಸೂರಪ್ಪ ಬಾಬು ಕೂಡಾ ರೆಡಿ ಇದ್ದಾರೆ. ದಿ ವಿಲನ್ ಚಿತ್ರದ ಶೂಟಿಂಗ್ ಮುಗಿದ ತಕ್ಷಣ ಉಳಿದ ಎಲ್ಲ ಚಿತ್ರಗಳಿಗೂ ಚಾಲನೆ ಸಿಗಲಿದೆ

  • ಯಂಗ್ ಅಂಬಿಗೆ ಶೃತಿ ಹರಿಹರನ್ ಜೋಡಿ

    Ambi Ninge Vayassaitho

    ಅಂಬಿ ನಿಂಗೆ ವಯಸ್ಸಾಯ್ತೋ.. ಕಿಚ್ಚ ಕ್ರಿಯೇಷನ್ಸ್‍ನಲ್ಲಿ ಬರುತ್ತಿರುವ ಚಿತ್ರದಲ್ಲಿ ಕಿಚ್ಚ ಸುದೀಪ್, ಯಂಗ್ ಅಂಬರೀಷ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯುವಕ ಅಂಬರೀಷ್ ಪಾತ್ರದಲ್ಲಿ ನಟಿಸುತ್ತಿರುವುದು ಸುದೀಪ್.

    ಸೀನಿಯರ್ ಅಂಬರೀಷ್‍ಗೆ ಸುಹಾಸಿನಿ ಜೋಡಿಯಾಗಿದ್ದರೆ, ಜ್ಯೂನಿಯರ್ ಅಂಬರೀಷ್‍ಗೆ ಯಾರು ಜೋಡಿ ಅನ್ನೋ ಪ್ರಶ್ನೆ ಇತ್ತು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಸುದೀಪ್‍ಗೆ ಜೋಡಿಯಾಗುತ್ತಿರುವುದು ಶೃತಿ ಹರಿಹರನ್.

    Related Articles :-

    Shruthi Haran In Ambi Ninge Vayassaitho

  • ಯಂಗ್ ಅಂಬಿಯಾಗಿ ಕಬಡ್ಡಿ ಆಡಿದ ಸುದೀಪ್

    sudeep plays kabbadi as young ambi in ambi ninge vaisaito

    ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದಲ್ಲಿ ಕಿಚ್ಚ ಸುದೀಪ್ ಯಂಗ್ ಅಂಬರೀಷ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಚಿತ್ರೀಕರಣವಂತೂ ಹಗಲೂ ರಾತ್ರಿ ಪುರುಸೊತ್ತಿಲ್ಲದೆ ನಡೆಯುತ್ತಿದೆ. ಮೋಹನ್ ಬಿ ಕೆರೆ ಸ್ಟುಡಿಯೋದಲ್ಲಿನ ಸೆಟ್‍ನಲ್ಲಿ ಸುದೀಪ್ ಕಬಡ್ಡಿ ಆಡಿದ್ದಾರೆ. ಕಚ್ಚೆ ಪಂಚೆ ಧರಿಸಿ ಸುದೀಪ್ ಕಬಡ್ಡಿ ಆಡಿರುವ ಫೋಟೋಗಳು ಅಭಿಮಾನಿಗಳಿಗೆ ಥ್ರಿಲ್ ನೀಡುತ್ತಿರುವುದು ನಿಜ.

    ಸುದೀಪ್‍ಗೆ ಅಂದರೆ ಯಂಗ್ ಅಂಬರೀಷ್‍ಗೆ ಜೋಡಿಯಾಗಿರೋದು ಶೃತಿ ಹರಿಹರನ್. ತಲೆ ತುಂಬಾ ಮಲ್ಲಿಗೆ ಹೂ ಮುಡಿದ ಅಪ್ಪಟ ಗೃಹಿಣಿಯ ವೇಷದಲ್ಲಿ ಶೃತಿ ಹರಿಹರನ್ ಇದ್ದಾರೆ. ಸಿನಿಮಾವನ್ನು ಅಂಬರೀಷ್ ಸಖತ್ ಎಂಜಾಯ್ ಮಾಡುತ್ತಿದ್ದು, ಅಂಬರೀಷ್ ಅವರಿಗೆ ಜೋಡಿಯಾಗಿರೋದು ಸುಹಾಸಿನಿ.

    ಗುರುದತ್ ಗಾಣಿಗ ಎಂಬ ಯುವ ಪ್ರತಿಭೆ, ಚಿತ್ರದ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಅಂಬಿ ಮಾಮ ಅವರಿಗಾಗಿಯೇ ಈ ಸಿನಿಮಾ. ಟೆಕ್ನಾಲಜಿಯಲ್ಲಿ ನನ್ನ ಹೈಟ್‍ನ್ನು ಅಂಬಿ ಮಾಮ ಹೈಟ್‍ಗೆ ಮ್ಯಾಚ್ ಮಾಡಿ ಶೂಟಿಂಗ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ ಸುದೀಪ್.

  • ರೆಬಲ್ ಸ್ಟಾರ್‍ಗೆ ಬೋಲ್ಡ್ ಆದ ಪವರ್ ಸ್ಟಾರ್

    powerstar clean bold over ambi

    ಅಂಬಿ ನಿಂಗ್ ವಯಸ್ಸಾಯ್ತೋ.. ಸಿನಿಮಾ ಚಿತ್ರಮಂದಿರಗಳಲ್ಲಿ ಝೂಮ್‍ನಲ್ಲಿದೆ. ಬಹುತೇಕ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರೆಲ್ಲ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಈಗ ಚಿತ್ರವನ್ನು ನೋಡಿರುವ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅಂತೂ ಚಿತ್ರವನ್ನು ಬಾಯ್ತುಂಬಾ ಹೊಗಳಿದ್ದಾರೆ. 

    ಮೊದಲ ವಾರದ ಮೊದಲ ದಿನವೇ ಸಿನಿಮಾ ನೋಡುವ ಆಸೆಯಿತ್ತು. ಕೆಲಸದ ಒತ್ತಡದಿಂದಾಗಿ ಆಗಿರಲಿಲ್ಲ. ಸಿನಿಮಾ ನೋಡಿದೆ ಎಂದಿರುವ ಪುನೀತ್, ಅಂಬಿ ನಿಂಗ್ ವಯಸ್ಸಾಯ್ತೋ ಅನ್ನೋದು ಚಿತ್ರದ ಟೈಟಲ್ ಮಾತ್ರ. ಅಂಬರೀಷ್ ಅಂಕಲ್‍ಗೆ ವಯಸ್ಸಾಗಲ್ಲ ಎಂದಿದ್ದಾರೆ. ಅಂಬರೀಷ್ ಮಾಮ ಇನ್ನೂ ಹಲವು ಚಿತ್ರಗಳನ್ನು ಮಾಡಲಿ ಎಂದಿರುವ ಪುನೀತ್, ಸುದೀಪ್, ಗುರುದತ್ ಗಾಣಿಗ, ಅರ್ಜುನ್ ಜನ್ಯ, ದಿಲೀಪ್ ರಾಜ್, ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ. ಪ್ರತಿಯೊಬ್ಬರೂ ಈ ಸಿನಿಮಾ ನೋಡಬೇಕು. ನಿಮ್ಮೊಳಗೆ ಇರುವ ಭಾವನೆಗಳು ನಿಮಗೆ ಗೊತ್ತಾಗುತ್ತವೆ ಅನ್ನೋದು ಪವರ್‍ಸ್ಟಾರ್ ಮಾತು. 

  • ಲೋ.. ಕಟ್ ಹೇಳೋ.. ಅಂತಿದ್ರು ಅಂಬಿ

    young directors experience with gurudutt ganiga

    ಅಂಬಿ ನಿಂಗೆ ವಯಸ್ಸಾಯ್ತೋ.. ಚಿತ್ರೀಕರಣ ಮುಕ್ತಾಯವಾಗಿ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದಲ್ಲಿ ಅಂಬಿ ಸ್ಟಂಟ್ ಮಾಸ್ಟರ್ ಆಗಿ ನಟಿಸಿದ್ದಾರೆ. ಸಿನಿಮಾ, ಸಿನಿಮಾದೊಳಗೊಂದು ಸಿನಿಮಾ, ಬದುಕು ಎಲ್ಲವೂ ಇರುವ ವಿಭಿನ್ನ ಕಥಾ ಹಂದರದ ಚಿತ್ರ ಅಂಬಿ ನಿಂಗೆ ವಯಸ್ಸಾಯ್ತೊ..

    ಚಿತ್ರದಲ್ಲಿ ಸಾಕಷ್ಟು ಸಿಂಗಲ್ ಟೇಕ್‍ಗಳಿವೆ. ಸುದೀರ್ಘ ಅವಧಿಯ ಶಾಟ್‍ಗಳು. ಆ ದೃಶ್ಯಗಳನ್ನು ಅಂಬರೀಷ್ ಒಂದೇ ಟೇಕ್‍ನಲ್ಲಿ ಮುಗಿಸಿರೋದು ವಿಶೇಷ. ಎಷ್ಟೋ ಬಾರಿ ಅವರ ಅಭಿನಯ ನೋಡುತ್ತಾ ಮೂಕನಾಗಿ ನಿಂತುಬಿಟ್ಟಿರುತ್ತಿದೆ. ಲೋ.. ಕಟ್ ಹೇಳೋ.. ಎಂದು ಅಂಬರೀಷ್ ಕೂಗುವವರೆಗೆ ಮೈಮರೆತು ನಿಂತಿರುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ ಗುರುದತ್ ಗಾಣಿಗ.

    ಅಂಬರೀಷ್ ಅವರ ವಯಸ್ಸಿನ ಅರ್ಧಕ್ಕಿಂತ ಕಡಿಮೆ ವಯಸ್ಸಿನ ಹುಡುಗ ಗುರುದತ್.  ಆದರೆ, ನಾನು ಹೇಳಿದ್ದನ್ನು ಕೇಳಿಕೊಂಡು ಮಗುವಿನಂತೆ ನಟಿಸಿದ್ದಾರೆ ಅಂಬರೀಷ್. ಇದು ನನ್ನ ಅದೃಷ್ಟ ಅಂತಾರೆ ಗುರುದತ್.

    ಅಷ್ಟೇ ಅಲ್ಲ, ಅಂಬರೀಷ್ ಅವರ ಇನ್ನೊಂದು ಶಕ್ತಿಯನ್ನೂ ಗುರುದತ್ ಹೇಳಿದ್ದಾರೆ. ಅಂಬರೀಷ್ ತಾವು ಅಭಿನಯಿಸಿದ ನಂತರ ಯಾವ ಸೀನ್ ಓಕೆ ಆಗಿದೆ ಅನ್ನೋದನ್ನ ಮಾನಿಟರ್ ನೋಡದೇನೇ ತಿಳಿದುಕೊಳ್ತಾರಂತೆ. ದಟ್ ಈಸ್ ಅಂಬಿ.