` avane srimanarayana, - chitraloka.com | Kannada Movie News, Reviews | Image

avane srimanarayana,

  • ಅವನೇ ಶ್ರೀಮನ್ನಾರಾಯಣ ಬುಕ್ಕಿಂಗ್ ಶುರು

    avane srimmnarayana booking starts

    ಅವನೇ ಶ್ರೀಮನ್ನಾರಾಯಣ ರಿಲೀಸ್ ಇರೋದು ಮುಂದಿನ ವಾರ. ಇನ್ನೂ 10 ದಿನ ಬಾಕಿಯಿದೆ. ಆದರೆ ರಕ್ಷಿತ್ ಶೆಟ್ಟಿ ಹ್ಯಾಂಡ್ಸಪ್ ಹವಾ ಹೇಗಿದೆಯೆಂದರೆ.. ಆಗಲೇ ಬುಕ್ಕಿಂಗ್ ಶುರುವಾಗಿಬಿಟ್ಟಿದೆ. ಬೆಂಗಳೂರಿನಲ್ಲಿ ಎರಡು ಥಿಯೇಟರುಗಳಲ್ಲಿ ಮಾತ್ರವೇ ಸದ್ಯಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಇದ್ದು, ಉಳಿದ ಥಿಯೇಟರುಗಳಲ್ಲಿಯೂ ಇನ್ನೇನು ಶುರುವಾಗಲಿದೆ.

    ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ಜೋಡಿಯ ಮೋಡಿ ಹಾಗಿದೆ. ಅದು ತೆಲುಗಿನಲ್ಲಿ ಮೋಡಿ ಮಾಡುತ್ತಿದೆ. ಜೊತೆಗೆ ದಿಲ್ ರಾಜುರಂಥ ಖ್ಯಾತ ವಿತರಕ ತೆಲುಗಿನಲ್ಲಿ ರಿಲೀಸ್ ಮಾಡುತ್ತಿದ್ದು, ಅಲ್ಲಿ ಶಾನ್ವಿ ಶ್ರೀವಾತ್ಸವ್ ಪರಿಚಿತ ಮುಖ. ಹೀಗಾಗಿ ತೆಲುಗಿನಲ್ಲೂ ಒಳ್ಳೆಯ ಓಪನಿಂಗ್ ಸಿಗುತ್ತಿದೆ. ಇದೆಲ್ಲದರಿಂದಾಗಿ ಹ್ಯಾಪಿಯಾಗಿರೋದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

  • ಅವನೇ ಶ್ರೀಮನ್ನಾರಾಯಣ ಮ್ಯಾಜಿಕ್ ಬಾಕ್ಸ್

    avane srimnnarayana magic box

    ಅವನೇ ಶ್ರೀಮನ್ನಾರಾಯಣ ಮ್ಯಾಜಿಕ್ ಬಾಕ್ಸ್. ಅಲ್ಲಿ ರಕ್ಷಿತ್ ಶೆಟ್ಟಿ ಇದ್ದಾರೆ. ನೀವು ಅವರ ಜೊತೆ ಫೋಟೋ ತೆಗೆಸಿಕೊಳ್ಳಬಹುದು. ಇದು ಒರಾಯನ್ ಮಾಲ್‌ನಲ್ಲಿರೋ ಮ್ಯಾಜಿಕ್ ಬಾಕ್ಸ್.

    ಇಲ್ಲಿ ನಾರಾಯಣದ ಪೋಸಿನಲ್ಲಿ ರಕ್ಷಿತ್ ಶೆಟ್ಟಿ ನಿಂತಿದ್ದಾರೆ. ಒಂದಲ್ಲ, ನಾಲ್ಕು ಭಂಗಿಗಳಲ್ಲಿ. ನೀವು ಹೋಗಿ.. ನಿಮಗೆ ಬೇಕಾದ ಪೋಸ್ ಆರಿಸಿಕೊಳ್ಳಿ. ಚಿತ್ರದ ಟೈಟಲ್ಲಿನ ಜೊತೆಗೆ ನಿಮಗೆ ಅವರೇ ಒಂದು ಫೋಟೋ ತೆಗೆದು, ನಿಮ್ಮ ಮೊಬೈಲಿಗೆ, ವಾಟ್ಸಪ್ಪಿಗೆ, ಮೇಯ್ಲ್ಗೆ ಕಳಿಸಿಕೊಡ್ತಾರೆ.

    ಒಬ್ಬರಾದರೂ ಓಕೆ.. ಗುಂಪಲ್ಲಾದರೂ ಓಕೆ.. ಸದ್ಯಕ್ಕೆ ಈಗ ಒರಾಯನ್ ಮಾಲ್‌ನಲ್ಲಿ ಶುರುವಾಗಿದೆ. ಇನ್ನೂ ಕೆಲವು ನಗರಗಳ ವಿವಿಧ ಮಾಲ್‌ಗಳಿಗೆ ಮ್ಯಾಜಿಕ್ ಬಾಕ್ಸ್ ಹೊರಡುತ್ತಿದೆ.

  • ಅವನೇ ಶ್ರೀಮನ್ನಾರಾಯಣ ವೀಕೆಂಡ್ ಬಾಕ್ಸಾಫೀಸ್ ರಿಪೋರ್ಟ್

    avane srimnanarayana official box office report

    ಅವನೇ ಶ್ರೀಮನ್ನಾರಾಯಣ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು..? ಗಾಂಧಿನಗರದ ಮೂಲಗಳ ಪ್ರಕಾರ ಮೊದಲ ವೀಕೆಂಡ್ ಗಳಿಕೆ 25  ಕೋಟಿಯ ಗಡಿ ದಾಟಿದೆ. ಸೇಲ್ ಆಗಿರುವುದು 15 ಲಕ್ಷಕ್ಕೂ ಹೆಚ್ಚು ಟಿಕೆಟ್. 3 ದಿನಗಳಲ್ಲಿ 5 ಸಾವಿರ ಶೋ ಪ್ರದರ್ಶನಗೊಂಡಿವೆ. ಸ್ಸೋ.. ಪುಷ್ಕರ್ ಮಲ್ಲಿಕಾರ್ಜುನಯ್ಯ ಲಕ್ಷ್ಮೀ ದೇವಿಗೆ ಪೂಜೆ ಮಾಡುತ್ತಿರುವುದಕ್ಕೆ ಕಾರಣವೂ ಇದೆ. ಅಂದಹಾಗೆ.. ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗಿದ್ದರೂ, ಇನ್ನಷ್ಟು ಥಿಯೇಟರುಗಳಿಗೆ ಡಿಮ್ಯಾಂಡ್ ಬಂದಿದೆ. 2ನೇ ವಾರಕ್ಕೆ 80 ಚಿತ್ರಮಂದಿರಗಳು, ಸ್ಕ್ರೀನ್‍ಗಳು ಹೆಚ್ಚುವರಿಯಾರಿಗೆ ಸೇರ್ಪಡೆಯಾಗಲಿವೆ.

    ತೆಲುಗಿನಲ್ಲಿ ಈ ವಾರ ರಿಲೀಸ್. ಆಗಲೇ ಆಂಧ್ರ, ತೆಲಂಗಾಣದಲ್ಲಿ 36 ಸಾವಿರ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಆಗಿವೆ. `ನಮ್ಮ ಉದ್ದೇಶದ ಗಡಿಯನ್ನು ಮೊದಲನೇ ದಿನವೇ ಮುಟ್ಟಿದ್ದೇವೆ. ಒಂದು ಚಿತ್ರದ ಬಗ್ಗೆ ಎಲ್ಲ ರೀತಿಯಲ್ಲೂ.. ಎಲ್ಲ ಕೋನಗಳಲ್ಲೂ ಜನ ಮಾತನಾಡುತ್ತಿದ್ದಾರೆ ಅಂದರೆ, ಅದು ನಮ್ಮ ಸಿನಿಮಾದ ನಿಜವಾದ ಗೆಲುವು. ಅಂತಹ ಚಿತ್ರ ಕೊಟ್ಟಿರುವುದಕ್ಕೆ ನನಗೀಗ ಹೆಮ್ಮೆ ಎಂದಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

    3 ವರ್ಷದ ನಂತರ ಪ್ರತ್ಯಕ್ಷರಾದ ನಾರಾಯಣ ರಕ್ಷಿತ್ ಶೆಟ್ಟಿಗೆ, ಮೊದಲ ಚಿತ್ರದಲ್ಲೇ ಬಂಪರ್ ಹೊಡೆದ ನಿರ್ದೇಶಕ ಸೃಷ್ಟಿಕರ್ತ ಸಚಿನ್ ರವಿಗೆ, ಒಂದು ಚಿತ್ರಕ್ಕಾಗಿ ಸುದೀರ್ಘ ಡೇಟ್ಸ್ ಕೊಟ್ಟು ಕಾದ ಲಕ್ಷ್ಮೀ ಶಾನ್ವಿ ಶ್ರೀವಾತ್ಸವ್ ಅವರಿಗೆ ಇದು 2019ರ ಬಂಪರ್ ಉಡುಗೊರೆ.k

  • ಅವನೇ ಶ್ರೀಮನ್ನಾರಾಯಣ ಸೂಪರ್ ಹಿಟ್

    avane srimannarayana teaser is super hit

    ರಕ್ಷಿತ್ ಶೆಟ್ಟಿ ಅಭಿನಯದ ಅವನೇ ಶ್ರೀಮನ್ನಾರಾಯಣ ಚಿತ್ರದ 2ನೇ ಪೋಸ್ಟರ್, ಆನ್‍ಲೈನ್‍ನಲ್ಲಿ ಸೂಪರ್ ಹಿಟ್ ಆಗಿದೆ. ಪರಂವಾ ಸ್ಟುಡಿಯೋಸ್ ಬ್ಯಾನರ್‍ನ ಸಿನಿಮಾ ಟೀಸರ್ ಬಿಡುಗಡೆಯಾದ ಕ್ಷಣದಿಂದ ಈಗಿನವರೆಗೆ ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ ನಂ.1 ಸ್ಥಾನದಲ್ಲಿದೆ. 10 ಲಕ್ಷಕ್ಕೂ ಹೆಚ್ಚು ಜನ ಟೀಸರ್ ನೋಡಿದ್ದಾರೆ.

    ಟೀಸರ್‍ನ ಮೇಕಿಂಗ್ ಸ್ಟೈಲ್, ಅಚ್ಯುತ್ ಕುಮಾರ್ ಡೈಲಾಗ್ ಕಿಚ್ಚು ಹಚ್ಚಿಸಿದೆ. ಶಾನ್ವಿ ಶ್ರೀವಾಸ್ತವ್ ಹೀರೋಯಿನ್ ಆಗಿರುವ ಚಿತ್ರಕ್ಕೆ ಇನ್ನಷ್ಟು ಮೆರುಗು ನೀಡಿರುವುದು ಅಜನೀಶ್ ಲೋಕನಾಥ್ ಸಂಗೀತ. ಸಚಿನ್ ನಿರ್ದೇಶನದ ಸಿನಿಮಾಗೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ.

  • ಅವನೇ ಶ್ರೀಮನ್ನಾರಾಯಣ ಸೃಷ್ಟಿಕರ್ತ ಹೇಳಿದ್ದೇನು..?

    avane srimnannarayana director talks about the mpvie

    ಜಗತ್ತಿಗೆಲ್ಲ ತಂದೆ ನಾರಾಯಣ. ಸೃಷ್ಟಿಕರ್ತ  ಬ್ರಹ್ಮನ ತಂದೆಯೂ ನಾರಾಯಣ. ಆದರೆ, ಅವನೇ ಶ್ರೀಮನ್ನಾರಾಯಣನ ಸೃಷ್ಟಿಕರ್ತ ಮಾತ್ರ ಸಚಿನ್ ರವಿ. ಕನ್ನಡದ ಬಹುದೊಡ್ಡ ಬಜೆಟ್‍ನ ಸಿನಿಮಾ ನಿರ್ದೇಶಿಸಿರುವ ಸಚಿನ್ ರವಿಗೆ ಇದು ಮೊದಲ ಸಿನಿಮಾ.

    ಕಳೆದ ಏಳೆಂಟು ತಿಂಗಳಿಂದ ಎಡಿಟಿಂಗ್ ರೂಂನ್ನೇ ಮನೆ ಮಾಡಿಕೊಂಡಿರುವ ಸಚಿನ್ ಅವರಿಗೆ ಮೊದಲ ಚಿತ್ರ ರಿಲೀಸ್ ಎಕ್ಸೈಟ್‍ಮೆಂಟ್ ಬೇರೆಯೇ ಇದೆ.

    ಸ್ಕ್ರಿಪ್ಟ್‍ಗಾಗಿ ಒಂದು ವರ್ಷ ತೆಗೆದುಕೊಂಡಿದ್ದೇವೆ ಎನ್ನುವ ಸಚಿನ್‍ಗೆ ಚಿತ್ರದ ಒನ್‍ಲೈನ್ ಹೊಳೆದಿದ್ದು ಉಳಿದವರು ಕಂಡಂತೆ ಚಿತ್ರದ ಶೂಟಿಂಗ್ ವೇಳೆ. ಆ ಚಿತ್ರಕ್ಕೆ ಎಡಿಟರ್ ಆಗಿದ್ದ ಸಚಿನ್ ರವಿ, ಇದು ಕನ್ನಡದ ಅತ್ಯಂತ ವಿಶಿಷ್ಟ ಸಿನಿಮಾ ಎನ್ನುತ್ತಾರೆ.

    ಈ ಚಿತ್ರದ ನಂತರ ರಕ್ಷಿತ್ ಶೆಟ್ಟಿ ಅವರಿಗೆ ಮಕ್ಕಳು ದೊಡ್ಡ ಫ್ಯಾನ್ಸ್ ಆಗುತ್ತಾರೆ. ಶಾನ್ವಿ ಶ್ರೀವಾತ್ಸವ್ ಅವರಿಗೆ ಬೇರೆಯದ್ದೇ ಆದ ಇಮೇಜ್ ಸೃಷ್ಟಿಯಾಗಲಿದೆ ಎನ್ನುವ ವಿಶ್ವಾಸ ಸಚಿನ್ ಅವರಿಗಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಶುಕ್ರವಾರ ಬರುತ್ತಿದೆ.

  • ಅವನೇ ಶ್ರೀಮನ್ನಾರಾಯಣ.. 12 ನಿಮಿಷ ರುದ್ರನರ್ತನ

    avane srimanarayana is a total mass entertainment

    ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿರೋದು ರಕ್ಷಿತ್ ಶೆಟ್ಟಿ. ಹೀಗಾಗಿ ಅದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿರಲಿದೆ ಎಂದುಕೊಂಡವರಿಗೆ ಒಂದು ಸ್ಪೆಷಲ್ ಸುದ್ದಿ ಇಲ್ಲಿದೆ. ಚಿತ್ರದಲ್ಲಿ ಸುಮಾರು 12 ನಿಮಿಷಗಳ ಆ್ಯಕ್ಷನ್ ಇದೆಯಂತೆ. ಚಿತ್ರದ ಕ್ಲೈಮಾಕ್ಸ್‍ನಲ್ಲಿ 6 ನಿಮಿಷದ ಫೈಟಿಂಗ್ ಇದ್ಯಂತೆ. 

    `ಇಡೀ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಬಾಡಿ ಲಾಂಗ್ವೇಜ್ ಬದಲಿಸಿಕೊಂಡಿದ್ದಾರೆ. ಒಂದೊಂದು ಫೈಟ್ ಸೀನ್ ಶೂಟ್ ಮಾಡೋಕೂ 10-15 ದಿನ ತೆಗೆದುಕೊಂಡಿದ್ದೇವೆ' ಎಂದು ಮಾಹಿತಿ ನೀಡಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. 

  • ಅವನೇ ಶ್ರೀಮನ್ನಾರಾಯಣ.. ಸೆನ್ಸಾರ್ ಮಂದಿ ನೋಡಿದ್ರಣ್ಣ

    avane srimannarayana passed censor exam

    ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ಅಭಿನಯದ ಅವನೇ ಶ್ರೀಮನ್ನಾರಾಯಣ ಸೆನ್ಸಾರ್ ಪಾಸ್ ಆಗಿದೆ. ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ವಿಶೇಷವೆಂದರೆ ಚಿತ್ರದಲ್ಲಿ ಯಾವುದೇ ಬೀಪ್, ಮ್ಯೂಟ್‌ಗಳನ್ನು ಸೆನ್ಸಾರ್ ಮಂಡಳಿಯವರು ಕೊಟ್ಟಿಲ್ಲ. ಅಷ್ಟೇ ಅಲ್ಲ, ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸರ್ಟಿಫಿಕೇಟ್ ಕೊಟ್ಟಿದ್ದಾರೆ.

    ಹೀಗಾಗಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ಸಚಿನ್ ಸೇರಿದಂತೆ ಇಡೀ ಚಿತ್ರತಂಡ ಫುಲ್ ಹ್ಯಾಪಿ. ಇದರ ಜೊತೆಯಲ್ಲೇ ಹ್ಯಾಂಡ್ಸಪ್ ಟ್ರೆಂಡಿAಗ್‌ನಲ್ಲಿ ಕಂಟಿನ್ಯೂ ಆಗಿದ್ದು, ಇಡೀ ಟೀಂ ಖುಷ್ ಖುಷಿಯಾಗಿದೆ.

  • ಅವನೇ ಶ್ರೀಮನ್ನಾರಾಯಣದ ಇಂಟ್ರೊಡಕ್ಷನ್ ಸಾಂಗ್ ಸ್ಪೆಷಲ್

    avane srimnarayana introduction song speciality

    ಅವನೇ ಶ್ರೀಮನ್ನಾರಾಯಣ ಚಿತ್ರದ ಮೊದಲ ಹಾಡಿದು. ಟ್ರೇಲರ್, ಟೀಸರ್ ಮೂಲಕವೇ ಹವಾ ಸೃಷ್ಟಿಸಿದ್ದ ಎಎಸ್‌ಎನ್ ಚಿತ್ರದ ಮೊದಲ ಹಾಡು ನಾಯಕನ  ಇಂಟ್ರೊಡಕ್ಷನ್ ಸಾಂಗ್. ಇಡೀ ಚಿತ್ರವೇ ಭಾರಿ ಬಜೆಟ್ಟಿನದ್ದು. ಆದರೆ, ಈ ಹಾಡು ಆ ಅದ್ಧೂರಿ ಬಜೆಟ್ಟಿನ ಕೇಕ್ ಮೇಲಿನ ಹಣ್ಣಿನ ಹಾಗೆ.

    ಇದು ಸಿನಿಮಾದ ಮೊದಲ ಹಾಡು. ನಾಯಕನ ಮೇಲೆಯೇ ಕೇಂದ್ರೀಕರಿಸಿರುವ ಸ್ಪೆಷಲ್ ಸಾಂಗ್.

    ಇದೊAದೇ ಹಾಡಿಗಾಗಿ ಸ್ಪೆಷಲ್ ಸೆಟ್ಟಿನಲ್ಲಿ 20 ದಿನಗಳ ಶೂಟಿಂಗ್ ಮಾಡಿದ್ದಾರೆ ನಿರ್ದೇಶಕ ಸಚಿನ್.

    ಹಾಡಿಗೆ ಕನ್ನಡದಲ್ಲಿ ನಾಗಾರ್ಜುನ ಶರ್ಮ, ತೆಲುಗಿನಲ್ಲಿ ರಾಮಜೋಗಯ್ಯ ಶಾಸ್ತಿç, ತಮಿಳಿನಲ್ಲಿ ವಿವೇಕ್, ಯುಗಭಾರತಿ, ಅರುಣ್ ರಾಜ್, ಕಾಮರಾಜ್, ಹಿಂದಿಯಲ್ಲಿ ಶೆಲ್ಲಿ, ಮಲಯಾಳಂನಲ್ಲಿ ಅಖಿಲ್ ಎಂ.ಬೋಸ್ ಸಾಹಿತ್ಯ ರಚಿಸಿದ್ದಾರೆ.

    ಈ ಹಾಡಿನಲ್ಲಿ ಕಥೆಯ ಥೀಮ್ ಕೂಡಾ ಇದೆ.

    ಅಜನೀಶ್ ಲೋಕನಾಥ್ ಅದ್ಭುತ ಮ್ಯೂಸಿಕ್ ಕೊಟ್ಟಿದ್ದಾರೆ.

    ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಅದ್ಧೂರಿ ಮೇಕಿಂಗ್‌ನ ಹಾಡು 5 ಭಾಷೆಗಳಲ್ಲಿ ಬರುತ್ತಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ತಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ

  • ಅವನೇ ಶ್ರೀಮನ್ನಾರಾಯಣನ ಎದುರು ಬರೋ ಸ್ಟಾರ್ ಸಿನಿಮಾಗಳೆಷ್ಟು..?

    will avane srimnarayana face big star fight at box office

    ಅವನೇ ಶ್ರೀಮನ್ನಾರಾಯಣ ರಿಲೀಸ್ ಡೇಟ್ ಫಿಕ್ಸ್ ಆದ ಬೆನ್ನಲ್ಲೇ ವರ್ಷದ ಕೊನೆಯ ತಿಂಗಳು ಚಿತ್ರಮಂದಿರಗಳಲ್ಲಿ ಮಹಾಯುದ್ಧವೇ ನಡೆಯಲಿದೆಯಾ ಎಂಬ ಅನುಮಾನ ಸೃಷ್ಟಿಸಿದೆ. ಕಾರಣ ಇಷ್ಟೆ.. ಅವನೇ ಶ್ರೀಮನ್ನಾರಾಯಣ ಸಿನಿಮಾ ದೇಶಾದ್ಯಂತ ಸ್ಟಾರ್ ನಟರ ಸಿನಿಮಾಗಳನ್ನು ಎದುರಿಸಿಕೊಂಡೇ ಬರಬೇಕು.

    ಡಿಸೆಂಬರ್ 25ಕ್ಕೆ ಅವನೇ ಶ್ರೀಮನ್ನಾರಾಯಣ ಬಂದರೆ, ಅದಕ್ಕೆ ಕೆಲವು ದಿನ ಮುನ್ನ ಕ್ರಿಸ್ ಮಸ್ ಹಬ್ಬಕ್ಕೆ ಬರೋದು ದಬಾಂಗ್ 3. ಸಲ್ಮಾನ್ ಖಾನ್, ಸುದೀಪ್ ಕಾಂಬಿನೇಷನ್ನಿನ ಸಿನಿಮಾ. ಕನ್ನಡದಲ್ಲೂ ಡಬ್ ಆಗಿ ಬರುತ್ತಿರುವ ಈ ಚಿತ್ರಕ್ಕೆ ಸಲ್ಮಾನ್ ಖಾನ್ ಅವರೇ ಡಬ್ಬಿಂಗ್ ಮಾಡಿದ್ರೆ.. ಅದರ ಹವಾನೇ ಬೇರೆ.

    ಇನ್ನು ಧ್ರುವ ಸರ್ಜಾ ಅಭಿನಯದ ಪೊಗರು ಕೂಡಾ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಎನ್ನುವ ಮಾತುಗಳಿವೆ. ಅತ್ತ ರಾಬರ್ಟ್ ಕೂಡಾ ಡಿಸೆಂಬರ್ ತಿಂಗಳನ್ನೇ ಸೆಲೆಕ್ಟ್ ಮಾಡಿಕೊಂಡಿದೆಯಂತೆ. ಎಲ್ಲವೂ ಹೀಗೆಯೇ ಆಗಿಬಿಟ್ಟರೆ, ದೊಡ್ಡ ಸ್ಟಾರ್ ಸಮರವೇ ನಡೆಯಲಿದೆ ಎಂಬುದು ಪಕ್ಕಾ.

    ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್ ಅಭಿನಯದ ಸಿನಿಮಾವನ್ನು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ರಿಲೀಸ್ ಮಾಡುತ್ತಿದ್ದಾರೆ. ಕನ್ನಡವಷ್ಟೇ ಅಲ್ಲದೆ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂನಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ.

  • ಅವನೇ ಶ್ರೀಮನ್ನಾರಾಯಣನಿಗೆ ಒಂದೇ ಡ್ರೆಸ್ಸಾ..?

    secret shetty's costume secret in avana srimananarayana

    ರಕ್ಷಿತ್ ಶೆಟ್ಟಿ-ಶಾನ್ವಿ ಶ್ರೀವಾಸ್ತವ್ ಪ್ರಧಾನ ಪಾತ್ರದಲ್ಲಿರುವ ಅವನೇ ಶ್ರೀಮನ್ನಾರಾಯಣ, ಆಗಸ್ಟ್‍ನಲ್ಲಿ ತೆರೆಗೆ ಬರಲಿದೆ. ಕನ್ನಡವೂ ಸೇರಿದಂತೆ 5 ಭಾಷೆಗಳಲ್ಲಿ ಏಕಕಾಲದಲ್ಲಿ ರಿಲೀಸ್ ಆಗಲಿದೆ ಎನ್ನುವುದೆಲ್ಲ ಈಗ ಕನ್ನಡಿಗರಿಗೆ ಗೊತ್ತು. ಆದರೆ, ಇಷ್ಟು ದೊಡ್ಡ ಅದ್ಧೂರಿ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿಯವರಿಗೆ ಇರೋದು ಒಂದೇ ಡ್ರೆಸ್ಸು. ತಮಾಷೆ ಅಲ್ಲ ಸ್ವಾಮಿ.. ಇದು ಸತ್ಯ.

    ಚಿತ್ರದ 99% ದೃಶ್ಯಗಳಲ್ಲಿ ರಕ್ಷಿತ್ ಶೆಟ್ಟಿ ಪೊಲೀಸ್ ಯೂನಿಫಾರ್ಮಲ್ಲೇ ಇರ್ತಾರೆ ಎಂದು ಹೇಳಿರುವುದು ನಿರ್ಮಾಪಕರಲ್ಲಿ ಒಬ್ಬರಾದ ಪುಷ್ಕರ್ ಮಲ್ಲಿಕಾರ್ಜುನಯ್ಯ. ಚಿತ್ರದಲ್ಲಿ ಒಂದು ಹೋಳಿ ಹಾಡಿದ್ದು, ಆ ಹಾಡಿನಲ್ಲಿ ಮಾತ್ರ ರಕ್ಷಿತ್ ಶೆಟ್ಟಿ ಬಣ್ಣಬಣ್ಣದ ಹುಡುಗನಾಗಿ ಕಾಣಿಸಿಕೊಂಡಿದ್ದಾರಂತೆ.

    ಹೋಳಿ ದೃಶ್ಯಗಳು ತುಂಬಾ ರೊಮ್ಯಾಂಟಿಕ್ ಆಗಿ ಬಂದಿವೆ. ಇಮ್ರಾನ್ ಸರ್ದಾರಿಯಾ ಒಳ್ಳೆಯ ನೃತ್ಯ ಸಂಯೋಜಿಸಿದ್ದಾರೆ. ಚಿತ್ರೀಕರಣ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚುರುಕುಗೊಳ್ಳಲಿವೆ.

  • ಅವನೇ ಶ್ರೀಮನ್ನಾರಾಯಣನಿಗೆ ಕನ್ನಡ ಚಿತ್ರರಂಗವೇ ಬಹುಪರಾಕ್

    avane srimananrayana is appreciated by sandalwood stars

    ಅವನೇ ಶ್ರೀಮನ್ನಾರಾಯಣ ಟ್ರೇಲರ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಇದಕ್ಕಾಗಿಯೇ ಕಾಯುತ್ತಿದ್ದರೇನೋ ಎಂಬಂತೆ ಚಿತ್ರದ ಟ್ರೇಲರ್ನ್ನು ನೋಡಿ ನೋಡಿ ಆನಂದಿಸುತ್ತಿದ್ದಾರೆ. ವೀಕ್ಷಕರ ಸಂಖ್ಯೆ 9 ಮಿಲಿಯನ್ ದಾಟಿದೆ. ಲೈಕ್ಸ್ ಕೂಡಾ ಲಕ್ಷಗಳ ಲೆಕ್ಕದಲ್ಲಿದೆ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್, ನಿರ್ದೇಶಕ ಸಚಿನ್, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮುಖದಲ್ಲಿ ಗೆಲುವಿನ ಮುಗುಳ್ನಗೆ. ಅದಕ್ಕಿಂತಲೂ ಹೆಚ್ಚು ಖುಷಿ ಕೊಟ್ಟಿರುವುದು ಚಿತ್ರರಂಗದವರು ಅದನ್ನು ಸ್ವಾಗತಿಸಿರುವ ರೀತಿ.

    ದಕ್ಷಿಣ ಭಾರತದ ಸ್ಟಾರ್ ನಟರಾದ ಧನುಷ್, ನಾನಿ, ನಿವಿನ್ ಪೌಲ್ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದರು. ಇದರ ಜೊತೆಯಲ್ಲೇ ಪುನೀತ್ ರಾಜ್‌ಕುಮಾರ್, ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ನಿರ್ಮಾಪಕ ವಿಜಯ್ ಕಿರಗಂದೂರು ಟ್ವೀಟ್ ಮಾಡಿ ಟ್ರೇಲರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಧನುಷ್, ತಮಿಳು ನಟ :ರಕ್ಷಿತ್ ಶೆಟ್ಟಿ ತಂಡಕ್ಕೆ ಅಭಿನಂದನೆಗಳು. ಟ್ರೇಲರ್ನಲ್ಲಿ ಸಾಹಸ, ಫೈಟ್ಸ್ ಎಲ್ಲವೂ ಚೆನ್ನಾಗಿದೆ.

    ನಾನಿ, ತೆಲುಗು ನಟ : ಅವನೇ ಶ್ರೀಮನ್ನಾರಾಯಣ ಟ್ರೇಲರ್ ವಿಭಿನ್ನವಾಗಿದೆ. ದೃಶ್ಯಗಳು ಕೂಡ ಚೆನ್ನಾಗಿದೆ.

    ಪುನೀತ್ ರಾಜ್‌ಕುಮಾರ್ : ಅವನೇ ಶ್ರೀಮನ್ನಾರಾಯಣ ಟ್ರೇಲರ್ ಚೆನ್ನಾಗಿದೆ. ಇಡೀ ತಂಡಕ್ಕೆ ಧನ್ಯವಾದಗಳು.

    ಕಿಚ್ಚ ಸುದೀಪ್ : ಚಿತ್ರ ತಂಡದ ಅದ್ಭುತ ಕೆಲಸ ಕಾಣುತ್ತಿದೆ. ಒಳ್ಳೆಯ ಟ್ರೇಲರ್

    ರಿಷಬ್ ಶೆಟ್ಟಿ : ಗೆಳೆಯನ ಗೆಲುವಿನ ಸಂಭ್ರಮ ನೋಡಲು ಕಾಯುತ್ತಿದ್ದೇನೆ.

    ಪ್ರಶಾಂತ್ ನೀಲ್ : ಟ್ರೇಲರ್ನಲ್ಲಿ ಚಿತ್ರತಂಡದ ಶ್ರಮ ಎದ್ದು ಕಾಣುತ್ತಿದೆ. ಹೊಸ ಇತಿಹಾಸ ಸೃಷ್ಟಿಸಲಿ

    ವಿ.ಹರಿಕೃಷ್ಣ : ಅವನೇ ಶ್ರೀಮನ್ನಾರಾಯಣ ತುಂಬ ಹೊಸ ಅನುಭವ ನೀಡುತ್ತಿದೆ. ಪರ್ಫೆಕ್ಟ್  ಮತ್ತು ಎಕ್ಸಲೆಂಟ್

    ಕೆಪಿ ಶ್ರೀಕಾಂತ್ : ಟ್ರೇಲರ್ ತುಂಬ ಕುತೂಹಲಕಾರಿಯಾಗಿದೆ. ಎಎಸ್ಎನ್ ತಂಡಕ್ಕೆ ಶುಭ ಹಾರೈಕೆಗಳು.

    ಹೇಮಂತ್ ರಾವ್ : ರಿಲೀಸ್ವರೆಗೂ ಕಾಯಲು ಆಗುತ್ತಿಲ್ಲ. ಅಷ್ಟು ಕುತೂಹಲಕಾರಿಯಾಗಿದೆ

    ತರುಣ್ ಸುಧೀರ್ : ಚಿತ್ರತಂಡಕ್ಕೆ ಸಿನಿಮಾ ಮೇಲಿರುವ ಪ್ಯಾಷನ್ ಎದ್ದು ಕಾಣುತ್ತಿದೆ. ಕನ್ನಡ ಚಿತ್ರರಂಗದ ಗೌರವವನ್ನು ಈ ಸಿನಿಮಾ ಎತ್ತಿ ಹಿಡಿಯಲಿದೆ

    ವಿಜಯ್ ಕಿರಗಂದೂರು : ರಕ್ಷಿತ್ ಶೆಟ್ಟಿ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರತಂಡಕ್ಕೆ ಶುಭಾಶಯಗಳು

    ನಿರೂಪ್ ಭಂಡಾರಿ : ಚಿತ್ರದ ಪ್ರತಿ ಫ್ರೇಮ್ನಲ್ಲಿಯೂ ಪ್ಯಾಷನ್ ಮತ್ತು ಶ್ರಮ ಕಣ್ಣಿಗೆ ಕಾಣುತ್ತಿದೆ

    ಸಿಂಪಲ್ ಸುನಿ : ಇದರ ರೀಚ್ ನೋಡಿದರೆ, ಹಾಲಿವುಡ್ಗೂ ಡಬ್ ಮಾಡಬಹುದು.

    ಡ್ಯಾನಿಷ್ ಸೇಟ್ : ಕರ್ನಾಟಕದಿಂದ ವಿಶ್ವ ಚಿತ್ರರಂಗಕ್ಕೆ ಇನ್ನೊಂದು ಕೊಡುಗೆ, ಅವನೇ ಶ್ರೀಮನ್ನಾರಾಯಣ

    ಚೇತನ್ ಕುಮಾರ್ : ಕನ್ನಡ ಚಿತ್ರರಂಗ ಪ್ರಜ್ವಲಿಸಲಿದೆ

  • ಅವನೇ ಶ್ರೀಮಾನ್ ರಕ್ಷಿತ್ ಶೆಟ್ಟಿ

    rkahsit shetty had a busy birthday

    ಇದ್ಯಾವುದು.. ಇದೇನು ಹೊಸ ಸಿನಿಮಾನಾ.. ಅಂತಾ ಕನ್‍ಫ್ಯೂಸ್ ಆಗಬೇಡಿ. ಅವನೇ ಶ್ರೀಮನ್ನಾರಾಯಣ ಚಿತ್ರತಂಡ ಈಗ ರಕ್ಷಿತ್ ಶೆಟ್ಟಿ ಮಯವಾಗಿದೆ. ಅದಕ್ಕೆ ಕಾರಣ ರಕ್ಷಿತ್ ಶೆಟ್ಟಿ ಹುಟ್ಟುಹಬ್ಬ. ತಮ್ಮ ಚಿತ್ರದ ನಾಯಕನ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿರುವ ಚಿತ್ರತಂಡ, ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ.

    ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಪೊಲೀಸ್. ಆದರೆ, ಎಲ್ಲರಂತಲ್ಲ. ಸದಾ ನಗುತ್ತಾ, ನಗಿಸುತ್ತಾ ಇರುವ ಪಾತ್ರ. ಹೇಳಿದ ಕೆಲಸವೊಂದನ್ನು ಬಿಟ್ಟು, ಮಿಕ್ಕಿದ್ದನ್ನೆಲ್ಲ ಮಾಡುವ ಪೊಲೀಸ್. ಆದರೆ, ಅವನು ಒಂದು ಮಹಾನ್ ಕಾರ್ಯಕ್ಕಾಗಿ ಬದುಕುತ್ತಿರುತ್ತಾನೆ. ಅದೇನು ಅನ್ನೋದು ಚಿತ್ರದ ಸಸ್ಪೆನ್ಸ್. 

    ಸಚಿನ್ ನಿರ್ದೇಶನದ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು. ಈಗಾಗಲೇ ಚಿತ್ರದ 33 ದಿನಗಳ ಶೂಟಿಂಗ್ ಆಗಿದೆ. ಇನ್ನೂ 70 ದಿನಗಳ ಶೂಟಿಂಗ್ ಬಾಕಿ ಇದೆ. ಮುಂದಿನ ಚಿತ್ರೀಕರಣವೆಲ್ಲ ಸ್ಟುಡಿಯೋ ಸೆಟ್‍ನಲ್ಲಿ ನಡೆಯಲಿದೆ. ಚಿತ್ರವನ್ನು ಡಿಸೆಂಬರ್‍ಗೆ ತೆರೆಗೆ ತರುವುದು ಪುಷ್ಕರ್ ಮಲ್ಲಿಕಾರ್ಜುನಯ್ಯ ಪ್ಲಾನ್.

    ಈ ಹುಟ್ಟುಹಬ್ಬಕ್ಕೆ ಅವನೇ ಶ್ರೀಮನ್ನಾರಾಯಣ ಚಿತ್ರದ ಫಸ್ಟ್‍ಲುಕ್ ರಿಲೀಸ್ ಆದರೆ, ಇದೇ ದಿನ 777 ಚಾರ್ಲಿ ಚಿತ್ರದ ಮುಹೂರ್ತವೂ ನಡೆಯಲಿದೆ. ಇನ್ನು ಕೆಲವು ದಿನ ರಕ್ಷಿತ್ ಶೆಟ್ಟಿಗೆ ಅವನೇ ಶ್ರೀಮನ್ನಾರಾಯಣ ಚಿತ್ರದಿಂದ ವಿರಾಮ. ಆ ವಿರಾಮದಲ್ಲಿ ಚಾರ್ಲಿಯ ಶೂಟಿಂಗ್. ಹಾಗಂತ ಇಡೀ ನಾರಾಯಣ ಚಿತ್ರತಂಡ ಸುಮ್ಮನೆ ಇರಲ್ಲ. ಅದು ಬಿಡುವೇ ಇಲ್ಲದಂತೆ ಚಿತ್ರದ ಸೆಟ್ ಹಾಕುವ ಕೆಲಸದಲ್ಲಿ ಬ್ಯುಸಿಯಾಗಿದೆ. 

    ಒಟ್ಟಿನಲ್ಲಿ ಈ ಬರ್ತ್ ಡೇಯನ್ನು ರಕ್ಷಿತ್ ಶೆಟ್ಟಿ ಬಿಡುವೇ ಇಲ್ಲದಷ್ಟು ಕೆಲಸ ಹೇರಿಕೊಂಡು ಸೆಲಬ್ರೇಟ್ ಮಾಡುತ್ತಿದ್ದಾರೆ.

  • ಅವರೇ.. ಇವರೇ.. ಶ್ರೀಮನ್ನಾರಾಯಣ ಟ್ರೇಲರ್ ರಿಲೀಸ್ ಮಾಡೋದು..

    avane srimannarayan gets star support

    ತಮಿಳಿನಲ್ಲಿ ಧನುಷ್, ತೆಲುಗಿನಲ್ಲಿ ನಾನಿ, ಮಲಯಾಳಂನಲ್ಲಿ ನಿವಿನ್ ಪೌಲ್ ಅವನೇ ಶ್ರೀಮನ್ನಾರಾಯಣ ಟ್ರೇಲರ್ ರಿಲೀಸ್ ಮಾಡಲಿದ್ದಾರೆ. ಅದೇ.. ಅದೇ ಹೊತ್ತಿನಲ್ಲಿ ಇಲ್ಲಿ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಅವನೇ ಶ್ರೀಮನ್ನಾರಾಯಣದ ಕನ್ನಡ ವರ್ಷನ್ ರಿಲೀಸ್ ಆಗಲಿದೆ. ಎಲ್ಲವೂ ಏಕಕಾಲದಲ್ಲಿ. ಸಮಯ ನವೆಂಬರ್ 28ರಂದು ಸಂಜೆ 4 ಗಂಟೆ.

    ಆ ದಿನ ಸಂಜೆ ನಾಲ್ಕು ರಾಜ್ಯಗಳ ಪತ್ರಕರ್ತರು ಬೆಂಗಳೂರಿನಲ್ಲಿರುತ್ತಾರೆ. ರಕ್ಷಿತ್ ಶೆಟ್ಟಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಸಾಹಸಕ್ಕೆ 4 ರಾಜ್ಯಗಳ ಸ್ಟಾರ್‌ಗಳು ಹಾಗೂ ಪತ್ರಕರ್ತರು ಜೊತೆಯಾಗಲಿದ್ದಾರೆ.

    ಅಂದಹಾಗೆ ಚಿತ್ರ 2 ವರ್ಷ ಶೂಟಿಂಗ್ ಆಗಿ ಸಿದ್ಧವಾಗಿರುವಂತದ್ದು. ಕನ್ನಡದಲ್ಲಿ ಇದೊಂದು ದಾಖಲೆ. ಚಿತ್ರದ ನಾಯಕಿ ಶಾನ್ವಿ ಶ್ರೀವಾತ್ಸವ್. ನಿರ್ದೇಶಕ ಸಚಿನ್ ರವಿ. ಚಿತ್ರದ ಕುತೂಹಲದ ಒಂದೊAದೇ ಪುಟಗಳನ್ನು ಚಿತ್ರತಂಡ ತೆರೆಯುತ್ತಿದೆ. ಪ್ರತಿಯೊಂದೂ ಇಂಟರೆಸ್ಟಿAಗ್.

  • ಆಗ ಅಲೆಲೆಲೆ.. ಈಗ ಹ್ಯಾಂಡ್ಸಪ್ ಟ್ರೆಂಡಿAಗ್

    avane srimnarayna's hands up song goes viral

    ಅವನೇ ಶ್ರೀಮನ್ನಾರಾಯಣ ಚಿತ್ರದ ಹ್ಯಾಂಡ್ಸಪ್ ಹಾಡು ಹೊರಬಿದ್ದಿದ್ದೇ ತಡ ಟ್ರೆಂಡಿAಗ್ ಶುರುವಾಗಿದೆ. ರಕ್ಷಿತ್ ಶೆಟ್ಟಿ ಹಾಕಿದ ಹ್ಯಾಂಡ್ಸಪ್ ಚಾಲೆಂಜ್‌ನ್ನು ಅಭಿಮಾನಿಗಳು ಸ್ವೀಕರಿಸಿದ್ದಾರೆ. ಶಾನ್ವಿ ಶ್ರೀವಾತ್ಸವ್ ಅವರೇ ಸ್ಟೆಪ್ ಹಾಕಿದ ಮೇಲೆ ಇನ್ನೇನಿದೆ. ಸಾವಿರಾರು ಅಭಿಮಾನಿಗಳು ಇದು ದೇವರ ಸೃಷ್ಟಿಯ ಅವತಾರ ಎನ್ನುತ್ತಾ ಹ್ಯಾಂಡ್ಸಪ್ ಮಾಡುತ್ತಿದ್ದಾರೆ.

    ಕಿರಿಕ್ ಪಾರ್ಟಿ ಸಿನಿಮಾ ಬಂದಾಗ.. ಬೆಳಗೆದ್ದು ಯಾರ ಮುಖವಾ ನಾನಾನು ನೋಡಿದೆ.. ಕನಸಲ್ಲಿ ಅಲೆಲೆಲೆಲೆ.. ಅನ್ನೋದು ಟ್ರೆಂಡಿAಗ್ ಸೃಷ್ಟಿಸಿತ್ತು. ಈಗ ಹ್ಯಾಂಡ್ಸಪ್. ಅಜನೀಶ್ ಲೋಕನಾಥ್ ಸಂಗೀತ, ಇಮ್ರಾನ್ ಸರ್ದಾರಿಯಾ ಕೊರಿಯೋಗ್ರಫಿ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿದೆ.

    ಇದನ್ನು ನಾವು ನಿರೀಕ್ಷಿಸಿದ್ದೆವು. ಇದು ಚಿತ್ರದ ಸಿಗ್ನೇಚರ್ ಟ್ಯೂನ್ ಮತ್ತು ಸ್ಟೆಪ್. ಈಗ ಜನರೇ ತಮ್ಮ ತಮ್ಮ ಗೆಳೆಯ, ಗೆಳತಿಯರಿಗೆ ಚಾಲೆಂಜ್ ಹಾಕ್ಕೊಂಡು ಸ್ಟೆಪ್‌ನ್ನು ಜನಪ್ರಿಯ ಮಾಡುತ್ತಿದ್ದಾರೆ ಎನ್ನುವ ಖುಷಿ ನಿರ್ದೇಶಕ ಸಚಿನ್ ಅವರಲ್ಲಿದೆ.

    ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಂತೂ ಹಾಡಿಗೆ ಸಿಗುತ್ತಿರುವ ರೆಸ್ಪಾನ್ಸ್ಗೆ ಥ್ರಿಲ್ ಆಗಿದ್ದಾರೆ. ಅಂದಹಾಗೆ ಹೀರೋ ಹಿಡಿದಿರುವ ಗನ್ ಹೆಸರೇ ಹ್ಯಾಂಡ್ಸಪ್.

  • ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ.. ರೈಲಲ್ಲಿ ನಾರಾಯಣ

    avane srimnannarayana promotions in train

    ಗೋಡೆಗಳ ಮೇಲೆ, ಬಸ್ಸುಗಳ ಮೇಲೆ, ಆಟೋಗಳ ಮೇಲೆ.. ಪೋಸ್ಟರ್ ಅಂಟಿಸುವುದನ್ನು ನೋಡಿದವರಿಗೆ ಅವನೇ ಶ್ರೀಮನ್ನಾರಾಯಣ ಹೊಸದೊಂದು ರೀತಿಯ ಪ್ರಚಾರ ಆರಂಭಿಸಿರುವುದು ವ್ಹಾವ್ ಎನಿಸಿದ್ದರೆ ಅಚ್ಚರಿಯಿಲ್ಲ. ಏಕೆಂದರೆ ನಾರಾಯಣ ಕಾಣಿಸಿರುವುದು ರೈಲುಗಳ ಮೇಲೆ. ಅಂದಹಾಗೆ ಇದು ದಕ್ಷಿಣ ಭಾರತ ಚಿತ್ರರಂಗದಲ್ಲೆ ಮೊದಲ ಪ್ರಯತ್ನ.

    ಬೆಂಗಳೂರು ಲೋಕಲ್ ಟ್ರೆöÊನು, ಬೆಂಗಳೂರು ಟು ರಾಮನಗರ, ಮೈಸೂರು, ಮಾರಿಕಕುಪ್ಪಂ (ಕೆಜಿಎಫ್), ಕುಪ್ಪಂ (ಆಂಧ್ರ), ಹಿಂದೂಪುರ, ಬಂಗಾರಪೇಟೆ, ವೈಟ್‌ಫೀಲ್ಡ್ ರೈಲುಗಳು, ಮೈಸೂರು-ಅರಸೀಕೆರೆ-ಶಿವಮೊಗ್ಗ ಹಾಗೂ ಹುಬ್ಬಳ್ಳಿ ಪ್ಯಾಸೆಂಜರ್ ರೈಲುಗಳಲ್ಲಿ ಅವನೇ ಶ್ರೀಮನ್ನಾರಯಣ ಪೋಸ್ಟರ್ ರಾರಾಜಿಸುತ್ತಿದೆ.

    ಇದೊಂದು ಹೊಸ ಪ್ರಯತ್ನ. ರೈಲಿನ ಬೋಗಿಗಳ ಒಳಗೆ ಸಿನಿಮಾ ಪ್ರಚಾರಕ್ಕೆ ಅವಕಾಶ ಕೊಟ್ಟಿದ್ದಾರೆ. 2020ರ ಜನವರಿ 20ರವರೆಗೆ ರೈಲುಗಳಲ್ಲಿ ಅವನೇ ಶ್ರೀಮನ್ನಾರಯಣ ಪೋಸ್ಟರ್ ಇರಲಿದೆ ಎಂದಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ.

  • ಇನ್ನು 70 ದಿನ ಕಾಯಿರಿ. ಅವನೇ ಬರ್ತಾನೆ.. ಬಂದೇ ಬರ್ತಾನೆ..!

    avane srimmanrayana may release in december

    ಅವನೇ ಶ್ರೀಮನ್ನಾರಾಯಣ. ಸುಮಾರು ಎರಡು ವರ್ಷಗಳಿಂದ ಸುದ್ದಿಯಲ್ಲಿರುವ ಚಿತ್ರ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾಸ್ತವ್ ನಟಿಸಿರುವ ಚಿತ್ರದ ಪೋಸ್ಟರ್, ಟೀಸರುಗಳೇ ಭಾರಿ ಕುತೂಹಲ ಹುಟ್ಟಿಸಿವೆ. 5 ಭಾಷೆಗಳಲ್ಲಿ ರೆಡಿಯಾಗಿರುವ ಚಿತ್ರದ ಬಿಡುಗಡೆ ಯಾವಾಗ ಎನ್ನುವುದು ಅಭಿಮಾನಿಗಳ ಪ್ರಶ್ನೆಯಾಗಿತ್ತು. ಏಕೆಂದರೆ ರಕ್ಷಿತ್ ಶೆಟ್ಟಿ ಅಭಿನಯದ ಚಿತ್ರ ಬಂದು ಈ ಡಿಸೆಂಬರ್‍ಗೆ 3 ವರ್ಷ ತುಂಬಲಿದೆ. ಈ ನಿರೀಕ್ಷೆಗಳಿಗೆ, ಕಾತುರಗಳಿಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಉತ್ತರ ಕೊಟ್ಟಿದ್ದಾರೆ.

    ಇನ್ನು 70 ದಿನ. ಅವನು ಬಂದೇ ಬರ್ತಾನೆ ಎಂದಿದ್ದಾರೆ. ಅಂದರೆ ನವೆಂಬರ್ ಅಥವಾ ಡಿಸೆಂಬರ್‍ನಲ್ಲಿ ಅವನೇ ಶ್ರೀಮನ್ನಾರಾಯಣ ರಿಲೀಸ್ ಎನ್ನುವುದು ಪಕ್ಕಾ. ಸಚಿನ್ ರವಿ ನಿರ್ದೇಶನದ ಸಿನಿಮಾಗೆ ಚರಣ್ ರಾಜ್ ಮತ್ತು ಅಜನೀಶ್ ಲೋಕನಾಥ್ ಇಬ್ಬರೂ ಸಂಗೀತ ನೀಡಿದ್ದಾರೆ. ಸ್ಸೋ.. ಲಾಸ್ಟ್ 70 ಡೇಸ್.

  • ಊರ್ವಶಿಯಲ್ಲಿ ಶ್ರೀಮನ್ನಾರಾಯಣ ಬಾಕ್ಸಿಂಗ್ ಡೇ ದರ್ಶನ

    Avane Srimannarayana Premiere Show Tpday

    ಅವನೇ ಶ್ರೀಮನ್ನಾರಾಯಣ ರಿಲೀಸ್ ಆಗುವುದು ಬಾಕ್ಸಿಂಗ್ ಡೇ ಮುಗಿದ ಮೇಲೆ. ಬಾಕ್ಸಿಂಗ್ ಡೇ ಎಂದರೆ ಗೊತ್ತಲ್ಲ, ಕ್ರಿಸ್‍ಮಸ್ ಮಾರನೇ ದಿನವನ್ನ ಬಾಕ್ಸಿಂಗ್ ಡೇ ಅಂತಾ ಕರೆಯೋದು ವಾಡಿಕೆ. ಆದರೆ, ಆ ಬಾಕ್ಸಿಂಗ್ ಡೇ ದಿನವೇ ಅವನೇ ಶ್ರೀಮನ್ನಾರಾಯಣ ದರ್ಶನ ಕೊಡಲಿದ್ದಾನೆ.

    ರಿಲೀಸ್ ಆಗುವುದು ಡಿ.27ಕ್ಕೇ ಆದರೂ, ಊರ್ವಶಿಯಲ್ಲಿ ಪ್ರೀಮಿಯರ್ ಶೋ ಇದೆ. 26ನೇ ತಾರೀಕು ರಾತ್ರಿ 9ಕ್ಕೆ ಊರ್ವಶಿಯಲ್ಲಿ ನಡೆಯಲಿರುವ ಪ್ರೀಮಿಯರ್ ಶೋನಲ್ಲಿ ಸೆಲಬ್ರಿಟಿಗಳು ಭಾಗವಹಿಸಲಿದ್ದಾರೆ.

    ಸಚಿನ್ ರವಿ ನಿರ್ದೇಶನದ ಸಿನಿಮಾಗೆ ರಕ್ಷಿತ್ ಶೆಟ್ಟಿ ಹೀರೋ. 3 ವರ್ಷಗಳ ಸುದೀರ್ಘ ಗ್ಯಾಪ್ ನಂತರ ಬರುತ್ತಿರುವ ಸಿನಿಮಾಗೆ ಶಾನ್ವಿ ಶ್ರೀವಾತ್ಸವ್ ನಾಯಕಿ. ಅಜನೀಶ್ ಮತ್ತು ಚರಣ್‍ರಾಜ್ ಮ್ಯೂಸಿಕ್ ಪವರ್ ಇರುವ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕ.

  • ಒಂದಾನೊ0ದು ಕಾಲದಲ್ಲಿ.. ಅಮರಾವತಿ ಎಂಬ ಊರಿನಲ್ಲಿ..

    amaravathi was created for avane srimannaryana

    ಅವನೇ ಶ್ರೀಮನ್ನಾರಾಯಣ. ರಿಲೀಸ್ ಡೇಟ್ ಹತ್ತಿರವಾಗುತ್ತಿದೆ. ೩ ವರ್ಷದ ಪರಿಶ್ರಮ ಹೇಗಿರಬಹುದು ಎಂಬ ಕುತೂಹಲವೂ ಇದೆ. ಇಡೀ ಚಿತ್ರದ ಕಥೆ ನಡೆಯುವುದು ಈಗಿನ ಕಾಲದಲ್ಲಿ ಅಲ್ಲ. ಎಲ್ಲವೂ ಕಾಲ್ಪನಿಕ. ಊರು, ಜಗತ್ತು, ಪಾತ್ರ ಎಲ್ಲವೂ ಕಲ್ಪನಾ ಲೋಕದ ಸೃಷ್ಟಿಯೇ. ಚಿತ್ರಕ್ಕಾಗಿ ಒಂದು ನಗರ, ಕಾಡು, ಕೋಟೆಯನ್ನೇ ಸೃಷ್ಟಿಸಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

    ಅಮರಾವತಿ ಎಂಬ ಊರು, ಅದರ ಸುತ್ತ ಒಂದು ಕೋಟೆ, ಕೋಟೆಯ ಪಕ್ಕದಲ್ಲೊಂದು ಕಾಡು.. ಎಲ್ಲವನ್ನೂ ಕಲಾ ನಿರ್ದೇಶಕರೇ ಸೃಷ್ಟಿಸಿದ್ದಾರೆ. ಅದಕ್ಕೆ ಕಾರಣವೂ ಇತ್ತೆನ್ನಿ. ಕಾಡಿಗೆ ಹೋಗಿ ಶೂಟ್ ಮಾಡಬೇಕೆಂದರೆ ಕನಿಷ್ಠ ೨೦ ದಿನದ ಶೂಟಿಂಗ್ ಇತ್ತು. ರಾತ್ರಿಯೇ ಶೂಟಿಂಗ್ ಆಗಬೇಕಿತ್ತು. ಅದು ಮೊದಲೇ ಕಾಡು ಪ್ರಾಣಿಗಳು ಓಡಾಡುವ ಸಮಯ. ಈ ಯಾವುದೇ ರಿಸ್ಕ್ ಬೇಡ ಎಂದುಕೊAಡು ಕಾಡಿನ ಸೆಟ್ಟನ್ನೇ ಸೃಷ್ಟಿಸಿಬಿಟ್ಟರಂತೆ ರಕ್ಷಿತ್ ಶೆಟ್ಟಿ.

    ಚಿತ್ರದ ಕಥೆ ಮತ್ತು ಹೀರೋ ರಕ್ಷಿತ್ ಶೆಟ್ಟಿ. ಒಂದು ಅದ್ಭುತ ಫ್ಯಾಂಟಸಿ ಲೋಕ ಸೃಷ್ಟಿಸಲು ೨೫ಕ್ಕೂ ಹೆಚ್ಚು ಸೆಟ್ ಹಾಕಿಸಿದ್ದಾರಂತೆ. ಸಚಿನ್ ರವಿ ನಿರ್ದೇಶನದ ಚಿತ್ರ ಡಿಸೆಂಬರ್ ೨೭ರಂದು ರಿಲೀಸ್ ಆಗುತ್ತಿದೆ.

  • ಕಂಗ್ರಾಟ್ಸ್ ಪುಷ್ಕರ್ ಮಲ್ಲಿಕಾರ್ಜುನಯ್ಯ

    Pushkar Mallikarjunaiah Happy With Avane Srimannarayana's Success

    ಇದು ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೆ ಶುಭಾಶಯ ಹೇಳುವ ಸಮಯ. ಅವನೇ ಶ್ರೀಮನ್ನಾರಾಯಣ ಸಿನಿಮಾ ಬಾಕ್ಸಾಫೀಸಿನಲ್ಲಿ ಹವಾ ಸೃಷ್ಟಿಸಿದೆ. 3 ವರ್ಷಗಳ ನಿರಂತರ ಶ್ರಮ ಮತ್ತು ಪ್ರತಿಭೆಗೆ ಪ್ರೇಕ್ಷಕ ನಾರಾಯಣ ಜೈ ಹೋ ಎಂದಿದ್ದಾನೆ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ಜೋಡಿ ಮೋಡಿ ಮಾಡಿದ್ದರೆ, ಸಚಿನ್ ರವಿ ನಿರ್ದೇಶನ ಮ್ಯಾಜಿಕ್ ಮಾಡಿದೆ.

    ಮೊದಲ ದಿನ 12 ಕೋಟಿ, 2ನೇ ದಿನ 15 ಕೋಟಿ ಆಸುಪಾಸಿನಲ್ಲಿದೆ ಕಲೆಕ್ಷನ್. 3ನೇ ದಿನವೂ 12 ರಿಂದ 15 ಕೋಟಿ ಕಲೆಕ್ಷನ್ ಎನ್ನುತ್ತಿವೆ ಮೂಲಗಳು. ಅಂದಹಾಗೆ ಇದು ಅಧಿಕೃತ ಲೆಕ್ಕವಲ್ಲ. ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರ.

    ಇದರ ಜೊತೆಗೆ ಚಿತ್ರಕ್ಕೆ ಪ್ರೇಕ್ಷಕರು ಕೊಟ್ಟಿರುವ ರೇಟಿಂಗ್, ವಿಮರ್ಶಕರು ನೀಡಿರುವ ಮೆಚ್ಚುಗೆಯೂ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರಿಗೆ ಖುಷಿ ಕೊಟ್ಟಿದೆ. ರಿಲೀಸ್ ಆಗುವುದಕ್ಕೂ ಮೊದಲೇ ಸೇಫ್ ಜೋನ್ ಸೇರಿದ್ದ ಪುಷ್ಕರ್ ಮಲ್ಲಿಕಾರ್ಜುನಯ್ಯ, ಈಗ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ವರ್ಷನ್ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ಚಿತ್ರಕ್ಕೆ ವಿದೇಶಿ ಮಾರುಕಟ್ಟೆಯಲ್ಲೂ ಅದ್ಭುತ ಸಪೋರ್ಟ್ ಸಿಕ್ಕಿದೆ.

  • ಕಿರಿಕ್ ಪಾರ್ಟಿ ಡೇಟಿಗೇ ಅವನೇ ಶ್ರೀಮನ್ನಾರಾಯಣ

    avane srimanarayana to release in december

    ಅವನೇ ಶ್ರೀಮನ್ನಾರಾಯಣ. ಕನ್ನಡದ ಬಹುಕೋಟಿ ಬಜೆಟ್ ಸಿನಿಮಾ. ರಕ್ಷಿತ್ ಶೆಟ್ಟಿ, ಶಾನ್ವಿ ಅಭಿನಯದ ಚಿತ್ರ ಪ್ರೊಡಕ್ಷನ್ ಹಂತದಲ್ಲೇ 2 ವರ್ಷ ಪೂರೈಸಿದೆ. ಬರೋಬ್ಬರಿ 200 ದಿನಗಳ ಶೂಟಿಂಗ್ ಆಗಿದೆ. ಸಿನಿಮಾ ರಿಲೀಸ್ ಯಾವಾಗ ಎಂಬ ಪ್ರಶ್ನೆಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಇತ್ತೀಚೆಗೆ 70 ದಿನಗಳ ಕೌಂಟ್ ಡೌನ್ ಕೊಟ್ಟಿದ್ದರು. ಈಗ ರಿಲೀಸ್ ಡೇಟ್ ಹೊರಬಿದ್ದಿದೆ.

    ಎಲ್ಲವೂ ಪ್ಲಾನ್ ಪ್ರಕಾರವೇ ಆದರೆ, ಡಿಸೆಂಬರ್ ಕೊನೆಯಲ್ಲಿ ಅವನೇ ಶ್ರೀಮನ್ನಾರಾಯಣ ರಿಲೀಸ್ ಆಗಲಿದೆ. ಅದು ಕಿರಿಕ್ ಪಾರ್ಟಿ ರಿಲೀಸ್ ಆದ ಡೇಟ್ನಲ್ಲೇ ಬರುವ ಸಾಧ್ಯತೆ ಹೆಚ್ಚು. 2016ರಲ್ಲಿ ಕಿರಿಕ್ ಪಾರ್ಟಿ ಬಾಕ್ಸಾಫೀಸ್ನಲ್ಲಿ ಅಲೆಲೆಲೆಲೆ.. ಎಂದೇ ಸದ್ದು ಮಾಡಿತ್ತು. ಈಗ ಶ್ರೀಮನ್ನಾರಾಯಣನ ಟೈಂ.