` kusthi, - chitraloka.com | Kannada Movie News, Reviews | Image

kusthi,

  • 'Kusthi' Teaser Gets Good Response

    kisthi teaser gets good response

    'Duniya' Vijay's new film 'Kusthi' starring his son Samrat is all set to be launched soon. Meanwhile, the teaser of the film is getting huge response from all over.

    The teaser of 'Kusthi' was released recently on Samrat's birthday. The teaser also got a criticism from a section. However, the controversy subsided soon and after that the teaser is getting good response.

    The film is being directed by Raghu Shimoga who earlier directed 'Churi Katte'. The artistes and technicians are yet to be finalized.

  • Vijay and Samrat get ready for 'Kusthi'

    vijay and samrat to kusthi

    'Duniya' Vijay launching his son Samrat in a new film called 'Kusthi' is not a new news. Now Vijay and Samrat are working rigorously for the film.

    Vijay says Samrat is working out for nearly four hours daily and he is being given training from National and International wrestlers for the movie. Even Vijay apart from rigorous workout is getting trained for the role of a wrestler for this movie.

    Vijay has not disclosed who will be directing this film. He has not even disclosed the artistes and technicians of the film. Vijay says he will be announcing everything about the star cast and the technicians soon. The film will be shot in North Karnataka.

     

  • Vijay To Introduce His Son Through 'Kusthi'

    duniya vijay to intrduce his son

    Actor Vijay acting a in a film called 'Kusthi' is not a new news. Vijay himself had announced that he will be acting in a new film and will be titled as 'Kusthi'.

    Now the actor has registered the title under his banner and is planning to introduce his son Samrat through the film. Samrat will be playing the role of younger Vijay in this film.

    Vijay says the film will not only about wrestling and will be an out and out commercial film. 'Though the film revolves around wrestling, the film is not only about wrestling. It will be an action will lot of commercial ingredients' says Vijay.

  • ಕುಸ್ತಿ ಕೈಬಿಟ್ಟ ದುನಿಯಾ ವಿಜಿ

    duniya vijay drops kusthi movie

    ದುನಿಯಾ ವಿಜಯ್ ಅಭಿನಯದ ಕುಸ್ತಿ ಸಿನಿಮಾಗೆ ಬ್ರೇಕ್ ಬಿದ್ದಿದೆ. ತಮ್ಮ ಪುತ್ರ ಸಾಮ್ರಾಟ್‍ನನ್ನು ತೆರೆಗೆ ಪರಿಚಯಿಸಲು ದೊಡ್ಡ ಮಟ್ಟದಲ್ಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದ ವಿಜಿ, ಈಗ ಪ್ರಾಜೆಕ್ಟ್‍ನ್ನೇ ಕೈಬಿಟ್ಟಿದ್ದಾರೆ. ನಿರ್ದೇಶಕ ರಾಘು ಶಿವಮೊಗ್ಗ, ಈಗ ಬೇರೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ.

  • ಕುಸ್ತಿ ಕೈಬಿಟ್ಟಿಲ್ಲ.. - ನಿರ್ದೇಶಕ ಚೂರಿಕಟ್ಟೆ ರಾಘು

    duniya vijay's kusthi postponed

    ದುನಿಯಾ ವಿಜಯ್ ಅವರ ಮನೆಯಲ್ಲಿನ ಕೌಟುಂಬಿಕ ಕಲಹಗಳು, ಹೆಚ್ಚಾದ ಬಜೆಟ್‍ಗಳಿಂದಾಗಿ ದುನಿಯಾ ವಿಜಯ್ ಕುಸ್ತಿ ಚಿತ್ರವನ್ನು ಕೈಬಿಡಲಾಗಿದೆ ಎಂಬ ಸುದ್ದಿಗೆ ನಿರ್ದೇಶಕ ಚೂರಿಕಟ್ಟೆ ರಾಘು ಸ್ಪಷ್ಟನೆ ನೀಡಿದ್ದಾರೆ.

    ಕುಸ್ತಿ ಸಿನಿಮಾ ಕೈಬಿಟ್ಟಿಲ್ಲ. ಆದರೆ, ಚಿತ್ರ ಮುಂದಕ್ಕೆ ಹೋಗಿರುವುದು ನಿಜ. ಅದಕ್ಕೆ ಕಾರಣ ಬಜೆಟ್ ಅಲ್ಲ..ತಯಾರಿ. ದುನಿಯಾ ವಿಜಯ್ ಅವರ ಕುಟುಂಬದಲ್ಲಿನ ಕಲಹಗಳಿಂದಾಗಿ ದುನಿಯಾ ವಿಜಿ ಕುಸ್ತಿಯ ತರಬೇತಿಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಈ ಗ್ಯಾಪ್‍ನಿಂದಾಗಿ ಇಷ್ಟು ದಿನದ ಅವರ ತಯಾರಿ ಕೈಕೊಟ್ಟಿತು. ಹೀಗಾಗಿ ಅವರು ಮತ್ತೊಮ್ಮೆ ತಮ್ಮ ತಯಾರಿಯನ್ನು ಓಂನಿಂದ ಶುರುಮಾಡಬೇಕು. ಅದಕ್ಕೆ ಕನಿಷ್ಟ 6 ತಿಂಗಳು ಬೇಕು. ನಂತರ ಕುಸ್ತಿ ಶುರುವಾಗಲಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

    ಚೂರಿಕಟ್ಟೆ ಚಿತ್ರದಿಂದ ಪ್ರತಿಭಾವಂತ ನಿರ್ದೇಶಕ ಎಂದು ಹೆಸರು ಗಳಿಸಿರುವ ಶಿವಮೊಗ್ಗ ರಾಘವೇಂದ್ರ, ಕುಸ್ತಿಗೂ ಮುನ್ನ ಇನ್ನೊಂದು ಚಿತ್ರ ಕೈಗೆತ್ತಿಕೊಳ್ಳಲಿದ್ದಾರಂತೆ. ಈ ಕುರಿತು ಚಿತ್ರಲೋಕಕ್ಕೆ ಹೇಳಿಕೆ ನೀಡಿರುವ ರಾಘು, ಕುಸ್ತಿ ತಯಾರಿಯ ಮಧ್ಯೆಯೇ ಹೊಸ ಚಿತ್ರಕ್ಕೆ ಸ್ಕ್ರಿಪ್ಟ್ ಕೆಲಸ ಶುರುವಾಗಿದೆ. ದುನಿಯಾ ವಿಜಯ್ ಅವರೇ ಆ ಚಿತ್ರವನ್ನೂ ನಿರ್ಮಿಸಲಿದ್ದಾರೆ ಎಂದು ಹೇಳಿದ್ದಾರೆ.

    ದುನಿಯಾ ವಿಜಯ್ ಕುಸ್ತಿ ಸಿನಿಮಾ ಮಾಡುವುದು ನಿಜ. ಆದರೆ, ಅದು ಶುರುವಾಗುವುದು 6 ತಿಂಗಳ ನಂತರ. ಏಕೆಂದರೆ, ದುನಿಯಾ ವಿಜಯ್ ಈಗ ತಮ್ಮ ಕುಸ್ತಿಯನ್ನು ಮತ್ತೆ ಆರಂಭದಿಂದ ಶುರು ಮಾಡಬೇಕು. ದೇಹವನ್ನು ಮತ್ತೆ ಕುಸ್ತಿ ಪೈಲ್ವಾನ್‍ಗೆ ತಕ್ಕಂತೆ ಹುರಿಗೊಳಿಸಬೇಕು. ಅದಕ್ಕೆ 6 ತಿಂಗಳು ಸಮಯ ಬೇಕೇಬೇಕು.

  • ದುನಿಯಾ ವಿಜಯ್ ಜೊತೆ ಆದಿತಿ ಕುಸ್ತಿ

    aditi prabhudeva in duniya vijay's kusthi

    ಧೈರ್ಯಂ ಚಿತ್ರದ ಮೂಲಕ ನಾಯಕಿಯಾಗಿ ಗುರುತಿಸಿಕೊಂಡ ಆದಿತಿ ಪ್ರಭುದೇವ, ದುನಿಯಾ ವಿಜಯ್‍ಗೆ ನಾಯಕಿಯಾಗುತ್ತಿದ್ದಾರೆ. ದುನಿಯಾ ವಿಜಯ್ ನಿರ್ಮಾಣದ ಕುಸ್ತಿ ಸಿನಿಮಾಗೆ ಆದಿತಿ ನಾಯಕಿ. ರಾಘು ಶಿವಮೊಗ್ಗ ನಿರ್ದೇಶನದ ಚಿತ್ರದಲ್ಲಿ ಆದಿತಿ ಪ್ರಭುದೇವಗೆ ಬೋಲ್ಡ್ ಪಾತ್ರವಿದೆಯಂತೆ.

    ಬಜಾರ್ ಚಿತ್ರದ ರಿಲೀಸ್‍ಗೆ ಕಾಯ್ತಿರೋ ಆದಿತಿ, ಆಪರೇಷನ್ ನಕ್ಷತ್ರ ಚಿತ್ರಕ್ಕೂ ನಾಯಕಿ. ದಾವಣಗೆರೆ ಹುಡುಗಿಯಾದ ಆದಿತಿಗೆ, ಕುಸ್ತಿ ಅಂದ್ರೆ ತುಂಬಾ ಇಷ್ಟವಂತೆ. ದಾವಣಗೆರೆಯಲ್ಲಿ ನಡೆಯೋ ಜಾತ್ರೆಗಳಲ್ಲಿ ಕುಸ್ತಿಗಳು ಕಾಮನ್. ನನಗೂ ಕುಸ್ತಿ ಬಗ್ಗೆ ಕ್ರೇಜ್ ಇದೆ. ಈಗ ಕುಸ್ತಿಯ ಕಥೆ ಆಧರಿಸಿದ ಸಿನಿಮಾದಲ್ಲಿ ನಟಿಸುತ್ತಿರುವುದು ಥ್ರಿಲ್ ಕೊಡುತ್ತಿದೆ ಎಂದಿದ್ದಾರೆ ಆದಿತಿ.

    ದುನಿಯಾ ವಿಜಯ್ ಜೊತೆಗೆ ಅವರ ಪುತ್ರ ಸಾಮ್ರಾಟ್ ಕೂಡಾ ನಟಿಸುತ್ತಿದ್ದು, ಕಲ್ಯಾಣಿ ವಿಜಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  • ದುನಿಯಾ ವಿಜಿ ಪುತ್ರನ ಸಖತ್ ಎಂಟ್ರಿ

    samrat vijay's first look in kusthi

    ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದುನಿಯಾ ವಿಜಯ್ ಅವರಿಗೆ ಈ ವರ್ಷದ ಹುಟ್ಟುಹಬ್ಬ ಸಿಕ್ಕಾಪಟ್ಟೆ ಸ್ಪೆಷಲ್. ದುನಿಯಾ ವಿಜಯ್ ಪುತ್ರ ಸಾಮ್ರಾಟ್ ಸಿನಿಮಾ ಎಂಟ್ರಿಯ ಲುಕ್ ಹೊರಬಿದ್ದಿದೆ. ದುನಿಯಾ ವಿಜಯ್ ಅಭಿನಯದ ಕುಸ್ತಿ ಚಿತ್ರದಲ್ಲಿ ವಿಜಿ ಪುತ್ರ ಸಾಮ್ರಾಟ್ ಕೂಡಾ ನಟಸುತ್ತಿದ್ದಾನೆ.

    ದುನಿಯಾ ವಿಜಯ್ ಪೈಲ್ವಾನ್ ಪಾತ್ರದಲ್ಲಿದ್ದರೆ, ಚಿಕ್ಕ ಹುಡುಗನಾಗಿದ್ದಾಗಿನ ಅಪ್ಪನ ಪಾತ್ರವನ್ನು ಮಗ ಸಾಮ್ರಾಟ್ ವಿಜಯ್ ಮಾಡಲಿದ್ದಾರೆ. ಮೈತುಂಬಾ ಅಖಾಡದ ಮಣ್ಣು ಮೆತ್ತಿಕೊಂಡಿರುವ, ಕುಸ್ತಿಪಟುವಿನ ಗೆಟಪ್‍ನಲ್ಲಿರುವ ಸಾಮ್ರಾಟ್, ಅಪ್ಪನನ್ನೂ ಮೀರಿಸುವಂತೆ ಮೈಕಟ್ಟು ತೋರಿಸುತ್ತಿದ್ದಾನೆ. ಇನ್ನೂ ಚಿಕ್ಕ ಹುಡುಗ. ಮುಂದಿನ ದಿನಗಳಲ್ಲಿ ದೊಡ್ಡ ಯಶಸ್ಸು ಸಾಧಿಸುವ ಸೂಚನೆಯಂತೂ ಇದೆ.

    Related Articles :-

    ಮರಿ ಪೈಲ್ವಾನ್ ಆಗಿ ಬರ್ತಾನೆ ಜ್ಯೂ.ದುನಿಯಾ ವಿಜಿ

  • ಪೈಲ್ವಾನ್ ಆಗೋಕೆ ಮಗನೊಂದಿಗೆ ವಿಜಿ ಪ್ರಾಕ್ಟೀಸ್

    duniya viji kusthi practice with his son

    ದುನಿಯಾ ವಿಜಿ ಅವರ ಮುಂದಿನ ಸಿನಿಮಾ ಕುಸ್ತಿಯ ಕುರಿತಾದದ್ದು. ಆ ಚಿತ್ರದಲ್ಲಿ ದುನಿಯಾ ವಿಜಿ ಕುಸ್ತಿಪಟುವಾಗಿ ನಟಿಸುತ್ತಿದ್ದಾರೆ, ಬಾಲಕನ ಪಾತ್ರದಲ್ಲಿ ದುನಿಯಾ ವಿಜಯ್ ಅವರ ಪುತ್ರ ಸಾಮ್ರಾಟ್ ನಟಿಸುತ್ತಿದ್ದಾರೆ. ಚಿತ್ರಕ್ಕೆ ತಯಾರಿ ಆರಂಭವಾಗಿದ್ದು, ದುನಿಯಾ ವಿಜಯ್ ಈಗ ಕುಸ್ತಿಯ ಪಟ್ಟುಗಳನ್ನು ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಕಾರ್ತಿಕ್ ಕಾಟೆ, ಅಪ್ಪಾಸಿ ತೇರದಾಳ ಹಾಗೂ ಬೀರೇಶ್ ಎಂಬ ರಾಷ್ಟ್ರೀಯ ಮಟ್ಟದ ಕುಸ್ತಿಪಟುಗಳು ದುನಿಯಾ ವಿಜಯ್‍ಗೆ ತರಬೇತಿ ಕೊಡುತ್ತಿದ್ದಾರೆ.

    ಬಾಲ್ಯದಿಂದಲೂ ಗರಡಿ ಮನೆಯಲ್ಲಿಯೇ ಬೆಳೆದ ನನಗೆ ಕುಸ್ತಿ ಬಗ್ಗೆ ಸಿನಿಮಾ ಮಾಡಬೇಕು ಎಂಬ ಕನಸಿತ್ತು. ಇದು ಕನ್ನಡದ ಮಣ್ಣಿನ ಸೊಗಡಿನ ಸಿನಿಮಾ ಆಗಲಿದೆ ಎಂಬ ವಿಶ್ವಾಸ ವಿಜಿಯವರದ್ದು. ದುನಿಯಾ ವಿಜಿ ಜೊತೆ ಅವರ ಮಗ ಸಾಮ್ರಾಟ್ ಕೂಡಾ ಪ್ರಾಕ್ಟೀಸ್ ಮಾಡುತ್ತಿರುವುದು ವಿಶೇಷ. ಅಂದಹಾಗೆ ಚಿತ್ರದ ಕಥೆಗಾರ ಸ್ವತಃ ದುನಿಯಾ ವಿಜಯ್.

  • ಮರಿ ಪೈಲ್ವಾನ್ ಆಗಿ ಬರ್ತಾನೆ ಜ್ಯೂ.ದುನಿಯಾ ವಿಜಿ

    duniya vijay to intrduce his son

    ದುನಿಯಾ ವಿಜಿ. ರಾಜ್ಯೋತ್ಸವದ ದಿನವೇ ಬಿಡುಗಡೆ ಮಾಡಿದ ಕನಕ ಚಿತ್ರದ ಟ್ರೇಲರ್ ಮೆಚ್ಚುಗೆ ಪಡೆಯುತ್ತಿರುವಾಗಲೇ ಇನ್ನೊಂದು ಸಡಗರದ ಸುದ್ದಿ ಕೊಟ್ಟಿದ್ದಾರೆ. ಅವರ ಮಗ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾನೆ. ದುನಿಯಾ ವಿಜಯ್ ಅಭಿನಯದ ಕುಸ್ತಿ ಚಿತ್ರದಲ್ಲಿ ಅವರ ಮಗ ಸಾಮ್ರಾಟ್ ಮರಿ ಕುಸ್ತಿಪಟುವಾಗಿ ನಟಿಸಲಿದ್ದಾನೆ.ದುನಿಯಾ ವಿಜಿ ಸೀನಿಯರ್ ಕುಸ್ತಿ ಪಟುವಾದರೆ, ಸಾಮ್ರಾಟ್, ಬಾಲಕನಾಗಿದ್ದಾಗಿನ ದುನಿಯಾ ವಿಜಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಮಗನನ್ನು ಸುಮ್ಮನೆ ಚಿತ್ರರಂಗಕ್ಕೆ ತರುತ್ತಿಲ್ಲ. ಚಿತ್ರಕ್ಕಾಗಿ ತರಬೇತಿ ನೀಡುತ್ತಿದ್ದಾರೆ. ಕುಸ್ತಿ ಕಲಿಸುತ್ತಿದ್ದಾರೆ. ಏಕೆಂದರೆ, ಚಿತ್ರದಲ್ಲಿ ಬಾಲಕ ಕುಸ್ತಿ ಪಟುವಿನ ಪಾತ್ರವೂ ಸಾಹಸ ಮಾಡುತ್ತೆ. ಹೀಗಾಗಿ ಇಷ್ಟೆಲ್ಲ ತಯಾರಿ ಎನ್ನುತ್ತಾರೆ ವಿಜಿ.

    ಕುಸ್ತಿಯ ಕುರಿತು ಚಿತ್ರ ಮಾಡಬೇಕು ಅನ್ನೋದು ದುನಿಯಾ ವಿಜಿ ಕನಸಾಗಿತ್ತು. ಹೀಗಾಗಿ ಸ್ವತಃ ತಾವೇ ಕುಸ್ತಿ ಅನ್ನೋ ಟೈಟಲ್‍ನ್ನು ಚೇಂಬರ್‍ನಲ್ಲಿ ರಿಜಿಸ್ಟರ್ ಮಾಡಿಸಿದ್ದರು. ಕನಕ ಚಿತ್ರ ಮುಗಿದಿದ್ದು, ಜಾನಿ ಜಾನಿ ಯೆಸ್ ಪಪ್ಪಾ ಕೂಡಾ ಮುಗಿದ ನಂತರ ಕುಸ್ತಿಗೆ ಕೈ ಹಾಕುವ ಸಾಹಸ ಮಾಡಲಿದ್ದಾರೆ ವಿಜಿ.

    Related Articles :-

    Vijay To Introduce His Son Through 'Kusthi'

  • ವಿಜಯ್ ಕುಸ್ತಿಗೆ ಚೂರಿಕಟ್ಟೆ ರಘು 

    duniya vijay changed his director

    ದುನಿಯಾ ವಿಜಯ್ ಅಭಿನಯದ ಕುಸ್ತಿ ಚಿತ್ರಕ್ಕೆ ನಿರ್ದೇಶಕರು ಬದಲಾಗಿದ್ದಾರೆ. ಅನಿಲ್ ಜಾಗಕ್ಕೆ ಈಗ ರಘು ಬಂದಿದ್ದಾರೆ. ಯಾರು ಈ ರಘು ಎಂಬ ಪ್ರಶ್ನೆಗೆ ಉತ್ತರ, ಚೂರಿಕಟ್ಟೆ. ಚೌಕಾಬಾರ ಎಂಬ ಕಿರುಚಿತ್ರ ಹಾಗೂ ಚೂರಿಕಟ್ಟೆ ಎಂಬ ಚಿತ್ರದ ಮೂಲಕ ಗಮನ ಸೆಳೆದಿದ್ದ ರಘು ಶಿವಮೊಗ್ಗ, ದುನಿಯಾ ವಿಜಯ್ ಅಭಿನಯದ ಕುಸ್ತಿ ಚಿತ್ರದ ನಿರ್ದೇಶಕ.

    ಈ ಚಿತ್ರದ ಮೂಲಕ ದುನಿಯಾ ವಿಜಿ ಅವರ ಪುತ್ರ ಸಾಮ್ರಾಟ್ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ. ಅಂದಹಾಗೆ ರಘು ಅವರಿಗೆ ಈ ಚಾನ್ಸ್ ಕೊಡಿಸಿದ್ದೇ ಚೂರಿಕಟ್ಟೆ ಸಿನಿಮಾ. ಬಾಕ್ಸಾಫೀಸ್‍ನಲ್ಲಿ ದೊಡ್ಡ ಮಟ್ಟದ ಸದ್ದು ಮಾಡದೇ ಇದ್ದರೂ, ಚೂರಿಕಟ್ಟೆ ಸಿನಿಮಾ ವಿಮರ್ಶಕರ ಮನ ಗೆದ್ದಿತ್ತು. ಒಂದು ವರ್ಗದ ಪ್ರೇಕ್ಷಕರು ಸಿನಿಮಾವನ್ನು ಮೆಚ್ಚಿಕೊಂಡಿದ್ದರು. 

    ದುನಿಯಾ ವಿಜಯ್ ಚೂರಿಕಟ್ಟೆ ಸಿನಿಮಾ ನೋಡಿ, ಸ್ಕ್ರಿಪ್ಟ್ ಇಷ್ಟವಾಗಿ ಸ್ವತಃ ಕರೆದು ತಮ್ಮದೇ ಚಿತ್ರದ ನಿರ್ದೇಶನದ ಅವಕಾಶ ಕೊಟ್ಟಿದ್ದಾರೆ. ಕುಸ್ತಿ ಚಿತ್ರಕ್ಕಾಗಿ ದುನಿಯಾ ವಿಜಯ್ ಹಾಗೂ ಸಾಮ್ರಾಟ್ ಇಬ್ಬರೂ ಬೆವರು ಹರಿಸುತ್ತಿದ್ದು, ಕುಸ್ತಿಯ ಪಟ್ಟುಗಳನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ.

  • ವಿಜಯ್ ಕುಸ್ತಿಗೆ ದಂಗಲ್, ಸುಲ್ತಾನ್ ಸ್ಫೂರ್ತಿ

    duniya vikay's kusthi is an ispiration from dangal and sultan

    ಕುಸ್ತಿ, ದುನಿಯಾ ವಿಜಯ್ ನಿರ್ಮಿಸಿ ನಟಿಸುತ್ತಿರುವ ಸಿನಿಮಾ. ದೇಸೀ ಕುಸ್ತಿಯನ್ನೇ ಮೂಲಕಥೆಯಲ್ಲಿ ಹೊಂದಿರುವ ಚಿತ್ರದ ಟೀಸರ್ ಬಿಡಗಡೆಯಾಗಿದೆ. ಕ್ರೀಡೆಯನ್ನು ಕ್ರೀಡೆಯಾಗಿ, ಸ್ಪರ್ಧೆಯಾಗಿ ನೋಡಬೇಕೇ ಹೊರತು, ಪ್ರತಿಷ್ಟೆಯಾಗಿಸಿಕೊಳ್ಳಬಾರದು ಅನ್ನೋದು ಚಿತ್ರದ ಸಂದೇಶ ಮತ್ತು ಕತೆಯ ಸಾರ. ದುನಿಯಾ ವಿಜಯ್ ಮಗ ಸಾಮ್ರಾಟ್ ಬೆಳ್ಳಿತೆರೆಗೆ ಪರಿಚಯವಾಗುತ್ತಿರುವ ಚಿತ್ರ ಕುಸ್ತಿ.

    ಈ ಚಿತ್ರಕ್ಕೆ ಸ್ಫೂರ್ತಿ ದಂಗಲ್ ಹಾಗೂ ಸುಲ್ತಾನ್ ಚಿತ್ರಗಳು ಎಂದರೆ ಅಚ್ಚರಿಯಾಗಬಹುದು. ಸಲ್ಮಾನ್ ಅಭಿನಯದ ಸುಲ್ತಾನ್, ಕುಸ್ತಿಪಟುವೊಬ್ಬನ ಕ್ರೀಡೆ ಹಾಗೂ ಪ್ರೀತಿಯ ಬದುಕಿನ ಏರಿಳಿತದ ಕಥೆ ಹೊಂದಿತ್ತು. ಅಮೀರ್ ಖಾನ್ ನಾಯಕತ್ವದ ದಂಗಲ್, ಮಕ್ಕಳನ್ನು ಕುಸ್ತಿಪಟುಗಳನ್ನಾಗಿ ರೂಪಿಸುವ ಕಥೆ ಹೊಂದಿತ್ತು. ಈ ಚಿತ್ರಗಳ ಯಶಸ್ಸು ನೋಡಿ, ಕನ್ನಡದಲ್ಲೇಕೆ ಕುಸ್ತಿಯ ಕಥೆ ಮಾಡಬಾರದು ಎಂದುಕೊಂಡರಂತೆ ವಿಜಯ್. ಕುಸ್ತಿಗೆ ಕರ್ನಾಟಕದಲ್ಲಿ ತನ್ನದೇ ಆದ ಗರಡಿ ಮನೆಯ ಇತಿಹಾಸವೇ ಇದೆ. ಆಗ ರೂಪುಗೊಂಡಿದ್ದೇ ಕುಸ್ತಿ ಸಿನಿಮಾ.

    ಶಿವಮೊಗ್ಗ ರಘು ನಿರ್ದೇಶನದ ಚಿತ್ರಕ್ಕೆ ಕನಕ ಖ್ಯಾತಿಯ ನವೀನ್ ಸಜ್ಜು ಸಂಗೀತವಿದೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ನಾಯಕಿಯರ ಆಯ್ಕೆ ಇನ್ನಷ್ಟೇ ಆಗಬೇಕಿದೆ.

  • ಸಾಮ್ರಾಟ್ ವಿಜಯ್ ಟೀಸರ್ ಬಂತು

    samrat vijay's kusthi teaser out

    ದುನಿಯಾ ವಿಜಯ್ ಅವರ ಮಗ ಸಾಮ್ರಾಟ್‍ರನ್ನು ತೆರೆಗೆ ತರಲು ಭಾರಿ ಪ್ರಯತ್ನ ನಡೆಸಿದ್ದಾರೆ. ತಮ್ಮ ಕುಸ್ತಿ ಚಿತ್ರದಲ್ಲಿ ಸಾಮ್ರಾಟ್‍ನನ್ನು ಮರಿ ಪೈಲ್ವಾನನಾಗಿ ಪರಿಚಯಿಸುತ್ತಿದ್ದಾರೆ. ಚಿತ್ರದ ಟೀಸರ್ ಕೂಡಾ ಇಂಟ್ರೆಸ್ಟಿಂಗ್.

    ದೊಡ್ಡ ಹುಡುಗನೊಬ್ಬನ ಜೊತೆ ಕುಸ್ತಿ ಆಡುವ ಸಾಮ್ರಾಟ್ ಅವನನ್ನು ಸೋಲಿಸುತ್ತಾನೆ. ಅವನನ್ನು ಗುರುವೇ ಲೇವಡಿ ಮಾಡಿ, ಅಖಾಡ ಏನು ನಿಮ್ಮಪ್ಪಂದಲ್ಲ, ಮೆರೆಯಬೇಡ ಅಂತಾನೆ. ಅಪ್ಪನ ತಂಟೆಗೆ ಬರಬೇಡ, ನಿನ್ನಂತ ನೂರಾರು ಪೈಲ್ವಾನರಿಗೆ ನಮ್ಮಪ್ಪನೇ ಉಸ್ತಾದ್ ಎನ್ನುತ್ತಾನೆ. ಅಫ್‍ಕೋರ್ಸ್, ಅದು ಸಾಮ್ರಾಟ್ ಹುಟ್ಟುಹಬ್ಬವಷ್ಟೇ ಅಲ್ಲ, ಅಪ್ಪಂದಿರ ದಿನದ ಉಡುಗೊರೆಯೂ ಹೌದು.

    ಟೀಸರ್ ಕುತೂಹಲ ಹುಟ್ಟಿಸಿದೆ. ಶಿವಮೊಗ್ಗ ರಾಘು ನಿರ್ದೇಶನದ ಚಿತ್ರಕ್ಕೆ ಸ್ವತಃ ದುನಿಯಾ ವಿಜಯ್ ನಿರ್ಮಾಪಕ.