` shobha karandagle, - chitraloka.com | Kannada Movie News, Reviews | Image

shobha karandagle,

  • ಅಪ್ಪನಂತೆ ಮಗ.. ಪುನೀತ್‍ಗೆ ಶೋಭಾ ಕರಂದ್ಲಾಜೆ ಹೇಳಿದ್ದೇಕೆ..?

    shobha karandanjle meets puneeth rajkumar

    ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 4 ವರ್ಷ ಪೂರೈಸಿ, 5ನೇ ವರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಂಪರ್ಕ್ ಫಾರ್ ಸಮರ್ಥನ್ ಅಭಿಯಾನ ಆರಂಭಿಸಿದೆ. ಬಿಜೆಪಿ ಸರ್ಕಾರದ ಸಾಧನೆಗಳನ್ನು ಸೆಲಬ್ರಿಟಿಗಳು ಹಾಗೂ ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಈ ಕುರಿತು ಒಂದು ವಿಶೇಷ ಪುಸ್ತಕವನ್ನೇ ಮಾಡಿದೆ ಬಿಜೆಪಿ ಸರ್ಕಾರ. ಈ ಅಭಿಯಾನದ ಅಂಗವಾಗಿ ಸಂಸದೆ ಶೋಭಾ ಕರಂದ್ಲಾಜೆ, ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್‍ರನ್ನು ಭೇಟಿ ಮಾಡಿದ್ದಾರೆ. ಸರ್ಕಾರದ ಸಾಧನೆಯ ಪುಸ್ತಕವನ್ನೂ ನೀಡಿದ್ದಾರೆ. 

    ಅಪರೂಪದ ಸರಳ ವ್ಯಕ್ತಿತ್ವ ಹೊಂದಿರುವ ಸ್ಯಾಂಡಲ್‍ವುಡ್ ಕಿಂಗ್ ಪುನೀತ್ ರಾಜ್‍ಕುಮಾರ್‍ರನ್ನು ಭೇಟಿ ಮಾಡಿದೆ. ನರೇಂದ್ರ ಮೋದಿ ಸರ್ಕಾರದ ಸಾಧನೆ, ಕೆಲಸಗಳ ಬಗ್ಗೆ ಪುಸ್ತಕ ನೀಡಿ ವಿವರಣೆ ನೀಡಿದೆ. ಅಪ್ಪನಂತೆ ಮಗ ಎಂದಿದ್ದಾರೆ ಶೋಭಾ.

    ಶೋಭಾ ಅವರಿಗೆ ಪುನೀತ್ ಅವರಲ್ಲಿ ಇಷ್ಟವಾಗಿರೋದು ಅವರ ಸರಳತೆ. ವಿನಯಪೂರ್ವ ವರ್ತನೆ. ಇತ್ತೀಚೆಗೆ ಶಾಸಕ ಶ್ರೀರಾಮುಲು ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿ ಬಿಜೆಪಿ ಸಾಧನೆಯ ಪುಸ್ತಕ ಕೊಟ್ಟಿದ್ದರು. ಈಗ ಶೋಭಾ ಕರಂದ್ಲಾಜೆ, ಪುನೀತ್ ಅವರನ್ನು ಭೇಟಿ ಮಾಡಿದ್ದಾರೆ.

  • ಶೋಭಾ ಸಿಟ್ಟಾದರು..ಉಪ್ಪಿ ಅಂಥಾದ್ದೇನು ಹೇಳಿದರು..?

    shoba angry on upendra

    ರಿಯಲ್ ಸ್ಟಾರ್ ಉಪೇಂದ್ರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ಹೆಸರಿನ ಹೊಸ ರಾಜಕೀಯ ಘೋಷಿಸಿದ್ದಾರೆ. ಪ್ರಜಾಕೀಯ ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದ ಉಪೇಂದ್ರ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗಿಳಿಯಲಿದ್ದಾರೆ. ಪತ್ರಕರ್ತರಿಂದಲೇ ಪಕ್ಷದ ಅಧಿಕೃತ ಘೋಷಣೆ ಮಾಡಿಸಿರುವ ಉಪೇಂದ್ರ `ನಾವು ಈಗಾಗಲೇ ಗೆದ್ದಿದ್ದೇವೆ, ನಮ್ಮನ್ನು ಪ್ರೋತ್ಸಾಹಿಸಿ ಗೆಲ್ಲಬೇಕಾದವರು ನೀವು' ಎಂದಿದ್ದಾರೆ. ಅದು ಎಂದಿನ ಉಪ್ಪಿ ಸ್ಟೈಲ್.

    ಕಾರ್ಯಕ್ರಮಕ್ಕೆ ಉಪ್ಪಿ ಅಷ್ಟೇ ಅಲ್ಲ, ಅವರ ಕುಟುಂಬದವರು ಹಾಗೂ ಅಭಿಮಾನಿಗಳೂ ಖಾಕಿಧಾರಿಗಳಾಗಿ ಬಂದಿದ್ದರು. ಪ್ರಜಾಕೀಯ ಹೆಸರಿನ ವೆಬ್‍ಸೈಟ್‍ನ್ನೂ ಆರಂಭಿಸಿದರು. ಆದರೆ, ಇದೆಲ್ಲದರ ಮಧ್ಯೆ ಅವರು ಹೇಳಿದ್ದ ಒಂದು ಮಾತು ವಿವಾದ ಸೃಷ್ಟಿಸಿದೆ.

    ದೇಶದಲ್ಲಿ ನಗರಗಳಿಗಿಂತ ಮೊದಲು ಹಳ್ಳಿಗಳು ಸ್ಮಾರ್ಟ್ ಆಗಬೇಕು. ನರೇಂದ್ರ ಮೋದಿ ನಗರಗಳನ್ನು ಸ್ಮಾರ್ಟ್ ಮಾಡಲು ಹೊರಟಿದ್ದಾರೆ. ಆದರೆ, ದೇಶ ಅಭಿವೃದ್ಧಿಯಾಗಬೇಕೆಂದರೆ, ಹಳ್ಳಿಗಳು ಸ್ಮಾರ್ಟ್ ಆದರೆ ಮಾತ್ರ ಸಾಧ್ಯ ಎಂದಿದ್ದಾರೆ. ಇದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರನ್ನು ಕೆರಳಿಸಿದೆ.

    ಉಪೇಂದ್ರ ತಮಗೆ ಗೊತ್ತಿಲ್ಲದ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಅವರ ವಿರುದ್ಧ ಕೇಸ್ ಹಾಕುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ ಶೋಭಾ.