` pawan kalyan, - chitraloka.com | Kannada Movie News, Reviews | Image

pawan kalyan,

  • 'Humble Politician Nograj' Replaces 'Agnatavasi'

    danish's humble politician, pawan's agnatavasi

    Danish Sait's debut film as a hero, 'Humble Politician Nogaraj' which was released on Friday is getting good response from the audience and within two days of the film's release, the film has been getting more and more theaters.

    'Humble Politician Nogaraj' has been released in more than 100 theaters across Karnataka. Now the film has replaced Telugu film 'Agnyaathavaasi' in Urvashi, Rex, Srinivasa and other theaters, as the Pavan Kalyan starrer is not performing well and the audience is not showing interest in watching the film. So, the film has been replaced by 'Humble Politician Nograj'.

    The film stars Danish Sait, Roger Narayan, Shruthi Hariharan, Sumukhi, Raghu, Vijay Chendur and others in prominent roles. The film is being directed by Saad Khan, while Saadh Khan and Danish Seth have scripted the film. The film is jointly produced by Pushkar Mallikarjunaiah, Hemanth Rao and Rakshith Shetty.

  • ಕನ್ನಡಾಭಿಮಾನ ಮೆರೆದ ಪವನ್ ಕಲ್ಯಾಣ್

    pawan kalyan expresses his love for kannada

    ಪವನ್ ಕಲ್ಯಾಣ್, ತೆಲುಗು ಚಿತ್ರರಂಗದ ಪವರ್‍ಸ್ಟಾರ್. ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲಿಯೇ ಶುಭ ಕೋರುವ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ. 63ನೇ ಕನ್ನಡ ರಾಜ್ಯೋತ್ಸವದ ಈ ಸಂಭ್ರಮದಲ್ಲಿ ಕನ್ನಡ ಜನತೆಗೆ, ಕರ್ನಾಟಕದ ಮುಖ್ಯಮಂತ್ರಿಗಳಿಗೆ ಹಾರ್ದಿಕ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ಎಂದು ಟ್ವೀಟ್ ಮಾಡಿದ್ದಾರೆ ಪವನ್ ಕಲ್ಯಾಣ್.

    ಪವನ್ ಕಲ್ಯಾಣ್‍ಗೆ, ಕರ್ನಾಟಕದಲ್ಲಿ ಲಕ್ಷಾಂತರ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗೆ ಆಂಧ್ರ, ತೆಲಂಗಾಣದಲ್ಲಿ ಸಿಗುವಂಥದ್ದೇ ಓಪನಿಂಗ್ ಕರ್ನಾಟಕದಲ್ಲೂ ಸಿಗುತ್ತೆ. ಇದೆಲ್ಲದರ ಜೊತೆಗೆ ಎಲೆಕ್ಷನ್ ಹತ್ತಿರದಲ್ಲೇ ಇದೆ. ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಕನ್ನಡಿಗರನ್ನು ಸೆಳೆಯುವ ಪ್ರಯತ್ನವೂ ಇದರ ಹಿಂದಿದೆ ಎಂಬ ಲೆಕ್ಕಾಚಾರವೂ ಇದೆ. ಏನೇ ಇರಲಿ, ಪರಭಾಷೆಯ ಕಲಾವಿದರೊಬ್ಬರು ಕನ್ನಡ ರಾಜ್ಯೋತ್ಸವಕ್ಕೆ ಶುಭ ಕೋರುವುದನ್ನು ಸ್ವಾಗತಿಸಲೇಬೇಕು. ಅಂದಹಾಗೆ, ನವೆಂಬರ್ 1, ಕರ್ನಾಟಕಕ್ಕೆ ಮಾತ್ರ ಅಲ್ಲ, ಆಂಧ್ರಪ್ರದೇಶಕ್ಕೂ ರಾಜ್ಯೋತ್ಸವದ ದಿನ. ಆಂಧ್ರಪ್ರದೇಶ ಜನರಿಗೂ, ತೆಲುಗು ರಾಜ್ಯೋತ್ಸವದ ಶುಭಾಶಯಗಳು.

  • ಕಬ್ಜ ನೋಡಿ ಮೆಚ್ಚಿದ ಪವರ್ ಸ್ಟಾರ್

    ಕಬ್ಜ ನೋಡಿ ಮೆಚ್ಚಿದ ಪವರ್ ಸ್ಟಾರ್

    ಕಬ್ಜ. ಇದೀಗ ದೇಶದಲ್ಲೆಡೆ ಸೌಂಡ್ ಮಾಡುತ್ತಿದೆ. ಕನ್ನಡದ ಸ್ಟಾರ್‍ಗಳು ನಟಿಸಿರುವ ಸಿನಿಮಾ ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಇದರ ನಡುವೆಯೇ ಆರ್.ಚಂದ್ರುಗೆ ತೆಲುಗು ಚಿತ್ರರಂಗದಿಂದ ಗುಡ್ ನ್ಯೂಸ್ ಬಂದಿದೆ. ಕಬ್ಜ ಸಿನಿಮಾ ನೋಡಿ ಟಾಲಿವುಡ್ ಪವರ್ ಸ್ಟಾರ್ ಮೆಚ್ಚಿಕೊಂಡಿದ್ದಾರೆ. ಮಧ್ಯರಾತ್ರಿ ಆರ್. ಚಂದ್ರು ಪವನ್ ಕಲ್ಯಾಣ್ಗೆ ಸಿನಿಮಾ ತೋರಿಸಿದ್ದಾರೆ. ಮೊದಲಾರ್ಧ ಪಕ್ಕಾ ಇಂಡಿಯನ್ ಮತ್ತು ದ್ವಿತೀಯಾರ್ಧ ಹಾಲಿವುಡ್ ರೇಂಜ್ ಸಿನಿಮಾ ಎಂದು ಪವನ್ ಚಿತ್ರವನ್ನು ಮೆಚ್ಚಿ ಮಾತನಾಡಿದ್ದಾರಂತೆ. ಸಿನಿಮಾ ನೋಡಿ ಚಂದ್ರುನ ಹಾಡಿ ಹೊಗಳಿದ್ದಲ್ಲದೇ ಮೇಕಿಂಗ್, ಕಥೆ, ಚಿತ್ರಕಥೆ ಅದರಲ್ಲೂ ಕ್ಲೈಮಾಕ್ಸ್ ಬಗ್ಗೆ ಕೊಂಡಾಡಿದ್ದಾರೆ.

    ಇದಾದ ನಂತರ ಶುರುವಾಗಿರುವುದೇ ಆರ್.ಚಂದ್ರು ಜೊತೆ ಪವನ್ ಕಲ್ಯಾಣ್ ಸಿನಿಮಾ ಮಾಡ್ತಾರೆ ಅನ್ನೋ ಗುಸುಗುಸು. ತೆಲುಗಿನಲ್ಲಿ ಕನ್ನಡದವರು ಚಿತ್ರ ಮಾಡುವುದು ಹೊಸದೇನಲ್ಲ. ಒಂದು ಕಾಲದಲ್ಲಿ ನಡೆದು ನಿಂತೇ ಹೋಗಿದ್ದ ಸಂಪ್ರದಾಯ ಇದೀಗ ಮತ್ತೆ ಶುರುವಾಗಿದೆ. ಪ್ರಶಾಂತ್ ನೀಲ್ ಪ್ರಭಾಸ್ ಹಾಗೂ ಎನ್‍ಟಿಆರ್ ಜೊತೆ ಸಿನಿಮಾ ಮಾಡುತ್ತಿದ್ದರೆ, ಎ.ಹರ್ಷ ಗೋಪಿಚಂದ್ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಖುದ್ದು ಉಪೇಂದ್ರ ನಿರ್ದೇಶನದ ಚಿತ್ರಗಳಿಗೆ ತೆಲುಗಿನಲ್ಲಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಚಂದ್ರು ಅವರು ಕೂಡಾ ಕನ್ನಡದ ಚಿತ್ರಗಳನ್ನು ಈಗಾಗಲೇ ತೆಲುಗಿಗೆ ವರ್ಗಾಯಿಸಿ ಗೆಲುವನ್ನೂ ಕಂಡಿದ್ದಾರೆ. ಹೀಗಿರುವಾಗ ಕಬ್ಜ ಜೋಶ್`ನಲ್ಲಿ ತೇಲುತ್ತಿರುವ ಚಂದ್ರುಗೆ ಇನ್ನಷ್ಟು ಖುಷಿ ಕೊಡೋ ಸುದ್ದಿ ಇದೆ ಅನ್ನೋದು ಟಾಲಿವುಡ್ ಅಂಗಳದ ಸುದ್ದಿ.

    ಶಿವಣ್ಣ ಮತ್ತು ಸುದೀಪ್ ಇಬ್ಬರೂ ಇರುವ ಚಿತ್ರದಲ್ಲಿ ಉಪೇಂದ್ರ ಹೀರೋ. ಆದರೆ ಮೊದಲೇ ಹೇಳಿದ್ದಂತೆ ಚಿತ್ರದ ನಿಜವಾದ ಹೀರೋಗಳು ಟೆಕ್ನಿಷಿಯನ್ಸ್. ಹೀಗಾಗಿಯೇ ಚಿತ್ರದ ಮೇಕಿಂಗ್, ಕಥೆ, ಚಿತ್ರಕಥೆ, ಚಕಚಕನೆ ಕಥೆ ಸಾಗುವ ವೇಗ.. ಎಲ್ಲವೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

  • ಪೊಲಿಟಿಷಿಯನ್ ಪವರ್‍ಗೆ ತೆಲುಗು ಪವರ್ ಸ್ಟಾರ್ ಸುಸ್ತು..!

    agnyathavaasi loose shows

    ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್. ವಿಡಂಬನೆಯ ಕಾಮಿಡಿಯ ವಿಭಿನ್ನ ಕಥಾಹಂದರದ ಈ ಚಿತ್ರ, ಚಿತ್ರಮಂದಿರಗಳಿಗೆ ಸೆಳೆಯುತ್ತಿರುವುದು ಕ್ಲಾಸ್ ವರ್ಗದ ಪ್ರೇಕ್ಷಕರನ್ನು. ಮಾಸ್ ಅಂಶಗಳಿದ್ದರೂ, ಚಿತ್ರವನ್ನು ಹೆಚ್ಚು ಹೆಚ್ಚಾಗಿ ನೋಡಿ ಎಂಜಾಯ್ ಮಾಡುತ್ತಿರುವುದು ಕ್ಲಾಸ್ ವರ್ಗದ ಪ್ರೇಕ್ಷಕರು. ಚಿತ್ರದ ಅಬ್ಬರ ಹೇಗಿದೆಯೆಂದರೆ, ತೆಲುಗಿನ ಪವರ್ ಸ್ಟಾರ್ ಕೂಡಾ ಅಲ್ಲಾಡಿ ಹೋಗುವಂತಿದೆ.

    ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ರಿಲೀಸ್ ಆದ ದಿನವೇ ಪವರ್ ಸ್ಟಾರ್ ಪವನ್ ಕಲ್ಯಾಣ್ ಅಭಿನಯದ ಅಜ್ಞಾತವಾಸಿ ಕೂಡಾ ರಿಲೀಸ್ ಆಗಿತ್ತು. ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಮತ್ತು ರಕ್ಷಿತ್ ಶೆಟ್ಟಿ ರಿಸ್ಕ್ ತೆಗೆದುಕೊಂಡರೇನೋ ಎಂದು ಗಾಂಧಿನಗರ ಮಾತನಾಡಿಕೊಂಡಿತ್ತು. ಈಗ ಗೆದ್ದಿರುವುದು ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್.

    ಅಜ್ಞಾತವಾಸಿ ಚಿತ್ರದ ಓಪನಿಂಗ್ ಭರ್ಜರಿಯಾಗಿತ್ತಾದರೂ, ಚಿತ್ರದ ಬಗ್ಗೆ ಒಳ್ಳೆಯ ರಿಪೋರ್ಟ್ ಬಂದಿಲ್ಲ. ಹೀಗಾಗಿ ಬಿಡುಗಡೆಯಾದ 2ನೇ ದಿನದಿಂದಲೇ ಬ್ಯುಸಿನೆಸ್ ಡಲ್ ಹೊಡೆಯುತ್ತಿದೆ. ಅಜ್ಞಾತವಾಸಿಗಾಗಿ ಕನ್ನಡ ಚಿತ್ರಕ್ಕೆ ಥಿಯೇಟರು ಕೊಡದೆ ಕುಳಿತಿದ್ದವರು ಈಗ ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್‍ಗೆ, ಅಜ್ಞಾತವಾಸಿ ಥಿಯೇಟರು, ಶೋಗಳನ್ನು ಬಿಟ್ಟುಕೊಟ್ಟಿದ್ದಾರೆ. ಹೀಗಾಗಿ ರಿಲೀಸ್ ಆದ ಎರಡೇ ದಿನಗಳಲ್ಲಿ ಚಿತ್ರದ ಶೋ ಹಾಗೂ ಥಿಯೇಟರುಗಳ ಸಂಖ್ಯೆ ಹೆಚ್ಚಾಗಿದೆ.

    ಅಜ್ಞಾತವಾಸಿಯಲ್ಲಿ ಹೀರೋ ಪವರ್ ಸ್ಟಾರ್ ಪವನ್ ಕಲ್ಯಾಣ್. ಅಂದಹಾಗೆ ಹಂಬಲ್ ಪೊಲಿಟಿಷಿಯನ್ ನೊಗ್‍ರಾಜ್ ಚಿತ್ರದಲ್ಲೂ ಪವರ್ ಸ್ಟಾರ್ ಇದ್ದಾರೆ. ಅದು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್. ಏನೇ ಇರಲಿ.. ಕನ್ನಡ ಚಿತ್ರರಂಗ ಬಯಸುವುದು ಇಂಥ ಗೆಲುವುಗಳನ್ನೇ. ಪರಭಾಷೆಯ ಚಿತ್ರದ ಎದುರು ಅಬ್ಬರಿಸುವ ಕನ್ನಡದ ಗೆಲುವನ್ನು.

    Related Articles :-

    'Humble Politician Nograj' Replaces 'Agnatavasi'

  • ರಾಜರಥ ಅಸಲೀನಾ..ನಕಲೀನಾ..?

    which is original pspk? rajaratha

    ರಾಜರಥ... ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಚಿತ್ರ. ಹಳೆಯ ಟೀಂ ಜೊತೆಯಾಗಿರುವ ಕಾರಣದಿಂದ, ಸಿನಿಮಾ ನಿರೀಕ್ಷೆ ಹುಟ್ಟಿಸಿದೆ. 

    ಆದರೆ, ಈಗ ಗೊಂದಲ ಸೃಷ್ಟಿಸಿರೋದು ಈ ಪೋಸ್ಟರ್. ರಾಜರಥ ಸಿನಿಮಾದಲ್ಲಿ ತಮಿಳಿನ ಆರ್ಯ ನಟಿಸುತ್ತಿರುವದು ಗೊತ್ತೇ ಇದೆ. ಆರ್ಯ, ಕೆಂಪು ಬಣ್ಣದ ಜುಬ್ಬಾ ಧರಿಸಿಕೊಂಡು ಕೊಡೆ ಹಿಡಿದು ನಿಂತಿರುವ ಪೋಸ್ಟರ್ ಬಿಡುಗಡೆಯಾಗಿದೆ.

    ವಿಶೇಷ ಅಂದ್ರೆ, ಪವನ್ ಕಲ್ಯಾಣ್ ನಟಿಸುತ್ತಿರುವ ತ್ರಿವಿಕ್ರಮ್ ನಿರ್ದೇಶನದ ಪವನ್ ಕಲ್ಯಾಣ್ ಅಭಿನಯದ ಚಿತ್ರದ ಪೋಸ್ಟರ್ ಕೂಡಾ ರಿಲೀಸ್ ಆಗಿದೆ. ಅದರಲ್ಲಿಯೂ ಅಷ್ಟೆ. ಪವನ್ ಕಲ್ಯಾಣ್ ಕೊಡೆ ಹಿಡಿದು ನಿಂತಿರುವ ಚಿತ್ರ. ಬಟ್ಟೆಯ ಕಲರ್ ಕೂಡಾ ಸೇಮ್ ಟು ಸೇಮ್.

    ರಾಜರಥದ ಪೋಸ್ಟರ್ ರಿಲೀಸ್ ಆಗಿದ್ದು ಅಕ್ಟೋಬರ್ 17ಕ್ಕೆ. ಪವನ್ ಕಲ್ಯಾಣ್ ಪೋಸ್ಟರ್ ಬಿಡುಗಡೆಯಾಗಿರೋದು ಅಕ್ಟೊಬರ್ 15ಕ್ಕೆ. ಇದು ಕಾಕತಾಳೀಯ ಇರಬಹುದೇನೋ.. ಆದರೆ, ಅಸಲಿ ಯಾವುದು.. ನಕಲಿ ಯಾವುದು ಅನ್ನೋ ಚರ್ಚೆಯನ್ನಂತೂ ಹುಟ್ಟುಹಾಕಿದೆ.