` sudharshan, - chitraloka.com | Kannada Movie News, Reviews | Image

sudharshan,

  • Actor Sudarshan Admitted To Hospital

    sudharshan admitted to hospital

    Veteran actor Sudarshan has been admitted to hospital. On Tuesday midnight Sudarshan has slipped at his house bathroom and has a fracture. 

    Later in the day Sudarshan was taken to an hospital nearby hospital and they Refered to multi speciality Hoapital. Later sudarshan was shifted to Apollo hospital and there they diagnosed as Right side hip hair crack. Tomorrow operation will be held. 

  • ಅಪಾರ ಕೀರ್ತಿ ಮೆರೆದ ಮನೆತನದ ಕುಡಿ ಸುದರ್ಶನ್

    actor sudharshan

    ಆರ್.ಎನ್. ಸುದರ್ಶನ್ ಎಂದರೆ ಪದೇ ಪದೇ ನೆನಪಾಗುವುದು ಅದೇ ಹಾಡು..ಅಪಾರ ಕೀರ್ತಿ ಗಳಿಸಿ ಮೆರೆವ ಭವ್ನ ನಾಡಿದು.. ಕರ್ನಾಟಕವಿದುವೆ ನೃತ್ಯಶಿಲ್ಪ ಕಲೆಯ ಬೀಡಿದು.. ಕುದುರೆಯ ಮೇಲೆ ಹಾಡುತ್ತಾ ಬಂದ ಆ ಹುಡುಗನನ್ನು ಚಿತ್ರರಸಿಕರು ಮೆಚ್ಚುಗೆಯಿಂದ ಅಪ್ಪಿಕೊಂಡಿದ್ದರು. ಬಹುಶಃ ಕನ್ನಡದ ಮೊದಲ ಆರಡಿ ನಟ ಎಂದರೆ ಆರ್.ಎನ್. ಸುದರ್ಶನ್ ಇರಬೇಕು. ಅಜಾನುಬಾಹು. 

    ಅವರ ಕುಟುಂಬವೂ ಹಾಗೆಯೇ..ಅದು ಕನ್ನಡದ ಅಪಾರ ಕೀರ್ತಿ ಗಳಿಸಿ ಮೆರೆದ ಕುಟುಂಬ. ರಂಗಭೂಮಿಯ ಭೀಷ್ಮ ಎಂದೇ ಖ್ಯಾತರಾದ ಆರ್.ಎನ್. ನಾಗೇಂದ್ರ ರಾವ್, ಸುದರ್ಶನ್ ಅವರ ತಂದೆ. ಖ್ಯಾತ ಛಾಯಾಗ್ರಾಹಕ ಕೃಷ್ಣಪ್ರಸಾದ್ ಮತ್ತು ಕನ್ನಡದ ಸುಮಧುರ ಗೀತೆಗಳ ಮೋಡಿಗಾರ ಆರ್.ಎನ್.ಜಯಗೋಪಾಲ್ ಅವರ ಸಹೋದರ. ಅವರ ಪತ್ನಿ ಶೈಲಶ್ರೀ ಕೂಡಾ ನಟಿಯಾಗಿದ್ದವರು. 

    ವಿಶೇಷವೆಂದರೆ, ಅವರಿಗೆ ಶೂಟಿಂಗ್​ ಸೆಟ್​​ಗಳಲ್ಲಿ ಬಳಸುತ್ತಿದ್ದ ಪೇಂಯ್ಟ್​ನ ವಾಸನೆ ಸೋಕಿದರೇ ಆಗುತ್ತಿರಲಿಲ್ಲ. ಸೆಟ್​ಗಳಲ್ಲಿ ಬಳಸುತ್ತಿದ್ದ ಪರಿಕರಗಳ ಶಬ್ಧವೆಂದರೆ ಕಿರಿಕಿರಿ. ಆದರೆ, ಅದೇ ಚಿತ್ರರಂಗದಲ್ಲಿ ಅವರು ಇನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ನಿರ್ದೇಶಿಸಿದರು. ಸ್ವತಃ ನಿರ್ಮಾಪಕರಾದರು. ಆದರೆ, ಕೊನೆ ಕೊನೆಯ ದಿನಗಳಲ್ಲಿ ಚಿತ್ರರಂಗ ಅವರನ್ನು ಮರೆತೇ ಹೋಗಿತ್ತು. 

    ಅದ್ಭುತ ಕಂಠಸಿರಿಯಿದ್ದ ಸುದರ್ಶನ್​ ಗಾಯಕರೂ ಹೌದು. ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ..ಹಾಡು ಕೇಳಿದರೆ ಶ್ರೀನಾಥ್ ನೆನಪಾಗುತ್ತರಲ್ಲವೇ. ಆ ಹಾಡಿನ ಹಿಂದಿನ ಧ್ವನಿ ಸುದರ್ಶನ್. ನಗುವ ಹೂವು ಚಿತ್ರದ ಇರಬೇಕು...ಇರಬೇಕು..ಅರಿಯದ ಮಗುವಿನ ಹಾಗೆ ಎನ್ನುವ ಹಾಡು ಕೂಡಾ ಜನಪ್ರಿಯವಾಗಿತ್ತು.

    ಏರ್​ಹೋಸ್ಟೆಸ್ ಆಗಿದ್ದ ಶೈಲಶ್ರೀ, ನಂತರ ಸುದರ್ಶನ್ ಚಿತ್ರಗಳಲ್ಲಿ ನಾಯಕಿಯಾದರು. ಚಿತ್ರಗಳ ಮೂಲಕ ಪರಿಚಯ ಬೆಳೆದು, ಪ್ರೀತಿಯಾಗಿ ಮದುವೆಯೂ ಆದರು. ಮಕ್ಕಳಿರಲಿಲ್ಲ. ಪ್ರೀತಿಯೇ ಬದುಕಾಗಿತ್ತು. ಅವರದ್ದು ಸುದೀರ್ಘ ಸುಖೀ ದಾಂಪತ್ಯ. 21ನೇ ವಯಸ್ಸಿನಿಂದ 78ನೇ ವಯಸ್ಸಿನವರೆಗೆ ಬಣ್ಣದ ಬದುಕಿನಲ್ಲಿಯೇ ಇದ್ದ ಸುದರ್ಶನ್​, ಹಳೆಯ ಕಲಾವಿದರು, ತಂತ್ರಜ್ಞರನ್ನು ಮರೆಯಬೇಡಿ ಎಂದು ಚಿತ್ರರಂಗವನ್ನು ಕೇಳಿಕೊಂಡಿದ್ದರು. ಕನ್ನಡ ಚಿತ್ರರಂಗದ ಇಂದಿನ ಈ ಸ್ಥಿತಿಗೆ ಕಾರಣವಾಗಿರುವ ಕುಟುಂಬದ ಕಲಾವಿದರೊಬ್ಬರು ಹಾಗೆ ಅಂಗಲಾಚುವ ಪರಿಸ್ಥಿತಿ ಬರಬಾರದಿತ್ತು. 

    ಅವರ ಸಂಕಷ್ಟದ ದಿನಗಳಲ್ಲಿ ನೆರವಿನ ಹಸ್ತ ಚಾಚಿದ್ದವರು ನಟ ಜಗ್ಗೇಶ್. ನಂತರ ಅವರ ನಟನೆಯ ಮಠ ಚಿತ್ರದ ಮೂಲಕ ಮತ್ತೊಮ್ಮೆ ಚಿತ್ರರಂಗ ಪ್ರವೇಶಿಸಿದ್ದ ಸುದರ್ಶನ್, ಸ್ವಾಮೀಜಿ ಪಾತ್ರದಲ್ಲಲಿ ಮನಸೂರೆಗೊಂಡಿದ್ದರು. ಪೋಷಕ ಪಾತ್ರಗಳಿಗೆ ಹೇಳಿ ಮಾಡಿಸಿದ ಹಾಗಿದ್ದ ಸುದರ್ಶನ್ ಅವರ ವ್ಯಕ್ತಿತ್ವದಲ್ಲೊಂದು ಘನತೆಯಿತ್ತು. 

    ತಮಿಳಿನ ಪಾಯಂ ಪುಲಿ, ಸಂಧಿಪು, ಪುನ್ನಗೈ ಮನ್ನನ್, ವೇಲೈಕಾರನ್, ನಾಯಗನ್, ಪಾರಿಜಾತಮ್ ಸುದರ್ಶನ್ ನಟಿಸಿದ್ದ ತಮಿಳು ಚಿತ್ರಗಳ ಪೈಕಿ ಕೆಲವು. ಮಲಯಾಳಂನಲ್ಲಿ ಜಾಕ್​ಪಾಟ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಸುದರ್ಶನ್,  ತೆಲುಗಿನ ಮಾಯಾ ಮಚ್ಚಿಂದ್ರ, ಮೈ ಡಿಯರ್ ಭೂತಮ್, ತಮಿಳಿನ ಮರಗಥಾ ವೀಣೈ, ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿಗಳಲ್ಲಿ ನಟಿಸಿದ್ದರು.

    ವಿಜಯನಗರದ ವೀರಪುತ್ರ ಚಿತ್ರದ ವೀರ ಸೈನಿಕ, ಪ್ರಚಂಡ ಕುಳ್ಳ ಚಿತ್ರದ ಕಿಂಕಿಣಿ ಶರ್ಮ, ಮಠ ಚಿತ್ರದ ಸ್ವಾಮೀಜಿ, ಸೂಪರ್ ಚಿತ್ರದಲ್ಲಿ ಉಪೇಂದ್ರ ಅವರ ತಂದೆ..ಸುದರ್ಶನ್ ಅವರ ಅಭಿನಯ ಪ್ರತಿಭೆಗೆ ಈ ಕೆಲವು ಪಾತ್ರಗಳು ಸಾಕು. ಆದರೆ, ಕಲಾವಿದನ ಆ ಬದುಕಿಗೆ ಕಲಾ ಜಗತ್ತು ಸೂಕ್ತ ಬೆಲೆ ಕೊಡಲಿಲ್ಲ ಎಂಬುದು ವಾಸ್ತವ.

  • ಸಂಗೀತಾ ಭಟ್ ಬೆಂಬಲಕ್ಕೆ ಪತಿ ಸುದರ್ಶನ್

    sangeetha bhat's stands by her

    ಸಂಗೀತಾ ಭಟ್ ಅವರ ಮೀಟೂ ಆರೋಪ ಕುರಿತಂತೆ ಮಾತನಾಡಿದ್ದ ನಿರ್ದೇಶಕ ಗುರು ಪ್ರಸಾದ್ ವಿರುದ್ಧ, ಸಂಗೀತಾ ಭಟ್ ಅವರ ಪತಿ ಸುದರ್ಶನ್ ಸಿಟ್ಟಾಗಿದ್ದಾರೆ. ನನ್ನ ಪತ್ನಿ ಸಂಗೀತಾ ಭಟ್, ಮೀಟೂ ಆರೋಪ ಮಾಡಿದ್ದು, ನೋವು ಹೇಳಿಕೊಳ್ಳುವುದಕ್ಕೇ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ. ಚಿತ್ರರಂಗದಲ್ಲಿ ಯಾರದ್ದೋ ಹೆಸರು ಹೇಳಿ ಲಾಭ ಮಾಡಿಕೊಳ್ಳುವ ಉದ್ದೇಶವೂ ನಮಗಿಲ್ಲ. ಅವರು ತಮಗಾದ ಕೆಟ್ಟ ಅನುಭವ ಹೇಳಿಕೊಂಡಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಳ್ಳೋದ್ಯಾಕೆ ಎಂದಿದ್ದಾರೆ ಸುದರ್ಶನ್.

    ಸಂಗೀತಾ ಭಟ್ ಅವರು ಮೀಟೂ ಆರೋಪ ಮಾಡಿದ ಮೇಲೆ ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದ ಇಬ್ಬರು ಮೇಯ್ಲ್ ಮೂಲಕ ಕ್ಷಮೆ ಕೇಳಿದ್ದಾರಂತೆ. ನಮ್ಮ ಉದ್ದೇಶ ಇನ್ನೊಂದು ಕುಟುಂಬದ ನೆಮ್ಮದಿ ಹಾಳು ಮಾಡುವುದಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಇಂತಹ ಕಿರುಕುಳ ನಿಲ್ಲಬೇಕು. ಅಷ್ಟೆ. ಹೀಗಾಗಿಯೇ ಸಂಗೀತಾ ಯಾರ ಹೆಸರನ್ನೂ ಹೇಳಿಲ್ಲ. ನಮಗೆ ಗುರುಪ್ರಸಾದ್ ಸರ್ಟಿಫಿಕೇಟ್ ಅಗತ್ಯವೂ ಇಲ್ಲ ಎಂದಿದ್ದಾರೆ ಸುದರ್ಶನ್. 

  • ಸುದರ್ಶನ್ ಸಾವಿನ ಮಧ್ಯೆ ಹಿಡಿತ ತಪ್ಪಿದರಾ ಶಿವರಾಮಣ್ಣ..?

    why did shivaram speak like that

    ಮಾತು ಆಡಿದರೆ ಹೋಯ್ತು..ಮುತ್ತು ಒಡೆದರೆ ಹೋಯ್ತು ಅನ್ನೋದು ಗಾದೆ. ಹೀಗಾಗಿಯೇ ಒಂದು ಉನ್ನತ ಸ್ಥಾನಕ್ಕೆ ಏರಿದವರು ಒಂದೊಂದು ಮಾತು ಆಡುವಾಗಲೂ ಹತ್ತು ಸಲ ಯೋಚಿಸ್ತಾರೆ. ಆದರೆ, ಸುದರ್ಶನ್ ಸಾವಿನ ವೇಳೆ  ಕನ್ನಡದ ಹಿರಿಯ ನಟ ಶಿವರಾಮ್ ಆಡಿರುವ ಕೆಲವು ಮಾತುಗಳು ಅವರು ಆಡಿರುವ ಕೆಲವು ಮಾತುಗಳು ಅವರು ತಮ್ಮ ಮಾತಿನ ಹಿಡಿತ ತಪ್ಪಿದರಾ ಎಂಬ ಅನುಮಾನ ಮೂಡಿಸದೇ ಇರದು.

    ಹಿರಿಯ ಕಲಾವಿದ ಸುದರ್ಶನ್, ಆಸ್ಪತ್ರೆಯಲ್ಲಿದ್ದಾಗ ಅವರ ಕೊನೆ ಗಳಿಗೆಯಲ್ಲಿ ಹತ್ತಿರವಿದ್ದು ನೋಡಿಕೊಂಡ ಹಲವು ಜನರಲ್ಲಿ ಶಿವರಾಮ್ ಕೂಡಾ ಒಬ್ಬರು. ಶುಕ್ರವಾರ ಬೆಳಗ್ಗೆ ಸುದರ್ಶನ್ ನಿಧನರಾದಾಗ ಸುವರ್ಣ ನ್ಯೂಸ್​ನಲ್ಲಿ ಶಿವರಾಮ್ ಮಾತನಾಡಿರುವುದು ಅವರು ಮಾತಿನ ಮೇಲೆ ಹಿಡಿತ ತಪ್ಪಿದರಾ ಎಂಬ ಅನುಮಾನ ಮೂಡಿಸುವ ಹಾಗಿದೆ.

    ಸುದರ್ಶನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಂಸ ಅಥವಾ ರವೀಂದ್ರ ಕಲಾಕ್ಷೇತ್ರದಲ್ಲಿ ಅವಕಾಶ ಮಾಡಿಕೊಡುವಂತೆ ನಾನು ಸಚಿವೆ ಉಮಾಶ್ರೀ ಅವರಲ್ಲಿ ಕೇಳಿದೆ.ಅವರು ಆಗಲ್ಲ ಎಂದರು ಎನ್ನುವುದು ಶಿವರಾಮ್ ಮಾತು.

    driver_hanumanthu_sudharsha.jpgಆದರೆ, ಉಮಾಶ್ರೀ ಅವರ ಜೊತೆ ಆ ವೇಳೆಯಲ್ಲಿ ನಿರಂತರ ಸಂಪರ್ಕದಲ್ಲಿದ್ದವರು ನಟಿ

    ಹೇಮಾಚೌಧರಿ. ಹೀಗಿದ್ದರೂ ಶಿವರಾಮ್ ಹೀಗೆ ಹೇಳಿದ್ದೇಕೆ..? ಅಷ್ಟೇ ಅಲ್ಲ, ಉಮಾಶ್ರೀ ಮತ್ತು ಜಯಮಾಲಾ ಇಬ್ಬರೂ ಕೂಡಾ ಶ್ರಮವಹಿಸಿ ಸರ್ಕಾರದಿಂದ ಸುದರ್ಶನ್ ಅವರಿಗೆ ಸಿಗಬಹುದಾದ ಪ್ರತಿ ನೆರವನ್ನೂ ಒದಗಿಸಿಕೊಟ್ಟಿದ್ದಾರೆ. ಇದು ಶಿವರಾಮ್ ಅವರಿಗೆ ಗೊತ್ತಿರಲಿಲ್ಲವೇ..? ಅಥವಾ ಗೊತ್ತಿದ್ದೂ ಹಾಗೆ ಹೇಳಿದರೆ..? ಇದು ಅರ್ಥವೇ ಆಗುತ್ತಿಲ್ಲ.

    ಇನ್ನು ಫಿಲಂಚೇಂಬರ್​ನಲ್ಲಿ ಪಾರ್ಥಿವ ಶರೀರ ಇಡಲು ಅವಕಾಶವಿಲ್ಲ ಎಂದದ್ದೂ ಕೂಡಾ ಅರ್ಥಹೀನ ವಿಚಾರವೇ. ಏಕೆಂದರೆ, ಮೊದಲು ಫಿಲಂಚೇಂಬರ್​ನಲ್ಲಿ ಅದಕ್ಕೆಲ್ಲ ಅವಕಾಶವಿತ್ತು. ಜಾಗವೂ ಇತ್ತು. ಆದರೆ, ರಸ್ತೆ ವಿಸ್ತರಣೆ ವೇಳೆ ಸರ್ಕಾರದ ಮನವಿಗೆ ಸ್ಪಂದಿಸಿದ ಫಿಲಂ ಚೇಂಬರ್, ತನ್ನ ಜಾಗವನ್ನು ರಸ್ತೆಗೆ ಬಿಟ್ಟು ಕೊಟ್ಟ ಮೇಲೆ ಫಿಲಂಚೇಂಬರ್​ನಲ್ಲಿ ಜಾಗವಿಲ್ಲ ಎನ್ನುವುದು ಶಿವರಾಮ್​ಗೆ ಅವರಿಗೆ ಚೆನ್ನಾಗಿ ಗೊತ್ತಿದೆ. ಹೀಗಿದ್ದರೂ ಅವರೇಕೆ ಹಾಗೆ ಹೇಳಿದರೋ..?

    ಇನ್ನು ಚಿತ್ರರಂಗದವರು ಯಾರೊಬ್ಬರೂ ಬರಲಿಲ್ಲ.ಕೋಟಿ ಕೋಟಿ ಪಡೆಯುತ್ತಿರುವವರು ಎಲ್ಲಿ ಹೋದರು..? ಚಿತ್ರರಂಗದಲ್ಲಿ ಇವರು ತಿನ್ನುವುದರನ್ನು ನಾವು ಬೆಳೆಸಿಬಿಟ್ಟ ಬೆಳೆಯ ಎಂಜಲನ್ನು ಎಂದುಬಿಟ್ಟಿದ್ದಾರೆ ಶಿವರಾಮ್. ಕನ್ನಡ ಚಿತ್ರರಂಗವನ್ನು ಬೆಳೆಸಿದವರಲ್ಲಿ ಶಿವರಾಮ್ ಕೂಡಾ ಒಬ್ಬರು. ಅದರಲ್ಲಿ ಎರಡು ಮಾತಿಲ್ಲ. ಆದರೆ, ಈಗ ಇರುವವರೆಲ್ಲ ನಾವು ಬಿಟ್ಟ ಎಂಜಲು ತಿನ್ನುತ್ತಿದ್ದಾರೆ ಎನ್ನುವ ಮಾತಿದೆಯಲ್ಲ...ಇದರ ಅರ್ಥವೇನು..? ಚಿತ್ರರಂಗವನ್ನು ಬೆಳೆಸಿದ್ದು ಇವರೊಬ್ಬರೇನಾ..? ಇಷ್ಟಕ್ಕೂ ಸುದರ್ಶನ್ ಅವರಿಗೆ ನೆರವು ನೀಡಿರುವ ಹಲವು ಕಲಾವಿದರು ಅದನ್ನು ಬಹಿರಂಗವಾಗಿ ಹೇಳಿಕೊಳ್ಳುತ್ತಿಲ್ಲ. ಅದು ಶಿವರಾಮ್ ಅವರಿಗೂ ಗೊತ್ತು. 

    ಹೀಗಿದ್ದರೂ, ಈಗಿನವರೆಲ್ಲ ನಾವು ಬಿಟ್ಟ ಎಂಜಲು ತಿನ್ನುತ್ತಿದ್ದಾರೆ ಎಂದು ಹೇಳಿರುವ ಅವರ ಮಾತು, ಅವರ ವ್ಯಕ್ತಿತ್ವಕ್ಕೆ, ಘನತೆಗೆ, ಹಿರಿತನಕ್ಕೆ ಸೂಕ್ತವಾದುದಲ್ಲ. ಏನೇ ಇದ್ದರೂ ಅವರನ್ನು ಚಿತ್ರರಂಗದ ಯುವ ಕಲಾವಿದರು, ತಂತ್ರಜ್ಞರು ಅವರನ್ನು ಪ್ರೀತಿಯಿಂದ, ಗೌರವದಿಂದ, ಅಭಿಮಾನದಿಂದ ಶಿವರಾಮಣ್ಣ ಎಂದೇ ಕರೆಯುತ್ತಾರೆ. ಶಿವರಾಮಣ್ಣನವರಿಗೆ ಇದೂ ಅರ್ಥವಾಗಬೇಕು.

  • ಸುದರ್ಶನ್​ಗೆ ನೆರವಾದ ಉಮಾಶ್ರೀ, ಜಯಮಾಲಾ

    umashree and jaimala helps sudharshan's family

    ಚಿತ್ರರಂಗದ ಹಿರಿಯ ಕಲಾವಿದ ಸುದರ್ಶನ್ ಅವರ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಆದರೆ ಕಂಬನಿ ಮಿಡಿಯುವುದಷ್ಟೇ ಅಲ್ಲ, ಕಣ್ಣೀರು ಒರೆಸುವ ಕೈಗಳೂ ಅದೇ ಚಿತ್ರರಂಗದಲ್ಲಿವೆ ಎಂಬುದನ್ನು ಇಂದು ಸಾಬೀತು ಮಾಡಿದ್ದು ಸಚಿವೆ ಉಮಾಶ್ರೀ ಮತ್ತು ಶಾಸಕಿ ಜಯಮಾಲಾ.

    ಸುದರ್ಶನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಸಬೇಕೇ ಬೇಡವೇ ಎಂಬ ಕಾನೂನು ಗೊಂದಲಗಳಲ್ಲಿ ಅಧಿಕಾರಿಗಳಿದ್ದಾಗ, ಅಲ್ಲಿಯೇ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಸಿಕೊಟ್ಟವರು ಸಚಿವೆ ಉಮಾಶ್ರೀ. ತಾವು ಸಚಿವರಾಗುವ ಮುನ್ನ, ರಾಜಕಾರಣಿಯಾಗುವ ಮುನ್ನ ಕಲಾವಿದೆ ಎಂಬುದನ್ನು ಸಾಬೀತು ಮಾಡಿದರು. 

    ಇನ್ನು ಆಸ್ಪತ್ರೆಯ ಬಿಲ್​ನ್ನು ಕಟ್ಟಲು ಪರದಾಡುತ್ತಿದ್ದ ಸುದರ್ಶನ್ ಕುಟುಂಬದ ನೆರವಿಗೆ ಧಾವಿಸಿದ್ದು ನಟಿ ಜಯಮಾಲಾ. ಅವರು ಶಾಸಕಿಯೂ ಅಲ್ಲದೆ ಇಬ್ಬರೂ ಕಲಾವಿದರು ಕುಟುಂಬಕ್ಕೆ ಸರ್ಕಾರದಿಂದ ಇನ್ನಷ್ಟು ನೆರವು ಒದಗಿಸುವ ಭರವಸೆಯನ್ನೂ ಕೊಟ್ಟಿದ್ದಾರೆ. ಸುದರ್ಶನ್ ಅವರ ಅಂತಿಮ ಕ್ಷಣದಲ್ಲಿ ಅವರ ಜೊತೆಗಿದ್ದ ಹಿರಿಯ ನಟಿ ಹೇಮಾಚೌಧರಿ ಈ ಎಲ್ಲ ವಿಷಯವನ್ನೂ ಚಿತ್ರಲೋಕಕ್ಕೆ ತಿಳಿಸಿದ್ದಾರೆ.

    ಕಲಾವಿದರ ಕಣ್ಣೊರೆಸುವ ಮೂಲಕ ನೆರವಿಗೆ ಬಂದ ಉಮಾಶ್ರೀ ಮತ್ತು ಜಯಮಾಲಾ ಅವರಿಗೆ ಕಲಾವಿದರು ಹಾಗೂ ಅಭಿಮಾನಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.

    Related Articles :-

    ಅಪಾರ ಕೀರ್ತಿ ಮೆರೆದ ಮನೆತನದ ಕುಡಿ ಸುದರ್ಶನ್

    RN Sudarshan Expired