` pailwan, - chitraloka.com | Kannada Movie News, Reviews | Image

pailwan,

  • ನೇಪಾಳ, ಭೂತಾನ್‍ಗೂ ಪೈಲ್ವಾನ್..!

    pailwan to release in nepal and bhutan

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಏಕಕಾಲಕ್ಕೆ ಇಂಡಿಯಾ ಹಾಗೂ ಹೊರದೇಶಗಳಲ್ಲಿ ರಿಲೀಸ್ ಆಗುತ್ತಿದೆ. ಈ ಬಾರಿಯ ವಿಶೇಷವೆಂದರೆ, ಪಕ್ಕದ ನೇಪಾಳ ಹಾಗೂ ಭೂತಾನ್‍ನಲ್ಲೂ ಸಿನಿಮಾ ರಿಲೀಸ್ ಆಗುತ್ತಿರುವುದು. ಇಡೀ ಉತ್ತರ ಭಾರತದ ಕನ್ನಡೇತರ ಪೈಲ್ವಾನ್ ಡಿಸ್ಟ್ರಿಬ್ಯೂಷನ್ ಹೊಣೆಯನ್ನು ಜೀ ಸ್ಟುಡಿಯೋಸ್ ಹೊತ್ತುಕೊಂಡಿದ್ದರೆ, ಕನ್ನಡದ ಪೈಲ್ವಾನ್ ವಿತರಣೆ ಹೊಣೆಯನ್ನು ಕೆಆರ್‍ಜಿ ಸ್ಟುಡಿಯೋಸ್ ನಿರ್ವಹಣೆ ಮಾಡುತ್ತಿದೆ. ಜೀ ಸ್ಟುಡಿಯೋಸ್‍ನವರೇ ಚಿತ್ರವನ್ನು ನೇಪಾಳ ಹಾಗೂ ಭೂತಾನ್‍ಗೆ ಒಯ್ಯುತ್ತಿದ್ದಾರೆ.

    `ನನ್ನ ಕುಟುಂಬ ಈಗ ಇನ್ನಷ್ಟು ದೊಡ್ಡದಾಗುತ್ತಿದೆ. ನಮ್ಮ ಸಿನಿಮಾದಲ್ಲಿ ಯೂನಿವರ್ಸಲ್ ಸಬ್ಜೆಕ್ಟ್ ಇದೆ. ಜವಾಬ್ದಾರಿಯೂ ಹೆಚ್ಚಿದೆ' ಎಂದು ಖುಷಿಯಾಗಿದ್ದಾರೆ ನಿರ್ದೇಶಕ ಕೃಷ್ಣ.

    ಪೈಲ್ವಾನ್ ಬಹುತೇಕ ಆಗಸ್ಟ್ 29ರಂದು ರಿಲೀಸ್ ಆಗುವ ಪ್ಲಾನ್ ಮಾಡಿಕೊಂಡಿದ್ದು, ಅಮೆರಿಕ, ಆಸ್ಟ್ರೇಲಿಯಾ, ಬ್ರಿಟನ್, ಸೌದಿ ರಾಷ್ಟ್ರಗಳು, ಆಫ್ರಿಕಾ.. ಹೀಗೆ ವಿದೇಶಗಳಲ್ಲಿಯೂ ತೆರೆ ಕಾಣಲಿದೆ.

  • ಪವರ್ ಡ್ಯಾನ್ಸ್‍ಗೆ ಪೈಲ್ವಾನ್ ಕಿಚ್ಚ ವೇಯ್ಟಿಂಗ್..!

    pailwan awaiting for natasarvabhouma's power dance

    ಕಿಚ್ಚ ಸುದೀಪ್‍ರ ಡೆಡಿಕೇಷನ್, ಕುಸ್ತಿಯ ಪಟ್ಟುಗಳಿಗೆ ದೇಶದ ಚಿತ್ರೋದ್ಯಮದ ಗಣ್ಯರೆಲ್ಲ ವ್ಹಾವ್ ಎನ್ನುತ್ತಿದ್ದಾರೆ. ಸುದೀಪ್‍ಗೆ ಸಲಾಂ ಎನ್ನುತ್ತಿದ್ದಾರೆ. ಹಾಗೆಯೇ.. ಕನ್ನಡದ ಸ್ಟಾರ್ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಕೂಡಾ ಸುದೀಪ್‍ರ ಪೈಲ್ವಾನ್ ಟೀಸರ್‍ನ್ನು ಹೊಗಳಿದ್ದರು. ಇಂತಹ ಸಾಧನೆಗಳ ಮೂಲಕವೇ ನೀವು ನಮಗೆಲ್ಲ ಸ್ಫೂರ್ತಿ ಎಂದು ಹೇಳಿ ಶುಭ ಹಾರೈಸಿದ್ದರು.

    ಸಂತೋಷ್ ಶುಭ ಹಾರೈಕೆಗೆ ಪ್ರತಿಕ್ರಿಯೆ ನೀಡಿರುವ ಕಿಚ್ಚ ಸುದೀಪ್,  ನಿಮ್ಮ ಮುಂದಿನ ಚಿತ್ರ ಯುವರತ್ನಕ್ಕಾಗಿ ಎದುರು ನೋಡುತ್ತಿರುವೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಸ್ಪೀಡ್ ಡ್ಯಾನ್ಸ್‍ಗೆ ಕಾಯುತ್ತಿರುವೆ ಎಂದಿದ್ದಾರೆ.

  • ಪೈರಸಿಯಿಂದ ಪೈಲ್ವಾನ್ ಕಳೆದುಕೊಂಡಿದ್ದು 5 ಕೋಟಿಗೂ ಹೆಚ್ಚು..!

    pailwan looses more than 5 crores

    ಪೈಲ್ವಾನ್ ಚಿತ್ರ 100 ಕೋಟಿ ಕ್ಲಬ್ ಸೇರಿತಾ..? ಅಷ್ಟೊಂದು ಭರ್ಜರಿ ಪ್ರದರ್ಶನ ಕಾಣುತ್ತಿರೋ ಚಿತ್ರ ಈವರೆಗೆ ಗಳಿಸಿರೋ ಹಣ ಎಷ್ಟು..? ಹೀಗೆ ಪ್ರೇಕ್ಷಕರದ್ದು ಹತ್ತಾರು ಪ್ರಶ್ನೆ. ಪೈಲ್ವಾನ್ ನಿರ್ಮಾಪಕರು ಸೇಫ್ ಹಂತ ದಾಟಿ, ಲಾಭ ನೋಡುತ್ತಿದ್ದಾರೆ. ಒಂದು ಮೂಲದ ಪ್ರಕಾರ ಚಿತ್ರದ ಗಳಿಕೆ 85 ಕೋಟಿ ದಾಟಿದೆ. ಆದರೆ ಅಧಿಕೃತವಾಗಿ ಹೇಳಿಕೊಳ್ಳುತ್ತಿಲ್ಲ. ಇದು ಒಂದು ವಿಷಯವಾದರೆ, ಪೈರಸಿಯಿಂದಾಗಿ ಚಿತ್ರತಂಡ ಕಳೆದುಕೊಂಡಿರೋದು 5 ಕೋಟಿಗೂ ಹೆಚ್ಚು ಎನ್ನುವ ಸುದ್ದಿ ಬಹಿರಂಗವಾಗಿದೆ.

    ಒಬ್ಬ ಆರೋಪಿಯನ್ನು ಅರೆಸ್ಟ್ ಮಾಡಲಾಗಿದ್ದು, ಇನ್ನೂ ಹಲವು ಕ್ರಿಮಿನಲ್‍ಗಳ ಹುಡುಕಾಟ ನಡೆಯುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಏನು ಮಾಡಿದರೂ ಗೊತ್ತಾಗಲ್ಲ ಎಂದುಕೊಂಡಿದ್ದವರನ್ನು ಸುಮ್ಮನೆ ಬಿಡಲ್ಲ ಎಂದು ಸುದೀಪ್ ಗುಡುಗಿರುವುದಷ್ಟೇ ಅಲ್ಲ, ಸೀರಿಯಸ್ಸಾಗಿ ಹೆಜ್ಜೆಯಿಟ್ಟಿದ್ದಾರೆ.

    ಪ್ರತಿದಿನವೂ 100ಕ್ಕೂ ಹೆಚ್ಚು ಪೈರಟ್ ಸಿನಿಮಾ ಲಿಂಕ್ ಡಿಲೀಟ್ ಮಾಡುತ್ತಿರುವ ಚಿತ್ರತಂಡ, ಪೈರಸಿಯಿಂದಾಗಿಯೇ ಕಳೆದುಕೊಂಡಿರುವ ಮೊತ್ತ 5 ಕೋಟಿಗೂ ಹೆಚ್ಚು. ಇದರಿಂದಾಗಿ ಕೋಟಿ ಕೋಟಿ ಸುರಿದು ಸಿನಿಮಾ ನಿರ್ಮಿಸಿದ ನಿರ್ಮಾಪಕರಿಗೆ ಬರಬೇಕಾದ ಹಣ, ಎಲ್ಲೋ ಕತ್ತಲಲ್ಲಿ ಕುಳಿತು ಕದ್ದು ಸಿನಿಮಾ ಮಾಡಿದವನಿಗೆ ಹೋಗುತ್ತಿದೆ. ಇದುವರೆಗೆ ಹೆಚ್ಚೂ ಕಡಿಮೆ 1 ಸಾವಿರ ಪೈರಸಿ ಲಿಂಕ್ ಡಿಲೀಟ್ ಮಾಡಲಾಗಿದೆ.

  • ಪೈಲ್ವಾನ ಟ್ರೇಲರ್ ಪ್ರತಾಪ

    pailwan trailer creates sensation

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಟ್ರೇಲರ್ ಹೊರಬಿದ್ದಿದೆ. ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ನಟಿಸಿರುವ ಚಿತ್ರಕ್ಕೆ ಗಜಕೇಸರಿ ಕೃಷ್ಣ ಅಲಿಯಾಸ್ ಹೆಬ್ಬುಲಿ ಕೃಷ್ಣ ಅಲಿಯಾಸ್ ಪೈಲ್ವಾನ್ ಕೃಷ್ಣ ನಿರ್ದೇಶಕ. ನಿರ್ಮಾಪಕಿ ಸ್ವಪ್ನಾ ಕೃಷ್ಣ. ಚಿತ್ರದ ಟ್ರೇಲರ್ ದೊಡ್ಡ ಹವಾ ಎಬ್ಬಿಸಿದೆ.

    ಬಲ ಇದೆ ಅಂತಾ ಹೊಡೆದಾಡೋನು ರೌಡಿ, ಬಲವಾದ ಕಾರಣಕ್ಕೆ ಹೊಡೆದಾಡೋದು ಯೋಧ ನಮ್ಮ ಕಿಚ್ಚ ಕಣಕ್ಕಿಳಿದ ಅಂದ್ರೆ ಸಿಂಹ ಸಾರ್ ಸಿಂಹ ನಾನು ಗೆಲ್ತೀನೋ.. ಇಲ್ವೋ ಗೊತ್ತಿಲ್ಲ. ಆದರೆ ಸೋಲನ್ನ ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲ್ಲ ಟ್ರೇಲರ್‍ನಲ್ಲಿರೋ ಡೈಲಾಗ್‍ಗಳ ಸ್ಯಾಂಪಲ್ ಇವು. ಶಿಳ್ಳೆ ಹೊಡೆಯುವಂತಿವೆ. 

    ಸೆಪ್ಟೆಂಬರ್ 12ಕ್ಕೆ ಸಿನಿಮಾ ರಿಲೀಸ್ ಆಗುತ್ತಿದ್ದು, ಶರತ್ ಲೋಹಿತಾಶ್ವ, ಕಬೀರ್ ದುಹಾನ್ ಸಿಂಗ್, ಸುಶಾಂತ್ ಸಿಂಗ್ ಚಿತ್ರದ ಇನ್ನಿತರ ಪಾತ್ರಗಳಲ್ಲಿದ್ದಾರೆ. ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.

  • ಪೈಲ್ವಾನ ಸುದೀಪ್..ಹೇಗಿರ್ತಾರೋ ನೋಡ್ಬೇಕು..

    pailwanan first look

    ಕಿಚ್ಚ ಸುದೀಪ್ `ಪೈಲ್ವಾನ'ರಾಗುತ್ತಿದ್ದಾರೆ. ಅದೂ ಅಂತಿಂಥ ಪೈಲ್ವಾನ ಅಲ್ಲ. ಗರಡಿ ಮನೆಯ ಕಟ್ಟಾಳು. ಚಿತ್ರದ ಫಸ್ಟ್‍ಲುಕ್ ಹೊರಬಿದ್ದಿದೆ. ಗರಡಿ ಮನೆಯ ಮಣ್ಣು ಮೆತ್ತಿಕೊಂಡಿರುವ ಹುರಿಗಟ್ಟಿದ ದೇಹದ ಸುದೀಪ್‍ರನ್ನು ನೋಡಿದವರು ವ್ಹಾವ್ ಎಂದಿದ್ದಾರೆ. 

    ಪೈಲ್ವಾನ ಚಿತ್ರದ ಸಂಪೂರ್ಣ ಕಥೆಯೇ ಪೈಲ್ವಾನನ ಕ್ರೀಡೆಯ ಕಥೆ. ದಾವಣಗೆರೆ, ವಿಜಯಪುರ, ಬಾಗಲಕೋಟೆಗಳಲ್ಲಿ ಚಿತ್ರದ ಶೂಟಿಂಗ್ ನಡೆಯಲಿದೆ. ಮೊದಲ ಚಿತ್ರದಲ್ಲಿ ಯೋಧನೊಬ್ಬನ ಕಥೆ ಹೇಳಿದ್ದ ಕೃಷ್ಣ, ಎರಡನೇ ಚಿತ್ರದಲ್ಲಿ ಪೈಲ್ವಾನನ ಕಥೆ ಆರಿಸಿಕೊಂಡಿದ್ದಾರೆ. ಜೀವನ ಪ್ರತಿಯೊಬ್ಬರಿಗೂ ಎರಡನೇ ಅವಕಾಶ ಕೊಡುತ್ತೆ. ಹಾಗೆ ತನಗೆ ಸಿಕ್ಕ ಸೆಕೆಂಡ್ ಚಾನ್ಸ್‍ನ್ನು ದಕ್ಕಿಸಿಕೊಳ್ಳಲು ನಾಯಕ ಏನೇನೆಲ್ಲ ಮಾಡಿ ಯಶಸ್ವಿಯಾಗುತ್ತಾನೆ ಎನ್ನುವುದೇ ಚಿತ್ರದ ಕಥೆ ಎಂದು ಗುಟ್ಟು ಬಿಟ್ಟಿದ್ದಾರೆ ಕೃಷ್ಣ.

    ಕನ್ನಡ ಸಿನಿಮಾಗಳಲ್ಲಿ ಗರಡಿ ಮನೆಗಳು ಅಪರೂಪವೇನಲ್ಲ. ಆದರೆ, ಗರಡಿ ಮನೆಯ ಪೈಲ್ವಾನನ ಕಥೆಯೇ ಸಿನಿಮಾ ಆಗಿಲ್ಲ. ಹೀಗಾಗಿಯೇ ಪೈಲ್ವಾನ ಸುದೀಪ್ ಹೇಗಿರ್ತಾರೋ ನೋಡಬೇಕು ಎಂಬ ಅಭಿಮಾನಿಗಳ ತುಡಿತ ಜೋರಾಗಿದೆ.

  • ಪೈಲ್ವಾನನ ಚೆಲುವೆಗೆ ಕಣ್ಣಲ್ಲೇ ಚಪ್ಪಾಳೆ ಹೊಡೆದ ಪ್ರೇಕ್ಷಕ..!

    pailwan heroine impresses audience

    ಪೈಲ್ವಾನ್ ಸಿನಿಮಾ ನೋಡಿದವರಿಗೆ ಸುದೀಪ್, ಸುನಿಲ್ ಶೆಟ್ಟಿ ಅಚ್ಚರಿ ಎನಿಸಿಲ್ಲ. ಕಾರಣ ಸಿಂಪಲ್, ಅವರು ಈಗಾಗಲೇ ತಮ್ಮ ಪ್ರತಿಭೆಯನ್ನು ಪ್ರೂವ್ ಮಾಡಿಕೊಂಡಿರುವವರು. ಅದ್ಭುತವಾಗಿ ನಟಿಸುತ್ತಾರೆ ಎಂಬ ಬಗ್ಗೆ ಯಾವ ಅನುಮಾನವೂ ಇರಲಿಲ್ಲ. ಆದರೆ, ಪ್ರೇಕ್ಷಕರು ಕಣ್ಣಲ್ಲೇ ಚಪ್ಪಾಳೆ ಹೊಡೆದಿರುವುದು ನಾಯಕಿ ಆಕಾಂಕ್ಷಾ ಸಿಂಗ್ ಅಭಿನಯ ಪ್ರತಿಭೆಗೆ.

    ಸೋಷಿಯಲ್ ಮೀಡಿಯಾದಲ್ಲಂತೂ ಪೈಲ್ವಾನ್ ಚಿತ್ರದ ಸರ್ಪ್ರೈಸ್ ಆಕಾಂಕ್ಷಾ ಎಂದು ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ ಸಿನಿಮಾ ನೋಡಿದವರು. ಚಿತ್ರದ ' ಕಣ್ಣ ಮಣಿಯೇ, ಕಣ್ಣು ಹೊಡಿಯೇ', 'ಕಣ್ಣು ಚಪ್ಪಾಳೆ' ಹಾಡು ರಿಲೀಸ್ ಆದಾಗ ಮೆಚ್ಚಿದ್ದ ಪ್ರೇಕ್ಷಕರು, ಈಗ ಆಕೆಯ ಅಭಿನಯಕ್ಕೆ ಕಣ್ಣಲ್ಲೆ ಚಪ್ಪಾಳೆ ಹೊಡೆದಿದ್ದಾರೆ.

    ಆಕಾಂಕ್ಷಾ ಸಿಂಗ್ ಚಿತ್ರದಲ್ಲಿ ಗ್ಲಾಮರ್ ಮತ್ತು ಅಭಿನಯ ಎರಡರದಲ್ಲೂ ಸೈ ಎನಿಸಿಕೊಂಡಿದ್ದಾರೆ. ಅದೂ ಸುದೀಪ್ ಎದುರು. ಆಕಾಂಕ್ಷಾ ಪಂಜಾಬಿ ಬೆಡಗಿ. ಬದ್ರಿನಾಥ್ ಕಿ ದುಲ್ಹನಿಯಾ ಚಿತ್ರದಲ್ಲಿ ಪೋಷಕ ನಟಿಯಾಗಿದ್ದವರು, ತೆಲುಗಿನ ಮಲ್ಲಿ ರಾವಾ, ದೇವದಾಸ ಚಿತ್ರಗಳಲ್ಲಿ ನಾಯಕಿಯಾಗಿದ್ದವರು. ಮಿಕ್ಕಂತೆ ಆಕೆ ಕಿರುತೆರೆಯಲ್ಲಿ ಜನಪ್ರಿಯ ನಟಿ. ಪೈಲ್ವಾನ್ 4ನೇ ಸಿನಿಮಾ. 28 ವರ್ಷದ ಆಕಾಂಕ್ಷಾ ಅವರಿಗೆ ಮದುವೆಯೂ ಆಗಿದೆ. ಆದರೆ, ಪೈಲ್ವಾನ್ ಚಿತ್ರದಲ್ಲಿನ ಆಕೆಯ ಚೆಂದದ ಅಭಿನಯ ಮತ್ತು ಚೆಂದಕ್ಕೆ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

     

  • ಪೈಲ್ವಾನನಿಗೆ ರಮೇಶ್ ಅರವಿಂದ್ ಸಾಥ್

    ramesh aravond lends voice for sudeep's pailwan

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್‍ಗೆ ಈಗ ರಮೇಶ್ ಅರವಿಂದ್ ಕೂಡಾ ಜೊತೆಯಾಗಿದ್ದಾರೆ. ಸೆಪ್ಟೆಂಬರ್ 12ರಂದು ರಿಲೀಸ್ ಆಗುತ್ತಿರುವ ಪೈಲ್ವಾನ್ ಚಿತ್ರದಲ್ಲಿ ಹಿನ್ನೆಲೆ ಧ್ವನಿ ನೀಡಿದ್ದಾರೆ ರಮೇಶ್ ಅರವಿಂದ್. ಅಂದಹಾಗೆ ಇದು ಕನ್ನಡದಲ್ಲಿ ಮಾತ್ರ. ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಧ್ವನಿಗಳಿವೆ.

    ಪೈಲ್ವಾನ್ ಅಮೆರಿಕ, ಆಸ್ಟ್ರೇಲಿಯಾ, ಕುವೈತ್, ದುಬೈ, ಬ್ರಿಟನ್, ಕತಾರ್, ಸಿಂಗಾಪುರ ಸೇರಿದಂತೆ ಹಲವಾರು ದೇಶಗಳಲ್ಲಿ ಪ್ರಪಂಚದಾದ್ಯಂತ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.

    ಕಿಚ್ಚ ಸುದೀಪ್ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಕುಸ್ತಿ ಪಟುವಾಗಿ ನಟಿಸಿದ್ದು, ಸುನಿಲ್ ಶೆಟ್ಟಿ ಕಿಚ್ಚನ ಗುರುವಾಗಿದ್ದಾರೆ. ಆಕಾಂಕ್ಷಾ ಸಿಂಗ್ ಕಿಚ್ಚನ ಹೀರೋಯಿನ್. ಕೃಷ್ಣ ನಿರ್ದೇಶನದ ಚಿತ್ರಕ್ಕೆ ಸ್ವಪ್ನಾ ಕೃಷ್ಣ ನಿರ್ಮಾಪಕಿ. 

     

  • ಪೈಲ್ವಾನ್ 2 ಕಿಚ್ಚ ರೆಡಿ : ಕಂಡಿಷನ್ಸ್ ಅಪ್ಲೈ

    sudeep ready for pailan sequel

    ಪೈಲ್ವಾನ್ ಬಾಕ್ಸಾಫೀಸ್‍ನಲ್ಲಿ ಧೂಳೆಬ್ಬಿಸುತ್ತಿದ್ದಂತೆಯೇ ಪೈಲ್ವಾನ್ 2ಗೆ ಸಿದ್ಧರಾಗುತ್ತಿದ್ದಾರೆ ನಿರ್ದೇಶಕ ಕೃಷ್ಣ ಮತ್ತು ಕಿಚ್ಚ ಸುದೀಪ್. ಈಗಾಗಲೇ ಕೃಷ್ಣ ಕಥೆಯನ್ನೂ ಸುದೀಪ್ ಅವರಿಗೆ ಹೇಳಿದ್ದಾರಂತೆ. ಕಥೆಯನ್ನು ಇಷ್ಟಪಟ್ಟಿರುವ ಸುದೀಪ್, ಕೃಷ್ಣಗೆ ಕೆಲವು ಕಂಡೀಷನ್ಸ್ ಹಾಕಿದ್ದಾರಂತೆ.

    ಕಿಚ್ಚ ಸುದೀಪ್ ಅವರಿಗೆ ಕಥೆ ಹೇಳಿದ್ದೇನೆ. ಅದು ಅವರಿಗೂ ಇಷ್ಟವಾಗಿದೆ. ಆದರೆ ಡೆವಲಪ್ ಮಾಡುವಂತೆ ಸೂಚನೆ ಸಿಕ್ಕಿಲ್ಲ ಎಂದಿದ್ದಾರೆ ಕೃಷ್ಣ. ಆದರೆ ಸುದೀಪ್ ಪೈಲ್ವಾನ್ 2ನಲ್ಲಿ ಪೈಲ್ವಾನ್ ಆಗುವ ಬದಲು, ಪೈಲ್ವಾನ್‍ನ ಗುರು ಆಗುವ ಬಯಕೆ ಹೊಂದಿದ್ದಾರಂತೆ. ಕಾರಣ ಇಷ್ಟೆ, ಕಷ್ಟದ ಸಾಹಸ ದೃಶ್ಯಗಳಿರೋದಿಲ್ಲ ಎನ್ನುವುದು.

    ಆದರೆ, ಇಂಥದ್ದೊಂದು ಸುದ್ದಿ ಹೊರಬಿದ್ದ ಬೆನ್ನಲ್ಲೇ ನಾನ್ ರೆಡಿ ಎನ್ನುವ ಅರ್ಥದಲ್ಲಿ ಹೊರಬಿದ್ದಿರುವ ಸುದೀಪ್ ಅವರ ಟ್ವೀಟ್, ಪೈಲ್ವಾನ್ ಫ್ಯಾನ್ಸ್ ಶಿಳ್ಳೆ ಹೊಡೆಯುವಂತೆ ಮಾಡಿದೆ. ಅಂದಹಾಗೆ ಪೈಲ್ವಾನ್ ಮುಗಿಸಿದ ನಂತರವೂ ಕಿಚ್ಚ ಜಿಮ್ ಬಿಟ್ಟಿಲ್ಲ. ಪ್ರತಿದಿನ ತಪ್ಪದೇ ಜಿಮ್ ಮಾಡುತ್ತಿದ್ದಾರೆ.

  • ಪೈಲ್ವಾನ್ 50 : ಪ್ರೇಕ್ಷಕರಿಗೆ ಪೈಲ್ವಾನನ 50% ಕಾಣಿಕೆ

    pailwan ticket at half price

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್, ನಿರೀಕ್ಷೆಯಂತೆಯೇ ಅತ್ಯದ್ಭುತವಾಗಿ ಅರ್ಧಶತಕ ಪೂರೈಸಿದೆ. ಸಹಜವಾಗಿಯೇ ಕಿಚ್ಚ ಹ್ಯಾಪಿ. ನಿರ್ಮಾಪಕಿ ಸ್ವಪ್ನಾ ಕೃಷ್ಣ ಡಬಲ್ ಹ್ಯಾಪಿ. ನಿರ್ದೇಶಕ ಪೈಲ್ವಾನ್ ಕೃಷ್ಣ ತ್ರಿಪ್ಪಲ್ ಹ್ಯಾಪಿ. ಈ ಖುಷಿಯಲ್ಲೇ ಇಡೀ ಚಿತ್ರತಂಡ ಪ್ರೇಕ್ಷಕರಿಗೆ ಒಂದು ಸ್ಪೆಷಲ್ ಗಿಫ್ಟ್ ಕೊಟ್ಟಿದೆ.

    ಥಿಯೇಟರುಗಳಲ್ಲಿ ಅದರಲ್ಲಿಯೂ ಸಿಂಗಲ್ ಸ್ಕ್ರೀನ್ ಟಾಕೀಸುಗಳಲ್ಲಿ ಪೈಲ್ವಾನ್ ಚಿತ್ರದ ಟಿಕೆಟ್ ದರ ಈ ವಾರ ಅಂದರೆ ಇಂದಿನಿಂದ ಮುಂದಿನ ಗುರುವಾರದವರೆಗೆ ಇಡೀ ವಾರ 50% ಕಡಿಮೆ ಇರಲಿದೆ. ಅರ್ಥಾತ್, ಆ ಟಾಕೀಸ್‍ನ ರೆಗ್ಯುಲರ್ ಟಿಕೆಟ್ ದರ 100 ರೂ. ಇದ್ದರೆ, ಈ ವಾರ 50 ರೂ. ಇದು ಪೈಲ್ವಾನ್ ಚಿತ್ರತಂಡದ ಭರ್ಜರಿ ಗಿಫ್ಟ್.

    ಸಿನಿಮಾ ಎಷ್ಟು ಹಣ ಮಾಡಿತು ಎಂಬುದಕ್ಕಿಂತ ಈ ಚಿತ್ರ ಹಲವರ ಬದುಕಿಗೆ ಸ್ಫೂರ್ತಿಯಾಗಿದೆ. ಅದೇ ನನಗೆ ದೊಡ್ಡ ಹೆಮ್ಮೆ ಎಂದಿದ್ದಾರೆ ಸ್ವಪ್ನಾ ಕೃಷ್ಣ ಮತ್ತು ಕೃಷ್ಣ.

  • ಪೈಲ್ವಾನ್ ಅಡ್ವಾನ್ಸ್ ಬುಕ್ಕಿಂಗ್ ನುಗ್ಗಿ ಬಂದ್ರು ಪೈಲ್ವಾನ್ಸ್ ಫ್ಯಾನ್ಸ್

    pailwan advance booking craze

    ಎಂದಿಗೂ ಎಣೆಯಿಲ್ಲ ಈ ಪ್ರೀತಿಗೆ.. ಬಂದ್ರು ನೋಡೋ ಫ್ಯಾನ್ಸು.. ಎಂದು ಕಿಚ್ಚ ಸುದೀಪ್ ಹಾಡಬೇಕಾದ ಟೈಮ್ ಇದು. ಪೈಲ್ವಾನ್ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದೇ ತಡ, ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಟಿಕೆಟ್ ಬುಕ್ಕಿಂಗ್ ಜೋರಾಗಿ ನಡೆಯುತ್ತಿದೆ.

    ಬೆಂಗಳೂರಿನ ಸಿದ್ದೇಶ್ವರ ಟಾಕೀಸ್‍ನಲ್ಲಿ ಬೆಳಗ್ಗೆ 5.30ಕ್ಕೆ ಮೊದಲ ಶೋ. ಚಂದ್ರೋದಯ, ಕಾವೇರಿ ಥಿಯೇಟರುಗಳಲ್ಲೂ ಅರ್ಲಿ ಮಾರ್ನಿಂಗ್  ಶೋ ಇದೆ. ಹೆಚ್ಚುತ್ತಿರುವ ಡಿಮ್ಯಾಂಡ್ ನೋಡಿದರೆ ಮಧ್ಯರಾತ್ರಿ ಶೋ ಶುರುವಾದರೂ ಆಶ್ಚರ್ಯವಿಲ್ಲ.

    ಪೈಲ್ವಾನ್‍ಗೆ ಕೃಷ್ಣ ಆ್ಯಕ್ಷನ್ ಕಟ್ ಹೇಳಿದ್ದು, ಸ್ವಪ್ನಾ ಕೃಷ್ಣ ನಿರ್ಮಾಪಕಿ. ಸುದೀಪ್ ಜೊತೆ ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ನಟಿಸಿದ್ದಾರೆ.

     

  • ಪೈಲ್ವಾನ್ ಆಫ್ ರೊಮ್ಯಾನ್ಸ್ : ಕಿಚ್ಚನಿಗೆ ಸ್ಟಾರ್ ನಿರ್ದೇಶಕ ಕೊಟ್ಟ ಹೊಸ ಬಿರುದು

    santhosh anandram gives new title to sudeep

    ಪೈಲ್ವಾನ್ ಚಿತ್ರದ ಇನ್ನೊಂದು ಹಾಡು ಬಿಡುಗಡೆಯಾಗಿದೆ. ಒಂಚೂರು ತರಲೆ.. ಒಂಚೂರು ರೊಮ್ಯಾನ್ಸ್ ಇರುವ ಹಾಡಿದು. ಕಣ್ಮಣಿಯೇ.. ಕಣ್ಣು ಹೊಡೆಯೇ.. ಎಂಬ ಗೀತೆಯಲ್ಲಿ ಕಿಚ್ಚನ ಹೃದಯಕ್ಕೆ ಕಚಗುಳಿ ಇಟ್ಟಿದ್ದಾರೆ ಆಕಾಂಕ್ಷಾ. ಹಾಡಿನ ಲಿರಿಕಲ್ ವಿಡಿಯೋ ಸೆನ್ಸೇಷನ್ ಸೃಷ್ಟಿಸಿದೆ. ಕಾರಣ ಇಷ್ಟೆ.. ಶೃಂಗಾರ ಗೀತೆಯಲ್ಲಿ ಸುದೀಪ್, ಆಕಾಂಕ್ಷಾ ಮಿಂಚಿ ಮಿನುಗಿದ್ದಾರೆ. ಭಾರತ ಚಿತ್ರರಂಗದ ಸ್ಟಾರ್ ನಟರೆಲ್ಲ ಹಾಡಿಗೆ ತಲೆದೂಗಿದ್ದಾರೆ. ಮೆಚ್ಚಿದ್ದಾರೆ.

    ಇದೆಲ್ಲದರ ನಡುವೆ ಕಿಚ್ಚ ಸುದೀಪ್‍ಗೆ ಹೊಸ ಬಿರುದು ಕೊಟ್ಟಿದ್ದಾರೆ ಸ್ಟಾರ್ ನಿರ್ದೇಶಕ ಸಂತೋಷ್ ಆನಂದರಾಮ್. ಮಿ. & ಮಿಸೆಸ್ ರಾಮಾಚಾರಿ ಮತ್ತು ರಾಜಕುಮಾರ ಚಿತ್ರಗಳ ನಿರ್ದೇಶಕ ಸಂತೋಷ್, ಕಿಚ್ಚ ಸುದೀಪ್‍ಗೆ ಪೈಲ್ವಾನ್ ಆಫ್ ರೊಮ್ಯಾನ್ಸ್ ಎಂಬ ಬಿರುದು ಕೊಟ್ಟಿದ್ದಾರೆ.

    ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡಿಗೆ ಸಂಚಿತ್ ಹೆಗ್ಡೆ ಧ್ವನಿ ನೀಡಿದ್ದರೆ, ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ.

  • ಪೈಲ್ವಾನ್ ಕಿಚ್ಚನ ಹೊಸ ಕಥೆ

    pailwan first look

    ಪೈಲ್ವಾನ್, ಸುದೀಪ್ ಅಭಿನಯದ ಈ ಚಿತ್ರ ಶೂಟಿಂಗ್ ಶುರುವಾಗುವ ಮುನ್ನವೇ ಭಾರಿ ನಿರೀಕ್ಷೆ ಹುಟ್ಟಿಸಿದೆ. ಆದರೆ, ಚಿತ್ರಕ್ಕೆ ಇನ್ನೂ ನಾಯಕಿ ಆಯ್ಕೆಯಾಗಿಲ್ಲ. ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ತುಂಬಾನೇ ಸ್ಕೋಪ್ ಇದೆ. ಸಾಮಾನ್ಯವಾಗಿ ಸ್ಟಾರ್ ನಟರ ಚಿತ್ರಗಳಲ್ಲಿ ನಾಯಕಿಯ ಪಾತ್ರಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇರಲ್ಲ. ಆದರೆ, ಪೈಲ್ವಾನ್ ಚಿತ್ರದಲ್ಲಿ ನಾಯಕಿಯ ಪಾತ್ರಕ್ಕೆ ತುಂಬಾನೇ ಮಹತ್ವವಿದೆ. ಹೀಗಾಗಿ ನಾಯಕಿಯ ಆಯ್ಕೆ ನಿಧಾನವಾಗುತ್ತಿದೆ. ಕೆಲವರನ್ನು ಸಂಪರ್ಕಿಸಿದ್ದೇವೆ. ಇನ್ನೂ ಪೈನಲ್ ಆಗಿಲ್ಲ ಎಂದಿದ್ದಾರೆ ನಿರ್ದೇಶಕ ಕೃಷ್ಣ.

    ಸುದೀಪ್ ಅವರಿಗೆ ಪೈಲ್ವಾನ್ ಆಗಿ ರೂಪುಗೊಳ್ಳಲು ತರಬೇತಿ ಕೂಡಾ ನೀಡಲಾಗುವುದಂತೆ. ಅದಕ್ಕಾಗಿ ಎರಡು ಕ್ರೀಡಾ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆಯಂತೆ. ಪೈಲ್ವಾನ್ ಚಿತ್ರಕ್ಕೆ ಸುದೀಪ್ ಪೈಲ್ವಾನ್ ತರಬೇತಿ ಪಡೆದುಕೊಂಡೇ ಬಣ್ಣ ಹಚ್ಚಲಿದ್ದಾರೆ ಕಿಚ್ಚ.

    ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ. ಕರುಣಾಕರ್ ಕ್ಯಾಮೆರಾ ಕೆಲಸ ಮಾಡಲಿದ್ದಾರೆ. ಹೆಬ್ಬುಲಿಯಲ್ಲಿ ಅದ್ಭುತ ಸಾಹಸ ಸಂಯೋಜಿಸಿದ್ದ ರವಿವರ್ಮ, ಪೈಲ್ವಾನ್‍ಗೆ ಸಾಹಸ ನಿರ್ದೇಶಕ. ಕೆಲವು ಬಾಕ್ಸಿಂಗ್ ಹಾಗೂ ಕ್ಲೈಮಾಕ್ಸ್ ದೃಶ್ಯಗಳ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ. ಎಲ್ಲ ತಯಾರಿಯೂ ಮುಗಿದರೆ, ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರೀಕರಣ ಶುರುವಾಗಲಿದೆ.

    Related Articles :-

    ಪೈಲ್ವಾನ್ ಸುದೀಪ್​ಗೆ ಸೆಲಬ್ರಿಟಿಗಳ ಬಹುಪರಾಕ್..!

    ಪೈಲ್ವಾನ ಸುದೀಪ್..ಹೇಗಿರ್ತಾರೋ ನೋಡ್ಬೇಕು..

  • ಪೈಲ್ವಾನ್ ಕೃಷ್ಣ ಇಂಡಿಯಾ ಟೂರ್

    pailwan krishna all set to tour pan india

    ಪೈಲ್ವಾನ್ ಚಿತ್ರದ ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್‍ನಲ್ಲಿರುವಾಗ, ಚಿತ್ರದ ನಿರ್ದೇಶಕ ಕೃಷ್ಣ ಇಂಡಿಯಾ ಟೂರ್ ಹೊರಟಿದ್ದಾರೆ. ಇನ್ನು 3 ತಿಂಗಳು ಕೃಷ್ಣ ದೇಶಾಚಾರಿ. ಕಾರಣ, ಪೈಲ್ವಾನ್ ಚಿತ್ರದ ಪ್ರಮೋಷನ್. ಒಟ್ಟು 9 ಭಾಷೆಗಳಲ್ಲಿ ಪೈಲ್ವಾನ್ ರಿಲೀಸ್ ಆಗುತ್ತಿದೆ. ಹೀಗಾಗಿ ದೇಶದ ಎಲ್ಲ ಕಡೆ, ಪ್ರಮುಖ  ನಗರಗಳಲ್ಲಿ ಚಿತ್ರದ ಪ್ರಚಾರ ನಿರ್ವಹಣೆಗೆ ತಲೆ ಕೆಡಿಸಿಕೊಂಡಿದ್ದಾರೆ ಕೃಷ್ಣ. 

    ಚಿತ್ರದ ನಿರ್ಮಾಪಕರೂ ಆಗಿರುವ ಕೃಷ್ಣನಿಗೆ ಸಪೋರ್ಟ್ ಆಗಿ ನಿಂತಿರುವುದು ಕಿಚ್ಚ ಸುದೀಪ್. ಚಿತ್ರದಲ್ಲಿ ಬಾಕ್ಸರ್ ಮತ್ತು ಪೈಲ್ವಾನ್ ಆಗಿ ನಟಿಸಿರುವ ಸುದೀಪ್, ಪೈಲ್ವಾನ್ ಚಿತ್ರವನ್ನು ಇನ್ನಿಲ್ಲದಂತೆ ಪ್ರೀತಿಸಿದ್ದಾರೆ. ಚಿತ್ರವನ್ನು ಜೂನ್ ಹೊತ್ತಿಗೆ ತರುವ ಟಾರ್ಗೆಟ್ ಇಟ್ಟುಕೊಂಡು ದುಡಿಯುತ್ತಿದೆ ಪೈಲ್ವಾನ್ ಟೀಂ.

  • ಪೈಲ್ವಾನ್ ಕ್ರೇಝ್ ಈಗಲೇ ಶುರು

    pailwan craze

    ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದ ಶೂಟಿಂಗೇ ಇನ್ನೂ ಶುರುವಾಗಿಲ್ಲ. ಆಗಲೇ ಕ್ರೇಝ್ ಸೃಷ್ಟಿಸಿಬಿಟ್ಟಿದೆ. ಕನ್ನಡದಲ್ಲಿ ಸುದೀಪ್ ಚಿತ್ರಗಳು, ಸುದೀಪ್ ಸ್ಟೈಲ್ ಹೀಗೆ ಕ್ರೇಝ್ ಸೃಷ್ಟಿಸುತ್ತವೆ.

    ಕಳೆದ ಬಾರಿ ಹೆಬ್ಬುಲಿ ಚಿತ್ರದ ಹೇರ್‍ಸ್ಟೈಲ್ ಇಂಥಾದ್ದೊಂದು ಕ್ರೇಝ್ ಸೃಷ್ಟಿಸಿತ್ತು. ಈಗ ಪೈಲ್ವಾನ್ ಚಿತ್ರದ ಗೆಟಪ್ ಅಂಥಾದ್ದೊಂದು ಹವಾ ಎಬ್ಬಿಸಿದೆ. ಅಭಿಮಾನಿಗಳು ಪೈಲ್ವಾನ್ ಗೆಟಪ್‍ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಕಿಚ್ಚನಿಗೇ ಟ್ವೀಟ್ ಮಾಡುತ್ತಿದ್ದಾರೆ. ತಮ್ಮ ಮಕ್ಕಳಿಗೆ ಪೈಲ್ವಾನ್ ಗೆಟಪ್ ಹಾಕಿಸುತ್ತಿದ್ದಾರೆ. ಹೆಣ್ಣು ಮಕ್ಕಳೂ ಸುದೀಪ್ ಸ್ಟೈಲ್‍ನಲ್ಲಿ ಪೈಲ್ವಾನ್ ಗೆಟಪ್‍ಗೆ ಫೋಸ್ ಕೊಟ್ಟಿದ್ದಾರೆ.

    ಇನ್ನೊಮ್ಮೆ ಕೇಳ್ಕೊಳಿ, ಪೈಲ್ವಾನ್ ಚಿತ್ರದ ಶೂಟಿಂಗೇ ಇನ್ನೂ ಶುರುವಾಗಿಲ್ಲ. ರಿಲೀಸ್ ಹೊತ್ತಿಗೆ ಪೈಲ್ವಾನ್ ಅದ್ಯಾವ ಕ್ರೇಝ್ ಸೃಷ್ಟಿಸುತ್ತದೋ..ಬಲ್ಲವರಿಲ್ಲ.

  • ಪೈಲ್ವಾನ್ ಗೆಲ್ತಾನಾ..? ರವಿಚಂದ್ರನ್ ನುಡಿದ ಭವಿಷ್ಯ ಏನ್ ಗೊತ್ತಾ..?

    crazy star predicts pailwan to be a super hit

    ‘ಆ ಕೃಷ್ಣ ಗೆದ್ದಿದ್ದಾನೆ. ಇನ್ನೂ ಈ ಕೃಷ್ಣನೂ ಗೆಲ್ತಾನೆ’ ಈ ಮಾತನ್ನು ರವಿಚಂದ್ರನ್ ಹೇಳಿದ್ದು ಪೈಲ್ವಾನ್ ಚಿತ್ರದ ಸುದ್ದಿಗೋಷ್ಟಿಯಲ್ಲಿ. ‘‘ಇತ್ತೀಚಿಗೆ ಕುರುಕ್ಷೇತ್ರದಲ್ಲಿ ನಾನು ಕೃಷ್ಣನ ಗೆಟಪ್ ಹಾಕಿದ್ದೆ. ನನ್ನ ಕೈನಲ್ಲಿ ಅದು ಆಗುತ್ತಾ ಎಂದು ಅನೇಕರು ಅನುಮಾನ ಪಟ್ಟಿದ್ದರು. ಆ ಕೃಷ್ಣ ಗೆದಾಯ್ತು. ಈಗ ಈ ಕೃಷ್ಣನೂ ಗೆಲ್ತಾನೆ. ಅನುಮಾನವಿಲ್ಲ’’ ಇದು ರವಿಚಂದ್ರನ್ ಮಾತು.

    ಅಂದಹಾಗೆ ಚಿತ್ರದ ನಿರ್ದೇಶಕ ಕೃಷ್ಣ. ಅಷ್ಟೇ ಅಲ್ಲ, ಪೈಲ್ವಾನ್ ಚಿತ್ರದಲ್ಲಿ ಸುದೀಪ್ ಪಾತ್ರದ ಹೆಸರೂ ಕೃಷ್ಣ.

    ನಿರ್ದೇಶನದ ಜೊತೆಗೆ ಮೊದಲ ಬಾರಿಗೆ ಅವರು ನಿರ್ಮಾಣವನ್ನೂ ಮಾಡಿದ್ದಾರೆ. ಅವರಿಗೆ ಒಳ್ಳೆದಾಗಲಿ ಎಂದು ಹಾರೈಸಿದ ರವಿಚಂದ್ರನ್ಗೆ ಚಿತ್ರದ ಟ್ರೇಲರ್ನಲ್ಲೊಂದು ಫೈರ್ ಕಾಣಿಸಿದೆ.

    ‘ಪೈಲ್ವಾನ್ ಚಿತ್ರದಲ್ಲೊಂದು ಫೈರ್ ಇದೆ. ಜೋಷ್ ಇದೆ. ಟ್ರೇಲರ್ ನೋಡಿದವರಿಗೆ ಸಿನಿಮಾ ನೋಡಬೇಕು ಅಂತ ಅನ್ನಿಸಬೇಕು. ಪೈಲ್ವಾನ್ ಟ್ರೇಲರಿಗೆ ಆ ತಾಕತ್ತಿದೆ ಎಂದಿದ್ದಾರೆ ರವಿಚಂದ್ರನ್.

    ಅಂದಹಾಗೆ ರವಿಚಂದ್ರನ್ ಖುಷಿಗೆ ಇನ್ನೂ ಒಂದು ಕಾರಣ ಇದೆ. ಪೈಲ್ವಾನ್ ದೊಡ್ಡ ಮಟ್ಟದಲ್ಲಿ ಬರುತ್ತಿದ್ದಾನೆ. ಇಂಡಿಯಾ ಲೆವೆಲ್ಲಿನಲ್ಲಿ ಸುತ್ತುತ್ತಿದ್ದಾನೆ. ಆ ಚಿತ್ರದಲ್ಲಿ ನನ್ನ ದೊಡ್ಡಮಗ ಇದ್ದಾನೆ ಎನ್ನುವುದೇ ನನಗೆ ಖುಷಿ, ಹೆಮ್ಮೆ ಎಂದಿದ್ದಾರೆ ಕ್ರೇಜಿಸ್ಟಾರ್. ಅಂದಹಾಗೆ ರವಿಚಂದ್ರನ್ ದೊಡ್ಡ ಮಗ ಯಾರು..? ಅದನ್ನೂ ನಾವೇ ಹೇಳ್ಬೇಕಾ..?

     

  • ಪೈಲ್ವಾನ್ ಚಿತ್ರವೇ ಬೇರೆ.. ದಂಗಲ್, ಸುಲ್ತಾನ್ ಚಿತ್ರವೇ ಬೇರೆ

    pailwan is different from sultan and dangal

    ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರದ ಅನೌನ್ಸ್ ಮಾಡಿದ ತಕ್ಷಣ ಹಲವರು ಇದು ದಂಗಲ್ ಅಥವಾ ಸುಲ್ತಾನ್ ಮಾದರಿಯ ಕಥೆ ಇರಬೇಕು ಎಂದುಕೊಂಡಿದ್ದರು. ದಂಗಲ್, ಪೊಗಟ್ ಸೋದರಿಯರ ಬಯೋಪಿಕ್ ಆದರೆ, ಸುಲ್ತಾನ್ ಅಪ್ಪಟ ಸಲ್ಮಾನ್ ಶೈಲಿಯ ಸಿನಿಮಾ.

    ಸುಲ್ತಾನ್ ಚಿತ್ರದಲ್ಲಿ ಕೌಟುಂಬಿಕ ಕಥಾ ಹಂದರವಿದ್ದರೆ, ದಂಗಲ್ನಲ್ಲಿ ರಾಷ್ಟ್ರೀಯ ಕ್ರೀಡಾಪ್ರೇಮದ ಸ್ಫೂರ್ತಿಯ ಸೆಲೆಯಿತ್ತು. ಈ ಎರಡೂ ಚಿತ್ರಗಳನ್ನು ಮಿಕ್ಸ್ ಮಾಡಿ ಕಥೆ ಮಾಡಿರ್ತಾರೆ ಎಂದು ಕಾಲೆಳೆದಿದ್ದವರು ಈಗ ಅಬ್ಬಾ ಎಂದಿದ್ದಾರೆ.

    ಪೈಲ್ವಾನ್ ಚಿತ್ರಕ್ಕೂ, ದಂಗಲ್, ಸುಲ್ತಾನ್ ಚಿತ್ರಕ್ಕೂ ಹೋಲಿಕೆ ಇರೋದು ಒಂದೇ ವಿಷಯದಲ್ಲಿ. ಆ ಎರಡೂ ಚಿತ್ರಗಳು ಕುಸ್ತಿಯನ್ನು ಆಧರಿಸಿದ ಸಿನಿಮಾಗಳೇ. ಇಲ್ಲಿ ಕೂಡಾ ಸುದೀಪ್ ಕುಸ್ತಿಪಟು. ಆದರೆ, ಕಥೆ. ಸಿಂಪಲ್ಲಾಗಿ ಹೇಳಬೇಕು ಅಂದ್ರೆ.. ಪ್ರೀತಿ, ಕುಸ್ತಿ ಮತ್ತು ಒಂದು ಅದ್ಭುತ ಸಂದೇಶವನ್ನು ಹದವಾಗಿ ಬೆರೆಸಿ ತೆಗೆದಿದ್ದಾರೆ ನಿರ್ದೇಶಕ ಕೃಷ್ಣ. ಒಂದು ವರ್ಷದ ಶ್ರಮ ವ್ಯರ್ಥವಾಗಿಲ್ಲ. ಪ್ರೇಕ್ಷಕರು ಗೆದ್ದಾ ನೋಡೋ ಪೈಲ್ವಾನ್ ಎನ್ನುತ್ತಿದ್ದಾರೆ.

  • ಪೈಲ್ವಾನ್ ನೋಡಬೇಕು - ಕಿಚ್ಚನಿಗೆ ಸಲ್ಮಾನ್, ಚಿರಂಜೀವಿ ಡಿಮ್ಯಾಂಡ್

    stars waiting to watching pailwaan

    ಪೈಲ್ವಾನ್ ಸಿನಿಮಾ ರಿಲೀಸ್ ಆಗಿ ಕನ್ನಡದ ಪ್ರೇಕ್ಷಕರು ಮೆಚ್ಚಿ ಕೊಂಡಾಡುತ್ತಿದ್ದರೆ, ಬೇರೆ ಭಾಷೆಯ ಸ್ಟಾರ್ ನಟರು ಚಿತ್ರವನ್ನು ನೋಡುವ ಆಸೆ ತೋರಿಸಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಪೈಲ್ವಾನ್ ಚಿತ್ರವನ್ನು ಕುಟುಂಬದೊಂದಿಗೆ ನೋಡಲು ರೆಡಿಯಾಗಿದ್ದಾರೆ. ಅವರ ಜೊತೆಗೆ ಕಿಚ್ಚ ಸಾಥ್ ಕೊಡಬೇಕು. ಪೈಲ್ವಾನ್ ಪರ ಈಗಾಗಲೇ ಸಲ್ಲು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರವನ್ನೂ ಮಾಡಿದ್ದಾರೆ.

    ಅತ್ತ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಕೂಡಾ ಪೈಲ್ವಾನ್ ನೋಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಸುದೀಪ್ ಅಭಿನಯದ ಚಿತ್ರಕ್ಕೆ ಸ್ಯಾಂಡಲ್‍ವುಡ್‍ನ ಎಲ್ಲ ಸ್ಟಾರ್‍ಗಳೂ ಶುಭ ಹಾರೈಸಿದ್ದಾರೆ. 

  • ಪೈಲ್ವಾನ್ ನೋಡಿ ಕಣ್ಣೀರಿಟ್ಟ ಸಾನ್ವಿ ಸುದೀಪ್ : ಹೇಳಿದ್ದು ಒಂದೇ ಮಾತು

    sudeep's daughter cries after watching pailwan

    ಪೈಲ್ವಾನ್ ಗೆದ್ದು ಬಿಟ್ಟ. ಪ್ರೇಕ್ಷಕರಿಂದ ಸುದೀಪ್, ಕೃಷ್ಣ ಬಗ್ಗೆ ಪ್ರಶಂಸೆಯ ಸುರಿಮಳೆಯಾಗುತ್ತಿದ್ದರೆ, ಅತ್ತ ಥಿಯೇಟರಿನಲ್ಲಿ ಸುದೀಪ್, ಕೃಷ್ಣ, ಪ್ರಿಯಾ, ಸಾನ್ವಿ, ಸ್ವಪ್ನಾ ಎಲ್ಲರೂ ಕಣ್ಣೀರಿಟ್ಟಿದ್ದಾರೆ. ಅಭಿಮಾನಿಗಳು ಮತ್ತು ಚಿತ್ರತಂಡದೊಂದಿಗೆ ಸಂತೋಷ್ ಥಿಯೇಟರಿನಲ್ಲಿ ಸಿನಿಮಾ ನೋಡಿದ ಸುದೀಪ್ ಮಗಳ ಪ್ರತಿಕ್ರಿಯೆಗೆ ಸ್ವತಃ ಕಣ್ಣೀರಾಗಿದ್ದಾರೆ.

    I am very happy pappa, proud of you (ಖುಷಿಯಾಗಿದೆ ಪಪ್ಪಾ.. ಹೆಮ್ಮೆಯೆನಿಸುತ್ತಿದೆ) ಎಂದು ಹೇಳಿ ತಂದೆಯನ್ನು ತಬ್ಬಿಕೊಂಡಿದ್ದಾರೆ. ಚಿತ್ರದಲ್ಲಿ ನನ್ನನ್ನು ಹೊಡೆಯುವ ದೃಶ್ಯಗಳನ್ನು ನೋಡಿ ಮಗಳು ಕಣ್ಣೀರಿಟ್ಟಿದ್ದಾಳೆ. ಯಾವ ಮಕ್ಕಳೂ ಕೂಡ ಅಪ್ಪ ಬೇರೆಯವರಿಂದ ಹೊಡೆಸಿಕೊಂಡು, ರಕ್ತ ಸುರಿಸುವುದನ್ನು ನೋಡಲು ಇಷ್ಟಪಡಲ್ಲ ಎಂದಿದ್ದಾರೆ ಸುದೀಪ್.

    ಎಲ್ಲರಿಗೂ ಇಂದು ಊಟ ಹಾಕಬೇಕು ಅಂದುಕೊಂಡಿದ್ದೆ. ಊಟ ತೃಪ್ತಿ ಕೊಡ್ತಾ? ಎಲ್ಲದಕ್ಕೂ ಉತ್ತರ ಕೊಡ್ತೀನಿ ಅಂತ ಹೇಳಿದ್ದೆ. ಉತ್ತರ ಸಿಗ್ತಾ? ನಾನು, ಕೃಷ್ಣ, ಸ್ವಪ್ನ ತಬ್ಬಿಕೊಂಡು ಕಣ್ಣೀರು ಹಾಕಿದ್ದೇವೆ.  ಪ್ರೇಕ್ಷಕರು ಕೊಟ್ಟ ಮೆಚ್ಚುಗೆ ಖುಷಿ ಕೊಟ್ಟಿದೆ ಎಂದಿದ್ದಾರೆ ಕಿಚ್ಚ.

  • ಪೈಲ್ವಾನ್ ನೋಡಿದ ಚಿತ್ರರಂಗದ ಸ್ಟಾರ್ಸ್

    celebs appreciate pailwan

    ಪೈಲ್ವಾನ್ ಚಿತ್ರ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಎಲ್ಲೆಡೆ ಪೈಲ್ವಾನ್ ಹವಾ. ಬಂದಾ ನೋಡೋ ಪೈಲ್ವಾನ್ ಹಾಡು ಗೆದ್ದಾ ನೋಡೋ ಪೈಲ್ವಾನ್ ಆಗಿದೆ. ದೊರೆಸಾನಿ, ಕಣ್ಮಣಿಯೇ ಹಾಡು ಟ್ರೆಂಡ್ ಸೃಷ್ಟಿಸಿವೆ. ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ನಿರ್ಮಾಪಕಿ ಸ್ವಪ್ನಾ ಕೃಷ್ಣ ಫುಲ್ ಹ್ಯಾಪಿ. ಈ ನಡುವೆ ಚಿತ್ರರಂಗದ ಹಲವರು ಸ್ವತಃ ಥಿಯೇಟರಿಗೆ ಹೋಗಿ ಪೈಲ್ವಾನ್ ನೋಡಿ ಕಿಚ್ಚ ಸುದೀಪ್ ಮತ್ತು ಕೃಷ್ಣಗೆ ಶಹಬ್ಬಾಸ್ ಎಂದಿದ್ದಾರೆ.

    ಸಿಂಪಲ್ ಸುನಿ : ಆಟದ ಜೊತೆ ಭಾವನಾತ್ಮಕ ಸಂಬಂಧಗಳು ಬೆರೆತಿರುವ ಸಿನಿಮಾ. ಮನೆಮಂದಿಯೆಲ್ಲ ನೋಡಬೇಕಾದ ಚಿತ್ರ ಪೈಲ್ವಾನ್.

    ರಿಷಬ್ ಶೆಟ್ಟಿ : ಅಭಿಮಾನಿಗಳ ನಡುವೆ ಶಿಳ್ಳೆಗಳ ಅಬ್ಬರದಲ್ಲಿ ನಾನಿದ್ದೇನೆ. ಕಾಮಿಡಿ ಟೈಮಿಂಗ್, ಮದುವೆ ವಾರ್ಷಿಕೋತ್ಸವದ ದಿನ ಅಕ್ಕಪಕ್ಕದವರನ್ನು ಕರೆದು ಹೇಳೋ ಡೈಲಾಗ್ ಸೂಪರ್.

    ಪವನ್ ಒಡೆಯರ್ : ಸಿನಿಮಾ ಸೂಪರ್. ಸಿನಿಮಾದಲ್ಲಿ ಒಂದೊಳ್ಳೆಯ ಸಂದೇಶವನ್ನು ತುಂಬಾ ಚೆನ್ನಾಗಿ ಹೇಳಲಾಗಿದೆ.

    ಅಶಿಕಾ ರಂಗನಾಥ್ : ಸುದೀಪ್ ಸರ್, ನೀವಂತೂ ವಂಡರ್‍ಫುಲ್.  ಸಿನಿಮಾ ಸೂಪರ್. ನಿಮ್ಮ ಡೆಡಿಕೇಷನ್ ನೋಡುತ್ತಿದ್ದರೆ, ನಮ್ಮಂತಹವರಿಗೆ ಸ್ಫೂರ್ತಿ.

    ಮಾನ್ವಿತಾ ಕಾಮತ್ : ಖಂಡಿತಾ ಫ್ಯಾಮಿಲಿ ಎಂಟರ್‍ಟೇನರ್ ಸಿನಿಮಾ. ಕಿಚ್ಚ ಸುದೀಪ್ ಪರಿಶ್ರಮ, ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಅದ್ಭುತವಾಗಿದೆ.

    ಇನ್ನು ಸಿನಿಮಾ ನೋಡಿ ಪರ್ಸನಲ್ ಆಗಿ ಸುದೀಪ್ ಅವರಿಗೆ ಕಂಗ್ರಾಟ್ಸ್ ಹೇಳಿರುವವರ ಸಂಖ್ಯೆಯೂ ದೊಡ್ಡದಿದೆ.

     

  • ಪೈಲ್ವಾನ್ ಪೈರಸಿ. STOP THIS CRIME 

    pailwan piracy, stop this crime

    ದೊಡ್ಡ ದೊಡ್ಡ ನಟರ ಚಿತ್ರಗಳಿಗೆ ಪೈರಸಿ ಕಾಟ ತಪ್ಪಿದ್ದಲ್ಲ. ಪೈಲ್ವಾನ್ ಚಿತ್ರಕ್ಕೂ ಈ ಪೈರಸಿ ದೊಡ್ಡ ಕಳ್ಳನಾಗಿ ಕಾಡಿದ್ದಾನೆ. ಪೈರಸಿ ವೀರರು ಸಿನಿಮಾವನ್ನು ಅದು ಹೇಗೋ ಕದ್ದು, ಇಂಟರ್‍ನೆಟ್ಟಿಗೆ ಬಿಟ್ಟು ಬಿಡುತ್ತಾರೆ. ಪೈಲ್ವಾನ್ ರಿಲೀಸ್ ಆದ ಮೊದಲ ದಿನ ಇಂಥದ್ದೇ ಸ್ಥಿತಿ ಎದುರಾಗಿದೆ.

    ಒನ್ಸ್ ಎಗೇಯ್ನ್ ಪೈರಸಿ ಕ್ಷೇತ್ರದ ಭಯೋತ್ಪಾದಕ ತಮಿಳ್ ರಾಕರ್ಸ್ ಮತ್ತು 3ಮೂವೀ ರೂಲ್ಸ್ ವೆಬ್‍ಸೈಟ್‍ಗಳಲ್ಲಿ ಚಿತ್ರವನ್ನು ರಿಲೀಸ್ ಮಾಡಿದ್ದಾರೆ. ಅಫ್‍ಕೋರ್ಸ್.. ಕೆಲವೇ ಕ್ಷಣಗಳಲ್ಲಿ ಅದನ್ನು ತೆಗೆದುಹಾಕಲಾಗಿದೆಯಾದರೂ, ಪೈರಸಿ ಖದೀಮರ ಕೈ ತುಂಬಾ ದೊಡ್ಡದು.

    ಇಂತಹ ಪೈರಸಿ ನಿಮ್ಮ ಕಣ್ಣಿಗೇನಾದರೂ ಬಿದ್ದರೆ This email address is being protected from spambots. You need JavaScript enabled to view it. ಗೆ ಮಾಹಿತಿ ನೀಡಿ. ಪೈರಸಿ ಕ್ರೈಂನ್ನು ನಿಲ್ಲಿಸಿ. ಕನ್ನಡ ಚಿತ್ರಗಳನ್ನು ಚಿತ್ರಮಂದಿರದಲ್ಲೇ ನೋಡಿ