` bail in court - chitraloka.com | Kannada Movie News, Reviews | Image

bail in court

  • ಬಿಗ್​ಬಾಸ್ ಪ್ರಥಮ್​ಗೆ ಷರತ್ತುಬದ್ಧ ಜಾಮೀನು - ನ್ಯಾಯಾಧೀಶರಿಂದ ಬುದ್ಧಿವಾದ

    Bigg boss winner pratham image

    ಸಹನಟ ಭುವನ್​ ತೊಡೆ ಕಚ್ಚಿದ್ದ ಪ್ರಕರಣದಲ್ಲಿ ಬಿಗ್​​ಬಾಸ್​ ಪ್ರಥಮ್​ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. 5 ಸಾವಿರ ರೂ. ನಗದ ಶ್ಯೂರಿಟಿ ಹಾಗೂ ಷರತ್ತು ವಿಧಿಸಿ ಜಾಮೀನು ನೀಡಿದೆ. ನಿಖೆಗೆ ಸಹಕರಿಸುವಂತೆ ಸೂಚಿಸಿದೆ.

    ಜಾಮೀನು ನೀಡುವಾಗ ನ್ಯಾಯಾಧೀಶರು ಪ್ರಥಮ್​ಗೆ ಬುದ್ಧಿವಾದ ಹೇಳಿದ್ದಾರೆ. ಏನಿದು ಹುಚ್ಚಾಟ..? ಸಾರ್ವಜನಿಕರ ಜೊತೆ ಇರುವವರು ಹೀಗೆ ಇರಬಾರದು. ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುತ್ತೆ ಎಂದು ಬುದ್ಧಿ ಹೇಳಿದ್ದಾರೆ. ವಿಚಾರಣೆ ವೇಳೆ ಕೇಳದೇ ಇದ್ದರೂ ತಾನು ಬಿಗ್​ಬಾಸ್ ವಿನ್ನರ್. 50 ಲಕ್ಷ ಬಹುಮಾನ ಗೆದ್ದಿದ್ದೆ. ಅದನ್ನು ಯೋಧರಿಗೆ ರೈತರಿಗೆ ನೀಡಿದ್ದೆ ಎಂದು ಹೇಳಿದ ಪ್ರಥಮ್. ದೂರು ನೀಡಲು ತಡವಾಗಿದ್ದಕ್ಕೆ ಕಾರಣ ಕೇಳಿದಾಗ, ಕುತ್ತಿಗೆ ನೋವಿಗೆ ಚಿಕಿತ್ಸೆ ಪಡೆಯಲು ಹೋಗಿದ್ದೆ ಎಂದು ವಿವರಣೆ ನೀಡಿದ್ದಾರೆ.