` direction, - chitraloka.com | Kannada Movie News, Reviews | Image

direction,

  • 22 ವರ್ಷಗಳ ನಂತರ ನಿರ್ದೇಶನಕ್ಕೆ ಭಗವಾನ್

    bhagavan back to direction after 22 years

    ಭಗವಾನ್, ಕನ್ನಡ ಚಿತ್ರರಂಗ ಕಂಡ ಅತ್ಯಂತ ಯಶಸ್ವಿ ನಿರ್ದೇಶಕರಲ್ಲಿ ಒಬ್ಬರು. ದೊರೆ ಮತ್ತು ಭಗವಾನ್ ಜೋಡಿಯ ಚಿತ್ರಗಳು ಕನ್ನಡ ಚಿತ್ರರಂಗದ ಸುವರ್ಣ ಯುಗದಲ್ಲಿ ಮಿಂಚಿ ಮಿನುಗಿವೆ. ರಾಜ್ ಕುಮಾರ್, ವಿಷ್ಣುವರ್ಧನ್, ಅನಂತ್ ನಾಗ್‍ರಂತಹ ದಿಗ್ಗಜರ ಚಿತ್ರ ನಿರ್ದೇಶಿಸಿದ್ದ ಜೋಡಿ ದೊರೆ ಭಗವಾನ್.

    ದೊರೆ ಅವರ ನಿಧನದ ನಂತರ ಭಗವಾನ್ ಕೂಡಾ ನಿರ್ದೇಶನದಿಂದ ದೂರ ಸರಿದಿದ್ದರು. ಭಗವಾನ್ ನಿರ್ದೇಶಿಸಿದ ಕೊನೆಯ ಚಿತ್ರ ಬಾಳೊಂದು ಚದುರಂಗ. 22 ವರ್ಷಗಳ ಹಿಂದೆ ಬಂದಿದ್ದ ಸಿನಿಮಾ ಅದು.

    ಈಗ, ಇಷ್ಟು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕಿಳಿಯುತ್ತಿದ್ದಾರೆ. ಆ ಚಿತ್ರಕ್ಕೆ ಸಂಚಾರಿ ವಿಜಯ್ ನಾಯಕ. ಚಿತ್ರ ಸೆಪ್ಟೆಂಬರ್ ಕೊನೆ ಅಥವಾ ಅಕ್ಟೋಬರ್‍ನಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.

    ಮೊದಲೆಲ್ಲ ಡಾ. ರಾಜ್ ಕುಮಾರ್‍ರನ್ನು ಮನಸ್ಸಿನಲ್ಲಿಟ್ಟುಕೊಂಡು ಕಥೆ ಮಾಡುತ್ತಿದ್ದೆ. ಈಗ ನಿಮ್ಮನ್ನು ತಲೆಯಲ್ಲಿಟ್ಟುಕೊಂಡು ಕಥೆ ಮಾಡಿದ್ದೇನೆ ಎಂದರಂತೆ ಭಗವಾನ್. ಆ ಮಾತಿಗೇ ಥ್ರಿಲ್ಲಾಗಿ ಒಪ್ಪಿಕೊಂಡಿದ್ದಾರಂತೆ ವಿಜಯ್. ಸದ್ಯಕ್ಕೆ ತಮ್ಮ ಕೈಲಿರುವ ಮೂರು ಚಿತ್ರಗಳ ಶೂಟಿಂಗ್ ಮುಗಿಸಿ ಭಗವಾನ್ ಚಿತ್ರದಲ್ಲಿ ನಟಿಸಲಿದ್ದಾರೆ ಸಂಚಾರಿ ವಿಜಯ್.

    22 ವರ್ಷಗಳ ನಂತರ ನಿರ್ದೇಶನಕ್ಕಿಳಿಯುತ್ತಿರುವ ಭಗವಾನ್ ಅವರಿಗೆ ಶುಭವಾಗಲಿ

  • ಕಿಚ್ಚ ಮತ್ತೆ ಡೈರೆಕ್ಟರ್.. ಪಕ್ಕಾ..

    sudeep back to direction

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪಾಲಿಗೆ 2019 ಲಕ್ಕಿ ವರ್ಷ. ಈ ಅದೃಷ್ಟದ ವರ್ಷದಲ್ಲಿ ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ಕೊಟ್ಟ ಸುದೀಪ್, ಕನ್ನಡದಲ್ಲಿ ಪೈಲ್ವಾನ್ ಆಗಿ ಅಬ್ಬರಿಸಿದ್ದಾರೆ. ಸೈರಾ ನರಸಿಂಹ ರೆಡ್ಡಿಯಲ್ಲಿ ಅವುಕು ರಾಜನಾಗಿ ಮೆರೆದಿದ್ದಾರೆ. ದಬಾಂಗ್ 3ಯಲ್ಲಿ ಬಲ್ಲಿ ಸಿಂಗ್ ಆಗಿ ಆರ್ಭಟಿಸಿದ್ದಾರೆ. ಇಷ್ಟೆಲ್ಲ ಆಗಿಯೂ ಬಿಡುವಿಲ್ಲದೆ ನಟಿಸುತ್ತಿರುವ ಸುದೀಪ್ ಸದ್ಯಕ್ಕೆ ಕೋಟಿಗೊಬ್ಬ 3 ಚಿತ್ರದಲ್ಲಿ ಬ್ಯುಸಿ. ಕ್ಯೂನಲ್ಲಿ ಅನೂಪ್ ಭಂಡಾರಿ, ಪ್ರಿಯದರ್ಶನ್ ಚಿತ್ರಗಳಿವೆ. ಇಷ್ಟೆಲ್ಲದರ ನಡುವೆಯೇ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿರುವ ಸುದೀಪ್, ಮತ್ತೆ ಡೈರೆಕ್ಷನ್ನತ್ತ ಸುಳಿವು ಕೊಟ್ಟಿದ್ದಾರೆ.

    2014ರಲ್ಲಿ ಮಾಣಿಕ್ಯ ಚಿತ್ರದ ನಂತರ ಮತ್ತೆ ಸುದೀಪ್ ನಿರ್ದೇಶನ ಮಾಡಿಲ್ಲ. ಸುದೀರ್ಘ ಗ್ಯಾಪ್ ನಂತರ ಮತ್ತೊಮ್ಮೆ ಡೈರೆಕ್ಷನ್ ಮಾಡುವ ಸುದ್ದಿ ಕೊಟ್ಟಿದ್ದಾರೆ ಕಿಚ್ಚ. ಮತ್ತು ಇದು ರೀಮೇಕ್ ಅಲ್ಲ. ಅಪ್ಪಟ ಸ್ವಮೇಕ್ ಚಿತ್ರ. ಚಿತ್ರದ ಕಥೆ, ಚಿತ್ರಕಥೆ ಕೆಲಸದಲ್ಲಿ ಕಂಪ್ಲೀಟ್ ತೊಡಗಿಸಿಕೊಂಡಿರುವ ಸುದೀಪ್, ಹೊಸ ವರ್ಷಕ್ಕೆ ಮತ್ತೆ ನಿರ್ದೇಶಕರಾಗಲಿದ್ದಾರೆ ಎನ್ನುವುದೇ ಬಿಗ್ ನ್ಯೂಸ್.

  • ಮತ್ತೆ ನಿರ್ದೇಶಕರಾದರು ವಿ.ಮನೋಹರ್

    v manohar back to direction

    ವಿ.ಮನೋಹರ್, ಕನ್ನಡ ಚಿತ್ರರಂಗದಲ್ಲಿ ಟ್ರೆಂಡ್ ಸೃಷ್ಟಿಸಿದ ಸಂಗೀತ ನಿರ್ದೇಶಕ. ಅಷ್ಟೆ ಅಲ್ಲ, ಸಕಲಕಲಾ ವಲ್ಲಭ ಎಂದರೂ ತಪ್ಪಾಗಲಿಕ್ಕಿಲ್ಲ. ನಟರೂ ಹೌದು, ನಿರ್ದೇಶಕರೂ ಹೌದು. ವಿ.ಮನೋಹರ್ ನಿರ್ದೇಶನ ಮಾಡಿದ್ದು 2 ಚಿತ್ರಗಳನ್ನು. ಮೊದಲನೆಯದ್ದು ಓ ಮಲ್ಲಿಗೆ.. ಸೂಪರ್ ಡ್ಯೂಪರ್ ಹಿಟ್. ಎರಡನೆಯದ್ದು ಇಂದ್ರಧನುಷ್.

    ಸಸ್ಪೆನ್ಸ್ ಥ್ರಿಲ್ಲರ್ ಕಥೆಯಾಗಿದ್ದ ಇಂದ್ರಧನುಷ್‍ಗೆ ವಿಮರ್ಶಕರ ಮೆಚ್ಚುಗೆ ಸಿಕ್ಕರೂ, ಥಿಯೇಟರ್‍ನಲ್ಲಿ ಗೆಲ್ಲಲಿಲ್ಲ. ಹೀಗಾಗಿ ನಿರ್ದೇಶನದಿಂದ ದೂರವಾಗಿದ್ದ ವಿ.ಮನೋಹರ್, ಈಗ 18 ವರ್ಷಗಳ ನಂತರ ಮತ್ತೊಮ್ಮೆ ನಿರ್ದೇಶಕರ ಕ್ಯಾಪ್ ತೊಟ್ಟಿದ್ದಾರೆ.

    ಅವರೇ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಸಿನಿಮಾಗೆ ಸಕಲೇಶಪುರದಲ್ಲಿ ಮುಹೂರ್ತವೂ ಆಗಿದೆ. ಚಿತ್ರದಲ್ಲಿ ಮರ್ಡರ್ ಮಿಸ್ಟರಿ & ಹಾರರ್ ಕಥೆಯಿಟ್ಟುಕೊಂಡಿದ್ದಾರೆ ಮನೋಹರ್. 5 ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿರುವ ವಿ.ಮನೋಹರ್, ಕಿರುತೆರೆಯಲ್ಲೂ ಬ್ಯುಸಿ. ತುಳು ಚಿತ್ರರಂಗದಲ್ಲೂ ಬ್ಯುಸಿ. ಈಗ ಮತ್ತೊಮ್ಮೆ ನಿರ್ದೇಶನಕ್ಕೂ ಕೈ ಹಾಕಿದ್ದಾರೆ. ಶುಭವಾಗಲಿ.