` rishi, - chitraloka.com | Kannada Movie News, Reviews | Image

rishi,

  • Rishi's Third Film Is Maharathi

    rishi's third film is maharathi

    Actor Rishi who is riding high on the success of his debut film 'Operation Alamelamma' has signed his third film silently.

    Rishi will be acting as a hero in a new film called 'Maharathi'. The film will be produced by Jayanna and Bhogendra under the Jayanna films banner, while Veerendra Shetty Kavoor is the director. Veerendra had earlier directed 'Chalipolilu' in Tulu and this is his first Kannada film.

    'Maharathi' will be launched only after Rishi's second film 'Kavalu Daari' completes. 'Kavalu Daari' is being produced by Puneeth Rajakumar and directed by Hemanth Rao. The film is likely to be launched in the month of August.

  • Sarvajanikarige Suvarnavakasha Review: Chitraloka Rating 3.5/ 5

    sarvajanikarige suvarnavakasha movie review

    From the makers of Gultoo, comes another entertainer and unlike the first venture this one is a rib tickling comedy which runs around a simple but an effective plot. Rishi, who started his run at the box office with Operation Alamelamma, a similar genre of this kind and then a serious suspense thriller with Kavaludaaruli, has grabbed onto this golden opportunity. A pretty impressive beginning it is for Rishi, as Sarvajanikarige Suvarnavakasha is going to be another feather in his cap.

    Insofar as the movie, director Anoop Ramaswamy Kashyap has kept it simple while adding value to it with a realistic and an effective script for the audience, who will laugh at the misadventurous of Vedanth, in short Vedu portrayed by Rishi, and his friend played by Siddu Moolimani.

    The emergence of new filmmakers in Kannada, who opt to experiment beyond the usual set of commercial mix-masala formulas, is really paying off Kannada film industry to a greater extent. Along with the number of films, the ratio of the quality films and the success rate of such films has certainly gone up exponentially in the last few years.

    This one which marks the debut of talented Bengaluru girl Dhanya Balakrishna, revolves around a missing golden chain followed by the escapades of Vedanth and his friends against the gang of single hand villain portrayed by Rangayana Raghu. It has few good songs including the one sung by power star.

    The protagonist is the only son of an elderly couple, which is interesting by itself to start off. Dattanna repeats his magical performance as a loving husband who takes of his bed ridden wife along with his son Vedanth. The couple's loving tale speaks volumes about faith and compatibility even in the extreme situations of life offers.

    When a golden chain belonging to Vedu's girlfriend goes missing on a day the two go on an outing on her birthday, a series of funny events u folds for two hours of fun filled comedy. On what could be the golden opportunity for the public, it is best experienced at a theatre near you.

  • Shashank And Yogaraj To Co-Produce A Film

    shashank and yogaraj bhatt tp co produce a new film

    Well known directors Yogaraj Bhatt and Shashank who are also producers have come forward to produce a new film jointly.

    The new untitled film is being jointly produced by Yogaraj Movies and Shashank Cinemas. The film is being directed by small screen director Mohan Singh, who has assisted Yogaraj Bhatt in his previous films. Mohan Singh is directing the film based on a story by Yogaraj Bhatt.

    The film stars Rishi of 'Operation Alamelamma' in lead role. The shooting for the film will start in the month of June.

  • Shooting For Kavalu Daari complete

    kavaludaari shooting complete

    Shooting for the PRK Productions banner film Kavalu Daari is complete. The Puneeth Rajkumar banner's first film is directed by Hemanth M Rao of Godhi Banna Sadharana Mykattu fame and stars Rishi (of Operation Alamelamma fame),

    Anant Nag and others. The film is planned for release on May 25 this year. It is not certain if all the post production work will be completed within time to release the film on May 25. But certainly the team is thrilled having completed shooting on time within the time they had fixed.

    Ashwini Puneeth Rajkumar is the official producer of the film and Hombale Films has tied up with PRK Productions for this project. Other actors in the cast include Suman Ranganathan, Achyuth Kumar, Roshini Prakash, Sriri and Siddharth. The film is a police story about two cops trying to solve an old case.

  • ಅಪ್ಪನ ಸಾಲ ತೀರಿಸಲೊಂದು ಸುವರ್ಣಾವಕಾಶ ಸಿಕ್ಕಾಗ.

    sarvajanikarige suvarnavakaha is a story of responsible son

    ಅಪ್ಪನಿಗೋ ಮೈತುಂಬಾ ಸಾಲ. ಎಂಬಿಎ ಪದವೀಧರನಾಗಿದ್ದರೂ, ಅಪ್ಪನ ಸಾಲ ಕಾಡುತ್ತಲೇ ಇದೆ. ಆಗ ಸಿಗುತ್ತೆ ಒಂದು ಬಂಪರ್ ಆಫರ್. ಆ ಆಫರ್ ಹಿಂದೆ ಹೊರಡುತ್ತಾರೆ ರಿಷಿ. ಅಲ್ಲಿಂದ ಶುರು.. ಕಾಮಿಡಿಯ ಮೆರವಣಿಗೆ. ಇದು ಸಾರ್ವಜನಿಕರಿಗೊಂದು ಸುವರ್ಣಾವಕಾಶ ಚಿತ್ರದ ಒನ್ ಲೈನ್ ಸ್ಟೋರಿ.

    ಕವಲುದಾರಿ ನಂತರ ರಿಷಿ ನಟಿಸಿರುವ ಚಿತ್ರವಿದು. ಮದುವೆಯಾದ ಮೇಲೆ ರಿಲೀಸ್ ಆಗುತ್ತಿರುವ ರಿಷಿಯ ಮೊದಲ ಚಿತ್ರವೂ ಇದೇ. ರಿಷಿ ಎದುರು ಧನ್ಯಾ ರಾಮಕೃಷ್ಣ ನಾಯಕಿಯಾಗಿ ನಟಿಸಿದ್ದರೆ, ದತ್ತಣ್ಣ, ರಂಗಾಯಣ ರಘು, ಶಾಲಿನಿ, ಮಿತ್ರ ಮೊದಲಾದವರು ಪೋಷಕ ಪಾತ್ರಗಳಲ್ಲಿದ್ದಾರೆ.

    ಅಂದಹಾಗೆ ಈ ಚಿತ್ರಕ್ಕೆ ಕಥೆ ಜನಾರ್ದನ್ ಚಿಕ್ಕಣ್ಣ ಮತ್ತು ಹರಿಕೃಷ್ಣ ಅವರದ್ದು. ಅದೇ ಗುಳ್ಟು ಖ್ಯಾತಿಯ ಜನಾರ್ದನ್ ಚಿಕ್ಕಣ್ಣ. ನೆನಪಿದೆ ತಾನೆ. ಅನೂಪ್ ನಿರ್ದೇಶನದ ಚಿತ್ರಕ್ಕೆ ಪ್ರಶಾಂತ್ ರೆಡ್ಡಿ, ದೇವರಾಜ್ ರಾಮಣ್ಣ ಮತ್ತು ಜನಾರ್ದನ್ ಚಿಕ್ಕಣ್ಣ ನಿರ್ಮಾಪಕರು. ಅರ್ಧಕ್ಕರ್ಧ ಗುಳ್ಟು ಟೀಂ ಚಿತ್ರದಲ್ಲಿದೆ. ಡಿಸೆಂಬರ್ 20ರಂದು ಚಿತ್ರ ರಿಲೀಸ್ ಆಗುತ್ತಿದೆ.

  • ಅಪ್ಪು ಬ್ಯಾನರ್ ಫಸ್ಟ್ ಸಿನಿಮಾ ಸೆನ್ಸಾರ್ ಪಾಸ್ - ಕವಲುದಾರಿ ಫಸ್ಟ್ ಕ್ಲಾಸ್

    kavaludaari censored u/a

    ಕವಲುದಾರಿ, ಪುನೀತ್ ರಾಜ್‍ಕುಮಾರ್ ಅವರ ಪಿಆರ್‍ಕೆ ಬ್ಯಾನರ್‍ನ ಮೊದಲ ಸಿನಿಮಾ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ಯಶಸ್ವಿ ಚಿತ್ರ ಕೊಟ್ಟಿದ್ದ ಹೇಮಂತ್ ರಾವ್ ನಿರ್ದೇಶನದ ಸಿನಿಮಾ. ರಿಷಿ ಹೀರೋ ಆಗಿದ್ದರೆ, ರೋಹಿಣಿ ಪ್ರಕಾಶ್ ಹೀರೋಯಿನ್.

    ಅನಂತ್ ನಾಗ್, ಸುಮನ್ ರಂಗನಾಥ್, ಅಚ್ಯುತ್ ರಾವ್ ಅವರು ನಟಿಸಿರುವ ಚಿತ್ರ ಥ್ರಿಲ್ಲರ್ ಕಥೆ ಹೊಂದಿದೆ. ಈ ಚಿತ್ರಕ್ಕೀಗ ಸೆನ್ಸಾರ್ ಒಂದೇ ಒಂದು ಕಟ್ ಇಲ್ಲದೆ, ಮ್ಯೂಟ್ ಇಲ್ಲದೆ ಓಕೆ ಎಂದಿದೆ. ಯು/ಎ ಪ್ರಮಾಣ ಪತ್ರ ಕೊಟ್ಟಿದೆ. ಚಿತ್ರದ ಆಡಿಯೋ ನಾಳೆ ರಿಲೀಸ್ ಆಗುತ್ತಿದೆ. 

  • ಅಪ್ಪು ಹೊಸ ಹೆಜ್ಜೆಗೆ ಅಣ್ಣನ ಆಶೀರ್ವಾದ

    shivanna claps for appu's new movie

    ಪುನೀತ್ ರಾಜ್​ಕುಮಾರ್ ನಿರ್ಮಾಪಕರಾಗುತ್ತಿದ್ದಾರೆ. ಹಾಗೆಂದು ಅವರಿಗೆ ಚಿತ್ರ ನಿರ್ಮಾಣ ಹೊಸದೇನೂ ಅಲ್ಲ. ಈ ಹಿಂದೆ ತಂದೆ, ಅಣ್ಣಂದಿರ ಚಿತ್ರಗಳ ನಿರ್ಮಾಣದ ಹೊಣೆ ಹೊತ್ತು ಕೆಲಸ ಮಾಡಿದ ಅನುಭವ ಇದೆ. ಆದರೆ, ಈ ಬಾರಿ ಅವರು ಇಡುತ್ತಿರುವುದು ಕುಟುಂಬದ ಹಳೆಯ ಚಿತ್ರ ನಿರ್ಮಾಣ ಸಂಸ್ಥೆಯಿಂದ ಅಲ್ಲ. ಪಿಆರ್​ಕೆ ಪ್ರೊಡಕ್ಷನ್ಸ್ ಎಂಬ ಸಂಸ್ಥೆಯ ಮೂಲಕ ಚಿತ್ರ ನಿರ್ಮಾಣಕ್ಕಿಳಿದಿದ್ದಾರೆ ಪುನೀತ್ ರಾಜ್​ಕುಮಾರ್. ಅವರು ನಿರ್ಮಿಸುತ್ತಿರುವ ಚಿತ್ರ ಕವಲು ದಾರಿ.

    ನಿರ್ಮಾಪಕಿ ಸ್ಥಾನದಲ್ಲಿ ಅಶ್ವಿನಿ ಪುನೀತ್ ಇದ್ದಾರೆ. ಹೊಸ ಸಂಸ್ಥೆಯ ಮೂಲಕ, ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುತ್ತಿರುವ ಪುನೀತ್, ಈ ಚಿತ್ರದಲ್ಲಿ ಆಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿಯನ್ನು ನಾಯಕರನ್ನಾಗಿಸಿದ್ದಾರೆ. ಚಿತ್ರದ ನಿರ್ದೇಶಕ ಗೋಧಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್. ನಾಯಕಿಯಾಗಿರುವು ರೋಶನಿ ಪ್ರಕಾಶ್. ನಟ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

    ತಮ್ಮನ ಹೊಸ ಸಾಹಸಕ್ಕೆ ಶುಭ ಕೋರಿದ್ದು ಅಣ್ಣ ಶಿವರಾಜ್ ಕುಮಾರ್. ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದ್ದು ಕೂಡಾ ಅವರೇ. ಮುಹೂರ್ತದ ಸ್ಥಳಕ್ಕೆ ಆಗಮಿಸಿದ ಅಣ್ಣನಿಗೆ ಪುನೀತ್ ರಾಜ್​ಕುಮಾರ್ ನಮಸ್ಕರಿಸಿದಾಗ, ಪ್ರೀತಿಯಿಂದ ಅಪ್ಪಿಕೊಂಡು ಆಶೀರ್ವದಿಸಿದ್ದಾರೆ ಶಿವಣ್ಣ. ಚಿತ್ರದ ಮುಹೂರ್ತದಲ್ಲಿ ರಾಕ್​ಲೈನ್ ವೆಂಕಟೇಶ್, ರಕ್ಷಿತ್ ಶೆಟ್ಟಿ, ಗೀತಾ ಶಿವರಾಜ್ ಕುಮಾರ್, ಅಶ್ವಿನಿ ಪುನೀತ್ ​ರಾಜ್​ಕುಮಾರ್ ಕೂಡಾ ಇದ್ದು, ಪುನೀತ್ ಹೊಸ ಸಾಹಸಕ್ಕೆ ಶುಭ ಕೋರಿದರು. 

  • ಅಮೆರಿಕದಲ್ಲಿ ಕವಲುದಾರಿ ರಿಲೀಸ್

    kavaludaari to release in america his weekend

    ರಾಜ್ಯಾದ್ಯಂತ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿರುವ ಕವಲುದಾರಿ ಚಿತ್ರವನ್ನು ಅಮೆರಿಕದಲ್ಲಿ ಈ ವಾರ ರಿಲೀಸ್ ಮಾಡಲಾಗುತ್ತಿದೆ. ಅನಂತ್ ನಾಗ್, ರಿಷಿ, ಸುಮನ್ ರಂಗನಾಥ್, ಅಚ್ಯುತ್ ಕುಮಾರ್, ರೋಶನಿ ಪ್ರಕಾಶ್ ನಟನೆಯ ಚಿತ್ರಕ್ಕೆ ಗೋಧಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್ ನಿರ್ದೇಶನವಿದೆ.

    ಹಾಲಿವುಡ್ ಶೈಲಿಯ ಥ್ರಿಲ್ಲರ್‍ಗಳಂತೆ ತಣ್ಣಗೆ ಕಥೆ ಹೇಳಿ ಗೆದ್ದಿರುವ ಹೇಮಂತ್, ಪುನೀತ್ ರಾಜ್‍ಕುಮಾರ್ ಖುಷಿ ಪಡುವಂತೆ ಮಾಡಿದ್ದಾರೆ. ಮೊದಲ ನಿರ್ಮಾಣದ ಚಿತ್ರದಲ್ಲೇ ಮೆಚ್ಚುಗೆಯ ಮಹಾಪೂರ ಪಡೆದಿರುವ ಅಪ್ಪು, ಅಮೆರಿಕದಲ್ಲಿ 25ಕ್ಕೂ ಪ್ರಾಂತ್ಯಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ. 

    ಕ್ಯಾಲಿಫೋರ್ನಿಯಾ, ಜಾರ್ಜಿಯಾ, ಇಂಡಿಯಾನಾ, ಮಸಾಚುಸೆಟ್ಸ್, ನ್ಯೂಯಾರ್ಕ್, ಮಿಸ್ಸೌರಿ, ನ್ಯೂಜೆರ್ಸಿ, ಓಹಿಯೋ, ಒಕ್ಲಾಹಾಮಾ, ಪೆನ್ಸಿಲ್ವೇನಿಯಾ, ಟೆಕ್ಸಾಸ್, ವರ್ಜಿನಿಯಾ ಅಷ್ಟೇ ಅಲ್ಲ, ಅಮೆರಿಕದ ರಾಜಧಾನಿ ವಾಷಿಂಗ್ಟನ್‍ನಲ್ಲೂ ರಿಲೀಸ್ ಆಗುತ್ತಿದೆ. ಇದು ಅಮೆರಿಕದಲ್ಲಿರೋ ಕನ್ನಡ ಪ್ರೇಕ್ಷಕರಿಗಾಗಿ.

  • ಅರಿಶಿನ ಶಾಸ್ತç ಸಂಭ್ರಮದಲ್ಲಿ ರಿಷಿ

    actor rishi's wedding celebrations

    ಆಪರೇಷನ್ ಅಲಮೇಲಮ್ಮ, ಕವಲುದಾರಿ ಚಿತ್ರಗಳ ಮೂಲಕ ಕನ್ನಡ ಚಿತ್ರರಸಿಕರ ಹೃದಯಗೆದ್ದ ನಟ ರಿಷಿ. ಈಗ ಮದುವೆ ಸಂಭ್ರಮದಲ್ಲಿದ್ದಾರೆ. ಆರ್‌ಜೆ ನೇತ್ರಾ ಅವರ ತಮ್ಮ ರಿಷಿ, ಮದುವೆಯಾಗುತ್ತಿರುವ ಹುಡುಗಿಯ ಹೆಸರು ಸ್ವಾತಿ.

    ನವೆಂಬರ್ ೧೦ರಂದು ಚೆನ್ನೆöÊನಲ್ಲಿ ಮದುವೆ ನಡೆಯಲಿದ್ದು, ಅರಿಶಿಷಿನ ಶಾಸ್ತç, ಸಂಪ್ರದಾಯಗಳಲ್ಲಿ ರಿಷಿ ಸಂಭ್ರಮದಲ್ಲಿದ್ದಾರೆ. ರಿಷಿ ನಟನಾದರೆ, ಸ್ವಾತಿ ಸ್ಕಿçಪ್ಟ್ ರೈಟರ್. ರಿಷಿ ಹೊಸ ಪಾತ್ರಗಳ ಸೃಷ್ಟಿಯಲ್ಲಿ ಖುಷಿ ಕಂಡರೆ, ಸ್ವಾತಿ ಹೊಸ ಜಗತ್ತನ್ನೇ ಸೃಷ್ಟಿಸಿ ಆನಂದಿಸುವ ಬರಹಗಾರ್ತಿ. ಇದನ್ನು ಹೇಳಿಕೊಂಡಿರೋದು ಸ್ವತಃ ರಿಷಿ. ರಿಷಿ ಹೊಸ ಬದುಕಿಗೆ ಶುಭವಾಗಲಿ.

  • ಅಲಮೇಲಮ್ಮ ಶ್ರದ್ಧಾಗೆ ಈ ವಾರ ಡಬ್ಕುಡಬಲ್ ಧಮಾಕಾ

    operation almelamma movie image

    ಆಪರೇಷನ್ ಅಲಮೇಲಮ್ಮ ಜುಲೈ 21ಕ್ಕೆ ರಿಲೀಸ್ ಆಗ್ತಾ ಇದೆ. ಸಿಂಪಲ್ಲಾಗೊಂದ್ ಲವ್ ಸ್ಟೋರಿ ಖ್ಯಾತಿ ಸುನಿ ನಿರ್ದೇಶನದ ಚಿತ್ರವಾಗಿರೋದ್ರಿಂದ ನಿರೀಕ್ಷೆಗಳೂ ಜೋರಾಗಿವೆ. ಚಿತ್ರದ ಹೀರೋ ರಿಷಿ, ಹೀರೋಯಿನ್ ಶ್ರದ್ಧಾ ಶ್ರೀನಾಥ್. ಅದೇ ಯು ಟರ್ನ್ ಖ್ಯಾತಿಯ ಶ್ರದ್ಧಾ.

    ಆದರೆ, ಜುಲೈ 21 ಮಾತ್ರ ಶ್ರದ್ಧಾಗೆ ಡಬ್ಕುಡಬಲ್ ಧಮಾಕಾ. ಏಕೆ ಗೊತ್ತಾ..? ಶ್ರದ್ಧಾ ಅಭಿನಯದ ಮಾಧವನ್ ಜೊತೆ ನಟಿಸಿರುವ ವಿಕ್ರಂವೇದ ಚಿತ್ರವೂ ಜುಲೈ 21ಕ್ಕೆ ಬಿಡುಗಡೆಯಾಗ್ತಾ ಇದೆ. ಸಿಂಪಲ್ ಸುನಿ, ತಮ್ಮ ಚಿತ್ರಕ್ಕೆ ಒಂದೇ ಒಂದು ಕಟ್ ಇಲ್ಲದೆ ಯು ಸರ್ಟಿಫಿಕೇಟ್ ಪಡೆದಿದ್ದಾರೆ ಅನ್ನೋದು ಅವರಿಗೆ ಪ್ರಶಸ್ತಿಯೇ ಸಿಕ್ಕಷ್ಟು ಖುಷಿಯಾಗಿದ್ದರೆ ಅಚ್ಚರಿಯಿಲ್ಲ.

    ಯು ಸರ್ಟಿಫಿಕೇಟ್ ಸಿಕ್ಕಿದ್ದನ್ನೂ ಸುನಿ ತಮ್ಮದೇ ಸ್ಟೈಲ್ನಲ್ಲಿ ಹೇಳಿಕೊಂಡಿದ್ದರು. ಸೆನ್ಸಾರ್ ನವರು ಕೇಳಿದರು ನಿಮಗ್ಯಾವುದಿಷ್ಟ ಎಂದು? ನನಗೆ ನೀವಿಷ್ಟ ಎಂದೆ ಅವರಿಗರ್ಥವಾಗಲಿಲ್ಲ yo'U' ಸರ್ ಅಂದೆ.. ಕೊಟ್ಟುಬಿಟ್ಟರು ಎಂದು ಟ್ವೀಟ್ ಮಾಡಿದ್ದರು ಸುನಿ. ಇಂಥ ಸುನಿ ಚಿತ್ರ ಎಂದ ಮೇಲೆ ತುಂಟ ಮಾತುಗಳಿಗೆ ಬರವಿಲ್ಲ. ಕಾದು ನೋಡಿ. ಆಪರೇಷನ್ಗೆ ಸಿದ್ಧರಾಗಿ.

    Related Articles :-

    ಅಲಮೇಲಮ್ಮನ ಹಿಂದಿನ ತರಲೆ ತುಂಟಾಟ ಕಥೆ, ತರಲೆ ತರಲೆಯಾಗಿ

    Operation Alamelamma Gets U Certificate

    Operation Alamelamma Trailer Released

    Hombale Films Take Up Operation Alamelamma

     

  • ಈಜ್ ಹಿ ಓಕೆ ವಿತ್ ಮಿ..? - ರಿಷಿ ಕೇಳಿದ್ದ ಪ್ರಶ್ನೆ

    is he okay with me says rishi

    ಪುನೀತ್ ರಾಜ್‍ಕುಮಾರ್, ತಮ್ಮದೇ ಬ್ಯಾನರ್‍ನಲ್ಲಿ ಸಿನಿಮಾ ಮಾಡ್ತಿದ್ದಾರೆ. ಅವರ ಬ್ಯಾನರ್‍ನ ಮೊದಲ ಚಿತ್ರಕ್ಕೆ ನಾನೇ ನಿರ್ದೇಶಕ. ನೀವೇ ಹೀರೋ.. ಡೈರೆಕ್ಟರ್ ಹೇಮಂತ್ ರಾವ್ ಈ ಮಾತು ಹೇಳಿದಾಗ ರಿಷಿ ಕೇಳಿದ್ದ ಮೊದಲ ಪ್ರಶ್ನೆಯೇ ಅದು.. ಈಜ್ ಹಿ ಓಕೆ ವಿತ್ ಮಿ..?

    ಅಫ್‍ಕೋರ್ಸ್.. ಆಗ ತಾನೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ರಿಷಿಗೆ ಪುನೀತ್ ಬ್ಯಾನರ್‍ನ ಮೊದಲ ಸಿನಿಮಾಗೆ ಹೀರೋ ಆಗು ಎಂದರೆ ಆ ಪ್ರಶ್ನೆ ಮೂಡುವುದು ಸಹಜ. ಆದರೆ, ಪುನೀತ್‍ಗೆ ಆಪರೇಷನ್ ಅಲಮೇಲಮ್ಮ ಸಿನಿಮಾ, ರಿಷಿಯ ಆಕ್ಟಿಂಗ್ ಇಷ್ಟವಾಗಿತ್ತು. ಹೀಗಾಗಿಯೇ ಹೇಮಂತ್ ರಾವ್ ಅವರ ಬಳಿ, ಕವಲುದಾರಿ ಕಥೆಗೆ ಅವರು ಓಕೆಯಾಗ್ತಾರಾ..? ನಟಿಸ್ತಾರಾ..? ಕೇಳಿ ನೋಡಿ ಎಂದಿದ್ದರು. ಈಗ ಕವಲುದಾರಿ ಥಿಯೇಟರುಗಳ ಬಾಗಿಲಲ್ಲಿ ನಿಂತಿದೆ.

    ಈ ಚಿತ್ರದಲ್ಲಿನ ನನ್ನ ಪಾತ್ರವನ್ನು ಯೂನಿಫಾರ್ಮ್ ತೊಟ್ಟ ಪ್ರತಿಯೊಬ್ಬ ಪ್ರಾಮಾಣಿಕ ಅಧಿಕಾರಿಯೂ ತನಗೆ ರಿಲೇಟ್ ಮಾಡಿಕೊಳ್ತಾರೆ. ಇದೊಂದು ಪೊಲಿಟಿಕಲ್ ಥ್ರಿಲ್ಲರ್. ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಕಥೆ ಎಂದಿದ್ದಾರೆ ರಿಷಿ.

    ರಿಷಿ ಚಿತ್ರದಲ್ಲಿ ಅನಂತ್ ನಾಗ್ ಎದುರು ನಟಿಸಿದ್ದಾರೆ. ಥ್ರಿಲ್ಲಾಗಿಯೇ ನಟಿಸಿದ್ದ ಅವರಿಗೆ ಪ್ರತಿ ಹಂತದಲ್ಲೂ ನೆರವಾಗಿರುವುದು ರಂಗಭೂಮಿಯ ಅನುಭವ. ರಂಗಭೂಮಿ, ಪ್ರತಿಯೊಬ್ಬ ಕಲಾವಿದನ ಸ್ಟ್ರೆಂಗ್ತ್ ಮತ್ತು ವೀಕ್ನೆಸ್ ಎರಡನ್ನೂ  ಪರಿಚಯ ಮಾಡಿಸುತ್ತೆ ಎನ್ನುವ ರಿಷಿ, ಕವಲುದಾರಿ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

  • ಐಪಿಎಲ್‍ನಲ್ಲೂ ಕವಲುದಾರಿ ಗುಂಗು

    kavaludaari reached out to ipl as well

    ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿರ್ಮಾಣದ ಮೊದಲ ಚಿತ್ರ ಕವಲುದಾರಿ ಚಿತ್ರದ ಟ್ರೇಲರ್ ಅದ್ಭುತ ಸದ್ದು ಮಾಡುತ್ತಿದೆ. ಎಷ್ಟರಮಟ್ಟಿಗೆಂದರೆ ಐಪಿಎಲ್‍ನಲ್ಲೂ ಕವಲುದಾರಿ ಗುಂಗು.

    ಇತ್ತೀಚೆಗೆ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕವಲುದಾರಿ ಚಿತ್ರದ ಟ್ರೇಲರ್ ಪ್ರದರ್ಶನಗೊಂಡಿದೆ. ಅಷ್ಟೇ ಅಲ್ಲ, ನಿರ್ದೇಶಕ ಹೇಮಂತ್ ರಾವ್ ಅವರ ಹೊಸ ಐಡಿಯಾ ಟಿಶ್ಯೂಪೇಪರ್‍ನಲ್ಲಿ ಪ್ರಚಾರ ಜಾರಿಯಾಗಿರುವುದು ಕೂಡಾ ಅಲ್ಲೇ. ಸುಮಾರು 2 ಲಕ್ಷ ಜನಕ್ಕೆ ಈಗಾಗಲೇ ಟಿಶ್ಯೂ ಪೇಪರ್ ಮೂಲಕ ಸಿನಿಮಾ ರೀಚ್ ಮಾಡಿಸಿರುವ ಚಿತ್ರತಂಡ, ಸಿನಿಮಾವನ್ನು ವಿಭಿನ್ನವಾಗಿ ಪ್ರಚಾರ ಮಾಡುತ್ತಿದೆ.

    ಅನಂತ್ ನಾಗ್, ರಿಷಿ, ಸುಮನ್ ರಂಗನಾಥ್, ರೋಶನಿ ಪ್ರಕಾಶ್, ಅಚ್ಯುತ್ ಕುಮಾರ್ ಅಭಿನಯದ ಸಿನಿಮಾ ಇದು. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ನಿರ್ದೇಶಕ ಹೇಮಂತ್ ರಾವ್ ನಿರ್ದೇಶಿಸಿರುವ  ಸಿನಿಮಾ ಕವಲುದಾರಿ.

  • ಕವಲು ದಾರಿಯಲ್ಲಿ ಹೊಸ ಪ್ರತಿಭೆಗಳ ದಂಡು

    kavaludaari movie image

    ಕವಲು ದಾರಿ. ಪುನೀತ್ ರಾಜ್‍ಕುಮಾರ್ ನಿರ್ಮಿಸುತ್ತಿರುವ ಸಿನಿಮಾ. ಅವರದ್ದೇ ಆದ ಪಿಆರ್‍ಕೆ ಬ್ಯಾನರ್‍ನಲಿ ರಿಷಿ ನಾಯಕರಾಗಿರುವ ಸಿನಿಮಾ. ಗೋಧಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್ ನಿರ್ದೇಶಕ. ಹೊಸ ಪ್ರತಿಭೆಗಳಿಗೆ ಆದ್ಯತೆ ನೀಡುವುದಾಗಿ ಹೇಳಿದ್ದ ಪುನೀತ್, ಅದಕ್ಕೆ ತಕ್ಕಂತೆ ಕವಲು ದಾರಿಯಲ್ಲಿ ಹೊಸ ಹೊಸ ಮುಖಗಳಿಗೇ ಆದ್ಯತೆ ಕೊಡುತ್ತಿದ್ದಾರೆ.

    ಚಿತ್ರದ ಎರಡು ಪ್ರಮುಖ ಪಾತ್ರಗಳಿಗೆ ಸಮನ್ವಿತಾ ಶೆಟ್ಟಿ ಹಾಗೂ ಸಿರಿ ರವಿಕುಮಾರ್ ಎಂಬ ಹೊಸ ತಾರೆಯರ ಆಗಮನವಾಗಿದೆ. ಇನ್ನು ಮಾರಿಕೊಂಡವರು ಚಿತ್ರದ ಮೂಲಕ ಗಮನ ಸೆಳೆದಿದ್ದ ಸುಲಿಲ್ ಕುಮಾರ್‍ಗೂ ಚಿತ್ರದಲ್ಲೊಂದು ಉತ್ತಮ ಪಾತ್ರವಿದೆ. ಒಟ್ಟಿನಲ್ಲಿ ಕವಲು ದಾರಿಯಲ್ಲಿ  ನವ ಪ್ರತಿಭೆಗಳ ಮಿಲನವಾಗುತ್ತಿದೆ.

    Related Articles :-

    ಕವಲು ದಾರಿಯಲ್ಲಿ ಚಿರಯೌವ್ವನೆ ಸುಮನ್ ರಂಗನಾಥ್

    Kavalu Daari Launched On Friday

    Hemanth Rao's 'Kavalu Daari' To Be Launched on Sep 22nd

    First Poster Of Kavalu Daari Released

    Ardha Satya is Now Kavalu Daari

    Hemanth Rao's New Film Titled Kavalu Daari

  • ಕವಲುದಾರಿ ಟೀಸರ್ ಸೂಪರ್‍ಹಿಟ್

    kavaludari teaser is superhit

    ಪುನೀತ್ ರಾಜ್‍ಕುಮಾರ್ ಬ್ಯಾನರ್‍ನ ಮೊದಲ ಸಿನಿಮಾ ಕವಲುದಾರಿ ಚಿತ್ರದ ಟೀಸರ್ ಹೊರಬಿದ್ದಿದೆ. ಅಮೆರಿಕದಲ್ಲಿ ಬಿಡುಗಡೆ ಮಾಡಿರುವ ಚಿತ್ರದ ಟೀಸರ್‍ನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ರಿಲೀಸ್ ಮಾಡಿದ್ದಾರೆ ಪುನೀತ್. 

    ಇತ್ತೀಚೆಗಷ್ಟೇ ಟ್ವಿಟರ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಪುನೀತ್ ರಾಜ್‍ಕುಮಾರ್ ಮಾಡಿರುವ ಮೊದಲ ಟ್ವೀಟ್ ಇದು. ಕವಲುದಾರಿ ಟೀಸರ್. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ರಾವ್ ನಿರ್ದೇಶನದ ಕವಲುದಾರಿಯಲ್ಲಿ ಥ್ರಿಲ್ಲರ್ ಕಥೆಯಿದೆ. ಅಮೆರಿಕದಿಂದ ಬಂದ ಮೇಲೆ ಪುನೀತ್ ಸರ್ ಸಿನಿಮಾ ನೋಡುತ್ತಾರೆ. ಅವರೂ ಕೂಡಾ ಎಕ್ಸೈಟ್ ಆಗಿದ್ದಾರೆ. ಅಕ್ಟೋಬರ್‍ನಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎಂದಿದ್ದಾರೆ ಹೇಮಂತ್ ರಾವ್. ಅನಂತ್‍ನಾಗ್, ರೋಷಿನಿ ಪ್ರಕಾಶ್ ಅಭಿನಯದ ಚಿತ್ರದಲ್ಲಿ ಅಲಮೇಲಮ್ಮ ಖ್ಯಾತಿಯ ರಿಷಿ ಹೀರೋ.

    Related Articles :-

    'Kavalu Daari' Teaser Released

  • ಕವಲುದಾರಿ ನೋಡಿ.. ಆಮೇಲೆ ವೋಟ್ ಮಾಡಿ

    kavaludaari is all about political thriller

    ನನಗೂ ರಾಜಕೀಯಕ್ಕೂ ಸಂಬಂಧವಿಲ್ಲ, ಯಾರ ಪರವೂ, ವಿರುದ್ಧವೂ ಪ್ರಚಾರ ಮಾಡಲ್ಲ ಎಂದಿರುವ ಪುನೀತ್, ಮರೆಯದೇ ವೋಟ್ ಮಾಡಿ ಎನ್ನುವುದನ್ನು ಮರೆಯುವುದಿಲ್ಲ. ಹಾಗೆ ವೋಟ್ ಮಾಡಿ ಎನ್ನುತ್ತಲೇ, ಮತದಾರರ ಮನಸ್ಸಿನ ಮೇಲೆ ಪ್ರಭಾವ ಬೀರುವಂತಹಾ ಸಿನಿಮಾವನ್ನು ನಿರ್ಮಿಸಿ ಪ್ರೇಕ್ಷಕರ ಎದುರು ಇಟ್ಟಿದ್ದಾರೆ ಪುನೀತ್.

    ಈ ಸಿನಿಮಾ ನೋಡಿದ ಮೇಲೆ ಮತದಾರ ಖಂಡಿತಾ ಬದಲಾಗ್ತಾನೆ. ನಾನು ಯಾರಿಗೆ ವೋಟ್ ಹಾಕಬೇಕು ಅನ್ನೋದನ್ನು ಯೋಚಿಸುತ್ತಾನೆ. ತಮ್ಮ ಅಭ್ಯರ್ಥಿ ಯಾರು ಅನ್ನೋದನ್ನು ಖಂಡಿತಾ ತಿಳಿದುಕೊಳ್ಳೋ ಪ್ರಯತ್ನ ಮಾಡ್ತಾನೆ. ಮತ ಹಾಕುವ ಮುನ್ನ ಪ್ರತಿಯೊಬ್ಬ ಮತದಾರನನ್ನೂ ಅಭ್ಯರ್ಥಿಯ ಬಗ್ಗೆ ಯೋಚಿಸುವಂತೆ ಮಾಡಲಿದೆ ಈ ಸಿನಿಮಾ ಎನ್ನುವುದು ನಿರ್ದೇಶಕ ಹೇಮಂತ್ ರಾವ್ ಮಾತು.

    ಹಾಗಾದರೆ ಚಿತ್ರದಲ್ಲಿ ಅಂಥದ್ದೇನಿದೆ.. ತುಂಬಾ ಲೇಟ್ ಏನಿಲ್ಲ. ಸಿನಿಮಾ ರಿಲೀಸ್‍ಗೆ ಕ್ಷಣಗಣನೆ ಶುರುವಾಗಿದೆ.

  • ಕವಲುದಾರಿ ರಿಷಿ ಹೊಸ ಸಿನಿಮಾ : ನೋಡಿ ಸ್ವಾಮಿ ಇವನಿರೋದೇ ಹೀಗೆ..

    ಕವಲುದಾರಿ ರಿಷಿ ಹೊಸ ಸಿನಿಮಾ : ನೋಡಿ ಸ್ವಾಮಿ ಇವನಿರೋದೇ ಹೀಗೆ..

    ನೋಡಿ ಸ್ವಾಮಿ ನಾವಿರೋದೆ ಹೀಗೆ.. ಟೈಟಲ್ ಕೇಳಿದೊಡನೆ ಕನ್ನಡಿಗರ ಕಣ್ಣ ಮುಂದೆ ಶಂಕರ್ ನಾಗ್ ಬರುತ್ತಾರೆ. ಈಗ ರಿಷಿ ನೋಡಿ ಸ್ವಾಮಿ ಇವನಿರೋದೆ ಹೀಗೆ ಅನ್ನೋ ಟೈಟಲ್ ಸಿನಿಮಾದಲ್ಲಿ ಹೀರೋ ಆಗುತ್ತಿದ್ದಾರೆ. ಆಪರೇಷನ್ ಅಲಮೇಲಮ್ಮ, ಕವಲುದಾರಿ ನಂತರ ರಿಷಿ ನಟಿಸುತ್ತಿರುವ ಚಿತ್ರವಿದು.

    ಲವ್ ಫೆಲ್ಯೂರ್ ಆದ ನಾಯಕ ಆತ್ಮಹತ್ಯೆ ಮಾಡಿಕೊಳ್ಳಲು ಹೊರಡುತ್ತಾನೆ. ಆತ್ಮಹತ್ಯೆ ಮಾಡಿಕೊಳ್ಳೋಕೆ ಆತ ಏನೇನೆಲ್ಲ ಸಾಹಸ ಮಾಡುತ್ತಾನೆ ಎನ್ನುವುದೇ ಚಿತ್ರದ ಸ್ಟೋರಿ. ಅದರಿಂದಾಗುವ ಅನಾಹುತಗಳೇ ಚಿತ್ರದ ಚಿತ್ರ ಕಥೆ. ನನ್ನ ಪಾತ್ರದ ಹೆಸರು ಸಾಯಿಕುಮಾರ್ ಎಂದಿದ್ದಾರೆ ರಿಷಿ.

    ರಿಷಿಗೆ ಹೀರೋಯಿನ್ ಆಗಿರುವುದು ಧನ್ಯಾ ಬಾಲಕೃಷ್ಣ. ಕನ್ನಡದಲ್ಲಿ ನೋಡಿ ಸ್ವಾಮಿ ಇವನಿರೋದೆ ಹೀಗೆ ಚಿತ್ರ ತೆಲುಗಿನಲ್ಲಿ `ವದ್ದುರಾ ಸೋದರ' ಟೈಟಲ್‍ನಲ್ಲಿ ಬರಲಿದೆ. ಆಮ್ರೇಜ್ ಸೂರ್ಯವಂಶಿ ನಿರ್ಮಾಪಕರಾಗಿರುವ ಚಿತ್ರಕ್ಕೆ ಇಸ್ಲಾವುದ್ದೀನ್ ನಿರ್ದೇಶಕ.

  • ಕವಲುದಾರಿ ರಿಷಿಗೆ ಆಪರೇಷನ್ ಮದುವೆ 

    kavaludaari rishi engaged

    ಆಪರೇಷನ್ ಅಲಮೇಲಮ್ಮ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿ, ಕವಲುದಾರಿಯಲ್ಲಿ ಮನಸೂರೆಗೊಂಡ ನಟ ರಿಷಿ, ಈಗ ಮದುವೆಯ ಆಪರೇಷನ್‍ಗೆ ಒಳಗಾಗಿದ್ದಾರೆ. ರಂಗಭೂಮಿಯಿಂದ ಬಣ್ಣದ ಲೋಕಕ್ಕೆ ಬಂದ ರಿಷಿಗೆ, ಪ್ರೇಮದ ಲೋಕ ಸೇರಿದ್ದು ಕೂಡಾ ರಂಗಭೂಮಿಯಲ್ಲಿದ್ದಾಗಲೇ ಎನ್ನುವುದು ವಿಶೇಷ. ರಿಷಿ ಮದುವೆಯಾಗುತ್ತಿರುವ ಹುಡುಗಿ ಸ್ವಾತಿ. ತಮಿಳಿನವರು.

    ನನ್ನ ಅವರ ಪರಿಚಯ ಆಗಿದ್ದು ರಂಗಭೂಮಿಯಲ್ಲಿ. ನಾಟಕವೊಂದರ ರಿಹರ್ಸಲ್‍ನಲ್ಲಿ ಮೊದಲ ಬಾರಿಗೆ ಭೇಟಿಯಾದೆವು. 2 ವರ್ಷದ ಸ್ನೇಹ, ಒಂದ ವರ್ಷದ ಪ್ರೀತಿ ಎನ್ನುವ ರಿಷಿ, ಸ್ವಾತಿಗೆ ಕನ್ನಡವನ್ನೂ ಕಲಿಸಿಬಿಟ್ಟಿದ್ದಾರೆ.

    ತಮಿಳುನಾಡು ಮೂಲದ ಸ್ವಾತಿ ಓದಿದ್ದು, ಬೆಳೆದಿದ್ದು ಜಪಾನ್‍ನಲ್ಲಿ. ಸದ್ಯಕ್ಕೆ ಬೆಂಗಳೂರಿನಲ್ಲೇ ಇರುವ ಸ್ವಾತಿ, ಕಂಪೆನಿಗಳಿಗೆ ಕಂಟೆಂಟ್ ರೈಟರ್ ಆಗಿದ್ದಾರೆ. ರಂಗಭೂಮಿ ನಂಟಿದ್ದರೂ, ಬರವಣಿಗೆಯನ್ನೇ ವೃತ್ತಿ ಮಾಡಿಕೊಂಡಿದ್ದಾರೆ ಸ್ವಾತಿ. ಇಬ್ಬರ ಮದುವೆಗೆ ಹಿರಿಯರು ಓಕೆ ಎಂದಿದ್ದು, ನಿಶ್ಚಿತಾರ್ಥವೂ ಆಗಿದೆ. 

  • ಕವಲುದಾರಿ.. 3ನೇ ವಾರ.. 6 ಕೋಟಿ..

    kavaludaari running successfully

    ಪಿಆರ್‍ಕೆ ಬ್ಯಾನರ್‍ನ ಮೊದಲ ಸಿನಿಮಾ ಕವಲುದಾರಿ, ಗೆಲುವಿನ ನಗಾರಿ ಬಾರಿಸಿದೆ. ಚಿತ್ರ 2 ವಾರ ಪೂರೈಸಿ, 3ನೇ ವಾರಕ್ಕೆ ಕಾಲಿಟ್ಟಿದೆ. ದೇಶ ವಿದೇಶದಲ್ಲೂ ಸದ್ದು ಮಾಡುತ್ತಿರುವ ಚಿತ್ರ ಈಗಾಗಲೇ 6 ಕೋಟಿ ಲಾಭ ಗಳಿಸಿದೆಯಂತೆ. ಚಿತ್ರತಂಡವೇ ಈ ವಿಷಯವನ್ನು ಅಧಿಕೃತವಾಗಿ ಹೇಳಿಕೊಂಡಿರೋದು ವಿಶೇಷ.

    ಕವಲುದಾರಿ ರಾಜ್ಯಾದ್ಯಂತ 180 ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಒಳ್ಳೆಯ ಚಿತ್ರಗಳನ್ನು ಜನ ಯಾವತ್ತೂ ಕೈಬಿಟ್ಟಿಲ್ಲ ಎನ್ನುವುದಕ್ಕೆ ಕವಲುದಾರಿ ಮತ್ತೊಂದು ಸಾಕ್ಷಿ ಎಂದಿದ್ದಾರೆ ನಿರ್ದೇಶಕ ಹೇಮಂತ್ ರಾವ್. ಗೋಧಿಬಣ್ಣ ನಂತರ ಸುದೀರ್ಘ ಗ್ಯಾಪ್ ಬಳಿಕ ಬಂದ ಹೇಮಂತ್ ರಾವ್, ಇದು 2ನೇ ಸತತ ಸಕ್ಸಸ್ಸು.

    ನಾಯಕ ನಟ ರಿಷಿ, ಅನಂತ್‍ನಾಗ್ ಕೂಡಾ ಫುಲ್ ಹ್ಯಾಪಿ. ಏಕೆಂದರೆ, ರಿಷಿಗೂ ಇದು ಸತತ 2ನೇ ಯಶಸ್ಸು. ಅನಂತ್‍ನಾಗ್‍ಗೆ, ಹೇಮಂತ್ ಮೇಲಿಟ್ಟ ವಿಶ್ವಾಸ ಈ ಬಾರಿಯೂ ಗೆದ್ದಿತು ಎಂಬ ಖುಷಿ. 

    ಇದರ ಜೊತೆಗೆ ಕವಲುದಾರಿಯ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂಗೆ ರೀಮೇಕ್ ರೈಟ್ಸ್‍ಗೆ ಮಾತುಕತೆ ನಡೆಯುತ್ತಿದೆ. ಪುನೀತ್ ನಿರ್ಮಾಪಕರಾಗಿ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ.

  • ಕವಲುದಾರಿಯ ರೋಷನಿಗೆ ಮೇಕಪ್ಪೇ ಇಲ್ಲ..!

    roshini prakash acts in kavaludaari with no makeup

    ಕವಲುದಾರಿ ಚಿತ್ರದ ಹೀರೋಯಿನ್ ರೋಷನಿ ಪ್ರಕಾಶ್. ಹೆಸರಿನಲ್ಲೇ ಸೂರ್ಯನನ್ನೂ, ಬೆಳಕಿನ ಪ್ರಕಾಶವನ್ನೂ ಹೊಂದಿರುವ ಈ ಚೆಲುವೆಗೆ ನಿರ್ದೇಶಕ ಹೇಮಂತ್ ರಾವ್ ಮೇಕಪ್ಪನ್ನೇ ಹಾಕಿಸಿಲ್ಲ. ಕಾರಣ ಇಷ್ಟೆ, ಕವಲುದಾರಿಯಲ್ಲಿ ರೋಷನಿಯದ್ದು ಪ್ರಿಯಾ ಎಂಬ ಯುವತಿಯ ಪಾತ್ರ. ಜರ್ನಲಿಸ್ಟ್ ಆಗಿರುವ ಅಪ್ಪ, ಪದೇ ಪದೇ ಮಾಡಿಕೊಳ್ಳುವ ಎಡವಟ್ಟುಗಳಿಂದ ಕುಟುಂಬವನ್ನು ಸಂಕಷ್ಟಕ್ಕೆ ದೂಡುತ್ತಾರೆ. ಆ ಪಾತ್ರದಲ್ಲಿ ಅಚ್ಯುತ್ ಕುಮಾರ್ ನಟಿಸಿದ್ದರೆ, ಅವರ ಮಗಳಾಗಿ, ಇಡೀ ಮನೆಯ ಜವಾಬ್ದಾರಿ ಹೊತ್ತು ನಿಲ್ಲುವ ಪಾತ್ರ ರೋಷನಿ ನಟಿಸಿರುವ ಪ್ರಿಯಾ ಎಂಬ ಪಾತ್ರದ್ದು.

    ಆ ಪಾತ್ರಕ್ಕೆ ಮೇಕಪ್ ಬೇಕಿರಲಿಲ್ಲ. ವಿಶೇಷ ಕೇಶವಿನ್ಯಾಸವೂ ಬೇಕಿರಲಿಲ್ಲ. ಒಬ್ಬ ಮಧ್ಯಮವರ್ಗದ ಮನೆಯ ಹುಡುಗಿ ಹೇಗಿರುತ್ತಾಳೋ ಹಾಗೆ ಇರಬೇಕಿತ್ತು. ಹಾಗೆಯೇ ನಟಿಸಿದ್ದೇನೆ ಎಂದಿದ್ದಾರೆ ರೋಷನಿ.

    ಚಿತ್ರವನ್ನು ಒಪ್ಪಿಕೊಳ್ಳೋಕೆ ಮೊದಲನೇ ಕಾರಣ, ಅದು ಪುನೀತ್ ಸರ್ ಬ್ಯಾನರ್ ಎನ್ನುವುದು, ಎರಡನೇ ಕಾರಣ ನಿರ್ದೇಶಕ ಹೇಮಂತ್ ರಾವ್, 3ನೇ ಕಾರಣ ಅನಂತ್ ಸರ್ ಇರುತ್ತಾರೆ ಎನ್ನುವುದು.. ಹೀಗೆ ಲಿಸ್ಟುಗಳ ಸರಮಾಲೆ ಒಪ್ಪಿಸುವ ರೋಷನಿ, ಅಚ್ಯುತ್ ಕುಮಾರ್ ನಟನೆಗೆ ಬೆರಗಾಗಿದ್ದರಂತೆ.

    ಅವರು ಅಳುವಾಗ, ನಗುವಾಗ ಅದು ನಟನೆಯೋ.. ನಿಜಕ್ಕೂ ಹಾಗಿದ್ದಾರೋ ಎಂದು ಕನ್‍ಫ್ಯೂಸ್ ಆಗುವಷ್ಟು ಸಹಜವಾಗಿ ನಟಿಸುತ್ತಿದ್ದರು. ಅವರಿಂದ ಕಲಿತದ್ದು ಅಪಾರ ಎಂದಿದ್ದಾರೆ ರೋಷನಿ. 

     

  • ಕವಲುದಾರಿಯಲ್ಲಿ ರಾಜಕೀಯದ ಕ್ರೈಂ ವಲ್ರ್ಡ್

    kavaludaari is political crime thriller

    ಕವಲುದಾರಿ ಚಿತ್ರದಲ್ಲಿರೋ ಕಥೆ ಏನು..? ಪಿಆರ್‍ಕೆ ಬ್ಯಾನರ್‍ನ ಮೊದಲ ಸಿನಿಮಾ ಎಂಬ ಕಾರಣಕ್ಕೆ ಕುತೂಹಲ ಸೃಷ್ಟಿಸಿರುವ ಚಿತ್ರದಲ್ಲಿ ನಿರೀಕ್ಷೆ ಹುಟ್ಟಿಸಿರುವುದು ಅದೊಂದೇ ಅಲ್ಲ. ನಿರ್ದೇಶಕ ಹೇಮಂತ್ ರಾವ್, ಅನಂತ್ ನಾಗ್ ಜೋಡಿ ಮತ್ತೊಮ್ಮೆ ಜೊತೆಯಾಗಿದೆ. ಅಜನೀಶ್ ಸಂಗೀತ ಅದ್ಭುತವಾಗಿ ಕೇಳಿಸುತ್ತಿದೆ. ರಿಷಿ, ಡಿಫರೆಂಟಾಗಿ ಕಾಣಿಸುತ್ತಿದ್ದರೆ, ಸುಮನ್ ರಂಗನಾಥ್ ಮತ್ತಷ್ಟು ಸುಂದರಿಯಾಗಿ ಕಂಗೊಳಿಸುತ್ತಿದ್ದಾರೆ. ಇದೆಲ್ಲದರ ನಡುವೆ ಇದೊಂದು ಕ್ರೈಂ ಥ್ರಿಲ್ಲರ್ ಕಥೆ ಎಂಬುದೇ ಕುತೂಹಲ.

    ಅನಂತ್ ನಾಗ್ ಪಾತ್ರದ ಹೆಸರು ಮುತ್ತಣ್ಣ. ಅದು ಜಮ್ಮುಕಾಶ್ಮೀರದಲ್ಲಿ ಹುತಾತ್ಮರಾದ ಯೋಧನೊಬ್ಬನ ಹೆಸರು. ಚಿತ್ರದಲ್ಲಿ ಅನಂತ್ ನಿವೃತ್ತ ಪೊಲೀಸ್ ಅಧಿಕಾರಿಯ ಪಾತ್ರ. ಅವರ ಬಳಿಗೆ ಟ್ರಾಫಿಕ್ ಪೊಲೀಸ್ ಅಧಿಕಾರಿ ರಿಷಿ, ತಮ್ಮ ಮುಂದೆ ಇರುವ ಕೇಸ್‍ಗಳ ಅನುಮಾನ ಬಗೆಹರಿಸಿಕೊಳ್ಳೋಕೆ ಬರುತ್ತಾರೆ. ರಿಷಿ, ಕ್ಲೂಗಳನ್ನು ಹುಡುಕಿ ತೆಗೆಯುವುದರಲ್ಲಿ ಎಕ್ಸ್‍ಪರ್ಟ್. 

    ಹೀಗೆ ಸಾಗುತ್ತಾ ಹೋಗುವ ಕಥೆಯಲ್ಲಿ ನಿಜಕ್ಕೂ ಹೈಲೈಟ್ ಆಗಿರುವುದು ರಾಜಕೀಯ ಮತ್ತು ಕ್ರೈಂ. 

    ನಾನು ರಾಜಕೀಯದಲ್ಲೂ ಇದ್ದು ಬಂದವನು. ಹೀಗಾಗಿ ಇದು ನನಗೆ ವಾಸ್ತವಕ್ಕೆ ಹತ್ತಿರ ಎನಿಸಿತು. ಕಥೆ ಇಷ್ಟವಾಯಿತು ಎನ್ನುತ್ತಾರೆ ಅನಂತ್‍ನಾಗ್.

    ರಾಜಕೀಯ ಮತ್ತು ಕ್ರೈಂ ಬೇರೆಬೇರೆಯಾಗಿಯೇನೂ ಉಳಿದಿಲ್ಲ. ಆದರೆ, ನೇರವಾಗಿ ಹೇಳುವುದಕ್ಕೂ ಸಾಧ್ಯವಿಲ್ಲ. ಹೀಗಿರುವಾಗ, ಈ ಚಿತ್ರದಲ್ಲಿ ಅವುಗಳನ್ನು ಹೇಗೆ ಹೇಳಿದ್ದಾರೆ ಎನ್ನುವುದೇ ಕವಲುದಾರಿ ಕುತೂಹಲ.