` amitabh bacchan, - chitraloka.com | Kannada Movie News, Reviews | Image

amitabh bacchan,

  • 10 ವರ್ಷದ ನಂತರ ಕಿಚ್ಚನಿಗೆ ಸಿಕ್ಕ ಅತಿದೊಡ್ಡ ಕಾಣಿಕೆ

    sudeep thrilled meeting amitab bachchan after 10 years

    ಕಿಚ್ಚ ಸುದೀಪ್ ಬಾಲಿವುಡ್‍ನಲ್ಲಿ ಅಮಿತಾಬ್ ಬಚ್ಚನ್ ಜೊತೆ ನಟಿಸಿದ್ದಾರೆ ಎನ್ನುವುದು ಕನ್ನಡಿಗರಿಗೆ ಹೆಮ್ಮೆಯ ವಿಷಯ. ಚಿತ್ರರಂಗದ ದಂತಕತೆ ಎಂದೇ ಕರೆಸಿಕೊಳ್ಳುವ ಕಲಾವಿದನೊಟ್ಟಿಗೆ ನಟಿಸುವಾಗ ಎಂತಹ ಕಲಾವಿದನೂ ಥ್ರಿಲ್ ಆಗುತ್ತಾನೆ. ಅದೃಷ್ಟ ಎಂದು ಭಾವಿಸುತ್ತಾನೆ. ಸುದೀಪ್ ಅಂತಹ ಅದೃಷ್ಟವಂತ. 

    10 ವರ್ಷಗಳ ಹಿಂದೆ ರಣ್ ಎಂಬ ಚಿತ್ರ ಬಂದಿತ್ತು. ಆ ಚಿತ್ರದಲ್ಲಿ ಸುದೀಪ್, ಅಮಿತಾಬ್ ಬಚ್ಚನ್ ಮಗನ ಪಾತ್ರದಲ್ಲಿ ನಟಿಸಿದ್ದರು. ರಾಮ್‍ಗೋಪಾಲ್ ವರ್ಮಾ ನಿರ್ದೇಶನದ ಸಿನಿಮಾ ರಣ್, ಸುದೀಪ್ ವೃತ್ತಿಬದುಕಿನಲ್ಲೊಂದು ಮೈಲಿಗಲ್ಲು.

    10 ವರ್ಷಗಳ ಹಿಂದೆ ಸಿಕ್ಕಿದ್ದ ಅಂಥದ್ದೇ ಥ್ರಿಲ್‍ನ್ನು ಸುದೀಪ್ ಮತ್ತೊಮ್ಮೆ ಅನುಭವಿಸಿದ್ದಾರೆ. ಅದು ಸೈರಾ ಚಿತ್ರದಲ್ಲಿ. ತೆಲುಗಿನಲ್ಲಿ ಚಿರಂಜೀವಿ ನಟಿಸುತ್ತಿರುವ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಸುದೀಪ್ ಕೂಡಾ ಪ್ರಮುಖ ಪಾತ್ರದಲ್ಲಿದ್ದಾರೆ. ಸೈರಾ ನರಸಿಂಹ ರೆಡ್ಡಿ ಎಂಬ ಸ್ವಾತಂತ್ರ್ಯ ಹೋರಾಟಗಾರನ ಜೀವನಚರಿತ್ರೆ ಅದು. ಆ ಚಿತ್ರದಲ್ಲಿ ಬಚ್ಚನ್ ಕೂಡಾ ನಟಿಸುತ್ತಿದ್ದಾರೆ. ಅವರನ್ನು ಮತ್ತೊಮ್ಮೆ ಭೇಟಿ ಮಾಡಿ, ಅವರೊಂದಿ ಸ್ಕ್ರೀನ್ ಶೇರ್ ಮಾಡಿರುವ ಸುದೀಪ್, ಮತ್ತೊಮ್ಮೆ ಅದೃಷ್ಟ ದಯಪಾಲಿಸಿದ ಸೈರಾ ಚಿತ್ರತಂಡಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ.

     

  • 1995ರಲ್ಲಿ ಅಣ್ಣಾವ್ರು.. 2019ರಲ್ಲಿ ಅಮಿತಾಭ್ ಬಚ್ಚನ್

    amitab bacchan wins prestigious dada saheb phalke award

    ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರಿಗೆ ಜೀವಮಾನ ಸಾಧನೆಗಾಗಿ ಕೇಂದ್ರ ಸರ್ಕಾರ ನೀಡುವ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ ಸಿಕ್ಕಿದೆ. 1969ರಲ್ಲಿ ಸಾಥಿ ಹಿಂದೂಸ್ತಾನಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಅಮಿತಾಭ್, ಹಿಂದಿ ಚಿತ್ರರಂಗದಲ್ಲಿ ನಟರಾಗಿ, ನಿರ್ಮಾಪಕರಾಗಿ ದೊಡ್ಡ ಹೆಸರು ಮಾಡಿದ ಕಲಾವಿದ.

    ಆನಂದ್, ಜಂಝೀರ್, ಶೋಲೆ, ನಮಕ್ ಹರಾಮ್, ದೀವಾರ್, ಡಾನ್, ಅಮರ್ ಅಕ್ಬರ್ ಆಂಥೊನಿ, ಮುಕದ್ದರ್ ಕಾ ಸಿಕಂದರ್, ತ್ರಿಶೂಲ್, ಶಾನ್, ಕೂಲಿ, ಶರಾಬಿ, ಅಗ್ನಿಪಥ್, ಹಮ್, ಖುದಾಗವಾ, ಉಮ್ರಾವ್ ಜಾನ್, ಸಟ್ಟೇ ಪೇ ಸಟ್ಟಾ, ನಮಕ್ ಹಲಾಲ್, ಮಹಾನ್, ಮಿ.ನಟ್ವರ್ ಲಾಲ್, ಕಾಲಾ ಪತ್ಥರ್, ಸಿಲ್‍ಸಿಲಾ, ಬೇಷರಮ್, ಕಭಿ ಕಭೀ, ಚುಪ್ಕೆ ಚುಪ್ಕೆ.. ಇವು ಒಂದು ಹಂತದ ಹಿಟ್ ಚಿತ್ರಗಳಾದರೆ, ತಮ್ಮ 3ನೇ ಇನ್ನಿಂಗ್ಸ್‍ನಲ್ಲಿ ನಟಿಸಿದ ಮೊಹಬ್ಬತೇನ್, ಕಭಿ ಖುಷಿ ಕಬಿ ಗಮ್, ಪಾ, ಪಿಕು, ಬ್ಲಾಕ್, ಸರ್ಕಾರ್, ಪಿಂಕ್, ಚೀನಿ ಕಮ್.. ಈ ಚಿತ್ರಗಳದ್ದೇ ಬೇರೊಂದು ಹವಾ.

    ವೃತ್ತಿ ಬದುಕಿನಲ್ಲಿ ಕಭಿ ಖುಷಿ ಕಬಿ ಗಮ್ ನೋಡಿರುವ ಅಮಿತಾಭ್, ಒಂದು ಕಾಲದಲ್ಲಿ ದಿವಾಳಿಯ ಅಂಚಿನಲ್ಲಿದ್ದರು. ಎಬಿಸಿಲ್ ಸ್ಥಾಪಿಸಿ, ಸಾಲದಲ್ಲಿ ಮುಳುಗಿ ಹೋಗಿದ್ದ ಅಮಿತಾಭ್.. ಮತ್ತೊಮ್ಮೆ ಬದುಕು ಕಟ್ಟಿಕೊಂಡು 2600 ಕೋಟಿಯ ಒಡೆಯರಾದ ಕಥೆ ಇದೆಯಲ್ಲ. ಅದು ಎಂಥವರಿಗೂ ಸ್ಫೂರ್ತಿ ಮತ್ತು ರೋಮಾಂಚನ ಹುಟ್ಟಿಸುವಂಥದ್ದು.

    ಒಮ್ಮೆ ಲೋಕಸಭಾ ಸದಸ್ಯರೂ ಆಗಿದ್ದ ಅಮಿತಾಭ್, ರಾಜೀವ್ ಗಾಂಧಿಯವರ ಆಪ್ತಮಿತ್ರನಾಗಿದ್ದರು. ಆದರೆ, ರಾಜಕೀಯ ನನಗೆ ಆಗಿಬರಲ್ಲ ಎಂದು ಮತ್ತೆ ಸಿನಿಮಾ ರಂಗಕ್ಕೆ ಮರಳಿದ ಅಮಿತಾಭ್ ಬಚ್ಚನ್, ಚಿತ್ರರಂಗದಲ್ಲಿ ಸಾಧಿಸಿದ್ದು ಅಪಾರ.

    ಅಂದಹಾಗೆ ಡಾ.ರಾಜ್ ಅವರಿಗೆ 1995ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿತ್ತು. ಅದಾಗಿ 24 ವರ್ಷಗಳ ನಂತರ ಅಮಿತಾಭ್ ಬಚ್ಚನ್ ಫಾಲ್ಕೆ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಇಷ್ಟಕ್ಕೂ ದಾದಾ ಸಾಹೇಬ್ ಫಾಲ್ಕೆ ಯಾರು ಗೊತ್ತೇ..? ಹಿಂದಿ ಚಿತ್ರರಂಗದ ಮೊದಲ ನಿರ್ಮಾಪಕ. ಚಿತ್ರರಂಗದಲ್ಲಿ ಅತ್ಯುನ್ನತ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತೆ. 

  • Big B Support To Film Workers on Labours Day

    big b support to film workers on labours day

    Bollywood star actor Amitabh Bachchan and others associated with Kalyan Jewellers have come to the rescue of film workers in the country by distributing coupons to at least 50,000 of them. In Karnataka alone, 3,000 film workers have been identified, who will be benefiting with it.

    The coupon worth Rs 1,500 each to at least 3000 were distributed through the heads of various wings of the Okkuta on the occasion of Labours Day in the presence of KFCC president Mr. Jairaj, former president Mr. Sa Ra Govindu, All India Film Workers Association Treasurer and also secretary of Okkutta Raveendra, Producer Association President D K Ramakrishna (Praveen Kumar), Vice President of Okkuta Ravishankar, KFCC Secretary NM Suresh, A Ganesh along with Chitraloka editor K M Veeresh.

    While the All India film workers had initiated the process to help the film workers across the country, it was Mr Ravishankar who approached several organisations including Infosys Foundation to extend their support to Kannada film workers.

     

  • CoronaVirus: Amitabh and Abhishek tests positive 

    amitab and abhishek tests positive for corona

    Well known Bollywood actors Amitabh Bachchan and his son Abhishek Bachchan have tested positive for Covid-19.

    Amitabh himself confirmed the news through a tweet on Saturday night. 'I have tested Covid positive, shifted to hospital, hospital informing authorities, family and staff undergone tests, results awaited' he tweeted. He also urged everybody who was close to him in the last 10 days to get tested.

    Abhishek has also tweeted he had also tested positive and has been hospitalised. Both Amitabh and Abhishek have been admitted to Nanavati Hospital in Mumbai and are undergoing treatment.

    Soon after Amitabh broke the news that he has tested positive, many from the film fraternity across India has wished the legendary actor a speedy recovery.

     

  • Dr Rajkumar Man Of Moral, Principles & Ethics

    dr rajkumar, man of motal, principlr and ethics

    Today on the occasion of Dr Rajkumar Birthday celebrations just want to share / recall one big incident which most of them knows reflects that Dr Raj greatness when it comes to Moral, Principles & Ethics follow not only in the films he acts but also in Real Life.

    Miss World 1996 Beauty Pageant was first time held in India ( unfortunately that only last ) that too in Bangalore which was chosen because of its cosmopolitan culture & in its early transforming years into Silicon Valley what known today to the World.

    This was brought by Celebrity Actor Amitabh Babchan through his floated Entertainment Company called “Amitabh Bachan Corporation Limited” [ABCL] and Karnataka State Government which was led by Chief Minister J.H. Patel welcome the move since it had great potential for Bangalore to grow in terms of Tourism, Infrastructure & Hospitality etc sectors.

    But after its announcement many pro Women Organizations & Social activists hit the streets against of the conducting Beauty Pageant not only in Bangalore but India of moral & cultural differences which led even ransacking of ABCL office in Bangalore opened in Richmond Road also threaten of many organizations leaders and members of suicide and grate crashing the venue with bombs scare which was KSCA / Chinnaswamy Stadium.

    These threats made additional burden to both organizers & State Government to conduct event under tight security by deploy Police/ CRPF personnel’s including private bouncers from Mumbai and some gadgets which is now very common but those days it all cost in crores.

    But in spite of all above Incidents Amitabh Bachan was very keen that Dr Rajkumar should be the Chief Guest for the opening ceremony of Miss World event to be held on 23rd Nov 1996 at KSCA and made a personal visit to his house by felicitating him for the Dadasaheb Phalke Award he was conferred in that year and gave this proposal which also was great opportunity for the Kannada Thespian to know his identity to the World thru Electronic Media which was in its early stages and for this event Channel Zee was to go live in 80 + countries first time for opening ceremony.

    And for this event Judges were Actor Aamir Khan , Aishwarya Rai [ Miss World 1994 Title ] if right she had not made her film debut , Sri Lankan Cricketer Sanath Jayasuriya , Godrej Company Chairman Parmeshwar Godrej , Vijaya Mallya etc.

    But since many were protesting this on ethics and cultural issue Dr Rajkumar stayed away from the opening ceremony not to hurt anyone sentiments since it involved some women groups and Amitabh Bachan also respected his decision and took it in positive way which did not harm their relations & family bonding in anyway which even today still continues with the Dr Raj sons.

    This information nowhere today documented or available in today’s online / digital mode but many would know about this including D Raj family members, Amitabh Bachan, Print Media etc of those times

    (Article by Ajay KR)

  • Sudeep Gets An Offer From Amitabh Bachchan's New Film

    sudeep gets offer from sr bacchan's new movie

    Actor Sudeep who is currently tied up with projects in Kannada has got a big offer from a Bollywood film. This time the actor has not only got one offer, but two offers at the same time.

    Prominently, Sudeep has got an offer from Amitabh Bachchan's new film which has been titled as 'Karna'. The film is based on the legendary mythological character Karna and Sudeep has been approached for the role of Duryodhana in the film, While Amitabh Bachchan is seen in the role of Bheeshma. Even Tamil actor Vikram will be playing  a prominent role in the film. Apart from 'Karna', Sudeep has been approached for a role by director Rohith Shetty.

    Though he has got two offers, Sudeep is yet to give his nod because of his prior commitments. 'The Villain' was supposed to complete by now. As the film got delayed due to various reasons, Sudeep's dates have been hampered and Sudeep plans to allocate dates to Hindi films only if it affects his Kannada projects.

  • ಚಿರಂಜೀವಿ, ಅಮಿತಾಬ್ ಬಚ್ಚನ್ ಜೊತೆ ಕಿಚ್ಚ ಸುದೀಪ್

    amitab bacchan, sudeep, chiranjeevi image

    ಕಿಚ್ಚ ಸುದೀಪ್ ಸ್ಯಾಂಡಲ್​ವುಡ್​ನಿಂದ ಹಾರಿ, ಬಾಲಿವುಡ್​ನಲ್ಲಿ ಮಿನುಗಿ, ಟಾಲಿವುಡ್, ಕಾಲಿವುಡ್​ನಲ್ಲಿ ಮಿಂಚಿ ಈಗ ಹಾಲಿವುಡ್​ಗೂ ಹಾರುತ್ತಿದ್ಧಾರೆ. ಇದರ ನಡುವೆಯೇ ಇನ್ನೊಂದು ಗುಡ್​ನ್ಯೂಸ್ ತೆಲುಗಿನಿಂದ ಬರ್ತಾ ಇದೆ. ಇತ್ತಿಚೆಗಷ್ಟೇ 150ನೇ ಚಿತ್ರದಲ್ಲಿ ನಟಿಸಿದ್ದ ಚಿರಂಜೀವಿ, ಇನ್ನೊಂದು ಚಿತ್ರಕ್ಕೆ ಸಿದ್ಧರಾಗುತ್ತಿದ್ದಾರೆ. ಆ ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಕೂಡಾ ನಟಿಸಲಿದ್ದಾರೆ. ಕಿಕ್, ರೇಸುಗುರಂ ಖ್ಯಾತಿಯ ಸುರೇಂದ್ರ ರೆಡ್ಡಿ ನಿರ್ದೇಶಕರು.

    ಸ್ವಾತಂತ್ರ್ಯ ಯೋಧನ ಕುರಿತಾದ ಆ ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ಎ.ಆರ್.ರೆಹಮಾನ್. ಆ ಚಿತ್ರದ ಒಂದು ಪ್ರಮುಖ ಪಾತ್ರಕ್ಕೆ ಚಿತ್ರತಂಡ ಸುದೀಪ್ ಅವರನ್ನು ಸಂಪರ್ಕಿಸಿದೆಯಂತೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆ ಗೊತ್ತಿರುವ ವ್ಯಕ್ತಿಯ ಪಾತ್ರಕ್ಕೆ ಸುದೀಪ್ ಬೇಕು ಎಂದು ಚಿತ್ರತಂಡ ಡಿಮ್ಯಾಂಡ್ ಇಟ್ಟಿದೆ. ಆಫರ್ ಬಂದಿರುವುದು ನಿಜವಾದರೂ ಸುದೀಪ್ ಇನ್ನೂ ಅದನ್ ಕನ್​ಫರ್ಮ್ ಮಾಡಿಲ್ಲ. 

    ಅಂದಹಾಗೆ ಅಮಿತಾಬ್​ ಜೊತೆ ಈಗಾಗಲೇ ಸುದೀಪ್​ಗೆ ನಟಿಸಿದ ಅನುಭವವಿದೆ. ಹಿಂದಿಯ ರಣ್ ಚಿತ್ರದಲ್ಲಿ ನಟಿಸಿದ್ದ ಸುದೀಪ್ ಅಭಿನಯಕ್ಕೆ ಅಮಿತಾಬ್ ಮಾರುಹೋಗಿದ್ದರು. ಇನ್ನು ಸುದೀಪ್​ ಒಪ್ಪಿಕೊಂಡರೆ, ಅದು ಚಿರಂಜೀವಿ ಜೊತೆಗೆ ನಟಿಸುವ ಮೊದಲ ಚಿತ್ರವಾಗಲಿದೆ.

  • ಬಟರ್ ಫ್ಲೈ ಚಿತ್ರಕ್ಕೆ ಅಮಿತಾಬ್ ಬಚ್ಚನ್ ವಾಯ್ಸ್

    butterfly parul gets bachchan's power

    ಪಾರೂಲ್ ಯಾದವ್ ಅಭಿನಯದ, ರಮೇಶ್ ಅರವಿಂದ್ ನಿರ್ದೇಶನದ ಸಿನಿಮಾ ಬಟರ್ ಫ್ಲೈ. ರಿಲೀಸ್‍ಗೆ ರೆಡಿಯಾಗಿರುವ ಈ ಸಿನಿಮಾಗೆ ಈಗ ಬಾಲಿವುಡ್ ಸೂಪರ್ ಸ್ಟಾರ್ ಸಪೋರ್ಟು ಸಿಕ್ಕಿದೆ.

    ಬಟರ್ ಫ್ಲೈ ಚಿತ್ರದ ಕ್ಲಬ್ ಸಾಂಗ್‍ನ್ನು ಅಮಿತಾಬ್ ಹಾಡಿದ್ದಾರೆ. ಈ ಹಾಡಿಗೆ ಸಾಹಿತ್ಯ ಬರೆದಿರುವುದು ರಂಗಭೂಮಿ ದಿಗ್ಗಜ ಮಾಸ್ಟರ್ ಹಿರಣ್ಣಯ್ಯ. ಅಮಿತಾಬ್ ಹಾಡಿರುವ ಈ ಹಾಡನ್ನು ಪ್ಯಾರಿಸ್‍ನಲ್ಲಿ ಚಿತ್ರೀಕರಿಸಲಾಗಿದೆ. 

    ಈ ಹಿಂದೆ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೃತಧಾರೆ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅಮಿತಾಬ್, ಈ ಬಾರಿ ಮತ್ತೊಮ್ಮೆ ಗಾಯಕರಾಗಿ ಬಂದಿದ್ದಾರೆ.

  • ಬಿಗ್ ಬಿ ಜೊತೆ ರಶ್ಮಿಕಾ ಗುಡ್ ಬೈ

    ಬಿಗ್ ಬಿ ಜೊತೆ ರಶ್ಮಿಕಾ ಗುಡ್ ಬೈ

    ಕಿರಿಕ್ ಪಾರ್ಟಿ ಮೂಲಕ ಕನ್ನಡಿಗರ ಹೃದಯಕ್ಕೇ ಲಗ್ಗೆಯಿಟ್ಟ ರಶ್ಮಿಕಾ ಮಂದಣ್ಣ, ಈಗ ತೆಲುಗು, ತಮಿಳಿನಲ್ಲೂ ಕ್ರಷ್ ಆಗಿದ್ದಾರೆ. ಈ ನ್ಯಾಷನಲ್ ಕ್ರಷ್ ಈಗ ಬಿಗ್ ಜೊತೆ ಗುಡ್ ಬೈ ಹೇಳೋಕೆ ಹೊರಟಿದೆ.

    ಬಾಲಿವುಡ್‍ಗೂ ಕಾಲಿಟ್ಟಿರುವ ರಶ್ಮಿಕಾ ಮಂದಣ್ಣ, ಅಮಿತಾಭ್ ಬಚ್ಚನ್ ಜೊತೆ ನಟಿಸುತ್ತಿರುವ ಹೊಸ ಚಿತ್ರ ಗುಡ್ ಬೈ. ಕ್ವೀನ್, ಸೂಪರ್ 30 ಯಂತಾ ಹಿಟ್ ಚಿತ್ರಗಳನ್ನು ಕೊಟ್ಟಿರುವ ಡೈರೆಕ್ಟರ್ ವಿಕಾಸ್ ಬಹ್ಲ್, ಈ ಚಿತ್ರದ ನಿರ್ದೇಶಕ.

  • ಬಿರಾದಾರ್`ಗೆ ಅಮಿತಾಭ್ ಬಚ್ಚನ್ ಶ್ಲಾಘನೆ ಸುದ್ದಿ ಸತ್ಯಾನಾ..?

    Truth Behind Amitabh Bacchan's Wishes To Biradar

    ಕನ್ನಡ ಚಿತ್ರರಂಗದಲ್ಲಿ ಭಿಕ್ಷುಕ ಮತ್ತು ಕುಡುಕನ ಪಾತ್ರಗಳಿಂದಲೇ ಫೇಮಸ್ ಆದ ನಟ ವೈಜನಾಥ್ ಬಿರಾದಾರ್ ಅವರಿಗೆ ಅಮಿತಾಬ್ ಬಚ್ಚನ್ ಫೋನ್ ಮಾಡಿ ಅಭಿನಂದಿಸಿದ್ದಾರೆ ಅನ್ನೋ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಬಿರಾದಾರ್‍ಗೆ ಅಭಿನಂದನೆಗಳ ಮಹಾಪೂರ.  ಈ ಸುದ್ದಿ ನಿಜಾನಾ..? ಸುಳ್ಳಾ..? ಇದ್ದಕ್ಕಿದ್ದಂತೆ ಇದು ಸುದ್ದಿಯಾಗಿದ್ದು ಏಕೆ ಅಂತಾ ಹುಡುಕಿದಾಗ ಗೊತ್ತಾದ ಸತ್ಯ ಇದು.

    ಇತ್ತೀಚೆಗೆ ಕನ್ನಡ ಪ್ರಭ ಪತ್ರಿಕೆಯಲ್ಲಿ ಬಿರಾದಾರ್ ಸಂದರ್ಶನ ಪ್ರಕಟವಾಗಿತ್ತು. ಕನ್ನಡ ಪ್ರಭ ವರದಿಗಾರ ಕೇಶವ ಮೂರ್ತಿ ಈ ಸಂದರ್ಶನ ಮಾಡಿದ್ದರು. ಆ ಸಂದರ್ಶನದಲ್ಲಿ ಬಿರಾದಾರ್ ತಮಗೆ ಅಮಿತಾಭ್ ಬಚ್ಚನ್ ಅಭಿನಂದಿಸಿದ್ದ ಘಟನೆಯನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದರು.

    ಇದೆಲ್ಲ ನಡೆದಿದ್ದುದು 2010ರಲ್ಲಿ. ಆ ವರ್ಷ ಬಿರಾದಾರ್, ಗಿರೀಶ್ ಕಾಸರವಳ್ಳಿಯವರ ಕನಸೆಂಬೋ ಕುದುರೆಯನ್ನೇರಿ ಚಿತ್ರದಲ್ಲಿ ನಟಿಸಿದ್ದರು. ಅತ್ತ ಅಮಿತಾಭ್ ಅವರು ಪಾ ಚಿತ್ರದಲ್ಲಿ ನಟಿಸಿದ್ದರು. ರಾಷ್ಟ್ರಪ್ರಶಸ್ತಿ ಪೈಪೋಟಿಯಲ್ಲಿ ಬಿರಾದಾರ್ ಅಮಿತಾಭ್ ಅವರಿಗೆ ಕಟ್ಟಕಡೆಯ ಹಂತದವರೆಗೆ ಸ್ಪರ್ಧೆ ಕೊಟ್ಟಿದ್ದರು. ಸ್ವತಃ ಅಮಿತಾಭ್ ಈ ಬಾರಿ ಪ್ರಶಸ್ತಿ ಕನ್ನಡದ ಬಿರಾದಾರ್ ಅವರಿಗೇ ಸಲ್ಲಲಿದೆ ಎಂದುಕೊಂಡಿದ್ದರು. ಆದರೆ ಹಾಗಾಗಲಿಲ್ಲ. ಅಮಿತಾಭ್‍ಗೆ ಅವಾರ್ಡ್ ಸಿಕ್ಕಿತ್ತು. ಆದರೆ, ಅದಾದ ಮೇಲೆ 2011ರಲ್ಲಿ ಸ್ಪೇನ್‍ನ ಮ್ಯಾಡ್ರಿಡ್ ಚಿತ್ರೋತ್ಸವದಲ್ಲಿ ಮತ್ತೊಮ್ಮೆ ಅಮಿತಾಭ್ ಮತ್ತು ಬಿರಾದಾರ್ ಮಧ್ಯೆ ಸ್ಪರ್ಧೆ ಏರ್ಪಟ್ಟು, ಅಲ್ಲಿ ಬಿರಾದಾರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿತು. ಆಗ ಆ ವೇದಿಕೆಯಲ್ಲಿ ಅಮಿತಾಭ್ `ಬಿರಾದಾರ್ ಅವರಿಗೆ 57ನೇ ರಾಷ್ಟ್ರಪ್ರಶಸ್ತಿಯೇ ಬರಬೇಕಿತ್ತು. ಆದರೆ ಅಲ್ಲಿ ತಪ್ಪಿದ ಪ್ರಶಸ್ತಿ ಇಲ್ಲಿ ಈ ಪ್ರತಿಷ್ಠಿತ ವೇದಿಕೆಯಲ್ಲಿ ಸಿಕ್ಕಿದೆ. ಬಿರಾದಾರ್ ಅವರಿಗೆ ಇಲ್ಲಿ ಪ್ರಶಸ್ತಿ ಸಿಕ್ಕಿದೆ ಅನ್ನೋದೇ ನನಗೆ ಖುಷಿ' ಎಂದಿದ್ದರು.

    ಬಿರಾದಾರ್ ಇದಿಷ್ಟನ್ನೂ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆದರೆ ಸಂದರ್ಶನ ಪ್ರಕಟವಾದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಆಗಿದ್ದೇ ಬೇರೆ. 2010-11ರ ಘಟನೆಯನ್ನು 2020ರಲ್ಲಿ ನಡೆಯಿತೇನೋ ಎಂಬಂತೆ ವೈರಲ್ ಆಗಿಬಿಟ್ಟಿತು. ಬಿರಾದಾರ್ ಅವರಿಗೆ ನೂರಾರು ಫೋನ್.

    ಇದಿಷ್ಟು ಸುದ್ದಿ. ಸುದ್ದಿ ಸತ್ಯ. ಆದರೆ ಇದು 2020ರಲ್ಲಿ ನಡೆದಿರೋದಲ್ಲ. ಖುಷಿ ವಿಷಯ ಏನೆಂದರೆ ಅದ್ಭುತ ಪ್ರತಿಭೆ ವೈಜನಾಥ್ ಬಿರಾದಾರ್ ಅವರಿಗೆ ಈಗಲಾದರೂ ಪ್ರೇಕ್ಷಕರಿಗೆ ಅದ್ಭುತ ಎನ್ನಿಸುವಂತ ರಿಯಾಕ್ಷನ್ ಸಿಗುತ್ತಿದೆ.

  • ಮತ್ತೊಮ್ಮೆ ಬಚ್ಚನ್ ಜೊತೆ ಸುದೀಪ್

    amitab bachchan and sudeep to act again

    ಕಿಚ್ಚ ಸುದೀಪ್ ಮತ್ತೊಮ್ಮೆ ಅಮಿತಾಬ್ ಬಚ್ಚನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅದು ಆಂಖೇ-2 ಚಿತ್ರದಲ್ಲಿ. ರಣ್ ಚಿತ್ರದಲ್ಲಿ ಒಟ್ಟಿಗೇ ನಟಿಸಿದ್ದ ಅಮಿತಾಬ್ ಮತ್ತು ಸುದೀಪ್, ತೆಲುಗಿನ ಸೈರಾ ಚಿತ್ರದಲ್ಲೂ ನಟಿಸಿದ್ದಾರೆ. ಈಗ.. ಮತ್ತೊಮ್ಮೆ ಆಂಖೇ-2 ನಲ್ಲಿ ಒಟ್ಟಿಗೇ ಕಾಣಿಸಿಕೊಳ್ಳುತ್ತಿದ್ದಾರೆ.

    ಅಷ್ಟೇ ಅಲ್ಲ, ದಬಾಂಗ್-3 ಚಿತ್ರದಲ್ಲಿ ಸಲ್ಮಾನ್ ಖಾನ್ ಸಿನಿಮಾದಲ್ಲಿ ನಟಿಸಲಿದ್ದಾರೆ.  ನವೆಂಬರ್‍ನಲ್ಲಿ ಹಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಲಿರೋ ಸುದೀಪ್, ಜನವರಿಗೆಯಲ್ಲಿ ದಬಾಂಗ್-3 ಟೀಂ ಜೊತೆಯಾಗಲಿದ್ದಾರೆ. ಮುಂದಿನ ವರ್ಷ ಸೈರಾ ನರಸಿಂಹ ರೆಡ್ಡಿ ತೆಲುಗಿನಲ್ಲಿ, ಹಿಂದಿಯಲ್ಲಿ, ಇಂಗ್ಲಿಷ್‍ನಲ್ಲಿ.. ಒಟ್ಟಿನಲ್ಲಿ.. 2019ರಲ್ಲಿ ಸುದೀಪ್ ಅಭಿಮಾನಿಗಳಿಗೆ ವರ್ಷಪೂರ್ತಿ ಹಬ್ಬ.

  • ಮೀಡಿಯಾ ಬ್ಯಾನ್ : ಸರೋಜಾದೇವಿಯಿಂದ ಅಮಿತಾಬ್ ಬಚ್ಚನ್..ವರೆಗೆ.. ಯಾರೆಲ್ಲ ಬ್ಯಾನ್ ಆಗಿದ್ದರು?

    ಮೀಡಿಯಾ ಬ್ಯಾನ್ : ಸರೋಜಾದೇವಿಯಿಂದ ಅಮಿತಾಬ್ ಬಚ್ಚನ್..ವರೆಗೆ.. ಯಾರೆಲ್ಲ ಬ್ಯಾನ್ ಆಗಿದ್ದರು?

    ನಟ ದರ್ಶನ್ ಪ್ರಕರಣ ಸುಖಾಂತ್ಯವನ್ನೇನೋ ಕಂಡಿದೆ. ಈ ಎರಡು ವರ್ಷಗಳಲ್ಲಿ ದರ್ಶನ್ ಅವರ ಒಂದು ಸುದ್ದಿಯಾಗಲೀ, ಜಾಹೀರಾತಾಗಲೀ.. ಹಾಡು, ದೃಶ್ಯಗಳಾಗಲೀ ಪ್ರಸಾರವಾಗಿರಲಿಲ್ಲ. ಮತ್ತಿನ್ನು ಮೇಲೆ ದರ್ಶನ್ ಅವರ ಸಿನಿಮಾಗಳ ಸುದ್ದಿ, ಜಾಹೀರಾತು, ಹಾಡು, ದೃಶ್ಯಗಳೂ ಟಿವಿ ನ್ಯೂಸ್ ಚಾನೆಲ್ಲುಗಳಲ್ಲಿ ಪ್ರಸಾರವಾಗುತ್ತವೆ. ಆದರೆ ಮಾಧ್ಯಮಗಳಲ್ಲಿ ಈ ರೀತಿ ನಿಷೇಧವನ್ನೆದುರಿಸಿದವರ ಲಿಸ್ಟಿನಲ್ಲಿ ದರ್ಶನ್ ಮೊದಲಿಗರೇನಲ್ಲ. ಹಿಂದಿಯಲ್ಲಿ ಹಲವು ಕಲಾವಿದರು ಈ ಪರಿಸ್ಥಿತಿ ಎದುರಿಸಿದ್ದಾರೆ. ಆದರೆ ಕನ್ನಡದಲ್ಲಿ ಅಪರೂಪ.

    1960ರಲ್ಲಿ ಬಿ.ಸರೋಜಾದೇವಿ ಬ್ಯಾನ್ ಆಗಿದ್ದರು :

    ಈ ಹಿಂದೆ ಬಿ.ಸರೋಜಾದೇವಿಯವರನ್ನೂ ಇದೇ ರೀತಿ ಪತ್ರಕರ್ತರು ಬ್ಯಾನ್ ಮಾಡಿದ್ದರು. 1960ರಲ್ಲಿ ನಡೆದಿದ್ದ  ಘಟನೆ ಇದು. ಪತ್ರಕರ್ತರ ಬಗ್ಗೆ ಸರೋಜಾದೇವಿ ಆಡಿದ್ದರೆನ್ನಲಾದ ಕೆಲವು ಮಾತುಗಳಿಂದಾಗಿ ಪತ್ರಕರ್ತರು ಆಕ್ರೋಶಗೊಂಡಿದ್ದರು. ಸುಮಾರು 2 ವರ್ಷ ಕಾಲ ಸರೋಜಾದೇವಿಯವರ ಒಂದೇ ಒಂದು ಫೋಟೋ ಅಥವಾ ಸುದ್ದಿ ಕನ್ನಡ ಪತ್ರಿಕೆಗಳಲ್ಲಿ ಪ್ರಿಂಟ್ ಆಗಿರಲಿಲ್ಲ. ಅಷ್ಟೇ ಏಕೆ, ಸರೋಜಾದೇವಿ ನಟಿಸಿದ ಚಿತ್ರಗಳ ಸುದ್ದಿಯಲ್ಲಿ ಸರೋಜಾದೇವಿ ಹೆಸರನ್ನು ಬಿಟ್ಟು ಸುದ್ದಿ ಮಾಡುತ್ತಿದ್ದರು.

    ನಂತರ ಕಿತ್ತೂರು ಚೆನ್ನಮ್ಮ ಸಿನಿಮಾ ಮಾಡುತ್ತಿದ್ದಾಗ ಬಿ.ಆರ್.ಪಂತುಲು ನೇತೃತ್ವ ವಹಿಸಿ.. ಕೆಲವು ಹಿರಿಯ ಪತ್ರಕರ್ತರು ಮಾತುಕತೆ ಮೂಲಕ ವಿವಾದ ಬಗೆಹರಿಸಿದ್ದರು. ಹಲವು ನಟ ನಟಿಯರ ವಿವಾದಗಳು ಬ್ಯಾನ್ ಹಂತಕ್ಕೆ ಹೋಗಿ, ಕಡೆಯ ಕ್ಷಣದಲ್ಲಿ ಸಂಧಾನ ನಡೆದು ವಿವಾದಗಳು ಬಗೆಹರಿದಿವೆ.

    ಸಲ್ಮಾನ್ ಖಾನ್ ಹಲ್ಲೆ  ಪ್ರಕರಣ :

    ಬಾಲಿವುಡ್`ನಲ್ಲಿ 2014ರಲ್ಲಿ ನಟ ಸಲ್ಮಾನ್ ಖಾನ್ ಬಾಡಿಗಾಡ್ರ್ಸ್, ಫೋಟೋಗ್ರಾಫರುಗಳ ಮೇಲೆ ಹಲ್ಲೆ ಮಾಡಿದ್ದರು. ಆಗ ಸಲ್ಮಾನ್ ಖಾನ್ ಅವರ ಫೋಟೋ ತೆಗೆಯುವುದನ್ನೇ ಫೋಟೋ ಜರ್ನಲಿಸ್ಟ್`ಗಳು ಬಹಿಷ್ಕರಿಸಿದ್ದರು. ಕೊನೆಗೆ ಸಲ್ಮಾನ್ ಖಾನ್ ಈ ರೀತಿ ಇನ್ನೊಮ್ಮೆ ನಡೆಯದಂತೆ ನೋಡಿಕೊಳ್ಳುವ ಭರವಸೆ ಕೊಟ್ಟು, ಕ್ಷಮೆ ಕೇಳಿದ್ದರು.

    ಶ್ರದ್ಧಾ ಕಪೂರ್ ಅಹಂಕಾರ ಮೆರೆದಾಗ.. :

    ನಟಿ ಶ್ರದ್ಧಾ ಕಪೂರ್ ಕೂಡಾ ಆಶಿಕಿ2 ಸಕ್ಸಸ್ ಮೀಟ್`ನಲ್ಲಿ ಅಹಂಕಾರ ಪ್ರದರ್ಶನ ಮಾಡಿದ್ದರು. ಆಕೆ ಕ್ಷಮೆ ಕೇಳದಿದ್ದರೂ, ಆಕೆಯ ತಂದೆ ಶಕ್ತಿ ಕಪೂರ್ ಅವರು ಸಾರಿ ಕೇಳಿದ್ದರು. ಶಕ್ತಿ ಕಪೂರ್ ಮೇಲಿನ ಗೌರವಕ್ಕೆ ಪತ್ರಕರ್ತರು ಸುಮ್ಮನಾಗಿದ್ದರು. ಮತ್ತೊಮ್ಮೆ ಶ್ರದ್ಧಾ ಇದೇ ರೀತಿಯ ಆಟಿಟ್ಯೂಡ್ ಬಹಿರಂಗವಾದಾಗ ಶ್ರದ್ಧಾ ಕ್ಷಮೆ ಕೇಳುವವರೆಗೂ ಪತ್ರಕರ್ತರು ಹಠ ಹಿಡಿದು, ಕ್ಷಮೆ ಕೇಳುವಂತೆ ಮಾಡಿದ್ದರು.

    ಸೈಫೀನಾ ಸ್ಸಾರಿ ಎಂದಿದ್ದರು :

    ಮತ್ತೊಮ್ಮೆ ಕಾರ್ಯಕ್ರಮಕ್ಕೆ ಗಂಟೆಗಳಷ್ಟು ತಡವಾಗಿ ಬಂದಾಗ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಪ್ರೆಸ್`ಮೀಟ್`ನ್ನು ಬಹಿಷ್ಕರಿಸಿ ಹೊರಟಿದ್ದರು ಪತ್ರಕರ್ತರು. ಕೊನೆಗೆ ಅಲ್ಲಿಯೇ ಸೈಫ್-ಕರೀನಾ ಕ್ಷಮೆಯಾಚಿಸಿ ವಿವಾದ ದೊಡ್ಡದಾಗದಂತೆ ನೋಡಿಕೊಂಡಿದ್ದರು.

    ಆದರೆ ಬಾಲಿವುಡ್`ನಲ್ಲಿ ಸುದೀರ್ಘ ಕಾಲದ ಬ್ಯಾನ್ ಎದುರಿಸಿದ ನಟ ಎಂದರೆ ಅದು ಬಾಲಿವುಡ್ ಬಿಗ್ ಬಿ ಎಂದೇ ಕರೆಸಿಕೊಳ್ಳುವ ಅಮಿತಾಭ್ ಬಚ್ಚನ್. ಆದರೆ ಅಮಿತಾಬ್ ವಿಷಯದಲ್ಲಿ ಮಾಧ್ಯಮಗಳೇ ತಪ್ಪು ಮಾಡಿದ್ದವು ಎಂದು ಅಮಿತಾಬ್ ಇತ್ತೀಚೆಗೆ ಹೇಳಿಕೊಂಡಿದ್ದರು. ಆಗ ಮಾಧ್ಯಮಗಳಲ್ಲಿ ತುರ್ತು ಪರಿಸ್ಥಿತಿ ವೇಳೆ ಮಾಧ್ಯಮಗಳು, ಪತ್ರಿಕೆಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದಕ್ಕೆ ಅಮಿತಾಬ್ ಅವರೇ ಕಾರಣ ಎಂದು ವರದಿಯಾಗಿತ್ತಂತೆ. ಅಮಿತಾಬ್ ಈ ವಿಷಯಕ್ಕೆ ಪತ್ರಕರ್ತರಿಂದ ಬ್ಯಾನ್ ಎದುರಿಸಿದ್ದರಂತೆ. ಆದರೆ ಆ ವೇಳೆಯಲ್ಲಿಯೇ ಬ್ಯಾನ್ ನಡುವೆಯೇ  ಅಮಿತಾಬ್ ಬಚ್ಚನ್ ದೀವಾರ್, ಶರಾಬಿ, ಮುಕದ್ದರ್ ಕಾ ಸಿಕಂದರ್, ಲಾವಾರೀಸ್.. ಮೊದಲಾದ ಸೂಪರ್ ಹಿಟ್ ಕೊಟ್ಟಿದ್ದರು ಎನ್ನುವುದು ಇತಿಹಾಸ. ಕೂಲಿ ಚಿತ್ರದ ಶೂಟಿಂಗ್ ವೇಳೆಯ ಆಕ್ಸಿಡೆಂಟ್ ಎಲ್ಲವನ್ನೂ ಬದಲಾಯಿಸಿದ್ದು ಕೂಡಾ ಇತಿಹಾಸವೇ.

  • ಯಶ್ ಅವರಲ್ಲಿ ಅಮಿತಾಭ್ ಕಂಡ ಬಾಲಿವುಡ್ ಕ್ವೀನ್

    ಯಶ್ ಅವರಲ್ಲಿ ಅಮಿತಾಭ್ ಕಂಡ ಬಾಲಿವುಡ್ ಕ್ವೀನ್

    ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ತಿರುಗುವಂತೆ ಮಾಡಿರೋದು ಕೆಜಿಎಫ್ ಚಾಪ್ಟರ್ 2. ಬಾಕ್ಸಾಫೀಸ್ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದು ಚಿಂದಿ ಉಡಾಯಿಸುತ್ತಿರೋ ಸಿನಿಮಾ. ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ವಿಶ್ವದಾದ್ಯಂತ ಸಂಚಲನ ಸೃಷ್ಟಿಸಿದ ಯಶ್, ಬಾಲಿವುಡ್ನ ದೊಡ್ಡ ದೊಡ್ಡ ಸ್ಟಾರ್ಗಳಿಗೆ ನಡುಕ ಹುಟ್ಟಿಸಿರುವುದು ಸತ್ಯ. ಇದು ಯಶ್ ಯಶಸ್ಸಿನ ಸ್ಟೊರಿ.

    ಸಕ್ಸಸ್ ಫುಲ್ ಸಿನಿಮಾಗಳಿಂದ ಮತ್ತು ವಿವಾದಗಳಿಂದ.. ಎರಡರಿಂದಲೂ ಖ್ಯಾತವಾಗಿರೋ ನಟಿ ಕಂಗನಾ ರಾವತ್. ಬಾಲಿವುಡ್ ಕ್ವೀನ್. ಬಾಲಿವುಡ್ನ ಬಾದ್ಷಾಗಳಿಗೆ ನೇರಾನೇರ ಸವಾಲು ಹಾಕುವ ಚೆಲುವೆ ಕಂಗನಾ ರಾವತ್. ಅವರೀಗ ಯಶ್ ಅವರಿಗೆ ದೊಡ್ಡ ಸ್ಥಾನವೊಂದನ್ನು ನೀಡಿದ್ದಾರೆ.

    ದಶಕಗಳಿಂದ ಭಾರತೀಯ ಚಿತ್ರರಂಗ  ಆಂಗ್ರಿ ಯಂಗ್ ಮ್ಯಾನ್‌ನ್ನು ಮಿಸ್ ಮಾಡಿಕೊಂಡಿತ್ತು. 70ರ ದಶಕದ ನಂತರ ಅಮಿತಾಭ್‌ ಬಚ್ಚನ್ ನಿರ್ವಹಿಸಿ ಬಿಟ್ಟಿದ್ದ ಆಂಗ್ರಿ ಯಂಗ್ ಮ್ಯಾನ್‌ ಜಾಗವನ್ನು ಯಶ್ ತುಂಬಿದ್ದಾರೆ. ಅದ್ಭುತವಾಗಿ ನಟಿಸಿದ್ದಾರೆ

    ಇದು ಕಂಗನಾ ರಾವತ್ ಮಾತು. ಬಚ್ಚನ್ ಅವರಿಗೆ ಆಂಗ್ರಿ ಯಂಗ್ ಮ್ಯಾನ್ ಪಟ್ಟ ಕೊಟ್ಟಿದ್ದ ಚಿತ್ರಗಳು ಡಾನ್, ದೀವಾರ್.. ಮೊದಲಾದ ಅಂಡರ್ವರ್ಡ್ ಸಿನಿಮಾಗಳು. ಯಶ್ ಕೂಡಾ ಅಂತಹುದೇ ಕಥೆಯ ಮೂಲಕ ಬಾಲಿವುಡ್ನಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.

    ಯಶ್ ಅವರನ್ನು ಅಮಿತಾಬ್ ಬಚ್ಚನ್ ಅವರಂತಾ ಲೆಜೆಂಡ್ಗೆ ಈಗಲೇ ಹೋಲಿಸುವುದು ತಪ್ಪು ಎನ್ನುವ ಅಭಿಪ್ರಾಯ ಎಲ್ಲರದ್ದು. ಆದರೆ ಬಚ್ಚನ್ ಅವರಿಗೆ ಆಂಗ್ರಿ ಯಂಗ್ ಮ್ಯಾನ್ ಸಿಕ್ಕಿದ್ದು ಅವರ ಆರಂಭದ ದಿನಗಳಲ್ಲಿ. ತಪ್ಪೇನಿಲ್ಲ ಎನ್ನುವ ಅಭಿಪ್ರಾಯ ಇನ್ನೂ ಕೆಲವರದ್ದು.

    ಆದರೆ ಯಶ್ ಅವರಿಗೆ ಕನ್ನಡ ಚಿತ್ರರಂಗದಿಂದಷ್ಟೇ ಅಲ್ಲ, ತಮಿಳು, ತೆಲುಗು, ಹಿಂದಿ, ಮಲಯಾಳಂ.. ಹೀಗೆ ದೇಶದ ಎಲ್ಲ ಭಾಷೆಯ ಚಿತ್ರರಂಗದವರಿಂದಲೂ ಮೆಚ್ಚುಗೆಯ ಸುರಿಮಳೆಯಾಗುತ್ತಿದೆ. ಕಂಗನಾ ರಣಾವತ್ ದೊಡ್ಡ ಮಟ್ಟದ ಹೋಲಿಕೆ ಮಾಡಿದ್ದಾರೆ.. ಅಷ್ಟೆ. ಖುಷಿ ಪಡೋ ಸಮಯವಿದು.

  • ಸುದೀಪ್ ಜೊತೆ ಚಿರಂಜೀವಿ ಜೊತೆ ಜೊತೆಯಲಿ - ಕನ್ನಡದಲ್ಲೇ ಹೊಸ ಚಿತ್ರ

    sudeep, chiranjeevi

    ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ `ತೆಲುಗಿನ ಉಯ್ಯಾಲವಾಡ ನರಸಿಂಹರೆಡ್ಡಿ' ಜೀವನ ಕಥೆ ಸಿನಿಮಾ ಆಗುತ್ತಿದ್ದು, ಚಿರಂಜೀವಿ ನಟಿಸುತಗ್ತಿರುವ ವಿಷಯ ಹಳೆಯದು. ಆ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಕೂಡಾ ನಟಿಸುತ್ತಿದ್ದಾರೆ. ಆ ದಿಗ್ಗಜರ ಜೊತೆ ಸುದೀಪ್ ಕೂಡಾ ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಅದಕ್ಕಿಂತಲೂ ಖುಷಿ ಪಡುವ ಸುದ್ದಿ ಇನ್ನೊಂದಿದೆ.

    ಚಿರಂಜೀವಿ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದ್ದಾರೆ. ಹೀರೋ ಆಗಿ. ಕಿಚ್ಚ ಸುದೀಪ್ ಮತ್ತು ಚಿರಂಜೀವಿ ಒಟ್ಟಿಗೇ ಹೀರೊಗಳಾಗಿ ಕನ್ನಡದಲ್ಲಿ ನಟಿಸಲಿದ್ದಾರೆ. ಆ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಲಿದೆ.

    ಚಿರಂಜೀವಿಗೆ ಕನ್ನಡ ಹೊಸದಲ್ಲ. ಪಕ್ಕದ ಊರು ನನ್ನೂರು..ಇಲ್ಲಿನ ಜನರು ನನ್ನೋರು ಎಂದು ಸಿಪಾಯಿ ಚಿತ್ರದಲ್ಲಿ ಹಾಡಿ ಹೋಗಿದ್ದರು ಚಿರಂಜೀವಿ. ಅದಾದ ಮೇಲೆ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಿರ್ಮಾಣವಾದ ಶ್ರೀ ಮಂಜುನಾಥ ಚಿತ್ರದಲ್ಲಿ ಈಶ್ವರನಾಗಿ ಕಾಣಿಸಿಕೊಂಡಿದ್ದರು. ಎರಡೂ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಷ್ಟೇ ಕಾಣಿಸಿಕೊಂಡಿದ್ದ ಚಿರಂಜೀವಿ, ಸುದೀಪ್ ಜೊತೆ ಹೀರೋ ಆಗಿಯೇ ಕಾಣಿಸಿಕೊಳ್ಳಲಿದ್ದಾರಂತೆ.

    Related Articles :-

    ಚಿರಂಜೀವಿ, ಅಮಿತಾಬ್ ಬಚ್ಚನ್ ಜೊತೆ ಕಿಚ್ಚ ಸುದೀಪ್

  • ಹ್ಯಾಟ್ರಿಕ್ ಹೀರೋ ಜೊತೆ ಬಾಲಿವುಡ್ ಸೂಪರ್ ಸ್ಟಾರ್?

    shivarajkumar amitabh next movie together ?

    ಒಂದರ ಹಿಂದೊಂದು ಸಿನಿಮಾ ಒಪ್ಪಿಕೊಳ್ಳುತ್ತಿರುವ ಶಿವರಾಜ್ ಕುಮಾರ್ ಎನರ್ಜಿ ಯುವ ನಟರಿಗೆ ಅಚ್ಚರಿ ಹುಟ್ಟಿಸೋದು ನಿಜ. ಅಂತಹ ಶಿವರಾಜ್ ಕುಮಾರ್ ಈಗ ನಾಗತಿಹಳ್ಳಿ ಚಂದ್ರಶೇಖರ್ ಚಿತ್ರವೊಂದನ್ನ ಒಪ್ಪಿಕೊಂಡಿದ್ದಾರೆ. ಕಥೆ ಇಷ್ಟವಾಗಿದೆ. ಡೇಟ್ಸ್ ಕೂಡಾ ಕೊಟ್ಟಾಗಿದೆ. ಸಿನಿಮಾ ಸೆಟ್ಟೇರಬೇಕಷ್ಟೆ.

    ಈ ಚಿತ್ರದಲ್ಲಿ ಇನ್ನೂ ಒಂದು ಕುತೂಹಲವಿದೆ. ಎಲ್ಲವೂ ಅಂದುಕೊಂಡಂತೆ ಆಗಿಬಿಟ್ಟರೆ, ಶಿವಣ್ಣ ಜೊತೆ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಕೂಡಾ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಒಂದು ಸುತ್ತಿನ ಮಾತುಕತೆಯೂ ಆಗಿದೆಯಂತೆ. ಫೈನಲ್ ಆಗಿಲ್ಲ ಅಷ್ಟೆ.

    ಈ ಹಿಂದೆ ಅಮಿತಾಬ್ ಬಚ್ಚನ್, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಮೃತಧಾರೆ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಆಗಿಯೇ ಕಾಣಿಸಿಕೊಂಡಿದ್ದರು. ಶಿವರಾಜ್ ಕುಮಾರ್​ಗೂ ಅಮಿತಾಬ್ ಜೊತೆ ಅಭಿನಯದ ಹೊಸದಲ್ಲ. ಜ್ಯುವೆಲ್ಲರಿಯೊಂದರ ಜಾಹೀರಾತಿನಲ್ಲಿ ಅಮಿತಾಬ್ ಜೊತೆ ನಟಿಸಿದ್ದಾರೆ. ಈಗ, ಚಿತ್ರವೊಂದರಲ್ಲಿ ಇಬ್ಬರೂ ನಟಿಸುತ್ತಾರೆ ಎನ್ನುವ ಸುದ್ದಿಯೇ ಚಿತ್ರದ ಕುರಿತ ನಿರೀಕ್ಷೆ ಹೆಚ್ಚಿಸುತ್ತಿದೆ.