` bollywood, - chitraloka.com | Kannada Movie News, Reviews | Image

bollywood,

  • ಅಮಿತಾಬ್, ಸುದೀಪ್, ರಿಷಬ್ ಶೆಟ್ಟಿ ಬಾಲಿವುಡ್ ಸಿನಿಮಾ..!

    is rishab shetty planning for bollywood movie

    ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಮತ್ತು ಕಿಚ್ಚ ಸುದೀಪ್ ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ. ಆ ಚಿತ್ರಕ್ಕೆ ರಿಷಬ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ವ್ಹಾವ್.. ಅದ್ಭುತ ಅಂದ್ರಾ.. ಅದ್ಭುತವೇ ಸರಿ. ಕಿರಿಕ್ ಪಾರ್ಟಿ ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಿತ್ರ ನಿರ್ದೇಶಿಸಿರುವ ರಿಷಬ್, ಬೆಲ್‍ಬಾಟಂ ಚಿತ್ರದಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಹೀಗಿರುವಾಗಲೇ ಅಮಿತಾಬ್ ಬಚ್ಚನ್ ಅವರಿಗೆ ಒಂದು ಕಥೆ ಹೇಳಿದ್ದಾರೆ. ಆ ಕಥೆ ಅಮಿತಾಬ್ ಅವರಿಗೂ ಇಷ್ಟವಾಗಿದೆ. ಚಿತ್ರಕಥೆ ಸಿದ್ಧ ಮಾಡುತ್ತಿದ್ದಾರೆ ರಿಷಬ್ ಶೆಟ್ಟಿ.

    `ಆ ಚಿತ್ರದ ಬಗ್ಗೆ ಈಗಲೇ ಮಾತನಾಡೋದು ತುಂಬಾ ಅವಸರ ಎನಿಸಬಹುದು. ಏಕೆಂದರೆ, ಕಥೆಯಷ್ಟೇ ಓಕೆ ಆಗಿದೆ. ಇಬ್ಬರು ಘಟಾನುಘಟಿ ಸ್ಟಾರ್‍ಗಳನ್ನು ಹಾಕಿಕೊಂಡು ಸಿನಿಮಾ ಮಾಡುವುದು ಸುಲಭದ ಮಾತಲ್ಲ. ಕಥೆ, ಅಮಿತಾಬ್ ಅವರ ಕಡೆಯಿಂದ ಓಕೆ ಆಗಿರುವುದು ನಿಜ. ಆದರೆ, ಇದುವರೆಗೆ ಸುದೀಪ್ ಅವರಿಗೆ ನಾನು ಕಥೆ ಹೇಳಿಲ್ಲ. ಸುದೀಪ್ ಅವರಿಗೂ ಕಥೆ ಹೇಳಿ, ಅವರಿಂದಲೂ ಸಮ್ಮತಿ ಸಿಕ್ಕರೆ ಮುಂದಿನ ಹಂತಕ್ಕೆ ತೊಡಗಿಕೊಳ್ಳುತ್ತೇನೆ' ಹೀಗೆಂದು ಹೇಳಿರುವುದು ರಿಷಬ್ ಶೆಟ್ಟಿ.

    ಅಮಿತಾಬ್ ಜೊತೆ ಸುದೀಪ್ ನಟಿಸಿರುವುದು ಇದೇ ಮೊದಲಲ್ಲ. ಈ ಹಿಂದೆ ರಣ್ ಚಿತ್ರದಲ್ಲಿ ಒಟ್ಟಿಗೇ ನಟಿಸಿದ್ದ ಸುದೀಪ್, ಅಮಿತಾಬ್ ಬಚ್ಚನ್‍ರಿಂದ ಬೆನ್ನು ತಟ್ಟಿಸಿಕೊಂಡಿದ್ದರು. ಈಗ ತೆಲುಗಿನಲ್ಲಿ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಬಚ್ಚನ್ ಜೊತೆ ನಟಿಸುತ್ತಿದ್ದಾರೆ. ಆದರೆ, ಕನ್ನಡದ ನಿರ್ದೇಶಕರೊಬ್ಬರ ಚಿತ್ರದಲ್ಲಿ ಅಮಿತಾಬ್ ಮತ್ತು ಸುದೀಪ್ ನಟಿಸಿದರೆ ಆ ಗಮ್ಮತ್ತೇ ಬೇರೆ. ಆ ಗಮ್ಮತ್ತಿಗಾಗಿ ಕನ್ನಡಿಗರು ಕಾಯುತ್ತಾರೆ

  • ಅವರು ರೀಮೇಕ್ ಮಾಡಿದ ಚಿತ್ರಗಳ ಲಿಸ್ಟ್ ಇಲ್ಲಿದೆ.. : ದಕ್ಷಿಣದ ಚಿತ್ರಗಳಿಲ್ಲದಿದ್ದರೆ ಹಿಂದಿ ಎಲ್ಲಿ..?

    ಅವರು ರೀಮೇಕ್ ಮಾಡಿದ ಚಿತ್ರಗಳ ಲಿಸ್ಟ್ ಇಲ್ಲಿದೆ.. : ದಕ್ಷಿಣದ ಚಿತ್ರಗಳಿಲ್ಲದಿದ್ದರೆ ಹಿಂದಿ ಎಲ್ಲಿ..?

    ಇದು ಹೊಸದೇನೂ ಅಲ್ಲ. ಮೆಡ್ರಾಸಿ.. ಎಂದೇ ದಕ್ಷಿಣ ಭಾರತದವರನ್ನು ಕರೆಯುತ್ತಿದ್ದ ಹಿಂದಿ ಚಿತ್ರರಂಗ ಈಗ ಇಲ್ಲಿನ ಕಥೆಗಾರರು, ನಿರ್ದೇಶಕರ ಬೆನ್ನು ಹತ್ತಿದೆ. ಇಷ್ಟಕ್ಕೂ ಹಿಂದಿಯವರು ಮೊದಲಿಂದಲೂ ವೊರಿಜಿನಲ್ ಚಿತ್ರಗಳನ್ನಷ್ಟೇ ಮಾಡಿದವರಾ..? ಹಾಗೆ ನೋಡಿದರೆ ಹಿಂದಿಗೆ ಆಕ್ಸಿಜನ್ ನೀಡಿದ್ದು ಮೊದಲಿಗೆ ಹಿಂದಿಯವರೂ ಅಲ್ಲ, ಬೆಂಗಾಳಿ ಚಿತ್ರರಂಗದವರು. ಅದೆಲ್ಲ ಮಾತು ಬಿಡಿ.. ಹಿಂದಿಯವರು ದಕ್ಷಿಣದ ಚಿತ್ರಗಳನ್ನು ರೀಮೇಕ್ ಮಾಡಿಯೇ ಗೆದ್ದ ಚಿತ್ರಗಳ ಲಿಸ್ಟ್ ಇಲ್ಲಿದೆ.

    ಅಜಯ್ ದೇವಗನ್ : ಮೊದಲ ಸಿನಿಮಾ ಪ್ಯಾರಿ ಬೆಹನಾ. ಇದರಲ್ಲಿ ಅಜಯ್ ಬಾಲನಟ. ಈ ಚಿತ್ರ ತಮಿಳಿನ ಮುಲ್ಲಂ ಮುಲ್ಲದ ರೀಮೇಕ್.

    ಪೂಲ್ ಔರ್ ಕಾಂಟೆ ಮಲಯಾಳಂನ ಪರಂಪರಾ ರೀಮೇಕ್. ಈ ಚಿತ್ರದಿಂದಲೇ ಅಜಯ್ ಸ್ಟಾರ್ ಆಗಿದ್ದು.

    ದೀವಾನಗಿ ತಮಿಳಿನ ಕಾದಲ್ ಕಿರುಕ್ಕನ್ ರೀಮೇಕ್.

    ಯುವ ತಮಿಳಿನ ಆಯುತ್ತು ಇಜುತ್ತು ರೀಮೇಕ್.

    ಇನ್ಸಾನ್ ತೆಲುಗಿನ ಖಡ್ಗಂ ರೀಮೇಕ್.

    ಜಮೀರ್ ಮಲಯಾಳಂನ ಮಜಯೇತ್ತುಂ ಮನ್ಬೆ ರೀಮೇಕ್

    ಗೋಲ್‍ಮಾಲ್ ಮಲಯಾಳಂನ ಕಕ್ಕಕುಯಿಲ್ ರೀಮೇಲ್.

    ಸಂಡೇ ತೆಲುಗಿನ ಅನಕಕೊಂಡ ಒಕ ರೋಜು ರೀಮೇಕ್.

    ಆಲ್ ದಿ ಬೆಸ್ಟ್ ಕನ್ನಡದ ಗಲಾಟೆ ಸಂಸಾರದ ರೀಮೇಕ್

    ಸಿಂಘಂ : ತಮಿಳಿನ ಸಿಂಗಂ ರೀಮೇಕ್

    ಹಿಮ್ಮತ್‍ವಾಲಾ : ತಮಿಳಿನ ಊರಿಕಿ ಮನಗಾಡು ರೀಮೇಕ್

    ದೃಶ್ಯಂ : ಮಲಯಾಳಂನ ದೃಶ್ಯಂ ರೀಮೇಕ್. ಈಗ ದೃಶ್ಯ 2 ಕೂಡಾ ರೆಡಿಯಾಗುತ್ತಿದೆ

    ಸಲ್ಮಾನ್ ಖಾನ್ : ಸೋತು ಸುಣ್ಣವಾಗಿದ್ದ ಸಲ್ಲುಗೆ ಯಶಸ್ಸು ಸಿಕ್ಕಿದ್ದೇ ರೀಮೇಕ್‍ಗಳಿಂದ.

    ತೇರೇ ನಾಮ್ : ತಮಿಳಿನ ಸೇತು ರೀಮೇಕ್

    ವಾಂಟೆಡ್ : ತೆಲುಗಿನ ಪೋಕಿರಿ ರೀಮೇಕ್

    ರೆಡಿ : ತೆಲುಗಿನ ರೆಡಿ ರೀಮೇಕ್

    ಬಾಡಿಗಾರ್ಡ್ : ಮಲಯಾಳಂನ ಬಾಡಿಗಾರ್ಡ್ ರೀಮೇಕ್

    ಕಿಕ್ : ತೆಲುಗಿನ ಕಿಕ್ ರೀಮೇಕ್

    ಜುಡ್ವಾ : ತೆಲುಗಿನ ಹಲೋ ಬ್ರದರ್ ರೀಮೇಕ್

    ಜೈ ಹೋ : ತೆಲುಗಿನ ಸ್ಟಾಲಿನ್ ರೀಮೇಕ್

    ಬೀವಿ ನಂ.1 : ತಮಿಳಿನ ಸತಿ ಲೀಲಾವತಿ

    ಅಮೀರ್ ಖಾನ್ ಚಿತ್ರಗಳಲ್ಲೂ ರೀಮೇಕ್ ಇದೆ. ಆದರೆ ಹೋಲಿಸಿದರೆ ಕಡಿಮೆ.

    ಗಜಿನಿ : ತಮಿಳಿನ ಗಜಿನಿ ಚಿತ್ರದ ರೀಮೇಕ್

    ಉಳಿದಂತೆ ಅಮೀರ್ ಕಣ್ಣು ಹಾಕೋದು ಹಾಲಿವುಡ್ ಚಿತ್ರಗಳ ಮೇಲೆ.

    ಅಕ್ಷಯ್ ಕುಮಾರ್ ಚಿತ್ರಗಳ ಸಂಖ್ಯೆ ಬಹಳ ದೊಡ್ಡದು. ವರ್ಷಕ್ಕೆ ಕನಿಷ್ಠ ಮೂರರಿಂದ 5 ಚಿತ್ರಗಳಲ್ಲಿ ನಟಿಸೋ ಅಕ್ಷಯ್ ವರ್ಷಕ್ಕೆ ಒಂದಾದರೂ ರೀಮೇಕ್‍ನಲ್ಲಿ ನಟಿಸುತ್ತಾರೆ.

    ಹೇರಾಫೇರಿ : ಮಲಯಾಳಂನ ರಾಮೋಜಿರಾವ್ ಸ್ಪೀಕಿಂಗ್‍ನ ರೀಮೇಕ್

    ರೌಡಿ ರಾಥೋರ್ : ತೆಲುಗಿನ ವಿಕ್ರಮಾರ್ಕುಡು ರೀಮೇಕ್

    ಲಕ್ಷ್ಮಿ : ತಮಿಳಿನ ಕಾಂಚನಾ ರೀಮೇಕ್

    ಭೂಲ್ ಬುಲಯ್ಯಾ : ಮಲಯಾಳಂನ ಮಣಿಚಿತ್ರತ್ತಾಳ್ ರೀಮೇಕ್ (ಕನ್ನಡದ ಆಪ್ತಮಿತ್ರ)

    ಹಾಲಿಡೇ : ತಮಿಳಿನ ತುಪಾಕಿ ರೀಮೇಕ್

    ಬಚ್ಚನ್ ಪಾಂಡೆ : ತಮಿಳಿನ ಜಿಗರ್‍ಥಾಂಡ

    ಗಬ್ಬರ್ ಈಸ್ ಬ್ಯಾಕ್ : ತಮಿಳಿನ ರಮಣ ರೀಮೇಕ್

    ಮುಂಬರುವ ಅಕ್ಷಯ್ ಕುಮಾರ್ ರೀಮೇಕ್ ಚಿತ್ರಗಳು : ಸೆಲ್ಫೀ (ಮಲಯಾಳಂನ ಡ್ರೈವಿಂಗ್ ಲೈಸೆನ್ಸ್) ಮಿಷನ್ ಸಿಂಡ್ರೆಲಾ (ತಮಿಳಿನ ರತ್ಸಾನಂ) ಸೂರರೈ ಪೊಟ್ರು ತಮಿಳಿಂದ ರೀಮೇಕ್. ಇದು ಕನ್ನಡಿಗ ಕ್ಯಾಪ್ಟರ್ ಗೋಪಿನಾಥ್ ಕಥೆ

    ಇನ್ನು ಸೈಫ್ ಅಲಿ ಖಾನ್, ಜಾನ್ ಅಬ್ರಹಾಂ, ಅಭಿಷೇಕ್ ಬಚ್ಚನ್, ಶಾಹಿದ್ ಕಪೂರ್, ಅನಿಲ್ ಕಪೂರ್.. ಹೀಗೆ ಬಾಲಿವುಡ್‍ನ ಹಲವು ಹೀರೋಗಳಿಗೆ ಪುನರ್ಜನ್ಮ ಕೊಟ್ಟಿರುವುದೇ ರೀಮೇಕ್ ಚಿತ್ರಗಳು. ಹಾಗೆ ಬರುತ್ತಿದ್ದ ಚಿತ್ರಗಳು ಇದ್ದಕ್ಕಿದ್ದಂತೆ ರೀಮೇಕ್ ಮಾಡೋಕೂ ಅವಕಾಶ ಕೊಡದಂತೆ ನೇರವಾಗಿ ಬಂದು ಗೆದ್ದಾಗ.. ಸಹಜವಾಗಿಯೇ ಕಾಡುವ ಅಸ್ಥಿತ್ವದ ಭಯ ಅವರನ್ನು ಕಾಡುತ್ತಿದೆ.. ದಟ್ಸಾಲ್.

  • ನಟ ಧೃವ ಶರ್ಮಾ ನಿಧನಕ್ಕೆ ಬಾಲಿವುಡ್ ಕಣ್ಣೀರು

    dhruva sharma death

    ಕಿವುಡ ಮತ್ತು ಮೂಗನಾಗಿದ್ದರೂ, ತೆರೆಯಲ್ಲಿ ಅದು ಕಾಣದಷ್ಟು ಸೊಗಸಾಗಿ ನಟಿಸುತ್ತಿದ್ದ ಧೃವ ಶರ್ಮಾಗೆ ಚಿತ್ರರಂಗದಲ್ಲಿ ದೊಡ್ಡ ಹಿಟ್ ಎನ್ನುವುದು ಸಿಕ್ಕಿರಲಿಲ್ಲ. ಆದರೆ, ಸಿಸಿಎಲ್​ನಲ್ಲಿ ಭರ್ಜರಿಯಾಗಿ ಆಡುತ್ತಿದ್ದ ಧೃವ ಶರ್ಮಾ ಬಾಲಿವುಡ್ ಸಂಪರ್ಕಕ್ಕೆ ಬಂದಿದ್ದರು. ಹೀಗಾಗಿಯೇ ಬಾಲಿವುಡ್​ನ ಹಲವು ಸೆಲಬ್ರಿಟಿಗಳ ಪರಿಚಯವಾಗಿತ್ತು.

    ಹೀಗೆ ಸಿಸಿಎಲ್​ನಲ್ಲಿ ಧೃವ ಶರ್ಮಾ ಪ್ರತಿಭೆಗೆ ಮಾರು ಹೋಗಿದ್ದ ಬಾಲಿವುಡ್ ತಾರೆಯರಿಗೂ ಧೃವ ಶರ್ಮಾ ನಿಧನ ಆಘಾತ ನೀಡಿದೆ. ಟ್ವಿಟರ್ ಮೂಲಕ ಬಾಲಿವುಡ್ ತಾರೆಯರು, ಧೃವ ಶರ್ಮಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ. 

    ಸುಮಲತಾ ಅಂಬರೀಷ್, ಪ್ರಿಯಾಮಣಿ,  ರಿತೇಶ್ ದೇಶ್​ಮುಖ್, ಅಫ್ತಾಬ್ ಶಿವದಾಸನಿ, ನಿಖೇಶಾ ಪಟೇಲ್, ಡ್ಯಾನಿಶ್ ಸೇಠ್ ಮೊದಲಾದವರು ಧೃವ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

    Related Articles :-

    ಧೃವ ಶರ್ಮಾ ನಿಧನಕ್ಕೆ ಕಂಬನಿ ಮಿಡಿದ ಚಿತ್ರರಂಗ

    ನಟ ಧೃವ ಶರ್ಮಾ ಸಾವು ಸಹಜ ಸಾವಲ್ಲ. ಆತ್ಮಹತ್ಯೆ..?

    Actor-Cricketer Dhruva Sharma No More

    ನಟ - ಸಿಸಿಎಲ್ ಆಟಗಾರ ಧ್ರುವ ಶರ್ಮಾ ನಿಧನ - ವಯಸ್ಸು 35

  • ಶ್ರೀರಾಮನಾಗುತ್ತಿದ್ದಾರೆ ದೂದ್‍ಪೇಡ ದಿಗಂತ್..!

    diganth in bollywood as sri rama

    ದಿಗಂತ್ ಅಂದ್ರೆ ದೂದ್‍ಪೇಡ. ದಿಗಂತ್ ಅಂದ್ರೆ ಚಾಕೊಲೇಟ್ ಬಾಯ್. ದಿಗಂತ್ ಅಂದ್ರೆ ಹರೆಯದ ಹುಡುಗಿಯರ ಹೃದಯ ಸಾಮ್ರಾಟ. ಪೋಲಿತನ, ದಿಗಂತ್ ಅವರ ಆಭರಣ. ಅಂಥಾದ್ದರಲ್ಲಿ ಈ ದಿಗಂತ್, ಮರ್ಯಾದಾ ಪುರುಷೋತ್ತಮ ಶ್ರೀರಾಮನಾಗಿ ನಟಿಸೋಕೆ ಯೆಸ್ ಎಂದಿದ್ದಾರೆ. 

    ಬಾಲಿವುಡ್‍ನಲ್ಲಿ ಕುನಾಲ್ ಕೊಹ್ಲಿ ರಾಮಾಯಣವನ್ನಿಟ್ಟುಕೊಂಡು ಹೊಸ ಸಿನಿಮಾ ಮಾಡುತ್ತಿದ್ದಾರೆ. ಫನಾ, ಹಮ್‍ತುಮ್.. ಸಿನಿಮಾ ನಿರ್ದೇಶಿಸಿದ್ದ ಕುನಾಲ್ ಕೊಹ್ಲಿ, ಈ ಬಾರಿ ಪೌರಾಣಿಕ ಚಿತ್ರವನ್ನೆತ್ತಿಕೊಂಡಿದ್ದಾರೆ. ಅವರಿಗೆ ದಿಗಂತ್, ಶ್ರೀರಾಮಚಂದ್ರನ ಪಾತ್ರಕ್ಕೆ ಓಕೆ ಎನ್ನಿಸಿದೆ. 

    ಕಥೆಯೊಂದು ಶುರುವಾಗಿದೆ ಯಶಸ್ಸಿನ ಸಂಭ್ರಮದಲ್ಲಿರುವ ದಿಗಂತ್, ಕೆಲವೇ ದಿನಗಳಲ್ಲಿ ನಿರ್ದೇಶಕರು ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ ಎಂದು ತಿಳಿಸಲಿದ್ದಾರೆ. ಆ ಸಿನಿಮಾ 2 ಭಾಗಗಳಲ್ಲಿ ರಿಲೀಸ್ ಆಗಲಿದೆ ಎಂದು ತಿಳಿಸಿದ್ದಾರೆ ದಿಗಂತ್.

  • ಸಿನಿಮಾ ಟಿಕೆಟ್ ಜಿಎಸ್‍ಟಿ ಇಳಿಕೆ - ಮೋದಿಗೆ ಬಾಲಿವುಡ್ ಥ್ಯಾಂಕ್ಸ್

    movie ticket price ghst drops down

    ಚಿತ್ರಮಂದಿರಗಳಲ್ಲಿ, ಮಲ್ಟಿಪ್ಲೆಕ್ಸುಗಳಲ್ಲಿ ಸಿನಿಮಾ ಟಿಕೆಟ್ ದರ ದುಬಾರಿ ಎನ್ನುತ್ತಿದ್ದವರಿಗೆ ಕೇಂದ್ರ ಸರ್ಕಾರ ಗುಡ್‍ನ್ಯೂಸ್ ಕೊಟ್ಟಿದೆ. ಟಿಕೆಟ್ ದರದ ಮೇಲಿದ್ದ ತೆರಿಗೆ ಹೊರೆಯ್ನು ಇಳಿಸಿದೆ. 

    100 ರೂ. ಒಳಗಿನ ಸಿನಿಮಾ ಟಿಕೆಟ್ ಮೇಲಿನ ಜಿಎಸ್‍ಟಿ, ಜನವರಿಯಿಂದ ಶೇ.18ರಿಂದ 12ಕ್ಕೆ ಇಳಿಕೆಯಾಗಲಿದೆ. 

    100 ರೂ.ಗಿಂತ ಮೇಲ್ಪಟ್ಟ ಸಿನಿಮಾ ಟಿಕೆಟ್‍ಗಳ ಮೇಲಿನ ಜಿಎಸ್‍ಟಿ, ಜನವರಿಯಿಂದ ಶೇ.28ರಿಂದ ಶೇ.18ಕ್ಕೆ ಇಳಿಕೆಯಾಗಲಿದೆ. 

    ಇದರ ಪರಿಣಾಮ, ಸಿನಿಮಾ ಟಿಕೆಟ್‍ಗಳ ದರ ಸ್ವಲ್ಪ ಮಟ್ಟದಲ್ಲಿ ತಗ್ಗಲಿದೆ.

    ಈ ಹಿನ್ನೆಲೆಯಲ್ಲಿ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ಅಜಯ್ ದೇವಗನ್, ಅಮೀರ್ ಖಾನ್ ಮೊದಲಾದವರು ಸ್ವಾಗತಿಸಿದ್ದಾರೆ. ಇದರಿಂದ ಚಿತ್ರೋದ್ಯಮಕ್ಕೆ ಲಾಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ್ದಾರೆ. ಜಿಎಸ್‍ಟಿ ಇಳಿಸಬೇಕು ಎಂದು ಒತ್ತಾಯಿಸಿ ನಟ ಅಕ್ಷಯ್ ಕುಮಾರ್ ನೇತೃತ್ವದಲ್ಲಿ ಚಿತ್ರರಂಗದ ಗಣ್ಯರು ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

  • ಹಿಂದಿಗೆ ಹಾರುತ್ತಿದೆ ಕಿರಿಕ್ ಪಾರ್ಟಿ

    kirik party goes tp bollywood

    ರಕ್ಷಿತ್ ಶೆಟ್ಟಿ ಅಭಿನಯಿಸಿ ನಿರ್ಮಿಸಿದ ಸೂಪರ್ ಹಿಟ್ ಸಿನಿಮಾ ಕಿರಿಕ್ ಪಾರ್ಟಿ ಇನ್ನೊಂದು ಹೊಸ ದಾಖಲೆ ಬರೆಯುತ್ತಿದೆ. ಚಿತ್ರ ಹಿಂದಿಯಲ್ಲಿ ರೀಮೇಕ್ ಆಗುತ್ತಿದೆ. ಕೆವೈಟಿಎ ಪ್ರೊಡಕ್ಷನ್ಸ್ ಸಂಸ್ಥೆ ಕಿರಿಕ್ ಪಾರ್ಟಿ ಚಿತ್ರದ ಹಿಂದಿ ರೈಟ್ಸ್​ ಖರೀದಿಸಿದೆ. ಸ್ವತಃ ರಕ್ಷಿತ್ ಶೆಟ್ಟಿ ಈ ವಿಷಯ ಬಹಿರಂಗಪಡಿಸಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತಾ ಹೆಗಡೆ ನಟಿಸಿದ್ದ ಚಿತ್ರ, ಕನ್ನಡದಲ್ಲಿ ಭರ್ಜರಿ ಸದ್ದು ಮಾಡಿತ್ತು.

    ರಕ್ಷಿತ್‌ ಶೆಟ್ಟಿ ಅಭಿನಯದ ಚಿತ್ರಗಳು ಪರಭಾಷೆಗೆ ಹೋಗುತ್ತಿರುವುದು ಇದೇನೂ ಮೊದಲಲ್ಲ. ಈ ಹಿಂದೆ  'ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿ' ಚಿತ್ರ ತೆಲುಗಿನಲ್ಲಿ ರಿಮೇಕ್‌ ಆಗಿತ್ತು. ಇನ್ನು ಅವರೇ ನಿರ್ದೇಶಿಸಿ, ಆಭಿನಯಿಸಿದ 'ಉಳಿದವರು ಕಂಡಂತೆ' ಚಿತ್ರ ತಮಿಳಿನಲ್ಲಿ 'ರಿಚ್ಚಿ'ಯಾಗಿ ಬರೋಕೆ ಸಿದ್ಧವಾಗಿದೆ. 

    ಈಗ ಮತ್ತೊಂದು ರಕ್ಷಿತ್‌ ಅಭಿನಯದ ಚಿತ್ರ ತೆಲುಗು, ತಮಿಳು ಅಷ್ಟೇ ಅಲ್ಲ ಬಾಲಿವುಡ್‌ನಲ್ಲೂ ಮಿಂಚಲು ರೆಡಿಯಾಗಿದೆ. ಈಗಾಗಲೇ ಕಿರಿಕ್ ಪಾರ್ಟಿ ತೆಲುಗಿನಲ್ಲಿ ಸಿದ್ಧವಾಗುತ್ತಿದ್ದು, ತಾರಾಗಣದ ಆಯ್ಕೆ ನಡೆಯುತ್ತಿದೆ.