` darshan, - chitraloka.com | Kannada Movie News, Reviews | Image

darshan,

  • ‘ದರ್ಶನ್ ಬಿಲ್ಡಪ್’ ಸಂಜನಾ ಹೇಳಿಕೆ ಹಿಂದಿನ ಕಾರಣವೇ ಬಿಲ್ಡಪ್ - EXCLUSIVE

    sanjana's is pre planned gimmick

    ದರ್ಶನ್ ಚಿತ್ರಗಳಲ್ಲಿ ಬಿಲ್ಡಪ್ ಜಾಸ್ತಿಯಿರುತ್ತೆ.. ಇದು ನಟಿ ಸಂಜನಾ ಹೇಳಿರೋ ಮಾತು. ಇಷ್ಟಕ್ಕೂ ಸಂಜನಾ ಹೇಳಿರೋ ಮಾತಿನ ಹಿಂದಿನ ಮರ್ಮವೇನು..? ಸಂಜನಾ ಈ ಹೇಳಿಕೆ ನೀಡಿದ್ದಾರಲ್ಲಾ.. ಇದು ಆಕಸ್ಮಿಕವಲ್ಲ. ಸಂಜನಾ ಉದ್ದೇಶಪೂರ್ವಕವಾಗಿಯೇ ಬಿಲ್ಡಪ್ ಉತ್ತರ ಕೊಟ್ಟಿದ್ದಾರೆ ಎನ್ನುವುದು ಚಿತ್ರಲೋ ಡಾಟ್ ಕಾಮ್​ಗೆ ಖಚಿತವಗಿದೆ.

    ಸಂಜನಾ ಹೇಳಿಕೆ ನೀಡಿರೋದು ಕಲೡೞ ಕನ್ನಡ ವಾಹಿನಿಯ ಸೂಪರ್ ಟಾಕ್ ಟೈಂ ಶೋನಲ್ಲಿ. ನಿರೂಪಕ ಅಕುಲ್ ಬಾಲಾಜಿ. ಅದು ರೆಕಾರ್ಡೆಡ್ ಕಾರ್ಯಕ್ರಮ. ಆ ದಿನ ಇಂಥಹ ಪ್ರಶ್ನೆಗಳು ಬರುತ್ತವೆ ಎನ್ನುವುದು ಸಂಜನಾಗೆ ಗೊತ್ತಿತ್ತು. ಇಂತಹ ಪ್ರಶ್ನೆಗಳಿಗೆ ದೊಡ್ಡ ಸೆಲಬ್ರಿಟಿಗಳ ಹೆಸರು ಬಳಸಿಕೊಳ್ಳಬೇಕೆಂದು ಸಂಜನಾ ನಿರ್ಧರಿಸಿಯೂ ಆಗಿತ್ತು. ಅದನ್ನು ಅಲ್ಲಿದ್ದ ಕೆಲವರ ಜೊತೆ ಹೇಳಿಕೊಂಡಿದ್ದರು ಎನ್ನುವ ವಿಚಾರವನ್ನು  ಕೂಡಾ ಚಿತ್ರಲೋಕ ಡಾಟ್ ಕಾಮ್ ಸುದ್ದಿಮೂಲಗಳು ಸ್ಪಷ್ಟಪಡಿಸಿವೆ.

    ಸಂಜನಾರ ನಿರ್ಧಾರದ ಬಗ್ಗೆ ಕೆಲವರು ಬುದ್ದಿಮಾತನ್ನು ಹೇಳಿದ್ದಾರೆ. ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡುತ್ತಾರೆ. ಟೀಕಿಸುತ್ತಾರೆ ಎಂದೆಲ್ಲ ತಿಳಿಸಿದ್ದಾರೆ. ಆದರೆ ಸಂಜನಾ ನನಗೆ ಬೇಕಿರುವುದೇ ಅದು. ಮಿನಿಮಮ್ ಒಂದು ವಾರ ಸುದ್ದಿಯಲ್ಲಿರುತ್ತೇನೆ. ಅದು ನೆಗೆಟಿವ್ ಆದರೂ ಆಗಲೀ, ಪಾಸಿಟಿವ್ ಆದರೂ ಆಗಲಿ. ನಾನು ಪ್ರಚಾರದಲ್ಲಿರುತ್ತೇನೆ ಎಂದಿದ್ದಾರೆ.

    ಅಲ್ಲಿಗೆ ಸಂಜನಾರ ಈ ಮಾತಿನ ಹಿಂದಿರೋದು ಪ್ರಚಾರದ ಹುಚ್ಚೇ ಹೊರತು ಮತ್ತೇನೂ ಅಲ್ಲ ಅನ್ನೋದು ಪಕ್ಕಾ ಆಗಿದೆ. ಆಕೆಯ ನಿರೀಕ್ಷೆಯಂತೆಯೇ ಈಗ ದರ್ಶನ್ ಅಭಿಮಾನಿಗಳು ಸಂಜನಾಗೆ ಝಾಡಿಸುತ್ತಿದ್ದಾರೆ. ನ್ಯೂಸ್ ಚಾನೆಲ್ಲುಗಳಲ್ಲಿ ಸುದ್ದಿಯಾಗುತ್ತಿದೆ. ಆಕೆಯ ಪ್ರಚಾರದ ಬಯಕೆಯೂ ಈಡೇರಿದೆ. ಸಿಂಪಲ್ಲಾಗಿ ಹೇಳಬೇಕೆಂದರೆ, ಸಂಜನಾ ದರ್ಶನ್ ಹೆಸರಲ್ಲಿ ಪ್ರಚಾರದ ಬೇಳೆ ಬೇಯಿಸಿಕೊಂಡಿದ್ದಾರೆ.

    ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಿರೋದು ಇಷ್ಟೆ. ಆಕೆಗೆ ದರ್ಶನ್ ಹೆಸರು ಹೇಳಿ ಫೇಮಸ್ ಆಗುವ, ಸುದ್ದಿಯಾಗುವ ಹುಚ್ಚು. ಸುದ್ದಿಯನ್ನು ತಾವೇ ಸೃಷ್ಟಿಸಿಕೊಂಡು, ಬೇಕೆಂದೇ ಮಾಡಿಕೊಳ್ಳುವ ಹುಚ್ಚು ಮನಸ್ಸುಗಳನ್ನು ನಿರ್ಲಕ್ಷಿಸುವುದೇ ಉತ್ತಮ ಅಲ್ಲವೇ..?

  • ದರ್ಶನ್ ಡಬಲ್ ಆ್ಯಕ್ಟಿಂಗ್..?

    darshan milana prakash image

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಬಲ್ ಆ್ಯಕ್ಟಿಂಗ್ ಮಾಡೋಕೆ ಮತ್ತೊಮ್ಮೆ ರೆಡಿಯಾಗಿದ್ದಾರೆ. ಈ ಹಿಂದೆ ಭೂಪತಿ, ಇಂದ್ರ ಮೊದಲಾದ ಚಿತ್ರಗಳಲ್ಲಿ ದ್ವಿಪಾತ್ರಗಳಲ್ಲಿ ನಟಿಸಿರುವ ದರ್ಶನ್, ಈ ಬಾರಿ ಒನ್ಸ್ ಎಗೇಯ್ನ್ ಡಬಲ್ ಆ್ಯಕ್ಟಿಂಗ್‍ಗೆ ಬಣ್ಣ ಹಚ್ಚುತ್ತಿದ್ದಾರೆ.

    you_tube_chitraloka1.gif

    ದರ್ಶನ್‍ಗೆ ಡಬಲ್ ಆ್ಯಕ್ಟಿಂಗ್ ಜವಾಬ್ದಾರಿ ಕೊಟ್ಟಿರುವುದು ಮಿಲನ ಪ್ರಕಾಶ್. ದರ್ಶನ್‍ಗೆ ತಾರಕ್ ಎಂಬ ಕೌಟುಂಬಿಕ ಹಿಟ್ ಚಿತ್ರ ಕೊಟ್ಟಿರುವ ಪ್ರಕಾಶ್, ಈ ಬಾರಿ ದರ್ಶನ್ ಅವರಿಗಾಗಿಯೇ ವಿಭಿನ್ನ ಕಥೆ ಹೆಣೆದಿದ್ದು, ದ್ವಿಪಾತ್ರ ಮಾಡಲಿದ್ದಾರಂತೆ ದರ್ಶನ್. ಏನ್ ಕಥೆ ಎಂದರೆ ದರ್ಶನ್ ಸಿಕ್ಕಲ್ಲ, ಪ್ರಕಾಶ್ ಮಾತನಾಡಲ್ಲ. ಸದ್ಯಕ್ಕೆ ಗಾಂಧಿನಗರದಲ್ಲಿ ಈ ಸುದ್ದಿ ಭರ್ಜರಿ ಸದ್ದು ಮಾಡ್ತಿರೋದಂತೂ ನಿಜ.

  • ದರ್ಶನ್ ಮನೆಗೆ ಲ್ಯಾಂಬೋರ್ಗಿನಿ ಬಂದೇ ಬಿಟ್ಲು..!

    lamborgini in darshan's house

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನೆ ಎದುರು ನಿಂತಿದ್ದ ಶ್ವೇತುಸುಂದರಿಯನ್ನ ಇದೇ ಚಿತ್ರಲೋಕದಲ್ಲಿ ಕೆಲವೇ ದಿನಗಳ ಹಿಂದೆ ನೋಡಿದ್ದಿರಿ. ಆದರೆ ಅದು ಟೆಸ್ಟ್ ಡ್ರೈವ್‍ಗಾಗಿ ತರಿಸಿಕೊಂಡಿದ್ದ ಲ್ಯಾಂಬೊರ್ಗಿನಿ. ಈಗ ಆ ಶ್ವೇತ ಸುಂದರಿ ಅಧಿಕೃತವಾಗಿಯೇ ದರ್ಶನ್ ಮನೆಗೆ ಸೇರಿಕೊಂಡಿದ್ದಾಳೆ.

    ಸಂಕ್ರಾಂತಿ ಸಡಗರದ ಮಧ್ಯೆಯೇ ಹೊಸ ಕಾರಿಗೂ ಪೂಜೆ ನಡೆದಿದೆ. ಲ್ಯಾಂಬೊರ್ಗಿನಿ ಖರೀದಿಸಿರುವ ಕನ್ನಡ ಚಿತ್ರರಂಗದ ಮೊದಲ ನಟ ದರ್ಶನ್. ಪೂಜೆ ಮಾಡಿಸಿದ ನಂತರ ದರ್ಶನ್, ತಮ್ಮ ಮನೆಯಿಂದ ಮೈಸೂರಿಗೆ ಲಾಂಗ್ ಡ್ರೈವ್ ಹೋಗಿ ಬಂದಿದ್ದಾರೆ.

    ಈಗಾಗಲೇ ಮನೆಯಲ್ಲಿ 5 ಕಾರುಗಳನ್ನಿಟ್ಟುಕೊಂಡಿರುವ ದರ್ಶನ್‍ಗೆ ಇದು ಹೊಸ ಅತಿಥಿ.  5 ಕೋಟಿಗೂ ಹೆಚ್ಚು ಬೆಲೆ ಬಾಳುವ ಈ ಶ್ವೇತ ಸುಂದರಿ ಈಗ ಪ್ರತಿಷ್ಠೆಯ ಸಂಕೇತವೂ ಹೌದು.

    Related Articles :-

    ದರ್ಶನ್ ಮನೆಗೆ ಬಂದಳು ಶ್ವೇತಸುಂದರಿ

  • ದರ್ಶನ್ ರಾಬರ್ಟ್ ಚಿತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ವೇಯ್ಟಿಂಗ್

     ದರ್ಶನ್ ರಾಬರ್ಟ್ ಚಿತ್ರಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ವೇಯ್ಟಿಂಗ್

    ವಿಧಾನಸೌಧದಲ್ಲಿ ದರ್ಶನ್ ರೈತ ರಾಯಭಾರಿಯಾಗಿ ಅಧಿಕಾರ ಸ್ವೀಕರಿಸಿದಾಗ ಅವರ ಎದುರು ಇದ್ದದ್ದು ರೈತ ನಾಯಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಯಾವುದೇ ಸಂಭಾವನೆಯಿಲ್ಲದೆ ಕೃಷಿ ಇಲಾಖೆಯ ರಾಯಭಾರಿಯಾಗಿರುವ ದರ್ಶನ್ ಅವರನ್ನು ಹೊಗಳಿದ ಯಡಿಯೂರಪ್ಪ ದರ್ಶನ್ ಅವರ ರಾಬರ್ಟ್ ಚಿತ್ರದ ಬಗ್ಗೆ ಹಲವರು ಹೇಳುತ್ತಿದ್ದಾರೆ. ನಾನೂ ಕೂಡಾ ತಪ್ಪದೇ ಆ ಸಿನಿಮಾ ನೋಡುತ್ತೇನೆ ಎಂದು ಹೇಳಿದರು.

    ಇದೊಂದು ವಿಶೇಷ ಕಾರ್ಯಕ್ರಮ. ದರ್ಶನ್ ಬಗ್ಗೆ ಬಿಸಿ ಪಾಟೀಲ್ ಸಾಕಷ್ಟು ಮಾತನಾಡಿದ್ದಾರೆ‌. ಅವರು ಚಿತ್ರರಂಗದಲ್ಲಿ ಎತ್ತರಕ್ಕೆ ಬೆಳೆದಿದ್ದಾರೆ. ಅವರ ತೋಟದಲ್ಲಿ ಕೃಷಿ ಕೆಲಸ ಮಾಡ್ತಿದ್ದಾರೆ. ದರ್ಶನ್ ಕೃಷಿ ಇಲಾಖೆಯ ರಾಯಭಾರಿಯಾಗಿದ್ದೇ ಸಂತಸ ಎಂದು ಹೇಳಿ ರಾಬರ್ಟ್ ಚಿತ್ರಕ್ಕೆ ಶುಭ ಹಾರೈಸಿದ್ರು.

    ದರ್ಶನ್ ಅಭಿನಯದ 53ನೇ ಸಿನಿಮಾ ರಾಬರ್ಟ್ ಇದೇ ಮಾರ್ಚ್ 11ರಂದು ಶಿವರಾತ್ರಿ ಹಬ್ಬದ ಸ್ಪೆಷಲ್ ಆಗಿ ರಿಲೀಸ್ ಆಗುತ್ತಿದೆ. ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಚಿತ್ರಕ್ಕೆ ಉಮಾಪತಿ ನಿರ್ಮಾಪಕ. ದರ್ಶನ್ ಎದುರು ನಾಯಕಿಯಾಗಿ ಆಶಾ ಭಟ್, ವಿನೋದ್ ಪ್ರಭಾಕರ್, ಸೋನಲ್ ಮಂಥೆರೋ, ದೇವರಾಜ್, ರವಿಶಂಕರ್, ಚಿಕ್ಕಣ್ಣ,ಜಗಪತಿ ಬಾಬು ಮೊದಲಾದವರು ನಟಿಸಿದ್ದಾರೆ.

  • ದರ್ಶನ್‍ಗೆ ಅಜ್ಜನಾಗಲು ದೇವರಾಜ್ ಒಪ್ಪಿದ್ದು ಹೇಗೆ..?

    devraj as darshan's grand father in tarak

    ತಾರಕ್‍ನಲ್ಲಿ ಡೈನಮಿಕ್ ಸ್ಟಾರ್ ದೇವರಾಜ್ ದರ್ಶನ್‍ಗೆ ಅಜ್ಜನಾಗಿ ನಟಿಸುತ್ತಿದ್ದಾರೆ. ದೇವರಾಜ್ ಅವರ ಅನುಭವಕ್ಕೆ ಹೋಲಿಸಿದರೆ, ಆ ಪಾತ್ರ ಅವರಿಗೆ ಸವಾಲು ಎನಿಸಲು ಸಾಧ್ಯವಿಲ್ಲ. ಅದರಲ್ಲೂ ದೇವರಾಜ್ ಮೂಲತಃ ರಂಗಭೂಮಿ ಕಲಾವಿದರು. ಹೀಗಿದ್ದರೂ ದೇವರಾಜ್ ಪಾತ್ರದ ವಿವರ ಹೇಳುತ್ತಿದ್ದಂತೆ ಒಪ್ಪಿಕೊಳ್ಳಲಿಲ್ಲವಂತೆ.

    ಆದರೆ, ದೇವರಾಜ್‍ಗೆ ಪಾತ್ರ ಮತ್ತು ಕಥೆ ಇಷ್ಟವಾಗಿತ್ತು. ಹೀಗಾಗಿ ಚಿತ್ರದಲ್ಲಿ ನಟಿಸುವ ಮುನ್ನ ಅವರೊಂದು ಷರತ್ತು ಹಾಕಿದರು. ಏನೆಂದರೆ, ಚಿತ್ರದಲ್ಲಿ ತಾನು ಹೇಗೆ ಕಾಣುತ್ತೇನೆ ಅನ್ನೋದನ್ನು ಮೇಕಪ್ ಸಮೇತ ಟೆಸ್ಟ್ ಮಾಡಬೇಕು. ಅದನ್ನು ನೋಡಿ ಅದು ಇಷ್ಟವಾದರೆ ಮಾತ್ರ ನಾನು ನಟಿಸುತ್ತೇನೆ ಎಂದರು. 

    ಕೊನೆಗೆ ತಾರಕ್‍ನಲ್ಲಿನ ಅವರ ಪಾತ್ರದ ಸಂಪೂರ್ಣ ಲುಕ್‍ನ್ನು ನೋಡಿ, ಸಮಾಧಾನವಾದ ಮೇಲೇ ದೇವರಾಜ್ ನಟಿಸಲು ಒಪ್ಪಿಕೊಂಡಿದ್ದು. ಈಗ ತಾರಕ್ ರಿಲೀಸಾಗುತ್ತಿದೆ. ನಿರ್ದೇಶಕ ಮಿಲನ ಪ್ರಕಾಶ್ ಆ ಅನುಭವವನ್ನು ಹಂಚಿಕೊಂಡಿದ್ದಾರೆ.

     

  • ದುರ್ಯೋಧನ ದರ್ಶನ್‍ಗೆ ಭಾನುಮತಿ ರಮ್ಯಾ

    ramya nambeesan

    ಕುರುಕ್ಷೇತ್ರದ ದುರ್ಯೋಧನ ದರ್ಶನ್‍ಗೆ ಕೊನೆಗೂ ಭಾನುಮತಿ ಸಿಕ್ಕಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಎದುರು ಭಾನುಮತಿಯಾಗಿ ನಟಿಸುತ್ತಿರುವುದು ರಮ್ಯಾ ನಂಬೀಸನ್. 

    ಈ ಮೊದಲು ನಟಿ ರೆಜಿನಾ ಕ್ಯಾಸಂಡ್ರಾ ಭಾನುಮತಿ ಎಂದು ಹೇಳಲಾಗಿತ್ತು. ರೆಜಿನಾ ಕೂಡಾ ಈ ಬಗ್ಗೆ ಹೇಳಿಕೊಂಡಿದ್ದರು. ಆದರೆ, ಭಾನುಮತಿಯ ಪಾತ್ರಕ್ಕೆ ಇನ್ನೂ ಪಾತ್ರಧಾರಿ ಅಂತಿಮವಾಗಿಲ್ಲ ಎಂದು ದರ್ಶನ್ ಕೂಡಾ ಹೇಳಿದ್ದರು. ಈಗ ಭಾನುಮತಿಯ ಪಾತ್ರಕ್ಕೆ ರಮ್ಯಾ ನಂಬೀಸನ್ ಆಯ್ಕೆಯಾಗಿದ್ದಾರೆ.

    ಕುರುಕ್ಷೇತ್ರದಲ್ಲಿ ಕುಂತಿ ಲಕ್ಷ್ಮಿ ಅಲ್ಲ, ಭಾರತಿ..!

    ಕುರುಕ್ಷೇತ್ರ ಚಿತ್ರ ಸೆಟ್ಟೇರಿದಾಗಿನಿಂದಲೂ ಯಾವ ಪಾತ್ರಕ್ಕೆ ಯಾರು ಎಂಬ ಕುತೂಹಲ ಪ್ರೇಕ್ಷಕರು, ಅಭಿಮಾನಿಗಳಲ್ಲಿ ನಿರಂತವಾಗಿ ಕಾಡುತ್ತಿದೆ. ಕೆಲವು ಪಾತ್ರಗಳು ಇದ್ದಕ್ಕಿದ್ದಂತೆ ಬದಲಾಗಿವೆ. ಇನ್ನೂ ಕೆಲವು ಪಾತ್ರಗಳನ್ನು ಇವರ ಬದಲಿಗೆ, ಅವರು ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ವೀಕ್ಷಕರೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆಯೇ ಮತ್ತೂ ಹಲವು ಪಾತ್ರಗಳ ಪಾತ್ರಧಾರಿಗಳು ಬದಲಾಗಿದ್ದಾರೆ.

    ಭಾನುಮತಿಯ ಜಾಗಕ್ಕೆ ರೆಜಿನಾ ಬದಲು, ರಮ್ಯಾ ಬಂದಂತೆಯೇ, ಕುಂತಿಯಾಗಿ ನಟಿಸಬೇಕಿದ್ದ ಲಕ್ಷ್ಮಿ ಅವರ ಬದಲಿಗೆ ಭಾರತಿ ವಿಷ್ಣುವರ್ಧನ್ ಬಂದಿದ್ದಾರೆ. ಡೇಟ್ ಸಮಸ್ಯೆಯಿಂದಾಗಿ ಲಕ್ಷ್ಮಿ ಕುರುಕ್ಷೇತ್ರ ಚಿತ್ರದಿಂದ ಹೊರನಡೆದಿದ್ದಾರೆ. ಸುಭದ್ರೆಯಾಗಿ ಪವಿತ್ರಾ ಲೋಕೇಶ್ ನಟಿಸುತ್ತಿದ್ದಾರೆ.

  • ಬುಲೆಟ್ ಮಗಳ ಮದುವೆ ಹೊಣೆ ಹೊತ್ತ ದರ್ಶನ್

    darshan steps forward tp hlp bullet prakash's family

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆಯರ ಬಳಗ ದೊಡ್ಡದು. ಒಂದಾನೊಂದು ಕಾಲದಲ್ಲಿ ಬುಲೆಟ್ ಪ್ರಕಾಶ್ ಕೂಡಾ ದರ್ಶನ್ ಗೆಳೆಯರ ಬಳಗದಲ್ಲಿದ್ದವರೇ. ಆದರೆ.. ಅದೇನಾಯ್ತೋ ಏನೋ.. ಬುಲೆಟ್ ಪ್ರಕಾಶ್ ಕೊನೆ ದಿನಗಳಲ್ಲಿ ದರ್ಶನ್ ಅವರ ಗೆಳೆಯರ ಬಳಗದಿಂದ ಹೊರಬಿದ್ದರು. ಏನಾಯ್ತೆಂದು ದರ್ಶನ್ ಬಾಯಿ ಬಿಡಲಿಲ್ಲ. ಬುಲೆಟ್ ಕೂಡಾ ಸ್ಪಷ್ಟವಾಗಿ ಹೇಳಲಿಲ್ಲ. ಆದರೆ ಬುಲೆಟ್ ಪ್ರಕಾಶ್ ನಿಧನದ ನಂತರ ದರ್ಶನ್ ಗೆಳೆಯನ ಕುಟುಂಬದ ನೆರವಿಗೆ ಧಾವಿಸಿ ಬಂದಿದ್ದಾರೆ.

    ಅವನು ಈಗ ನನ್ನ ಗೆಳೆಯ ಹೌದೋ ಅಲ್ವೋ ಅದು ಬೇರೆ ವಿಷಯ. ಆದರೆ ಒಂದು ಕಾಲದಲ್ಲಿ ಗೆಳೆಯನಾಗಿದ್ದವನೇ ತಾನೆ. ಹೆದರಬೇಡಿ. ಬುಲೆಟ್ ಪ್ರಕಾಶ್ ಮಗಳ ಮದುವೆ ಜವಾಬ್ದಾರಿ ನನ್ನದು ಎಂಬ ಸಂದೇಶ ರವಾನಿಸಿದ್ದಾರೆ ದರ್ಶನ್. ನಿರ್ಮಾಪಕ ರಾಮಮೂರ್ತಿ ಮೂಲಕ ಪ್ರಕಾಶ್ ಕುಟುಂಬಕ್ಕೆ ಸಂದೇಶ ಕಳಿಸಿದ್ದಾರೆ.

    Also Read :-

    ಬುಲೆಟ್ ಪ್ರಕಾಶ್ ನಿಧನ

    Actor Bullet Prakash Hospitalized, Condition Critical

  • ಬೆರಗುಗೊಳಿಸುವ ಸಾಧಕಿ : ರಾಬರ್ಟ್ ರಾಣಿ ಆಶಾ ಭಟ್ ಚೆಲುವೆಯಷ್ಟೇ ಅಲ್ಲ..

     ಬೆರಗುಗೊಳಿಸುವ ಸಾಧಕಿ : ರಾಬರ್ಟ್ ರಾಣಿ ಆಶಾ ಭಟ್ ಚೆಲುವೆಯಷ್ಟೇ ಅಲ್ಲ..

    ಆಶಾ ಭಟ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಚಿತ್ರಕ್ಕೆ ಹೀರೋಯಿನ್ ಎಂದಾಗ ಯಾರೀಕೆ ಎಂದು ಹುಬ್ಬೇರಿಸಿದ್ದವರಿಗೆ ಕಡಿಮೆಯೇನೂ ಇರಲಿಲ್ಲ. ಆಮೇಲೆ ಆಕೆ ನಮ್ ಭದ್ರಾವತಿ ಹುಡುಗಿ ಎಂದಾಗ ಓಹೋ ಎಂದು ಉದ್ಘಾರ ತೆಗೆದಿದ್ದರು. ಆಶಾ ಭಟ್ ಹುಟ್ಟಿದ್ದು, ಬೆಳೆದಿದ್ದು, ಪಿಯುವರೆಗೆ ಓದಿದ್ದು ಭದ್ರಾವತಿ ಮತ್ತು ಮೂಡಬಿದರೆಯಲ್ಲಿ. ಅಕ್ಕ ಡಾಕ್ಟರ್ ಆದರೆ, ಆಶಾ ಭಟ್ ಎಂಜಿನಿಯರ್ ಪದವೀಧರೆ. ಅಷ್ಟೇ ಅಲ್ಲ..

    ಆಶಾ ಭಟ್, ಎನ್ಸಿಸಿಯಲ್ಲಿ ಕೆಡೆಟ್ ಆಗಿದ್ದವರು. ಗಣರಾಜ್ಯೋತ್ಸವ ಪರೇಡ್ನಲ್ಲೂ ಭಾಗವಹಿಸಿದ್ದ ದಿಟ್ಟ ಹುಡುಗಿ.ಎನ್ಸಿಸಿ ಕೆಡೆಟ್ ಆಗಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾಗವಹಿಸಿದ ಖ್ಯಾತಿ ಇವರದ್ದು. ಸಾರ್ಕ್ ರಾಷ್ಟ್ರಗಳ ಕೆಡೆಟ್ ನಿಯೋಗದಲ್ಲಿ ಅವರು ಶ್ರೀಲಂಕಾ ಮಿಲಿಟರಿ ಅಕಾಡೆಮಿಗೂ ಭೇಟಿ ಕೊಟ್ಟವರು. 2009ರಲ್ಲಿ ಆಲ್ರೌಂಡರ್ ಪ್ರಶಸ್ತಿಯನ್ನೂ ಗೆದ್ದಿರುವ ಹುಡುಗಿ ಆಶಾ ಭಟ್.

    ಅದಾದ ಮೇಲೆ ಹೊರಳಿದ್ದು ಮಾಡೆಲಿಂಗ್ ಕ್ಷೇತ್ರದತ್ತ. 2014ರಲ್ಲಿ ಟೈಮ್ಸ್ ಗ್ರೂಪ್ನ ಮಿಸ್ ದಿವಾ ಸ್ಪರ್ಧೆಯಲ್ಲಿ ಗೆದ್ದ ಆಶಾ, ಮಿಸ್ ಇಂಡಿಯಾ ಸುಪ್ರಾ ನ್ಯಾಷನಲ್ ಅವಾರ್ಡ್ನ್ನೂ ಗೆದ್ದರು. ಬೆಸ್ಟ್ ಇನ್ ಟ್ಯಾಲೆಂಟ್ ಅವಾರ್ಡ್ನ್ನೂ ಗೆದ್ದರು. ಯಮಾಹಾ, ಕ್ಲೋಸ್ ಅಪ್, ಕಲ್ಯಾಣ್ ಜ್ಯುವೆಲ್ಲರ್ಸ್ ಸೇರಿದಂತೆ ಹಲವು ಸಂಸ್ಥೆಗಳ ಜಾಹೀರಾತುನಲ್ಲೂ ನಟಿಸಿರುವ ಆಶಾ ಭಟ್, ಹಿಂದಿಯಲ್ಲಿ ಜಂಗ್ಲಿ, ದೋಸ್ತನಾ 2 ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ರಾಬರ್ಟ್ ಚಿತ್ರದ ಮೂಲಕ ಹೀರೋಯಿನ್ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  • ರಾಬರ್ಟ್ ನಿರ್ಮಾಪಕರೇ ಗ್ರೇಟ್ : ನರ್ತಕಿ ಥಿಯೇಟರ್ ಓನರ್

    nartaki thaeter owner thanks roberrt movie poucer

    ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಯಾವಾಗ ರಿಲೀಸ್ ಆಗುತ್ತೆ ಅನ್ನೋದೂ ಗೊತ್ತಿಲ್ಲ. ಕನ್‍ಫರ್ಮ್ ಡೇಟ್ ಸಿಕ್ಕಿಲ್ಲ. ಕೊರೊನಾ ಹೋಗಿಲ್ಲ. ಥಿಯೇಟರ್ ತೆರೆದಿಲ್ಲ. ಇಷ್ಟಿದ್ದರೂ ರಾಬರ್ಟ್ ಚಿತ್ರದ ನಿರ್ಮಾಪಕರಿಗೆ ನರ್ತಕಿ ಥಿಯೇಟರ್ ಮಾಲೀಕರು ಕೈಮುಗಿದು ಗ್ರೇಟ್ ಎಂದಿದ್ದಾರೆ. ಏಕೆ ಅನ್ನೋದಕ್ಕೆ ಕಾರಣ ಇಲ್ಲಿದೆ.

    ರಾಬರ್ಟ್ ಚಿತ್ರಕ್ಕೆ ಅಮೇಜಾನ್ ಪ್ರೈಂ 70 ಕೋಟಿಯ ಭರ್ಜರಿ ಆಫರ್ ಕೊಟ್ಟಿತ್ತು. ಆದರೆ ನಿರ್ಮಾಪಕ ಉಮಾಪತಿ ಅದನ್ನು ರಿಜೆಕ್ಟ್ ಮಾಡಿದ್ದರು. ನರ್ತಕಿ ಚಿತ್ರಮಂದಿರದ ಮಾಲೀಕ ನರಸಿಂಹ ಅವರು ರಾಬರ್ಟ್ ನಿರ್ಮಾಪಕರೇ ಗ್ರೇಟ್ ಅನ್ನೋದಕ್ಕೆ ಕಾರಣವೇ ಇದು.

    ರಾಬರ್ಟ್ ನಿರ್ಮಾಪಕರು ಥಿಯೇಟರ್ ಮಾಲೀಕರು ಮತ್ತು ಕಾರ್ಮಿಕರ ಕಷ್ಟ ಅರ್ಥ ಮಾಡಿಕೊಂಡಿದ್ದಾರೆ. ಅಷ್ಟು ದೊಡ್ಡ ಆಫರ್ ಬಂದರೂ ಸಿನಿಮಾವನ್ನು ಥಿಯೇಟರಿನಲ್ಲಿಯೇ ಬಿಡುಗಡೆ ಮಾಡೋದಾಗಿ ಹೇಳಿದ್ದಾರೆ. ಕಲಾವಿದರಿಗೆ ಸ್ಟಾರ್ ಪಟ್ಟ ತಂದುಕೊಡುವುದೇ ಚಿತ್ರಮಂದಿರಗಳು. ಚಿತ್ರವನ್ನು ದರ್ಶನ್ ಅಭಿಮಾನಿಗಳು ಕೈ ಬಿಡುವುದಿಲ್ಲ ಎನ್ನುವ ನಂಬಿಕೆಯಿದೆ ಎನ್ನುವುದು ನರಸಿಂಹ ಅವರ ಭರವಸೆ.

    ನರಸಿಂಹ ಅವರ ಈ ಮಾತಿಗೆ ಕಾರಣ ಬೇರೇನಲ್ಲ. ಇತ್ತೀಚೆಗೆ ಪುನೀತ್ ರಾಜ್‍ಕುಮಾರ್ ತಮ್ಮ ನಿರ್ಮಾಣದ ಎರಡು ಚಿತ್ರಗಳನ್ನು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡಿದ್ದಾರೆ. ಇದಕ್ಕೆ ವ್ಯಕ್ತವಾಗಿರುವ ಪರ ವಿರೋಧ ಪ್ರತಿಕ್ರಿಯೆಗಳಲ್ಲಿ ಇದೂ ಒಂದು.

  • ವಿಷ್ಣುವರ್ಧನ್ ರಾಷ್ಟ್ರೀಯ ಉತ್ಸವಕ್ಕೆ ದರ್ಶನ್ ಶುಭಹಾರೈಕೆ

    vishnu rastreeya utsava

    ನವದೆಹಲಿಯಲ್ಲಿ ನಾಳೆಯಿಡೀ ವಿಷ್ಣುವರ್ಧನ್ ಸ್ಮರಣೆ. ವಿಷ್ಣುವರ್ಧನ್ ಹೆಸರಲ್ಲಿ ರಾಷ್ಟ್ರೀಯ ಉತ್ಸವಕ್ಕೆ ನವದೆಹಲಿ ಸಜ್ಜಾಗಿದೆ. ಐನೂರಕ್ಕೂ ಹೆಚ್ಚು ಅಭಿಮಾನಿಗಳು, ಕಲಾವಿದರು ಪಾಲ್ಗೊಳ್ಳುತ್ತಿರುವ ರಾಷ್ಟ್ರೀಯ ಉತ್ಸವಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭ ಕೋರಿದ್ದಾರೆ.

    ಸರಣಿ ಟ್ವೀಟ್ ಮಾಡಿರುವ ದರ್ಶನ್, ನಿಜವಾದ ಕಲಾವಿದನಿಗೆ ಸಾವೇ ಇಲ್ಲ. ವಿಷ್ಣುವರ್ಧನ್ ಹೆಸರಲ್ಲಿ ರಾಷ್ಟ್ರೀಯ ಉತ್ಸವ ಮಾಡುತ್ತಿರುವ ಎಲ್ಲರಿಗೂ ಅಭಿನಂದನೆಗಳು. ವಿಷ್ಣುವರ್ಧನ್ ಅಭಿಮಾನಿಗಳನ್ನು ಎಷ್ಟು ಪ್ರೀತಿಸುತ್ತಿದ್ದರು ಅನ್ನೋದು ಎಲ್ಲರಿಗೂ ಗೊತ್ತು. ದೈಹಿಕವಾಗಿ ನಮ್ಮನ್ನಗಲಿದ್ದರೂ, ಅವರಿಗೆ ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅಭಿಮಾನಿಗಳಿಗೆ ಮತ್ತೊಮ್ಮೆ ಧನ್ಯವಾದಗಳು. ಒನ್ & ಓನ್ಲಿ ಸಿಂಹ, ಸಾಹಸಸಿಂಹ ಎಂದಿದ್ದಾರೆ ನಟ ದರ್ಶನ್.

    ತಾನೂ ಕೂಡಾ ವಿಷ್ಣುವರ್ಧನ್ ಅಭಿಮಾನಿ ಎಂದಿರುವ ದರ್ಶನ್, ಅಭಿಮಾನಿಗಳ ಪ್ರೀತಿಯನ್ನು ಕೊಂಡಾಡಿದ್ದಾರೆ. ನವದೆಹಲಿಯ ಕನ್ನಡಿಗ ಆಡಿಟೋರಿಯಂನಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಕಲಾವಿದನ ಹೆಸರಲ್ಲಿ ರಾಷ್ಟ್ರೀಯ ಉತ್ಸವ ನಡೆಯುತ್ತಿದೆ. ವಿಷ್ಣು ಸೇನಾ ಸಮಿತಿ ಆಯೋಜಿಸಿರುವ ಈ ಉತ್ಸವದಲ್ಲಿ ವಿಷ್ಣುವರ್ಧನ್ ಅವರ ಮೇಣದ ಪ್ರತಿಮೆ ಅನಾವರಣಗೊಳ್ಳುತ್ತಿದೆ. ಚಿತ್ರಲೋಕ ವೀರೇಶ್ ಅವರು ವಿಷ್ಣುವರ್ಧನ್ ಅವರ ವಿಶೇಷ ಫೋಟೋ ಎಕ್ಸಿಬಿಷನ್ ಆಯೋಜಸಿದ್ದಾರೆ. ವಿಷ್ಣು ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ.

    Related Articles :-

    Darshan Lauds Dr Vishnu Festival 

  • `ಉಸಿರು' ಜೊತೆ ಕೈಜೋಡಿಸಿದ ದರ್ಶನ್

    `ಉಸಿರು' ಜೊತೆ ಕೈಜೋಡಿಸಿದ ದರ್ಶನ್

    ಉಸಿರು. ಚಲನಚಿತ್ರರಂಗದ ಕೆಲವು ಕಲಾವಿದರು, ನಿರ್ದೇಶಕರೇ ಸೇರಿಕೊಂಡು ಕೆಲಸ ಮಾಡುತ್ತಿರುವ ಸಂಸ್ಥೆ ಇದು. ಈ ಸಂಸ್ಥೆ ಆಮ್ಲಜನಕದ ಅಗತ್ಯ ಇರುವವರ ಮನೆಗೇ ಆಮ್ಲಜನಕ ಪೂರೈಸುವ ಕೆಲಸ ಮಾಡುತ್ತಿದೆ. ಕವಿರಾಜ್, ಸಾಧುಕೋಕಿಲ, ಕವಿತಾ ಲಂಕೇಶ್, ಸಂಚಾರಿ ವಿಜಯ್, ನೀತು ಶೆಟ್ಟಿ, ಸುಂದರ್ ಸೇರಿದಂತೆ ಹಲವರು ಈ ತಂಡದಲ್ಲಿದ್ದಾರೆ. ದರ್ಶನ್ ಅವರ ತಮ್ಮ ದಿನಕರ್ ತೂಗುದೀಪ ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದೆ.

    ಈ ಸಂಸ್ಥೆಗೀಗ ಗಜ ಬಲ ಬಂದಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಉಸಿರು ತಂಡದ ಸೇವೆಗೆ ಕೈ ಜೋಡಿಸಿದ್ದಾರೆ. ಲಾಕ್ ಡೌನ್ ಶುರುವಾದಾಗಿನಿಂದ ಮೈಸೂರಿನ ತಮ್ಮ ಫಾರ್ಮ್‍ನಲ್ಲೇ ಬೀಡುಬಿಟ್ಟಿರುವ ದರ್ಶನ್, ಮೈಸೂರಿನಲ್ಲಿ ಉಸಿರು ತಂಡದ ಕಾರ್ಯಾಚರಣೆಗೆ ಕೈ ಜೋಡಿಸಿದ್ದಾರೆ. ಆಮ್ಲಜನಕದ ಅಗತ್ಯ ಇರುವವರು ಉಸಿರು ಸಹಾಯವಾಣಿಗೆ ಕರೆ ಮಾಡಿದರೆ ಉಸಿರು ತಂಡ ತಕ್ಷಣ ನೆರವಿಗೆ ಧಾವಿಸಲಿದೆ.

  • `ಕರಿಯ' ಪ್ರೇಮ್‍ಗೆ 15 ವರ್ಷ

    kariya prem, darshan image

    ಕರಿಯ. 2003ರಲ್ಲಿ ರಿಲೀಸ್ ಆಗಿದ್ದ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬೆಳಕಿಗೆ ಬಂದವರು ಪ್ರೇಮ್. ಮೆಜೆಸ್ಟಿಕ್‍ನಿಂದ ಹೀರೋ ಆಗಿದ್ದ ದರ್ಶನ್‍ಗೆ ಸ್ಟಾರ್ ಪಟ್ಟ ನೀಡಿದ ಚಿತ್ರವೂ ಹೌದು. ಕರಿಯ ಚಿತ್ರದ ಕೆಂಚಾಲೋ.. ಮಚ್ಚಲೋ.., ಹೃದಯದ ಒಳಗೆ ಹೃದಯವಿದೆ.. ಮಾತಾಡು ಸಾಕು.. ನನ್ನಲಿ ನಾನಿಲ್ಲ.. ಹೀಗೆ ಎಲ್ಲ ಹಾಡುಗಳು ಇಂದಿಗೂ ಕೇಳುತ್ತವೆ. ಕಿವಿಯಲ್ಲಿ ಗುನುಗುಡುತ್ತವೆ.

    ಆ ಚಿತ್ರ ರಿಲೀಸ್ ಆಗಿ 15 ವರ್ಷ. ಕರಿಯ ಸಿನಿಮಾ ರಿಲೀಸ್ ಆದಾಗ ಕರಿಯ ಪ್ರೇಮ್ ಆಗಿ, ಎಕ್ಸ್‍ಕ್ಯೂಸ್ ಮಿ ಪ್ರೇಮ್ ಆಗಿ, ಜೋಗಿ ಪ್ರೇಮ್ ಆಗಿ.. ಚಿತ್ರಗಳ ಮೂಲಕವೇ ಸ್ಟಾರ್ ಆದವರು ನಿರ್ದೇಶಕ ಪ್ರೇಮ್. ಅವರಿಗೀಗ ಚಿತ್ರರಂಗಕ್ಕೆ ಬಂದ 15ನೇ ವರ್ಷದ ಸಂಭ್ರಮ.

    ಕರಿಯ ಚಿತ್ರದಿಂದ ನನ್ನ ಚಿತ್ರಜೀವನ ಆರಂಭವಾಯಿತು. ಆ ಚಿತ್ರಕ್ಕೆ ಅವಕಾಶ ಕೊಟ್ಟ ನಿರ್ಮಾಪಕ ಆನೇಕಲ್ ಬಾಲರಾಜ್, ನಟ ದರ್ಶನ್ ಹಾಗೂ ತಂತ್ರಜ್ಞರು ಎಲ್ಲರಿಗೂ ಧನ್ಯವಾದಗಳು ಎಂದಿರುವ ಪ್ರೇಮ್, ಕರಿಯ ಚಿತ್ರ ಹಿಟ್ ಆದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

    ಈಗ ದಿ ವಿಲನ್ ಚಿತ್ರ ನಿರ್ದೇಶಿಸುತ್ತಿರುವ ಪ್ರೇಮ್‍ಗೆ ಶುಭವಾಗಲಿ.

  • `ಮಹಾತ್ಮ'ನ ಶತಕಕ್ಕೆ ಚಾಲೆಂಜಿಂಗ್ ಸ್ಟಾರ್ ಸಾಥ್

    darshan says yes to mahatma pictures

    ಮಹಾತ್ಮಾ ಪಿಕ್ಚರ್ಸ್, ಕನ್ನಡದ ಹೆಮ್ಮೆಯ ಚಿತ್ರ ಸಂಸ್ಥೆ. ಈ ಸಂಸ್ಥೆ ಜನ್ಮತಾಳಿದಾಗ ಕರ್ನಾಟಕವೇ ಇನ್ನೂ ಜನ್ಮ ತಾಳಿರಲಿಲ್ಲ. 1946ರಲ್ಲಿ ನಿರ್ಮಾಣವಾದ ಈ ಸಂಸ್ಥೆ ಕನ್ನಡ ಚಿತ್ರರಂಗದ ದಿಕ್ಕು ಬದಲಿಸಿದ ಇತಿಹಾಸ ನಿಮಗೆ ಗೊತ್ತೇ ಇದೆ. ಕೃಷ್ಣಲೀಲಾ, ಈ ಸಂಸ್ಥೆಯ ಮೊದಲ ಸಿನಿಮಾ. ಇದೇ ಸಂಸ್ಥೆಯ ಜಗನ್ಮೋಹಿನಿ, ಕನ್ನಡದಲ್ಲಿ ಮೊದಲ 100 ದಿನ ಓಡಿದ ಚಿತ್ರ. ವಿಠ್ಠಲಾಚಾರ್ಯ ಹೆಸರು ಹಲವು ಜನರಿಗೆ ಮರೆತೇ ಹೋಗಿರಬಹುದು. ಆದರೆ ಆಗಿನ ಕಾಲಕ್ಕೇ ಬೆಳ್ಳಿ ತೆರೆಯ ಮೇಲೆ ಮಾಯ, ಮಂತ್ರ, ಮ್ಯಾಜಿಕ್ಕುಗಳನ್ನು ಸೃಷ್ಟಿಸಿ ಜನರನ್ನು ಮೋಡಿ ಮಾಡಿದ್ದ ನಿರ್ದೇಶಕ, ಇದೇ ಮಹಾತ್ಮಾ ಪಿಕ್ಚರ್ಸ್ ಕೊಡುಗೆ. ಈ ಸಂಸ್ಥೆ ಈಗ 75ನೇ ವರ್ಷದ ಸಂಭ್ರಮಕ್ಕೆ ಅಣಿಯಾಗುತ್ತಿದೆ. ಇದುವರೆಗೆ 99 ಸಿನಿಮಾ ನಿರ್ಮಿಸಿರುವ ಸಂಸ್ಥೆಯ 100ನೇ ಚಿತ್ರಕ್ಕೆ ಹೀರೋ ಚಾಲೆಂಜಿಂಗ್ ಸ್ಟಾರ್ ದರ್ಶನ್.

    ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಲಾಕ್ ಡೌನ್ ಸಮಯದಲ್ಲಿ ಜೂಲಿಯನ್ ರೀಡ್ ಮೇಯರ್ ಅವರ ಕಿಲ್ಲಿಂಗ್ ಫಾರ್ ಪ್ರಾಫಿಟ್ ಮತ್ತು ಪೆಟ್ರೀಷಿಯಾ ಲೀಶಾರ್ಪ್ ಅವರ ಪೋರ್ಚ್: ಸೀಕಿಂಗ್ ಎ ನ್ಯೂ ಲೈಫ್ ಇನ್ ತಾಂಜೇನಿಯಾ ಎಂಬ ಎರಡು ಕಾದಂಬರಿ ಓದಿದ್ದಾರೆ. ಆ ವೇಳೆ ಒಂದು ಕಥೆ ಹೊಳೆದಿದೆ. ಅದು ಮೆಡಿಸಿನ್ ಮಾಫಿಯಾ ವಿರುದ್ಧ ಐಎಫ್‍ಎಸ್ ಅಧಿಕಾರಿಯೊಬ್ಬ ಹೋರಾಡುವ ಕಥೆ. ನಡೆಯುವುದು ಆಫ್ರಿಕಾದ ಕಾಡಿನಲ್ಲಿ. ದೊಡ್ಡ ಕ್ಯಾನ್ ವಾಸ್ ಚಿತ್ರ. ಕಥೆಯನ್ನು ದರ್ಶನ್‍ಗೆ ಹೇಳಿದ್ದಾರೆ. ಅತ್ತ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.

    ಸದ್ಯಕ್ಕೆ ಎಸ್.ವಿ.ರಾಜೇಂದ್ರ ಸಿಂಗ್ ಬಾಬು ದರ್ಶನ್ ಜೊತೆ ಮದಕರಿ ನಾಯಕ ಚಿತ್ರ ಮಾಡುತ್ತಿದ್ದಾರೆ. ಅಲ್ಲಿಗೆ.. ಈ ಕಥೆ ಸಿನಿಮಾ ಆಗುವುದೇನಿದ್ದರೂ, ಮದಕರಿ ನಾಯಕ ಚಿತ್ರ ಮುಗಿದ ಮೇಲೇನೆ..

  • 'Babru' Teaser Released by Darshan

    babru teaser launched bu darshan

    Suman Nagarkar's debut film as a producer Babru  teaser was released by challenging star Darshan on Monday evening. Movie is getting released on 6th December.

    The film has the distinction of being shot completely in America for the very first time. The film being directed by IT professional Sujay Ramaiah is about a journey from Mexico to Canada. Sujay says he got the idea when he was driving with Rakshith Shetty and it was Rakishith who encouraged him to direct a feature film. Earlier, Rakshith and Sujay had done a few short films and Now Sujay is making his debut as a full length feature film.

    The film stars Suman Nagarkar, Gana Bhatt and others in prominent roles. Poornachandra Tejaswi is the music director, while Suhas is the cinematographer. The film has been shot completely in America for 30 days.

  • 'Bichchugatti' Motion Poster To Release Along With 'Yajamana'

    bichchugatti motion poster along with yajamana

    The first poster of Rajavardhan starrer historical film 'Bichchugatti' was released recently. Meanwhile, the motion poster of the film is all set to be released on Friday along with Darshan starrer 'Yajamana'.

    'Bichchugatti' is based on the novel 'Bichchugatti Bharamanna Nayaka' by well known writer Dr B L Venu. The author himself has written the screenplay and dialogues for the film. The shooting for the film is half way through and the team intends to complete the shooting soon.

    'Bichchugatti' is being directed by Hari Santhosh, while Om Sai Krishna Productions of Chitradurga is producing the film. Hamsalekha has written the lyrics apart from composing the film. Guru Prashanth Rai. Apart from Rajavardhan, Haripriya, 'Bahubali' Prabhakar and others play prominent roles in the film.

  • 'Gandugali Madakari Nayaka' To Be Launched On Darshan's Birthday

    gandugali madakari nayaka to launch on darshan's birthday

    If everything had gone right, then Darshan starrer 'Gandugali Madakari Nayaka' was supposed to be launched on the festival day of Sankranti. Now the film's launch will be held on Darshan's birthday on the 16th of February.

    'Gandugali Madakari Nayaka' is a historical film based on the life of Madakari Nayaka of Chitradurga. The film is based on the novel of same name by B L Venu. B L Venu himself has written the screenplay and dialogues for this film.

    'Gandugali Madakari Nayaka' is being produced by Rockline Venkatesh and directed by veteran director S V Rajendra Singh Babu.

  • 'Kannu Hodiyaka' Song From 'Robert' Released

    'Kannu Hodiyaka' Song From 'Robert' Released

    Another song called 'Jannu Hodiyaka' from Darshan starrer 'Robert' has been released on Saturday evening and the romantic number has been getting good appreciation from fans all over. The song which was premiered 16 hours ago has garnered eight lakh views.

    'Robert' is all set to be released on the 11th of March in Kannada and Telugu simultaneously. Recently, the trailer of the film was released on Darshan's birthday and in a span of four days, a lyrical video of romantic number sung by Shreya Ghoshal has been released. The song has been composed by Arjun Janya and choreographed by Bhushan.

    'Robert' stars Darshan, Asha Bhatt, Vinod Prabhakar, Devaraj, Jagapathi Babu, Ravikishan and others in important roles. The film is written and directed by Tharun Sudhir and produced by Umapathyy Srinivas Gowda.

  • 'Kotigobba 3' and 'Robert' Eye For April 23 Release

    'Kotigobba 3' and 'Robert' Eye For April 23 Release

    Darshan starrer 'Robert' which is waiting for release for the last one year is likely to release on the 23rd of April. The announcement has come in the wake of producer Soorappa Babu announcing the release of 'Kotigobba 3' on the same date.

    Both 'Kotigobba 3' and 'Robert' were completed last year. However, the film's release got delayed because of the pandemic and lockdown. Though permission for screening films was given by the Central Government from the 15th of October 2020, producer Umapathy Srinivas Gowda of 'Robert' had decided to release the film once the Government gives 100 percent occupancy in theaters.

    Now that the Tamil Nadu Government has permitted for 100 percent occupancy in theaters, a similar order might be issued in Karnataka in the coming days also. So, many producers of big budget films have been planning their films after April. 'Yuvaratna' has already been announced on the 01st of April. Both 'Robert' as well as 'Kotigobba 3' films have been eyeing for a April 23 release and both of the producers have announced the film on the same date.

    Which among the two will be released on the same date is yet to be seen in the coming days.

  • 'Kurukshetra' audio on July 7th; Darshan fans upset

    kurukshetra audio on july 7th

    The songs of Darshan starrer 'Kurukshetra' is all set to be released on the 07th of July. Meanwhile, the fans of the actor is upset that the photos of Darshan is not on the passes given to them.

    The team of 'Kurukshetra' is planning to release the songs in a big way and has organised a big event. Meanwhile, passes for the event is being issued and fans of Darshan are upset that there is no photo of the actor on the passes.

    'Kurukshetra' is based on the Mahabharatha and Darshan has played the role of Duryodhana, Ambarish, Ravichandran, Srinivasamurthy, Nikhil Kumar, Shashikumar, Sonu Sood, Ravishankar, Srinath, Haripriya and others are play prominent roles in the film. Naganna is the director.

  • 'Kurukshetra' First Day Collection Is 13 Crores

    kurukshetra first day collections is 10 crores`

    Kannada film industry's magnum opus 'Kurukshetra' which was released on Friday has collected 13 crores in Karnataka alone. Rockline Venkatesh who is distributing the film across Karnataka has confirmed that the film has collected  13 crores on the first day of its release.

    Rockline says, the collection of the second day is 10 crores and he hopes that the film's first week share will be around 35 crores in both Kannada and Telugu.

    'Kurukshetra' stars Darshan, Arjun Sarja, Ravichandran, Ambarish, Nikhil Kumar, Shashikumar, Sonu Sood, Haripriya, Meghana Raj and others in prominent roles.The film directed by senior director Naganna, while Muniratna is the producer. V Harikrishna is the music director.