` parvarthamma rajkumar - chitraloka.com | Kannada Movie News, Reviews | Image

parvarthamma rajkumar

  • ಕಾಡಿನಲ್ಲಿದ್ದ ರಾಜ್ ಜೊತೆ ಫೋನ್ ನಲ್ಲಿ ಮಾತನಾಡಿದ ವ್ಯಕ್ತಿ ಯಾರು?

    rajkumar, veerappan, rockline venkatesh image

    ಡಾ. ರಾಜ್ ಕುಮಾರ್ ಅಪಹರಣದ ಸಮಯದಲ್ಲಿ ಬಹಳಷ್ಟು ಓಡಾಡಿದವರು ರಾಕ್ ಲೈನ್ ವೆಂಕಟೇಶ್. ಮೊಟ್ಟ ಮೊದಲ ಬಾರಿಗೆ ರಾಕ್ ಲೈನ್ ಚಿತ್ರಲೋಕ ಜೊತೆಗೆ ಅನೇಕ ವಿಷಯಗಳನ್ನ ತಿಳಿಸಿದ್ದಾರೆ. ಈ ಸಂಚಿಕೆಯಲ್ಲಿ ರಾಕ್ ಲೈನ್ ಭಾವುಕರಾಗುತ್ತಾರೆ. ಕಾರಣ... ವಿಡಿಯೋ ನೋಡಿ..

     

  • ಪಾರ್ವತಮ್ಮ ರಾಜ್​ಕುಮಾರ್ ಮೊದಲ ನಿರ್ಮಾಣದ ಚಿತ್ರ ಯಾವುದು?

    trimurthy image

    ಪಾರ್ವತಮ್ಮ ರಾಜ್​ಕುಮಾರ್ ನಿರ್ಮಾಣದ ಮೊದಲ ಚಿತ್ರ ತ್ರಿಮೂರ್ತಿ. ಅದು ರಾಜ್​ ಅವರ ಮಾರುಕಟ್ಟೆ ಮೌಲ್ಯವನ್ನು ಕಡಿಮೆ ತೋರಿಸುತ್ತಿದ್ದ ನಿರ್ಮಾಪಕರು, ವಿತರಕರಿಗೆ ಸಡ್ಡು ಹೊಡೆದು ಪೂರ್ಣಿಮಾ ಕಂಬೈನ್ಸ್​ನಲ್ಲಿ ನಿರ್ಮಿಸಿದ ಚಿತ್ರ. ಆದರೆ, ಅದಕ್ಕೂ ಮೊದಲೇ ಚಿತ್ರರಂಗದಲ್ಲಿ ಪಾರ್ವತಮ್ಮನವರ ಹೆಜ್ಜೆ ಗುರುತುಗಳಿವೆ.

    1959ರಲ್ಲಿ ನಿರ್ಮಾಣವಾಗಿ 1960ರಲ್ಲಿ ಬಿಡುಗಡೆಯಾದ ಚಿತ್ರವಿದು. ಕನ್ನಡ ಚಿತ್ರರಂಗದ 100ನೇ ವಾಕ್​ಚಿತ್ರವೂ ರಣಧೀರ ಕಂಠೀರವ ಚಿತ್ರ. ಕನ್ನಡ ಚಲನಚಿತ್ರ ಕಲಾವಿದರ ಸಂಘದ ಹೆಸರಲ್ಲಿ ನಿರ್ಮಿಸಿದ ಈ ಚಿತ್ರ, ಕನ್ನಡದ ಮೊದಲ ಐತಿಹಾಸಿಕ ಚಿತ್ರವೂ ಹೌದು.

    ಈ ಚಿತ್ರದ ನಿರ್ಮಾಣದ ಹೊಣೆ ಹೊತ್ತಿದ್ದವರು ಕನ್ನಡ ಚಲನಚಿತ್ರ ಕಲಾವಿದರ ಸಂಘ. ರಾಜ್​ಕುಮಾರ್, ನರಸಿಂಹ ರಾಜು, ಬಾಲಕೃಷ್ಣ, ಲೀಲಾವತಿ ಮತ್ತು ಜಿ.ವಿ. ಅಯ್ಯರ್ ಒಟ್ಟಾಗಿ ಸೇರಿ, ಕನ್ನಡ ಚಿತ್ರರಂಗವನ್ನು ಮದರಾಸ್​ನಿಂದ ಹೊರತರಲು ನಿರ್ಮಿಸಿದ್ದ ಚಿತ್ರವದು. 

    ಹಾಗೆ ನೋಡಿದರೆ, ಈ ಚಿತ್ರದ ಮೂಲಕವೇ ಪಾರ್ವತಮ್ಮ ಮೊದಲ ಬಾರಿಗೆ ನಿರ್ಮಾಪಕಿಯಾದರು. ಆದರೆ, ಹೆಸರು ಹಾಕಿಕೊಳ್ಳಲಿಲ್ಲ. ಆರಂಭದಲ್ಲಿ ವಿತರಕರು ಈ ಚಿತ್ರವನ್ನು ಬಿಡುಗಡೆ ಮಾಡಲು ಕೂಡಾ ಮುಂದೆ ಬರಲಿಲ್ಲ.  ಆ ಚಿತ್ರ ಮೈಸೂರಿನ ಭಾರತ್ ಎಂಬ ಒಂದೇ ಒಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಚಿತ್ರ ಯಶಸ್ವಿಯೂ ಆಗಿತ್ತು. ರಮೇಶ್ ಮೂವೀಸ್ ಆ ಚಿತ್ರವನ್ನು ವಿತರಣೆ ಮಾಡಿತ್ತು.

  • ಪಾರ್ವತಮ್ಮನವರ ಶಕ್ತಿಧಾಮ ಹುಟ್ಟಿದ ಕಥೆ

    shakthidhama launch image

    ಪಾರ್ವತಮ್ಮನವರಷ್ಟೇ ಅಲ್ಲ, ರಾಜ್ ಕುಟುಂಬದಲ್ಲಿ ಸಹಾಯ ಹಸ್ತ ಚಾಚುವ ಗುಣವೇ ಇದೆ. ಆದರೆ, ಅದನ್ನು ಹೇಳಿಕೊಳ್ಳುವ ಕೆಲಸವನ್ನು ಅವರು ಮಾಡಿಲ್ಲ. ಎಡಗೈಲಿ ಕೊಟ್ಟಿದ್ದು, ಬಲಗೈಗೆ ಗೊತ್ತಾಗಬಾರದು ಅನ್ನೋದು ರಾಜ್​ನೀತಿ. ಅದನ್ನೇ ಪಾಲಿಸಿಕೊಂಡು ಬರುತ್ತಿದೆ ರಾಜ್ ಕುಟುಂಬ.

    ಮೈಸೂರಿನಲ್ಲಿ ಶಕ್ತಿಧಾಮ ಅನ್ನೋ ಮಹಿಳೆಯರ ಪುನರ್ವಸತಿ ಮತ್ತು ಅಭಿವೃದ್ಧಿ ಕೇಂದ್ರವಿದೆ. ಆ ಸಂಸ್ಥೆ ಜನ್ಮತಾಳಲು ಕಾರಣ ಈಗ ಗೃಹ ಸಚಿವಾಲಯದ ಸಲಹೆಗಾರರಾಗಿರುವ ಆಗ ಮೈಸೂರಿನ ಕಮಿಷನರ್​ ಆಗಿದ್ದ ಕೆಂಪಯ್ಯ. ವೇಶ್ಯಾವೃತ್ತಿಗೆ ಸಿಲುಕಿ ನರಳುತ್ತಿದ್ದ ಹೆಣ್ಣು ಮಕ್ಕಳನ್ನು ಪೊಲೀಸರು ಬಂಧಿಸಿದರೂ, ಬ್ರೋಕರ್​ಗಳು ಬಂದು ಬಿಡಿಸಿಕೊಂಡು ಹೋಗ್ತಾ ಇದ್ರು. ಅವರಲ್ಲಿ ತುಂಬಾ ಜನಕ್ಕೆ ದುಡಿದು ತಿನ್ನುವ ಬಯಕೆಯೂ ಇತ್ತು. ಆದರೆ, ಬದುಕು ಬಿಡುತ್ತಿರಲಿಲ್ಲ. 

    shakthidhama_mysore1_17.jpg

    ಆಗ ಕೆಂಪಯ್ಯನವರು ಈ ಸಮಸ್ಯೆಗೆ ನೀವೇನಾದರೂ ಪರಿಹಾರ ನೀಡಬಹುದೇ ಎಂದು ಪಾರ್ವತಮ್ಮನವರನ್ನು ಕೇಳಿದರಂತೆ. ರಾಜ್ ಕೂಡಾ ಏನಾದ್ರೂ ಮಾಡು, ಜೊತೆಗೆ ನಾನಿರ್ತೀನಿ ಅಂದರಂತೆ. ಸುತ್ತೂರು ಮಠದವರು ಒಂದೂವರೆ ಎಕರೆ ಜಾಗ ಕೊಡುತ್ತೇನೆ ಎಂದಾಗ ಉದ್ಭವವಾಗಿದ್ದೇ ಶಕ್ತಿಧಾಮ.

    ಆ ಸಂಸ್ಥೆ ಶುರುವಾಗಿದ್ದು 1997ರಲ್ಲಿ. ಇಂದಿಗೂ ನಿರಂತರವಾಗಿ ನಡೆದುಕೊಂಡು ಬರುತ್ತಿದೆ. ಆ ಸಂಸ್ಥೆಗೆ ಸಂಗೀತ ಸಂಜೆ ಏರ್ಪಡಿಸಿ 90 ಲಕ್ಷ ರೂ. ಸಂಗ್ರಹಿಸಿದವರು ಪಾರ್ವತಮ್ಮ. ಆ ಶಕ್ತಿಧಾಮದಲ್ಲಿ ಮನೆ ಬಿಟ್ಟು ಬಂದವರು, ಅತ್ಯಾಚಾರಕ್ಕೊಳಗಾದವರು, ಅನಾಥರು, ನಿರಾಶ್ರಿತರು, ಮದುವೆಯಾಗದೇ ಗರ್ಭಿಣಿಯಾದವರು..ಇಂಥವರೇ ನೂರಾರು ಜನರಿದ್ದಾರೆ. ಅವರೆಲ್ಲರಿಗೂ ಊಟ, ಬಟ್ಟೆ, ಆಶ್ರಯ, ವಿದ್ಯೆ ಎಲ್ಲವನ್ನೂ ಒದಗಿಸುತ್ತಿದೆ ಶಕ್ತಿಧಾಮ. ಸದಾನಂದ್ ಎನ್ನುವವರು ಅದೆಲ್ಲದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಅನಾಥರಿಗೆ ಆಶ್ರಯವಷ್ಟೇ ಅಲ್ಲ, ಬದುಕಿನ ಭರವಸೆಯೂ ಆಗಿದೆ ಶಕ್ತಿಧಾಮ. ಅದು ಪಾರ್ವತಮ್ಮನವರ ಶಕ್ತಿಧಾಮ.