` arun gowda, - chitraloka.com | Kannada Movie News, Reviews | Image

arun gowda,

  • Arun Gowda In Trouble

    arun gowda in trouble

    Actor Arun Gowda is in trouble with the police. According to reports, he was arrested by the police for running an illegal hookah bar in Bengaluru.

    The hookah bar is in Chandra Layout. Arun also known as Aru in Sandalwood had acted in the lead role in the film Muddu Manase. He is currently acting in the film RGV produced by Auto Nagaraj. Aru is said to be one of the seven owners of the hookah bar.

  • ಆನ್‍ಲೈನ್ ವೀಕ್ಷಕರ ಮನ ಮೆಚ್ಚಿದ 30 ಸೆಕೆಂಡ್

    3 gante is an online hit

    3 ದಿನ, 30 ಗಂಟೆ, 30 ಸೆಕೆಂಡು ಚಿತ್ರದ ಬಿಡುಗಡೆ ಹತ್ತಿರವಾಗುತ್ತಿದೆ. ಚಿತ್ರದ ಕಥೆ, ಟ್ರೇಲರ್ ಆನ್‍ಲೈನ್‍ನಲ್ಲಿ ಮೋಡಿ ಮಾಡಿಬಿಟ್ಟಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಮೂರೇ ದಿನದಲ್ಲಿ ಟ್ರೇಲರ್ ಮೆಚ್ಚಿದವರು 5 ಲಕ್ಷಕ್ಕೂ ಹೆಚ್ಚು ಜನ.

    ಚಿತ್ರದ ಟೈಟಲ್ ಟ್ರ್ಯಾಕ್ ಅಂತೂ ಸೂಪರ್ ಹಿಟ್ ಆಗಿದೆ. ಚಿತ್ರದ ಟೈಟಲ್ ಟ್ರ್ಯಾಕ್‍ನ್ನು ಈಗಾಗಲೇ ಒಂದು ಮಿಲಿಯನ್‍ಗೂ ಹೆಚ್ಚು ಮಂದಿ ನೋಡಿ ಮೆಚ್ಚಿದ್ದಾರೆ. ಅರುಣ್ ಗೌಡ, ಕಾವ್ಯಾ ಶೆಟ್ಟಿ ಅಭಿನಯದ ಚಿತ್ರ ಬಿಡುಗಡೆ ಸಮೀಪಿಸುತ್ತಿದ್ದಂತೆ ಕಾಲೇಜು ಕುಮಾರ ಕುಮಾರಿಯರ ಟ್ರೆಂಡ್ ಆಗಿಬಿಟ್ಟಿದೆ.

    ಯವ ಸಮೂಹವನ್ನೇ ದೃಷ್ಟಿಯಲ್ಲಿಟ್ಟುಕೊಂಡು ನಿರೂಪಿಸಿರುವ ಟ್ರೇಲರ್‍ನಲ್ಲಿ ಯುವಕ, ಯುವತಿಯರ ಕಿವಿಗೆ ರಸಗವಳ ಕೊಟ್ಟಿದ್ದಾರೆ ನಿರ್ದೇಶಕರು. ಕುತೂಹಲವನ್ನೂ ಮೂಡಿಸಿಬಿಟ್ಟಿದ್ದಾರೆ.

    ಚಿತ್ರದಲ್ಲಿ ಬಳಸಿಕೊಳ್ಳಲು ಸಾಧ್ಯವಾಗದ ಕೆಲವು ಡಿಲೀಟೆಡ್ ಸೀನ್‍ಗಳನ್ನೂ ಯೂಟ್ಯೂಬ್‍ಗೆ ಬಿಡುವ ಮೂಲಕ ಕುತೂಹಲವನ್ನು ಹೆಚ್ಚಿಸುತ್ತಲೇ ಇದೆ 3 ಗಂಟೆ, 30 ದಿನ 30 ಸೆಕೆಂಡು.

  • ಕೋಟಿ ರಾಮು ಕನಸಿನ ದಾರಿಯಲ್ಲಿ ಅರ್ಜುನ್ ಗೌಡ ಪ್ರಜ್ವಲ್

    ಕೋಟಿ ರಾಮು ಕನಸಿನ ದಾರಿಯಲ್ಲಿ ಅರ್ಜುನ್ ಗೌಡ ಪ್ರಜ್ವಲ್

    ಕೋಟಿ ರಾಮು ನಿರ್ಮಾಣದ 39ನೇ ಚಿತ್ರ ಅರ್ಜುನ್ ಗೌಡ. ಕನ್ನಡ ಚಿತ್ರರಂಗದ ಧೀಮಂತ ನಿರ್ಮಾಪಕರಾಗಿದ್ದ ರಾಮು ಕೊರೊನಾಗೆ ಬಲಿಯಾದರು. ಅವರು ನಿರ್ಮಿಸಿದ್ದ ಕೊನೆಯ ಸಿನಿಮಾ ಅರ್ಜುನ್ ಗೌಡ ಚಿತ್ರ ಈಗ ರಿಲೀಸ್ ಆಗುತ್ತಿದೆ. ಡಿಸೆಂಬರ್ 31ರಂದು ಬಿಡುಗಡೆಯಾಗುತ್ತಿರೊ ಚಿತ್ರಕ್ಕೆ ಹೀರೋ ಪ್ರಜ್ವಲ್ ದೇವರಾಜ್.

    ಲಕ್ಕಿ ಶಂಕರ್ ನಿರ್ದೇಶನದ ಚಿತ್ರದಲ್ಲಿ ಪ್ರಜ್ವಲ್ ಮತ್ತು ಪ್ರಿಯಾಂಕಾ ತಿಮ್ಮೇಶ್ ನಾಯಕ ನಾಯಕಿಯಾಗಿ ನಟಿಸಿದ್ದಾರೆ. ಇದು ಮಾಸ್ ಮನರಂಜನೆ ಇರೋ ಸಿನಿಮಾ. ರಾಮು ಅವರ ಕನಸಿನ ಜೊತೆ ಕೊನೆಯವರೆಗೂ ನಾನಿರುತ್ತೇನೆ ಎಂದಿರೋ ಪ್ರಜ್ವಲ್ ದೇವರಾಜ್ ಚಿತ್ರದ ಪ್ರಚಾರಕ್ಕೆ ನೊಗ ಕೊಟ್ಟಿದ್ದಾರೆ.

  • ಪಾಕ್‍ನ ಸಾವಿರಾರು ಸೈನಿಕರನ್ನು ಕ್ಷಣದಲ್ಲಿ ಸಮಾಧಿ ಮಾಡಿದ್ದ ಸೈನಿಕ..!

    great warrior story

    ನಮಗೆ ಕಾರ್ಗಿಲ್ ಕಥೆ ಗೊತ್ತು. ಪಾಕ್ ಸೈನಿಕರನ್ನು ನಮ್ಮ ಸೈನಿಕರು ಹೇಗೆ ಸದೆಬಡಿದರು, ಪ್ರಾಣಾರ್ಪಣೆ ಮಾಡಿದವರೆಷ್ಟು ಜನ.? ಪಾಕಿಸ್ತಾನದ ಕುತಂತ್ರ ಹೇಗಿತ್ತು..? ಹೀಗೆ ನಮಗೆ ಇಂಥ ಹಲವಾರು ಕಥೆಗಳು ಗೊತ್ತು. ಆಧರೆ, ಈ ಕಥೆ ನಿಮಗೆ ಗೊತ್ತಿರುವ ಸಾಧ್ಯತೆ ಕಡಿಮೆ. ಹಾಗೆ ನೋಡಿದರೆ, ಈ ಯೋಧನ ಪರಾಕ್ರಮ, ಸಮಯಸ್ಫೂರ್ತಿಯ ಗೆಲುವು ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು ಎಂಬ ವಾದವೂ ಇದೆ.

    ಈ ಘಟನೆ ನಡೆದಿದ್ದು ಕಾರ್ಗಿಲ್ ಯುದ್ಧ ಆರಂಭಕ್ಕೂ ಮುನ್ನ. ನೀಲಂ ಕಣಿವೆಯಲ್ಲಿ ಇಂಡಿಯನ್ ಆರ್ಮಿ ಫಾರ್ವರ್ಡ್ ಲಾಜಿಸ್ಟಿಕ್ ಬೇಸ್‍ನಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಪಾಕಿಸ್ತಾನದ ಸಾವಿರಾರು ಯೋಧರು, 40 ಟ್ಯಾಂಕರ್ ಆಕ್ರಮಣಕ್ಕೆ ಸಿದ್ಧರಾಗಿದ್ದರು. ಆದರೆ, ಭಾರತದ ಬಳಿ ಇದ್ದದ್ದು ಕೇವಲ ನೂರು ಸೈನಿಕರು. ಸ್ವಲ್ಪ ಏಮಾರಿದರೆ ಟಿತ್‍ಪಾಲ್ ಪ್ರಾಂತ್ಯ ಕೈತಪ್ಪುವ ಭೀತಿಯಿತ್ತು. 

    ಆದರೆ ಅಲ್ಲೊಬ್ಬ ಸೈನಿಕನಿದ್ದ. ಆತ ಎಂತಹ ಪರಾಕ್ರಮ & ಬುದ್ದಿವಂತಿಕೆ ಮೆರೆದನೆಂದರೆ, ಪಾಕ್ ಸೈನಿಕರು ಗೊತ್ತೇ ಆಗದಂತೆ ಸಮಾಧಿಯಾಗಿಬಿಟ್ಟರು. ಆಗ ಅಲ್ಲಿದ್ದ ಯೋಧ ಕ್ಯಾ.ಸುಂದರಂ, ತಕ್ಷಣ ಶೌರ್ಯ ಮತ್ತು ತಲೆ ಎರಡನ್ನೂ ಉಪಯೋಗಿಸಿದರು.ಅಲ್ಲಿದ್ದ 30 ಡಿಗ್ರಿ ಆ್ಯಂಗಲ್‍ನಲ್ಲಿದ್ದ ಮಾಸ್ ರಾಕ್ ಬಂಡೆಯೊಂದರ ಬಿರುಕನ್ನು ಗುರುತಿಸಿದ್ದರು. ಅದು ಬಿರುಕುಬಿಟ್ಟಿತ್ತು. ತಡಮಾಡದೆ, ತಮ್ಮ ಸೈನಿಕರಿಂದ ಕವರ್ ಫೈರಿಂಗ್ ತೆಗೆದುಕೊಂಡು ಮುಂದುವರಿದರು. ಆ ಬಿರುಕಿಗೇ ಗ್ರೈನೇಡ್ ಫಿಕ್ಸ್ ಮಾಡಿ ನೆಗೆದುಬಿಟ್ಟರು. 

    ನಂತರ ಸೃಷ್ಟಿಯಾಗಿದ್ದು ಹಿಮಪಾತ. ಹಿಮಪಾತ ಬಿದ್ದಿದ್ದು ದಾಳಿಗೆ ಸಿದ್ಧರಾಗಿದ್ದ ಪಾಕ್ ಸೈನಿಕರ ಮೇಲೆ. ನೋಡ ನೋಡುತ್ತಲೇ ಸಮಾಧಿಯಾಗಿ ಹೋದರು. ಇಂದಿಗೂ ಅದನ್ನು ಪಾಕಿಸ್ತಾನ ನೈಸರ್ಗಿಕ ಹಿಮಪಾತ ಎಂದು ಹೇಳಿಕೊಂಡೇ ಬರುತ್ತಿದೆ.

    ಆದರೆ, ಅಂದು ಶಿಖರದ ಮೇಲೆ ಹೋಗಿ, ಬಿರುಕಿಗೆ ಗ್ರೈನೇಡ್ ಇಟ್ಟು ಬಂದ ಕ್ಯಾ. ಸುಂದರಂ ಇಂದಿಗೂ ಇದ್ದಾರೆ. ಅಂದಿನ ಆ ಪರಾಕ್ರಮ ಅವರ ಬದುಕನ್ನೇ ಕಿತ್ತುಕೊಂಡಿದೆ. ಅವರಿಗೆ ಕಣ್ಣು ಕಾಣಲ್ಲ. ಕಿವಿ ಕೇಳಲ್ಲ. ಮಾತನಾಡೋಕೆ ಆಗಲ್ಲ. 

    ಬೇರೆಯವರಾಗಿದ್ದರೆ ಹುಚ್ಚರಾಗುತ್ತಿದ್ದರೇನೋ.. ಆದರೆ, ಒಬ್ಬ ಹೆಣ್ಣು ಮಗಳ ಪ್ರೀತಿ ಸುಂದರಂ ಬದುಕನ್ನು ಸಹನೀಯವಾಗಿಸಿದೆ. ಸುಂದರವಾಗಿಸಿದೆ. ಅಂದಹಾಗೆ, ತೆರೆಗೆ ಬರಲು ಸಿದ್ಧವಾಗಿರುವ 3 ಗಂಟೆ 30 ದಿನ, 30 ಸೆಕೆಂಡು ಸಿನಿಮಾದಲ್ಲಿರೋದು ಇದೇ ಕ್ಯಾ.ಸುಂದರಂ ಕಥೆ. ಆ ಪಾತ್ರದಲ್ಲಿ ನಟಿಸುತ್ತಿರುವುದು ಡೈನಮಿಕ್ ಸ್ಟಾರ್ ದೇವರಾಜ್. ಅವರ ಸಾಹಸ ಹಾಗೂ ಬದುಕಿನ ಸ್ಫೂರ್ತಿಯ ಕಥೆಯನ್ನು ಮಿಸ್ ಮಾಡದೇ ನೋಡಿ. ಅದು ಒಬ್ಬ ಯೋಧನ ಸಾಹಸ & ಪ್ರೀತಿಯ ಕಥೆ.

  • ಪ್ರೀತೀನಾ.. ಐಶ್ವರ್ಯಾನಾ..? ಸೆಕೆಂಡ್‍ಗಳಲ್ಲಿ ತಿಳ್ಕೊಳ್ಳಿ..!

    3 gante 30 minutes 30 seconds movie image

    ತರ್ಕ, ಮನಸಿನ ಭಾಷೆ. ಭಾವನೆ, ಹೃದಯದ ಭಾಷೆ. ತರ್ಕಬದ್ಧವಾಗಿ ಆಲೋಚನೆ ಮಾಡುವವರು ಜೀವನದಲ್ಲಿ ಹಣ, ಐಶ್ವರ್ಯ, ಸಂಪತ್ತು ಎಲ್ಲವನ್ನೂ ಪಡೀತಾರೆ. ಭಾವನೆಗಳಿಗೆ ಬದ್ಧವಾಗಿರುವವರು ಸದಾ ನೆಮ್ಮದಿಯಾಗಿ, ಸುಖಿಗಳಾಗಿರುತ್ತಾರೆ.

    ಈ ಎರಡೂ ಒಬ್ಬರಿಗೇ ಸಿಕ್ಕುವುದು ಅಪರೂಪ. ಎರಡರಲ್ಲಿ ಒಂದನ್ನಷ್ಟೇ ಆಯ್ಕೆ ಮಾಡಿಕೊಳ್ಳೋಕೆ ಸಾಧ್ಯ. ಇಂಥಾದ್ದೊಂದು ಸೂಕ್ಷ್ಮ ವಿಷಯವನ್ನಿಟ್ಟುಕೊಂಡು ಬರುತ್ತಿರುವ ಸಿನಿಮಾ 3 ಗಂಟೆ, 30 ದಿನ , 30 ಸೆಕೆಂಡ್.

    ಚಿತ್ರದ ಹೆಸರು ವಿಭಿನ್ನವಾಗಿದೆ. ಕಥೆಯೂ ವಿಭಿನ್ನವಾಗಿದೆ ಅನ್ನೋದು ಚಿತ್ರದ ನಿರ್ದೇಶಕ ಮಧುಸೂದನ್. ಚಿತ್ರದ ಟ್ಯಾಗ್‍ಲೈನ್ ಏನ್ ಗೊತ್ತಾ..? ಇದು ಪ್ರೀತಿಯ ಪೋಸ್ಟ್‍ಮಾರ್ಟಮ್. ಚಿತ್ರಕ್ಕೆ ಬಂಡವಾಳ ಹೂಡಿರುವ ಚಂದ್ರಶೇಖರ್ ಆರ್. ಪದ್ಮಶಾಲಿಯವರಷ್ಟೇ ಅಲ್ಲ, ಇಡೀ ಚಿತ್ರತಂಡದಲ್ಲಿರುವ ಬಹುತೇಕರು ಪರಸ್ಪರ ಗೆಳೆಯರು. 

    ಪ್ರೇಕ್ಷಕರ ಹೃದಯ ಕದಿಯಲು 30 ಸೆಕೆಂಡ್ ಸಾಕು ಎಂಬ ವಿಶ್ವಾಸದಲ್ಲಿದೆ ಚಿತ್ರ ತಂಡ. ಸೆಕೆಂಡ್ ಲೆಕ್ಕ ಅಲ್ವಾ..? ನೋಡೇ ನೋಡ್ತಿವಿ ಬಿಡಿ.

  • ಮಲ್ಟಿಪ್ಲೆಕ್ಸ್‍ಗಳಲ್ಲಿ ವಂಡರ್‍ಫುಲ್ 3 ಗಂಟೆ 30 ದಿನ 30 ಸೆಕೆಂಡು

    3 gante successful in multiplexes

    3 ಗಂಟೆ 30 ದಿನ 30 ಸೆಕೆಂಡು.. ತನ್ನ ವಿಭಿನ್ನ ಟೈಟಲ್‍ನಿಂದಲೇ ಗಮನ ಸೆಳೆದಿದ್ದ ಚಿತ್ರ. ಇದೇ ಶುಕ್ರವಾರ ಬಿಡುಗಡೆಯಾಗಿರುವ ಚಿತ್ರಕ್ಕೆ ವಿಮರ್ಶಕರ ವಲಯದಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಯುವ ಜನಾಂಗಕ್ಕೆ ಬೇಕಿರುವ ಒಂದು ಅತ್ಯುತ್ತಮ ಸಂದೇಶವನ್ನು ಮನರಂಜನೆಯ ಮೂಲಕವೇ ಹೇಳಿರುವ ಪ್ರಯತ್ನಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.

    ಅದರಲ್ಲಿಯೂ ಸಿಂಗಲ್ ಸ್ಕ್ರೀನ್‍ಗಳಿಗಿಂಂತ ಅತ್ಯುತ್ತಮ ಸ್ವಾಗತ ಸಿಕ್ಕಿರುವುದು ಮಲ್ಟಿಪ್ಲೆಕ್ಸ್‍ಗಳಲ್ಲಿ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ಸೇರಿದಂತೆ ರಾಜ್ಯದ ದೊಡ್ಡ ದೊಡ್ಡ ನಗರಗಳಲ್ಲಿನ ಮಲ್ಟಿಪ್ಲೆಕ್ಸ್ ಥಿಯೇಟರುಗಳಲ್ಲಿ ಪ್ರದರ್ಶನಗಳ ಸಂಖ್ಯೆ ಈಗ ಇನ್ನಷ್ಟು ಹೆಚ್ಚಿರುವುದು ವಿಶೇಷ. 

    ಬಿಡುಗಡೆಯಾದ ದಿನದ ನಂತರ ಪ್ರದರ್ಶನಗಳ ಸಂಖ್ಯೆ ಹೆಚ್ಚುವುದು ಸಣ್ಣ ಮಾತೇನಲ್ಲ. ಹೀಗಾಗಿಯೇ ಚಿತ್ರದ ನಿರ್ದೇಶಕ ಮಧುಸೂದನ್ ಗೌಡ ಮತ್ತು ನಿರ್ಮಾಪಕ ಚಂದ್ರಶೇಖರ್ ಪದ್ಮಶಾಲಿ ಇಬ್ಬರೂ ಖುಷಿಯಾಗಿದ್ದಾರೆ. ಕ್ಲಾಸ್ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡೇ ಮಾಡಿದ್ದ ಸಿನಿಮಾ, ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.