` kgf, - chitraloka.com | Kannada Movie News, Reviews | Image

kgf,

  • ನಾನು ಸೆಕೆಂಡ್ ಪ್ರಭಾಸ್ ಅಲ್ಲ.. ಫಸ್ಟ್ ಯಶ್

    dont compare me and other film hero's

    ಪ್ರಭಾಸ್. ಬಾಹುಬಲಿ ನಂತರ ಭಾರತದ ಸ್ಟಾರ್ ಆದ ನಟ. ತೆಲುಗಿನಲ್ಲಂತೂ ಸೂಪರ್ ಸ್ಟಾರ್. ಯಶ್, ಕನ್ನಡದ ರಾಕಿಂಗ್ ಸ್ಟಾರ್. ರಾಜಾಹುಲಿ, ಕಿರಾತಕ, ಮಾಸ್ಟರ್‍ಪೀಸ್.. ಇವೆಲ್ಲ ಅವರ ಸಿನಿಮಾ ಹೆಸರುಗಳೂ ಹೌದು. ಅಭಿಮಾನಿಗಳು ಕರೆಯುವ ಹೆಸರುಗಳೂ ಹೌದು. ಈಗ..  ಕೆಜಿಎಫ್ ಮೂಲಕ ಇಡೀ ಇಂಡಿಯಾವನ್ನು ಸೆಳೆದಿರುವ ನಟ. ಆದರೆ, ಕೆಲವರು ಯಶ್‍ರನ್ನು ಪ್ರಭಾಸ್‍ಗೆ ಹೋಲಿಸಿದ್ದಾರೆ. ಯಶ್‍ರನ್ನು ಸೆಕೆಂಡ್ ಪ್ರಭಾಸ್ ಎಂದಿದ್ದಾರೆ.

    ನಾನು ಸೆಕೆಂಡ್ ಪ್ರಭಾಸ್ ಅಲ್ಲ, ಫಸ್ಟ್ ಯಶ್ ಆಗಿರೋದಕ್ಕೆ ಇಷ್ಟ ಪಡುತ್ತೇನೆ. ನಮ್ಮ ಸಿನಿಮಾ ಕೆಜಿಎಫ್ ಕೂಡಾ ವಿಭಿನ್ನ. ಆ ಸಿನಿಮಾವನ್ನು ಇನ್ನೊಂದು ಸಿನಿಮಾಗೆ ಹೋಲಿಸಬೇಡಿ ಎಂದಿದ್ದಾರೆ ಯಶ್.

    ಹೊಂಬಾಳೆ ಬ್ಯಾನರ್‍ನ ಕೆಜಿಎಫ್‍ಗೆ ಪ್ರಶಾಂತ್ ನೀಲ್ ನಿರ್ದೇಶಕ. ಡಿಸೆಂಬರ್ 21ರಂದು ಐದೂ ಭಾಷೆಗಳಲ್ಲಿ ಕೆಜಿಎಫ್ ರಿಲೀಸ್ ಆಗುತ್ತಿದೆ. ಈಗ ಎಲ್ಲೆಲ್ಲೂ ಕೆಜಿಎಫ್ ಹವಾ.

  • ಪಾಕಿಸ್ತಾನದಲ್ಲಿ ಕೆಜಿಎಫ್ ರಿಲೀಸ್

    kgf released in pakistan

    ವಿಶ್ವದಾದ್ಯಂತ ಅಬ್ಬರಿಸುತ್ತಿರುವ ಕೆಜಿಎಫ್, ಪಾಕಿಸ್ತಾನದಲ್ಲೂ ರಿಲೀಸ್ ಆಗಿದೆ. ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ಹಾಗೂ ಲಾಹೋರ್‍ನಲ್ಲಿ ಪ್ರದರ್ಶನ ಕಾಣುತ್ತಿದೆ ಕೆಜಿಎಫ್. ಇಸ್ಲಾಮಾಬಾದ್‍ನ ಕ್ಲಬ್ ಮಾಲ್‍ನಲ್ಲಿ ಕೆಜಿಎಫ್ ಭರಾಟೆ ಜೋರಾಗಿಯೇ ಇದೆ.

    ಪಾಕಿಸ್ತಾನದಲ್ಲಿ ರಿಲೀಸ್ ಆಗಿರುವ ಮೊದಲ ಕನ್ನಡ ಸಿನಿಮಾ ಕೆಜಿಎಫ್. ಆದರೆ, ಪಾಕ್‍ನಲ್ಲಿ ರಿಲೀಸ್ ಆಗಿರುವುದು ಕೆಜಿಎಫ್‍ನ ಹಿಂದಿ ವರ್ಷನ್. 200 ಕೋಟಿ ಗಳಿಸಿ ಮುನ್ನುಗ್ಗುತ್ತಿರುವ ಕೆಜಿಎಫ್ ಹವಾ, ಚೀನಾದಲ್ಲಿನ್ನೂ ಶುರುವಾಗಿಲ್ಲ.

  • ಪಾಕಿಸ್ತಾನದಲ್ಲೂ ಕೆಜಿಎಫ್ ಸದ್ದು..!

    kgf craze reaches pakistan

    ಕೆಜಿಎಫ್ ಸಿನಿಮಾ ಭಾರತದಲ್ಲಷ್ಟೇ ಅಲ್ಲ, ಪಾಕಿಸ್ತಾನದಲ್ಲೂ ಸದ್ದು ಮಾಡುತ್ತಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದು ಈ ರೀತಿ ಹವಾ ಸೃಷ್ಟಿಸುತ್ತಿದೆ. ಪಾಕಿಸ್ತಾನದಲ್ಲಿಯೂ ಚಿತ್ರದ ಬಗ್ಗೆ ಕ್ರೇಜ್ ಸೃಷ್ಟಿಯಾಗಿದ್ದು, ಚಿತ್ರವನ್ನು ನೋಡೋಕೆ ರೆಡಿಯಾಗಿದ್ದಾರೆ.

    ಇದು ಮಾಮೂಲಿ ಸಲ್ಮಾನ್, ಶಾರುಕ್ ಸಿನಿಮಾ ಅಲ್ಲ. ಚಿತ್ರದ ಮೇಕಿಂಗ್ ವಂಡರ್‍ಫುಲ್ ಆಗಿದೆ. ಡೈಲಾಗ್‍ಗಳೂ ಕಿಕ್ ಕೊಡುತ್ತಿವೆ. ಮಾಮೂಲಿ ಬಾಲಿವುಡ್ ಸಿನಿಮಾಗಿಂತ ಬೇರೆಯದೇ ಆದ ಸಿನಿಮಾ ಇದು. ನಾವಂತೂ ನೋಡಲು ಕಾಯುತ್ತಿದ್ದೇವೆ ಎಂದು ಪಾಕಿಸ್ತಾನದಲ್ಲಿರುವ ಬಾಲಿವುಡ್ ಸಿನಿಮಾ ಅಭಿಮಾನಿಗಳು ವಿಡಿಯೋ ಹೇಳಿಕೆ ಕೊಟ್ಟಿದ್ದಾರೆ.

    ಹೊಂಬಾಳೆ ಫಿಲಂಸ್ ಭರ್ಜರಿ ಹಿಟ್ ಕೊಡುವುದಕ್ಕೆ, ಸಂಭ್ರಮಿಸುವುದಕ್ಕೆ ಸಿದ್ಧವಾಗುತ್ತಿದೆ. 

  • ಪ್ರಶಾಂತ್ ನೀಲ್ ಐಡಿಯಾ ಕೇಳಿ ನಕ್ಕಿದ್ದರಂತೆ ಯಶ್..!

    yash reveals interesting story behind kgf

    ಕೆಜಿಎಫ್ ಮೇಲೆ ನಂಬಿಕೆ ಇಡೋಕೆ ಅತಿ ದೊಡ್ಡ ಕಾರಣ ಯಶ್ ಅಷ್ಟೇ ಅಲ್ಲ, ಪ್ರಶಾಂತ್ ನೀಲ್. ಅದಕ್ಕೂ ಮುನ್ನ ಪ್ರಶಾಂತ್ ನೀಲ್ ಮಾಡಿದ್ದ ಉಗ್ರಂ ಚಿತ್ರ, ಅದ್ಭುತ ಪ್ರೆಸೆಂಟೇಷನ್‍ನಿಂದ ಗಮನ ಸೆಳೆದಿದ್ದ ಸಿನಿಮಾ. ಬಹುಶಃ ಆ ಸಿನಿಮಾ ಮಾಡದೇ ಹೋಗಿದ್ದರೆ, ಪ್ರಶಾಂತ್ ನೀಲ್ ಇಂದು ಕೆಜಿಎಫ್ ಮಾಡೋಕೆ ಸಾಧ್ಯವೇ ಇರಲಿಲ್ಲ. ಆ ರಹಸ್ಯವನ್ನೂ ಯಶ್ ಅವರೇ ಬಿಚ್ಚಿಟ್ಟಿದ್ದಾರೆ.

    ಪ್ರಶಾಂತ್ ಅದ್ಭುತ ನಿರ್ದೇಶಕ. ಆದರೆ, ಕೆಟ್ಟದಾಗಿ ನರೇಶನ್ ಮಾಡ್ತಾರೆ. ಅವರು ಕಥೆಯನ್ನು ನಮಗೆ ಹೇಳುವಾಗ, ಅವರ ಕಲ್ಪನೆಯ ಹತ್ತಿರಕ್ಕೂ ಹೋಗೋಕೆ ಆಗಲ್ಲ. ಮೊದಲ ಬಾರಿ ಇವರು ಕೆಜಿಎಫ್ ಐಡಿಯಾ ಹೇಳಿದಾಗ ನಾನೇ ನಕ್ಕುಬಿಟ್ಟಿದ್ದೆ. ಏನೋ ಸ್ಪೆಷಲ್ ಇದೆ ಎನ್ನಿಸಿದರೂ ಏನು ಎಂದು ಅರ್ಥವಾಗಿರಲಿಲ್ಲ. ಉಗ್ರಂ ನೋಡಿದ ಮೇಲೆ, ನನಗೆ ಆ ಕಥೆ ಹೇಳಿದ ಇವರೇನಾ ಉಗ್ರಂ ಮಾಡಿದ್ದು ಎನ್ನುವಷ್ಟು ಅಚ್ಚರಿಯಾಗಿತ್ತು. ನಂತರ ಕೆಜಿಎಫ್ ಒಪ್ಪಿದೆವು. ಕಥೆ ಹೇಳುವಾಗಿನ ಪ್ರಶಾಂತ್ ನೀಲ್ ಬೇರೆ. ಡೈರೆಕ್ಷನ್ ಮಾಡುವಾಗಿನ ಪ್ರಶಾಂತ್ ನೀಲ್ ಬೇರೆ. ಅವರಿಗೆ ಏನು ಬೇಕು ಅನ್ನೋದು ಅತ್ಯಂತ ಸ್ಪಷ್ಟವಾಗಿ ಗೊತ್ತು. ಅದನ್ನು ಅವರು ಎಲ್ಲಿಯೂ ಬಿಟ್ಟುಕೊಡದೇ ಮಾಡ್ತಾರೆ. ಅಂತಹ ಬೆರಗು ಹುಟ್ಟಿಸುವ ನಿರ್ದೇಶಕ ಪ್ರಶಾಂತ್ ನೀಲ್''

    ಇದು ಯಶ್, ಪ್ರಶಾಂತ್ ಬಗ್ಗೆ ಹೇಳಿರುವ ಮಾತು. ಯಶ್ ಪ್ರಕಾರ, ಪ್ರಶಾಂತ್ ನೀಲ್ ಅವರ ಅತಿದೊಡ್ಡ ಬಂಡವಾಳ, ಹೂಡಿಕೆ ಉಗ್ರಂ. ಈಗ ಕೆಜಿಎಫ್ ಬರುತ್ತಿದೆ. ಪ್ರಶಾಂತ್ ನೀಲ್‍ಗಷ್ಟೇ ಏಕೆ, ಕೆಜಿಎಫ್.. ಕನ್ನಡ ಚಿತ್ರರಂಗಕ್ಕೇ ಒಂದು ಚಾಲೆಂಜ್. ಗೆಲ್ಲಬೇಕು.

  • ಬಳ್ಳಾರಿಯಲ್ಲಿ ಕೆಜಿಎಫ್

    kgf team in bellary

    ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣ ಬೆಂಗಳೂರಿನಿಂದ ಬಳ್ಳಾರಿಗೆ ಶಿಫ್ಟ್ ಆಗಿದೆ. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿರುವ ಜಿಂದಾಲ್  ಉಕ್ಕಿನ ಕಾರ್ಖಾನೆಯಲ್ಲಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ. ಕಾರ್ಖಾನೆಯಲ್ಲಿಯೇ ಸೆಟ್ ಹಾಕಲಾಗಿದ್ದು, ನೂರಕ್ಕೂ ಹೆಚ್ಚು ಕಲಾವಿದರು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

    ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ ಚಿತ್ರೀಕರಣ ಕಡೆಯ ಹಂತದಲ್ಲಿದೆ. ಆದರೆ ಚಿತ್ರತಂಡಕ್ಕೆ ಸವಾಲಾಗಿರುವುದು ಯಶ್ ನೋಡಲು ಬರುತ್ತಿರುವ ಜನ. ಸಂಡೂರಿನಲ್ಲಿ ಕೆಜಿಎಫ್ ಟೀಂ ಇದೆ ಎಂದು ಗೊತ್ತಾಗಿದ್ದೇ ತಡ, ಅಲ್ಲಿಗೆ ಯಶ್ ಅಭಿಮಾನಿಗಳ ದಂಡೇ ಹರಿದುಬರುತ್ತಿದೆ. ಹೊಂಬಾಳೆ ಟೀಂ ಈ ಕ್ರೌಡ್ ನಿಯಂತ್ರಿಸಲು ಹರಸಾಹಸ ಮಾಡುತ್ತಿದೆ.

  • ಬಾಹುಬಲಿ ನಂತರ ತೆಲುಗು, ರೋಬೋ ನಂತರ ತಮಿಳು.. ಕೆಜಿಎಫ್ ನಂತರ ಕನ್ನಡ..

    radhika pandit confident about kgf

    ಕೆಜಿಎಫ್ ಸಿನಿಮಾ ಟ್ರೇಲರ್ ರಿಲೀಸ್ ಸನಿಹವಾಗುತ್ತಿದ್ದಂತೆಯೇ ಚಿತ್ರದ ಕುರಿತು ನಿರೀಕ್ಷೆಗಳೂ ಗಗನಮುಖಿಯಾಗುತ್ತಿವೆ. ಸಿನಿಮಾದ ಬಗ್ಗೆ ಚಿತ್ರತಂಡದ ಕಾನ್ಫಿಡೆನ್ಸ್ ಅಮೋಘ. ಹೊಂಬಾಳೆ ಪ್ರೊಡಕ್ಷನ್ಸ್‍ನ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್, ಹೀರೋ ರಾಕಿಂಗ್ ಸ್ಟಾರ್ ಯಶ್ ಅವರಷ್ಟೇ ಆತ್ಮವಿಶ್ವಾಸ ಇರೋದು ಯಶ್ ಪತ್ನಿ ರಾಧಿಕಾ ಪಂಡಿತ್‍ಗೆ.

    ನನಗೆ ಚಿತ್ರದ ಕಥೆ ಗೊತ್ತಿದೆ. ಚೆನ್ನಾಗಿದೆ. ಈ ಸಿನಿಮಾ ಬಂದ ಮೇಲೆ ಇಡೀ ಭಾರತೀಯ ಚಿತ್ರರಂಗ ಕನ್ನಡ ಚಿತ್ರರಂಗದತ್ತ ತಿರುಗಿ ನೋಡಲಿದೆ. ಹೇಗೆ ರೋಬೋ ನಂತರ ತಮಿಳು ಚಿತ್ರರಂಗ, ಬಾಹುಬಲಿ ನಂತರ ತೆಲುಗು ಚಿತ್ರರಂಗ ನಾವು ಯಾರ್ಗೂ ಕಮ್ಮಿ ಇಲ್ಲ ಎಂದು ತೋರಿಸಿಕೊಂಡವೋ.. ಹಾಗೆಯೇ ಈ ಸಿನಿಮಾ ಕೂಡಾ ಕನ್ನಡ ಚಿತ್ರರಂಗವನ್ನು ಆ ಮಟ್ಟಕ್ಕೆ ಕೊಂಡೊಯ್ಯಲಿದೆ. ಈ ಆತ್ಮವಿಶ್ವಾಸದ ಮಾತು ಹೇಳಿರೋದು ರಾಧಿಕಾ ಪಂಡಿತ್.

    ನಾನು ಯಶ್ ಪತ್ನಿಯಾಗಿ ಅಷ್ಟೇ ಅಲ್ಲ, ಚಿತ್ರರಂಗದ ಒಬ್ಬ ನಟಿಯಾಗಿ ಕೂಡಾ ಈ ಚಿತ್ರ ಗೆಲ್ಲಬೇಕು. ಇಷ್ಟು ದೊಡ್ಡ ಸಿನಿಮಾ ಗೆದ್ದರೆ, ಅದು ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಕ್ತಿ ತುಂಬಲಿದೆ ಅನ್ನೋದು ರಾಧಿಕಾ ಪಂಡಿತ್ ಭರವಸೆ.

    ಕೆಜಿಎಫ್ ಚಿತ್ರದ ಟ್ರೇಲರ್ ನವೆಂಬರ್ 9ಕ್ಕೆ ರಿಲೀಸ್ ಆಗುತ್ತಿದೆ. ಡಿಸೆಂಬರ್ 21ಕ್ಕೆ ಸಿನಿಮಾ ಬಿಡುಗಡೆಯಾಗಲಿದೆ.

  • ಬಾಹುಬಲಿಗಿಂತ ಕೆಜಿಎಫ್ ಇಷ್ಟ ಎಂದ ದರ್ಶನ್.. ಕಾರಣ ಏನ್ ಗೊತ್ತಾ..?

    darshan's forst preference is kgf and not baahubali

    ನಿಮಗೆ ಬಾಹುಬಲಿ ಇಷ್ಟವೋ.. ಕೆಜಿಎಫ್ ಚಿತ್ರ ಇಷ್ಟವೋ.. ಅರೆ.. ಎರಡೂ ಇಂಡಿಯನ್ ಸಿನಿಮಾಗಳೇ ಅಲ್ವಾ ಅಂತೀರೇನೋ.. ಆದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗಲ್ಲ. ನೇರಾ ನೇರ.. 

    ನನಗೆ ತೆಲುಗಿನ ಬಾಹುಬಲಿ ಚಿತ್ರಕ್ಕಿಂತ ಕೆಜಿಎಫ್ ಸಿನಿಮಾನೇ ಇಷ್ಟ. ಏಕೆಂದರೆ ಅದು ಕನ್ನಡದ ಸಿನಿಮಾ. ಕನ್ನಡ ಚಿತ್ರರಂಗವನ್ನು ಇಂಡಿಯಾ ಲೆವೆಲ್ಲಿಗೆ ತೋರಿಸಿದ ಸಿನಿಮಾ. ಐ ಲೈಕ್ ಕೆಜಿಎಫ್ ಅಂತಾರೆ ದರ್ಶನ್.

    ಯಜಮಾನ ಚಿತ್ರದ ರಿಲೀಸ್ ವೇಳೆ ಮಾತನಾಡಿದ ದರ್ಶನ್, ಯಜಮಾನ ಚಿತ್ರದಲ್ಲಿ ಮನರಂಜನೆಯ ಜೊತೆಗೆ ಸಮಾಜಕ್ಕೆ ಒಂದೊಳ್ಳೆ ಸಂದೇಶವೂ ಇದೆ ಅನ್ನೋದನ್ನು ಮರೆಯೋದಿಲ್ಲ.

  • ಬಾಹುಬಲಿಗೆ ಆದ ಗತಿಯೇ ಕೆಜಿಎಫ್ ಚಿತ್ರಕ್ಕೂ ಆಗುತ್ತಾ..?

    kgf to premiere on tv soon

    ಕೆಜಿಎಫ್ ಇನ್ನೂ ಥಿಯೇಟರುಗಳಲ್ಲಿ ಓಡುತ್ತಿದೆ. ವೀಕೆಂಡ್ ಹೌಸ್‍ಫುಲ್ ಆಗುತ್ತಿದೆ. ಹೀಗಿರುವಾಗಲೇ.. ಇನ್ನೂ 50 ದಿನ ಪೂರೈಸುವ ಮುನ್ನವೇ ಚಿತ್ರ ಟಿವಿಯಲ್ಲಿ ಪ್ರಸಾರವಾಗೋಕೆ ರೆಡಿಯಾಗಿಬಿಟ್ಟಿದೆ. ಹಿಂದಿಗೆ ಡಬ್ ಆಗಿರುವ ಕೆಜಿಎಫ್ ಚಿತ್ರದ ಹಿಂದಿ ವರ್ಷನ್ ಸೋನಿ ಮ್ಯಾಕ್ಸ್‍ನಲ್ಲಿ ಶೀಘ್ರದಲ್ಲೇ ಪ್ರಸಾರವಾಗಲಿದೆ. ಈಗಾಗಲೇ ಕೆಜಿಎಫ್ ಪ್ರಸಾರದ ಪ್ರೋಮೋ ಹೊರಬಿಟ್ಟಿದೆ ಸೋನಿ ಮ್ಯಾಕ್ಸ್.

    ಈ ಹಿಂದೆ ಬಾಹುಬಲಿ ಸಿನಿಮಾವನ್ನೂ ಹೀಗೆಯೇ ಮಾಡಿತ್ತು ಹಿಂದಿ ಚಾನೆಲ್. ಚಿತ್ರ ಥಿಯೇಟಿನಲ್ಲಿರುವಾಗಲೇ ಟಿವಿಯಲ್ಲಿ ಪ್ರಸಾರ ಮಾಡಿತ್ತು. ಅದು ಚಿತ್ರದ ಬಾಕ್ಸಾಫೀಸ್‍ಗೂ ಹೊಡೆತ ಕೊಟ್ಟಿತ್ತು. ಈಗ ಅದೇ ರೀತಿಯಲ್ಲಿ ಕೆಜಿಎಫ್‍ಗೂ ಆಗುತ್ತಾ..? ಗೊತ್ತಿಲ್ಲ. ಪ್ರೋಮೋದಲ್ಲಿ ನಿರೀಕ್ಷಿಸಿ ಎಂದು ಪ್ರೋಮೋ ಬರುತ್ತಿದೆಯೇ ಹೊರತು, ಡೇಟ್ ಮತ್ತು ಟೈಂ ಹೇಳಿಲ್ಲ.

  • ಬೆಳಗ್ಗೆ 6ಕ್ಕೇ ಕೆಜಿಎಫ್ ಮಾರ್ನಿಂಗ್ ಶೋ

    kgf shows will start st 6 in the morning

    ಕೆಜಿಎಫ್ ಹವಾ ಇದೇ ಶುಕ್ರವಾರದಿಂದ ಆರಂಭ. ಆ ದಿನ ಬೆಂಗಳೂರಿನ ಹಲವಾರು ಥಿಯೇಟರುಗಳಲ್ಲಿ ಮುಂಜಾನೆಯೇ ಶೋ ಶುರುವಾಗಲಿದೆ. ಆ ದಿನ ಬೆಂಗಳೂರಿನ ಕಾಮಾಕ್ಯ, ಶಾರದಾ ಸಿನಿಮಾ, ತಿರುಮಲ ಡಿಜಿಟಲ್, ವಿನಾಯಕ್ ಸಿನಿಮಾಸ್‍ಗಳಲ್ಲಿ ಈಗಾಗಲೇ ಅಧಿಕೃತವಾಗಿಯೇ ಟಿಕೆಟ್ ಬುಕ್ ಆಗಿದ್ದು, ಆ ದಿನ ಬೆಳಗ್ಗೆ 6ಕ್ಕೇ ಶೋ ಶುರುವಾಗಲಿದೆ.

    ಇನ್ನು ರಿಲೀಸ್ ದಿನ ಅಬ್ಬರ ಜೋರಾದರೆ, ಮಧ್ಯರಾತ್ರಿಯೇ ಶೋ ನಡೆದರೂ ಆಶ್ಚರ್ಯ ಪಡಬೇಕಿಲ್ಲ. ಬಳ್ಳಾರಿಯಲ್ಲಂತೂ ಇತ್ತೀಚೆಗೆ ಸ್ಟಾರ್ ಸಿನಿಮಾಗಳು ಅರ್ಧರಾತ್ರಿಯಲ್ಲೇ ರಿಲೀಸ್ ಆಗುವುದು ಈಗ ಕಾಮನ್ ಆಗಿಬಿಟ್ಟಿದೆ.

    ಕೆಜಿಎಫ್ ದೇಶಾದ್ಯಂತ 2000+ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ. ಬೆಂಗಳೂರಿನಲ್ಲಿ ಕನ್ನಡ ಅಷ್ಟೇ ಅಲ್ಲ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ವರ್ಷನ್ ಕೆಜಿಎಫ್ ಕೂಡಾ ರಿಲೀಸ್ ಆಗುತ್ತಿದೆ. ಕೆಜಿಎಫ್ ರಿಲೀಸ್‍ಗೇ ಕಾಯುತ್ತಿದ್ದೆವೇನೋ ಎಂಬಂತೆ ಅಭಿಮಾನಿಗಳು ಶೋ ಬುಕಿಂಗ್ ಆರಂಭವಾದ ಕೆಲವೇ ಗಂಟೆಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಮಾಡಿಬಿಟ್ಟಿದ್ದಾರೆ. 

  • ಮಿನಾಸನ್ ಕೊನಿಚುವ.. ಜಪಾನಿ ಭಾಷೆಯಲ್ಲಿ ಯಶ್ ಹೇಳಿದ್ದೇನು..?

    ಮಿನಾಸನ್ ಕೊನಿಚುವ.. ಜಪಾನಿ ಭಾಷೆಯಲ್ಲಿ ಯಶ್ ಹೇಳಿದ್ದೇನು..?

    ನಿಮಗೆಲ್ಲರಿಗೂ ನಮಸ್ಕಾರ. ನಾನು ನಿಮ್ಮ ಯಶ್, ಇದನ್ನು ಜಪಾನಿ ಭಾಷೆಯಲ್ಲಿ ಹೇಳಿದ್ರೆ ಹೇಗಿರುತ್ತೆ..? ಮಿನಾಸನ್ ಕೊನಿಚುವ.. ಅಂತಾ ಜಪಾನೀಯರ ಜೊತೆ ಜಪಾನಿ ಭಾಷೆಯಲ್ಲೇ ಮಾತನಾಡಿದ್ದಾರೆ ಯಶ್. ಯಾಕೆ ಅಂದ್ರೆ.. ಕೆಜಿಎಫ್ 1’ ಹಾಗೂ ‘ಕೆಜಿಎಫ್ 2’ ಚಿತ್ರ ಜಪಾನಿ ಭಾಷೆಗೆ ಡಬ್ ಆಗಿ ಅಲ್ಲಿನ ಥಿಯೇಟರ್ನಲ್ಲಿ ಬಿಡುಗಡೆ ಆಗುತ್ತಿದೆ. ಈ ಬಗ್ಗೆ ವಿಡಿಯೋ ಮಾಡಿರುವ ಯಶ್ ಆರಂಭದಲ್ಲಿ ಜಪಾನಿ ಭಾಷೆಯಲ್ಲಿ ಮಾತನಾಡಿದ್ದಾರೆ. ‘ನಮಸ್ತೆ ಜಪಾನ್. ನನ್ನ ‘ಕೆಜಿಎಫ್ 1’ ಹಾಗೂ ‘ಕೆಜಿಎಫ್ 2’ ಸಿನಿಮಾ ಜಪಾನ್ನಲ್ಲಿ ರಿಲೀಸ್ ಆಗುತ್ತಿದೆ. ‘ಕೆಜಿಎಫ್’ ಸಿನಿಮಾದಲ್ಲಿ ಸಾಕಷ್ಟು ಮನರಂಜನೆ ಹಾಗೂ ಆ್ಯಕ್ಷನ್ ಇದೆ. ಮ್ಯಾಡ್ನೆಸ್ ಕೂಡ ಇದೆ. ತಪ್ಪದೇ ಸಿನಿಮಾ ನೋಡಿ’ ಎಂದು ಕೋರಿದ್ದಾರೆ.

    ಜಪಾನ್ನಲ್ಲಿ ಭಾರತೀಯ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದೆ. ಇದುವರೆಗೆ ಜಪಾನ್‍ನಲ್ಲಿ ರಜನಿಕಾಂತ್ ಚಿತ್ರಗಳು ಸಖತ್ ಸೌಂಡ್ ಮಾಡಿದ್ದವು. ರಜನಿಕಾಂತ್ ಅವರಿಗೆ ಜಪಾನ್‍ನಲ್ಲಿ ದೊಡ್ಡ ಮಟ್ಟದ ಅಭಿಮಾನಿಗಳ ವರ್ಗವೇ ಇದೆ. ರಜನಿ ಬಿಟ್ಟರೆ ವಿಜಯ್ ಚಿತ್ರಗಳು ಕೂಡಾ ಅಲ್ಲಿ ಸದ್ದು ಮಾಡಿವೆ. ಕನ್ನಡದ ವಿಷಯಕ್ಕೆ ಬಂದರೆ, ಎಂದಿನಂತೆ ಡಾ.ರಾಜ್ ಅವರಿಗೆ ಅಲ್ಲಿ ಫ್ಯಾನ್ಸ್ ಇದ್ದಾರೆ. ಡಾ.ರಾಜ್ ಬಿಟ್ಟರೆ ಪುನೀತ್ ಹಾಗೂ ಸುದೀಪ್ ಅವರಿಗೆ ಫ್ಯಾನ್ಸ್ ಇದ್ದಾರೆ. ಇತ್ತೀಚೆಗೆ ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ಜಪಾನ್ ಬಾಕ್ಸ್ ಆಫೀಸ್ನಲ್ಲಿ ನೂರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ. ಜುಲೈ 14ಕ್ಕೆ ‘ಪಠಾಣ್’ ಸಿನಿಮಾ ಜಪಾನ್ನಲ್ಲಿ ತೆರೆಗೆ ಬರುತ್ತಿದೆ.  ಇದೀಗ ಕೆಜಿಎಫ್ ಕೂಡಾ ರಿಲೀಸ್ ಆಗುತ್ತಿದ್ದು, ದೊಡ್ಡ ಮಟ್ಟದ ಹವಾ ಎಬ್ಬಿಸುವ ನಿರೀಕ್ಷೆ ಇದೆ.

  • ಮಿಲ್ಕೀ ಬ್ಯೂಟಿ ಎನ್ನಬಾರದಂತೆ..

    dont call me milky beauty says tamannah

    ತಮನ್ನಾ ಭಾಟಿಯಾ.. ಇದೀಗ ತಾನೆ ಕೆಜಿಎಫ್‍ನ ಮಿಂಚಿನ ಬಳ್ಳಿಯಾಗಿ ಕಿಚ್ಚು ಹಚ್ಚಿಸಿರುವ ಚೆಲುವೆ. ಮಿಲ್ಕೀಬ್ಯೂಟಿ ಎಂದೇ ಫೇಮಸ್. ಆದರೆ, ತಮನ್ನಾ ಅವರೇ, ತಮ್ಮನ್ನು ಮಿಲ್ಕಿಬ್ಯೂಟಿ ಎನ್ನಬೇಡಿ ಎಂದು ಮನವಿ ಮಾಡಿದ್ದಾರೆ. ಅದಕ್ಕೆ ಅವರು ನೀಡಿರುವ ಕಾರಣ ಇದು.

    ಮೈಬಣ್ಣದ ಮೇಲೆ ಒಬ್ಬರನ್ನು ಹೊಗಳುವುದು ಅಥವಾ ತೆಗಳುವುದು ಒಳ್ಳೆಯದಲ್ಲ. ಮೈಬಣ್ಣದ ಮೇಲೆ ತಾರತಮ್ಯ ಮಾಡುವ ಭಾವನೆ ಮೊದಲು ತೊಲಗಬೇಕು. ಹೀಗಾಗಿ ನನಗೆ ಮಿಲ್ಕಿಬ್ಯೂಟಿ ಎಂದು ಕರೆದಾಗ ಕಿರಿಕಿರಿಯಾಗುತ್ತದೆ ಎಂದಿದ್ದಾರೆ ತಮನ್ನಾ.

  • ಮೇ ತಿಂಗಳಿಂದ ಕೆಜಿಎಫ್ ಚಾಪ್ಟರ್ 2 ಆರಂಭ

    kgf chapter 2 shooting to start from may

    ಕೆಜಿಎಫ್ ಚಾಪ್ಟರ್ 2 ಚಿತ್ರದ ಚಿತ್ರೀಕರಣವನ್ನು ಮೇ ತಿಂಗಳಿಂದ ಆರಂಭಿಸಲು ಚಿತ್ರತಂಡ ನಿರ್ಧರಿಸಿಬಿಟ್ಟಿದೆ. ಚಾಪ್ಟರ್ 2ನ ಶೇ.25ರಷ್ಟು ಚಿತ್ರೀಕರಣವನ್ನು ಈಗಾಗಲೇ ಮುಗಿಸಿರುವ ಚಿತ್ರತಂಡ, ಉಳಿದ ಭಾಗದ ಚಿತ್ರೀಕರಣಕ್ಕೆ ಸಜ್ಜಾಗುತ್ತಿದೆ. ಕೆಜಿಎಫ್ ಚಾಪ್ಟರ್ 1ಕ್ಕೆ ಮಾಡಿಕೊಂಡಂತೆಯೇ, ಶೂಟಿಂಗಿಗೆ ಹೋಗುವ ಮುನ್ನವೇ ಎಲ್ಲವನ್ನೂ ತಯಾರು ಮಾಡಿಕೊಳ್ಳುತ್ತಿದೆ ಕೆಜಿಎಫ್ ಟೀಂ.

    ಯಶ್ ಈಗಾಗಲೇ ಗಡ್ಡ ಬೆಳೆಸೋಕೆ ಶುರು ಮಾಡಿದ್ದಾರೆ. ಮೇ ತಿಂಗಳ ಹೊತ್ತಿಗೆ ಕೆಜಿಎಫ್ ಚಾಪ್ಟರ್ 1 ಲೆವೆಲ್ಲಿಗೆ ಬರಲಿದೆ ಯಶ್ ಗಡ್ಡ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಚಿತ್ರ ರೆಡಿಯಾಗುತ್ತಿದೆ. ಸದ್ಯಕ್ಕಂತೂ ಯಶ್ ಕೆಜಿಎಫ್ ಬಿಟ್ಟು ಬೇರೆ ಧ್ಯಾನ ಮಾಡೋದಿಲ್ಲ. ಕೆಜಿಎಫ್ ಚಾಪ್ಟರ್ 2, 2020ರಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ.

  • ಯಶ್ ಅಮ್ಮ... ಯಶ್‍ಗಿಂತ ಚಿಕ್ಕೋರು ಕಣ್ರಿ..!

    interesting story about rocky bhai's mother in kgf

    ಕೆಜಿಎಫ್ ಚಿತ್ರದ ಟ್ರೇಲರ್ ನೋಡಿದವರಿಗೆ ಗಮನ ಸೆಳೆಯೋದು ಅಮ್ಮ. ಆಕೆ ಯಶ್‍ಗೆ ಹೇಳೋ ಡೈಲಾಗ್... ಮೈ ನವಿರೇಳಿಸುವುದು ನಿಜ.

    ನಿನ್ನ ಬೆನ್ನ ಹಿಂದೆ ಸಾವಿರ ಜನ ನಿಂತಿದ್ಧಾರೆ ಅನ್ನೋ ಧೈರ್ಯ ನಿನಗೆ ಇದ್ರೆ, ಬರೀ ಒಂದು ಯುದ್ಧ ಗೆಲ್ಲಬಹುದು. ಅದೇ.. ನೀನು ಮುಂದೆ ನಿಂತಿದ್ದೀಯಾ ಅನ್ನೋ ಧೈರ್ಯ ಸಾವಿರ ಜನಕ್ಕೆ ಬಂದ್ರೆ, ನೀನು ಪ್ರಪಂಚಾನೇ ಗೆಲ್ಲಬಹುದು.

    ಅದು ಕೆಜಿಎಫ್‍ನಲ್ಲಿ ಯಶ್‍ಗೆ ತಾಯಿ ಹೇಳೋ ಮಾತು. ಇಂತಹ ಮಾತನ್ನಾಡಿರುವ, ಯಶ್‍ಗೆ ತಾಯಿಯಾಗಿ ನಟಿಸಿರುವ ನಟಿ ಅರ್ಚನಾ ಜೋಯಿಸ್. ವಿಶೇಷ ಅಂದ್ರೆ, ಆಕೆ ವಯಸ್ಸಿನಲ್ಲಿ ಯಶ್‍ಗಿಂತ ಚಿಕ್ಕವರಂತೆ. ಮಹಾದೇವಿ ಅನ್ನೋ ಸೀರಿಯಲ್‍ನಲ್ಲಿ ತ್ರಿಪುರ ಸುಂದರಿ ದೇವಿಯ ಪಾತ್ರ ಮಾಡಿದ್ದ ಅರ್ಚನಾ, ದುರ್ಗಾ ಧಾರಾವಾಹಿಯಲ್ಲೂ ದೇವಿಯ ಪಾತ್ರದಲ್ಲೇ ನಟಿಸಿದ್ದರು. ನೀಲಿ ಅನ್ನೋ ಸೀರಿಯಲ್‍ನಲ್ಲೂ ಪ್ರಮುಖ ಪಾತ್ರ ಮಾಡಿದ್ದರು. ಇಷ್ಟಿದ್ದರೂ ಅರ್ಚನಾಗೆ ಭರತ ನಾಟ್ಯ ಎಂದರೆ ಪಂಚಪ್ರಾಣ. ಭರತನಾಟ್ಯಕ್ಕಾಗಿ ದೊಡ್ಡ ದೊಡ್ಡ ಅವಕಾಶಗಳನ್ನು ಕೈಚೆಲ್ಲಿರುವ ಅರ್ಚನಾ ಜೋಯಿಸ್, ರಾಷ್ಟ್ರೀಯ ಮಟ್ಟದ ನಾಟ್ಯ ಕಲಾವಿದೆ. ಇವರ ಪತಿ ಶ್ರೇಯಸ್ ಉಡುಪ. ಲವ್ ಮ್ಯಾರೇಜ್.

    ಅರ್ಚನಾ ಅವರಿಗೆ ಶಾರೂಕ್, ಅಮೀರ್ ಖಾನ್, ಯಶ್ ಮತ್ತು ಪ್ರಭಾಸ್ ಎಂದರೆ ತುಂಬಾ ಇಷ್ಟ. ಈಗ ಯಶ್‍ಗೆ ಕೆಜಿಎಫ್‍ನಲ್ಲಿ ಅಮ್ಮನಾಗಿ ನಟಿಸಿ ಗೆದ್ದಿದ್ದಾರೆ.

  • ಯಶ್ ಎಂಟ್ರಿ ಆದರೆ, ಕೆಜಿಎಫ್ ಮುಗಿದಂತೆ..!

    kgf shooting in final shooting

    ಕೆಜಿಎಫ್ ಚಿತ್ರದ ಚಿತ್ರೀಕರಣ ಅಂತಿಮ ಹಂತಕ್ಕೆ ತಲುಪಿದೆ. ಒಂದು ವರ್ಷದಿಂದ ನಡೆಯುತ್ತಿರುವ ಶೂಟಿಂಗ್ ಈಗ ಫೈನಲ್ ಸ್ಟೇಜ್‍ನಲ್ಲಿದೆ. ಅಂತಿಮ ಹಂತದ ಚಿತ್ರೀಕರಣಕ್ಕಾಗಿ ಮಿನರ್ವ ಮಿಲ್‍ನಲ್ಲಿ ಸೆಟ್‍ವೊಂದನ್ನು ಹಾಕಲಾಗಿದೆ. ಆ ಸೆಟ್‍ನಲ್ಲಿ ನಡೆಯೋದು ಯಶ್ ಇಂಟ್ರೊಡಕ್ಷನ್ ಸಾಂಗ್‍ನ ಶೂಟಿಂಗ್. ಅದೊಂದು ಮುಗಿದರೆ ಚಿತ್ರೀಕರಣ ಮುಗಿದಂತೆಯೇ ಲೆಕ್ಕ.

    ಆರಂಭದಿಂದ ಅಂತ್ಯದವರೆಗೆ ಚಿತ್ರದ ಕುರಿತು ನಿಗೂಢತೆಗಳನ್ನೇ ಕಾಪಾಡಿಕೊಂಡು ಬಂದ ನಿರ್ದೇಶಕ ಪ್ರಶಾಂತ್ ನೀಲ್, ಚಿತ್ರೀಕರಣವನ್ನು ಅಂತಿಮ ಹಂತಕ್ಕೆ ತಂದು ನಿಲ್ಲಿಸಿದ್ದಾರೆ. ಚಿತ್ರದಲ್ಲಿ 80ರ ದಶಕದ ಕಥೆ ಇದೆ. ಆದರೆ, ಇದು ಉಗ್ರಂ ಸ್ಟೈಲಿನ ಕಥೆ ಅಲ್ಲ ಅನ್ನೋದು ಪ್ರಶಾಂತ್ ನೀಲ್ ಮಾತು.

    ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್ ನಿರ್ಮಾಣದ ಚಿತ್ರದಲ್ಲಿ ಅನಂತ್‍ನಾಗ್, ರಮ್ಯಾಕೃಷ್ಣ ಮೊದಲಾದ ಹಿರಿಯರೇ ಪೋಷಕ ಪಾತ್ರಗಳಲ್ಲಿರುವುದು ವಿಶೇಷ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಚಿತ್ರ, ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಭಾರಿ ಬಜೆಟ್ಟಿನ, ಅದ್ದೂರಿ ಚಿತ್ರವಾಗುತ್ತಿದೆ.

  • ಯಶ್ ಕೆಜಿಎಫ್‍ಗೆ ಝೀರೋ ಶಾರುಕ್ ಒಬ್ಬರೇ ಎದುರಾಳಿ ಅಲ್ಲ.. 

    yash's kgf has many competations

    ಕೆಜಿಎಫ್ ಸಿನಿಮಾ ಡಿಸೆಂಬರ್ 21ಕ್ಕೆ ರಿಲೀಸ್ ಆಗುತ್ತಿರುವುದು ಈಗ ಸ್ಯಾಂಡಲ್‍ವುಡ್ ಸೆನ್ಸೇಷನ್. ಕೆಜಿಎಫ್‍ನ್ನು ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುವಂತೆ ಮಾಡಿರುವುದೇ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಮೂಡಿಸಿದೆ.

    ಅಂದಹಾಗೆ ಆ ದಿನ ಯಶ್ ಎದುರಿಗೆ ಬರುತ್ತಿರುವ ಅತಿದೊಡ್ಡ ಸಿನಿಮಾ ಝೀರೋ. ಶಾರೂಕ್ ಖಾನ್, ಅನೂಷ್ಕಾ ಶರ್ಮಾ, ಕತ್ರಿನಾ ಕೈಫ್ ಅಭಿನಯದ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅತಿಥಿ ನಟನಾಗಿ ನಟಿಸಿದ್ದಾರೆ.

    ಯಶ್‍ಗೆ ಶಾರೂಕ್ ಒಬ್ಬರೇ ಅಲ್ಲ, ಅದೇ ದಿನ ತಮಿಳಿನಲ್ಲಿ ವಿಜಯ್ ಸೇತುಪತಿ ಅಭಿನಯದ ಸೀತಾಕತ್ತಿ ರಿಲೀಸ್ ಆಗುತ್ತಿದೆ. ತಮಿಳಿನಲ್ಲಿ ಸತತ ಹಿಟ್ ಚಿತ್ರಗಳನ್ನೇ ನೀಡುತ್ತಿರುವ ಸ್ಪೆಷಲ್ ಹೀರೋ ವಿಜಯ್ ಸೇತುಪತಿ. ಅದರ ಜೊತೆಗೆ ಧನುಷ್ ಅಭಿನಯದ ಮಾರಿ 2 ಕೂಡಾ ರಿಲೀಸ್ ಆಗುತ್ತಿದೆ.

    ಇನ್ನು ಹಾಲಿವುಡ್‍ನ ಅಕ್ವಾಮ್ಯಾನ್, ಅಲಿಟಾ, ಬ್ಯಾಟ್ಲ್ ಏಂಜಲ್ ಮತ್ತು ಬಂಬಲ್ ಬೀ ಚಿತ್ರಗಳು ರಿಲೀಸ್ ಆಗುತ್ತಿವೆ. ಪ್ರತಿ ಸಿನಿಮಾನೂ ಸೆನ್ಸೇಷನ್ ಸೃಷ್ಟಿಸಿರುವಂತಹ ಚಿತ್ರಗಳೇ.

    ಅದೇ ದಿನ ಮಲಯಾಳಂನಲ್ಲಿ ಮಮ್ಮೂಟ್ಟಿ ಅಭಿನಯದ ಯಾತ್ರಾ ರಿಲೀಸ್ ಆಗಲಿದೆ. ನಯನತಾರಾ ಅಭಿನಯದ ಐರಾ, ನಿತ್ಯಾ ಮೆನನ್ ಅಭಿನಯದ ಪ್ರಾಣ, ಕಾರ್ತಿ ಅಭಿನಯದ ದೇವಾ ಚಿತ್ರಗಳು ರಿಲೀಸ್ ಆಗುತ್ತಿವೆ.

    ಒಟ್ಟಿನಲ್ಲಿ ಕೆಜಿಎಫ್‍ಗೆ ಚಾಲೆಂಜ್‍ಗಳು ತುಂಬಾನೇ ಇವೆ.

  • ಯಶ್ ಕೆಜಿಎಫ್‍ಗೆ ಶಾರುಖ್ ಖಾನ್ ಬಹುಪರಾಕ್

    sharu khan praises yash's kgf

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್, ದೇಶಾದ್ಯಂತ ಅಲೆ ಎಬ್ಬಿಸಿದೆ. ಡಿಸೆಂಬರ್ 21ಕ್ಕೆ ರಿಲೀಸ್ ಆಗುತ್ತಿರುವ ಸಿನಿಮಾಗೆ ಮೊದಲ ಎದುರಾಳಿಯೇ ಶಾರೂಕ್ ಖಾನ್ ಅಭಿನಯದ ಝೀರೋ. ಅದೇ ದಿನ ತೆರೆ ಕಾಣುತ್ತಿರುವ ಝೀರೋಗಿಂತಲೂ ದೊಡ್ಡ ಟ್ರೆಂಡ್ ಸೃಷ್ಟಿಸಿದೆ ಕೆಜಿಎಫ್. ಇದೆಲ್ಲದರ ನಡುವೆಯೇ ಕೆಜಿಎಫ್‍ಗೆ ಬಹುಪರಾಕ್ ಎಂದಿದ್ದಾರೆ ಶಾರುಕ್ ಖಾನ್.

    ಚಿತ್ರದ ಟ್ರೇಲರ್ ನೋಡಿದೆ. ತುಂಬಾ ಚೆನ್ನಾಗಿದೆ. ಚಿತ್ರಕ್ಕಾಗಿ ತಂಡದವರು 3 ವರ್ಷ ಶ್ರಮ ಹಾಕಿದ್ದಾರೆ ಎಂದು ತಿಳಿಯಿತು. ಚಿತ್ರದ ಹೀರೋ, ಹೀರೋಯಿನ್, ಇಡೀ ಟೀಂ ಬಗ್ಗೆ ತಿಳಿದುಕೊಂಡೆ. ಯಶ್ ಮುಂಬೈಗೆ ಬಂದಾಗ ಖಂಡಿತಾ ಭೇಟಿಯಾಗುತ್ತೇನೆ ಎಂದಿದ್ದಾರೆ ಶಾರುಕ್ ಖಾನ್.

    ಸಿನಿಮಾವನ್ನು ದಕ್ಷಿಣದ ಸಿನಿಮಾ, ಉತ್ತರದ ಸಿನಿಮಾ ಎಂದು ಬೇಧ ಭಾವ ಮಾಡೋದು ಬೇಡ. ಎಲ್ಲವೂ ಭಾರತೀಯ ಚಿತ್ರಗಳೇ. ಕೆಜಿಎಫ್‍ಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ ಶಾರುಕ್.  

  • ಯಶ್ ಗಡ್ಡಕ್ಕೆ ಅಂಬರೀಷ್ ಡೆಡ್‍ಲೈನ್

    ambi fixed deadline for yash's beard

    ರಾಕಿಂಗ್ ಸ್ಟಾರ್ ಯಶ್, ಅಂಬರೀಷ್ ಅವರ ದೊಡ್ಡ ಅಭಿಮಾನಿ. ಎಷ್ಟೆಂದರೂ ಮಂಡ್ಯ ಸೀಮೆಯ ಹುಡುಗ. ಅದು ಸಹಜವೇ ಬಿಡಿ. ರಾಜಾಹುಲಿಯಲ್ಲಿ ಅಂಬರೀಷ್ ಅಭಿಮಾನಿಯಾಗಿಯೇ ಕಾಣಿಸಿಕೊಂಡಿದ್ದ ಯಶ್‍ಗೆ ಅಂಬರೀಷ್ ಅವರ ಜಲೀಲನ ಪಾತ್ರವನ್ನು ಮಾಡಬೇಕು ಅನ್ನೋ ಆಸೆಯಿದೆಯಂತೆ. 

    ನನ್ನನ್ನು ಅತಿ ಹೆಚ್ಚಾಗಿ ಕಾಡೋದು ಜಲೀಲನ ಪಾತ್ರ. ಯಾರಾದರೂ ಆ ಮಾದರಿಯ ಕಥೆ ಮಾಡಿಕೊಂಡು ಬರಲಿ ಎಂದು ಕಾಯುತ್ತಲೇ ಇದ್ದೇನೆ ಎಂದು ಆಸೆ ತೋಡಿಕೊಂಡಿದ್ದಾರೆ ಯಶ್.

    ಇದರ ಮಧ್ಯೆ ಕೆಜಿಎಫ್ ಚಿತ್ರಕ್ಕಾಗಿ ಇಷ್ಟುದ್ದ ಗಡ್ಡ ಬಿಟ್ಟಿರುವ ಯಶ್‍ಗೆ ಗಡ್ಡ ತೆಗೆಯುವಂತೆ ಅಂಬರೀಷ್ ಹೇಳಿದ್ದಾರಂತೆ. ಜೂನ್ 20ರ ಡೆಡ್‍ಲೈನ್ ಕೊಟ್ಟಿದ್ದಾರಂತೆ. ಅದಕ್ಕೂ ಮುಂಚೆಯೇ ಗಡ್ಡ ತೆಗೆಯೋದಾಗಿ ಅಂಬರೀಷ್‍ಗೆ ಯಶ್ ಪ್ರಾಮಿಸ್ ಮಾಡಿದ್ದಾರಂತೆ.

    ಅಂದಹಾಗೆ.. ಅದರ ಅರ್ಥ ಜೂನ್ 20ರೊಳಗೆ ಕೆಜಿಎಫ್ ಚಿತ್ರದ ಶೂಟಿಂಗ್ ಸಂಪೂರ್ಣ ಮುಗಿಯಲಿದೆ ಎಂದು.

  • ಯಶ್ ಗಡ್ಡಕ್ಕೆ ಮುಕ್ತಿ

    kgf to shave his beard after kgf

    ರಾಕಿಂಗ್ ಸ್ಟಾರ್ ಗಡ್ಡವಿಲ್ಲದೆ ಕಾಣಿಸಿಕೊಂಡಿದ್ದೇ ಇಲ್ಲ. ಅವರ ಇದುವರೆಗಿನ ಸಿನಿಮಾಗಳಲ್ಲಿ ಲಕ್ಕಿ ಬಿಟ್ಟರೆ, ಬೇರೆಲ್ಲ ಚಿತ್ರಗಳಲ್ಲೂ ಗಡ್ಡದೊಂದಿಗೇ ನಟಿಸಿದ್ದಾರೆ ಯಶ್. ಆದರೆ, ಕೆಜಿಎಫ್ ಚಿತ್ರದಲ್ಲಿನ ಯಶ್ ಅವರ ಗಡ್ಡ ಒಂದೂವರೆ ವರ್ಷದಿಂದ ಇತ್ತು. ಪ್ಯಾಂಟು, ಶರ್ಟು ತೆಗೆದು, ಖಾವಿ ತೊಡಿಸಿಬಿಟ್ಟರೆ ಥೇಟು ಋಷಿಯಂತೆ ಕಾಣ್ತಾರೆ ಅಂತಾ ಅಭಿಮಾನಿಗಳು ರೇಗಿಸುವುದೂ ಇತ್ತು.

    ಸುಮಾರು ಒಂದುವರೆ ವರ್ಷದಿಂದ ತಮಗೆ ಅಂಟಿಕೊಂಡಿದ್ದ ಗಡ್ಡಕ್ಕೆ ಮುಕ್ತಿ ಕಾಣಿಸೋಕೆ ಯಶ್ ನಿರ್ಧಾರ ಮಾಡಿದ್ದಾರಂತೆ. ಕೆಜಿಎಫ್ ಚಿತ್ರದ ಇಂಟ್ರೊಡಕ್ಷನ್ ಸಾಂಗ್ ಶೂಟಿಂಗ್ ಮುಕ್ತಾಯ ಹಂತದಲ್ಲಿದ್ದು, ಅದು ಮುಗಿದರೆ, ಸಿನಿಮಾ ಮುಗಿದಂತೆ. ಅದಾದ ನಂತರ ಗಡ್ಡಕ್ಕೆ ಮುಕ್ತಿ ನೀಡಲು ಯಶ್ ನಿರ್ಧರಿಸಿದ್ದಾರೆ.

     

  • ಯಶ್ ತೆಲುಗು, ತಮಿಳು, ಹಿಂದಿ ಕಲಿಯೋಕೆ ಕಾರಣ ಇದೇ..

    why did yash lean and speak in all languages

    ರಾಕಿಂಗ್ ಸ್ಟಾರ್ ಯಶ್ ಅವರ ಕೆಜಿಎಫ್ ಚಿತ್ರ ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲೂ ರಿಲೀಸ್ ಆಗುತ್ತಿದೆ. ಚಿತ್ರದ ಪ್ರಮೋಷನ್‍ಗೆ ಮುಂಬೈಗೆ ಹೋದಾಗ ಹಿಂದಿಯಲ್ಲಿ, ಹೈದರಾಬಾದ್‍ಗೆ ಹೋದಾಗ ತೆಲುಗಿನಲ್ಲಿ, ಚೆನ್ನೈಗೆ ಹೋದಾಗ ತಮಿಳಿನಲ್ಲಿಯೇ ಮಾತನಾಡಿದ ಯಶ್, ಅಚ್ಚರಿ ಹುಟ್ಟಿಸಿದ್ದರು. ಏಕೆಂದರೆ, ಆರಂಭದ ದಿನಗಳಲ್ಲಿ ಯಶ್‍ಗೆ ಬೇರೆ ಭಾಷೆಗಳು ಬರುತ್ತಿರಲಿಲ್ಲ ಎನ್ನುವುದು ಗುಟ್ಟೇನಲ್ಲ. ಹೀಗಿದ್ದ ಯಶ್, ಇಷ್ಟೂ ಭಾಷೆಗಳನ್ನು ಕಲಿತಿದ್ದು ಹೇಗೆ.. ಅದು ಅನಿವಾರ್ಯತೆ ಮತ್ತು ಉತ್ಸಾಹ.

    ನಮ್ಮ ಚಿತ್ರವನ್ನು ಎಲ್ಲರಿಗೂ ತಲುಪಿಸಬೇಕು. ಎಲ್ಲರಿಗೂ ರೀಚ್ ಮಾಡಿಸಬೇಕು. ಅದು ಆಗಬೇಕೆಂದರೆ, ನಾವು ಎಲ್ಲಿಗೆ ಹೋಗುತ್ತೇವೆಯೋ ಅಲ್ಲಿ.. ಅವರ ಭಾಷೆಯನ್ನೇ ಮಾತನಾಡಬೇಕು. ಆಗ ಅಲ್ಲಿನ ಜನರಿಗೆ ನಾವು ರೀಚ್ ಆಗುತ್ತೇವೆ. ಹೀಗಾಗಿ ನಾನು ಪ್ರಯತ್ನ ಪಟ್ಟೆ. ಆದರೆ, ಮಾತನಾಡಿದಾಗ.. ನಾನು ಇಷ್ಟು ಚೆನ್ನಾಗಿ ಮಾತನಾಡಿದೆನಾ ಎಂದು ನನಗೇ ಅಚ್ಚರಿಯಾಗಿತ್ತು ಅಂತಾರೆ ಯಶ್.

    ಯಶ್ ಅವರ ಎದುರು ಯಾರಾದರೂ ಬೇರೆ ಭಾಷೆ ಮಾತನಾಡಿದರೆ, ಅವರಿಗೆ ಕನ್ನಡ ಗೊತ್ತಿದೆ ಎನ್ನುವುದು ಕೂಡಾ ತಿಳಿದಿದ್ದರೆ.. ಯಶ್ ನೇರವಾಗಿ ಕನ್ನಡದಲ್ಲಿಯೇ ಮಾತನಾಡುವವರು. ನಾವೂ ರಾಜ್ಯದಲ್ಲಿ ಯಾರಾದರೂ ಬೇರೆ ಭಾಷೆಯಲ್ಲಿ ಮಾತನಾಡುತ್ತಿದ್ದರೆ, ಕರ್ನಾಟಕದಲ್ಲಿದ್ದೀರಿ, ಕನ್ನಡ ಮಾತನಾಡಿ ಎಂದು ಮುಲಾಜಿಲ್ಲದೇ ಹೇಳುತ್ತೇವೆ. ಹಾಗೆ ಹೇಳುವವರು ಬೇರೆ ರಾಜ್ಯಕ್ಕೆ ಹೋದಾಗ.. ಅವರ ಭಾಷೆಗೆ ಗೌರವ ಕೊಡಬೇಕಲ್ಲವೆ ಅಂತಾರೆ ಯಶ್.

    ಇದು, ಯಶ್ ಅವರದ್ದಷ್ಟೇ ಅಲ್ಲ, ಕೋಟ್ಯಂತರ ಕನ್ನಡಿಗ ಸ್ವಭಾವವೂ ಹೌದು. ಇದು ಎಷ್ಟೋ ವರ್ಷಗಳಿಂದ ಬೆಂಗಳೂರಿನಲ್ಲಿದ್ದು, ಕನ್ನಡವನ್ನು ಕಲಿಯದೇ ಇರುವವರಿಗೂ ಅರ್ಥವಾಗಬೇಕು. ಅಷ್ಟೆ.

  • ಯಶ್ ತೋರಿಸಿದ ಆ ಪ್ರೀತಿಯೇ ವಿಶಾಲ್‍ರ ಅಕ್ಕರೆಗೆ ಕಾರಣ

    real reason why vishal is supporting yash's kgf

    ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್‍ನ್ನು ತಮಿಳುನಾಡಿನಲ್ಲಿ ರಿಲೀಸ್ ಮಾಡಲು ಮುಂದೆ ಬಂದಿರೋದು ತಮಿಳು ಕಲಾವಿದರ ಸಂಘದ ಅಧ್ಯಕ್ಷರೂ ಆಗಿರುವ ವಿಶಾಲ್. ಅವರು ಟಾಲಿವುಡ್‍ನ ಸ್ಟಾರ್ ನಟರೂ ಹೌದು. ನಿರ್ಮಾಪಕರೂ ಹೌದು, ವಿತರಕರೂ ಹೌದು. ಇಷ್ಟಿದ್ದರೂ ಕನ್ನಡ ಚಿತ್ರ ಕೆಜಿಎಫ್ ರಿಲೀಸ್‍ಗೆ ಮುಂದೆ ನಿಲ್ಲೊದಕ್ಕೆ ಕಾರಣವೂ ಇದೆ.

    ನಿಮಗೆ ಚೆನ್ನೈನಲ್ಲಿ ಕಳೆದ ವರ್ಷ ಸಂಭವಿಸಿದ್ದ ಪ್ರಕೃತಿ ವಿಕೋಪ ನೆನಪಿದೆ ತಾನೇ..ಆಗ ಇಡೀ ಚಿತ್ರರಂಗ ಚೆನ್ನೈ ಜನತೆಯ ನೆರವಿಗೆ ಧಾವಿಸಿತ್ತು. ಕರ್ನಾಟಕದಿಂದಲೂ ನೆರವು ಹೋಗಿತ್ತು. ಆಗ ಚೆನ್ನೈಗೆ, ಕರ್ನಾಟಕದಿಂದ ತಲುಪಿದ ಮೊದಲ ನೆರವಿನ ಟ್ರಕ್ ಯಶ್ ಅವರದ್ದಂತೆ. ಆ ಪ್ರೀತಿಗಾಗಿ ಕೆಜಿಎಫ್ ಚಿತ್ರದ ಬಿಡುಗಡೆಗೆ ನಿಂತಿದ್ದೇನೆ ಎಂದಿದ್ದಾರೆ ವಿಶಾಲ್.

    ಒಂದು ನೆರವು.. ಒಂದು ಸಹಾಯ.. ಒಂದು ಅಂತಃಕರಣ.. ಹೇಗೆಲ್ಲ ಗೆಳೆಯರನ್ನು ಸಂಪಾದನೆ ಮಾಡಿಕೊಡುತ್ತೆ.. ಅಲ್ವಾ..?