` chethan, - chitraloka.com | Kannada Movie News, Reviews | Image

chethan,

  • `ಚೆ' ಸ್ಫೂರ್ತಿಯ ಕ್ರಾಂತಿಕಾರಿ ರಣಂ ಚೇತನ್

    che guvara's inspiratio story is ranam

    ಚೆಗುವಾರಾ.. ಕ್ಯೂಬಾದ ಕ್ರಾಂತಿಕಾರಿ ನಾಯಕ. ಹೋರಾಟಗಾರ. ಇವತ್ತಿಗೂ ಎಷ್ಟೋ ಹೋರಾಟಗಾರರಿಗೆ ಸ್ಫೂರ್ತಿಯ ಸೆಲೆ. ಆತನ ಸ್ಫೂರ್ತಿ ಪಡೆದು ಹೋರಾಟಕ್ಕೆ ಧುಮುಕಿದ್ದಾರೆ ಚೇತನ್. ರಿಯಲ್ ಲೈಫಿನಲ್ಲೂ ಎಡಪಂಥೀಯ ಹೋರಾಟದಲ್ಲಿ ಗುರುತಿಸಿಕೊಂಡಿರುವ ಚೇತನ್, ರಣಂ ಚಿತ್ರದಲ್ಲಿ ಹೋರಾಟಗಾರನ ಪಾತ್ರದಲ್ಲಿಯೇ ನಟಿಸಿದ್ದಾರೆ.

    ಆರ್. ಶ್ರೀನಿವಾಸ್ ನಿರ್ಮಾಣದ ಚಿತ್ರದಲ್ಲಿ ಚೇತನ್ ಹೋರಾಟಗಾರನಾದರೆ, ಎನ್‍ಕೌಂಟರ್ ಸ್ಪೆಷಲಿಸ್ಟ್ ಪಾತ್ರದಲ್ಲಿ ನಟಿಸಿರುವುದು ಚಿರಂಜೀವಿ ಸರ್ಜಾ. ನೀತುಗೌಡ, ವರಲಕ್ಷ್ಮಿ ಶರತ್ ಕುಮಾರ್, ದೇವ್‍ಗಿಲ್ ನಟಿಸಿರುವ ಚಿತ್ರಕ್ಕೆ ವಿ.ಸಮುದ್ರ ನಿರ್ದೇಶಕ.

  • 'Atiratha' To Release On Nov 24th

    athiratha to release on nov 24th

    Chethan starrer 'Atiratha' being directed by Mahesh Babu is all set to be released on the 24th of November across Karnataka.

    'Atiratha' marks the debut of Sadhu Kokila's son Surag as the music director and recently actor Puneeth Rajakumar released the songs of the film.

    'Atiratha' stars 'Aa Dinagalu' Chethan, Latha Hegde, Achyuth Kumar, Kabir Singh Duhan, Avinash, Sadhu Kokila and others in prominent roles. The film is being produced by Prem, Dr Venugopal and Gandasi Manjunath. Jai Anand is the cameraman.

     

  • Athiratha Censored – Releasing on 24th

    athiratha censored

    Athiratha movie starring Aa Dinagalu fame actor Chetan, Latha Hegde and direced by Mahesh Babu has been censored with U/A certificate and the movie is releasing on November 24th.

    Sadhu Kokila's son Suraag is making a debut with this film. The film has camerawork by Jai Anand.

  • Noorondu Nenapu To Release On May 19th

    noorondhu nenapu to release on may 19th

    Chethan starrer 'Noorondu Nenapu' which is based on a Marathi novel called 'Duniyadari' written by Suhas Shivalkar and a film of the same name is all set to release on the 19th of May.

    Actor Chethan who was last seen in 'Mynaa' is back with 'Noorondu Nenapu'. Dingri Nagaraj's son Rajvardhan, Meghana Raj and Sushmitha Joshi ('Run Antony' fame) also play prominent roles in the film.

    The Kannada film is being directed by Kumaresh. Suraj Desai and Manish Desai are the producers of the film.

     

     

  • Ranam Releasing In January

    ranam releasing in january

    Ace producer Kanapura Srinivas movie Ranam is all set to hit the screen this month. 'Ranam' stars Chiranjeevi Sarja and Chethan in pivotal roles. The film is directed by Telugu director Samudra. Niranjan Babu is the cinematographer, while Ravishankar is the music director.

    Actress Varalakshmi Sharath Kumar, daughter of senior actor Sharath Kumar plays the role of a CBI officer in 'Aa Dinagalu' Chethan's new film 'Ranam'.

    This is Varalakshmi Sharath Kumar's third film in Kannada. Earlier, she made her debut in Sudeep's 'Manikya'. After that she had acted in Arjun Sarja's bilingual 'Vismaya' which was released a couple of years back.

  • ಚೇತನ್ ಮೇಘ ವಿವಾಹ ಬಂಧನ ಫೆ.2ಕ್ಕೆ

    Megha Chethan Image

    ರಣಂ ಚಿತ್ರದ ಮೂಲಕ ತೆರೆ ಮೇಲೆ ಬರುತ್ತಿರುವ ಆ ದಿನಗಳು ಚೇತನ್, ಇದೇ ವೇಳೆ ವಿವಾಹ ಬಂಧನಕ್ಕೆ ಕಾಲಿಡುತ್ತಿದ್ದಾರೆ. ತಮ್ಮ ಪ್ರೀತಿಯ ಬಗ್ಗೆ ಇತ್ತೀಚೆಗೆ ಹೇಳಿಕೊಂಡಿದ್ದ ಚೇತನ್, ಈಗ ತಾವು ಪ್ರೀತಿಸಿ ಮದುವೆಯಾಗುತ್ತಿರುವ ಹುಡುಗಿಯನ್ನೂ ಪರಿಚಯಿಸಿದ್ದಾರೆ.

    ಚೇತನ್ ಮದುವೆಯಾಗುತ್ತಿರುವ ಹುಡುಗಿಯ ಹೆಸರು ಮೇಘಾ. ಮಧ್ಯಪ್ರದೇಶದ ಹುಡುಗಿ. ಹ್ಯೂಮನ್ ರೈಟ್ಸ್ ವಿಷಯದಲ್ಲಿ ಕಾನೂನು ಪದವಿ ಮಾಡುತ್ತಿರುವ ಮೇಘಾ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಬ್ಬರನ್ನೂ ಒಂದು ಮಾಡಿದ್ದೇ ಸಾಮಾಜಿಕ ಹೋರಾಟಗಳು ಮತ್ತು ಸಮಾಜ ಸೇವೆ.

    ಈಗ ಇವರಿಬ್ಬರ ಮದುವೆ ಫೆಬ್ರವರಿ 2ರಂದು ನಡೆಯಲಿದ್ದು, ವಿನೋಬಾ ಬಾವೆ ಭವನದಲ್ಲಿ ಮದುವೆ ನಡೆಯಲಿದೆ. ಎರಡೂ ಕುಟುಂಬಗಳ ಸದಸ್ಯರು, ಸ್ನೇಹಿತರು ಮತ್ತು ಸಾಮಾಜಿಕ ಹೋರಾಟಗಾರರು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

  • ನಾಯಿ, ನರಿ, ಕ್ರಿಮಿ, ಕೀಟ ಹೇಳಿದ್ದಕ್ಕೆಲ್ಲ ಡೋಂಟ್‍ಕೇರ್ - ಚೇತನ್‍ಗೆ ಧ್ರುವ ಚಾಲೆಂಜ್

    Dhruva Sarja, Chethan Image

    ಅರ್ಜುನ್ ಸರ್ಜಾ ವಿರುದ್ಧ ಕೇಳಿ ಬಂದಿರೋ ಆರೋಪಗಳಿಗೆ ಆರಂಭದ ದಿನದಿಂದಲೂ ಕೆಂಡಾಮಂಡಲವಾಗಿರುವ ನಟ ಧ್ರುವ ಸರ್ಜಾ, ಶೃತಿ ಹರಿಹರನ್ ಬೆಂಬಲಕ್ಕೆ ನಿಂತಿರುವ ಚೇತನ್‍ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಾಯಿ, ನರಿ, ಕ್ರಿಮಿ, ಕೀಟ ಹೇಳಿದ್ದಕ್ಕೆಲ್ಲ ಡೋಂಟ್‍ಕೇರ್. ನನ್ನ ಮಾವ ಏನು ಅನ್ನೋದು ನನಗೆ ಗೊತ್ತು ಎಂದಿದ್ದಾರೆ ಧ್ರುವ ಸರ್ಜಾ.

    ಹಾಗಾದರೆ, ನಾವು ನಾಯಿ, ನರಿ, ಕ್ರಿಮಿ, ಕೀಟಗಳಾ ಎಂದು ಪ್ರಶ್ನೆ ಹಾಕಿದ್ದಾರೆ ಚೇತನ್. ಅಲ್ಲದೆ ಏನು..? ನಿಮ್ಮ ಬಳಿ ಸತ್ಯ ಇದ್ದರೆ, ಸಾಕ್ಷಿ ಇದ್ದರೆ, ಈ ರೀತಿ ಪಬ್ಲಿಸಿಟಿ ಮಾಡ್ಕೊಂಡು ಇರುತ್ತಿರಲಿಲ್ಲ. ನಿಮ್ಮ ಹಿಂದೆ ಯಾರ್ಯಾರೆಲ್ಲ ಇದ್ದಾರೆ ಎನ್ನುವುದು ನನಗೆ ಗೊತ್ತು ಎಂದಿದ್ದಾರೆ ಧ್ರುವ ಸರ್ಜಾ.

    ಕಾನೂನಿನ ವ್ಯಾಪ್ತಿ ಮೀರಿ ಮಾತನಾಡುತ್ತಿದ್ದೀರಿ ಎಂಬ ಚೇತನ್ ಮಾತಿಗೆ, ನಿಮ್ಮ ಬಗ್ಗೆ ಮಾತ್ರ ಕಾನೂನು ರೀತಿ ನೋಡಬೇಕು ಎನ್ನುವವರು  ಬೇರೆಯವರ ಬಗ್ಗೆಯೂ ಕಾನೂನಿನ ರೀತಿಯಲ್ಲೇ ನೋಡಬೇಕಿತ್ತಲ್ವಾ..? ಈಗ ನಿಮ್ಮ ವಿರುದ್ಧ ಯಾರೋ ಒಬ್ಬ ಮಹಿಳೆ ಆರೋಪ ಮಾಡಿದ್ರೆ, ನೀವು ನಂಬ್ತೀರಾ.. ಎನ್ನುವುದು ಧ್ರುವ ಸರ್ಜಾ ಪ್ರಶ್ನೆ.

    ನಿಮ್ಮ ಫೈರ್ ಸಂಘಟನೆಗೆ ಶೃತಿ ಹರಿಹರನ್ 8 ತಿಂಗಳ ಹಿಂದೆಯೇ ಸದಸ್ಯೆಯಾಗಿದ್ದಾರೆ. ಹಾಗಿದ್ದರೆ 8 ತಿಂಗಳಿಂದ ಏನ್ ಮಾಡ್ತಾ ಇದ್ರಿ..? ನಿಮ್ಮ ಸಂಸ್ಥೆ ಕೂಡಾ ಕಾನೂನಿನ ಅಡಿಯಲ್ಲೇ ಬರುತ್ತೆ. ಆ ಸಂಸ್ಥೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ. ಆ ಕಾರಣಕ್ಕಾಗಿ ಗೌರವ ನೀಡುತ್ತಿದ್ದೇನೆ. ಇಲ್ಲದೆ ಇರುವ ವಿವಾದ ಸೃಷ್ಟಿ ಮಾಡುತ್ತಿದ್ದೀರಿ ಎನ್ನುವುದು ಇಡೀ ಕರ್ನಾಟಕಕ್ಕೇ ಗೊತ್ತಿದೆ ಎಂದಿದ್ದಾರೆ ಧ್ರುವ ಸರ್ಜಾ.

    ಸಾ.ರಾ.ಗೋವಿಂದು ಕುರಿತು ಚೇತನ್ ಮಾಡಿರುವ ಟೀಕೆಗೆ, ಅವರ ವಿರುದ್ಧ ಟೀಕೆ ನಿನಗ್ಯಾವ ಅರ್ಹತೆ ಇದೆ ಎಂದು ಕೆಂಡಕಾರಿದ್ದಾರೆ ಧ್ರುವ ಸರ್ಜಾ.

  • ಮದುವೆಗೆ ರೆಡಿ ರಣಂ ಚೇತನ್ : ಹುಡುಗಿ ಯಾರು..?

    ranam hero chethan all set to tie knot

    ಆ ದಿನಗಳು ಚೇತನ್ ಎಂದೇ ಕನ್ನಡಿಗರಿಗೆ ಚಿರಪರಿಚಿತವಾಗಿರುವ ನಟ ಚೇತನ್, ಈಗ ರಣಂ ಚಿತ್ರದಲ್ಲಿ ನಟಿಸಿದ್ದಾರೆ. ರಣಂ ರಿಲೀಸ್ ಆಗಲು ಸಿದ್ಧವಾಗಿ ನಿಂತಿದೆ. ಇದೇ ವೇಳೆ ಚೇತನ್, ತಮ್ಮ ಮದುವೆ ಮತ್ತು ಪ್ರೀತಿಯ ಕಥೆ ಹೇಳಿಕೊಂಡಿದ್ದಾರೆ.

    ಚೇತನ್‌ ಕೈ ಹಿಡಿಯಲಿರುವ ಹುಡುಗಿ ಕನ್ನಡತಿಯಲ್ಲ. ಉತ್ತರ ಭಾರತದವರು. ಆಕೆಗೆ ಸ್ವತಃ ಚೇತನ್‌ ಕನ್ನಡ ಕಲಿಸುತ್ತಿದ್ದಾರಂತೆ. ಆಕೆಯನ್ನು  ಶೀಘ್ರದಲ್ಲೇ ನಿಮ್ಮ ಮುಂದೆ ಕರೆತರುತ್ತೇನೆ ಎಂದು ಭರವಸೆ ನೀಡುವ ಚೇತನ್, ಅನಾಥಾಶ್ರಮದಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳೋ ಯೋಚನೆಯಲ್ಲಿದ್ದಾರೆ.

    ಇತ್ತ ಸಿನಿಮಾಗಳಲ್ಲೂ ಬ್ಯುಸಿಯಾಗಿರುವ ಚೇತನ್‌, ಸದ್ಯಕ್ಕೆ ರಣಂ ಪ್ರಚಾರದಲ್ಲಿ ಬ್ಯುಸಿ. ಚೇತನ್ ಜೊತೆ ಚಿರಂಜೀವಿ ಸರ್ಜಾ ಕೂಡಾ ನಟಿಸಿದ್ದು, ವರಲಕ್ಷ್ಮೀ ಶರತ್ಕುಮಾರ್ ನಾಯಕಿ. ಕನಕಪುರ ಶ್ರೀನಿವಾಸ್ ನಿರ್ಮಾಪಕ. ವಿ.ಸಮುದ್ರ ನಿರ್ದೇಶನದ ಚಿತ್ರದ ಆಡಿಯೋ ಇತ್ತೀಚೆಗೆ ರಿಲೀಸ್ ಆಗಿ ಕೇಳುಗರ ಮನ ಸೆಳೆದಿದೆ.

  • ಹಾಡಿನಲ್ಲಿ ಮುತ್ತಿನ ಮತ್ತು.. ಟ್ರೇಲರಿನಲ್ಲಿ ರುದ್ರಭಯಂಕರ : ಶಿವ 143

    ಹಾಡಿನಲ್ಲಿ ಮುತ್ತಿನ ಮತ್ತು.. ಟ್ರೇಲರಿನಲ್ಲಿ ರುದ್ರಭಯಂಕರ : ಶಿವ 143

    ಮೊನ್ನೆ ಮೊನ್ನೆಯಷ್ಟೇ ಶಿವ 143 ಚಿತ್ರದ ಹಾಡು ರಿಲೀಸ್ ಆಗಿತ್ತು. ಮೂರೂಮುಕ್ಕಾಲು ನಿಮಿಷದ ಹಾಡಿನುದ್ದಕ್ಕೂ ಧಿರೇನ್ ಮತ್ತು ಮಾನ್ವಿತಾ ಮುತ್ತಿನ ಮೇಲೆ ಮುತ್ತು ಕೊಟ್ಟುಕೊಂಡು ಮತ್ತೇರಿಸಿದ್ದರು. ಈಗ ಟ್ರೇಲರ್ ಬಂದಿದೆ. ಟ್ರೇಲರಿನಲ್ಲಿರೋದು ಮುತ್ತಿನ ಮಳೆಯಲ್ಲ.. ರೌದ್ರಭಯಂಕರ ಎನ್ನಿಸುವ ಎಮೋಷನ್ಸ್.

    ನಾಯಕನ ಆಕ್ರೋಶ.. ಶುಭ ಕಾರ್ಯವನ್ನು ನಿಲ್ಲಿಸೋಕೆ ಪ್ರಯತ್ನಿಸುವ ನಾಯಕ.. ಶಿವ ಮತ್ತು ಮಧು ಇಬ್ಬರ ಪ್ರೀತಿ.. ಕೊನೆಯಲ್ಲಿ ಬರೋ ನಿಮ್ಮಮ್ಮನ್ ಡೈಲಾಗ್.. ವಿಚಿತ್ರ ಕುತೂಹಲ ಹುಟ್ಟಿಸಿದರೆ.. ಅದು ಕಥೆಯ ತಾಕತ್ತು. ಈ ವಯೊಲೆಂಟ್ ಪ್ರೇಮ್ ಕಹಾನಿಯಲ್ಲಿ ಮುತ್ತಿನ ಮತ್ತು ಬರೋದು ಎಲ್ಲಿ..? ರಾಜ್ ಮೊಮ್ಮಗ `ಮುತ್ತು'ರಾಜನಾಗೋದು ಯಾಕೆ? ಕೆಂಡ ಸಂಪಿಗೆ, ನೋಡುವವರ ಮೈಯೆಲ್ಲ ಬೆಚ್ಚಗಾಗಿಸೋದು ಏಕೆ ಅನ್ನೋ ಪ್ರಶ್ನೆಗೆಲ್ಲ ಉತ್ತರ ಪಡೆಯೋಕೆ ಶಿವ 143ಯನ್ನೇ ಕಾಯಬೇಕು.

    ಅನಿಲ್ ಕುಮಾರ್ ನಿರ್ದೇಶನದ ಶಿವ 143, ರಾಮ್‍ಕುಮಾರ್ ಅವರ ಮಗ ಧಿರೇನ್ ಅವರಿಗೆ ಮೊದಲ ಸಿನಿಮಾ. ಮಾನ್ವಿತಾ ಇಷ್ಟೊಂಡು ಬೋಲ್ಡ್ ಆಗಿ ನಟಿಸಿರೋ ಮೊದಲ ಸಿನಿಮಾ. ಜಯಣ್ಣ ಭೋಗೇಂದ್ರ, ಡಾ.ಸೂರಿ ನಿರ್ಮಾಣದ ಶಿವ 143 ಚಿತ್ರದ ಟ್ರೇಲರ್‍ನ್ನು ಶಿವಣ್ಣ ಕೂಡಾ ಮೆಚ್ಚಿದ್ದಾರೆ.