` simple suni, - chitraloka.com | Kannada Movie News, Reviews | Image

simple suni,

  • ಸಿಂಪಲ್ ಸುನಿಯ ಒಂದು ಸರಳ ಪ್ರೇಮಕಥೆ.. : ವಿನಯ್ ರಾಜ್ ಕುಮಾರ್ ಹೀರೋ

    ಸಿಂಪಲ್ ಸುನಿಯ ಒಂದು ಸರಳ ಪ್ರೇಮಕಥೆ.. : ವಿನಯ್ ರಾಜ್ ಕುಮಾರ್ ಹೀರೋ

    10 ವರ್ಷಗಳ ಹಿಂದೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಅನ್ನೋ ಸಿನಿಮಾ ಮೂಲಕ ಸಂಚಲನ ಹುಟ್ಟುಹಾಕಿದ್ದ ಸಿಂಪಲ್ ಸುನಿ, ಇದೀಗ ಒಂದು ಸರಳ ಪ್ರೇಮಕಥೆ ಹೇಳೋಕೆ ಬರುತ್ತಿದ್ದಾರೆ. ಅರೆ.. ಇದು ಸಿಂಪಲ್ಲಾಗ್ ಒಂದ್ ಸ್ಟೋರಿಯ ಕನ್ನಡ ಅನುವಾದ ಅಲ್ಲವಾ.. ಎನ್ನಬೇಡಿ ಮತ್ತೆ.. ಆ ಚಿತ್ರಕ್ಕೆ ಮೊದಲು ಇದೇ ಟೈಟಲ್ ಎಂದುಕೊಂಡಿದ್ದರಂತೆ. ಚಿತ್ರದ ಟೈಟಲ್ ಬದಲಾಯಿತು. ಆದರೆ ಟೈಟಲ್ ಮೇಲಿನ ಸುನಿಯವರ ಪ್ರೀತಿ ಬದಲಾಗಲಿಲ್ಲ. ಇದೀಗ ಅದು ನೆರವೇರಿದೆ.

    ವಿನಯ್ ರಾಜ್ಕುಮಾರ್ ಮತ್ತು ನಿರ್ದೇಶಕ ಸಿಂಪಲ್ ಸುನಿ ಕಾಂಬಿನೇಷನ್ನ ಹೊಸ ಸಿನಿಮಾಕ್ಕೆ 'ಒಂದು ಸರಳ ಪ್ರೇಮಕಥೆ' ಎಂದು ಟೈಟಲ್ ಇಡಲಾಗಿದೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ನಾಯಕಿಯರಾಗಿ ಸ್ವಾತಿಷ್ಠ ಕೃಷ್ಣನ್ ಮತ್ತು 'ರಾಧಾ ಕೃಷ್ಣ' ಧಾರಾವಾಹಿ ಖ್ಯಾತಿಯ ಮಲ್ಲಿಕಾ ಸಿಂಗ್ ನಟಿಸುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ, ನಿರ್ದೇಶಕ 'ಸಿಂಪಲ್' ಸುನಿ ಈಗಾಗಲೇ ಶೇ. 50ರಷ್ಟು ಚಿತ್ರೀಕರಣವನ್ನು ಮುಗಿಸಿದ್ದಾರೆ. ಸದ್ಯ 2ನೇ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಬಿರುಸಿನಿಂದ ಸಾಗಿದೆ.

    ಜನವರಿ 23ರಂದು ಸಿನಿಮಾಗೆ ಮುಹೂರ್ತ ನಡೆದಿತ್ತು. ಬೆಂಗಳೂರು, ಚಿಕ್ಕಪೇಟೆಯಲ್ಲಿ ಮೊದಲ ಹಂತದ ಶೂಟಿಂಗ್ ಮುಗಿಸಿದ್ದು, ಮೈಸೂರಿನಲ್ಲಿ ಈಗ ಕೊನೆಯ ಹಂತದ ಶೂಟಿಂಗ್ ಆರಂಭಿಸಿದ್ದೇವೆ..' ಎಂದು ಮಾಹಿತಿ ತಿಳಿಸಿದ್ದಾರೆ ಸುನಿ.

    ವಿನಯ್ ರಾಜಕುಮಾರ್ ಮ್ಯೂಸಿಕ್ ಡೈರೆಕ್ಟರ್ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಪಾತ್ರದ ಹೆಸರು ಅತಿಶಯ್. ಸಿಂಪಲ್ ಸುನಿ ಅವರ ಡೈರೆಕ್ಷನ್ ಸ್ಟೈಲ್ ನನಗೆ ತುಂಬಾ ಇಷ್ಟ. ಈ ಸಿನಿಮಾದ ಕಥೆಯನ್ನು ಸುನಿ ನನಗೆ ಹೇಳಲು ಬಂದಾಗ, ಅವರ ನಿರ್ದೇಶನದಲ್ಲಿ ಕೆಲಸ ಮಾಡುತ್ತಿದ್ದೇನೆ ಅನ್ನೋದೇ ಖುಷಿ ನೀಡಿತ್ತು ಎಂದು ಖುಷಿ ಹಂಚಿಕೊಂಡಿದ್ದಾರೆ ವಿನಯ್. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ಕನ್ನಡ ಸಿನಿಮಾದಲ್ಲಿ ನಟಿಸಲು ಅವಕಾಶ ನೀಡಿದ್ದಕ್ಕಾಗಿ ತುಂಬಾ ಧನ್ಯವಾದಗಳು ಎಂದು ಮಲ್ಲಿಕಾ ಸಿಂಗ್ ಮೊದಲ ಕನ್ನಡ ಸಿನಿಮಾ ಬಗ್ಗೆ ಸಂತಸ ಹಂಚಿಕೊಂಡರು.

    ಚಿತ್ರದಲ್ಲಿ ರಾಜೇಶ್ ನಟರಂಗ, ಅರುಣಾ ಬಾಲರಾಜ್, ಸಾಧುಕೋಕಿಲ ಮುಂತಾದವರು ನಟಿಸುತ್ತಿದ್ದಾರೆ. ಹಾಡುಗಳಿಗೆ ವೀರ್ ಸಮರ್ಥ್ ಸಂಗೀತ ನೀಡುತ್ತಿದ್ದು, ಛಾಯಾಗ್ರಹಣವನ್ನು ಕಾರ್ತಿಕ್ ಮಾಡುತ್ತಿದ್ದಾರೆ.

    ಅಂದಹಾಗೆ ಇದು ಪುನೀತ್ ರಾಜ್ ಕುಮಾರ್ ಇಷ್ಟಪಟ್ಟಿದ್ದ ಕಥೆ. 2 ವರ್ಷಗಳ ಹಿಂದೆ ಕತೆಯನ್ನು ಪುನೀತ್ ರಾಜ್ಕುಮಾರ್ ಇಷ್ಟಪಟ್ಟಿದ್ದರು. ಮೊದಲು ನಾಲ್ಕು ಸಾಲಲ್ಲಿ ಕತೆ ಹೇಳಿದ್ದೆ ಆಗ ಅಪ್ಪು ಸರ್ ಒಪ್ಪಿದ್ದರು. ಕತೆಯನ್ನು ಡೆವೆಲಪ್ ಮಾಡಬೇಕಿತ್ತು. ಆದರೆ ಅಷ್ಟರಲ್ಲಿ ದುರ್ಘಟನೆ ಸಂಭವಿಸಿತು. ಈಗ ಅದೇ ಕತೆಯಲ್ಲಿ ವಿನಯ್ ರಾಜ್ಕುಮಾರ್ ನಟಿಸುತ್ತಿದ್ದಾರೆ ಎಂದು ನಿರ್ದೇಶಕ ಸುನಿ ತಿಳಿಸಿದ್ದಾರೆ. ವಿನಯ್ ಅವರಿಗಾಗಿ ಚಿತ್ರದ ಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ ಸುನಿ. ಸಿಂಪಲ್ ಸುನಿ.

  • ಸಿಂಪಲ್ ಸುನಿಯ ಗತವೈಭವ : ಯಾರು ಈ ದುಶ್ಯಂತ್..?

    ಸಿಂಪಲ್ ಸುನಿಯ ಗತವೈಭವ : ಯಾರು ಈ ದುಶ್ಯಂತ್..?

    ಸಿಂಪಲ್ ಸುನಿ ಹೊಸ ಪ್ರತಿಭೆಗಳನ್ನು ಹೆಕ್ಕಿ ತೆಗೆಯೋದ್ರಲ್ಲಿ ಎತ್ತಿದ ಕೈ. ಈ ಬಾರಿಯೂ ಅವರು ಹೊಸ ಹುಡುಗನಿಗೆ ಅವಕಾಶ ಕೊಟ್ಟಿದ್ದಾರೆ. ಸುನಿಯವರ ಹೊಸ ಚಿತ್ರ ಘೋಷಣೆಯಾಗಿದೆ. ಚಿತ್ರದ ಟೈಟಲ್ ಗತವೈಭವ. ಹೀರೋ ದುಶ್ಯಂತ್. ಯಾರು ಈ ದುಶ್ಯಂತ್ ಎಂದರೆ ಉತ್ತರ ಬರೋದು ತುಮಕೂರಿನಿಂದ.

    ದುಶ್ಯಂತ್ ಗುಬ್ಬಿ ಕ್ಷೇತ್ರದ ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಮಗ. ಹಾಗಂತ ಏಕಾಏಕಿ ನಿರ್ಮಾಪಕ, ನಿರ್ದೇಶಕರನ್ನು ಹುಡುಕಿ ಎಂಟ್ರಿ ಕೊಡುತ್ತಿಲ್ಲ. ಚಿತ್ರರಂಗಕ್ಕೆ ಬರುವುದನ್ನೇ ಉದ್ದೇಶವಾಗಿಟ್ಟುಕೊಂಡು ನಾಲ್ಕೈದು ವರ್ಷಗಳಿಂದ ಕಷ್ಟಪಟ್ಟಿದ್ದಾರೆ. 2017ರಲ್ಲಿ ಟೆಂಟ್ ಸಿನಿಮಾದಲ್ಲಿ 3 ವರ್ಷದ ಕೋರ್ಸ್ ಮಾಡಿದ್ದಾರೆ. ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ ಸಿನಿಮಾ ಕುರಿತು ಅಧ್ಯಯನ ಮಾಡಿದ್ದಾರೆ. ಬೀದಿ ನಾಟಕಗಳು, ಕಿರುಚಿತ್ರ, ಮ್ಯೂಸಿಕ್, ವಿಡಿಯೋ.. ಹೀಗೆ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ರಂಗಕರ್ಮಿ ಕೃಷ್ಣ, ಪುಷ್ಕರ್ ಆ್ಯಕ್ಟಿಂಗ್ ಇನ್ಸ್‍ಟಿಟ್ಯೂಟ್, ನೀನಾಸಂ ಧನಂಜಯ್ ಮೊದಲಾದವರ ಬಳಿ ನಟನೆ ಕಲಿತಿದ್ದರೆ, ಟಗರು ರಾಜು, ಭೂಷಣ್ ಕುಮಾರ್ ಡ್ಯಾನ್ಸ್ ಕಲಿಸಿದ್ದಾರೆ. ಮಾರ್ಷಲ್ ಆಟ್ರ್ಸ್, ಜಿಮ್ನಾಸ್ಟಿಕ್ ತರಬೇತಿಯೂ ಆಗಿದೆ.

    ನನ್ನ ಚಿತ್ರದ ಕಥೆಗೆ ದುಶ್ಯಂತ್ ಚೆನ್ನಾಗಿ ಹೊಂದಿಕೊಳ್ತಾರೆ. ಅವತಾರ ಪುರುಷ ರಿಲೀಸ್ ಆದ ನಂತರ ಗತವೈಭವ ಸೆಟ್ಟೇರಲಿದೆ ಎಂದು ಘೋಷಿಸಿದ್ದಾರೆ ಸಿಂಪಲ್ ಸುನಿ.

  • ಸಿಂಪಲ್ ಸುನಿಯಾ ರಾಬಿನ್ ಹುಡ್ ಚಿತ್ರಕ್ಕೆ ಬ್ರೇಕ್

    ಸಿಂಪಲ್ ಸುನಿಯಾ ರಾಬಿನ್ ಹುಡ್ ಚಿತ್ರಕ್ಕೆ ಬ್ರೇಕ್

    ಸಿಂಪಲ್ ಸುನಿ ನಿರ್ದೇಶನದ ಹೊಸ ಚಿತ್ರ ರಾಬಿನ್ ಹುಡ್ ಪ್ರೀ-ಪ್ರೊಡಕ್ಷನ್ ಹಂತದಲ್ಲಿತ್ತು. ಹೊಸ ಕಲಾವಿದ ದುಶ್ಯಂತ್ ಅವರನ್ನು ಹೀರೋ ಆಗಿ ಲಾಂಚ್ ಮಾಡುತ್ತಿರುವ ಸುನಿ ದುಶ್ಯಂತ್ ಅವರಿಗೆ ನೀನಾಸಂ ಟೀಚರ್ ಒಬ್ಬರಿಂದ ತರಬೇತಿಯನ್ನೂ ಕೊಡಿಸುತ್ತಿದ್ದಾರೆ. ಇದರ ಮಧ್ಯೆ ರಾಬಿನ್ ಹುಡ್ ಚಿತ್ರಕ್ಕೆ ಬ್ರೇಕ್ ಹಾಕಿದ್ದಾರೆ ಅನ್ನೋ ಸುದ್ದಿ ಬಂದಿದೆ.

    ರಾಬಿನ್ ಹುಡ್ ಬಜೆಟ್ ದೊಡ್ಡದು ಹಾಗೂ ಪ್ಯಾನ್ ಇಂಡಿಯಾ ಸಿನಿಮಾ. ಆದರೆ ಸದ್ಯದ ಮಟ್ಟಿಗೆ ಆ ಪ್ರಾಜೆಕ್ಟ್ನ್ನು ಸೈಡಿಗಿಟ್ಟು, ಬೇರೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ. ಹಾಗಂತ ಹೀರೋ ಚೇಂಜ್ ಆಗಿಲ್ಲ. ದುಶ್ಯಂತ್ ಜೊತೆಯಲ್ಲೇ ಸಿನಿಮಾ ಮಾಡಲಿದ್ದಾರೆ. ಆದರೆ ಅದು ಲವ್ ಕಾಮಿಡಿ ಸಬ್ಜೆಕ್ಟ್ ಸಿನಿಮಾ. ಅಧಿಕೃತ ಸುದ್ದಿಗೆ ಏಪ್ರಿಲ್ವರೆಗೂ ಕಾಯಬೇಕಂತೆ.

  • ಸಿಂಪಲ್ಲಾಗ್ ಒಬ್ಬ ಡೈರೆಕ್ಟರ್ ಕಂ ಪ್ರೊಡ್ಯೂಸರ್ ಸ್ಟೋರಿಗೆ 10 ವರ್ಷ

    ಸಿಂಪಲ್ಲಾಗ್ ಒಬ್ಬ ಡೈರೆಕ್ಟರ್ ಕಂ ಪ್ರೊಡ್ಯೂಸರ್ ಸ್ಟೋರಿಗೆ 10 ವರ್ಷ

    ಅವರ ಹೆಸರು ಸುನಿಲ್ ಕುಮಾರ್. ಕಚಗುಳಿ ಇಡೋದ್ರಲ್ಲಿ ಎತ್ತಿದ ಕೈ. ಮಾತುಗಳಲ್ಲೇ ಸ್ವರ್ಗವನ್ನ ರಪ್ಪಂತ ಪಾಸ್ ಆಗುವಂತೆ ಮಾಡೋ ಸುನಿಲ್ ಕುಮಾರ್ ಅವರು ನಿಮಗ್ಗೊತ್ತಾ ಎಂದರೆ ಗಾಂಧಿನಗರದವರು ಅಂತವರ್ಯಾರೂ ಇಲ್ಲ ಅಂತಾರೇ.. ಸಿಂಪಲ್ ಸುನಿ ಎಂದರೆ ಮುಖಗದ ಮೇಲೆ ನಗು ತಂದುಕೊಂಡೇ.. ಯೆಸ್ ಅಂತಾರೆ. ಅದು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿಯ ಮಹಾತ್ಮೆ. ಈ ಸಿಂಪಲ್ ಸ್ಟೋರಿಗೆ 10 ವರ್ಷ.

    10 ವರ್ಷದ ಹಿಂದೆ ಸುನಿ ಸಿನಿಮಾ ಮಾಡಬೇಕು ಎಂದುಕೊಂಡಾಗ 3 ಕೋಟಿ ಬಂಡವಾಳ ಹಾಕ್ತೇನೆ ಎಂದು ನಿರ್ಮಾಪಕರು ಮುಂದೆ ಬಂದಿದ್ರಂತೆ. ಆದರೆ.. ಕೊನೆಗೆ 50 ಲಕ್ಷಕ್ಕೆ ಆದರೆ ಸಿನಿಮಾ ಮಾಡೋಣ ಎಂದಾಗ.. 50 ಲಕ್ಷಕ್ಕೆ ಅನ್ನೋದಾದ್ರೆ ನಾವೇ ಪ್ರೊಡ್ಯೂಸರು ಕೂಡಾ ಆಗೋಣ ಎಂದುಕೊಂಡು ನಿರ್ಮಾಣಕ್ಕಿಳಿದವರು ಸುನಿ. ಕೊನೆಗೆ ಸಿನಿಮಾ ರಿಲೀಸ್ ಹೊತ್ತಿಗೆ ಬಜೆಟ್ಟು ಒಂದು ಕೋಟಿ ದಾಟಿತ್ತು ಅನ್ನೋದು ಬೇರೆ ಕಥೆ. ಆದರೆ ಸಿನಿಮಾ ಒಂದು ಲೆಕ್ಕದ ಪ್ರಕಾರ 10 ಕೋಟಿಗೂ ಹೆಚ್ಚು ಬ್ಯುಸಿನೆಸ್ ಮಾಡಿತ್ತು.

    ದಯವಿಟ್ಟು ಕಿವಿ ಮುಚ್ಚಿಕೊಳ್ಳಿ..ತುಂಬಾ ಚಳಿ ಆಗ್ತಿದೆ ಅಲ್ಲ.. ಕೈ ಬಿಡ್ತಿಯಾ.. ಹಿಡ್ಕೊಂಡಿರೋ ಕೈ ಬಿಡ್ತಿಯಾ ಅಂದ್ರೆ..

    ಗುಳಿಗೆ ಸಿದ್ದ ಒಳಗೊಳಗೇ ಮಾಡ್ದ ಅನ್ನಂಗೆ.. ಫ್ರೆಂಡ್‍ಶಿಪ್ ಹೆಂಚಲ್ಲಿ ಲವ್ ದೋಸೆ ಹುಯ್ಯೋ ಅಂಗಿದೆ..

    ಮ್ಯಾಥ್ಸ್ ಜಸ್ಟಲ್ಲಿ ಹೋಗಿದೆ.. ಮಿಕ್ಕವು.. ಕಂಪ್ಲೀಟ್ ಹೋಗಿದೆ..

    ಆತುರದಲ್ಲಿ ಕೆಲಸ ಆಗುವಾಗ ಬಟ್ಟೆ ಬಿಚ್ಚೋಕೆ ಒಬ್ರಿಗೊಬ್ರು ಸಹಾಯ ಮಾಡ್ತಾರೆ.. ಕೆಲ್ಸ ಆದ್ಮೇಲೆ ಯಾರೂ ಬರಲ್ಲ. ನಮ್ ಬಟ್ಟೆ ನಾವೇ ಹಾಕ್ಕೊಬೇಕು.

    ಸ್ವರ್ಗ ರಪ್ ಅಂತಾ ಪಾಸ್ ಆಯ್ತು..

    ಹೀಗೆ ಕಚಗುಳಿ ಇಡುತ್ತಲೇ ಸಿನಿಮಾ ಗೆಲ್ಲಿಸಿದ್ದರು ಸುನಿ. ಆ ಚಿತ್ರದಿಂದ ರಕ್ಷಿತ್ ಶೆಟ್ಟಿ ಸಿಂಪಲ್ ಸ್ಟಾರ್ ಆದರೆ, ಶ್ವೇತಾ ಶ್ರೀವಾತ್ಸವ್ ಸಿಂಪಲ್ ಹೀರೋಯಿನ್ ಆಗಿ ಗೆದ್ದರು. ಚಿತ್ರದಲ್ಲಿ ಎರಡು ಲವ್ ಸ್ಟೋರಿ ಇದ್ದರೂ, ಅದೇ ಹೀರೋ ಹೀರೋಯಿನ್‍ನ್ನೇ ತೋರಿಸಿ ಪ್ರೇಕ್ಷಕರನ್ನು ಮೆಚ್ಚಿಸಿದ್ದ ಸುನಿ ಲೆಕ್ಕಾಚಾರ ವರ್ಕೌಟ್ ಆಗಿತ್ತು.

    ಚಿತ್ರದ 10ನೇ ವರ್ಷದ ಸಂಭ್ರಮವನ್ನು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಸೃಷ್ಟಿಕರ್ತ ನೆನಪಿಸಿಕೊಂಡು ಸಂಭ್ರಮಿಸಿದ್ದಾರೆ. ರಕ್ಷಿತ್ ಶೆಟ್ಟಿ, ಶ್ವೇತಾ ಶ್ರೀವಾತ್ಸವ್ ಸೇರಿದಂತೆ ಚಿತ್ರತಂಡ ನೆನಪಿಸಿಕೊಂಡಿದೆ. ಒಟ್ಟಿನಲ್ಲಿ ಸಿಂಪಲ್ಲಾಗೇ ಒಬ್ಬ ಡೈರೆಕ್ಟರ್ ಮತ್ತು ಹೀರೋ ಹುಟ್ಟಿಕೊಂಡ ಸಿನಿಮಾ ಇದು.

  • ಸುನಿ ಬಜಾರ್‍ನಲ್ಲಿ ಚಾಲೆಂಜಿಂಗ್ ಸ್ಟಾರ್‍ಗೇನು ಕೆಲಸ..?

    darshan to release bazaar songs

    ಸಿಂಪಲ್ ಸುನಿ ನಿರ್ದೇಶನದ ಬಜಾರ್ ಚಿತ್ರ, ರಿಲೀಸ್ ಆಗೋಕೆ ರೆಡಿಯಾಗಿದೆ. ಚಿತ್ರ ನಿರ್ಮಾಣದಷ್ಟೇ ಚಿತ್ರದ ಪ್ರಚಾರಕ್ಕೂ ಶ್ರಮವಹಿಸುವ ಸುನಿ, ಚಿತ್ರದ ಹಾಡುಗಳ ಬಿಡುಗಡೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನ ಆಹ್ವಾನಿಸಿದ್ದಾರೆ.

    ಬಜಾರ್ ಚಿತ್ರದ ನಾಯಕ ಧನ್‍ವೀರ್, ಚಿತ್ರರಂಗಕ್ಕೆ ಹೊಸಬರು. ಅವರಿಗಿದು ಮೊದಲ ಸಿನಿಮಾ. ಮೊದಲಿನಿಂದಲೂ ದರ್ಶನ್ ಅಭಿಮಾನಿಯಾಗಿರುವ ಧನ್‍ವೀರ್‍ಗೆ, ತಮ್ಮ ಚಿತ್ರದ ಆಡಿಯೋವನ್ನು ದರ್ಶನ್ ಅವರೇ ಬಿಡುಗಡೆ ಮಾಡಲಿ ಎಂಬ ಆಸೆ. ಹೀಗಾಗಿ ಸುನಿ ಹಾಗೂ ಧನ್‍ವೀರ್, ದರ್ಶನ್‍ರನ್ನು ಭೇಟಿ ಮಾಡಿ ಆಡಿಯೋ ಬಿಡುಗಡೆಗೆ ಆಹ್ವಾನಿಸಿದ್ದಾರೆ.

    ಸುನಿ ಮನವಿಗೆ ದರ್ಶನ್ ಯೆಸ್ ಎಂದಿದ್ದಾರೆ. ಪಾರಿವಾಳಗಳ ರೇಸ್ ಕಥೆ ಇರುವ ಬಜಾರ್ ಸಿನಿಮಾದ ಹಾಡುಗಳು ಕೆಲವೇ ದಿನಗಳಲ್ಲಿ ನಿಮ್ಮ ಕಣ್ಣು, ಕಿವಿ ತಂಪು ಮಾಡಲಿವೆ.

  • ಸುನಿ-ಗಣೇಶ್ ಜೊತೆ ದೆಹಲಿಯ ಸುರಭಿ

    simple suni ganesh combination's next movie heroine finalised

    ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಸಿಂಪಲ್ ಸುನಿ ಚಮಕ್ ನಂತರ ಮತ್ತೆ ಒಂದಾಗುತ್ತಿರುವುದು ನಿಮಗೀಗಾಗಲೇ ಗೊತ್ತಿರೋ ಸುದ್ದಿ. ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲವಾದರೂ, ಒಂದು ಕಡೆ ಪ್ರಿ ಪ್ರೊಡಕ್ಷನ್ ಕೆಲಸಗಳು ಸದ್ದಿಲ್ಲದೆ ನಡೆಯುತ್ತಿವೆ. ಅತ್ತ ಅವತಾರಪುರುಷ ಚಿತ್ರದ ಪೋಸ್ಟ್ ಪ್ರೊಡಕ್ಷನ್ ನಡುವೆಯೇ ಹೊಸ ಚಿತ್ರಕ್ಕೆ ಸಿದ್ಧವಾಗುತ್ತಿರುವ ಸುನಿ, ಹೊಸ ಚಿತ್ರಕ್ಕೆ ಹೀರೋಯಿನ್ ಆಯ್ಕೆ ಮಾಡಿದ್ದಾರೆ.

    ಸುರಭಿ ಪುರಾಣಿಕ್ ಎಂಬ ದೆಹಲಿಯ ಚೆಲುವೆ ಇವರಿಬ್ಬರ ಹೊಸ ಚಿತ್ರಕ್ಕೆ ಜೋಡಿ. ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಈಗಾಗಲೇ ಚಿರಪರಿಚಿತವಾಗಿರುವ ಮುಖ. ಈಗ ಕನ್ನಡಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

    ರಿಯಾಲಿಟಿ ಶೋ ಮತ್ತು ಕೋರ್ಟ್ ರೂಂ ಕಥೆಯನ್ನಿಟ್ಟುಕೊಂಡು ಸೃಷ್ಟಿಸುತ್ತಿರುವ ಹೊಸ ಚಿತ್ರಕ್ಕಿನ್ನೂ ಟೈಟಲ್ ಇಟ್ಟಿಲ್ಲ. ಈ ಚಿತ್ರದಲ್ಲಿ ಸುರಭಿ ಪುರಾಣಿಕ್ ಆ್ಯಂಕರ್ ಆಗಿ ನಟಿಸುತ್ತಿದ್ದಾರೆ.

  • ಸುನಿ, ಪುಷ್ಕರ್ ಆಟ.. ಶರಣ್ ತ್ರಿಶಂಕು 

    pushkar team up with simple suni and sharan for their next movie

    ವಿಭಿನ್ನ ಪ್ರಯತ್ನಗಳಿಂದಲೇ ಯಶಸ್ಸನ್ನೂ ಪಡೆದು, ಹೆಸರು ಮಾಡುತ್ತಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಹೀಗೂ ಸಿನಿಮಾ ಮಾಡಿ ಗೆಲ್ಲಬಹುದು ಎಂದು ತೋರಿಸಿಕೊಟ್ಟ, ಹೊಸ ಜಾನರೆ ಸೃಷ್ಟಿಸಿದ ಸಿಂಪಲ್ ಸುನಿ, ಪ್ರೇಕ್ಷಕರನ್ನು ಡಿಸೈನ್ ಡಿಸೈನಾಗಿ ನಗಿಸಿ ಗೆಲ್ಲುತ್ತಿರುವ ಶರಣ್.. ಈ ಮೂವರೂ ಒಂದಾಗಿದ್ದಾರೆ. ಹೊಸ ಚಿತ್ರ ಮಾಡುತ್ತಿದ್ದಾರೆ. 

    ಚಿತ್ರಕ್ಕೆ ಮಹಾಭಾರತದ ತ್ರಿಶಂಕು ಕಥೆಯೇ ಸ್ಫೂರ್ತಿ. ಸುನಿ ಮತ್ತು ಶರಣ್ ಜೊತೆ ಸಿನಿಮಾ ಮಾಡುತ್ತಿರುವುದಕ್ಕೆ ಭಾರಿ ಖುಷಿ ಇದೆ ಎಂದಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

    ಕಾಮಿಡಿ ಕಥೆಯೇ ಆದರೂ, ಇದು ನನ್ನ ರೆಗ್ಯುಲರ್ ಸಿನಿಮಾ ಅಲ್ಲ. ನನಗೆ ಇದೊಂದು ಸವಾಲಿನ ಪಾತ್ರ ಎಂದಿದ್ದಾರೆ ಶರಣ್. ಮಹಾಭಾರತದ ಕಥೆಯನ್ನಿಟ್ಟುಕೊಂಡು ಒಂದು ಮಜವಾದ ಕಥೆ ಹೇಳುತ್ತಿದ್ದೇನೆ ಎಂದಿದ್ದಾರೆ ಸುನಿ.

    ಜನವರಿ 16ಕ್ಕೆ ಆ ಸಿನಿಮಾ ಸೆಟ್ಟೇರುತ್ತಿದೆ. ಜನವರಿ 20ಕ್ಕೆ ಸಿನಿಮಾ ಚಿತ್ರೀಕರಣ ಶುರುವಾಗಲಿದೆ.

  • ಸುನಿಗೆ ಬಜಾರ್ ಸಿಕ್ಸರ್

    bazar is sixth movie for suni

    ಬಜಾರ್. ಸಿಂಪಲ್ ಸುನಿ ನಿರ್ದೇಶನದ ಚಿತ್ರ ಎಂಬ ಕಾರಣಕ್ಕಾಗಿಯೇ ಕುತೂಹಲ ಹುಟ್ಟಿಸಿರುವ ಸಿನಿಮಾ. ಇದು ಅವರ ನಿರ್ದೇಶನದ ಆರನೇ ಸಿನಿಮಾ. ಹೀಗಾಗಿಯೇ ಭರ್ಜರಿ ಸಿಕ್ಸರ್ ನಿರೀಕ್ಷೆಯಲ್ಲಿದ್ದಾರೆ ಸುನಿ.

    2013ರಲ್ಲಿ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಮೂಲಕ ರಕ್ಷಿತ್ ಶೆಟ್ಟಿ ಎಂಬ ಸ್ಟಾರ್ ಹುಟ್ಟಿಗೆ ಕಾರಣರಾದ ಸುನಿ, ಈಗ ಧನ್‍ವೀರ್ ಅವರನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ.

    ಬಜಾರ್, ಸುನಿ ಕೆರಿಯರ್‍ನಲ್ಲಿಯೇ ವಿಭಿನ್ನ ಕಥಾ ಹಂದರ ಹೊಂದಿರುವ ಸಿನಿಮಾ. ಪಾರಿವಾಳಗಳ ರೇಸ್‍ನ ಕಥೆ ಚಿತ್ರದಲ್ಲಿದೆ. ಪಾರಿವಾಳಗಳ ರೇಸ್, ಭೂಗತ ಜಗತ್ತಿನ ಕಥೆ ಹೇಳುತ್ತಿರುವ ಸುನಿ, ಫೈಟ್ಸ್, ರೊಮ್ಯಾನ್ಸ್, ಕಾಮಿಡಿಯನ್ನು ಹದವಾಗಿ ಬೆರೆಸಿ ತೆಗೆದಿರುವ ಪಾಕ ಬಜಾರ್.

    ಆದಿತಿ ಪ್ರಭುದೇವ ಚಿತ್ರದ ನಾಯಕಿ. ಚಿತ್ರದ 2ನೇ ಟ್ರೇಲರ್ 3ನೇ ತಾರೀಕು ರಿಲೀಸ್ ಆಗುತ್ತಿದ್ದು, ಸಿನಿಮಾ ಜನವರಿ 2ನೇ ವಾರದಲ್ಲಿ ತೆರೆಗೆ ಬರಲಿದೆ.

  • ಸೆನ್ಸಾರ್ ಗೆದ್ದ ಬಜಾರ್ 

    bazar wins censor war

    ಅನಿಮಲ್ ಬೋರ್ಡಿನಿಂದ ಅನುಮತಿ ಸಿಗದೆ, ಬಿಡುಗಡೆ ದಿನಾಂಕವನ್ನು ಘೋಷಿಸಿಯೂ ಸಂಕಷ್ಟಕ್ಕೆ ಸಿಲುಕಿದ್ದ ಬಜಾರ್ ಸಿನಿಮಾ, ಮೊದಲ ಯುದ್ಧ ಗೆದ್ದಿದೆ. ಪಾರಿವಾಳಗಳನ್ನು ಬಳಸಿಕೊಂಡಿದ್ದ ವಿಷಯಕ್ಕೆ ಅನಿಮಲ್ ಬೋರ್ಡಿನಿಂದ ಕ್ಲಿಯರೆನ್ಸ್ ಸಿಗದೆ ಜನವರಿ 11ಕ್ಕೆ ರಿಲೀಸ್ ಆಗಬೇಕಿದ್ದ ಚಿತ್ರವನ್ನು ಮುಂದೂಡಲಾಗಿತ್ತು.

    ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಶೀಘ್ರದಲ್ಲೇ ಚಿತ್ರ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ. ಸಿಂಪಲ್ ಸುನಿ ನಿರ್ದೇಶನದ ಚಿತ್ರಕ್ಕೆ ಧನ್ವೀರ್ ಹೀರೋ. ನಾಗಕನ್ಯೆ ಖ್ಯಾತಿ ಆದಿತಿ ಪ್ರಭುದೇವ ನಾಯಕಿ.