` simple suni, - chitraloka.com | Kannada Movie News, Reviews | Image

simple suni,

  • ಬಜಾರ್ ಶಿಷ್ಯನನ್ನು ಹೊಗಳಿದ ದಚ್ಚು..!

    darshan watched simple suni's bazaar

    ಸಿನಿಮಾ ಚೆನ್ನಾಗಿದೆ. ಸ್ಕ್ರೀನ್ ಪ್ಲೇ ಕೂಡಾ ಸೂಪರ್. ಪಾರಿವಾಳ ಹಿಡಿಯೋದನ್ನು ಚೆನ್ನಾಗಿ ಕಲಿತುಕೋ.. ಗೆಳೆಯನೂ.. ಶಿಷ್ಯನೂ ಆದ ಧನ್ವೀರ್‍ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೊಗಳಿದ್ದು ಮತ್ತು ಸಲಹೆ ನೀಡಿರುವುದು ಹೀಗೆ.

    ಬಜಾರ್ ಚಿತ್ರ ಪ್ರದರ್ಶನವನ್ನು ಡಿ ಬಾಸ್‍ಗಾಗಿಯೇ ವಿಶೇಷವಾಗಿ ಆಯೋಜಿಸಿದ್ದ ಧನ್ವೀರ್‍ಗೆ ದರ್ಶನ್ ಮಾತು ಕೇಳಿ ಅಕಾಶವನೇ ಕೈಗೆ ಸಿಕ್ಕಿದ್ದರೆ ಅಚ್ಚರಿಯಿಲ್ಲ. ಏಕೆಂದರೆ, ಧನ್ವೀರ್ ದರ್ಶನ್ ಅವರ ಬಿಗ್ ಫ್ಯಾನ್. 

    ಸಿಂಪಲ್ ಸುನಿ ನಿರ್ದೇಶನದ ಬಜಾರ್ ಸಿನಿಮಾ, ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವಾಗಲೇ ಚಿತ್ರದ ಬಗ್ಗೆ ದರ್ಶನ್ ಹೊಗಳಿರುವುದು ಚಿತ್ರತಂಡಕ್ಕೆ ಪಾರಿವಾಳವೇ ಕೈಗೆ ಸಿಕ್ಕಂತಾಗಿದೆ.

  • ಬಜಾರ್‍ಗೆ ಕಳ್ಳರ ಕಾಟ

    bazaar faces problems from piracy

    ಸಿಂಪಲ್ ಸುನಿ ನಿರ್ದೇಶನದ ಬಜಾರ್ ಸಿನಿಮಾ ಥಿಯೇಟರುಗಳಲ್ಲಿ ಚೆನ್ನಾಗಿ ಹೋಗುತ್ತಿದೆ. ಚಿತ್ರದ ಬಗ್ಗೆ ಪ್ರೇಕ್ಷಕರಿಂದ, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ನೋಡಿ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ಹೀಗೆ.. ಇನ್ನೊಂದು ಸಕ್ಸಸ್ ಎದುರು ನೋಡುತ್ತಿದ್ದ ಸುನಿಗೆ, ಈಗ ಕಳ್ಳರ ಕಾಟ. ಅದೂ ಸೈಬರ್ ಕಳ್ಳರ ಕಾಟ.

    ಬಜಾರ್ ಚಿತ್ರವನ್ನು ಪೈರೇಟ್ ಮಾಡಿರುವ ಕೆಲವು ದ್ರೋಹಿಗಳು, ಚಿತ್ರವನ್ನು ವೆಬ್‍ಸೈಟುಗಳಲ್ಲಿ ಅಪ್‍ಲೋಡ್ ಮಾಡಿಬಿಟ್ಟಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಆ್ಯಪ್ ಮೂಲಕ ಅಪ್‍ಲೋಡ್ ಮಾಡಿದ್ದಾರೆ. ಸುನಿಗೆ ತಲೆನೋವಾಗಿರುವುದೇ ಇದು. ಏಕೆಂದರೆ, ಆ್ಯಪ್‍ನಲ್ಲಿರುವ ವಿಡಿಯೋಗಳನ್ನು ಡಿಲೀಟ್ ಮಾಡುವುದು ಸುಲಭವಲ್ಲ.

    ಹೀಗಾಗಿ ಸುನಿ ಮತ್ತು ನಿರ್ಮಾಪಕ ತಿಮ್ಮೇಗೌಡ, ಸೈಬರ್ ಕ್ರೈಮ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ಧನ್ವೀರ್ ಮತ್ತು ಆದಿತಿ ಪ್ರಭುದೇವ ನಟನೆಯ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವಾಗಲೇ ಪೈರಸಿ ಭೂತಕ್ಕೆ ಸಿಕ್ಕಬಿದ್ದಿರುವುದು ಚಿತ್ರತಂಡವನ್ನು ಬೆಚ್ಚಿ ಬೀಳಿಸಿದೆ.

  • ಬಜಾರ್‍ಗೆ ಪಾರಿವಾಳಗಳೇ ವಿಲನ್..!

    bazar release postponed due to pigeons

    ಬಜಾರ್ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಜನವರಿ 11ರ ಹೊತ್ತಿಗೆ ಬಜಾರ್ ಸಿನಿಮಾ ಥಿಯೇಟರುಗಳಲ್ಲಿರಬೇಕಿತ್ತು. ಸಿನಿಮಾದ ಎಲ್ಲ ಕೆಲಸ ಮುಗಿಸಿ, ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಚಿತ್ರತಂಡ, ಸಿನಿಮಾ ಬಿಡುಗಡೆಯನ್ನೇ ಮುಂದಕ್ಕೆ ಹಾಕಿದೆ. ಕಾರಣ ಬೇರೇನಲ್ಲ. ಪಾರಿವಾಳಗಳು.

    ಈಗಾಗಲೇ ಚಿತ್ರತಂಡ ಹೇಳಿಕೊಂಡಿರೋ ಹಾಗೆ ಇಡೀ ಚಿತ್ರದ ಕಥೆ ಸುತ್ತುವುದೇ ಪಾರಿವಾಳಗಳ ಸುತ್ತ. ಪಾರಿವಾಳಗಳ ರೇಸ್ ಮತ್ತು ಭೂಗತ ಲೋಕದ ಕಥೆ ಇರುವ ಬಜಾರ್‍ನಲ್ಲಿ ನಿಜವಾದ ಪಾರಿವಾಳಗಳನ್ನು ಬಳಸಿಕೊಂಡಿರುವುದೇ ಚಿತ್ರತಂಡವನ್ನು ಕಾಡುತ್ತಿದೆ. 

    ವನ್ಯಜೀವಿ ಸಂರಕ್ಷಣಾ ಕಾಯಿದೆ ಎಷ್ಟು ಬಿಗಿಯಾಗಿದೆಯೆಂದರೆ, ಅದು ಬಜಾರ್ ಚಿತ್ರದ ಬಿಡುಗಡೆಯನ್ನೇ ತಡೆಹಿಡಿದಿದೆ. ಇನ್ನೊಂದು ಅರ್ಥದಲ್ಲಿ ಚಿತ್ರದ ಹೀರೋ ಆಗಿದ್ದ ಪಾರಿವಾಳಗಳೇ, ಈಗ ವಿಲನ್ ಆಗಿಬಿಟ್ಟಿವೆ.

    ಆಗಿರೋದು ಇಷ್ಟು. ಪಾರಿವಾಳಗಳನ್ನು ಸಿನಿಮಾಗಳಲ್ಲಿ ಬಳಸಿಕೊಳ್ಳೋದಕ್ಕೆ ಸೆಂಟ್ರಲ್ ಅನಿಮಲ್ ಬೋರ್ಡ್ ಅನುಮತಿ ಕೊಡಬೇಕು. ಇದಕ್ಕೆ ಚಿತ್ರತಂಡ ಪ್ರಕ್ರಿಯೆ ಆರಂಭಿಸಿತ್ತು. ಆದರೆ, ಅವರ ದುರದೃಷ್ಟ ನೋಡಿ. ಇನ್ನೇನು ಅಂತಿಮ ಅನುಮತಿ ಪತ್ರ ಸಿಗಬೇಕು ಎಂಬ ಹೊತ್ತಿನಲ್ಲಿ ಅನಿಮಲ್ ಬೋರ್ಡ್ ನಿರ್ದೇಶಕರು ಬದಲಾಗಿಬಿಟ್ಟರು. ಹೀಗಾಗಿ.. ಅನುಮತಿ ಪಡೆಯುವ ಪ್ರಕ್ರಿಯೆ ಮತ್ತೆ ಮೊದಲಿನಿಂದ ಶುರುವಾಯ್ತು. ಇದರಿಂದಾಗಿ ಸಿನಿಮಾವನ್ನು ಅನಿವಾರ್ಯವಾಗಿ ಬೇರೆ ದಿನಾಂಕದಲ್ಲಿ ರಿಲೀಸ್ ಮಾಡೋಕೆ ನಿರ್ಧರಿಸಿದೆ ಬಜಾರ್ ಟೀಂ.

    ತಿಮ್ಮೇಗೌಡ ನಿರ್ಮಾಣದ ಬಜಾರ್ ಚಿತ್ರದ ಮೂಲಕ ಧನ್ವೀರ್ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು, ಆದಿತಿ ನಾಯಕಿ. ಸಿಂಪಲ್ ಸುನಿ ನಿರ್ದೇಶನದ ಚಿತ್ರ ಎಂಬ ಕಾರಣಕ್ಕೆ ಭಾರಿ ಕುತೂಹಲ ಹುಟ್ಟಿಸಿರುವ ಸಿನಿಮಾ ಬಿಡುಗಡೆಯ ಮುಂದಿನ ದಿನಾಂಕ ಸದ್ಯಕ್ಕೆ ಸಸ್ಪೆನ್ಸ್.

  • ಬಜಾರ್‍ನಲ್ಲಿ ಬೆಳ್ಳಿ.. ಚುಕ್ಕಿ.. ಯಾರವರು..?

    find out who is belli chukki in bazar

    ಬಜಾರ್. ಪಾರಿವಾಳಗಳ ರೇಸ್ ಮತ್ತು ಭೂಗತ ಜಗತ್ತಿನ ಕಥೆ. ಈ ಚಿತ್ರದಲ್ಲಿ ಹೀರೋ-ಹೀರೋಯಿನ್ ಅವರಷ್ಟೇ ಪ್ರಧಾನ ಪಾತ್ರ ಪಾರಿವಾಳಗಳದ್ದು. ಚಿತ್ರದಲ್ಲಿ ಎಲ್ಲರಿಗೂ ಇಷ್ಟವಾಗಿದ್ದೇ ಅದು. ಅದರಲ್ಲೂ ಶೂಟಿಂಗ್ ವೇಳೆ ಚಿತ್ರತಂಡದವರು ಪಾರಿವಾಳಗಳ ಜೊತೆ ಬಾಂಧವ್ಯ ಬೆಳೆಸಿಕೊಂಡುಬಿಟ್ಟಿದ್ದರು.

    ಅದರಲ್ಲೂ ನಾಯಕಿ ಆದಿತಿ, ಸೆಟ್‍ನಲ್ಲಿದ್ದ ನೂರಾರು ಪಾರಿವಾಳಗಳ ಪೈಕಿ ಎರಡನ್ನು ಸಾಕಿದ್ದರಂತೆ. ಅವುಗಳಿಗೆ ಬೆಳ್ಳಿ, ಚುಕ್ಕಿ ಎಂದೂ ಹೆಸರಿಟ್ಟಿದ್ದರಂತೆ. ಸೆಟ್‍ಗೆ ಬಂದ ಕೂಡಲೇ ಕಣ್ಣಿಗೆ ಬೆಳ್ಳಿ, ಚುಕ್ಕಿ ಕಾಣಿಸಿಕೊಳ್ಳಬೇಕು. ಇಲ್ಲದಿದ್ದರೆ ಏನೋ ತಳಮಳವಾಗುತ್ತಿತ್ತು. ಏನನ್ನೋ ಕಳೆದುಕೊಂಡಂತಾಗುತ್ತಿತ್ತು ಎಂದಿದ್ದಾರೆ ಆದಿತಿ ಪ್ರಭುದೇವ.

    ಚಿತ್ರದಲ್ಲಿ ಆದಿತಿ ಟೈಲರಿಂಗ್ ಹುಡುಗಿಯಾಗಿ ಕಾಣಿಸಿಕೊಂಡಿದ್ದು, ಮಹತ್ವಾಕಾಂಕ್ಷೆಯ ಹುಡುಗಿ. ಧನ್‍ವೀರ್ ನಾಯಕರಾಗಿರುವ ಚಿತ್ರಕ್ಕೆ, ಸಿಂಪಲ್ ಸುನಿ ನಿರ್ದೇಶಕ. ಮುಂದಿನ ವಾರ ತೆರೆಗೆ ಬರುತ್ತಿರುವ ಚಿತ್ರದ ಮೇಲೆ ಭಾರಿ ನಿರೀಕ್ಷೆ ಸೃಷ್ಟಿಯಾಗಿದೆ.

  • ಬಜಾರ್‍ನಲ್ಲಿ ಲವ್ ಫೇಲ್ಯೂರ್ ಸೆಲಬ್ರೇಷನ್..! 

    love failure song in bazar

    ಬಜಾರ್. ಸಿಂಪಲ್ ಸುನಿ ನಿರ್ದೇಶನದ ಸಿನಿಮಾ. ಈ ಚಿತ್ರದಲ್ಲಿ ಧನ್‍ವೀರ್ ಎಂಬ ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ ಸುನಿ. ಆದಿತಿ ಪ್ರಭುದೇವ ನಾಯಕಿ. ಈ ಚಿತ್ರದಲ್ಲೀಗ ಲವ್ ಫೇಲ್ಯೂರ್ ಆಗಿದೆ. ಅರ್ಥಾತ್.. ಮೊದಲ ಹಾಡು ರಿಲೀಸ್ ಆಗಿದೆ.

    ಲವ್ ಫೇಲ್ಯೂರ್ ಆಗೋಯ್ತು ನನಗೆ..  ಫೀಲ್ ಅಂತೂ ಸೂಪರು ಕಣ್ಣೀರ ಜೊತೆಗೆ.. ಏನೇನೋ ಬೈದ್ರೂ ಚೆಂದಾನೇ ನನಗೆ.. ದೂರಾನೇ ಆದ್ರೂ ನೀ ಕಣ್ಣ ಒಳಗೆ.. ಅನ್ನೋ ಹಾಡು.. ಬಿಟ್ಟಿದ್ದಾರೆ ಸುನಿ. ಸಂಗೀತ ನೀಡಿರುವುದು ರವಿ ಬಸ್ರೂರು. ಹಾಡಿರುವುದು ವಿಜಯ್ ಪ್ರಕಾಶ್.

    ಈ ಹಾಡಿನ ಸ್ಪೆಷಾಲಿಟಿ ಏನ್ ಗೊತ್ತಾ..? ಲವ್ ಫೇಲ್ಯೂರ್ ಅನ್ನು ಸೆಲಬ್ರೇಷನ್ ಮಾಡೋ ಹಾಡಿದು. ಭಗ್ನ ಪ್ರೇಮಿಗಳಿಗೆ ದುಃಖದ ಹಾಡಿದೆ. ಎಣ್ಣೆ ಹಾಡಿದೆ. ಫೀಲಿಂಗ್ ಸಾಂಗ್ ಇದೆ. ಆದರೆ, ಸೆಲಬ್ರೇಷನ್ ಸಾಂಗ್ ಇರಲಿಲ್ಲ. ಅಂಥಾದ್ದೊಂದು ಹಾಡು ಕೊಡೋ ಮೂಲಕ ಸುನಿ, ಒನ್ಸ್ ಎಗೇಯ್ನ್ ತಾವು ಡಿಫರೆಂಟ್ ಅಂತಾ ತೋರಿಸಿದ್ದಾರೆ.

  • ಬ್ಲಾಕ್ ಮ್ಯಾಜಿಕ್ `ಅವತಾರ ಪುರುಷ' ಕೇರಳದಲ್ಲಿ

    avatar purusha in kerala

    ಚುಟುಚುಟು ಕಾಂಬಿನೇಷನ್ ಶರಣ್-ಅಶಿಕಾ ರಂಗನಾಥ್, ಸಿಂಪಲ್ ಸುನಿ, ಪುಷ್ಕರ್ ಮಲ್ಲಿಕಾರ್ಜುನಯ್ಯ ಕಾಂಬಿನೇಷನ್ನಿನ ಅವತಾರ ಪುರುಷ ಸಿನಿಮಾದ ಶೂಟಿಂಗ್ ಕೇರಳದ ಪಾಲಕ್ಕಾಡ್‍ನಲ್ಲಿ ನಡೆಯುತ್ತಿದೆ. ವಿಶೇಷವೆಂದರೆ, ಶೂಟಿಂಗ್ ನಡೀತಿರೋದು 300 ವರ್ಷ ಹಳೆಯ ಪುರಾತನ ಬಂಗಲೆಯಲ್ಲಿ. ಅದು ಬಂಗಲೆಯಷ್ಟೇ ಅಲ್ಲ, ಅಲ್ಲಿ ತುಂಬಾ ಕಟ್ಟುನಿಟ್ಟಾಗಿರಬೇಕು.

    ಆ ಶೂಟಿಂಗ್ ಸ್ಪಾಟ್‍ನಲ್ಲಿ ಬಂಗಲೆ ಒಳಗೆ ಹೋಗುವವರು ಶೂ, ಚಪ್ಪಲಿ ಹಾಕಿಕೊಂಡು ಹೋಗುವಂತಿಲ್ಲ. ಮಾಂಸ ತಿನ್ನುವಂತಿಲ್ಲ. ಕೆಲವು ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಏಕೆಂದರೆ, ಬಂಗಲೆಯ ಒಳಗೆ ಪುಟ್ಟದೊಂದು ದೇವಸ್ಥಾನವೂ ಇದೆ. ನಾವು ಅವುಗಳನ್ನೆಲ್ಲ ಶಿಸ್ತುಬದ್ಧವಾಗಿ ಪಾಲಿಸುತ್ತಲೇ ಶೂಟಿಂಗ್ ಮಾಡಿದ್ದೇವೆ ಎಂದಿದ್ದಾರೆ ಪುಷ್ಕರ್.

    ಸಿಂಪಲ್ ಸುನಿ ಈ ಚಿತ್ರದಲ್ಲಿ ಶರಣ್‍ರನ್ನು ಜೂನಿಯರ್ ಆರ್ಟಿಸ್ಟ್ ಮಾಡಿದ್ದಾರೆ. ಚಿತ್ರ ವಿಚಿತ್ರ ವೇಷಗಳನ್ನು ತೊಡಿಸಿ ಅವತಾರ ಪುರುಷನನ್ನಾಗಿಸಿದ್ದಾರೆ. ಚಿತ್ರದಲ್ಲಿ ಬ್ಲಾಕ್ ಮ್ಯಾಜಿಕ್ ಕಥೆ ಇದೆಯಂತೆ. ಹಾಗಾದರೆ, ಇದು ಮಾಟಮಂತ್ರ ಚಿತ್ರವಾ..? ಹಾರರ್ ಚಿತ್ರವಾ..? ದೆವ್ವದ ಚಿತ್ರವಾ..? ಥ್ರಿಲ್ಲರ್ ಸಿನಿಮಾನಾ..? ವೇಯ್ಟ್ ಮಾಡಿ ನೋಡಿ.

  • ಮತ್ತೊಂದು ಕಿಕ್ ಕೊಟ್ಟ ಬಜಾರ್ ಸುನಿ

    bazaar second trailer is out

    ಸಿಂಪಲ್ ಸುನಿ, ಚಮಕ್ ಸುನಿ.. ಈಗ ಬಜಾರ್ ಸುನಿಯಾಗಿದ್ದಾರೆ. ಪಾರಿವಾಳಗಳ ರೇಸ್, ಭೂಗತ ಜಗತ್ತು ಮತ್ತು ಮಧ್ಯದಲ್ಲೊಂದು ನವಿರಾದ ಪ್ರೇಮಕತೆಯನ್ನಿಟ್ಟುಕೊಂಡು ಬಜಾರ್ ಅನ್ನೋ ಚಿತ್ರ ಸೃಷ್ಟಿಸಿರುವ ಸುನಿ, ಅದೇ ಚಿತ್ರದ ಮತ್ತೊಂದು ಕಿಕ್ ಕೊಟ್ಟಿದ್ದಾರೆ. 

    ಹೊಸ ಪ್ರತಿಭೆ ಧನ್‍ವೀರ್, ಆದಿತಿ, ಶರತ್ ಲೋಹಿತಾಶ್ವ ನಟಸಿರುವ ಚಿತ್ರದ 2ನೇ ಟ್ರೇಲರ್ ಹೊರಬಿಟ್ಟಿದ್ದಾರೆ ಸುನಿ. ಪಾರಿವಾಳ ಎಂದರೆ ಪ್ರೀತಿ.. ಪಾರಿವಾಳ ಎಂದರೆ ಶಾಂತಿ.. ಆ ಎರಡನ್ನೂ ಹೊರತುಪಡಿಸಿದ ಇನ್ನೊಂದು ಕಥೆ ಇಲ್ಲಿದೆ ಎನ್ನುತ್ತಲೇ ವಿಭಿನ್ನ ಕಥೆಯೊಂದನ್ನು ಹೊರತೆಗೆದಿದ್ದಾರೆ ಸುನಿ.

    ಚಿತ್ರಕ್ಕೆ ರವಿ ಬಸ್ರೂರು ಸಂಗೀತವಿದ್ದು, ಹಾಡು ಹೆಜ್ಜೆ ಹಾಕುವಂತಿವೆ. ಚಿಗುರು ಮೀಸೆ ಹುಡುಗನಾಗಿ ಧನ್‍ವೀರ್, ಚೆಂದೊಳ್ಳಿ ಚೆಲುವೆಯಾಗಿ ಆದಿತಿ ಇಷ್ಟವಾಗುವಂತಿದ್ದಾರೆ. ಜನವರಿ 11ಕ್ಕೆ ಚಿತ್ರಮಂದಿರದ ಬಜಾರುಗಳಲ್ಲಿರಲಿದೆ ಬಜಾರ್.

  • ಮಾಟ, ಮಂತ್ರದ ಅವತಾರ್ ಪುರುಷನದ್ದೇ 2 ಅವತಾರ..!

    ಮಾಟ, ಮಂತ್ರದ ಅವತಾರ್ ಪುರುಷನದ್ದೇ 2 ಅವತಾರ..!

    ಮಾಟ, ಮಂತ್ರ, ತಂತ್ರಗಳ ಬಗ್ಗೆ ಒಂದಷ್ಟು ಜನ ಭಯ ಪಡುವುದು ಸತ್ಯವಾದರೂ, ಬಹಳಷ್ಟು ಜನ ಕೇರ್ ಮಾಡೋದಿಲ್ಲ. ಆದರೆ, ಅಂತಹ ಸಿನಿಮಾಗಳಿಗೆ ಒಂದಷ್ಟು ಖಾಯಂ ಪ್ರೇಕ್ಷಕರಿದ್ದೇ ಇರುತ್ತಾರೆ. ಅವತಾರ್ ಪುರುಷ ಇದೇ ಜಾನರ್‍ನ ಸಿನಿಮಾ.

    ಶರಣ್, ಶ್ರೀನಗರ ಕಟ್ಟಿ, ಅಶಿಕಾ ರಂಗನಾಥ್, ಸುಧಾರಾಣಿ, ಸಾಯಿ ಕುಮಾರ್, ಭವ್ಯಾ ಮೊದಲಾದ ಘಟಾನುಘಟಿ ಕಲಾವಿದರೇ ನಟಿಸಿರುವ ಅವತಾರ್ ಪುರುಷ ಚಿತ್ರದ ಚಿತ್ರೀಕರಣಕ್ಕೆ ಕುಂಭಳಕಾಯಿ ಬಿದ್ದಿದೆ.

    ವಿಶೇಷವೆಂದರೆ ಇದನ್ನು ವೆಬ್ ಸಿರೀಸ್‍ಗಾಗಿ ಮಾಡಲಾಗಿತ್ತಂತೆ. ಆದರೆ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ನಿರ್ದೇಶಕ ಸಿಂಪಲ್ ಸುನಿಯವರನ್ನು ಒಪ್ಪಿಸಿ ಸಿನಿಮಾ ಮಾಡಿದ್ದಾರೆ. ಅಂದಹಾಗೆ ಅವತಾರ್ ಪುರುಷ, 2 ಭಾಗಗಳಲ್ಲಿ ಬರಲಿದೆ.

    ಅವತಾರ್ ಪುರುಷ ಭಾಗ 1ಕ್ಕೆ ಅಷ್ಟದಿಗ್ಬಂಧನ ಮಂಡಲಕ ಅನ್ನೋ ಟ್ಯಾಗ್‍ಲೈನ್ ಕೊಟ್ಟಿದ್ದರೆ, 2ನೇ ಭಾಗಕ್ಕೆ ತ್ರಿಶಂಕು ಅನ್ನೋ ಟೈಟಲ್ ಕೊಡಲಾಗಿದೆ. ಎರಡೂ ಭಾಗಗಳ ಚಿತ್ರೀಕರಣ ಮುಗಿಸಿದೆ ಅವತಾರ್ ಟೀಂ. ಎರಡೂ ಭಾಗಗಳನ್ನು ಒಟ್ಟಿಗೇ ತರುವ ಯೋಜನೆ ಚಿತ್ರತಂಡಕ್ಕಿದೆ.

    ಹೀಗಾಗಿಯೇ ಚಿತ್ರದ ಬಗ್ಗೆ ಟ್ವೀಟ್ ಮಾಡಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಮಾಟ, ಮಂತ್ರ ಅಂದ್ರೆ ಯಾರ್ಗೂ ನಂಬಿಕೆ, ಭಯ ಇಲ್ಲ. ಅಲ್ವಾ..? ಗೆಟ್ ರೆಡಿ ಫಾರ್ ದಿ ಸ್ಕೇರಿ ಡ್ರೈವ್ ಎಂದು ಟ್ವೀಟ್ ಮಾಡಿದ್ದಾರೆ.

  • ರೊಮಾನ್ಸ್ ಮಾಡೋದೇ ಕಷ್ಟವಾಯ್ತಂತೆ..!

    bazaar hero has no experience in love

    ಬಜಾರ್ ಚಿತ್ರದಲ್ಲಿರೋದು ಪಾರಿವಾಳ, ಭೂಗತ ಲೋಕದ ಕಥೆ. ಆ್ಯಕ್ಷನ್ ಸೀನುಗಳಿಗೆ ಬರವೇ ಇಲ್ಲ. ಚಿತ್ರದ ನಾಯಕ ದನ್ವೀರ್‍ಗೆ ಇದು ಮೊದಲ ಸಿನಿಮಾ. ಎಲ್ಲವೂ ಹೊಸದು. ಹೀಗಿದ್ದರೂ ಚಿತ್ರದಲ್ಲಿ ಫೈಟಿಂಗ್, ಆ್ಯಕ್ಷನ್, ಕಾಮಿಡಿ ಸೀನುಗಳನ್ನು ಮಾಡೋಕೆ ಭಯವಾಗಿರಲಿಲ್ಲವಂತೆ. ಕಾರಣ, ನಿರ್ದೇಶಕ ಸಿಂಪಲ್ ಸುನಿ.

    ಅವರು ಎಲ್ಲವನ್ನೂ ವಿವರವಾಗಿ ಹೇಳುತ್ತಿದ್ದರು. ನಾನು ಫಾಲೋ ಮಾಡ್ತಿದ್ದೆ. ಆ್ಯಕ್ಷನ್, ಕಾಮಿಡಿ ಕಷ್ಟವಾಗಲಿಲ್ಲ. ಆದರೆ, ರೊಮ್ಯಾಂಟಿಕ್ ದೃಶ್ಯಗಳೇ ನಿಜಕ್ಕೂ ಕಷ್ಟವಾದವು ಎಂದು ನಗುತ್ತಾರೆ ಧನ್ವೀರ್.

    ಕಾರಣ, ಇಷ್ಟೆ, ಲವ್ವಲ್ಲಿ ಧನ್ವೀರ್ ಅನನುಭವಿ. ಎಕ್ಸ್‍ಪೀರಿಯನ್ಸ್ ನಾಸ್ತಿ ಹುಡುಗ. ಆದರೂ ನಟಿ ಆದಿತಿ ಜೊತೆ ಚೆನ್ನಾಗಿ ನಟಿಸಿದ್ದಾರಂತೆ. ಚಿತ್ರ ಇದೇ ವಾರ ತೆರೆಗೆ ಬರುತ್ತಿದೆ. 

  • ಲವ್ ಫೇಲ್ಯೂರ್ ಆದ್ರೆ.. ಹಿಂಗೆಲ್ಲ ಎಂಜಾಯ್ ಮಾಡ್ತಾರಾ..?

    this hero is unque and enjoys break up

    ಲವ್ ಫೇಲ್ಯೂರ್ ಆದಾಗ ಹೀರೋಗಳು ಡಿಸೈನ್ ಡಿಸೈನಾಗಿ ಕಣ್ಣೀರು ಹಾಕೋದನ್ನ ಬೇಜಾನ್ ಸಿನಿಮಾಗಳಲ್ಲಿ ನೋಡಿದ್ದೇವೆ. ಆದರೆ, ಬಜಾರ್‍ನಲ್ಲಿ ನಿಮಗೆ ಬೇರೆಯದೇ ಸ್ಟೈಲ್ ಇದೆ. ಮುಂದಿನ ವಾರ ತೆರೆಗೆ ಬರ್ತಿರೋ ಸಿಂಪಲ್ ಸುನಿ ನಿರ್ದೇಶನದ ಬಜಾರ್‍ನಲ್ಲಿ ಹೀರೋ ಲವ್ ಫೇಲ್ಯೂರ್ ಆಗಲಿ ಎಂದು ಬಯಸಿ ಬಯಸೀ ಭಗ್ನ ಪ್ರೇಮಿಯಾಗ್ತಾನೆ.

    ಅಷ್ಟೇ ಅಲ್ಲ.. ಲವ್ ಫೇಲ್ಯೂರ್ ಆಗೋಯ್ತು ನನಗೆ.. ಫೀಲ್ ಅಂತೂ ಸೂಪರ್ ಕಣ್ಣೀರ ಜೊತೆಗೆ.. ಅನ್ನೋ ಹಾಡೂ ಇದೆ. ಧನ್ವೀರ್ ಈ ಹಾಡು ಹಾಡಿ ಕುಣಿತಾರಂತೆ. ಹುಡುಗರಿಗೆಲ್ಲ.. ಅದರಲ್ಲೂ ಭಗ್ನಪ್ರೇಮಿಗಳಿಗೆಲ್ಲ ಹಾಡು ಸಿಕ್ಕಾಪಟ್ಟೆ ಇಷ್ಟವಾಗಿಬಿಟ್ಟಿದೆ.

    ಆದಿತಿ ಪ್ರಭುದೇವ ನಾಯಕಿಯಾಗಿರುವ ಚಿತ್ರದಲ್ಲಿ ಪಾರಿವಾಳ ಮತ್ತು ಭೂಗತ ಲೋಕದ ನಂಟಿನ ಕಥೆಯಿದೆ. ಇದುವರೆಗಿನ ಸುನಿ ಚಿತ್ರಗಳ ಸ್ಟೈಲೇ ಬೇರೆ.. ಈ ಚಿತ್ರದ ಸ್ಟೈಲೇ ಬೇರೆ ಎನ್ನುತ್ತಿದೆ ಸ್ಯಾಂಡಲ್‍ವುಡ್.

  • ಲಾಕ್‍ಡೌನ್ ಟೈಂನಲ್ಲಿ ಸಿಂಪಲ್ ಸುನಿ ಸೃಷ್ಟಿಸಿದ ವಿಭಿನ್ನ ಕಥೆ..!

    simple suni's unique story during lockdown

    ಸಿಂಪಲ್ ಸುನಿ ವಿಭಿನ್ನ ಕಥೆಗಳಿಗೆ ಹೆಸರುವಾಸಿ. ಸಿಂಪಲ್ಲಾಗೊಂದ್ ಲವ್ ಸ್ಟೋರಿ ಬಳಿಕ ಅವರು ಕೈಗೆತ್ತಿಕೊಂಡಿದ್ದು ಬಹುಪರಾಕ್ ಚಿತ್ರವನ್ನ. ವಿಭಿನ್ನ ಶೈಲಿಯಲ್ಲಿ ಕಥೆ ಹೇಳುವ ಪ್ರಯೋಗಾತ್ಮಕ ಚಿತ್ರವದು. ಅಷ್ಟೆ ಅಲ್ಲ, ಉಳಿದವರು ಕಂಡಂತೆ ಚಿತ್ರಕ್ಕೆ ಹಣ ಹಾಕಿದ್ದೂ ಅವರೇ. ಹೀಗೆ ಪ್ರಯೋಗಗಳಿಗೆ ಒಡ್ಡಿಕೊಳ್ಳುವ ಸಿಂಪಲ್ ಸುನಿ, ಲಾಕ್ ಡೌನ್ ಟೈಂನಲ್ಲಿ ಇನ್ನೊಂದು ವಿಭಿನ್ನ ಪ್ರಯೋಗಾತ್ಮಕ ಕಥೆ ಸಿದ್ಧಪಡಿಸಿದ್ದಾರೆ.

    ಇದು ವಿಭಿನ್ನ ಪ್ರಯೋಗ. ಸಂಭಾಷಣೆಗಳಿರುತ್ತವೆ. ಆದರೆ ಪಾತ್ರಧಾರಿಗಳು ಮಾತನಾಡಲ್ಲ. ಮೈಂಡ್ ಟಾಕ್ ಸ್ಟೋರಿ. ಮನಸ್ಸಿನಲ್ಲೇ ಮಾತನಾಡುವ ಕಥೆಯಲ್ಲಿ ಸಸ್ಪೆನ್ಸ್, ಥ್ರಿಲ್ಲರ್ ಮತ್ತು ಕಾಮಿಡಿ ಎಲ್ಲವೂ ಇದೆ. ಲಾಕ್‍ಡೌನ್ ಟೈಂನಲ್ಲೇ ಹೊಳೆದ ಕಥೆಯ ಮುಖ್ಯಭಾಗವನ್ನು ಬರೆದು ಮುಗಿಸಿದ್ದೇನೆ ಎನ್ನುವ ಸುನಿಗೆ, ಈ ಕಥೆಯನ್ನು ಹೊಸಬರೊಂದಿಗೆ ಮಾಡುವ ಉದ್ದೇಶವಿದೆ.

    ಸದ್ಯಕ್ಕೆ ಶರಣ್,ಅಶಿಕಾ ರಂಗನಾಥ್ ಜೋಡಿಯ ಅವತಾರ್ ಪುರುಷ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ. ಇದರ ನಡುವೆ ಗಣೇಶ್ ಜೊತೆಗಿನ ಸಖತ್ ಮುಹೂರ್ತವಾಗಿ ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ. 

  • ವಿನಯ್ ರಾಜ್ ಕುಮಾರ್ ಚಿತ್ರಕ್ಕೆ ಸಿಂಪಲ್ ಸುನಿ ಡೈರೆಕ್ಷನ್

    ವಿನಯ್ ರಾಜ್ ಕುಮಾರ್ ಚಿತ್ರಕ್ಕೆ ಸಿಂಪಲ್ ಸುನಿ ಡೈರೆಕ್ಷನ್

    ವಿನಯ್ ರಾಜ್ ಕುಮಾರ್ ಹೊಸ ಚಿತ್ರಕ್ಕೆ ಸಿಂಪಲ್ ಸುನಿ ಡೈರೆಕ್ಷನ್ ಎನ್ನುವ ವಿಷಯವೇ ಚಿತ್ರರಂಗದಲ್ಲೊಂದು ಸಂಚಲನ ಸೃಷ್ಟಿಸಿದೆ.

    ವಿನಯ್ ಸಿದ್ಧಾರ್ಥ ನಂತರ ಮತ್ತೊಮ್ಮೆ ರೊಮ್ಯಾಂಟಿಕ್ ಲವ್ ಸ್ಟೋರಿಯಲ್ಲಿ ನಟಿಸುತ್ತಿದ್ದಾರೆ. ಹೀಗಾಗಿಯೇ ಚಿತ್ರದ ಮೇಲೆ ಭಾರಿ ನಿರೀಕ್ಷೆಯೂ ಇದೆ. ಕಥೆ ಪ್ರಸನ್ನ ಅವರದ್ದು. ಚಿತ್ರಕಥೆ-ಸಂಭಾಷಣೆ ಸುನಿ ಅವರದ್ದು. ಮೈಸೂರು ರಮೇಶ್ ಚಿತ್ರಕ್ಕೆ ನಿರ್ಮಾಪಕರು.

    ಸಿಂಪಲ್ಲಾಗಿಯೇ ಸಿನಿಮಾ ಮುಗಿಸಿ ಸಖತ್ ಸುದ್ದಿ ಮಾಡೋ ಸುನಿ ಹಾಗೂ ಹಲವು ಚಿತ್ರಗಳು ರೆಡಿಯಿದ್ದರೂ ರಿಲೀಸ್ ಆಗದೇ ಇರುವ ವಿನಯ್ ರಾಜ್ ಕುಮಾರ್ ಇಬ್ಬರೂ ಒಟ್ಟಾಗಿದ್ದಾರೆ. ವಿನಯ್ ಚಿತ್ರಗಳಲ್ಲಿ ಕಥೆ ಚೆನ್ನಾಗಿದ್ದರೂ ಬಹುತೇಕ ನಿರ್ಮಾಪಕರ ಸಮಸ್ಯೆಯಿಂದಾಗಿ ಚಿತ್ರಗಳು ಜಗ್ಗುತ್ತಿವೆ. ಗ್ರಾಮಾಯಣ, ಪೆಪೆ, ಅಂದೊಂದಿತ್ತು ಕಾಲ ಚಿತ್ರಗಳು ಬಿಡುಗಡೆಯಾಗಬೇಕಿವೆ. ಆದರೆ ಈ ಬಾರಿ ಡೈರೆಕ್ಟರ್ ಆಗಿರುವುದು ಸಿಂಪಲ್ ಸುನಿ. ಕೆಲಸ ಸ್ಲೋ ಮಾಡುವ ಮಾತಿಲ್ಲ. ಬಜೆಟ್‍ನ್ನು ಸಿಕ್ಕಾಪಟ್ಟೆ ಏರಿಸುವುದೂ ಇಲ್ಲ. ಹೀಗಾಗಿ ಸಿಂಪಲ್ ಸುನಿ-ವಿನಯ್ ಕಾಂಬಿನೇಷನ್ ಸಿನಿಮಾ ಬೇಗನೇ ಚಿತ್ರಮಂದಿರಕ್ಕೆ ಬರಲಿದೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಬಹುದು.

  • ಶರಣ್ ಪುತ್ರಿ ಚಿನಕುರುಳಿ ಪುಣ್ಯ ಸಿನಿಮಾ ಎಂಟ್ರಿ

    sharan's daughter enters film industry

    ಕಾಮಿಡಿ ಸ್ಟಾರ್ ಶರಣ್ ಪುತ್ರಿ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಶರಣ್ ಅಭಿನಯದ ಅವತಾರ್ ಪುರುಷ ಚಿತ್ರದಲ್ಲಿ ಶರಣ್ ಪುತ್ರಿ ಪುಣ್ಯ ಕೂಡಾ ನಟಿಸುತ್ತಿದ್ದಾರೆ. ಸ್ಕೂಲ್ ಯೂನಿಫಾರ್ಮ್ ಹಾಕಿಕೊಂಡು ಮುದ್ದು ಮುದ್ದಾಗಿರುವ ಪುಣ್ಯಳ ಎಂಟ್ರಿಯನ್ನು ಅವತಾರ್ ಪುರುಷ ಚಿತ್ರತಂಡ, ಪುಣ್ಯ ಹುಟ್ಟುಹಬ್ಬದ ದಿನವೇ ಅಧಿಕೃತವಾಗಿಯೇ ಘೋಷಿಸಿದೆ. 

    ಸಿಂಪಲ್ ಸುನಿ ನಿರ್ದೇಶನದ ಅವತಾರ್ ಪುರುಷ ಚಿತ್ರಕ್ಕೆ ಶರಣ್ ಹೀರೋ. ಅಶಿಕಾ ರಂಗನಾಥ್ ಹೀರೋಯಿನ್. ಪುಣ್ಯ ರೋಲ್ ಏನು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್.

    ಚಮಕ್ ಚಿತ್ರದಲ್ಲಿ ಗಣೇಶ್ ಮಗಳನ್ನು ಬೆಳ್ಳಿತೆರೆಗೆ ತಂದಿದ್ದ ಸುನಿ, ಈ ಚಿತ್ರದಲ್ಲಿ ಶರಣ್ ಪುತ್ರಿಯನ್ನು ಪರಿಚಯಿಸುತ್ತಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಸಿನಿಮಾದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.

  • ಸಖತ್ ಮ್ಯೂಸಿಕ್ ಮುಗಿಸೇ ಬಿಟ್ರು ಸಿಂಪಲ್ ಸುನಿ

    sakkath music completed during lock down

    ಸಖತ್, ಇದು ಸಿಂಪಲ್ ಸುನಿ ಮತ್ತು ಗಣೇಶ್ ಕಾಂಬಿನೇಷನ್‍ನಲ್ಲಿ ಬರುತ್ತಿರುವ ಹೊಸ ಸಿನಿಮಾ. ಮುಹೂರ್ತವನ್ನೂ ಮುಗಿಸಿಕೊಂಡಿದ್ದ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್ ಹಾಕಿದ್ದು ಚೈನೀಸ್ ವೈರಸ್. ಆದರೆ ಸುನಿ ಸುಮ್ಮನಾಗಲಿಲ್ಲ. ಲಾಕ್ ಡೌನ್ ನಡುವೆ ಇದ್ದ ವಿಡಿಯೋ ಕಾಲ್ ವ್ಯವಸ್ಥೆಯನ್ನೇ ಬಳಸಿಕೊಂಡು ಸಂಗೀತ ನಿರ್ದೇಶಕ ಜ್ಯೂಡಾ ಸ್ಯಾಂಡಿ ಬೆನ್ನು ಹತ್ತಿದರು.

    ಕೇವಲ ಒಂದು ತಿಂಗಳಲ್ಲೇ 4 ಹಾಡುಗಳ ಟ್ಯೂನ್ ಮುಗಿಸಿದ್ದೇವೆ. ಲಾಕ್ ಡೌನ್ ಇಲ್ಲದೇ ಇದ್ದರೆ, ಇನ್ನೂ ಹೆಚ್ಚು ಸಮಯ ಕೇಳುತ್ತಿತ್ತು. ಒಳ್ಳೆಯ ಟ್ಯೂನ್‍ಗಾಗಿ ಜ್ಯಾಡಾ ಸ್ಯಾಂಡಿಗೆ ಇನ್ನಿಲ್ಲದಷ್ಟು ಕಾಟ ಕೊಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾರೆ ಸುನಿ.

    ಭರಾಟೆ ಸುಪ್ರೀತ್ ನಿರ್ಮಾಣದ ಸಖತ್, ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ಶುರುವಾಗಲಿದೆ. ಚಮಕ್ ನಂತರ ಗಣೇಶ್ ಮತ್ತು ಸುನಿ ಮತ್ತೆ ಜೊತೆಯಾಗಿರುವ ಚಿತ್ರವಿದು. ಸುರಭಿ ಸಖತ್ ಹೀರೋಯಿನ್.

     

  • ಸಿಂಪಲ್ ಸುನಿ ಆಫರ್ ಕೊಟ್ಟರೂ ಕೊಹ್ಲಿ ಉಳಿಸಿಕೊಳ್ಳಲಿಲ್ಲ..!

    ಸಿಂಪಲ್ ಸುನಿ ಆಫರ್ ಕೊಟ್ಟರೂ ಕೊಹ್ಲಿ ಉಳಿಸಿಕೊಳ್ಳಲಿಲ್ಲ..!

    ಸಿಂಪಲ್ ಸುನಿ. ಸಿನಿಮಾ ನಿರ್ದೇಶಕರಷ್ಟೇ ಅಲ್ಲ, ಅಪ್ಪಟ ಕ್ರಿಕೆಟ್ ಪ್ರೇಮಿ. ರಣಜಿ ಕ್ರಿಕೆಟ್‍ನ್ನೂ ಬಿಡದೆ ಫಾಲೋ ಮಾಡುವ ಅಪ್ಪಟ ಕ್ರಿಕೆಟ್ ಅಭಿಮಾನಿ. ಸಹಜವಾಗಿಯೇ ಆರ್.ಸಿ.ಬಿ. ಫ್ಯಾನು. ವಿರಾಟ್ ಕೊಹ್ಲಿಗೆ ಕಟ್ಟರ್ ಫ್ಯಾನು. ಹೀಗಾಗಿ ಅವರು ಬುಧವಾರ ಒಂದು ಆಫರ್ ಬಿಟ್ಟಿದ್ದರು. ಚೆನ್ನೈ ಮತ್ತು ಆರ್‍ಸಿಬಿ ಮ್ಯಾಚ್‍ನಲ್ಲಿ ಕೊಹ್ಲಿ ಸೆಂಚುರಿ ಹೊಡೆದರೆ.. ಅವರ ಟ್ವೀಟ್‍ನ್ನು ರೀ ಟ್ವೀಟ್ ಮಾಡಿದವರಿಗೆಲ್ಲ ಅವತಾರ ಪುರುಷ ಟಿಕೆಟ್ ಫ್ರೀ ಎಂದಿದ್ದರು ಸುನಿ.

    ಸುನಿ ನಿರ್ದೇಶನದ ಅವತಾರ ಪುರುಷ ಇದೇ ವಾರ ರಿಲೀಸ್. ಶರಣ್, ಅಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿರೋ ಚಿತ್ರದಲ್ಲಿ ಕಾಮಿಡಿ ಹಾರರ್ ಸಬ್ಜೆಕ್ಟ್ ಇದೆ. ಸುನಿಯವರ ಆಸೆ ಮತ್ತು ಆಫರ್‍ಗೆ ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಅವರ ಸಪೋರ್ಟೂ ಇತ್ತು. ಆದರೆ.. ಫೈನಲಿ..

    ಆರ್.ಸಿ.ಬಿ. ಮ್ಯಾಚ್ ಗೆಲ್ತು. ಇದೇ ಟೂರ್ನಿಯಲ್ಲಿ ಆಗಿದ್ದ ಸೋಲಿನ ಸೇಡು ತೀರಿಸಿಕೊಳ್ತು. ಆದರೆ ಕೊಹ್ಲಿ ಆಟ 30 ರನ್ನಿಗೇ ಮುಗಿದು ಹೋಯ್ತು. ಸೆಂಚುರಿಗೆ ಜಸ್ಟ್ 70 ರನ್ ಕಡಿಮೆ.

    ಆದರೆ.. ಸುನಿ & ಆರ್.ಸಿಬಿ. ಅಭಿಮಾನಿಗಳು ಮಾತ್ರ..  ಐಪಿಎಲ್ ಅತ್ಲಾಗಿರಲಿ.. ಸಿನಿಮಾ ಸೂಪರ್ ಆಗಿ ಗೆಲ್ಲಲಿ ಎನ್ನುತ್ತಿದ್ದಾರೆ.

  • ಸಿಂಪಲ್ ಸುನಿ ಗಣೇಶ್ 3ನೇ ಬಾರಿಗೆ ಮತ್ತೊಮ್ಮೆ..

    simple suni ganesh's magic once again

    ಚಮಕ್ ಚಿತ್ರದ ಯಶಸ್ಸಿನ ನಂತರ ಸಿಂಪಲ್ ಸುನಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಸಖತ್ ಚಿತ್ರದಲ್ಲಿ ಮತ್ತೆ ಒಂದಾಗಿದ್ದಾರೆ. ಆ ಚಿತ್ರ ಪ್ರೊಡಕ್ಷನ್ ಹಂತದಲ್ಲಿದೆ. ಹೀಗಿರುವಾಗಲೇ ಇದೇ ಜೋಡಿ 3ನೇ ಬಾರಿಗೆ ಜನುಮದ ಜೋಡಿಯಾಗುವ ಸೂಚನೆ ಕೊಟ್ಟಿದೆ.

    ಯೆಸ್, ಸುನಿ ಮತ್ತು ಗಣೇಶ್ `ದ ಸ್ಟೋರಿ ಆಫ್ ರಾಯಗಢ' ಅನ್ನೋ ಚಿತ್ರ ಮಾಡೋಕೆ ರೆಡಿಯಾಗಿದ್ದಾರೆ. ಗಣೇಶ್ ಹುಟ್ಟುಹಬ್ಬಕ್ಕಾಗಿ ಚಿತ್ರದ ಫಸ್ಟ್ ಲುಕ್ ಕೂಡಾ ಹೊರಬಿದ್ದಿದೆ.

    ಚಿತ್ರ ಓಕೆ ಆಗಿರುವುದು ನಿಜ. ಕಥೆ ಡಾರ್ಕ್ ಕಾಮಿಡಿ ಸಿನಿಮಾ. ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತೇವೆ ಎಂದಿರುವ ಸುನಿ ಚಿತ್ರವನ್ನು ಈಗಲೇ ಕೈಗೆತ್ತಿಕೊಳ್ಳೋದಿಲ್ಲ. ಅವತಾರ ಪುರುಷ ಮತ್ತು ಸಖತ್ ಎರಡೂ ಚಿತ್ರಗಳು ಮುಗಿಯಬೇಕು. ಅದಾದ ನಂತರ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಬ್ಯಾನರಿನಲ್ಲೇ ಮತ್ತೊಂದು ಚಿತ್ರಕ್ಕೆ ಕಮಿಟ್ ಆಗಿದ್ದೇನೆ. ಅತ್ತ ಗಣೇಶ್ ಕೂಡಾ ಬೇರೆ ಪ್ರಾಜೆಕ್ಟ್‍ಗಳಲ್ಲಿ ಬ್ಯುಸಿಯಿದ್ದಾರೆ. ಹೀಗಾಗಿ ಈ ಚಿತ್ರ ಸ್ವಲ್ಪ ನಿಧಾನವಾಗಿ ಸೆಟ್ಟೇರಲಿದೆ ಎಂದಿದ್ದಾರೆ ಸಿಂಪಲ್ ಸುನಿ.

  • ಸಿಂಪಲ್ ಸುನಿ ಚಿತ್ರಕ್ಕೆ ಸುಂದರಿ ರಾಧೆ

    ಸಿಂಪಲ್ ಸುನಿ ಚಿತ್ರಕ್ಕೆ ಸುಂದರಿ ರಾಧೆ

    ವಿನಯ್ ರಾಜಕುಮಾರ್ ಜೊತೆ ಸಿಂಪಲ್ ಸುನಿ ಸಿನಿಮಾ ಮಾಡುತ್ತಿರುವುದು ಹೊಸ ಸುದ್ದಿಯೇನಲ್ಲ. ನಿರ್ದೇಶಕ ಸಿಂಪಲ್ ಸುನಿ ಮತ್ತು ನಟ ವಿನಯ್ ರಾಜ್ಕುಮಾರ್ ಅವರ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಅಂತಿಮವಾಗಿಲ್ಲ. ಈಗಾಗಲೇ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಈಗ ಹೀರೋಯಿನ್ ಆಯ್ಕೆಯಾಗಿದೆ.

    ವಿನಯ್ ಚಿತ್ರದಲ್ಲಿ ನಾಯಕಿಯಾಗುತ್ತಿರುವ ಹುಡುಗಿ ಅಪರಿಚತರೇನಲ್ಲ. ಕನ್ನಡಿಗರಿಗೆ ರಾಧಾಕೃಷ್ಣ ಧಾರಾವಾಹಿಯ ಮೂಲಕ ಮನೆಮನೆಗೂ ತಲುಪಿರುವ ಹುಡುಗಿ, ರಾಧೆಯ ಪಾತ್ರದಲ್ಲಿ ಮಿಂಚಿದ್ದ ಮಲ್ಲಿಕಾ ಸಿಂಗ್. ಲಾಕ್ ಡೌನ್ ಸಂದರ್ಭದಲ್ಲಿ ಮಹಾಭಾರತ, ರಾಧಾಕೃಷ್ಣ ಸೇರಿದಂತೆ ಹಲವು ಧಾರಾವಾಹಿಗಳು ಕನ್ನಡಕ್ಕೆ ಡಬ್ ಆಗಿ ಪ್ರಸಾರ ಕಂಡವು. ರಾಧಾಕೃಷ್ಣ ಧಾರಾವಾಹಿಯಲ್ಲಿ ರಾಧೆಯ ಪಾತ್ರ ಮಾಡಿದ್ದ ಮಲ್ಲಿಕಾ ಸಿಂಗ್ ಅವರನ್ನು ಸುನಿ ತಮ್ಮ ಚಿತ್ರಕ್ಕೆ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದಾರೆ.

    ಅಂದಹಾಗೆ ಈ ಚಿತ್ರದಲ್ಲಿ ಮಲ್ಲಿಕಾ ಸಿಂಗ್ ಅವರದ್ದು ಕಾಶ್ಮೀರಿ ಹುಡುಗಿಯ ಪಾತ್ರ ಎನ್ನಲಾಗಿದೆ. ಕಿರುತೆರೆಯಲ್ಲಷ್ಟೇ ಅಲ್ಲ, ಗಲ್ಲಿಭಾಯ್ ಚಿತ್ರದ ಮೂಲಕ ಬಾಲಿವುಡ್ಡಿಗೂ ಪಾದಾರ್ಪಣೆ ಮಾಡಿದ್ದಾರೆ ಮಲ್ಲಿಕಾ ಸಿಂಗ್. ಈ ಚಿತ್ರದಲ್ಲಿ ಈಗಾಗಲೇ ವಿಕ್ರಂ ಚಿತ್ರದ ಖ್ಯಾತಿಯ ಸ್ವಸ್ತಿಷ್ಠ ಕೃಷ್ಣನ್ ನಟಿಸುತ್ತಿದ್ದಾರೆ. ಈಗ ಮಲ್ಲಿಕಾ ಸಿಂಗ್ ಸೇರ್ಪಡೆಯಾಗಿದ್ದಾರೆ. ಸ್ವಸ್ತಿಷ್ಟ ಜರ್ನಲಿಸ್ಟ್ ಪಾತ್ರ ಮಾಡುತ್ತಿದ್ದು, ಮಲ್ಲಿಕಾ ಸಿಂಗ್ ಕಾಶ್ಮೀರಿ ಗರ್ಲ್ ಪಾತ್ರದಲ್ಲಿದ್ದಾರೆ.

  • ಸಿಂಪಲ್ ಸುನಿ ಡಬಲ್ ಪಟಾಕಿ

    ಸಿಂಪಲ್ ಸುನಿ ಡಬಲ್ ಪಟಾಕಿ

    ನವೆಂಬರ್ 26ಕ್ಕೆ ಗಣೇಶ್, ನಿಶ್ವಿಕಾ ನಾಯ್ಡು ನಟಿಸಿರೋ ಸಖತ್ ರಿಲೀಸ್.

    ಡಿಸೆಂಬರ್ 10ಕ್ಕೆ ಶರಣ್, ಆಶಿಕಾ ರಂಗನಾಥ್, ಶ್ರೀನಗರ ಕಿಟ್ಟಿ ಪ್ರಧಾನ ಪಾತ್ರದಲ್ಲಿರೋ ಅವತಾರ್ ಪುರುಷ ರಿಲೀಸ್.

    ಎರಡೂ ಚಿತ್ರಗಳ ಡೈರೆಕ್ಟರ್ ಒಬ್ಬರೇ. ಸಿಂಪಲ್ ಸುನಿ. ಹಾಗಾಗಿಯೇ ಇದು ಡಬಲ್ ಪಟಾಕಿ.

    ಸಖತ್ ಚಿತ್ರಕ್ಕೆ ನಿಶಾ ವೆಂಕಟ್ ಸೋಳಂಕಿ, ಸುಪ್ರೀತ್ ನಿರ್ಮಾಪಕರಾದರೆ, ಅವತಾರ್ ಪುರುಷ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು.

    ಸುನಿ ಕೈಚಳಕ ಇದ್ದ ಮೇಲೆ ನಗುವಿಗೆ ಬರವಿರಲ್ಲ. ಜೊತೆಗೆ ಸಖತ್ ಚಿತ್ರದಲ್ಲಿ ಗಣೇಶ್ ಹೀರೋ ಆದರೆ, ಅವತಾರ್ ಪುರುಷನಾಗಿರೋದು ಶರಣ್. ಅಲ್ಲಿಗೆ ನಗುವೂ ಡಬಲ್ ಪಟಾಕಿಯಂತೆ ಸಿಡಿಯಲಿದೆ.

  • ಸಿಂಪಲ್ ಸುನಿ ವಿನಯ್ ಚಿತ್ರಕ್ಕೆ ಸ್ವಸ್ತಿಷ್ಠ

    ಸಿಂಪಲ್ ಸುನಿ ವಿನಯ್ ಚಿತ್ರಕ್ಕೆ ಸ್ವಸ್ತಿಷ್ಠ

    ಸಿಂಪಲ್ ಸುನಿ ಮತ್ತು ವಿನಯ್ ರಾಜಕುಮಾರ್ ಇದೇ ಮೊದಲ ಬಾರಿ ಜೊತೆಯಾಗಿರುವ ಚಿತ್ರಕ್ಕೆ ನಾಯಕಿ ಸಿಕ್ಕಿದ್ದಾರೆ. ಕನ್ನಡತಿ ಎನ್ನುವುದು ವಿಶೇಷವೇನಲ್ಲ. ಏಕೆಂದರೆ ಎಂದಿನಂತೆ ಸುನಿ ಕನ್ನಡದ ಹುಡುಗಿಯನ್ನೇ ಹುಡುಕಿದ್ದಾರೆ. ಆದರೆ ಈಕೆ ಸುನಿ ಕಣ್ಣಿಗೆ ಬಿದ್ದಿದ್ದು ಮಾತ್ರ ತಮಿಳು ಚಿತ್ರದಿಂದ ಎನ್ನುವುದು ವಿಶೇಷ. ಚಿತ್ರಕ್ಕೆ ಆಯ್ಕೆಯಾಗಿರುವುದು ಸ್ವಸ್ತಿಷ್ಠ.

    ನಾನು ಸಹಜವಾಗಿಯೇ ಕನ್ನಡದ ಹುಡುಗಿಯರನ್ನು ಹುಡುಕಿ ಆರಿಸುತ್ತೇನೆ. ಈ ಚಿತ್ರಕ್ಕೂ ನಮ್ಮ ಹುಡುಗಿಯೇ ಬೇಕು ಎಂದು ಹುಡುಕುತ್ತಿದ್ದಾಗ ವಿಕ್ರಂ ಚಿತ್ರ ನೋಡಿದೆ.  ಆ ಚಿತ್ರದಲ್ಲಿ ನಟಿಸಿರುವ ಸ್ವಸ್ತಿಷ್ಠ ನನ್ನ ಚಿತ್ರದ ಪಾತ್ರಕ್ಕೆ ಸೂಟ್ ಆಗುತ್ತಾರೆ ಎನಿಸಿತು. ಆಕೆಯ ವಿವರ ಜಾಲಾಡಿದಾಗ ಇನ್ನೂ ಖುಷಿಯಾಯಿತು. ಆಕೆ ಕನ್ನಡದ ಹುಡುಗಿ. ಉತ್ತರ ಕರ್ನಾಟಕವರು. ಪೂರ್ತಿ ಹೆಸರು ಸ್ವಸ್ತಿಷ್ಠ ಕೃಷ್ಣನ್. ಸದ್ಯಕ್ಕೆ ಚೆನ್ನೈ ನಿವಾಸಿ.

    ನಾನು ಕನ್ನಡದವರಾದರೂ ಅವಕಾಶ ಸಿಕ್ಕಿದ್ದು ಇಲ್ಲಿ. ಕೆಲಸ ಸಿಕ್ಕಿದ್ದೂ ಇಲ್ಲಿ. ಈ ಚಿತ್ರದಲ್ಲಿ ನನ್ನದು ಪತ್ರಕರ್ತೆಯ ಪಾತ್ರ. ವಿನಯ್ ರಾಜಕುಮಾರ್ ಎದುರು ಸುನಿ ಅವರ ಡೈರೆಕ್ಷನ್. ಎಕ್ಸೈಟ್ ಅಂತೂ ಇದೆ. ಕನ್ನಡದ ಯಾರಾದರೂ ಸರಿ, ರಾಜ್ ಕುಟುಂಬದವರ ಚಿತ್ರದಲ್ಲಿ ನಟಿಸೋದನ್ನು ಇಷ್ಟ ಪಡ್ತಾರೆ. ನಾನೂ ಕನ್ನಡದವಳೇ ಅಲ್ವಾ.. ಎನ್ನುತ್ತಾರೆ ಸ್ವಸ್ತಿಷ್ಠ.

    ವಿಕ್ರಂ ಚಿತ್ರದಲ್ಲಿ ಸ್ವಸ್ತಿಷ್ಟ ಮಾಡಿದ್ದುದು ಪುಟ್ಟ ಪಾತ್ರ. ಕಮಲ್ ಹಾಸನ್ ಮಗ ಪ್ರಭಂಜನ್ ಇರುತ್ತಾನಲ್ಲ, ಆತನ ಪತ್ನಿಯ ಪಾತ್ರ. ನಿಮಿಷಗಳಷ್ಟೇ ತೆರೆಯ ಮೇಲಿದ್ದರೂ ಸ್ವಸ್ತಿಷ್ಟ ಗಮನ ಸೆಳೆದಿದ್ದರು.

  • ಸಿಂಪಲ್ ಸುನಿ, ಗೋಲ್ಡನ್ ಗಣಿ ಮತ್ತೆ ಚಮಕ್..?

    is simple suni ganesh combination coming back

    ಚಮಕ್, 2017ರಲ್ಲಿ ರಿಲೀಸ್ ಆಗಿದ್ದ ಸೂಪರ್ ಹಿಟ್ ಸಿನಿಮಾ.

    ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ರೊಮ್ಯಾನ್ಸ್, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಸಖತ್ತಾಗಿದ್ದು, ಸಿನಿಮಾವೂ ಬಾಕ್ಸಾಫೀಸ್‍ನಲ್ಲಿ ಗೆದ್ದಿತ್ತು. ಆ ಚಿತ್ರದಲ್ಲಿ ಸಾಧು ಕೋಕಿಲ ವಿಲನ್..!!! ಈಗ ಮತ್ತೊಮ್ಮೆ ಸುನಿ-ಗಣಿ ಜೋಡಿ ಅದೇ ಮ್ಯಾಜಿಕ್ ಮಾಡಲು ಹೊರಟಿದೆ ಎನ್ನೋ ಸುದ್ದಿ ಇದೆ.

    ಸುನಿ ಮಾಡಿರುವ ಕಥೆಯೊಂದು ಗಣೇಶ್ ಅವರಿಗೆ ಇಷ್ಟವಾಗಿದೆಯಂತೆ. ಸದ್ಯಕ್ಕೆ ಪುಷ್ಕರ್ ಬ್ಯಾನರಿನಲ್ಲಿ ಅವತಾರ ಪುರುಷ ಚಿತ್ರದಲ್ಲಿ ಬ್ಯುಸಿಯಾಗಿರುವ ಸುನಿ, ಆ ಚಿತ್ರ ಮುಗಿಸಿದ ನಂತರ ಈ ಚಿತ್ರಕ್ಕೆ ರೆಡಿಯಾಗಲಿದ್ದಾರಂತೆ. ಅಂತೆ ಕಂತೆಗಳಿಗೆಲ್ಲ ಅವರೇ ಹೌದು ಅಥವಾ ಇಲ್ಲ ಎನ್ನುವ ಉತ್ತರ ಕೊಡಬೇಕಿದೆ.