` suman ranganath, - chitraloka.com | Kannada Movie News, Reviews | Image

suman ranganath,

  • 'Dandupalyam 4' To Release In September

    dandupalyam 4 to release in september

    Director Srinivas Raju might have completed his trilogy on the dreaded Dandupalya gang. But that is not the end. Venkat, who had produced the second part of the 'Dandupalya' series, is back with the fourth version of the film.

    Yes, Venkat has produced a film called 'Dandupalyam 4' and has even acted in the film as a police officer. The film is directed by K T Nayak and will be released simultaneously in five languages. The shooting for the film is complete and the film will be released in the month of September.

    'Dandupalyam 4' stars Suman Ranganath, Venkat, Mumaith Khan, Sanjeev, Arun, Somu, Banerjee and others play prominent roles in the film. R Giri is the cameraman. 

  • Aadu Aata Aadu To Release Soon

    aadu aata aadu movie image

    Jagan starrer 'Aadu Aata Aadu' which is a remake of Tamil hit 'Thirittu Payale' is finally going to hit the theaters. Though the exact date of release has not been announced, sources say the film will be releasing soon.

    Even the film has been censored with an 'U/A' certificate. Jagan who is also the producer of the film with censor certificate in hand intends to release the film soon.

    The film has been directed by Ramnath Rigvedi and stars Jagan, Shruthi Prakash, Suman Ranganth in prominent roles. V Manohar has composed music for this film. Jagan is the producer of the film.

  • Double Engine' On 13th July

    double engine on july

    Chikkanna's new film 'Double Engine' which is been in the making for two years is finally ready to hit the screens on the 13th of July. Uday Mehta is distributing the film across Karnataka.

    'Double Engine' is a comedy which stars Chikkanna, Ashok, Suman Ranganth, Priyanka Malnad and others in prominent roles. Chandra Mohan who had earlier directed 'Bombay Mitai' has directed the film apart from scripting it.

    The film is being produced by Arun Kumar, Srikanth Matapathi, Madhu and Manjunath Nanjappa. Veer Samarth has composed the music for the film, while Suryakiran is the cinematographer.

     

  • ಕವಲು ದಾರಿಯಲ್ಲಿ ಚಿರಯೌವ್ವನೆ ಸುಮನ್ ರಂಗನಾಥ್

    suman ranganath in kavaludaaari

    ಸುಮನ್ ರಂಗನಾಥ್. ವಯಸ್ಸು 40 ದಾಟಿದ್ದರೂ, ಸೌಂದರ್ಯ ಮಾಸಿಲ್ಲ. ಸಿಬಿಐ ಶಂಕರ್ ಮೂಲಕ ಕನ್ನಡಕ್ಕೆ ಪರಿಚಿತರಾದ ಸುಮನ್, ಇತ್ತೀಚೆಗೆ ಕನ್ನಡದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದವರು. ಅವರೀಗ ಕವಲು ದಾರಿಯಲ್ಲಿ ಸೇರಿಕೊಂಡಿದ್ದಾರೆ.

    ಪುನೀತ್ ರಾಜ್‍ಕುಮಾರ್ ನಿರ್ಮಾಣದ `ಕವಲು ದಾರಿ'ಯಲ್ಲಿ ಸುಮನ್ ಅವರದ್ದು ಹೀರೋಯಿನ್ ಪಾತ್ರ. ಅಂದರೆ, ಸಿನಿಮಾದ ನಿಜವಾದ ನಾಯಕಿ ಅಲ್ಲ. ಕವಲುದಾರಿಯಲ್ಲಿ ಸಿನಿಮಾದೊಳಗೊಂದು ಸಿನಿಮಾ ಇದೆ. ಆ ಸಿನಿಮಾದೊಳಗಿನ ಸಿನಿಮಾದಲ್ಲಿ ಸುಮನ್ ನಾಯಕಿ.

    ಆಲ್‍ಫ್ರೆಡ್ ಹಿಚ್‍ಕಾಕ್ ಸಿನಿಮಾಗಳಲ್ಲಿರುವಂತೆ, ಒಂದು ವಿಭಿನ್ನವಾದ ಪಾತ್ರ ಸುಮನ್ ಅವರಿಗಾಗಿ ನೀಡಲಾಗಿದೆ ಎಂದು ಹೇಳಿಕೊಂಡಿದ್ದಾರೆ ನಿರ್ದೇಶಕ ಹೇಮಂತ್ ರಾವ್. ಚಿತ್ರದ ಎಲ್ಲ ಪಾತ್ರಗಳಿಗಿಂತ ಸುಮನ್ ಪಾತ್ರ ವಿಶೇಷವಾಗಿದೆಯಂತೆ. 

    ಕನ್ನಡದಲ್ಲಿ ನಾನು ಸಾಕಷ್ಟು ಪಾತ್ರಗಳನ್ನು ಮಾಡಿದ್ದರೂ, ಇಂಥಾದ್ದೊಂದು ಪಾತ್ರ ನನಗೂ ವಿಶೇಷ. ಈ ರೀತಿ ನನ್ನನ್ನು ತೋರಿಸಬಹುದು ಎಂಬ ಕಲ್ಪನೆಯೂ ನನಗಿರಲಿಲ್ಲ ಎಂದು ಖುಷಿ ಹಂಚಿಕೊಂಡಿದ್ದಾರೆ ಸುಮನ್.

    Related Articles :-

    Kavalu Daari Launched On Friday

  • ಕವಲುದಾರಿಯಲ್ಲಿ ಸುಮನ್ `ಖಾಲಿ ಖಾಲಿ.. ' ಚೆಲುವೆ

    suman ranganath stuns in kavaludaari

    ವಯಸ್ಸು 44 ಆದರೂ ಸುಮನ್ ರಂಗನಾಥ್, 30ರ ಹರೆಯದ ಚೆಲುವೆಯಂತೆಯೇ ಕಾಣ್ತಾರೆ. ಸುಮನ್ ಕನ್ನಡಕ್ಕೆ ವಾಪಸ್ ಬಂದಿದ್ದೇ ಅಪ್ಪು ಅಭಿನಯದ ಬಿಂದಾಸ್ ಚಿತ್ರದ ಕಲ್ಲು ಮಾಮ ಕಲ್ಲು ಮಾಮ.. ಎಂಬ ಐಟಂ ಸಾಂಗ್ ಮೂಲಕ. ಮೈನಾ ಚಿತ್ರದಲ್ಲಿನ ಓ ಪ್ರೇಮದ ಪೂಜಾರಿ ಹಾಡಂತೂ.. ಈಗಲೂ ಕಿಕ್ಕೇರಿಸುವ ಗೀತೆಗಳಲ್ಲೊಂದು. ಇಂತಹ ಸುಮನ್, ಈಗ ಮತ್ತೊಮ್ಮೆ ಕ್ಯಾಬರೆ ಹಾಡಿಗೆ ಕುಣಿದಿದ್ದಾರೆ. ಕವಲುದಾರಿಯಲ್ಲಿ.

    ಪುನೀತ್ ರಾಜ್‍ಕುಮಾರ್ ನಿರ್ಮಾಣದ ಕವಲು ದಾರಿ ಚಿತ್ರದಲ್ಲಿ ಖಾಲಿ ಖಾಲಿ ಅನಿಸೋ ಕ್ಷಣಕೆ.. ಎಂಬ ಹಾಡಿದೆ.  ಆ ಹಾಡಿನಲ್ಲಿ ಸುಮನ್ ರೆಟ್ರೋ ಸ್ಟೈಲ್ ಕ್ಯಾಬರೆ ಲುಕ್‍ನಲ್ಲಿ ಮಿಂಚಿದ್ದಾರೆ. 

    ಅದು ಕ್ಯಾಬರೆ ಹಾಡಾದರೂ, ಸುಮನ್ ಅವರ ಭಾವಾಭಿನಯಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ಅವರು ಕಣ್ಣಿನಲ್ಲೇ ಮಾತನಾಡುತ್ತಾರೆ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ ನಿರ್ದೇಶಕ ಹೇಮಂತ್ ರಾವ್. ಸುಮನ್ ಅವರ ಪಾತ್ರದ ಹೆಸರು ಮಾಧುರಿ.

    ರಿಷಿ, ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿರೋ ಚಿತ್ರಕ್ಕೆ ಸಂಗೀತ ನೀಡಿರೋದು ಚರಣ್‍ರಾಜ್.

  • ಕಾಮಿಡಿ.. ಹಾಟ್ ಹಾಟ್.. ಸುಮನ್

    double engine movie

    ಸುಮನ್ ರಂಗನಾಥ್... ವಯಸ್ಸು 50ರ ಹತ್ತಿರದಲ್ಲಿದ್ದರೂ, ಗ್ಲ್ಯಾಮರ್ ಬದಲಾಗಿಲ್ಲ. ಮಾಡೆಲಿಂಗ್ ಲೋಕದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದ್ದ ಸುಮನ್ ರಂಗನಾಥ್‍ಗೆ, ಕನ್ನಡದಲ್ಲಿ ಇತ್ತೀಚೆಗೆ ಒಳ್ಳೆಯ ಪಾತ್ರಗಳು ಸಿಗುತ್ತಿವೆ. ಸಿದ್ಲಿಂಗು, ನೀರ್‍ದೋಸೆ, ಮೈನಾ ಚಿತ್ರಗಳ ಪಾತ್ರಗಳು ಸುಮನ್‍ರ ವೃತ್ತಿ ಜೀವನ ಬದಲಿಸಿರುವುದು ಸತ್ಯ. ಇಂತಹ ಸುಮನ್, ಇದೇ ಮೊದಲ ಬಾರಿಗೆ ಕಾಮಿಡಿ ರೋಲ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಡಬಲ್ ಎಂಜಿನ್ ಚಿತ್ರದಲ್ಲಿ.

    ಈ ಹಿಂದೆ ಕೆಲವು ಚಿತ್ರಗಳಲ್ಲಿ ಕಾಮಿಡಿ ಮಾಡಿದ್ದರೂ, ಅವುಗಳೆಲ್ಲ ಕೆಲವು ದೃಶ್ಯಗಳಿಗೆ ಸೀಮಿತವಾಗಿತ್ತು. ಸಂಪೂರ್ಣ ಕಾಮಿಡಿ ಪಾತ್ರದಲ್ಲಿ ನಟಿಸಿರೋದು ಇದೇ ಮೊದಲು. ಹಳ್ಳಿ ಹೆಂಗಸು. ಆದರೆ ಗ್ಲ್ಯಾಮರಸ್ ಆಗಿದೆ. ಹಣ ಮಾಡುವ ಆಸೆಗೆ ಹುಡುಗರ ತಂಡದ ಜೊತೆ ಸೇರುವ ಮಹಿಳೆಯಾಗಿ ನಟಿಸಿದ್ದೇನೆ. ಪಾತ್ರ ನನಗಂತೂ ತುಂಬಾನೇ ಹಿಡಿಸಿದೆ ಎಂದು ಖುಷಿಯಾಗಿದ್ದಾರೆ ಸುಮನ್.

    ಚಂದ್ರಮೋಹನ್ ಕಥೆ ಹೇಳಿದ ತಕ್ಷಣ ಇಷ್ಟವಾಗಿ ಚಿತ್ರ ಒಪ್ಪಿಕೊಂಡರಂತೆ. ಎಲ್ಲ ಓಕೆ, ವಾಟ್ ಈಸ್ ಯುವರ್ ಸೌಂಧರ್ಯದ ಗುಟ್ಟು ಅಂದ್ರೆ, ಕೆಲಸದಲ್ಲಿ ಶ್ರದ್ಧೆ, ಕಣ್ತುಂಬಾ ನಿದ್ದೆ. ಹೊಟ್ಟೆ ತುಂಬಾ ಊಟ. ನೋ ಬ್ಯಾಡ್ ಹ್ಯಾಬಿಟ್ಸ್ ಅಂತಾರೆ ಸುಮನ್.

  • ಚಿಕ್ಕಣ್ಣ ವಿಲನ್ ಪಾತ್ರ ಮಾಡಿದರೆ ಹೇಗಿರುತ್ತೆ..?

    chikkanna aspires to do villain roles

    ಚಿಕ್ಕಣ್ಣ ಅನ್ನೋ ಹೆಸರು ಕೇಳಿದ್ರೇನೇ ಮುಗುಳ್ನಗುವ ಜನರಿದ್ದಾರೆ. ಅಷ್ಟರಮಟ್ಟಿಗೆ ಚಿಕ್ಕಣ್ಣ ಕಾಮಿಡಿಗೆ ಫಿಕ್ಸ್. ಬಿಡುವೇ ಇಲ್ಲದ ನಟರಾಗಿರುವ ಚಿಕ್ಕಣ್ಣ, ಡಬಲ್ ಎಂಜಿನ್ ಚಿತ್ರದಲ್ಲಿ ಹೆಚ್ಚೂ ಕಡಿಮೆ ಹೀರೋನೇ. ಸುಮನ್ ರಂಗನಾಥ್ ಜೊತೆ ನಟಿಸಿರುವ ಚಿಕ್ಕಣ್ಣ, ಈ ಚಿತ್ರದಲ್ಲೂ ಕಾಮಿಡಿ ರೋಲ್ ಮಾಡಿದ್ದಾರಂತೆ. 

    ಚಿತ್ರದಲ್ಲಿ ಸಂಭಾಷಣೆಗಳಿಗಿಂತ ಸನ್ನಿವೇಶಗಳೇ ನಗು ತರಿಸುವಂತಿವೆ. ಭಾವುಕ ಸನ್ನಿವೇಶದಲ್ಲೂ ಪ್ರೇಕ್ಷಕ ನಗುತ್ತಾನೆ. ಅದೇ ಈ ಚಿತ್ರದ ಸ್ಟ್ರೆಂಗ್ತ್ ಅಂತಾರೆ ಚಿಕ್ಕಣ್ಣ. ಇಷ್ಟೆಲ್ಲ ಆಗಿ ಚಿಕ್ಕಣ್ಣಂಗಿರೋ ಅತಿ ದೊಡ್ಡ ಆಸೆಯೇನು ಗೊತ್ತಾ..?

    ನಾನು ವಿಲನ್ ಆಗಬೇಕು ಎಂದು ಚಿತ್ರರಂಗಕ್ಕೆ ಬಂದವನು. ಆದರೆ ಕಾಮಿಡಿಯನ್ ಆಗಿಬಿಟ್ಟೆ. ಈಗ ನಾನು ಮಾಡ್ತೀನಿ ಅಂದ್ರೂ ಯಾರೂ ಅಂತಹ ಸಾಹಸ ಮಾಡೋದಿಲ್ಲ ಬಿಡಿ ಅಂತಾರೆ ಚಿಕ್ಕಣ್ಣ.

    ಚಿಕ್ಕಣ್ಣ ನಿರಾಶರಾಗಬೇಕಾದ ಅಗತ್ಯವೇನಿಲ್ಲ. ಖಳನಟರೆಂದರೆ ಇವರೇ ಎನ್ನುವಂತಿದ್ದ ವಜ್ರಮುನಿ, ತೂಗುದೀಪ ಶ್ರೀನಿವಾಸ್, ದೊಡ್ಡಣ್ಣ.. ಕಾಮಿಡಿ ಮಾಡಿ ಗೆದ್ದಿದ್ದಾರೆ. ಕಾಮಿಡಿ ಎಂದರೆ ಬಾಲಕೃಷ್ಣ ಎನ್ನುತ್ತಿದ್ದ ಕಾಲದಲ್ಲೇ ಅವರು ವಿಲನ್ ಆಗಿ ಗೆದ್ದಿದ್ದಾರೆ. ಡೋಂಟ್‍ವರಿ

  • ದಂಡುಪಾಳ್ಯ ಲೀಡರ್ ಆಗಿ ಸುಮನ್ ರಂಗನಾಥ್

    suman ranganath as dandupalya

    ದಂಡುಪಾಳ್ಯ, 2 ಹಾಗೂ 3 ಸಿನಿಮಾ ನೋಡಿದ್ದೀರಿ. ಈಗ 4 ಬರುತ್ತಿದೆ. ನೀವು ಇದುವರೆಗೆ ನೋಡಿರುವ ಸರಣಿ ಚಿತ್ರಗಳಲ್ಲಿ ನಿರ್ದೇಶಕರಾಗಿದ್ದವರು ಶ್ರೀನಿವಾಸ ರಾಜು. ಪೂಜಾಗಾಂಧಿ, ಸಂಜನಾ, ರವಿಶಂಕರ್, ರವಿಕಾಳೆ.. ಮೊದಲಾದವರುನಟಿಸಿದ್ದರು. ಹಸಿ ಹಸಿ ಕ್ರೌರ್ಯದ ವೈಭವೀಕರಣ ಮೂರೂ ಭಾಗಗಳಲ್ಲಿತ್ತು. ಈಗ 4ನೇ ಭಾಗ ಬರುತ್ತಿದೆ.

    ಆದರೆ, ಈ ಚಿತ್ರದ ನಿರ್ದೇಶಕ ಶ್ರೀನಿವಾಸ ರಾಜು ಅಲ್ಲ, ಕೆ.ಟಿ.ನಾಯಕ್. ನಿರ್ಮಾಪಕ ವೆಂಕಟ್ ಎಂಬುವವರು. ಈ ಚಿತ್ರದಲ್ಲಿ ದಂಡುಪಾಳ್ಯ ಗ್ಯಾಂಗ್ ಜೈಲಿನಿಂದ ತಪ್ಪಿಸಿಕೊಳ್ಳಲು ಮಾಡುವ ತಂತ್ರ ಚಿತ್ರದಲ್ಲಿದೆ.

    ಈ ದಂಡುಪಾಳ್ಯ ಗ್ಯಾಂಗ್‍ನ ಲೀಡರ್ ಆಗಿರುವುದು ಸುಂದ್ರಿ ಸುಮನ್ ರಂಗನಾಥ್. ಸುಂದ್ರಿ ಅನ್ನೋದು ಚಿತ್ರದಲ್ಲಿನ ಪಾತ್ರದ ಹೆಸರು. ಇದುವರೆಗೆ ಗ್ಲಾಮರ್ ಪಾತ್ರಗಳಲ್ಲೇ ಹೆಚ್ಚು ಹೆಚ್ಚು ಕಾಣಿಸಿಕೊಂಡಿದ್ದ ಈ ಚಿತ್ರದಲ್ಲಿ ಬೀಡಿ ಸೇದುತ್ತಾ ಪಕ್ಕಾ ಹಂತಕಿಯಂತೆ ಕಾಣಿಸಿಕೊಳ್ಳುತ್ತಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸುಮನ್ ರಂಗನಾಥ್ 

    suman ranganth gets hitched

    ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಚೆಲುವೆ ಸುಮನ್ ರಂಗನಾಥನ್, ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಉದ್ಯಮಿ ಸಾಜನ್ ಎಂಬುವವರ ಜೊತೆ ಸಪ್ತಪದಿ ತುಳಿದಿದ್ದಾರೆ. ಸುಮಾರು 8 ತಿಂಗಳಿಂದ ಡೇಟಿಂಗ್ ಮಾಡುತ್ತಿದ್ದ ಇಬ್ಬರೂ, ಸರಳವಾಗಿ ಕುಟುಂಬ ಮತ್ತು ಗೆಳೆಯರ ಉಪಸ್ಥಿತಿಯಲ್ಲಿ ಮದುವೆಯಾಗಿದ್ದಾರೆ.

    ಸುಮನ್ ರಂಗನಾಥನ್ ಅವರಿಗೆ 44 ವರ್ಷ ವಯಸ್ಸು.  ಇದಕ್ಕೂ ಮೊದಲು ಖ್ಯಾತ ಬಾಲಿವುಡ್ ನಿರ್ಮಾಪಕ ಬಂಟಿ ವಾಲಿಯಾ ಅವರನ್ನು ವಿವಾಹವಾಗಿದ್ದ ಸುಮನ್, 2007ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದರು. 

     

  • ಮೀನಿಂಗ್ ಡಬ್ಬಲ್ಲು.. ಸಿನಿಮಾ ಸಿಂಗಲ್ಲು..

    double engine's double meaning creates craze

    ಡಬಲ್ ಎಂಜಿನ್.. ಹೆಸರು ಕೇಳಿದ್ರೇನೇ ಏನೋ ಒಂಥರ ಇದ್ಯಲ್ಲ ಅನ್ನಿಸಬಹುದು. ಬಾಂಬೆ ಮಿಠಾಯಿ ಅನ್ನೋ ಸಿನಿಮಾ ಮಾಡಿದ್ದ ನಿರ್ದೇಶಕ ಚಂದ್ರಮೋಹನ್ ಅವರ 2ನೇ ಸಿನಿಮಾ ಇದು. ಕಾಮಿಡಿಯೇ ಕಥೆ. ಚಿಕ್ಕಣ್ಣ, ಸುಮನ್ ರಂಗನಾಥ್, ಪ್ರಭು, ಅಶೋಕ್ ನಟಿಸಿರುವ ಸಿನಿಮಾ.

    ಚಿಕ್ಕಣ್ಣಂಗೂ, ಸುಮನ್‍ಗೂ ಮ್ಯಾಚಿಂಗ್ ಇರೋದೇನು.. ಸುಮನ್‍ದೂ ಗುಂಗುರು... ಚಿಕ್ಕಣ್ಣಂದೂ ಗುಂಗುರು.. ಕೂದಲು..!

    ಹುಡುಗಿಯನ್ನ ಹುಡುಗ ನೋಡಿ ಇಷ್ಟಪಟ್ಟ. ಏನ್ ನೋಡಿ ಇಷ್ಟ ಪಟ್ಟ.. ಸ್ಸಾರಿ.. ಅವನ್ನೆಲ್ಲ ಹೇಳೊಕಾಗಲ್ಲ..

    ರೀಮೋಟ್ ತುಂಬಾ ಹಳೇದು ಅನ್ಸುತ್ತೆ.. ಟಿವಿ ಕೂಡಾ ತುಂಬಾ ಹಳೇದೇ..

    ರೂಮ್‍ಗೆ ಹೋಗಿ ಸೋಪ್ ಹಾಕಿ.. ಈಸಿಯಾಗಿ ಬಂದ್‍ಬಿಡುತ್ತೆ..

    ಇದರಲ್ಲಿ ಡಬಲ್ ಮೀನಿಂಗ್ ಎಲ್ಲಿದೆ ಅನ್ನೋವ್ರು ಒಂದ್ಸಲ ಕಿವಿ ತೆರೆದುಕೊಂಡು ಡಬಲ್ ಎಂಜಿನ್ ಟ್ರೇಲರ್ ನೋಡಬೇಕು. ಆಮೇಲೆ.. ನೀವು ಸಿನಿಮಾ ನೋಡೇ ನೋಡ್ತೀರಿ ಬಿಡಿ. 

    ಹಾಗಂತ ಸಿನಿಮಾ ಕಂಪ್ಲೀಟ್ ಅದೇ ಇರಲ್ಲ. ಒಂದು ಸೀರಿಯಸ್ಸಾದ ಕ್ರೈಂ ಥ್ರಿಲ್ಲರ್ ಕಥೆಯೂ ಇದೆ. ಕಚಗುಳಿ ಇಡುವ ಸಂಭಾಷಣೆ. ನೆನಪಿಸಿಕೊಂಡು ಮುಗುಳ್ನಗುವಂಥಾ ಡೈಲಾಗುಗಳು. ಡಬಲ್ ಎಂಜಿನ್ ಗೆಲ್ಲಿಸೋಕೆ ಇಷ್ಟು ಸಾಕಾ..?

  • ರಾಘವೇಂದ್ರ ರಾಜ್‍ಕುಮಾರ್‍ಗೆ ಸುಮನ್ ರಂಗನಾಥ್ ಜೋಡಿ?

    suman ranganath to pair with raghavendran rajkumar in chillam

    ಚಿಲಂ ಸಿನಿಮಾ ಪ್ರತಿದಿನವೂ ಒಂದಲ್ಲಾ ಒಂದು ವಿಷಯದಿಂದ ಸುದ್ದಿ ಮಾಡುತ್ತಿದೆ. ಮನೋರಂಜನ್ ರವಿಚಂದ್ರನ್ ನಾಯಕತ್ವದ ಚಿತ್ರದಲ್ಲಿ ರಾಘವೇಂದ್ರ ರಾಜ್‍ಕುಮಾರ್ ನೆಗೆಟಿವ್ ಶೇಡ್ ಇರುವ ಪಾತ್ರದಲ್ಲಿ ನಟಿಸುತ್ತಿರುವುದೇ ದೊಡ್ಡ ಸುದ್ದಿ. ಇದರ ಜೊತೆ ನಾನಾ ಪಾಟೇಕರ್, ಸರಿತಾ ಕೂಡಾ ತಂಡಕ್ಕೆ ಸೇರಿದ್ದಾರೆ. ಈಗ ಸುಮನ್ ರಂಗನಾಥ್ ಸೇರುವ ಸಮಯ ಹತ್ತಿರವಾಗಿದೆ.

    ಚಿತ್ರದ ನಿರ್ದೇಶಕಿ ಚಂದ್ರಕಲಾ, ರಾಘವೇಂದ್ರ ರಾಜ್‍ಕುಮಾರ್ ಜೋಡಿಯ ಪಾತ್ರಕ್ಕೆ ಕನ್ನಡದ ಹಲವು ನಟಿಯರನ್ನು ಸಂಪರ್ಕಿಸಿದ್ದರಂತೆ. ಮಲ್ಲಿಕಾ ಶೆರಾವತ್‍ರನ್ನೂ ಕಾಂಟ್ಯಾಕ್ಟ್ ಮಾಡಿದ್ದರಂತೆ. ಆಧರೆ, ಸಂಭಾವನೆ ವಿಚಾರದಲ್ಲಿ ಹೊಂದಿಕೆಯಾಗಲಿಲ್ಲ. ಅಲ್ಲಿಂದ ವಾಪಸ್ ಬಂದು ಯೋಚಿಸುತ್ತಿದ್ದಾಗ ಹೊಳೆದಿದ್ದು ಸುಮನ್ ರಂಗನಾಥ್. ತಕ್ಷಣ ಅವರನ್ನು ಸಂಪರ್ಕಿಸಿ ಕಥೆ ಹೇಳಿದೆವು. ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಅವರು ಓಕೆ ಅನ್ನೋದನ್ನು ಕಾಯುತ್ತಿದ್ದೇವೆ ಎಂದಿದ್ದಾರೆ ನಿರ್ದೇಶಕಿ ಚಂದ್ರಕಲಾ.

  • ಸನ್ಯಾಸತ್ವ ಸ್ವೀಕರಿಸಿದ್ರಾ ಸುಮನ್ ರಂಗನಾಥ್..?

    ಸನ್ಯಾಸತ್ವ ಸ್ವೀಕರಿಸಿದ್ರಾ ಸುಮನ್ ರಂಗನಾಥ್..?

    ಮಾದಕ ನಟಿ ಸುಮನ್ ರಂಗನಾಥ್ ವಯಸ್ಸು 50 ದಾಟಿದ್ದರೂ, ಅದು ಕಾಣದಷ್ಟು ಚೆಲುವೆ. ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸುಮನ್ ರಂಗನಾಥ್, ಸನ್ಯಾಸತ್ವ ಸ್ವೀಕರಿಸಿಬಿಟ್ಟರಾ ಅನ್ನೋ ಅನುಮಾನ ಮೂಡಿಸಿದ್ದು ಒಂದು ಫೋಟೋ.

    ಕೇಸರಿ ವಸ್ತ್ರ, ಕೊರಳಲ್ಲಿ ರುದ್ರಾಕ್ಷಿ ಮಾಲೆ, ಮೇಕಪ್ಪೂ ಇಲ್ಲದ ಆ ಫೋಟೋ ನೋಡಿ ಬೆಚ್ಚಿಬಿದ್ದವರಿಗೆ ಒಂದು ರಿಲೀಫ್ ಸುದ್ದಿ ಇದು. ಇದು ಸಿನಿಮಾಗಾಗಿ ಮಾತ್ರ.

    ಸುಮನ್ ರಂಗನಾಥ್ ಅವರಿಗೆ ಈ ಸನ್ಯಾಸಿನಿ ವೇಷ ಹಾಕಿಸಿರುವುದು ನಿರ್ದೇಶಕ ವಿಜಯ ಪ್ರಸಾದ್. ಜಗ್ಗೇಸ್, ಆದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿರೋ ಚಿತ್ರ ಇದೇ ವರ್ಷ ರಿಲೀಸ್ ಆಗುತ್ತಿದ್ದು, ಸುಮನ್ ರಂಗನಾಥ್ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ ಅನ್ನೋದಂತೂ ಸತ್ಯ.

  • ಸುಮನ್ ರಂಗನಾಥ್ ಜೊತೆ ಡಾಲಿ ಧನಂಜಯ ಜಾಲಿ ರೈಡ್

    ಸುಮನ್ ರಂಗನಾಥ್ ಜೊತೆ ಡಾಲಿ ಧನಂಜಯ ಜಾಲಿ ರೈಡ್

    ನಾರಾಯಣ ಪಿಳ್ಳೈ ಅಲಿಯಾಸ್ ಡಾಲಿ ಧನಂಜಯ, ಸುಮನ್ ರಂಗನಾಥ್ ಅವರ ಜೊತೆ ಲಾಂಗ್ ಡ್ರೈವ್ ಹೋಗಲಿದ್ದಾರೆ. ಲಾಂಗ್ ಡ್ರೈವ್ ಕಳಿಸೋದು ವಿಜಯ್ ಪ್ರಸಾದ್. ಇದು ತೋತಾಪುರಿ 2 ಅಪ್`ಡೇಟ್. ಇತ್ತೀಚೆಗಷ್ಟೇ ಡಾಲಿ ಹಾಗೂ ಸುಮನ್ ರಂಗನಾಥ್ ಕಾಣಿಸಿಕೊಂಡಿರುವ ‘ಮೊದಲ ಮಳೆ’ ಹಾಡು ಬಿಡುಗಡೆಯಾಗಿದ್ದು. ಇದೀಗ ‘ಲಾಂಗ್ ಡ್ರೈವ್ ಹೋಗೋಣ’ ಎಂಬ ಹಾಡು ಸಹ ಬಿಡುಗಡೆಯಾಗಲಿದೆ.

    ಇತ್ತೀಚೆಗೆ ಹರಿಬಿಟ್ಟ ಈ ಸಿನಿಮಾದ ಪೋಸ್ಟರ್ಗಳು ಹಾಗೂ ಹಾಡೊಂದು ನಾನಾ ಕಾರಣಗಳಿಂದಾಗಿ ಸದ್ದು ಮಾಡಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಜಗ್ಗೇಶ್-ಡಾಲಿ ಧನಂಜಯ್ ಕಾಂಬಿನೇಷನ್ ಇದೇ ಮೊದಲ ಬಾರಿಗೆ ಸಂಭವಿಸಿದೆ. ವಿಜಯ್ ಪ್ರಸಾದ್ ಇಬ್ಬರನ್ನೂ ತೆರೆಯ ಮೇಲೆ ಹೇಗೆ ತೋರಿಸಲಿದ್ದಾರೆ ಎನ್ನುವುದೇ ಕುತೂಹಲ.

    ಈಗಾಗಲೇ ತೋತಾಪುರಿ ಮೊದಲ ಭಾಗದಲ್ಲಿ ಅವರ ಪಾತ್ರದ ಪರಿಚಯವಾಗಿತ್ತು. ನಾರಾಯಣ್ ಪಿಳ್ಳೈ ಎಂಬ ಪಾತ್ರ ನಿರ್ವಹಿಸುತ್ತಿರುವ ಡಾಲಿ, ಬೃಹತ್ ಉದ್ಯಮಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಲೈಫ್ಸ್ಟೈಲ್, ಲವ್ಸ್ಟೋರಿ ಸೇರಿದಂತೆ ಇನ್ನಿತರ ವಿಷಯಗಳ್ನು ‘ತೋತಾಪುರಿ 2’ರಲ್ಲಿ ತೆರೆದಿಡುವ ಪ್ರಯತ್ನವಾಗಿದೆಯಂತೆ. ಚಿತ್ರದಲ್ಲಿ ಡಾಲಿ ಮೂರು-ನಾಲ್ಕು ಗೆಟಪ್ಗಳಲ್ಲಿ ಕಾಣಿಸಿಕೊಂಡಿದ್ದು, ವಿಭಿನ್ನ ಶೇಡ್ ಕೂಡ ಇರಲಿದೆ ಎಂಬುದು ಸದ್ಯದ ಮಾಹಿತಿ.  

    ಡಾಲಿ ಜೋಡಿಯಾಗಿ ಸುಮನ್ ರಂಗನಾಥ್ ನಟಿಸಿದ್ದಾರೆ. ಹಾಗೆಯೇ ಈ ಚಿತ್ರದಲ್ಲಿ ಜಗ್ಗೇಶ್, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್, ಹೇಮಾದತ್ ಸೇರಿದಂತೆ ಬೃಹತ್ ತಾರಾಗಣವೇ ಇದೆ. ವಿಜಯಪ್ರಸಾದ್ ನಿರ್ದೇಶನವಿರುವ ಈ ಚಿತ್ರವನ್ನು ಕೆ.ಎ.ಸುರೇಶ್ ನಿರ್ಮಿಸಿದ್ದಾರೆ.

  • ಸುಮನ್ ರಂಗನಾಥ್ ಲವ್ಸ್ ಚಿಕ್ಕಣ್ಣ

    suman ranganath's double engine love story

    ಸುಮನ್ ರಂಗನಾಥ್, ವಯಸ್ಸು 43. ಆದರೆ, 20+ ಎನ್ನಿಸುವಂತಾ ಚೆಲುವೆ. ಈ ಚೆಲುವೆಯ ಮೇಲೆ ಕಾಮಿಡಿ ಸ್ಟಾರ್ ಚಿಕ್ಕಣ್ಣಂಗೆ ಲವ್ವಾಗಿದೆ. ಅದು ಡಬಲ್ ಎಂಜಿನ್ ಚಿತ್ರದಲ್ಲಿ.

    ವಾಸ್ತವದಲ್ಲಿ ಚಿಕ್ಕಣ್ಣ, ಸುಮನ್ ರಂಗನಾಥ್ ಅವರ ಅಭಿಮಾನಿ. ಅವರ ಸಿನಿಮಾ ನೋಡಿದ್ದೆ. ನೋಡೋಕೆ ಚೆನ್ನಾಗಿದ್ರು. ಹೀಗಾಗಿಯೇ ಚಿಕ್ಕಂದಿನಲ್ಲೇ ಅವರ ಮೇಲೆ ಒಂಥರಾ ಪ್ರೀತಿ ಬೆಳೆದಿತ್ತು. ನಾವೆಲ್ಲಿ..? ಅವರೆಲ್ಲಿ..? ಆದರೆ, ಈಗ ಕನಸೊಂದು ನಿಜವಾಗಿದೆ ಎಂದು ಹೇಳಿಕೊಂಡಿದ್ದಾರೆ ಚಿಕ್ಕಣ್ಣ.

    ಆರಂಭದಲ್ಲಿ ಸುಮನ್ ಅವರ ಎದುರು ನಟಿಸೋದು ಕಷ್ಟವಾಯಿತಂತೆ. ನಂತರ ಸುಮನ್ ಅವರೇ ಚಿಕ್ಕಣ್ಣನವರಿಗೆ ಧೈರ್ಯ ಹೇಳಿದ್ರಂತೆ. ತಮ್ಮ ಮೆಚ್ಚಿನ ನಟಿಯೊಂದಿಗೆ ನಟಿಸೋದು ಒಂದು ಅದ್ಭುತ ಅನುಭವ ಎಂದು ಹೇಳಿಕೊಂಡಿದ್ದಾರೆ ಚಿಕ್ಕಣ್ಣ.

    ಅರುಣ್ ಕುಮಾರ್, ಶ್ರೀಕಾಂತ್ ನಿರ್ಮಾಣದ ಡಬಲ್ ಎಂಜಿನ್ ಚಿತ್ರಕ್ಕೆ ಚಂದ್ರಮೋಹನ್ ನಿರ್ದೇಶನವಿದೆ.

  • ಹೀರೋ ಚಿಕ್ಕಣ್ಣ.. ಆದರೆ, ಹೀರೋ ಅಲ್ಲ..!

    who is double engine real hero

    ಡಬಲ್ ಎಂಜಿನ್ ಚಿತ್ರದ ನಾಯಕ ಯಾರು..? ಚಿಕ್ಕಣ್ಣ. ಆದರೆ, ಚಿಕ್ಕಣ್ಣ ಹೀರೋ ಅಲ್ವಂತೆ. ಚಿತ್ರದಲ್ಲಿ ಚಿಕ್ಕಣ್ಣ ಜೊತೆ ಇನ್ನೂ ಇಬ್ಬರಿದ್ದಾರೆ ಪ್ರಭು ಮತ್ತು ಅಶೋಕ್. ಚಿಕ್ಕಣ್ಣಂಗೆ ಹೀರೋಯಿನ್ ಆಗಿರೋದು ಅವರ ಅಂದಕಾಲತ್ತಿಲ್ ಕನಸಿನ ರಾಣಿ ಸುಮನ್ ರಂಗನಾಥ್. ಆದರೆ, ಅವರು ಚಿಕ್ಕಣ್ಣಂಗೆ ಹೀರೋಯಿನ್ ಅಲ್ಲ. ಕನ್‍ಫ್ಯೂಸ್ ಆಗಬೇಡಿ. ಸಿನಿಮಾ ರಿಲೀಸ್ ಆಗೋಕೂ ಮುಂಚೆ ಸಿನಿಮಾ ಕಥೆ ಹೇಳೊಕಾಗುತ್ತಾ..?

    ಹಳ್ಳಿಯ ರೈತರ ಮಕ್ಕಳು ದುಡ್ಡು ಮಾಡೋಕೆ ಅಂತಾ ಹೊರಟಾಗ, ಅವರಿಗೇ ಗೊತ್ತಿಲ್ಲದೆ ಆಗುವ ಅವಾಂತರಗಳು, ಸೃಷ್ಟಿಯಾಗುವ ಸಮಸ್ಯೆಗಳು ಚಿತ್ರದ ಕಥೆ. ಹಳ್ಳಿಯಲ್ಲಿ ಲೈಟಾಗಿ ಶುರುವಾಗುವ ಕಥೆ, ಹೋಗ್ತಾ ಹೋಗ್ತಾ ಸೀರಿಯಸ್ ಆಗುತ್ತೆ. ಚಿತ್ರದ ಡಬಲ್ ಮೀನಿಂಗ್ ಡೈಲಾಗುಗಳ ಟ್ರೇಲರ್ರು, ಸುಮನ್ ರಂಗನಾಥ್ ಗ್ಲ್ಯಾಮರ್ರು.. ಎಲ್ಲವೂ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರೋಕೆ. ಚಿತ್ರದ ಕಥೆ, ಪ್ರತಿಯೊಬ್ಬರಿಗೂ ಇಷ್ಟವಾಗುವಂತಿದೆ ಎನ್ನುವ ಭರವಸೆ ಕೊಟ್ಟಿರೋದು ಚಿಕ್ಕಣ್ಣ.

    ಚಿಕ್ಕಣ್ಣ ಸ್ಟಾರ್ ವ್ಯಾಲ್ಯೂ ಜಾಸ್ತಿ ಆಗಿದೆ. ನಿಜ. ಆದರೆ, ಅವರು ಹೀರೋ ಆಗೋಕೆ ರೆಡಿ ಇಲ್ಲ. ಹೀರೋ ಆಗೋದು ಅಂದ್ರೆ, ಅದೊಂದು ದೊಡ್ಡ ಜವಾಬ್ದಾರಿ. ನನಗೆ ಆ ಶಕ್ತಿ ಇಲ್ಲ. ನನ್ನ ಕೆಲಸ ನಗಿಸೋದು. ನಗಿಸ್ತೀನಿ. ಅದೇ ನನ್ನ ಶಕ್ತಿ ಅಂತಾರೆ ಚಿಕ್ಕಣ್ಣ.

    ಬಾಂಬೆ ಮಿಠಾಯಿ ನಿರ್ದೇಶಕರ 2ನೇ ಪ್ರಯತ್ನವಾಗಿರೋ ಡಬಲ್ ಎಂಜಿನ್ ಚಿತ್ರದಲ್ಲಿ, ಮನರಂಜನೆಯನ್ನೂ ಮೀರಿದ ಸಂದೇಶವೂ ಇದೆಯಂತೆ.