` death, - chitraloka.com | Kannada Movie News, Reviews | Image

death,

  • Junior Artiste Dies in a Mishap During Shooting

    padmavathi image

    A Junior artiste has died in a mishap during the shooting of the Kannada remake of Tamil hit 'VIP'. The untitled Kannada film is being produced by Rockline Venkatesh and directed by Nandakishore.

    The introduction scene of Manoranjan Ravichandran was being shot near an uncompleted building in Yelahanka. A junior artiste called Padmavathi went missing after the complete of the shoot and after a thorough search, Padmavathi was found dead. She is said to have fallen from upstairs accidentally.

    A case has been filed at the Rajanukunte Police Station and further investigation is on.

  • Senior Director SK Bhagwan No More

    Senior Director SK Bhagwan No More

    Veteran director S K Bhagawan of Dorai-Bhagawan fame is no more. Srinivasa Krishna Iyengar Bhagavan popularly known as SK Bhagavan is a renowned Kannada film director, producer and actor.. The duo of director Dorairaj and SK Bhagwan was very popular in the Kannada film industry

    SK Bhagwan was aged 89 Years and was suffering from age releated issues and admitted to Jayadeva hospital recently. Bhagawan is in the industry for the last six decades and has directed 49 films till now out of which, 32 films are of Dr Rajakumar.

    The famous Bond movie was introduced to Kannada film industry by this Veteran Director. His directorial debut was Jedara Bale starring Dr Rajkumar.Movies like Eradu Kanasu, Bayalu Daari, Chandanada Gombe was directed by SK Bhagwan. His Contribution to Kannada Film Industry will never be forgotten. 

    Chitraloka team mourns the death of veteran director SK Bhagwan. 

  • ಅಪಾರ ಕೀರ್ತಿ ಮೆರೆದ ಮನೆತನದ ಕುಡಿ ಸುದರ್ಶನ್

    actor sudharshan

    ಆರ್.ಎನ್. ಸುದರ್ಶನ್ ಎಂದರೆ ಪದೇ ಪದೇ ನೆನಪಾಗುವುದು ಅದೇ ಹಾಡು..ಅಪಾರ ಕೀರ್ತಿ ಗಳಿಸಿ ಮೆರೆವ ಭವ್ನ ನಾಡಿದು.. ಕರ್ನಾಟಕವಿದುವೆ ನೃತ್ಯಶಿಲ್ಪ ಕಲೆಯ ಬೀಡಿದು.. ಕುದುರೆಯ ಮೇಲೆ ಹಾಡುತ್ತಾ ಬಂದ ಆ ಹುಡುಗನನ್ನು ಚಿತ್ರರಸಿಕರು ಮೆಚ್ಚುಗೆಯಿಂದ ಅಪ್ಪಿಕೊಂಡಿದ್ದರು. ಬಹುಶಃ ಕನ್ನಡದ ಮೊದಲ ಆರಡಿ ನಟ ಎಂದರೆ ಆರ್.ಎನ್. ಸುದರ್ಶನ್ ಇರಬೇಕು. ಅಜಾನುಬಾಹು. 

    ಅವರ ಕುಟುಂಬವೂ ಹಾಗೆಯೇ..ಅದು ಕನ್ನಡದ ಅಪಾರ ಕೀರ್ತಿ ಗಳಿಸಿ ಮೆರೆದ ಕುಟುಂಬ. ರಂಗಭೂಮಿಯ ಭೀಷ್ಮ ಎಂದೇ ಖ್ಯಾತರಾದ ಆರ್.ಎನ್. ನಾಗೇಂದ್ರ ರಾವ್, ಸುದರ್ಶನ್ ಅವರ ತಂದೆ. ಖ್ಯಾತ ಛಾಯಾಗ್ರಾಹಕ ಕೃಷ್ಣಪ್ರಸಾದ್ ಮತ್ತು ಕನ್ನಡದ ಸುಮಧುರ ಗೀತೆಗಳ ಮೋಡಿಗಾರ ಆರ್.ಎನ್.ಜಯಗೋಪಾಲ್ ಅವರ ಸಹೋದರ. ಅವರ ಪತ್ನಿ ಶೈಲಶ್ರೀ ಕೂಡಾ ನಟಿಯಾಗಿದ್ದವರು. 

    ವಿಶೇಷವೆಂದರೆ, ಅವರಿಗೆ ಶೂಟಿಂಗ್​ ಸೆಟ್​​ಗಳಲ್ಲಿ ಬಳಸುತ್ತಿದ್ದ ಪೇಂಯ್ಟ್​ನ ವಾಸನೆ ಸೋಕಿದರೇ ಆಗುತ್ತಿರಲಿಲ್ಲ. ಸೆಟ್​ಗಳಲ್ಲಿ ಬಳಸುತ್ತಿದ್ದ ಪರಿಕರಗಳ ಶಬ್ಧವೆಂದರೆ ಕಿರಿಕಿರಿ. ಆದರೆ, ಅದೇ ಚಿತ್ರರಂಗದಲ್ಲಿ ಅವರು ಇನ್ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದರು. ನಿರ್ದೇಶಿಸಿದರು. ಸ್ವತಃ ನಿರ್ಮಾಪಕರಾದರು. ಆದರೆ, ಕೊನೆ ಕೊನೆಯ ದಿನಗಳಲ್ಲಿ ಚಿತ್ರರಂಗ ಅವರನ್ನು ಮರೆತೇ ಹೋಗಿತ್ತು. 

    ಅದ್ಭುತ ಕಂಠಸಿರಿಯಿದ್ದ ಸುದರ್ಶನ್​ ಗಾಯಕರೂ ಹೌದು. ಹೂವೊಂದು ಬಳಿ ಬಂದು ತಾಕಿತು ಎನ್ನೆದೆಯಾ..ಹಾಡು ಕೇಳಿದರೆ ಶ್ರೀನಾಥ್ ನೆನಪಾಗುತ್ತರಲ್ಲವೇ. ಆ ಹಾಡಿನ ಹಿಂದಿನ ಧ್ವನಿ ಸುದರ್ಶನ್. ನಗುವ ಹೂವು ಚಿತ್ರದ ಇರಬೇಕು...ಇರಬೇಕು..ಅರಿಯದ ಮಗುವಿನ ಹಾಗೆ ಎನ್ನುವ ಹಾಡು ಕೂಡಾ ಜನಪ್ರಿಯವಾಗಿತ್ತು.

    ಏರ್​ಹೋಸ್ಟೆಸ್ ಆಗಿದ್ದ ಶೈಲಶ್ರೀ, ನಂತರ ಸುದರ್ಶನ್ ಚಿತ್ರಗಳಲ್ಲಿ ನಾಯಕಿಯಾದರು. ಚಿತ್ರಗಳ ಮೂಲಕ ಪರಿಚಯ ಬೆಳೆದು, ಪ್ರೀತಿಯಾಗಿ ಮದುವೆಯೂ ಆದರು. ಮಕ್ಕಳಿರಲಿಲ್ಲ. ಪ್ರೀತಿಯೇ ಬದುಕಾಗಿತ್ತು. ಅವರದ್ದು ಸುದೀರ್ಘ ಸುಖೀ ದಾಂಪತ್ಯ. 21ನೇ ವಯಸ್ಸಿನಿಂದ 78ನೇ ವಯಸ್ಸಿನವರೆಗೆ ಬಣ್ಣದ ಬದುಕಿನಲ್ಲಿಯೇ ಇದ್ದ ಸುದರ್ಶನ್​, ಹಳೆಯ ಕಲಾವಿದರು, ತಂತ್ರಜ್ಞರನ್ನು ಮರೆಯಬೇಡಿ ಎಂದು ಚಿತ್ರರಂಗವನ್ನು ಕೇಳಿಕೊಂಡಿದ್ದರು. ಕನ್ನಡ ಚಿತ್ರರಂಗದ ಇಂದಿನ ಈ ಸ್ಥಿತಿಗೆ ಕಾರಣವಾಗಿರುವ ಕುಟುಂಬದ ಕಲಾವಿದರೊಬ್ಬರು ಹಾಗೆ ಅಂಗಲಾಚುವ ಪರಿಸ್ಥಿತಿ ಬರಬಾರದಿತ್ತು. 

    ಅವರ ಸಂಕಷ್ಟದ ದಿನಗಳಲ್ಲಿ ನೆರವಿನ ಹಸ್ತ ಚಾಚಿದ್ದವರು ನಟ ಜಗ್ಗೇಶ್. ನಂತರ ಅವರ ನಟನೆಯ ಮಠ ಚಿತ್ರದ ಮೂಲಕ ಮತ್ತೊಮ್ಮೆ ಚಿತ್ರರಂಗ ಪ್ರವೇಶಿಸಿದ್ದ ಸುದರ್ಶನ್, ಸ್ವಾಮೀಜಿ ಪಾತ್ರದಲ್ಲಲಿ ಮನಸೂರೆಗೊಂಡಿದ್ದರು. ಪೋಷಕ ಪಾತ್ರಗಳಿಗೆ ಹೇಳಿ ಮಾಡಿಸಿದ ಹಾಗಿದ್ದ ಸುದರ್ಶನ್ ಅವರ ವ್ಯಕ್ತಿತ್ವದಲ್ಲೊಂದು ಘನತೆಯಿತ್ತು. 

    ತಮಿಳಿನ ಪಾಯಂ ಪುಲಿ, ಸಂಧಿಪು, ಪುನ್ನಗೈ ಮನ್ನನ್, ವೇಲೈಕಾರನ್, ನಾಯಗನ್, ಪಾರಿಜಾತಮ್ ಸುದರ್ಶನ್ ನಟಿಸಿದ್ದ ತಮಿಳು ಚಿತ್ರಗಳ ಪೈಕಿ ಕೆಲವು. ಮಲಯಾಳಂನಲ್ಲಿ ಜಾಕ್​ಪಾಟ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಸುದರ್ಶನ್,  ತೆಲುಗಿನ ಮಾಯಾ ಮಚ್ಚಿಂದ್ರ, ಮೈ ಡಿಯರ್ ಭೂತಮ್, ತಮಿಳಿನ ಮರಗಥಾ ವೀಣೈ, ಕನ್ನಡದ ಅಗ್ನಿಸಾಕ್ಷಿ ಧಾರಾವಾಹಿಗಳಲ್ಲಿ ನಟಿಸಿದ್ದರು.

    ವಿಜಯನಗರದ ವೀರಪುತ್ರ ಚಿತ್ರದ ವೀರ ಸೈನಿಕ, ಪ್ರಚಂಡ ಕುಳ್ಳ ಚಿತ್ರದ ಕಿಂಕಿಣಿ ಶರ್ಮ, ಮಠ ಚಿತ್ರದ ಸ್ವಾಮೀಜಿ, ಸೂಪರ್ ಚಿತ್ರದಲ್ಲಿ ಉಪೇಂದ್ರ ಅವರ ತಂದೆ..ಸುದರ್ಶನ್ ಅವರ ಅಭಿನಯ ಪ್ರತಿಭೆಗೆ ಈ ಕೆಲವು ಪಾತ್ರಗಳು ಸಾಕು. ಆದರೆ, ಕಲಾವಿದನ ಆ ಬದುಕಿಗೆ ಕಲಾ ಜಗತ್ತು ಸೂಕ್ತ ಬೆಲೆ ಕೊಡಲಿಲ್ಲ ಎಂಬುದು ವಾಸ್ತವ.

  • ಕುಕ್ಕೆಯಿಂದ ಬರುವಾಗ ಅಪಘಾತ - ಧಾರಾವಾಹಿ ನಟ, ನಟಿ ಸಾವು

    serial actress death

    ಮಾಗಡಿ ತಾಲೂಕಿನ ಸೋಲೂರು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ, ನಟ ಸಾವಿಗೀಡಾಗಿದ್ದಾರೆ. ಮಹಾನದಿ ಸೀರಿಯಲ್ ಖ್ಯಾತಿಯ ರಚನಾ ಹಾಗೂ ಸಹನಟ ಜೀವನ್ ಮೃತಪಟ್ಟಿದ್ದಾರೆ.

    ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆ ಮುಗಿಸಿಕೊಂಡು ಬೆಂಗಳೂರಿಗೆ ವಾಪಸಾಗುತ್ತಿದ್ದರು. ಗೆಳೆಯ ಕಾರ್ತಿಕ್ ಹುಟ್ಟುಹಬ್ಬವೂ ಜೊತೆಯಲ್ಲೇ ಬಂದಿದ್ದರಿಂದ ಹುಟ್ಟುಹಬ್ಬವನ್ನೂ ಆಚರಿಸಿಕೊಂಡು ಹಿಂದಿರುಗುತ್ತಿದ್ದರು. ಸಫಾರಿಯಲ್ಲಿ ಬರುತ್ತಿದ್ದವರು ನಿಂತಿದ್ದ ಟ್ಯಾಂಕರ್‍ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರೂ ಸಾವನ್ನಪ್ಪಿದ್ದಾರೆ. ಕಾರ್‍ನಲ್ಲಿದ್ದ ಇತರೆ ಗೆಳೆಯರಾದ ರಂಜಿತ್, ಎರಿಕ್, ಉತ್ತಮ್, ಹೊನ್ನೇಶ್, ಕಾರ್ತಿಕ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 

    ನಟಿ ರಚನಾ, ಮಹಾನದಿ, ತ್ರಿವೇಣಿ ಸಂಗಮ, ಮಧುಬಾಲಾ ಮೊದಲಾದ ಧಾರಾವಾಹಿಗಳಲ್ಲಿ ನಟಿಸಿದ್ದರು. ಮಹಾನದಿ ಸೀರಿಯಲ್ ರಚನಾಗೆ ಖ್ಯಾತಿ ತಂದುಕೊಟ್ಟಿತ್ತು.

  • ನಟ ಸಂಪತ್ ಆತ್ಮಹತ್ಯೆ : ಪರಿಸ್ಥಿತಿ ಇಷ್ಟು ಗಂಭೀರವಾಗಿದೆಯಾ..?

    ನಟ ಸಂಪತ್ ಆತ್ಮಹತ್ಯೆ : ಪರಿಸ್ಥಿತಿ ಇಷ್ಟು ಗಂಭೀರವಾಗಿದೆಯಾ..?

    ಇತ್ತೀಚೆಗೆ ಬಾಲಾಜಿ ಫೋಟೋ ಸ್ಟುಡಿಯೋಸ್ ಎಂಬ ಸಿನಿಮಾ ಬಂದಿತ್ತು. ಚಿತ್ರ ಬಾಕ್ಸಾಫೀಸಿನಲ್ಲಿ ಅದ್ಭುತ ಯಶಸ್ಸು ಕಾಣದೇ ಹೋದರೂ ಲಾಸ್ ಮಾಡಿರಲಿಲ್ಲ. ವಿಶೇಷವೆಂದರೆ ಸಿನಿಮಾ ಪ್ರೇಕ್ಷಕರು ಮತ್ತು ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಆ ಚಿತ್ರದಲ್ಲಿ ನಟಿಸಿದ್ದವರೇ ಸಂಪತ್ ಜಯರಾಂ. ಮಾತು, ಖದರು, ಲುಕ್ಕು, ಹೈಟು ಎಲ್ಲವನ್ನೂ ನೋಡಿದವರು ಕನ್ನಡಕ್ಕೆ ಭರವಸೆಯ ಮತ್ತೊಬ್ಬ ಖಳನಟ ಸಿಕ್ಕ ಎಂದುಕೊಂಡಿದ್ದರು.

    ಅಗ್ನಿಸಾಕ್ಷಿ ಧಾರಾವಾಹಿಯಲ್ಲೂ ನಟಿಸಿದ್ದ, ಧಾರಾವಾಹಿಯಿಂದಲೇ ಹೆಸರು ಮಾಡಿದ್ದ ಸಂಪತ್, ಇದ್ದಕ್ಕಿದ್ದಂತೆ ಆತ್ಮಹತ್ಯೆಗೆ  ಶರಣಾಗಿದ್ದಾರೆ. ಚಿತ್ರರಂಗದಲ್ಲಿ ಅವಕಾಶಗಳು ಸಿಗದಿರುವುದೇ ಆತ್ಮಹತ್ಯೆಗೆ ಕಾರಣ ಎನ್ನಲಾಗಿದೆ. ಖಚಿತ ಮಾಹಿತಿ ಇಲ್ಲ.

    ಪ.ಬಂಗಾಳದಲ್ಲಿ ಸುಮಾರು ವರ್ಷಗಳಿಂದ ನಟ, ನಟಿ, ಕಲಾವಿದರು, ಸಿನಿಮಾ, ಕಿರುತೆರೆಯವರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಸರಾಸರಿ ಲೆಕ್ಕ ಹಾಕಿದರೆ ಕನಿಷ್ಠ ತಿಂಗಳಿಗೊಂದು ಆತ್ಮಹತ್ಯೆ ವರದಿಯಾಗುತ್ತಿವೆ. ಆದರೆ ಕರ್ನಾಟಕದಲ್ಲಿ ಆ ಪರಿಸ್ಥಿತಿ ಇಲ್ಲ. ಆದರೆ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಏರುತ್ತಿರುವುದು ಆತಂಕದ ವಿಷಯ.

    ಸುಶೀಲ್ ಗೌಡ, ಜಯಶ್ರೀ ರಾಮಯ್ಯ, ಸೌಜನ್ಯ.. ಹೀಗೆ ಅಪರೂಪಕ್ಕೆ ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಈಗಲೇ ಎಚ್ಚೆತ್ತುಕೊಳ್ಳಬೇಕಿದೆ. ಪರಿಸ್ಥಿತಿ ಗಂಭೀರವಾಗುತ್ತಿರುವ ಸೂಚನೆ ಸಿಗುತ್ತಿವೆ.

  • ಮಗುವನ್ನೂ ಕೊಂದು ಆತ್ಮಹತ್ಯೆಗೆ ಶರಣಾದ ಚಂದನ್ ಪತ್ನಿ

    de[ressed wife kills son and attempts suicide

    ಅಚ್ಚಕನ್ನಡದಲ್ಲಿ ಆ್ಯಂಕರಿಂಗ್ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದ ನಿರೂಪಕ ಚಂದನ್, ಕಳೆದ ವಾರವಷ್ಟೇ ಅಪಘಾತದಲ್ಲಿ ಮೃತಪಟ್ಟಿದ್ದರು. ದಾವಣಗೆರೆಯ ಹರಿಹರದ ಬಳಿ ಅಪಘಾತಕ್ಕೀಡಾಗಿದ್ದ ಚಂದನ್, ತಮ್ಮ ಪತ್ನಿ ಮತ್ತು ಮಗುವನ್ನು  ಅಗಲಿದ್ದರು. ಈಗ ಎಂಥವರನ್ನೂ ಎದೆನಡುಗಿಸುವ, ಎದೆ ಝಲ್ ಎನ್ನಿಸುವ ಘಟನೆ ನಡೆದು ಹೋಗಿದೆ.

    ನಿರೂಪಕ ಚಂದನ್ ಅವರ ಪತ್ನಿ ಮೀನಾ ತಮ್ಮ 13 ವರ್ಷದ ಮಗ ತುಷಾರ್‍ನ ಕತ್ತು ಸೀಳಿ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೀನಾ ಅವರನ್ನು ಬದುಕಿಸಲು ವೈದ್ಯರು ಶತಪ್ರಯತ್ನ ನಡೆಸಿದರಾದರೂ, ಪ್ರಯತ್ನ ಫಲಿಸದೆ ಮೀನಾ ಕೊನೆಯುಸಿರೆಳೆದಿದ್ದಾರೆ. 

    ಪತಿಯ ಅಕಾಲಿಕ ಸಾವಿನ ಹಿನ್ನೆಲೆಯಲ್ಲಿ ಖಿನ್ನತೆಗೊಳಗಾಗಿದ್ದ ಚಂದನ್ ಅವರ ಪತ್ನಿ ಮೀನಾ, ಇನ್ನು ನಮಗ್ಯಾರು ಆಸರೆ ಎಂದು ಖಿನ್ನತೆಗೊಳಗಾಗಿದ್ದರಂತೆ. ಆದರೆ ಮಗನನ್ನೂ ಕೊಂದು ಆತ್ಮಹತ್ಯೆ ಮಾಡಿಕೊಂಡ ಮೀನಾ ಅವರ ನಡೆ ಶಾಕ್ ನೀಡಿರುವುದಂತೂ ನಿಜ.

    Related Articles :-

    ಅಚ್ಚಕನ್ನಡದ ನಿರೂಪಕ ಚಂದನ್ ಅಪಘಾತದಲ್ಲಿ ಸಾವು

  • ಸೀರಿಯಲ್ ನಟಿ ನಿಗೂಢ ಸಾವು : ಸಹನಟ ಅರೆಸ್ಟ್

    ಸೀರಿಯಲ್ ನಟಿ ನಿಗೂಢ ಸಾವು : ಸಹನಟ ಅರೆಸ್ಟ್

    ತುನಿಷಾ  ಶರ್ಮಾ. ಈ ಹೆಸರೀಗ ದೇಶದಾದ್ಯಂತ ಸುದ್ದಿಯಲ್ಲಿದೆ. ಸೋನಿ ಟಿವಿ ಶೋ ಭಾರತ್ ಕಾ ವೀರ್ ಪುತ್ರ - ಮಹಾರಾಣಾ ಪ್ರತಾಪ್ ಮೂಲಕ ನಟನೆಗೆ ಕಾಲಿಟ್ಟ ಬಾಲನಟಿ ತುನಿಶಾ ಶರ್ಮ. ಹಲವು ಹಿಂದಿ ಚಿತ್ರಗಳಲ್ಲಿ ಬಾಲನಟಿಯಾಗಿದ್ದ ತುನಿಶಾ ಶರ್ಮ, ಸೀರಿಯಲ್ ಹಾಗೂ ಟಿವಿ ಶೋಗಳಲ್ಲಿ ನಟಿಸುತ್ತಿದ್ದರು. ಇತ್ತೀಚೆಗೆ ಮುಂಬೈನಲ್ಲಿ ಶೂಟಿಂಗ್ ಸೆಟ್‍ನಲ್ಲಿರುವಾಗಲೇ ಟಾಯ್ಲೆಟ್ ರೂಮಿನಿಲ್ಲಿ ಸತ್ತು ಬಿದ್ದಿದ್ದರು. ತುನಿಶಾ ಪ್ರಕರಣ ಮೇಲ್ನೋಟಕ್ಕೆ ಆತ್ಮಹತ್ಯೆ ಎನ್ನಲಾಗಿದೆ. ಆದರೆ ಚಿತ್ರ ವಿಚಿತ್ರ ಶಂಕೆ ಮೂಡಿದ್ದು, ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯೊಂದಿಗೆ ಸಹನಟನಾಗಿ ನಟಿಸುತ್ತಿದ್ದ ಶೀಜಾನ್ ಮೊಹಮ್ಮದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಕೇಳಿ ಬಂದಿದೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸೈ ಅಲ್ಲಿ ಶೂಟಿಂಗ್ ವೇಳೆಯೇ ಶೌಚಾಲಯಕ್ಕೆ ತೆರಳಿದ ನಟಿ ತುನಿಷಾ ಶರ್ಮಾ ಶರ್ಮಾ ಅಲ್ಲೇ ಸಾವಿಗೆ ಶರಣಾಗಿದ್ದರು. ಈ ಕುರಿತು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಟ ಶೀಜಾನ್ ಮೊಹಮ್ಮದ್ ಖಾನ್ನನ್ನು ಬಂಧಿಸಿದ್ದಾರೆ. ನ್ಯಾಯಾಲಯ ಮೊಹಮ್ಮದ್ ಖಾನ್ನನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ. ಮತ್ತೊಬ್ಬ ಸಹ ನಟ ಪಾರ್ಥ್ ಜುಟ್ಶಿ ಅವರನ್ನು ಕೂಡ ಪೊಲೀಸರು  ವಿಚಾರಣೆಗೆ ಒಳಪಡಿಸಿದ್ದಾರೆ.

    ತುನಿಶಾ ಹಾಗೂ ಶೀಜಾನ್ ಮಧ್ಯೆ ರಿಲೇಷನ್ ಶಿಪ್ ಇತ್ತು. 15 ದಿನಗಳ ಹಿಂದೆ ಬ್ರೇಕಪ್ ಆಗಿತ್ತು. ಆದರೆ ತುನಿಶಾಗೆ ಬ್ರೇಕಪ್ ಇಷ್ಟವಿರಲಿಲ್ಲ. ಹೀಗಾಗಿಯೇ ಮಾನಸಿಕ ಒತ್ತಡಕ್ಕೊಳಗಾಗಿ ತುನಿಶಾ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವುದು ಆರೋಪ. ಮತ್ತೊಬ್ಬ ನಟ ಪಾರ್ಥ, ಈ ಘಟನೆ ನಡೆದಾಗ ಸೆಟ್ಟಿನಲ್ಲಿ ಇರಲಿಲ್ಲವಂತೆ. ಆದರೆ ತುನಿಶಾ ಮತ್ತು ಶೀಜಾನ್ ನಡುವಿನ ರಿಲೇಷನ್‍ಶಿಪ್ ಈತನಿಗೂ ಗೊತ್ತಿತ್ತು ಎನ್ನಲಾಗಿದೆ. ಆದರೆ ಅದು ಆಕೆಯ ಪರ್ಸನಲ್ ಎಂದು ಸುಮ್ಮನಿದ್ದೆ ಎಂದು ಪೊಲೀಸರ ಎದುರು ಹೇಳಿಕೆ ನೀಡಿದ್ದಾರೆಂಬ ಮಾಹಿತಿಯೂ ಇದೆ. ತುನಿಶಾಗೆ 20 ವರ್ಷ. ಟಾಯ್ಲೆಟ್ಟಿನಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಸೀರಿಯಲ್ ತಂಡ ಒಟ್ಟಾರೆ 14 ಜನರನ್ನು ವಿಚಾರಣೆಗೆ ಒಳಪಡಿಸಿದ್ದು, ಶೀಜಾನ್‍ನ್ನು ಮಾತ್ರ ಅರೆಸ್ಟ್ ಮಾಡಿದ್ದಾರೆ. ತುನಿಶಾ ತಾಯಿ ಕೂಡಾ ಶೀಜಾನ್ ವಿರುದ್ಧ ದೂರು ನೀಡಿದ್ದಾರೆ.

    ಪ್ರಕರಣದ ಬಗ್ಗೆ ರಾಜಕೀಯ ಹೇಳಿಕೆಗಳೂ ಹೊರಬಿದ್ದಿವೆ. ಈ ಘಟನೆ ಬಗ್ಗೆ ಲವ್ ಜಿಹಾದ್ ಆಂಗಲ್‍ನಲ್ಲೂ ತನಿಖೆಯಾಗಬೇಕು ಎಂದು ಮಹಾರಾಷ್ಟ್ರ ಬಿಜೆಪಿಯ ಕೆಲ ನಾಯಕರು ಹೇಳಿಕೆ ನೀಡಿದ್ದಾರೆ.