` padmavathi - chitraloka.com | Kannada Movie News, Reviews | Image

padmavathi

  • Junior Artiste Dies in a Mishap During Shooting

    padmavathi image

    A Junior artiste has died in a mishap during the shooting of the Kannada remake of Tamil hit 'VIP'. The untitled Kannada film is being produced by Rockline Venkatesh and directed by Nandakishore.

    The introduction scene of Manoranjan Ravichandran was being shot near an uncompleted building in Yelahanka. A junior artiste called Padmavathi went missing after the complete of the shoot and after a thorough search, Padmavathi was found dead. She is said to have fallen from upstairs accidentally.

    A case has been filed at the Rajanukunte Police Station and further investigation is on.

  • ಪದ್ಮಾವತಿ ವಿರುದ್ಧ ಬೆಂಗಳೂರಿನಲ್ಲೂ ಕಿಚ್ಚು

    protest in bangalore against padmavathi

    ಪದ್ಮಾವತಿ. ಸಂಜಯ್ ಲೀಲಾ ಬನ್ಸಾಲಿಯ ಸಿನಿಮಾ. ದೀಪಿಕಾ ಪಡುಕೋಣೆ ಪದ್ಮಾವತಿಯಾಗಿ ನಟಿಸಿರುವ ಚಿತ್ರ. ರಣ್​ವೀರ್ ಸಿಂಗ್ ಅಲ್ಲಾವುದ್ದೀನ್ ಖಿಲ್ಜಿಯಾಗಿ, ಶಾಹಿದ್ ಕಪೂರ್ ರಜಪೂತ ದೊರೆಯಾಗಿ ನಟಿಸಿರುವ ಸಿನಿಮಾ. ಚಿತ್ರದಲ್ಲಿ ಇತಿಹಾಸಕ್ಕೆ ಅಪಮಾನ ಮಾಡಲಾಗಿದೆ ಎಂಬುದು ಚಿತ್ರದ ವಿರುದ್ಧ ಇರುವ ದೂರು. ಸೆನ್ಸಾರ್ ಆಗಿರುವ ಚಿತ್ರದ ವಿಚಾರದಲ್ಲಿ ಮಧ್ಯಪ್ರವೇಶ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ, ದೇಶಾದ್ಯಂತ ಪ್ರತಿಭಟನೆ ಮೊಳಗುತ್ತಿದೆ.

    ಉತ್ತರ ಭಾರತದ ಹಲವು ರಾಜ್ಯಗಳಿಗಷ್ಟೇ ಸೀಮಿತವಾಗಿದ್ದ ರಜಪೂತರ ಪ್ರತಿಭಟನೆ, ಬೆಂಗಳೂರಿನಲ್ಲೂ ಕಿಚ್ಚು ಹೊತ್ತಿಸಿರುವುದು ವಿಶೇಷ.  ಚಿತ್ರ ಡಿಸೆಂಬರ್‌ 1 ರಂದು ಬಿಡುಗಡೆಯಾಗುತ್ತಿದ್ದು, ,ಚಿತ್ರದ ಬಿಡುಗಡೆ ವಿರೋಧಿಸಿ ಅದೇ ದಿನ ಭಾರತ್ ಬಂದ್​ಗೆ ಕರೆ ನೀಡಲಾಗಿದೆ. ಚಿತ್ರವೊಂದರ ವಿರುದ್ಧ ಭಾರತ್ ಬಂದ್​ಗೆ ಕರೆ ನೀಡಿರುವುದು ದೇಶದ ಇತಿಹಾಸದಲ್ಲಿ ಬಹುಶಃ ಇದೇ ಮೊದಲು. ಬಂದ್​ಗೆ ಕರೆ ನೀಡಿರುವುದು ರಜಪೂತ್‌ ಕರ್ನಿ ಸೇನೆ ಭಾರತ್‌.

    ಚಿತ್ರದ ಬಿಡುಗಡೆ ವಿರೋಧಿಸಿ,  ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ  ಬೃಹತ್‌ ಪ್ರತಿಭಟನಾ ಮೆರವಣಿಗೆ ಕೂಡಾ ನಡೆದಿದೆ. ರಜಪೂತ್‌ ಕರ್ನಿ ಸೇನೆಯ ನೂರಾರು ಸದಸ್ಯರು  ಚಿತ್ರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಪದ್ಮಾವತಿ ವಿರೋಧಿಗಳು ಶಿವಣ್ಣನ್ನೂ ಬಿಡಲಿಲ್ಲ..!

    shivarajkumar trolled by padmavathi haters

    ಶಿವರಾಜ್ ಕುಮಾರ್ ಇತ್ತೀಚೆಗೆ ಪದ್ಮಾವತಿ ಚಿತ್ರದ ಕುರಿತು ಹೇಳಿಕೆ ನೀಡಿದ್ದರು. ಸಂಜಯ್ ಲೀಲಾ ಬನ್ಸಾಲಿ ಒಬ್ಬ ಉತ್ತಮ ನಿರ್ದೇಶಕ. ಪದ್ಮಾವತಿ ಚಿತ್ರದ ಬಗ್ಗೆ ಬಿಡುಗಡೆಗೆ ಮುನ್ನವೇ ಮಾತನಾಡಬೇಡಿ. ಚಿತ್ರದಲ್ಲಿ ಏನಿದೆ..ಏನಿಲ್ಲ ಎಂದು ಮೊದಲು ನೋಡಿ. ಚಿತ್ರವನ್ನೇ ನೋಡದೆ, ಅದರಲ್ಲಿ ಏನಿದೆ ಎಂಬುದೂ ಗೊತ್ತಿಲ್ಲದೆ ಚಿತ್ರವನ್ನು ಟೀಕಿಸಬೇಡಿ ಎಂದಿದ್ದರು. ಆ ಮೂಲಕ ಬನ್ಸಾಲಿಗೆ ಬೆಂಬಲ ಘೋಷಿಸಿದ್ದರು.

    ಶಿವಣ್ಣನವರ ಈ ಹೇಳಿಕೆ, ಸಂಚಲನ ಸೃಷ್ಟಿಸಿದ್ದು ಸುಳ್ಳಲ್ಲ. ಇದಕ್ಕೂ  ಮೊದಲು ಕೆಲವರು ಬೆಂಬಲ ವ್ಯಕ್ತಪಡಿಸಿದ್ದು ನಿಜ. ಆದರೆ, ಸ್ಟಾರ್ ನಟರೊಬ್ಬರು ಬಹಿರಂಗವಾಗಿ ಹೇಳಿಕೆ ನೀಡುವ ಸಾಹಸ ಮಾಡಿರಲಿಲ್ಲ. ಶಿವಣ್ಣ ಇಂಥಾದ್ದೊಂದು ಹೇಳಿಕೆ ನೀಡಿದ್ದೇ ತಡ, ಪದ್ಮಾವತಿ ವಿರುದ್ಧ ಆ್ಯಕ್ಟಿವ್ ಆಗಿರುವವರು ಶಿವಣ್ಣ ವಿರುದ್ಧ ತಿರುಗಿಬಿದ್ದಿದ್ದಾರೆ.

    ನಿಮಗ್ಯಾಕೆ, ಊರ ಉಸಾಬರಿ..? ಎಂದು ಕೆಲವರು ಪ್ರಶ್ನಿಸಿದ್ದಾರೆ. ನಿಮ್ಮ ತಂದೆ ಮಯೂರ, ಶ್ರೀಕೃಷ್ಣದೇವರಾಯದಂತಹ ಸಿನಿಮಾ ಮಾಡಿ, ಹಿಂದೂ ಸಂಸ್ಕøತಿಯನ್ನು ಎತ್ತಿ ಹಿಡಿದು ಅಣ್ಣಾವ್ರಾದರು ಎಂಬುದನ್ನು ಮರೆಯಬೇಡಿ ಎಂದಿದ್ದಾರೆ.

    ಇನ್ನೂ ಕೆಲವರು ಶಿವರಾಜ್ ಕುಮಾರ್ ಬೆಂಬಲಕ್ಕೆ ಬಂದಿದ್ದಾರೆ. ಶಿವಣ್ಣ ಹೇಳಿರೋದ್ರಲ್ಲಿ ತಪ್ಪೇನಿಲ್ಲ. ಸಿನಿಮಾದಲ್ಲಿ ಏನಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ರಿಲೀಸ್‍ಗೆ ಮುಂಚೆ ಹೀಗ್ಯಾಕೆ ಕೂಗಾಡ್ತಾರೋ ಅರ್ಥವಾಗುತ್ತಿಲ್ಲ. ಶಿವರಾಜ್ ಕುಮಾರ್ ಈಸ್ ರೈಟ್ ಎಂದಿದ್ದಾರೆ.

    ಈ ಟ್ರೋಲ್‍ಗಳಿಗೆಲ್ಲ ಶಿವರಾಜ್ ಕುಮಾರ್ ಹೇಳಿರೋದು ಇಷ್ಟೆ. ಆ ಸಿನಿಮಾ ರಿಲೀಸ್ ಆಗುತ್ತೆ. ಆಗ, ಚಿತ್ರದಲ್ಲಿ ಇವರು ಹೇಳ್ತಿರೋ ರೀತಿ ಪದ್ಮಾವತಿಯನ್ನು ತಪ್ಪಾಗಿ ತೋರಿಸಿಲ್ಲ ಎಂದರೆ, ಆಗ ಏನು ಮಾಡ್ತಾರೆ..? ಇದು ಅವರು ಕೇಳುತ್ತಿರುವ ಪ್ರಶ್ನೆ. ನನ್ನ ವಿರುದ್ಧ ಟ್ರೋಲ್ ಮಾಡುವುದರಿಂದ ನನಗೇನೂ ಆಗೋದಿಲ್ಲ. ಒಬ್ಬ ಕಲಾವಿದನಾಗಿ ಇನ್ನೊಬ್ಬ ಕಲಾವಿದನಿಗೆ ಬೆಂಬಲ ನೀಡಿದ್ದೇನೆ. ನಾನು ಪ್ರಾಮಾಣಿಕವಾಗಿದ್ದೇನೆ ಎಂದಿದ್ದಾರೆ.

  • ಪದ್ಮಾವತಿಗೆ ಕರ್ನಾಟಕ ಕಾಂಗ್ರೆಸ್ ಸರ್ಕಾರ ಬೆಂಬಲ

    siddaramaiah supports pamavathi

    ಪದ್ಮಾವತಿ ಚಿತ್ರ ಈಗ ರಾಷ್ಟ್ರಾದ್ಯಂತ ಬಿಸಿ ಬಿಸಿ ಸುದ್ದಿ. ರಜಪೂತ ಸಂಘಟನೆಯವರಂತೂ ಬನ್ಸಾಲಿ, ದೀಪಿಕಾ ತಡೆಗೆ 10 ಕೋಟಿ ಬಹುಮಾನ ಘೋಷಿಸಿದ್ದಾರೆ. ಪಂಜಾಬ್‍ನಲ್ಲಂತೂ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷರೇ ಬೀದಿಗಿಳಿದು ಅಬ್ಬರಿಸಿದ್ದಾರೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಶಹಬ್ಬಾಸ್‍ಗಿರಿ ಸಿಕ್ಕಿದೆ. ಕೆಲವು ರಾಷ್ಟ್ರೀಯ ಸುದ್ದಿವಾಹಿನಿಗಳ ಸಂಪಾದಕರಿಗೆ ಚಿತ್ರದ ವಿಶೇಷ ಪ್ರದರ್ಶನವೂ ಆಗಿದೆ. ಅವರೂ ಕೂಡಾ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನೇ ಆಡಿದ್ದಾರೆ. ಚಿತ್ರವನ್ನು ವಿರೋಧಿಸುವ ರಜಪೂತರ ವಾದದಲ್ಲಿ ಅರ್ಥವೇ ಇಲ್ಲ ಎಂದಿದ್ದಾರೆ. ಎಲ್ಲಕ್ಕಿಂತ ಮಿಗಿಲಾಗಿ ಸುಪ್ರೀಂಕೋರ್ಟ್ ಕೂಡಾ ಯಾವುದೇ ನಿಷೇಧ ಹೇರುವ ಅಥವಾ ಚಿತ್ರವನ್ನು ಪ್ರಶ್ನಿಸುವ ಪ್ರಕ್ರಿಯೆಯಿಂದ ದೂರವೇ ಉಳಿದಿದೆ. ಅದು ನ್ಯಾಯಾಲಯದ ಕೆಲಸವಲ್ಲ ಎನ್ನುವ ಮೂಲಕ, ಅದು ತನ್ನ ಸಂದೇಶವನ್ನು ಸ್ಪಷ್ಟವಾಗಿ ಸಾರಿದೆ.

    ಸ್ಯಾಂಡಲ್‍ವುಡ್‍ನಲ್ಲಿಯೂ ಚಿತ್ರದ ಬಗ್ಗೆ, ಅದರಲ್ಲಿಯೂ ಕನ್ನಡತಿ ದೀಪಿಕಾ ಪಡುಕೋಣೆಯ ಬಗ್ಗೆ ಬೆಂಬಲ ವ್ಯಕ್ತವಾಗುತ್ತಿದೆ. ರಾಗಿಣಿ, ಶ್ರದ್ಧಾ ಶ್ರೀನಾಥ್, ಮಾನ್ವಿತಾ ಹರೀಶ್, ಪ್ರಿಯಾಮಣಿ, ಗಣೇಶ್, ಪ್ರಕಾಶ್ ರೈ ಮೊದಲಾದವರು ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ.

    ಸಚಿವರಾದ ಡಿ.ಕೆ. ಶಿವಕುಮಾರ್ ಬಹಿರಂಗವಾಗಿ ಟ್ವೀಟ್ ಮಾಡಿ ಬೆಂಬಲಿಸಿದ್ದರೆ, ಅದನ್ನು ರೀ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಕೂಡಾ ಚಿತ್ರತಂಡದ ಬೆಂಬಲಕ್ಕೆ ನಿಂತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಚಿತ್ರದ ಪ್ರದರ್ಶನಕ್ಕೆ ಅಡ್ಡಿ ಪಡಿಸಿದರೆ, ಕಾನೂನು ಭಂಗಕ್ಕೆ ಯತ್ನಿಸಿದರೆ ಗಂಭೀರ ಕ್ರಮ ತೆಗೆದುಕೊಳ್ಳುವುದಾಗಿ ಸುತ್ತೋಲೆಯನ್ನೇ ಹೊರಡಿಸಿದ್ದಾರೆ.

    ಚಿತ್ರ ರಿಲೀಸ್ ಆಗಲಿರುವುದು ಜನವರಿಯಲ್ಲಿ. ಅಷ್ಟು ಹೊತ್ತಿಗೆ ಇನ್ನೂ ಏನೇನಾಗಲಿದೆಯೋ.. ಏನೋ..

    Related Articles :-

    ಪದ್ಮಾವತಿಗೆ ಕರ್ನಾಟಕದಲ್ಲಿ ನಿಷೇಧ ಇಲ್ಲ

    ಪದ್ಮಾವತಿ ವಿರುದ್ಧ ಬೆಂಗಳೂರಿನಲ್ಲೂ ಕಿಚ್ಚು

  • ಪದ್ಮಾವತಿಗೆ ಕರ್ನಾಟಕದಲ್ಲಿ ನಿಷೇಧ ಇಲ್ಲ

    deepika padukone in padmavathi

    ಪದ್ಮಾವತಿ, ರಜಪೂತ ರಾಣಿಯ ಕುರಿತಾದ ಈ ಸಿನಿಮಾ ವಿರುದ್ಧ ರಜಪೂತ ಸಮುದಾಯ ರೊಚ್ಚಿಗೆದ್ದು ನಿಂತಿದೆ. ಚಿತ್ರದಲ್ಲಿ ಪದ್ಮಾವತಿ ಪಾತ್ರವನ್ನು ಅಶ್ಲೀಲವಾಗಿ ತೋರಿಸಲಾಗಿದೆ ಎನ್ನುವುದು ರಜಪೂತರ ದೂರು. ಇದೇ ವಿಷಯ ವಿಧಾನ ಮಂಡಲ ಅಧಿವೇಶನದಲ್ಲಿ ಪ್ರತಿಧ್ವನಿಸಿದೆ. ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್, ವಿಧಾನಪರಿಷತ್‍ನಲ್ಲಿ ವಿಷಯ ಪ್ರಸ್ತಾಪಿಸಿದ್ದಾರೆ.

    ಪದ್ಮಾವತಿ ರಜಪೂತ ವಂಶದ ರಾಣಿ. ವೀರ ಪರಂಪರ ಪ್ರತಿನಿಧಿಸುವ ಪದ್ಮಾವತಿ, ರಾಷ್ಟ್ರಭಕ್ತಿಯ ಸಂಕೇತ. ಆದರೆ, ಚಿತ್ರದಲ್ಲಿ ಆಕೆಯನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ. ಕೀಳುಮಟ್ಟದಲ್ಲಿ ಚಿತ್ರಿಸಿ ಕೋಟ್ಯಂತರ ಜನರ ಭಾವನೆಗೆ ಘಾಸಿ ಮಾಡಲಾಗಿದೆ ಎಂದರು ಲೆಹರ್ ಸಿಂಗ್. ರಾಜ್ಯದಲ್ಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡದಂತೆ ಸರ್ಕಾರಕ್ಕೆ ಮನವಿ ಮಾಡಿದರು.

    ಈ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಚಿತ್ರವನ್ನು ನಿಷೇಧಿಸುವ ಅಧಿಕಾರ ನಮಗಿಲ್ಲ. ಸೆನ್ಸಾರ್ ಮಂಡಳಿ ತೀರ್ಮಾನವೇ ಅಂತಿಮ. ಕಾನೂನು ಸುವ್ಯವಸ್ಥೆಗೆ ಭಂಗವಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

    Related Articles :-

    ಪದ್ಮಾವತಿ ವಿರುದ್ಧ ಬೆಂಗಳೂರಿನಲ್ಲೂ ಕಿಚ್ಚು