` chiranjeevi, - chitraloka.com | Kannada Movie News, Reviews | Image

chiranjeevi,

  • Five Languages; Five Super Stars; Five Posters

    five languages five super stars five posters

    The boxing poster of Sudeep starrer 'Phailwan' was released on Tuesday and within minutes of the release, the poster became talk of the town. The poster was not only released in Kannada, but five different languages and by different stars.

    The Telugu version of 'Phailwan' was released by Mega Star Chiranjeevi, Malayalm by Mohan Lal, Hindi by Sunil Shetty, Kannada by Sudeep and Tamil by Vijay Sethupathi. All the posters were released simultaneously and all the posters became instant hit.

    'Phailwan' is gearing up for an August 09th release and the team is busy with the post-production of the film. The film is produced by Swapna Krishna and written and directed by S Krishna. Karunakar is the cameraman, while Arjun Janya is the music director.

  • Is SayRaa Releasing In Kannada?

    is syeraa releasing in kannada

    There is news going around that SayRaa the big budget historical film being made in Telugu will be released in Kannada also. The film team released a first look which mentioned Kannada as one of the versions along with Telugu and Tamil.

    Even the Wikipedia entry for the film shows the film being released in Kannada along with other languages. The shooting for the film is taking place in Georgia and Kannada star Kichcha Sudeep is playing an important role in the film. There are actors from almost all industries in the film. Amitabh Bachchan is said to be playing a guest role as well. Tamil star Vijay Sethupati is also part of the film.

    In Georgia over 2,000 actors and technicians are shooting for the climax war scene of the film. SayRaa is Telugu superstar Chiranjeevi's 151st film and is produced by his son Ramcharan Teja. At 250 core it is one of the costliest films made in India. So there is every possibility of the film being released in Kannada also according to insiders.

     

  • RGV's Love-Hate Relationship with Mega Star Family

    Ram Gopal Verma image

    The latest episode in Ram Gopal Verma's love-hate relationship with Mega Star Chiranjeevi family started five days ago. After the release of the posters of Chiranjeevi's comeback film Khaidi No. 150 was released, RGV made some comments on Twitter. It was not complimentary as can be expected. With his usual wit and pun he made fun of it. 

    One comment said "Can I please have the name,number and address of the designer and  others around Mega Star who convinced him to put out a pose like this". Another said "Wowwww Madame Tussaud will throw half her museum out for this ..Want to touch feet of designer and director and who convinced mega star."

    This did not of course go well with Chiranjeevi's fans. Chiranjeevi's brother, actor and producer, Naga Babu also made comments against RGV. Never the one to let go of an opportunity, RGV gave right back. In a series of tweets this evening he addressed Naga Babu in Telugu and said he hopes someone shows him the tweets and that he apologizes if his earlier comments had hurt him and his family. He also asked Babu to convey his apologies to Chiranjeevi. 

    rgv_tweets3.jpg

    However these tweets were also mocking Babu. One hour later RGV announced that his Telugu tweets were "NOT" by a hacker. But he did this in his usual style which evoked laughs. Then he made direct comments on Babu saying "Naga Babu Saaaaar because u can't understand English please ask some educated friend to translate my tweets in telugu."

    In yet another series of comments RGV put Babu in his place comparing his career to his brother Chiranjeevi and promised more fireworks saying "Naga Babu Saar if u talk more I will tweet more and I know more than u can know more because more is more in u than more is more in me".

  • Sudeep Joins The Sets Of 'Syeraa Narasimha Reddy'

    sudeep joins the sets of syeraa narasimha reddy

    Actor Sudeep who is back from Serbia shooting for 'Kotigobba 3' has joined the sets of Chiranjeevi's 151st film 'Syeraa Narasimha Reddy'.

    This is Sudeep's first historical film and the actor is in full awe of Chiranjeevi. Sudeep has tweeted in this regard and is very happy to share the first shot with Chiranjeevi himself.

    'A good first day of 'Syeraa'. First shot was with the legend himself. Every time I meet such legends, I see the humility. The reason why they have travelled this distance. He was so excitingly showing the edit like a kid who's thrilled with this new toy. Wanting to discover more' tweeted Sudeep.

  • Telangana Government Gives Green Signal For Shooting

    telenagana government gives green signal for shooting

    The Telangana Government headed by Chief Minister K Chandrashekhar Rao has given permission to resume shooting and post-production activities in the state.

    Cinema activities in the state were stopped for the last three months due to lock-down. Many film personalities including Chiranjeevi and others met Chief Minister and requested the Government to allow post-production as well as shooting activities in the state.

    Likewise, the KCR government has given a nod to start shooting as well as post-production activities with immediate effect. The shooting and the post-production activities will resume soon with prior precautions,

    However, there is no permission for screening of the films and theaters will continue to be closed till further orders.

     

  • ಕನ್ನಡದಲ್ಲೇ ಬರುತ್ತಾ ಸೈರಾ..?

    is syera releasing in kannada

    ಸೈರಾ. ತೆಲುಗಿನ ಬಿಗ್ ಬಜೆಟ್ ಸಿನಿಮಾ. ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರನ ಕಥೆ. ಮೆಗಾಸ್ಟಾರ್ ಚಿರಂಜೀವಿ ಪ್ರಧಾನ ಪಾತ್ರದಲ್ಲಿರುವ ಚಿತ್ರದಲ್ಲಿ ಕಿಚ್ಚ ಸುದೀಪ್, ಅಮಿತಾಬ್ ಬಚ್ಚನ್ ಕೂಡಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ತೆಲುಗಿನಲ್ಲಷ್ಟೆ ಅಲ್ಲ, ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಮಾಡುತ್ತೇವೆ ಎಂದು ಚಿತ್ರತಂಡ ಹೇಳಿಕೊಂಡಿದೆ.

    ಈಗ... ಸೈರಾ ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿ, ಒಟ್ಟಿಗೇ ಕನ್ನಡದಲ್ಲಿ ರಿಲೀಸ್ ಮಾಡುತ್ತಾರೆ ಎಂಬ ಸುದ್ದಿ ಹೊರಬಿದ್ದಿದೆ. ಸೈರಾ ಚಿತ್ರದ ವಿಕಿಪೀಡಿಯಾ ಪೇಜ್‍ನಲ್ಲಿ ಕೂಡಾ, ಸೈರಾ ಕನ್ನಡದಲ್ಲೂ ರಿಲೀಸ್ ಆಗಲಿದೆ ಎಂಬ ಮಾಹಿತಿ ಇದೆ. ರಾಜ್ಯದಲ್ಲಿ ಡಬ್ಬಿಂಗ್ ಚಿತ್ರಗಳ ಮೇಲಿನ ನಿಷೇಧ ತೆರವಾಗಿದ್ದು, ಸೈರಾ ಚಿತ್ರ ಕನ್ನಡದಲ್ಲಿಯೇ ರಿಲೀಸ್ ಆಗಿ ಇತಿಹಾಸ ಸೃಷ್ಟಿಸುತ್ತಾ..? ಸದ್ಯಕ್ಕೆ ಇದು ಪ್ರಶ್ನೆ ಮತ್ತು ಕುತೂಹಲ ಮಾತ್ರ.

  • ಚಿರಂಜೀವಿ, ಅಮಿತಾಬ್ ಬಚ್ಚನ್ ಜೊತೆ ಕಿಚ್ಚ ಸುದೀಪ್

    amitab bacchan, sudeep, chiranjeevi image

    ಕಿಚ್ಚ ಸುದೀಪ್ ಸ್ಯಾಂಡಲ್​ವುಡ್​ನಿಂದ ಹಾರಿ, ಬಾಲಿವುಡ್​ನಲ್ಲಿ ಮಿನುಗಿ, ಟಾಲಿವುಡ್, ಕಾಲಿವುಡ್​ನಲ್ಲಿ ಮಿಂಚಿ ಈಗ ಹಾಲಿವುಡ್​ಗೂ ಹಾರುತ್ತಿದ್ಧಾರೆ. ಇದರ ನಡುವೆಯೇ ಇನ್ನೊಂದು ಗುಡ್​ನ್ಯೂಸ್ ತೆಲುಗಿನಿಂದ ಬರ್ತಾ ಇದೆ. ಇತ್ತಿಚೆಗಷ್ಟೇ 150ನೇ ಚಿತ್ರದಲ್ಲಿ ನಟಿಸಿದ್ದ ಚಿರಂಜೀವಿ, ಇನ್ನೊಂದು ಚಿತ್ರಕ್ಕೆ ಸಿದ್ಧರಾಗುತ್ತಿದ್ದಾರೆ. ಆ ಚಿತ್ರದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಕೂಡಾ ನಟಿಸಲಿದ್ದಾರೆ. ಕಿಕ್, ರೇಸುಗುರಂ ಖ್ಯಾತಿಯ ಸುರೇಂದ್ರ ರೆಡ್ಡಿ ನಿರ್ದೇಶಕರು.

    ಸ್ವಾತಂತ್ರ್ಯ ಯೋಧನ ಕುರಿತಾದ ಆ ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ಎ.ಆರ್.ರೆಹಮಾನ್. ಆ ಚಿತ್ರದ ಒಂದು ಪ್ರಮುಖ ಪಾತ್ರಕ್ಕೆ ಚಿತ್ರತಂಡ ಸುದೀಪ್ ಅವರನ್ನು ಸಂಪರ್ಕಿಸಿದೆಯಂತೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆ ಗೊತ್ತಿರುವ ವ್ಯಕ್ತಿಯ ಪಾತ್ರಕ್ಕೆ ಸುದೀಪ್ ಬೇಕು ಎಂದು ಚಿತ್ರತಂಡ ಡಿಮ್ಯಾಂಡ್ ಇಟ್ಟಿದೆ. ಆಫರ್ ಬಂದಿರುವುದು ನಿಜವಾದರೂ ಸುದೀಪ್ ಇನ್ನೂ ಅದನ್ ಕನ್​ಫರ್ಮ್ ಮಾಡಿಲ್ಲ. 

    ಅಂದಹಾಗೆ ಅಮಿತಾಬ್​ ಜೊತೆ ಈಗಾಗಲೇ ಸುದೀಪ್​ಗೆ ನಟಿಸಿದ ಅನುಭವವಿದೆ. ಹಿಂದಿಯ ರಣ್ ಚಿತ್ರದಲ್ಲಿ ನಟಿಸಿದ್ದ ಸುದೀಪ್ ಅಭಿನಯಕ್ಕೆ ಅಮಿತಾಬ್ ಮಾರುಹೋಗಿದ್ದರು. ಇನ್ನು ಸುದೀಪ್​ ಒಪ್ಪಿಕೊಂಡರೆ, ಅದು ಚಿರಂಜೀವಿ ಜೊತೆಗೆ ನಟಿಸುವ ಮೊದಲ ಚಿತ್ರವಾಗಲಿದೆ.

  • ಚಿರಂಜೀವಿ, ರಾಜಶೇಖರ್ ವೇದಿಕೆಯಲ್ಲೇ ಮಾತಿನ ಚಕಮಕಿ : ಕಾರಣ ಕನ್ನಡ ಕಲಾವಿದರ ಭವನ

    Tollywood Stars Clash Regarding Movie Artist Association Building

    ಮೆಗಾಸ್ಟಾರ್ ಚಿರಂಜೀವಿ, ತೆಲುಗು ಚಿತ್ರರಂಗದ ಸೂಪರ್ ಸ್ಟಾರ್. ರಾಜಶೇಖರ್ ಕೂಡಾ ತೆಲುಗು ಇಂಡಸ್ಟ್ರಿಯ ಸ್ಟಾರ್ ನಟ. ಇವರಿಬ್ಬರ ಮಧ್ಯೆ ಮಾ ವೇದಿಕೆಯಲ್ಲಿ ದೊಡ್ಡ ಗಲಾಟೆಯೇ ನಡೆದು ಹೋಗಿದೆ. ಮಾ ಎಂದರೆ, ಕರ್ನಾಟಕದಲ್ಲಿ ಕನ್ನಡ ಚಲನಚಿತ್ರ ಕಲಾವಿದರ ಸಂಘ ಇದೆಯಲ್ಲ.. ಹಾಗೆ. ತೆಲುಗು ಚಿತ್ರರಂಗದ ಕಲಾವಿದರ ಸಂಘಟನೆ. ಈ ಇಬ್ಬರು ಸ್ಟಾರ್ಗಳ ಗಲಾಟೆಗೆ ಕಾರಣವಾಗಿದ್ದು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಕಟ್ಟಡ ಎಂದರೆ ರಾಜ್ಕುಮಾರ್ ಭವನ ಎಂದರೆ ನಂಬಲೇಬೇಕು.

    ಆಗಿದ್ದು ಇಷ್ಟು, ಮಾ ಸಂಘಟನೆಯ ಡೈರಿ ಬಿಡುಗಡೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಚಿರಂಜೀವಿ, ಡಾ.ರಾಜ್ಕುಮಾರ್ ಭವನದ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಾವೂ ಕೂಡಾ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಕಟ್ಟಿರುವ ಕಟ್ಟಡದ ಮಾದರಿಯಲ್ಲಿ ಒಂದು ಭವ್ಯ ಕಟ್ಟಡ ಕಟ್ಟೋಣ. ಮಾ ಸಂಘದಲ್ಲಿನ ಸಣ್ಣ ಪುಟ್ಟ ಸಮಸ್ಯೆಗಳನ್ನು ಬದಿಗಿಟ್ಟು, ಕರ್ನಾಟಕ ಚಲನಚಿತ್ರ ಕಲಾವಿದರಂತೆ ಬೆಳೆಯೋಣ ಎಂದಿದ್ದಾರೆ.

    ಇಷ್ಟು ಹೊತ್ತಿಗೆ ಮಾ ಸಂಘಟನೆಯ ಉಪಾಧ್ಯಕ್ಷ ನಟ ಡಾ.ರಾಜಶೇಖರ್ ಬಂದು ಚಿರಂಜೀವಿ ಕೈಲಿದ್ದ ಮೈಕ್ ಕಿತ್ತುಕೊಂಡು ಸಂಘಟನೆಯಲ್ಲಿರುವ ಸಮಸ್ಯೆ, ತಮ್ಮ ವೈಯಕ್ತಿಕ ಸಮಸ್ಯೆ, ಕಲಾವಿದರ ನಡುವಿನ ವೈಮನಸ್ಯಗಳ ಬಗ್ಗೆಯೆಲ್ಲ ಮಾತನಾಡಲು ಶುರು ಮಾಡಿದ್ದಾರೆ. ಚಿರಂಜೀವಿ, ಕೃಷ್ಣಂ ರಾಜು, ಮೋಹನ್ ಬಾಬು, ಜಯಸುಧಾ ಸೇರಿದಂತೆ ಹಲವರು ರಾಜಶೇಖರ್ ಅವರನ್ನು ಸಮಾಧಾನಿಸಲು ಯತ್ನಿಸಿದರೂ, ರಾಜಶೇಖರ್ ಮಾತು ನಿಲ್ಲಿಸಿಲ್ಲ. ಟೀಕೆಗಳನ್ನೂ ನಿಲ್ಲಿಸಿಲ್ಲ. ಇದು ಚಿರಂಜೀವಿಯವರನ್ನು ಕೆರಳಿಸಿಬಿಟ್ಟಿದೆ.

    ಎಲ್ಲ ಮುಗಿದ ಮೇಲೆ ರಾಜಶೇಖರ್ ವರ್ತನೆ ಸರಿಯಿಲ್ಲ, ಅವರ ವಿರುದ್ಧ ಮಾ ಸಮಘಟನೆ ಕ್ರಮ ತೆಗೆದುಕೊಳ್ಳಲೇಬೇಕು ಎಂದು ಆಗ್ರಹಿಸಿದ್ದಾರೆ ಚಿರಂಜೀವಿ. ರಾಜಶೇಖರ್ ಅವರನ್ನು ಮಾ ಸಂಘಟನೆ ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಲಾಗಿದೆ. ಇದು ಟಾಲಿವುಡ್ ಸುದ್ದಿ. ಸದ್ಯಕ್ಕೆ ಟಾಲಿವುಡ್ ಈ ವಿಚಾರಕ್ಕೆ ಇಬ್ಭಾಗವಾಗಿದೆ.

  • ನ್ಯೂಮರಾಲಜಿ : ವಿ.ರವಿಚಂದ್ರನ್`ರಂತೆಯೇ ಹೆಸರು ಬದಲಿಸಿದ ಚಿರಂಜೀವಿ..!

    ನ್ಯೂಮರಾಲಜಿ : ವಿ.ರವಿಚಂದ್ರನ್`ರಂತೆಯೇ ಹೆಸರು ಬದಲಿಸಿದ ಚಿರಂಜೀವಿ..!

    ಇತ್ತೀಚೆಗೆ ಕನ್ನಡ ಸಿನಿಮಾ ಮತ್ತು ಪೋಸ್ಟರ್`ಗಳಲ್ಲಿ ರವಿಚಂದ್ರನ್ ಹೆಸರು ಬದಲಾಗಿರೋದನ್ನು ಗಮನಿಸಿಯೇ ಇರುತ್ತೀರಿ. ಮೊದಲೆಲ್ಲ ವಿ.ರವಿಚಂದ್ರನ್ ಎಂದಿರುತ್ತಿದ್ದ ಹೆಸರು ಈಗ ರವಿಚಂದ್ರ ವಿ ಎಂದು ಬದಲಾಗಿದೆ. ಸಂಖ್ಯಾಶಾಸ್ತ್ರಜ್ಞರೊಬ್ಬರ ಸಲಹೆ ಮೇರೆಗೆ ಬದಲಿಸಿದ್ದೇನೆ ಎಂದಿದ್ದರು ರವಿಚಂದ್ರನ್. ನಂಬಿಕೆ ಎನ್ನುವುದಕ್ಕಿಂತ ಹೆಚ್ಚಾಗಿ ಹಾಗೆ ಸಲಹೆ ನೀಡಿದ್ದ ವ್ಯಕ್ತಿ ಅಭಿಮಾನಿಯಾಗಿದ್ದರು ಹಾಗೂ ಪ್ರೀತಿಯ ಒತ್ತಾಯ ಮಾಡಿದ್ದರು. ಅದನ್ನು ರವಿಚಂದ್ರನ್ ಬಹಿರಂಗವಾಗಿ ಹೇಳಿಕೊಂಡಿದ್ದರು.

    ನಾನು ಹೆಸರು ಬದಲಿಸಿದರೂ ಜನರಂತೂ ಬದಲಾಗಲ್ಲ. ಅವರು ವಿ.ರವಿಚಂದ್ರನ್ ಎಂದೇ ಗುರುತಿಸ್ತಾರೆ ಎಂದೂ ಹೇಳಿದ್ದರು. ಈಗ ಅದೇ ಹಾದಿಯಲ್ಲಿದ್ದಾರೆ ತೆಲುಗು ಮೆಗಾಸ್ಟಾರ್ ಚಿರಂಜೀವಿ.

    ಇತ್ತೀಚೆಗೆ ಚಿರಂಜೀವಿಯವರ ಹೊಸ ಸಿನಿಮಾ ಗಾಡ್‍ಫಾದರ್ ಪೋಸ್ಟರ್ ಬಿಡುಗಡೆಯಾಗಿದೆ. ಆ ಪೋಸ್ಟರ್‍ನಲ್ಲಿ ಚಿರಂಜೀವಿ ಹೆಸರಲ್ಲಿ ಇಂಗ್ಲಿಷಿನಲ್ಲಿ ಇನ್ನೊಂದು ಇ ಸೇರಿಕೊಂಡಿದೆ. ಇದು ಸಂಖ್ಯಾಶಾಸ್ತ್ರಜ್ಞರ ಸಲಹೆ ಎನ್ನುತ್ತಿದೆ ಟಾಲಿವುಡ್. ಇತ್ತೀಚೆಗೆ ಚಿರಂಜೀವಿಯವರ ಆಚಾರ್ಯ ಚಿತ್ರದ ದಯನೀಯ ಸೋಲು ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಅಂದಹಾಗೆ ಗಾಡ್‍ಫಾದರ್ ಮಲಯಾಳಂನ ಲೂಸಿಫರ್ ಚಿತ್ರದ ರೀಮೇಕ್.

  • ಮುದ್ದು ರಶ್ಮಿಕಾಗೆ ಮೆಗಾಸ್ಟಾರ್ ಕ್ಲೀನ್‍ಬೌಲ್ಡ್

    telugu movie chalo audio launch

    ಕಿರಿಕ್ ಪಾರ್ಟಿಯ ರಶ್ಮಿಕಾ, ಕರುನಾಡ ಕ್ರಶ್ ಎಂದರೆ ಅತಿಶಯೋಕ್ತಿಯೇನಲ್ಲ. ಕರುನಾಡ ಕ್ರಶ್, ಸಿಂಪಲ್ಲಾಗಿ ರಕ್ಷಿತ್ ಶೆಟ್ಟಿಗೆ ಬೌಲ್ಡ್ ಆದರೂ, ರಶ್ಮಿಕಾಗೆ ಬೌಲ್ಡ್ ಆಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ರಶ್ಮಿಕಾ ಎಂಬ ಈ ಚೆಲುವೆಗೆ ಈಗ ಬೌಲ್ಡ್ ಆಗಿರುವುದು ಮೆಗಾಸ್ಟಾರ್ ಚಿರಂಜೀವಿ.

    ತೆಲುಗಿನಲ್ಲಿ ಚಲೋ ಚಿತ್ರದಲ್ಲಿ ನಟಿಸಿರುವ ರಶ್ಮಿಕಾ, ಆ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ಚಿತ್ರದ ಆಡಿಯೋ ಬಿಡುಗಡೆಗೆ ಅತಿಥಿಯಾಗಿ ಬಂದಿದ್ದವರು ಮೆಗಾಸ್ಟಾರ್ ಚಿರಂಜೀವಿ. ಅವರು ರಶ್ಮಿಕಾ ಬಗ್ಗೆ ಹೇಳಿದ್ದು ಇಷ್ಟು. 

    ``ರಶ್ಮಿಕಾ ಮಂದಣ್ಣ ಅವರಿಂದ ಈ ಚಿತ್ರಕ್ಕೆ ಗ್ಲಾಮರ್ ಹೆಚ್ಚಾಗಿದೆ. ಅವರು ತುಂಬಾ ಮುದ್ದಾಗಿದ್ದಾರೆ. ತೆಲುಗು ಚಿತ್ರರಂಗಕ್ಕೆ ರಶ್ಮಿಕಾ ಅವರಿಗೆ ಸ್ವಾಗತ. ಅಲ್ ದಿ ಬೆಸ್ಟ್''

    ರಶ್ಮಿಕಾ ಥ್ರಿಲ್ಲಾಗೋದ್ರಲ್ಲಿ ಸಂದೇಹವೇನಿಲ್ಲ. ಮೆಗಾಸ್ಟಾರ್ ಹೊಗಳುವುದು ಎಂದರೆ ಸುಮ್ಮನೆ ಮಾತಲ್ಲ.

  • ಮೆಗಾಸ್ಟಾರ್ 151ನೇ ಚಿತ್ರದಲ್ಲಿ ಕಿಚ್ಚ - ಸುದ್ದಿ ಪಕ್ಕಾ

    sudeep in syreera

    ಮೆಗಾಸ್ಟಾರ್ ಚಿರಂಜೀವಿ ಅಭಿನಯದ "ಉಯ್ಯಾಲವಾಡ ನರಸಿಂಹ ರೆಡ್ಡಿ' ಚಿತ್ರದಲ್ಲಿ ಸುದೀಪ್‌ ನಟಿಸುತ್ತಾರೆ ಎಂಬ ಸುದ್ದಿ ಕೇಳಿ ಬರ್ತಾನೇ ಇತ್ತು. ಡೇಟ್‌ ಕ್ಲಾಶ್‌ ಆಗಬಹುದು ಎಂಬ ಕಾರಣಕ್ಕೆ ಸುದೀಪ್‌ ನಟಿಸುವ ಬಗ್ಗೆ ಅನುಮಾನವೂ ಇತ್ತು. ಈಗ ಯಾವ ಸಂಶಯವೂ ಇಲ್ಲ. ಸುದ್ದಿ ಪಕ್ಕಾ ಆಗಿದೆ.

    ಆ ಚಿತ್ರದ ಹೆಸರು ಈಗ "ಉಯ್ಯಾಲವಾಡ ನರಸಿಂಹ ರೆಡ್ಡಿ ಅಲ್ಲ. ಸೈಯರಾ ನರಸಿಂಹ ರೆಡ್ಡಿ. ಚಿತ್ರವನ್ನು ಚಿರಂಜೀವಿ ಪುತ್ರ ರಾಮಚರಣ್‌ ತೇಜ ಅವರೇ ನಿರ್ಮಿಸುತ್ತಿದ್ದಾರೆ. ಸುರೇಂದ್ರ ರೆಡ್ಡಿ ನಿರ್ದೇಶಕ.  ಚಿರಂಜೀವಿ ಹುಟ್ಟುಹಬ್ಬ  ಮೆಗಾ ಬರ್ತ್ ಡೇ ಸ್ಪೆಷಲ್ ಆಗಿ ಚಿತ್ರದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. 

    ಸೈಯರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಬಾಲಿವುಡ್, ಟಾಲಿವುಡ್, ಸ್ಯಾಂಡಲ್​ವುಡ್, ಕಾಲಿವುಡ್​ನ ಕಲಾವಿದರ ದೊಡ್ಡ ದಂಡೇ ಇದೆ. ಚಿರಂಜೀವಿ ಜೊತೆಗೆ ಅಮಿತಾಭ್‌ ಬಚ್ಚನ್‌, ಸುದೀಪ್‌, ಜಗಪತಿ ಬಾಬು, ವಿಜಯ್‌ ಸೇತುಪತಿ, ನಾಸರ್‌, ರವಿ ಕಿಶನ್‌, ಸುಬ್ಬರಾಜು ಮುಂತಾದವರು ನಟಿಸಲಿದ್ದಾರೆ. ನಾಯಕಿಯಾಗಿ ನಯನತಾರಾ ಇರುತ್ತಾರೆ. ಎಷ್ಟೋ ವರ್ಷಗಳ ನಂತರ ಎ.ಆರ್‌. ರೆಹಮಾನ್‌ ತೆಲುಗು ಚಿತ್ರಕ್ಕೆ ಸಂಗೀತ ನೀಡುತ್ತಿರುವುದು ವಿಶೇಷ. 

    ಉಯ್ಯಾಲವಾಡ ನರಸಿಂಹ ರೆಡ್ಡಿ, ಆಂಧ್ರಪ್ರದೇಶಕ್ಕಷ್ಟೇ ಅಲ್ಲ, ಇಡೀ ಭಾರತಕ್ಕೇ ದೊಡ್ಡ ಹೆಸರು. 1857ರಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮ ಶುರುವಾಗುವ ಮುನ್ನವೇ ಬ್ರಿಟಿಷರ ವಿರುದ್ಧ ಬಂಡಾಯವೆದ್ದು ಮಣಿಸಿದ್ದ ಧೀರ. ಉಯ್ಯಾಲವಾಡ ನರಸಿಂಹ ರೆಡ್ಡಿಯನ್ನು ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ ಎಂದೇ ಗುರುತಿಸಲಾಗುತ್ತೆ. ಆತನನ್ನು 1847ರಲ್ಲಿ ಬ್ರಿಟಿಷರು ಗಲ್ಲಿಗೇರಿಸಿದ್ದರು. ಅಂಥಾದ್ದೊಂದು ಐತಿಹಾಸಿಕ ಚಿತ್ರದಲ್ಲಿ ಸುದೀಪ್ ನಟಿಸಲಿದ್ದಾರೆ. ಪಾತ್ರ ಯಾವುದು ಎನ್ನುವುದು ಇನ್ನೂ ಗೊತ್ತಾಗಿಲ್ಲ. 

     

  • ಯುವ ರಣಧೀರ ಕಂಠೀರವನಿಗೆ ಮೆಗಾಸ್ಟಾರ್ ಫಿದಾ

    Chiranjeevi Thrilled Over Yuva Ranadheera Kanteerva

    ನವೆಂಬರ್ 1ರಂದು ಯುವರಣಧೀರ ಕಂಠೀರವ ಚಿತ್ರದ ಟೀಸರ್ ರಿಲೀಸ್ ಆಯ್ತು. ಮೊದಲ ಚಿತ್ರದಲ್ಲೇ ಡಾ.ರಾಜ್ ಅವರಿಗೆ ಹೋಲಿಸಿಕೊಳ್ಳುವ ಭಾರ ಹೊತ್ತರೂ, ಆ ಭಾರವನ್ನು ಯಶಸ್ವಿಯಾಗಿಯೇ ನಿಭಾಯಿಸಿದರು ಯುವರಣಧೀರ ಕಂಠೀರವ ಯುವರಾಜ್ ಕುಮಾರ್. ಯುವ ಅವರ ಡೈಲಾಗ್ ಡೆಲಿವರಿ ಮತ್ತು ಆ್ಯಕ್ಷನ್ ಸೀಕ್ವೆನ್ಸ್‍ಗಳು ಅಭಿಮಾನಿಗಳಿಗೂ ಇಷ್ಟವಾಗಿತ್ತು. ಶಿವಣ್ಣ, ಪುನೀತ್ ಮತ್ತು ರಾಘವೇಂದ್ರ ರಾಜ್‍ಕುಮಾರ್.. ಅದೇನೇ ಮೆಚ್ಚಿಕೊಂಡರೂ ಮಗ ಅಲ್ವೇ.

    ಆದರೆ ಈಗ ಅಭಿಮಾನಿಗಳ ಜೊತೆ, ಚಿತ್ರರಂಗದ ದಿಗ್ಗಜರಲ್ಲೊಬ್ಬರಾದ ಮೆಗಾಸ್ಟಾರ್ ಚಿರಂಜೀವಿ ಚಿತ್ರದ ಟೀಸರ್‍ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವರಾಜ್ ಕುಮಾರ್ ಅವರ ತಯಾರಿ ಬೆರಗು ಹುಟ್ಟಿಸುತ್ತಿದೆ. ಡಾ.ರಾಜ್ ಅವರ ಮೊಮ್ಮಗ ಎಂಬ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಅದಕ್ಕೆ ತಕ್ಕಂತೆ ಸಿನಿಮಾ ಮಾಡಲು ಮುಂದಾಗಿದ್ದಾರೆ. 

  • ರಶ್ಮಿಕಾ ಮಂದಣ್ಣ ಅಲ್ಲ.. ರಶ್ಮಿಕಾ ಮಂಡೂಕ..!!

    chiranjeiivi takes rashmika's anme wrong

    ರಶ್ಮಿಕಾ ಮಂದಣ್ಣ, ಸದ್ಯಕ್ಕೆ ಸೌಥ್ ಇಂಡಿಯಾ ಕ್ರಶ್. ಇಂತಹ ರಶ್ಮಿಕಾ ಮಂದಣ್ಣ, ಈಗ ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ಸರಿಲೇರು ನೀಕೆವ್ವರು ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ಸಂಕ್ರಾಂತಿಗೆ ರಿಲೀಸ್. ಈಗಾಗಲೇ ಈ ಚಿತ್ರದ ಟ್ರೇಲರ್ ಮತ್ತು ಹಿ ಈಸ್ ಸ್ವೀಟ್ ಹಾಡಿನಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾರೆ ರಶ್ಮಿಕಾ. ಈ ರಶ್ಮಿಕಾ ಮಂದಣ್ಣ ಅವರನ್ನು ರಶ್ಮಿಕಾ ಮಂಡೂಕ ಎಂದು ಕರೆದವರು ಬೇರೆ ಯಾರೂ ಅಲ್ಲ, ಮೆಗಾಸ್ಟಾರ್ ಚಿರಂಜೀವಿ.

    ಸರಿಲೇರು ನೀಕೆವ್ವರು ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿರಂಜೀವಿ, ರಶ್ಮಿಕಾ ಮಂದಣ್ಣ ಅವರನ್ನು ಹಲವು ಬಾರಿ ರಶ್ಮಿಕಾ ಮಂಡೂಕ ಎಂದೇ ಉಚ್ಚರಿಸಿದ್ರು. ಅದು ತಪ್ಪು ಎನ್ನುವುದು ಕಾರ್ಯಕ್ರಮ ಮುಗಿದ ನಂತರವೂ ಅವರ ಗಮನಕ್ಕೆ ಬರಲಿಲ್ಲ.

    ಹಾಗಂತ ರಶ್ಮಿಕಾ ಮಂದಣ್ಣ, ಚಿರಂಜೀವಿಗೆ ಹೊಸಬರಲ್ಲ. ರಶ್ಮಿಕಾ ಅವರ ಚಲೋ, ಗೀತ ಗೋವಿಂದಂ ಚಿತ್ರದ ಆಡಿಯೋ ರಿಲೀಸ್ನಲ್ಲೂ ರಶ್ಮಿಕಾ ಮಂದಣ್ಣ ಪರಿಚಿತರು. ಗೀತ ಗೋವಿಂದಂ, ಚಿರಂಜೀವಿ ಕುಟುಂಬದ ಬ್ಯಾನರ್ ಸಿನಿಮಾ. ಇಷ್ಟಿದ್ದರೂ ಹೆಸರು ತಪ್ಪಿದ್ದೇಕೆ..? ಗೊತ್ತಿಲ್ಲ.

    ಅಂದಹಾಗೆ ಮಂಡೂಕ ಎಂದರೆ ಕಪ್ಪೆ ಎಂದರ್ಥ. ರಾವಣನ ಪತ್ನಿ ಮಂಡೋದರಿ ಗೊತ್ತಿರಲೇಬೇಕಲ್ಲ, ಮಂಡೋದರಿ ಎಂದರೆ ಕಪ್ಪೆಯ ಉದರದಿಂದ ಜನಿಸಿದವಳು ಎಂದರ್ಥ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ, ರಶ್ಮಿಕಾ ಮಂಡೂಕ ಆಗಿಬಿಟ್ಟಿದ್ದಾರೆ.

  • ಸಿನಿಮಾ ಎನ್ನುವುದು ಧರ್ಮವಾದರೆ ಅದಕ್ಕೆ ಪೀಠಾಧಿಪತಿ ರಾಜಮೌಳಿ : ಚಿರಂಜೀವಿ

    ಸಿನಿಮಾ ಎನ್ನುವುದು ಧರ್ಮವಾದರೆ ಅದಕ್ಕೆ ಪೀಠಾಧಿಪತಿ ರಾಜಮೌಳಿ : ಚಿರಂಜೀವಿ

    ಅವಮಾನಗಳು ಒಬ್ಬರನ್ನು ಹೇಗೆಲ್ಲ ಕಾಡ್ತವೆ ಅನ್ನೋದನ್ನ ಹೇಳಬೇಕಿಲ್ಲ. ಸ್ಟಾರ್‍ಗಳಾದರೂ.. ಹಣ, ಖ್ಯಾತಿ ಎಲ್ಲ ಬಂದರೂ.. ಅನುಭವಿಸಿದ ಅವಮಾನಗಳು ಕಾಡುತ್ತಲೇ ಇರುತ್ತವೆ. ತೆಲುಗು ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ತಮ್ಮ ಆಚಾರ್ಯ ಚಿತ್ರದ ಪ್ರೀ ರಿಲೀಸ್ ಈವೆಂಟ್‍ನಲ್ಲಿ ಅಂಥಾದ್ದೊಂದು ಅವಮಾನ ಅನುಭವಿಸಿದ ಕಥೆ ಹೇಳಿಕೊಂಡಿದ್ದಾರೆ.

    ಚಿರು ಹೇಳಿದ ಆ ಅವಮಾನದ ಕಥೆ : ನನಗೆ ರುದ್ರವೀಣಾ ಚಿತ್ರಕ್ಕೆ ನರ್ಗಿಸ್ ದತ್ ಚಿತ್ರ ಪ್ರಶಸ್ತಿ ಬಂದಿತ್ತು. ರಾಷ್ಟ್ರೀಯ ಪ್ರಶಸ್ತಿ. ತಮ್ಮ ನಾಗಬಾಬು ನಿರ್ಮಿಸಿದ್ದ ಚಿತ್ರವದು. ಖುಷಿಯಾಗಿಯೇ ದೆಹಲಿಗೆ ಹೋಗಿದ್ದೆ. ಅಲ್ಲಿ ಎಲ್ಲ ಕಡೆ ಕಲಾವಿದರ ಪೋಸ್ಟರ್ ಇಟ್ಟಿದ್ದರು. ಅಲ್ಲಿ ದಿಲೀಪ್ ಕುಮಾರ್, ರಾಜೇಶ್ ಖನ್ನಾ, ಅಮಿತಾಭ್ ಬಚ್ಚನ್ ಸೇರಿದಂತೆ ಎಲ್ಲ ಹಿಂದಿ ನಟರ ಪೋಸ್ಟರ್ ಇದ್ದವು. ಅವೆಲ್ಲವನ್ನೂ ನೋಡುತ್ತಾ ಖುಷಿಯಾಗಿಯೇ ಮುಂದೆ ಹೋದಾಗ ನಮ್ಮ ದಕ್ಷಿಣ ಭಾರತದ ಚಿತ್ರಗಳನ್ನು ನೋಡುವ ಕಾತುರವೂ ಇತ್ತು. ಆದರೆ..

    ಅಲ್ಲಿ ಇದ್ದದ್ದು ಎರಡೇ ಪೋಸ್ಟರ್. ಒಂದು ಎಂಜಿಆರ್ ಮತ್ತು ಜಯಲಲಿತಾ ನೃತ್ಯದ ಭಂಗಿಯಲ್ಲಿದ್ದ ಒಂದು ಪೋಸ್ಟರ್ ಮತ್ತು ಮತ್ತೊಂದು ಮಲಯಾಳಂನಲ್ಲಿ ಗಿನ್ನಿಸ್ ದಾಖಲೆ ಬರೆದಿರುವ ನಟ ಪ್ರೇಮ್ ನಜೀರ್ ಅವರ ಪೋಸ್ಟರ್. ಅಷ್ಟೇನಾ ಸೌಥ್ ಸಿನಿಮಾ ಎನ್ನಿಸಿತ್ತು. ಅಲ್ಲಿ ಕನ್ನಡ ಕಂಠೀರವ ಡಾ.ರಾಜಕುಮಾರ್, ವಿಷ್ಣುವರ್ಧನ್ ಫೋಟೋ ಇರಲಿಲ್ಲ. ನಮ್ಮ ಎನ್‍ಟಿಆರ್, ನಾಗೇಶ್ವರ ರಾವ್, ಶಿವಾಜಿ ಗಣೇಶನ್.. ಯಾರೊಬ್ಬರ ಫೋಟೋಗಳೂ ಇರಲಿಲ್ಲ. ನಂತರ ಚೆನ್ನೈಗೆ ಬಂದು ಪ್ರೆಸ್‍ಮೀಟ್ ಮಾಡಿ ಅದೆಲ್ಲವನ್ನೂ ಹೇಳಿದೆ. ಆದರೆ.. ಅದಕ್ಕೆ ಕನಿಷ್ಠ ಪ್ರತಿಕ್ರಿಯೆಯೂ ಯಾರಿಂದಲೂ ಬರಲಿಲ್ಲ.

    ರಾಜಮೌಳಿ ಗರ್ವದಿಂದ ತಲೆಯೆತ್ತುವಂತೆ ಮಾಡಿದ್ದಾರೆ : ಆ ಅವಮಾನದ ಕಥೆ ಹಾಗೆಯೇ ಇತ್ತು. ಅದಾದ ನಂತರ ಈಗ ಅವರೆಲ್ಲರನ್ನೂ ನಮ್ಮ ತೆಲುಗು ಚಿತ್ರರಂಗದತ್ತ ನೋಡುತ್ತಿದ್ದಾರೆ. ರಾಜಮೌಳಿ ಈಗ ದಕ್ಷಿಣ ಭಾರತದ ಸಿನಿಮಾ ರಂಗವನ್ನು ಗರ್ವದಿಂದ ತಲೆಯೆತ್ತುವಂತೆ ಮಾಡಿದ್ದಾರೆ. ಈಗ ನಾವು ನೋಡುತ್ತಿರೋದು ಇಂಡಿಯನ್ ಸಿನಿಮಾ. ಸಿನಿಮಾ ಎನ್ನುವುದು ಧರ್ಮ ಎನ್ನುವುದಾದರೆ ಆ ಧರ್ಮಕ್ಕೆ ಪೀಠಾಧಿಪತಿ ರಾಜಮೌಳಿ.

    ಅವರೆಲ್ಲರನ್ನೂ ಅಭಿನಂದಿಸಿದ ಚಿರು : ರಾಜಮೌಳಿ ಅಷ್ಟೇ ಅಲ್ಲ, ದಕ್ಷಿಣ ಭಾರತ ಚಿತ್ರರಂಗ ಪುಷ್ಪ ಮಾಡಿದೆ. ಕೆಜಿಎಫ್ ಮಾಡಿದೆ. ಸುಕುಮಾರ್, ಪ್ರಶಾಂತ್ ನೀಲ್, ಅಲ್ಲು ಅರ್ಜುನ್, ರಾಮ್ ಚರಣ್, ಪ್ರಭಾಸ್, ಯಶ್ ಎಲ್ಲರೂ ಈಗ ಪ್ಯಾನ್ ಇಂಡಿಯಾ ಸ್ಟಾರ್‍ಗಳೇ. ನಿಜವಾದ ಇಂಡಿಯನ್ ಸಿನಿಮಾಗಳಿವು.

  • ಸುದೀಪ್ ಜೊತೆ ಚಿರಂಜೀವಿ ಜೊತೆ ಜೊತೆಯಲಿ - ಕನ್ನಡದಲ್ಲೇ ಹೊಸ ಚಿತ್ರ

    sudeep, chiranjeevi

    ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ `ತೆಲುಗಿನ ಉಯ್ಯಾಲವಾಡ ನರಸಿಂಹರೆಡ್ಡಿ' ಜೀವನ ಕಥೆ ಸಿನಿಮಾ ಆಗುತ್ತಿದ್ದು, ಚಿರಂಜೀವಿ ನಟಿಸುತಗ್ತಿರುವ ವಿಷಯ ಹಳೆಯದು. ಆ ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಕೂಡಾ ನಟಿಸುತ್ತಿದ್ದಾರೆ. ಆ ದಿಗ್ಗಜರ ಜೊತೆ ಸುದೀಪ್ ಕೂಡಾ ಅತ್ಯಂತ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಅದಕ್ಕಿಂತಲೂ ಖುಷಿ ಪಡುವ ಸುದ್ದಿ ಇನ್ನೊಂದಿದೆ.

    ಚಿರಂಜೀವಿ ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದ್ದಾರೆ. ಹೀರೋ ಆಗಿ. ಕಿಚ್ಚ ಸುದೀಪ್ ಮತ್ತು ಚಿರಂಜೀವಿ ಒಟ್ಟಿಗೇ ಹೀರೊಗಳಾಗಿ ಕನ್ನಡದಲ್ಲಿ ನಟಿಸಲಿದ್ದಾರೆ. ಆ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ನಿರ್ಮಾಣವಾಗಲಿದೆ.

    ಚಿರಂಜೀವಿಗೆ ಕನ್ನಡ ಹೊಸದಲ್ಲ. ಪಕ್ಕದ ಊರು ನನ್ನೂರು..ಇಲ್ಲಿನ ಜನರು ನನ್ನೋರು ಎಂದು ಸಿಪಾಯಿ ಚಿತ್ರದಲ್ಲಿ ಹಾಡಿ ಹೋಗಿದ್ದರು ಚಿರಂಜೀವಿ. ಅದಾದ ಮೇಲೆ ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ನಿರ್ಮಾಣವಾದ ಶ್ರೀ ಮಂಜುನಾಥ ಚಿತ್ರದಲ್ಲಿ ಈಶ್ವರನಾಗಿ ಕಾಣಿಸಿಕೊಂಡಿದ್ದರು. ಎರಡೂ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಷ್ಟೇ ಕಾಣಿಸಿಕೊಂಡಿದ್ದ ಚಿರಂಜೀವಿ, ಸುದೀಪ್ ಜೊತೆ ಹೀರೋ ಆಗಿಯೇ ಕಾಣಿಸಿಕೊಳ್ಳಲಿದ್ದಾರಂತೆ.

    Related Articles :-

    ಚಿರಂಜೀವಿ, ಅಮಿತಾಬ್ ಬಚ್ಚನ್ ಜೊತೆ ಕಿಚ್ಚ ಸುದೀಪ್

  • ಸೈರಾ ಹಬ್ಬಕ್ಕೆ ಸಿದ್ಧನಾದ ಪೈಲ್ವಾನ

    kiccha all set for sye ra festival

    ಒಂದೆಡೆ ಪೈಲ್ವಾನ್ ಸಿನಿಮಾ ಥಿಯೇಟರುಗಳಲ್ಲಿ ಬೊಂಬಾಟ್ ಪ್ರದರ್ಶನ ಕಾಣುತ್ತಿರುವಾಗಲೇ, ಕಿಚ್ಚ ಸುದೀಪ್ ಗಾಂಧಿ ಜಯಂತಿಗೆ ಇನ್ನೊಂದು ಹಬ್ಬಕ್ಕೆ ಸಿದ್ಧರಾಗುತ್ತಿದ್ದಾರೆ. ಅದು ಸೈರಾ ಹಬ್ಬ.

    ಅಕ್ಟೋಬರ್ 02ರಂದು, ಗಾಂಧಿ ಜಯಂತಿಗೆ ರಿಲೀಸ್ ಆಗುತ್ತಿದೆ ಸೈರಾ ನರಸಿಂಹ ರೆಡ್ಡಿ ಸಿನಿಮಾ. ಅದು ಆಂಧ್ರಪ್ರದೇಶದ ಸ್ವಾತಂತ್ರ್ಯ ಹೋರಾಟಗಾರ ಸೈರಾ ನರಸಿಂಹ ರೆಡ್ಡಿಯ ಚರಿತ್ರೆ. ಮೆಗಾಸ್ಟಾರ್ ಚಿರಂಜೀವಿ ಸೈರಾ ನರಸಿಂಹ ರೆಡ್ಡಿಯಾಗಿ ಕಂಗೊಳಿಸಿದ್ದಾರೆ.

    ಚಿತ್ರದ ಟ್ರೇಲರ್ ಹೊರಬಿದ್ದಿದೆ. ಕಿಚ್ಚ ಸುದೀಪ್ ಚಿತ್ರದಲ್ಲಿ ಅವುಕ ರಾಜು ಹೆಸರಿನ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿರಂಜೀವಿ ಜೊತೆ ಅಮಿತಾಬ್ ಬಚ್ಚನ್, ವಿಜಯ್ ಸೇತುಪತಿ, ಜಗಪತಿ ಬಾಬು, ಅನುಷ್ಕಾ ಶೆಟ್ಟಿ, ನಯನತಾರಾ, ತಮನ್ನಾ.. ಹೀಗೆ ಘಟಾನುಘಟಿಗಳೇ ನಟಿಸಿರುವ ಸಿನಿಮಾ ಇದು. ತೆಲುಗಿನಲ್ಲಿ ತಯಾರಾಗಿರುವ ಚಿತ್ರ, ಕನ್ನಡದಲ್ಲೂ ಡಬ್ ಆಗಿ ಬರುತ್ತಿದೆ.

  • ಸೈರಾಗೆ ಸುದೀಪ್ ಸೈ ಎಂದಿದ್ದಕ್ಕೆ ಕಾರಣ ಆ ನಿರ್ದೇಶಕ..!

    sudeep agress for saira

    ಸುದೀಪ್, ತೆಲುಗಿನ ಉಯ್ಯಾಲವಾಡ ನರಸಿಂಹ ರೆಡ್ಡಿ ಅವರ ಜೀವನಾಧಾರಿತ ಚಿತ್ರ ಸೈರಾದಲ್ಲಿ ನಟಿಸುತ್ತಾರಾ..? ಮೆಗಾಸ್ಟಾರ್ ಚಿರಂಜೀವಿ ಅಭಿನಯದ 151ನೇ ಸಿನಿಮಾ ಆಗಿರುವ ಈ ಚಿತ್ರವನ್ನು ಸುದೀಪ್ ಕೈಬಿಟ್ಟರಂತೆ ಎಂಬ ಸುದ್ದಿಗಳೇ ಹರಿದಾಡುತ್ತಿದ್ದವು. ಈಗ ಅದಕ್ಕೆ ವ್ಯತಿರಿಕ್ತ ಎನ್ನುವಂತೆ ಸುದೀಪ್ ಸೈರಾ ಚಿತ್ರವನ್ನು ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ. ಇಷ್ಟಕ್ಕೂ ಸುದೀಪ್ ಅವರನ್ನು ಸೈರಾ ಚಿತ್ರಕ್ಕೆ ಒಪ್ಪಿಸಿರುವುದು ನಿರ್ದೇಶಕ ಸುರೀಂದರ್ ರೆಡ್ಡಿ.

    ಉಯ್ಯಾಲವಾಡ ನರಸಿಂಹ ರೆಡ್ಡಿ, ತೆಲುಗು ನೆಲದ ಸ್ವಾತಂತ್ರ್ಯ ಹೋರಾಟಗಾರನಲ್ಲ. ಆತ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟಗಾರ. ಹಲವು ವರ್ಷಗಳ ಹಿಂದೆ, ಕೇಂದ್ರ ಸರ್ಕಾರವೇ ಘೋಷಣೆ ಮಾಡಿದೆ. ಹೀಗಾಗಿ ಇದು ನ್ಯಾಷನಲ್ ಲೀಡರ್ ಸಿನಿಮಾ. ಹೀಗಾಗಿಯೇ ಬೇರೆ ಬೇರೆ ಭಾಷೆಗಳಿಂದ ಅತ್ಯುತ್ತಮ ನಟರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಹಿಂದಿಯಿಂದ ಅಮಿತಾಭ್ ಬರುತ್ತಿದ್ದಾರೆ. ಕನ್ನಡದಿಂದ  ನೀವು ಬರಲೇಬೇಕು. ಈ ಚಿತ್ರ ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಬೇಕು. ಪ್ರತಿಯೊಬ್ಬರಿಗೂ ಉಯ್ಯಾಲವಾಡ ನರಸಿಂಹ ರೆಡ್ಡಿಯ ಹೋರಾಟದ ಪರಿಚಯವಾಗಬೇಕು. ಹೀಗಾಗಿ ನೀವು ಒಪ್ಪಿಕೊಳ್ಳಲೇಬೇಕು ಎಂದು ಹಠ ಹಿಡಿದಿದ್ದಾರೆ ನಿರ್ದೇಶಕ ಸುರೀಂದರ್ ರೆಡ್ಡಿ.

    ನಿರ್ದೇಶಕರ ಒತ್ತಾಯಕ್ಕೆ ಮಣಿದ ಸುದೀಪ್, ಕೊನೆಗೂ ಸೈರಾಗೆ ಓಕೆ ಎಂದಿದ್ದಾರೆ. ಸದ್ಯಕ್ಕೆ ಸುದೀಪ್ ಎಷ್ಟೊಂದು ಬ್ಯುಸಿಯೆಂದರೆ, ಸದ್ಯಕ್ಕೆ ದಿ ವಿಲನ್ ಬಿಡುವಿಲ್ಲದಂತೆ ಶೂಟ್ ಆಗುತ್ತಿದೆ. ಜನವರಿ ಆರಂಭದಲ್ಲಿ ಪೈಲ್ವಾನ್ ಚಿತ್ರ ಶುರುವಾಗಬೇಕು. ಅದರ ಮಧ್ಯೆ ಕೋಟಿಗೊಬ್ಬ 3 ಶೂಟಿಂಗ್ ಕೂಡಾ ನಡೆಯಬೇಕು. ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರಕ್ಕೂ ಟೈಂ ಹೊಂದಿಸಿಕೊಳ್ಳಬೇಕು. ಹಾಲಿವುಡ್‍ನ ರೈಸನ್ ಚಿತ್ರ ಕೂಡಾ ಕ್ಯೂನಲ್ಲಿರುತ್ತೆ. 

    ಇವೆಲ್ಲದರ ಮಧ್ಯೆ ಸೈರಾಗೆ ಡೇಟ್ಸ್ ಹೊಂದಿಸಿಕೊಳ್ಳಬೇಕಿದೆ ಕಿಚ್ಚ ಸುದೀಪ್.

    ಅಂದಹಾಗೆ, ನಮ್ಮಲ್ಲಿ ಸಂಗೊಳ್ಳಿ ರಾಯಣ್ಣ ಹೇಗೋ, ಹಾಗೆಯೇ ಆಂಧ್ರಪ್ರದೇಶದಲ್ಲಿ ಉಯ್ಯಾಲವಾಡ ನರಸಿಂಹ ರೆಡ್ಡಿ. ಆತನ ಹೋರಾಟದ ಬಗ್ಗೆ ದಂತಕತೆಗಳೇ ಇವೆ. ಆತನನ್ನು ತೆಲುಗರು ಸೈರಾ ಎಂದೇ ಕರೆಯುತ್ತಾರೆ. ಆ ಪಾತ್ರ ನಿರ್ವಹಿಸುತ್ತಿರುವುದು  ಚಿರಂಜೀವಿ. ಸುದೀಪ್ ಪಾತ್ರ ಏನು ಎಂಬ ಕುತೂಹಲ ಇನ್ನೂ ಚಾಲ್ತಿಯಲ್ಲಿದೆ. 

  • ಸೋಮವಾರದಿಂದ ಮೈಸೂರು ಪ್ಯಾಲೇಸ್‍ನಲ್ಲಿ ಮೆಗಾಸ್ಟಾರ್ 

    syera reddy shooting in mysore palace

    ತೆಲುಗು ಚಿತ್ರರಂಗದ ಅದ್ಧೂರಿ ಚಿತ್ರ, ಸ್ವಾತಂತ್ರ್ಯ ಹೋರಾಟಗಾರನ ಕಥೆ ಹೊಂದಿರುವ ಸೈರಾ ಚಿತ್ರತಂಡ ಸೋಮವಾರದಿಂದ ಮೈಸೂರಿನಲ್ಲಿ ಬೀಡು ಬಿಡಲಿದೆ. ಮೈಸೂರು ಅರಮನೆಯಲ್ಲಿ ಚಿತ್ರದ ಶೂಟಿಂಗ್ ನಡೆಯಲಿದ್ದು, ಸುಮಾರು 25 ದಿನ ಇಡೀ ಚಿತ್ರತಂಡ ಮೈಸೂರಿನಲ್ಲಿ ಶೂಟಿಂಗ್ ನಡೆಸಲಿದೆ.

    ಮೆಗಾಸ್ಟಾರ್ ಚಿರಂಜೀವಿ ಜೊತೆ, ಕಿಚ್ಚ ಸುದೀಪ್ ಕೂಡಾ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ವಿಜಯ್ ಸೇತುಪತಿ, ಅಮಿತಾಬ್ ಬಚ್ಚನ್ ಕೂಡಾ ಚಿತ್ರದಲ್ಲಿದ್ದಾರೆ.