` raju kannada medium, - chitraloka.com | Kannada Movie News, Reviews | Image

raju kannada medium,

  • Raju Rangitaranga Renamed As Raju Kannada Medium

    actor gurunandan image

    Actor Gurunandan's new film which was earlier titled as 'Raju Rangitaranga' has been renamed as 'Raju Kannada Medium'. The film is being written and directed by Naresh Kumar who had earlier directed 'Ist Rank Raju'.

    The team of the film has been continued here also. Avantika Shetty is the heroine for Gurunandan. The film is being produced by K A Suresh under Suresh Arts. The shooting for the film has been completed.

  • Russian Model To In Raju Kannada Medium

    angelina image

    Gurunandan's new film 'Raju Kannada Medium' is almost nearing completion. The film is in the last leg of shooting and the team has roped in a Russian model to play a prominent role in the film.

    Yes, 'Raju Kannada Medium' will now feature a Russian model called Angelina. Angelina will be playing a prominent role in the film and the shooting of her portion will be held soon. The scenes will be shot abroad and with that portion, the shooting for the will be completed.

    The film is being written and directed by Naresh Kumar who had earlier directed 'Ist Rank Raju'. Avantika Shetty is the heroine for Gurunandan. The film is being produced by K A Suresh under Suresh Arts.

  • Sudeep Vs Sudeep on October 27

    sudeep vs sudeep

    It will be a sort of Sudeep Vs Sudeep on October 27. Tiger Galli starring Ninasam Sathish is one of the films Sudeep is promoting personally. He has participated in a programme along with Sathish a few days ago for this film.

    Now another film; Raju Kannada Medium in which Sudeep plays a guest role has also been announced to be releasing on October 27. In a way, it is Sudeep Vs Sudeep this month-end. Sudeep is seen in the posters of Raju Kannada Medium though it is Gurunandan who is playing the lead role. Sudeep participated in the shooting at a golf resort two months ago.

    Interestingly, Sudeep will be seen on television hosting the fifth season of Bigg Boss Kannada from this month.So it will be Sudeep on the big screen as well as small screen too. 

  • ಅ.27ಕ್ಕೆ ಸುದೀಪ್ V/S ಸುದೀಪ್

    sudeep, sathish ninasam

    ಗಾಂಧಿನಗರದಲ್ಲಿ ಒಬ್ಬ ಸ್ಟಾರ್ ನಟರ ಚಿತ್ರದ ಎದುರು ಮತ್ತೊಬ್ಬ ಸ್ಟಾರ್ ನಟರ ಚಿತ್ರ ರಿಲೀಸ್ ಆಗಲ್ಲ. ಕೆಲವು ವರ್ಷಗಳ ಹಿಂದೆ ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿದ್ದವಾದರೂ, ನಟರೇ ಈ ಬಗ್ಗೆ ಎಚ್ಚೆತ್ತುಕೊಂಡರು. ಒಂದರ ಹಿಂದೊಂದು ಸಿನಿಮಾಗಳು ರಿಲೀಸ್ ಆದರೂ, ಗ್ಯಾಪ್ ಇರುವಂತೆ ನೋಡಿಕೊಳ್ತಾರೆ. ಆದರೆ, ಈ ವಿಷಯ ಹಾಗಲ್ಲ. ಇಲ್ಲಿ ಸುದೀಪ್ ವ/ಸ ಸುದೀಪ್ ಸಮರ ಶುರುವಾಗಿದೆ.

    ಅಕ್ಟೋಬರ್ 27ರಂದು ರಾಜು ಕನ್ನಡ ಮೀಡಿಯಂ ಚಿತ್ರ ರಿಲೀಸ್ ಆಗುತ್ತಿದೆ. ಆ ಚಿತ್ರದಲ್ಲಿ ಸುದೀಪ್ ನಾಯಕರೇನಲ್ಲ. ಅತಿಥಿ ನಟ. ಇನ್ನು ಅದೇ ದಿನ ಟೈಗರ್ ಗಲ್ಲಿ ಕೂಡಾ ರಿಲೀಸ್ ಆಗುತ್ತಿದೆ. ಈ ಚಿತ್ರದ ಹೀರೋ ನೀನಾಸಂ ಸತೀಶ್. ಟೈಗರ್ ಗಲ್ಲಿ ಚಿತ್ರದ ಬಗ್ಗೆ ಸ್ವತಃ ಸುದೀಪ್ ವೈಯಕ್ತಿಕ ಆಸಕ್ತಿ ತೋರಿಸಿದ್ದಾರೆ. ಚಿತ್ರ ಚೆನ್ನಾಗಿದೆ ಎಂದು ಪ್ರಮೋಟ್ ಮಾಡುತ್ತಿದ್ದಾರೆ. ಹೀಗಾಗಿ ಸುದೀಪ್ ಅವರ ಪ್ರೀತಿಯ ಎರಡು ಚಿತ್ರಗಳು ಒಂದೇ ದಿನ ತೆರೆಕಾಣುತ್ತಿವೆ. 

    ಇನ್ನೂ ಒಂದು ವಿಚಾರ ಇದೆ. ಇದೇ ಅಕ್ಟೊಬರ್‍ನಲ್ಲಿ ಬಿಗ್‍ಬಾಸ್ ಶುರುವಾಗುತ್ತಿದೆ. ಕಿರುತೆರೆಯಲ್ಲಿ ಸುದೀಪ್ ಅವರೇ ಇರ್ತಾರೆ. ವಾರ್ ಇಷ್ಟಕ್ಕೇ ಮುಗಿಯಲ್ಲ.

    Related Articles :-

    Sudeep Vs Sudeep on October 27

  • ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಮನವಿ

    sudeep requests fans to watch raju kannada medium

    ರಾಜು ಕನ್ನಡ ಮೀಡಿಯಂ ಚಿತ್ರತಂಡಕ್ಕೆ ಶುಭವಾಗಲಿ. ಅವರು ಗೆಲುವಿಗೆ ಅರ್ಹರು. ಅಭಿಮಾನಿಗಳೇ, ನಿಮ್ಮಲ್ಲಿ ನನ್ನ ಮನವಿ ಇಷ್ಟೆ. ರಾಜು ಕನ್ನಡ ಮೀಡಿಯಂ ಚಿತ್ರವನ್ನು ಪ್ರತಿಯೊಬ್ಬರೂ ಚಿತ್ರಮಂದಿರಗಳಲ್ಲಿ ನೋಡಿ. ಕನ್ನಡ ಚಿತ್ರವನ್ನು ಪ್ರೋತ್ಸಾಹಿಸಿ.

    ಇದು ತಮ್ಮ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಮಾಡಿರುವ ಮನವಿ. ಅಷ್ಟೇ ಅಲ್ಲ, ರಾಜು ಕನ್ನಡ ಮೀಡಿಯಂ ಚಿತ್ರವನ್ನು ಬೆಂಬಲಿಸಿದ ಚಿತ್ರಲೋಕ ವೀರೇಶ್ ಅವರಿಗೂ ಸುದೀಪ್ ಧನ್ಯವಾದ ಹೇಳಿದ್ದಾರೆ. ಅಂದಹಾಗೆ ಸುದೀಪ್‍ಗೆ ರಾಜು ಕನ್ನಡ ಮೀಡಿಯಂ ಚಿತ್ರತಂಡದ ತಂತ್ರಜ್ಞರು ಹಾಗೂ ನಿರ್ಮಾಪಕರ ಚಿತ್ರದ ಮೇಲಿನ ಪ್ರೀತಿ ಇಷ್ಟವಾಗಿದೆ. ಸಿನಿಮಾ ಬಗ್ಗೆ ಇಷ್ಟೊಂದು ಪ್ಯಾಷನ್ ಇರುವವರು ಸೋಲಬಾರದು ಅನ್ನೋದು ಸುದೀಪ್ ಮನದಾಸೆ.

    ಥ್ಯಾಂಕ್ಯೂ ಸುದೀಪ್.

  • ಆವಂತಿಕಾ ಶೆಟ್ಟಿಯ ಲಾಡು, ದ್ರಾಕ್ಷಿ, ಗೋಡಂಬಿ ಸ್ಟೋರಿ

    avantika shetty image

    ‘ರಾಜು ಕನ್ನಡ ಮೀಡಿಯಂ’ ಚಿತ್ರದ ವಿವಾದ ಒಂದು ಕಡೆ ಫಿಲ್ಮ್ ಚೇಂಬರ್​ ಮತ್ತೊಂದು ಕಡೆ ಕೋರ್ಟ್​ನಲ್ಲಿ ಸದ್ದು ಮಾಡುತ್ತಿದೆ. ನಟಿ ಆವಂತಿಕಾ ಶೆಟ್ಟಿ ಮತ್ತು ನಿರ್ಮಾಪಕರ ಸುರೇಶ್ ಇಬ್ಬರೂ ಎರಡೂ ಕಡೆ ನ್ಯಾಯ ಕೇಳುತ್ತಿದ್ದಾರೆ. 

    ನಟಿ ಆವಂತಿಕಾ ಶೆಟ್ಟಿ ವಿರುದ್ಧ ಫಿಲ್ಮ್ ಚೇಂಬರ್​ಗೆ ದೂರು ಕೊಟ್ಟಿರುವ ನಿರ್ಮಾಪಕ ಸುರೇಶ್​ ಜೊತೆ ಇಡೀ ಚಿತ್ರತಂಡವಿದೆ. ಆ ದೂರಿನ ಪ್ರತಿಯಲ್ಲಿ ನಿರ್ಮಾಪಕರು ನಟಿ ಆವಂತಿಕಾ ಶೆಟ್ಟಿಯವರ ಆರೋಪಗಳಿಗೆಲ್ಲ ಉತ್ತರ ಕೊಡುತ್ತಲೇ ಹೇಳಿರುವ ವಿಷಯಗಳು ಎಲ್ಲರ ಹುಬ್ಬೇರಿಸುತ್ತಿವೆ. ಅದರಲ್ಲಿ ಒಂದು ದ್ರಾಕ್ಷಿ, ಗೋಡಂಬಿ ವಿಚಾರ.

    ನಟಿ ಆವಂತಿಕಾ ಶೆಟ್ಟಿಯವರಿಗೆ ಗೋಲ್ಡ್​ಫಿಂಚ್ ಹೋಟೆಲ್​ನಲ್ಲಿ ರೂಂ ಬುಕ್ ಮಾಡಲಾಗಿತ್ತು. ಅಲ್ಲಿ ತನ್ನ ರೂಂನಲ್ಲಿದ್ದ ಲಾಡು, ದ್ರಾಕ್ಷಿ, ಗೋಡಂಬಿಯನ್ನ ಯಾರೋ ಕದ್ದಿದ್ದಾರೆ ಅಂತಾ ಆವಂತಿಕಾ ಶೆಟ್ಟಿ ಗಲಾಟೆ ಮಾಡಿದ್ದರಂತೆ. 

    ಇನ್ನು ತುಂಡುಬಟ್ಟೆ ಹಾಕೋಕೆ ಹೇಳಿದರು ಅನ್ನೋದಕ್ಕೆ ನಿರ್ಮಾಪಕರು ಕೊಟ್ಟಿರುವ ದೂರಿನಲ್ಲೇ ಉತ್ತರಾನೂ ಇದೆ. ತಮ್ಮ ಕಾಸ್ಟ್ಯೂಮ್ ಸೆಲೆಕ್ಷನ್ ಮತ್ತು ಡಿಸೈನ್, ಎರಡರ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದವರು ಸ್ವತಃ ಆವಂತಿಕಾ ಶೆಟ್ಟಿ.

    ಆವಂತಿಕಾ ಶೆಟ್ಟಿ ಶೂಟಿಂಗ್ ವೇಳೆಯಲ್ಲಿ ಇಷ್ಟೆಲ್ಲ ಸತಾಯಿಸಿದ್ದಾರೆ. ಅವರ ಸಹವಾಸ ಬೇಡ. ಆಕೆಯನ್ನು ಚಿತ್ರರಂಗದಿಂದಲೇ ಹೊರಹಾಕಿ ಅನ್ನೋದು ನಿರ್ಮಾಪಕರ ಬೇಡಿಕೆಯಾದರೆ, ನನ್ನ ಪಾತ್ರಕ್ಕೆ ನಾನೇ ಡಬ್ಬಿಂಗ್ ಮಾಡಬೇಕು. ಬೇರೆಯವರು ಡಬ್ಬಿಂಗ್ ಮಾಡೋದಾದ್ರೆ ನನ್ನ ಅಭಿನಯದ ದೃಶ್ಯಗಳನ್ನೇ ಬಳಸಬೇಡಿ ಅನ್ನೋ ವಾದ ಮುಂದಿಟ್ಟಿದ್ದಾರೆ ನಟಿ ಆವಂತಿಕಾ ಶೆಟ್ಟಿ.

    ಈಗ ಮೊದಲು ಜಡ್ಜ್​ಮೆಂಟ್ ಕೊಡಬೇಕಾದ ಹೊಣೆ ಇರುವುದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ. ಗೋವಿಂದು ಅವರಿಗೆ. ಸಿನಿಮಾವೊಂದರ ಶೂಟಿಂಗ್ ಒಂದು ದಿನ ವೇಸ್ಟ್ ಆದರೆ, ನಿರ್ಮಾಪಕರಿಗೆ ಎಷ್ಟು ಲಾಸ್ ಆಗುತ್ತೆ  ಅನ್ನೋದು ಸ್ವತಃ ನಿರ್ಮಾಪಕರೂ ಆಗಿರುವ ಸಾ.ರಾ. ಗೋವಿಂದುಗೆ ಗೊತ್ತು. ಹಾಗೆಂದು ಕಲಾವಿದೆಯೊಬ್ಬರ ದೂರನ್ನು ಕೇಳದೇ ಇರಲು ಸಾಧ್ಯವೇ ಇಲ್ಲ. ಏಕೆಂದರೆ, ಅವರು ಕುಳಿತಿರುವ ಪೀಠ ಅಂಥಾದ್ದು. 

    ಚಿತ್ರರಂಗದ ಹಲವು ಸಮಸ್ಯೆಗಳನ್ನು ಸರಾಗವಾಗಿ ಬಗೆಹರಿಸಿರುವ ಸಾ.ರಾ.ಗೋವಿಂದು ಈ ಸಮಸ್ಯೆಯನ್ನು ಹೇಗೆ ಬಗೆಹರಿಸ್ತಾರೋ ನೋಡಬೇಕು.

  • ಆವಂತಿಕಾ.. ರಾಜುಗೆ ಜೋಡಿಯಾಗಿದ್ದು ಹೇಗೆ..?

    raju kannada medium image

    ರಾಜು ಕನ್ನಡ ಮೀಡಿಯಂ ಸಿನಿಮಾ ರಿಲೀಸ್‍ಗೆ ರೆಡಿಯಾಗಿದೆ. ಮುಂದಿನ ಶುಕ್ರವಾರ ತೆರೆಗೆ ಬರುತ್ತಿರುವ ಚಿತ್ರದಲ್ಲಿ ಆವಂತಿಕಾ ಶೆಟ್ಟಿ, ರಾಜು ಹೃದಯ ಕದಿಯುವ ಚೆಲುವೆ. ರಂಗಿತರಂಗದ ಮೂಲಕ ಚಿತ್ರರಂಗಕ್ಕೆ ಪರಿಚಯವಾದ ಆವಂತಿಕಾ ಶೆಟ್ಟಿಗೆ ಇದು 4ನೇ ಸಿನಿಮಾ. ಆರಂಭದಲ್ಲಿ ನಿರ್ಮಾಪಕರ ಜೊತೆ ಮುನಿಸಿಕೊಂಡಿದ್ದ ಆವಂತಿಕಾ, ನಂತರ  ಎಲ್ಲವನ್ನೂ ಮರೆತು ಚಿತ್ರವನ್ನು ಯಶಸ್ವಿಯಾಗಿ ಪೂರೈಸಿದ್ಧಾರೆ.

    ರಂಗಿತರಂಗದಂತಹ ಚಿತ್ರದಲ್ಲಿ ನಟಿಸಿದ್ದರೂ, ಆವಂತಿಕಾ ಅವರನ್ನು ಅಡಿಷನ್ ಮೂಲಕವೇ ಸಿನಿಮಾಗೆ ಆಯ್ಕೆ ಮಾಡಿಕೊಂಡರಂತೆ ನಿರ್ದೇಶಕ ನರೇಶ್ ಕುಮಾರ್. ಆವಂತಿಕಾ ಕೂಡಾ ಅಷ್ಟೆ, ಯಾವುದೇ ಬಿಗುಮಾನ ಇಟ್ಟುಕೊಳ್ಳದೆ ಅಡಿಷನ್ ಕೊಟ್ಟರು. ಅಷ್ಟೇ ಅಲ್ಲ, ಸೂಪರ್‍ಬೈಕ್ ರೈಡಿಂಗ್ ದೃಶ್ಯವನ್ನೂ ಲೀಲಾಜಾಲವಾಗಿ ನಿರ್ವಹಿಸಿದರು ಎಂದಿದ್ದಾರೆ ನರೇಶ್.

    ಆವಂತಿಕಾ ಶೆಟ್ಟಿ ಅವರಿಗೆ ಒಂದು ಅರ್ಬನ್ ಲುಕ್ ಇದೆ. ನಗರದ ಮಾಡರ್ನ್ ಹುಡುಗಿಯಾಗಿ ಆವಂತಿಕಾ ಶೆಟ್ಟಿ ಅತ್ಯುತ್ತಮವಾಗಿ ನಟಿಸಿದ್ದಾರೆ. ಚಿತ್ರದ ಪ್ರಮುಖ ನಾಯಕಿ ಅವರೇ ಅಂತಾರೆ ನರೇಶ್. ರಘುನಂದನ್ ಅವರನ್ನು ಯಾರೇ ಇವನು ಕನ್ನಡದ ಕಂದ ಎನ್ನುವ ಆವಂತಿಕಾ, ಚಿತ್ರದ ಟರ್ನಿಂಗ್ ಪಾಯಿಂಟ್ ಕ್ಯಾರೆಕ್ಟರ್.

  • ಆ್ಯಕ್ಟರ್ ಆಶಿಕಾಗೆ ಮಾಸ್ಟರ್ ಡಿಗ್ರಿಯೇ ಗುರಿ..!

    ashika's master degree dream

    ಮುಗುಳುನಗೆ ಚಿತ್ರದಿಂದ ವಿಭಿನ್ನ ಶೈಲಿಯಲ್ಲಿ ಗುರುತಿಸಿಕೊಂಡ ಆಶಿಕಾ ರಂಗನಾಥ್ ಅಭಿನಯದ ರಾಜು ಕನ್ನಡ ಮೀಡಿಯಂ ಚಿತ್ರ ಈ ವಾರ ತೆರೆಗೆ ಬರುತ್ತಿದೆ. ಕ್ರೇಜಿಬಾಯ್ ಚಿತ್ರದಿಂದ ತೆರೆಗೆ ಪರಿಚಯವಾಗದ ಆಶಿಕಾಗೆ, ಲೆಕ್ಕದ ಪ್ರಕಾರ ರಾಜು ಕನ್ನಡ ಮೀಡಿಯಂ ಎರಡನೇ ಸಿನಿಮಾ. ಕ್ರೇಜಿಬಾಯ್ ರಿಲೀಸ್‍ಗೂ ಮೊದಲೇ ಆಶಿಕಾ ಅಭಿನಯಿಸಿದ್ದ ಸಿನಿಮಾ ರಾಜು ಕನ್ನಡ ಮೀಡಿಯಂ.

    ಫೈನಲ್ ಇಯರ್ ಬಿ.ಕಾಂ ಓದುತ್ತಿರುವ ಆಶಿಕಾ, ಈ ಸಿನಿಮಾದಲ್ಲಿ ಹೈಸ್ಕೂಲ್ ಹುಡುಗಿಯ ಪಾತ್ರ ಮಾಡಿದ್ದಾರೆ. ಆ ಪಾತ್ರಕ್ಕಾಗಿ ತೂಕವನ್ನೂ ಇಳಿಸಿಕೊಂಡಿದ್ದಾರೆ. ಓದುವುದಕ್ಕಾಗಿಯೇ ತೆಲುಗಿನ ಅವಕಾಶಗಳನ್ನು ಬಿಟ್ಟಿದ್ದೇನೆ ಎನ್ನುವ ಆಶಿಕಾಗೆ ಮಾಸ್ಟರ್ ಡಿಗ್ರಿ ಮಾಡುವ ಕನಸಿದೆ. ಪೋಸ್ಟ್ ಗ್ರ್ಯಾಜುಯೇಷನ್ ನನ್ನ ಕನಸು. ಕಾಲೇಜಿಗೆ ಹೋಗಲಾಗದಿದ್ದರೆ, ಕರೆಸ್ಪಾಂಡೆನ್ಸ್‍ನಲ್ಲಿಯಾದರೂ ಸರಿಯೇ, ಮಾಸ್ಟರ್ ಡಿಗ್ರಿ ಮಾಡಿಯೇ ಮಾಡುತ್ತೇನೆ ಎನ್ನುತ್ತಾರೆ ಆಶಿಕಾ.

    ರಾಜು ಕನ್ನಡ ಮೀಡಿಯಂನಲ್ಲಿ ನನ್ನದು ಪುಟ್ಟ ಪಾತ್ರ. ಆದರೆ, ಚಿತ್ರ ಮುಗಿದ ಮೇಲೂ ನನ್ನ ಪಾತ್ರ ಪ್ರೇಕ್ಷಕರ ಮನಸ್ಸಲ್ಲಿ ಉಳಿದಿರುತ್ತೆ ಎನ್ನುತ್ತಾರೆ ಆಶಿಕಾ. 

  • ಕನ್ನಡ ಮೀಡಿಯಂ ರಾಜು ಟ್ರೇಲರ್‍ನಲ್ಲಿ ಅಂಥಾದ್ದೇನಿದೆ..?

    raju kannada medium image

    ರಾಜು ಕನ್ನಡ ಮೀಡಿಯಂ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಗೊತ್ತಿರುವ ವಿಚಾರ. ಆದರೆ, ಆ ಟ್ರೇಲರ್‍ನ ಪುಟ್ಟ ವಿಡಿಯೋವನ್ನು ಎಡಿಟ್ ಮಾಡಿರುವ ಅಭಿಮಾನಿಗಳು, ಅದನ್ನು ತಮ್ಮ ತಮ್ಮ ಪೇಜ್‍ಗಳಲ್ಲಿ ಹಾಕಿಕೊಂಡು ಷೇರ್ ಮಾಡುತ್ತಿದ್ದಾರೆ. ಇಷ್ಟಕ್ಕೂ ಆ ವಿಡಿಯೋವನ್ನು ಕನ್ನಡಿಗರು ಮೆಚ್ಚಿದ್ದೇಕೆ..? ಅದರಲ್ಲಿ ಅಂಥದ್ದೇನಿದೆ ಅನ್ನೋ ಕುತೂಹಲ ಇದೆಯಾ..?

    ಆ ವಿಡಿಯೋದಲ್ಲಿರೋದು ಇಷ್ಟೆ. ಕನ್ನಡ ರಾಜು ಫಾರಿನ್‍ಗೆ ಹೋಗಿರ್ತಾನೆ. ಆತನನ್ನು ವಿದೇಶಿ ಸುಂದರಿಯೊಬ್ಬಳು ಮಾತನಾಡಿಸಿ ನೀನು ಮಾತನಾಡುತ್ತಿರುವುದು ಯಾವ ಭಾಷೆ. ಕೇಳೋಕೆ ಚೆನ್ನಾಗಿದೆ ಅಂತಾಳೆ.

    ರಾಜು, ಕನ್ನಡ.. ಕಸ್ತೂರಿ ಕನ್ನಡ ಅಂಥಾನೆ. ಆ ಫಾರಿನ್ ಹುಡುಗಿ, ನಾನೂ ಕನ್ನಡ ಕಲಿಯುತ್ತೇನೆ.. ನನಗೂ ಕನ್ನಡ ಕಲಿಸಿ ಎಂದಾಗ ರಾಜು ಹೇಳುವುದು ಇಷ್ಟು. ನಿಮಗೆ ಇರುವ ಈ ಕಳಕಳಿ, ನಮ್ಮ ಪಕ್ಕದ ರಾಜ್ಯದಿಂದ ಬಂದಿರುವವರಿಗೆ ಇದ್ದು ಕನ್ನಡ ಕಲಿತಿದ್ದರೆ, ಕನ್ನಡ ನವೆಂಬರ್ ಕನ್ನಡ ಅಲ್ಲ, ನಂಬರ್ 1 ಕನ್ನಡ ಆಗುತ್ತಿತ್ತು ಅಂತಾನೆ. 

    ನವೆಂಬರ್ ರಾಜ್ಯೋತ್ಸವ ಬೇರೆ ಹತ್ತಿರ ಬರುತ್ತಿರುವಾಗ, ರಾಜು ಕನ್ನಡ ಮೀಡಿಯಂನ ಈ ಡೈಲಾಗ್ ಇಷ್ಟವಾಗಿರೋದೇ ಈ ಕಾರಣಕ್ಕೆ.

     

  • ಕನ್ನಡ ಮೀಡಿಯಂ ರಾಜುಗೆ 50 ಲಕ್ಷ+ ದಾಖಲೆ

    sudeep, gurunandan, avantika shetty

    ರಾಜು ಕನ್ನಡ ಮೀಡಿಯಂ. ಜನವರಿ 19ಕ್ಕೆ ರಿಲೀಸ್ ಆಗಲಿರುವ ಚಿತ್ರ. ಫಸ್ಟ್ ರ್ಯಾಂಕ್ ರಾಜು ಗುರುನಂದನ್, ರಂಗಿತರಂಗದ ಆವಂತಿಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಕಿಚ್ಚ ಸುದೀಪ್ ಕಿಕ್ ಕೂಡಾ ಇದೆ.

    ಸ್ಟೈಲಿಶ್ ಬ್ಯುಸಿನೆಸ್ ಮ್ಯಾನ್ ಆಗಿ ಕಾಣಿಸಿಕೊಂಡಿರುವ ಸುದೀಪ್ ಲುಕ್‍ಗೆ ಅಭಿಮಾನಿಗಳಂತೂ ಫಿದಾ. ಹೀಗಾಗಿಯೇ ಚಿತ್ರದ ಟ್ರೇಲರ್ ದಾಖಲೆಯನ್ನೇ ಬರೆದುಬಿಟ್ಟಿದೆ. ಯೂಟ್ಯೂಬ್, ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಸಿನಿಮಾಗೆ 50 ಲಕ್ಷಕ್ಕೂ ಹೆಚ್ಚು ಜನ ಶುಭ ಕೋರಿದ್ದಾರೆ. ನೋಡಿದ್ದಾರೆ. ಮೆಚ್ಚಿದ್ದಾರೆ.

    ಇದು ಖುಷಿ ಕೊಟ್ಟಿರೋದು ಸಹಜವಾಗಿಯೇ ನಿರ್ಮಾಪಕ ಸುರೇಶ್ ಅವರಿಗೆ. ಎಷ್ಟೆಂದರೂ ಅವರು ನಿರ್ಮಾಪಕರು. ನೋಡುವವರ ಸಂಖ್ಯೆ ಹೆಚ್ಚಿದಷ್ಟೂ ಖುಷಿ ಪಡುವವರು. ಅವರೆಲ್ಲರೂ ಥಿಯೇಟರ್‍ಗೆ ಬಂದು ಖುಷಿಪಡುವಂತಾಗಲಿ. ಕನ್ನಡ ಮೀಡಿಯಂ ರಾಜುಗೆ ಚಿನ್ನದ ಪದಕ ಕೊಡಲಿ ಎಂದು ಹಾರೈಸೋಣ.

  • ಕನ್ನಡ ಮೀಡಿಯಂ ರಾಜುಗೆ ರಷ್ಯನ್ ಚೆಲುವೆ

    russian girl in raju kannada medium

    ರಾಜು ಕನ್ನಡ ಮೀಡಿಯಂ ಚಿತ್ರದ ಟ್ರೇಲರ್‍ನಲ್ಲಿ ಒಂದು ಚೆಂದದ ಡೈಲಾಗ್ ಇದೆ. ವಿದೇಶಿ ಹುಡುಗಿಯೊಬ್ಬಳು ರಾಜುವನ್ನು ನೀನು ಮಾತನಾಡುವ ಭಾಷೆ ಯಾವುದು ಎಂದು ಕೇಳ್ತಾಳೆ. ಆಗ ರಾಜು ಕನ್ನಡ ಎಂದು ಉತ್ತರ ಕೊಡ್ತಾನೆ. ನಾನೂ ಕನ್ನಡ ಕಲಿಯಬೇಕು ಎಂದಾಗ ನಮ್ಮ ಬೆಂಗಳೂರಿಗೆ ಪಕ್ಕದ ರಾಜ್ಯದಿಂದ ಬಂದಿರೋವ್ರಿಗೂ ನಿನ್ನ ಥರಾ ಭಾವನೆ ಬಂದುಬಿಟ್ಟಿದ್ದರೆ, ನಮ್ಮ ಕನ್ನಡ ನವೆಂಬರ್ ಕನ್ನಡ ಆಗ್ತಾ ಇರಲಿಲ್ಲ. ನಂಬರ್ ಒನ್ ಕನ್ನಡ ಆಗ್ತಿತ್ತು ಅಂತಾನೆ.

    ಅಂದಹಾಗೆ ಆ ಡೈಲಾಗ್ ಹೇಳುವ ಚೆಲುವೆಯ ಹೆಸರು ಏಂಜಲೀನಾ. ರಷ್ಯನ್ ಚೆಲುವೆ. ಚಿತ್ರದ 3ನೇ ನಾಯಕಿ. ಚಿತ್ರದಲ್ಲಿ ಆವಂತಿಕಾ ಶೆಟ್ಟಿ ಹಾಗೂ ಆಶಿಕಾ ರಂಗನಾಥ್ ಕೂಡಾ ನಾಯಕಿಯರು. ಇವರೆಲ್ಲರ ಜೊತೆ ಕನ್ನಡಿಗರ ಕಿಚ್ಚ ಸುದೀಪ್ ಕೂಡಾ ಇದ್ದಾರೆ.

    ಇದೇ 19ಕ್ಕೆ ಬಿಡುಗಡೆಯಾಗುತ್ತಿರುವ ರಾಜು ಕನ್ನಡ ಮೀಡಿಯಂ, ತನ್ನ ವಿಭಿನ್ನ ಟ್ರೇಲರ್, ಸುದೀಪ್ ಆಗಮನ, ಅದ್ದೂರಿ ನಿರ್ಮಾಣದ ಮೂಲಕ ಗಮನ ಸೆಳೆಯುತ್ತಿದೆ.

  • ಕಿಚ್ಚನ ಎಫೆಕ್ಟ್, ರಾಜು ಕನ್ನಡ ಮೀಡಿಯಂಗೆ ಫಾರಿನ್ ಡಿಮ್ಯಾಂಡ್

    kiccha effect

    ಕೆ.ಎ. ಸುರೇಶ್‌ ನಿರ್ಮಾಣದ  'ರಾಜು ಕನ್ನಡ ಮೀಡಿಯಂ' ಚಿತ್ರ, ಭರ್ಜರಿ ಸದ್ದು ಮಾಡುತ್ತಿದೆ. ಟೀಸರ್ ಬಿಡುಗಡೆಯ ನಂತರವಂತೂ ಡಿಮ್ಯಾಂಡ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆಯಂತೆ. ಅದರಲ್ಲೂ ಸುರೇಶ್ ಥ್ರಿಲ್ಲಾಗೋಕೆ ಕಾರಣ, ವಿದೇಶಗಳಲ್ಲಿ ಸೃಷ್ಟಿಯಾಗಿರುವ ಕ್ರೇಜ್. ಚಿತ್ರವನ್ನು ವಿದೇಶಗಳಲ್ಲಿ ವಿತರಣೆ ಮಾಡಲು ವಿತರಕರು ಬೆನ್ನು ಬಿದ್ದಿದ್ದಾರಂತೆ. ಕಾರಣವೇನೆಂದು ಹುಡುಕಿದರೆ ಸಿಕ್ಕಿರುವ ಉತ್ತರ ಕಿಚ್ಚ ಸುದೀಪ್.

    ಚಿತ್ರದ ಟೀಸರ್ ಬಾಲಿವುಡ್​ ಲೆವೆಲ್ಲಿನಲ್ಲಿದೆ. 'ಫಸ್ಟ್ ರ‍್ಯಾಂಕ್ ರಾಜು' ಖ್ಯಾತಿಯ ಗುರುನಂದನ್, ರಾಜು ಪಾತ್ರ ನಿಭಾಯಿಸಿದ್ದಾರೆ. ರಂಗಿತರಂಗ ಖ್ಯಾತಿಯ ಅವಂತಿಕಾ ಶೆಟ್ಟಿ ನಾಯಕಿ.  ಇವರ ಜೊತೆ ಆಶಿಕ ರಂಗನಾಥ್ ಹಾಗೂ ಅಂಜೇಲಿನ ಕೂಡಾ ನಾಯಕಿಯರಾಗಿ ನಟಿಸಿದ್ದಾರೆ. ಸಾಧು ಕೋಕಿಲ, ಕುರಿ ಪ್ರತಾಪ್, ಚಿಕ್ಕಣ್ಣ, ಸುಚಿಂದ್ರ ಪ್ರಸಾದ್, ಬಿಗ್ ಬಾಸ್ ಖ್ಯಾತಿಯ ಪ್ರಥಮ್, ಕಿರಿಕ್ ಕೀರ್ತಿ, ನಿರ್ದೇಶಕರಾದ ಓಂ ಪ್ರಕಾಶ್ ರಾವ್, ಇಂದ್ರಜಿತ್ ಲಂಕೇಶ್.. ಹೀಗೆ ಅದ್ಧೂರಿ ತಾರಾಗಣದ ಚಿತ್ರ, ರಿಲೀಸ್ ಆಗೋಕೆ ರೆಡಿಯಾಗಿದೆ.

  • ಫಸ್ಟ್ Rank ರಾಜು ಭಲೇ ಅದೃಷ್ಟವೋ ಅದೃಷ್ಟ

    raju kannada medium image

    ಗುರುನಂದನ್ ಆಂದ್ರೆ  ಯಾರು ಅಂತಾ ಕೇಳೋವ್ರು ಕೂಡಾ ಫಸ್ಟ್ Rank ರಾಜು ಅಂದ್ರೆ ಕಣ್ಣರಳಿಸ್ತಾರೆ. ಈ ಬಾರಿ ರಾಜುಗೆ ಅಲಿಯಾಸ್ ಗುರುನಂದನ್‍ಗೆ ಅದೃಷ್ಟ ಖುಲಾಯಿಸಿಟ್ಟಿದೆ. ಅದು ಮೂರ್ ಮೂರು ಹೀರೋಯಿನ್‍ಗಳ ಜೊತೆ ರೊಮ್ಯಾನ್ಸ್ ಮಾಡೋ ಅವಕಾಶ. ಅದು ಒಲಿದಿರೋದು ರಾಜು ಕನ್ನಡ ಮೀಡಿಯಂನಲ್ಲಿ.

    ಚಿತ್ರದಲ್ಲಿ ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್ ಮತ್ತು ಏಂಜಲಿನಾ ಎಂಬ ಮೂವರು ತಾರೆಯರಿದ್ದಾರೆ. ಹೈಸ್ಕೂಲ್‍ನಲ್ಲಿಂದಲೇ ಲವ್ ಶುರುವಾಗುತ್ತೆ. ಅಲ್ಲಿ ಆಶಿಕಾ ರಂಗನಾಥ್ ಜೊತೆ. ಆಶಿಕಾ ಜೊತೆಗಿನ ರೋಲ್‍ಗಾಗಿ 15 ಕೆಜಿ ತೂಕ ಇಳಿಸಿಕೊಂಡಿದ್ದರಂತೆ ಗುರುನಂದನ್. 

    ನಂತರ ಸಾಫ್ಟ್ವೇರ್ ಕಂಪೆನಿ ಉದ್ಯೋಗಿಯಾಗಿ, ಕನ್ನಡದ ಕಂದನಾಗಿ ಆವಂತಿಕಾ ಶೆಟ್ಟಿ ಜೊತೆ ನಟಿಸ್ತಾರೆ ಗುರುನಂದನ್. ಇದಾದ ಮೇಲೇ ಫಾರಿನ್‍ನಲ್ಲಿ ಏಂಜಲಿನಾ ಜೊತೆ ಲವ್. ಈ ಪ್ರೀತಿ, ಪ್ರೇಮ, ಪ್ರಣಯದ ಕಥೆಯನ್ನು ನಗಿಸುತ್ತಲೇ ಹೇಳಿದ್ದಾರೆ ನಿರ್ದೇಶಕ ನರೇಶ್ ಕುಮಾರ್. ನಿರ್ದೇಶಕರ ಕನಸು ನನಸು ಮಾಡೋಕೆ ಎಲ್ಲ ರೀತಿಯ ಸೌಲಭ್ಯವನ್ನೂ ನೀಡಿರುವ ನಿರ್ಮಾಪಕ ಸುರೇಶ್, ಈಗ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

  • ಫಾರಿನ್‍ಗೂ ಹೊರಡೋಕೆ ರಾಜು ರೆಡಿ..!

    raju kannada medium image

    ರಾಜು ಕನ್ನಡ ಮೀಡಿಯಂ ಸಿನಿಮಾ ಇದೇ ಜನವರಿ 19ರಂದು ರಾಜ್ಯದೆಲ್ಲೆಡೆ ಬಿಡುಗಡೆಯಾಗ್ತಾ ಇದೆ. ಅದಾದ ನಂತರ ಎರಡೇ ವಾರಗಳಲ್ಲಿ ವಿದೇಶಗಳಲ್ಲಿಯೂ ಬಿಡುಗಡೆ ಮಾಡೋಕೆ ಚಿತ್ರತಂಡ ನಿರ್ಧರಿಸಿದೆ. ರಾಜ್ಯದಲ್ಲಿಯೇ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ವಿದೇಶದಲ್ಲಿ ಚಿತ್ರವನ್ನು ಮಾರ್ಕೆಟ್ ಮಾಡೋಕೆ ಫಸ್ಟ್ ರ್ಯಾಂಕ್ ರಾಜು ಚಿತ್ರದ ಸಕ್ಸಸ್ ಹಾಗೂ ಸುದೀಪ್ ಎಂಬ ಎರಡು ಹೆಸರು ಸಾಕು. 

    ಸುದೀಪ್ ಅವರನ್ನು ಸ್ಫೂರ್ತಿಯಾಗಿಟ್ಟುಕೊಂಡು ಹೊರಡುವ ಕನ್ನಡ ಮಾಧ್ಯಮದಲ್ಲಿ ಓದಿದ ಹುಡುಗ, ವಿದೇಶದಲ್ಲಿ ಏನೇನೆಲ್ಲ ಸಾಧಿಸುತ್ತಾನೆ ಅನ್ನೊದು ಚಿತ್ರದ ಕಥೆ. ನವಿರಾದ ಹಾಸ್ಯನ್ನು ಎಲ್ಲಿಯೂ ಬಿಟ್ಟುಕೊಡದೆ ಚಿತ್ರಕಥೆ ಹೆಣೆಯಲಾಗಿದೆ. ನಿರ್ಮಾಪಕ, ನಾಯಕಿ ಬಿಟ್ಟರೆ ಇಡೀ ಸಿನಿಮಾದಲ್ಲಿರೋದು ಫಸ್ಟ್ ರ್ಯಾಂಕ್ ರಾಜು ಚಿತ್ರತಂಡ. ಹೀಗಾಗಿ ಇದು ಬೇರೆಯೇ ದಾಖಲೆ ಬರೆಯುತ್ತೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ ನಿರ್ಮಾಪಕ ಸುರೇಶ್.

  • ಬರ್ತಾನೆ ಬರ್ತಾನೆ ಕನ್ನಡ ರಾಜು ಬರ್ತಾನೆ

    raju kannada medium image

    ರಾಜು ಕನ್ನಡ ಮೀಡಿಯಂ. ಬಿಡುಗಡೆಗೆ ಮೊದಲೇ ಭರ್ಜರಿ ನಿರೀಕ್ಷೆ ಹುಟ್ಟಿಸಿದ್ದ ಚಿತ್ರ. ಚಿನಕುರುಳಿ ಪಟಾಕಿಯಂತಾ ಡೈಲಾಗುಗಳನ್ನು ಟ್ರೇಲರ್‍ನಲ್ಲಿ ಬಿಟ್ಟಿದ್ದ ಚಿತ್ರತಂಡ, ಪ್ರೇಕ್ಷಕರ ಕಿವಿಗೆ ಕಚಗುಳಿ ಇಟ್ಟಿತ್ತು. ಜೊತೆಗೆ ಚಿತ್ರತಂಡದ ಜೊತೆಗೆ ಕಿಚ್ಚನೂ ಸೇರಿಕೊಂಡ ಮೇಲೆ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಲ್ಲ, ನೂರು ಪಟ್ಟು ಹೆಚ್ಚಾಗಿತ್ತು. ಈಗ ಚಿತ್ರದ ರಿಲೀಸ್ ಡೇಟ್ ಫಿಕ್ಸ್ ಆಗಿದೆ. ಜನವರಿ 19ಕ್ಕೆ ತೆರೆಗೆ ಬರ್ತಾ ಇದೆ ರಾಜು ಕನ್ನಡ ಮೀಡಿಯಂ.

    ಇಂಗ್ಲಿಷ್ ಗೊತ್ತಿಲ್ಲದ ಹುಡುಗನ ಪಾತ್ರದಲ್ಲಿ ಫಸ್ಟ್ ರ್ಯಾಂಕ್ ರಾಜು ಖ್ಯಾತಿಯ ಗುರುನಂದನ್ ನಟಿಸಿದ್ದಾರೆ. ಆವಂತಿಕಾ ಶೆಟ್ಟಿ, ಆಶಿಕಾ ರಂಗನಾಥ್ ಚಿತ್ರದ ನಾಯಕಿಯರು. ಇಡೀ ಚಿತ್ರಕ್ಕೆ ಟರ್ನಿಂಗ್ ಪಾಯಿಂಟ್ ಕಿಚ್ಚ ಸುದೀಪ್. ಸುದೀಪ್ ಅವರ ಸ್ಟೈಲ್ ಅಂತೂ ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹಚ್ಚುತ್ತಿದೆ. ಏನೆಂದರೂ ಜನವರಿ 19ರವರೆಗೆ ಕಾಯಬೇಕು.

  • ಮುಖ್ಯಮಂತ್ರಿಗಳೇ ಬರ್ತಾರೆ.. ನೋಡ್ತಾರೆ

    cm siddaramaiah raju kannada medium team

    ರಾಜು ಕನ್ನಡ ಮೀಡಿಯಂ ಚಿತ್ರ ಕನ್ನಡಿಗರಿಗೆ, ಅದರಲ್ಲೂ ಕನ್ನಡ ಮಾಧ್ಯಮದಲ್ಲಿ ಓದಿದ, ಇಂಗ್ಲಿಷ್ ಬಾರದವರಿಗೆ ಸ್ಫೂರ್ತಿ ತುಂಬುವ ಹಾಗಿದೆ. ಕನ್ನಡ ಕಲಿತವರೆಲ್ಲ ದಡ್ಡರಲ್ಲ, ಇಂಗ್ಲಿಷ್ ಗೊತ್ತಿದ್ದವರೆಲ್ಲ ಅತಿಮಾನುಷರಲ್ಲ ಎಂಬ ಸಂದೇಶ ಇರುವ ಚಿತ್ರವನ್ನು ನೀವೊಮ್ಮೆ ನೋಡಬೇಕು. ನೋಡಿ ಪ್ರೋತ್ಸಾಹಿಸಬೇಕು.

    ರಾಜು ಕನ್ನಡ ಮೀಡಿಯಂ ಚಿತ್ರತಂಡ, ಖುದ್ದು ಸಿಎಂ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಅವರ ಮುಂದಿಟ್ಟಿರುವ ಬೇಡಿಕೆ ಇದು. ಅಂದಹಾಗೆ ಸಿದ್ದರಾಮಯ್ಯ ಕೂಡಾ ಕನ್ನಡಾಭಿಮಾನಿ. ಇನ್ನೂ ವಿಶೇಷವೆಂದರೆ, ರಾಜು ಕನ್ನಡ ಮೀಡಿಯಂ ಚಿತ್ರದ ಸಂದೇಶವನ್ನು ಸ್ವತಃ ಸಿದ್ದರಾಮಯ್ಯ ತಮ್ಮದೇ ಜೀವನದಲ್ಲಿ ಅಳವಡಿಸಿಕೊಂಡಿರುವವರು. ಕನ್ನಡದಲ್ಲಿ ಕಲಿತು, ಇಂಗ್ಲಿಷ್ ಗೊತ್ತಿಲ್ಲ ಎಂಬ ಕಾರಣಕ್ಕೆ ಕೀಳರಿಮೆಗೆ ಬೀಳಬೇಡಿ ಎಂದು ಹಲವು ಕಡೆ ಹೇಳಿರುವ ಸಿದ್ದರಾಮಯ್ಯ, ಶೀಘ್ರದಲ್ಲೇ ಸಿನಿಮಾ ನೋಡುವುದಾಗಿ ಹೇಳಿದ್ದಾರೆ. 

     

  • ರಾಜು ಈಸ್ ಬ್ಯಾಕ್

    raju kannada medium movie image

    ರಾಜು ಕನ್ನಡ ಮೀಡಿಯಂ.. ರಿಲೀಸ್‍ಗೆ ರೆಡಿಯಾಗಿದೆ. ಫಸ್ಟ್ ರ್ಯಾಂಕ್ ರಾಜು ಚಿತ್ರತಂಡದ ಪುನರ್‍ಮಿಲನ ಕುತೂಹಲ ಮೂಡಿಸಿದ್ದರೆ, ಕಿಚ್ಚನ ಇರುವಿಕೆ ಆ ಕುತೂಹಲಕ್ಕೆ ಕಿಚ್ಚು ಹಚ್ಚಿದೆ.

    ಕಣ್ಣೀರಲಿ ಕಾಡಿಗೆ ಕರಗಿ.. ಅಂಗೈ ಮದರಂಗಿ ಒಣಗಿ.. ಕಾದಿಗೆ ನಿನಗಾಗಿ ಬರುವೆಯಾ.. ಎಂಬ ಟ್ರೇಲರ್‍ನಲ್ಲಿರುವ ಪುಟ್ಟ ಸಾಲುಗಳು ನವಿರು ಪ್ರೇಮದ ಸುಳಿವು ನೀಡುತ್ತವೆ. ಪಂಚಿಂಗ್ ಡೈಲಾಗ್‍ಗಳಿಗೆ ಕೊರತೆಯೇ ಇಲ್ಲ. ಗುರುನಂದನ್ ಸ್ಟೈಲ್‍ಗೆ ಸಡ್ಡು ಹೊಡೆದಿರುವುದು ಆವಂತಿಕಾ ಶೆಟ್ಟಿ-ಆಶಿಕಾ ಸೌಂದರ್ಯ. ಸಾಧು ಕೋಕಿಲಾ-ಕುರಿ ಪ್ರತಾಪ್ ಜೋಡಿಯ ಹಾಸ್ಯದೌತಣವನ್ನೂ ನೀಡಿರುವ ನಿರ್ದೇಶಕ ನರೇಶ್ ಕುಮಾರ್ ಪ್ರತಿಭೆಗೆ ಸಂಗೀತದ ಮೂಲಕ ಸಾಥ್ ಕೊಟ್ಟಿರುವುದು ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್.

  • ರಾಜು ಕನ್ಡಡ ಮೀಡಿಯಂ ರಾಜ್ಯೋತ್ಸವ

    raju kannada medium kannada rajyotsava

    ರಾಜು ಕನ್ನಡ ಮೀಡಿಯಂ. ಇದು ರಾಜ್ಯೋತ್ಸವದ ಸಂದರ್ಭಕ್ಕೆ, ಸಂಭ್ರಮಕ್ಕೆ, ಸಂಕಟಕ್ಕೆ ಹೇಳಿ ಮಾಡಿಸಿದಂತಾ ಚಿತ್ರ ಎಂದರೆ ತಪ್ಪಾಗಲ್ಲ. ಚಿತ್ರದ ಕಥೆ ಇರುವುದೇ ಕನ್ನಡ ಮೀಡಿಯಂ ಹುಡುಗ, ಇಂಗ್ಲಿಷ್ ಬರದೇ ಅನುಭವಿಸುವ ಸಂಕಟಗಳಲ್ಲಿ. ಪ್ರತಿಭೆಯೆಂದರೆ, ಇಂಗ್ಲಿಷ್ ಗೊತ್ತಿರುವುದಷ್ಟೇ ಅಲ್ಲ ಎಂದು ಸಾರುವ ಸಿನಿಮಾ ರಾಜು ಕನ್ನಡ ಮೀಡಿಯಂ.

    ಈ ಮಾತನ್ನು ಹೇಳುವುದು ನಾಯಕ ಒಬ್ಬನೇ ಅಲ್ಲ. ನಾಯಕನ ಜೊತೆ ಕಿಚ್ಚ ಸುದೀಪ್ ಇದ್ದಾರೆ. ಸ್ಟಾರ್ ನಟನ  ಜೊತೆ ಕಿರಿಕ್ ಕೀರ್ತಿ, ಓಂಪ್ರಕಾಶ್ ರಾವ್, ಬಿಗ್‍ಬಾಸ್ ಪ್ರಥಮ್, ರೇಡಿಯೋ ಜಾಕಿ ರ್ಯಾಪಿಡ್ ರಶ್ಮಿ, ಇಂದ್ರಜಿತ್ ಲಂಕೇಶ್.. ಹೀಗೆ ತಾರೆಯರ ದಂಡೇ ಇದೆ. ಇವರೆಲ್ಲರೂ ಚಿತ್ರದಲ್ಲಿ ಕನ್ನಡದ ಬಗ್ಗೆಯೇ ಮಾತನಾಡುತ್ತಾರೆ. ಇಂಗ್ಲಿಷ್ ಗೊತ್ತಿಲ್ಲ ಎನ್ನುವುದು ದೊಡ್ಡ ಸಮಸ್ಯೆ ಅಲ್ಲವೇ ಅಲ್ಲ ಎನ್ನುತ್ತಾರಂತೆ. ಹೇಗೆ ಎಂದರೆ, ನಿರ್ದೇಶಕ ನರೇಶ್ ಗುಟ್ಟು ಬಿಟ್ಟುಕೊಡಲ್ಲ. ಚಿತ್ರಮಂದಿರದಲ್ಲೇ ನೋಡಿ ಎನ್ನುತ್ತಾರೆ. 

    ಒಂದರ ಹಿಂದೊಂದರಂತೆ ಹಿಟ್ ಚಿತ್ರಗಳನ್ನೇ ಕೊಟ್ಟ ನಿರ್ಮಾಪಕ ಸುರೇಶ್, ರಾಜು ಕನ್ನಡ ಮೀಡಿಯಂ ಮೂಲಕ ಒಂದು ಸೂಪರ್ ಹಿಟ್ ಚಿತ್ರದ ನಿರೀಕ್ಷೆಯಲ್ಲಿದ್ದಾರೆ.

  • ರಾಜು ಕನ್ನಡ ಮೀಡಿಯಂ V/S ಫಸ್ಟ್ ರ್ಯಾಂಕ್ ರಾಜು

    raju kannada medium speciality

    ರಾಜು ಕನ್ನಡ ಮೀಡಿಯಂ ಹಾಗೂ ಫಸ್ಟ್ ರ್ಯಾಂಕ್ ರಾಜು. ಎರಡೂ ಚಿತ್ರಗಳಲ್ಲಿ ಚಿತ್ರತಂಡ ಹೆಚ್ಚೂ ಕಡಿಮೆ ಒಂದೇ. ನಿರ್ಮಾಪಕರಷ್ಟೇ ಬೇರೆ. ತೆರೆಗೆ ಸಿದ್ಧವಾಗಿರುವ ಈ ಚಿತ್ರದಲ್ಲೂ ರಾಜು ಇದ್ದಾನೆ. ಹೀಗಿರುವಾಗ ಆ ಚಿತ್ರಕ್ಕೂ ಈ ಚಿತ್ರಕ್ಕೂ ಏನು ವ್ಯತ್ಯಾಸ..? 

    ಫಸ್ಟ್ ರ್ಯಾಂಕ್ ರಾಜು ಇಂಗ್ಲಿಷ್ ಮೀಡಿಯಂನಲ್ಲಿ ಓದಿದ ರ್ಯಾಂಕ್ ಸ್ಟೂಡೆಂಟ್ ಕಥೆಯಾದರೆ, ರಾಜು ಕನ್ನಡ ಮೀಡಿಯಂ, ಕನ್ನಡದ ಮಾಧ್ಯಮದಲ್ಲಿ ಕಲಿತ, ಇಂಗ್ಲಿಷ್ ಗೊತ್ತಿಲ್ಲದ ಪ್ರತಿಭಾವಂತನ ಕಥೆ. ಇನ್ನು ಚಿತ್ರಕ್ಕೆ ರಾಜು ಎಂದು ಹೆಸರಿಡೋಕೂ ಕಾರಣಗಳಿವೆ. ಏಕೆಂದರೆ, ನಾಯಕ ನಟ ಗುರುನಂದನ್ ಅವರಿಗೇ ತಮ್ಮ ಹೆಸರು ಮರೆತುಹೋಗುವಷ್ಟು ರಾಜು ಆಗಿ ಗುರುತಿಸಿಕೊಂಡುಬಿಟ್ಟಿದ್ದಾರೆ. ಸ್ಕೂಲು ಹುಡುಗನಿಂದ ಪ್ರಬುದ್ಧ ಯುವಕನವರೆಗೆ ವಿಭಿನ್ನ ಶೇಡ್‍ಗಳಲ್ಲಿ ಕಾಣಿಸಿಕೊಂಡಿರುವ ಗುರುನಂದನ್‍ಗೆ, ಚಿತ್ರದ ಮೇಲೆ ಭರ್ಜರಿ ನಿರೀಕ್ಷೆಯಿದೆ.

    ಕಿಚ್ಚ ಸುದೀಪ್ ಜೊತೆ ನಟಿಸಿದ್ದು ನನ್ನ ಪುಣ್ಯ ಎನ್ನುವ ಗುರುನಂದನ್‍ಗೆ, ಅವರ ಜೊತೆ ನಟಿಸಿದ್ದು ಮರೆಯಲಾಗದ ಅನುಭವವಂತೆ. ನಿರ್ಮಾಪಕ ಮತ್ತು ನಿರ್ದೇಶಕರಿಬ್ಬರಿಗೂ ಕಥೆ & ಚಿತ್ರಕಥೆಯ ಮೇಲೆ ನಂಬಿಕೆಯಿತ್ತು. ಇನ್ನು ಚಿತ್ರದಲ್ಲಿ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಬಲ್ಲ ಡೈಲಾಗುಗಳಿಗೆ ಬರವಿಲ್ಲ.

  • ರಾಜು ಕನ್ನಡ ಮೀಡಿಯಂ ಪ್ರಸಾರಕ್ಕೆ ಕೋರ್ಟ್ ತಡೆ

    court stay in telecast of raju kannada medium

    ರಾಜು ಕನ್ನಡ ಮೀಡಿಯಂ. ಗುರುನಂದನ್, ಆಶಿಕಾ ರಂಗನಾಥ್ ಅಭಿನಯದ ಸಿನಿಮಾ. ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ನಟಿಸಿದ್ದ ಚಿತ್ರದ ನಿರ್ಮಾಪಕ ಕೆ.ಎ.ಸುರೇಶ್. ಆದರೆ, ಈಗ ಸುರೇಶ್ ವಿರುದ್ಧವೇ ವಂಚನೆಯ ಆರೋಪ ಕೇಳಿ ಬಂದಿದೆ.

    ಚಿತ್ರದ ಸ್ಯಾಟಲೈಟ್ ರೈಟ್ಸ್‍ನ್ನು ವಿತರಕ ಜಯಣ್ಣ ಅವರಿಗೆ ಕೊಟ್ಟು, ಇನ್ನೊಂದು ಕಡೆ ಜೀ ಟಿವಿಗೂ ಹಕ್ಕುಗಳನ್ನು ಮಾರಾಟ ಮಾಡಿದ್ದಾರೆ ಅನ್ನೋದು ಅವರ ಮೇಲಿರೋ ಆರೋಪ. ಈ ಕುರಿತು ಜಯಣ್ಣ, ಹಲವು ಬಾರಿ ನಿರ್ಮಾಪಕ ಸುರೇಶ್ ಹಾಗೂ ಜೀ ಟಿವಿ ಕನ್ನಡದವರ ಗಮನಕ್ಕೆ ತಂದಿದ್ದಾರೆ. ಸೂಕ್ತ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಕೋರ್ಟ್ ಮೊರೆ ಹೋಗಿದ್ದಾರೆ.

    ರಾಜು ಕನ್ನಡ ಮೀಡಿಯಂ ಪ್ರಸಾರ ಮಾಡುವುದಾಗಿ ಪ್ರಚಾರ ಮಾಡಿದ್ದ ಜೀ ಟಿವಿಗೆ ಚಿತ್ರವನ್ನು ಪ್ರಸಾರ ಮಾಡದಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಸೆಪ್ಟೆಂಬರ್ ಮೊದಲ ವಾರಕ್ಕೆ ವಿಚಾರಣೆಗೆ ದಿನಾಂಕ ನಿಗದಿ ಪಡಿಸಲಾಗಿದೆ. ಅಲ್ಲಿಯವರೆಗೆ ಜೀ ಕನ್ನಡ ಚಾನೆಲ್, ರಾಜು ಕನ್ನಡ ಮೀಡಿಯಂ ಚಿತ್ರವನ್ನು ಪ್ರಸಾರ ಮಾಡುವುದಕ್ಕೆ ಅವಕಾಶವೇ ಇಲ್ಲ.