` 3 gante 30 days 30 seconds, - chitraloka.com | Kannada Movie News, Reviews | Image

3 gante 30 days 30 seconds,

  • ಕಣ್ಣಿಲ್ಲ..ಕಿವಿಯಿಲ್ಲ..ಮಾತಿಲ್ಲ.. - ಪ್ರೀತಿಗೆ ಇದ್ಯಾವುದೂ ಅಡ್ಡಿ ಅಲ್ಲ..!

    3 gante 30 minutes 30 seconds movie image

    ಕಣ್ಣಿಲ್ಲದ ನಾಯಕ, ನಾಯಕಿಯ ಪ್ರೇಮಕಥೆ, ಕಾಲಿಲ್ಲದವರ ಲವ್‍ಸ್ಟೋರಿಗಳನ್ನು ನೀವು ಹಲವು ಚಿತ್ರಗಳಲ್ಲಿ ನೋಡಿದ್ದೀರಿ. ಆದರೆ, ಕಣ್ಣು ಕಾಣದ, ಕಿವಿ ಕೇಳದ, ಮಾತನಾಡಲು ಆಗದವನ ಪ್ರೇಮಕಥೆಯನ್ನು ಎಲ್ಲಾದರೂ ಕೇಳಿದ್ದೀರಾ..? ಅಂಥಾದ್ದೊಂದು ಅದ್ಭುತ ಪ್ರೇಮಕಥೆ, 3 ಗಂಟೆ, 30 ದಿನ 30 ಸೆಕೆಂಡ್ ಚಿತ್ರದಲ್ಲಿದೆ.

    ಚಿತ್ರದಲ್ಲಿ ದೇವರಾಜ್ ಕ್ಯಾ.ಸುಂದರಮ್ ಪಾತ್ರದಲ್ಲಿ ನಟಿಸಿದ್ದಾರೆ. ಅದು ಪಾಕ್ ವಿರುದ್ಧದ ಯುದ್ಧದಲ್ಲಿ ತನ್ನ ಜೀವವನ್ನೇ ಮುಡುಪಾಗಿಟ್ಟು, ದೇಶವನ್ನು ರಕ್ಷಿಸಿದ ಯೋಧನ ಕಥೆ. ದೇಶವನ್ನು ಗೆಲ್ಲಿಸಿದರೂ, ದೇಹದ ಮೇಲೆ ನಿಯಂತ್ರಣವನ್ನೇ ಕಳೆದುಕೊಳ್ಳುವ ಸೈನಿಕನಿಗೆ ಆಸರೆಯಾಗಿ ಬರುವುದು ಸುಧಾರಾಣಿ.

    ಸುಲೋಚನಾ ಪಾತ್ರದಲ್ಲಿ ನಟಿಸಿರುವ ಸುಧಾರಾಣಿ, ದೇವರಾಜ್‍ರ ದೇಶಪ್ರೇಮವೇ ಇಷ್ಟವಾಗಿ ಪ್ರೀತಿಸುತ್ತಾರೆ. ಅವರಿಬ್ಬರ ನಡುವಿನ 25 ವರ್ಷಗಳ ಪ್ರೀತಿಯಲ್ಲಿ ಅವರಿಬ್ಬರ ಮಧ್ಯೆ ಒಂದು ವಿಚಿತ್ರ ಭಾಷೆಯೊಂದು ಬೆಳೆಯುತ್ತದೆ.

    ಈ ಹಿಂದೆ ಹಲವು ಚಿತ್ರಗಳಲ್ಲಿ ಸುಧಾರಾಣಿ ಮತ್ತು ದೇವರಾಜ್ ಒಟ್ಟಿಗೇ ನಟಿಸಿದ್ದಾರೆ. ಆದರೆ, ಇದು ಸಂಪೂರ್ಣ ವಿಭಿನ್ನ. ಮಧುಸೂದನ್ ಗೌಡ ನಿರ್ದೇಶನದ ವಿಭಿನ್ನ ಕಥಾಹಂದರದ ಸಿನಿಮಾ ವಿಭಿನ್ನ ಅನುಭವ ನೀಡುವುದು ಸುಳ್ಳಲ್ಲ. ಇದೇ ಶುಕ್ರವಾರ ತೆರೆಗೆ ಬರುತ್ತಿರುವ ಚಿತ್ರ, ಒಂದು ವಿಶೇಷ ಪ್ರೇಮಕಥೆ ಹೇಳಲಿದೆ. 

     

  • '3 Gante 30 Dina 30 Second' On Jan 19th

    3 gante 30 dina 30 second

    Aru Gowda starrer '3 Gante 30 Dhina 30 Second' is all set to be released on the 19th of January in Anupama and other theaters across Karnataka.

    '3 Gante 30 Dhina 30 Second' is being produced by Brain Share Creations Private Limited and is directed by G K Madhusudhan. The film stars Aru Gowda, Kavya Shetty, Yamuna Srinidhi, Sundar and others in prominent roles. 

    Srinivas Ramaiah is the cameraman, while Sridhar Sambhram is the music director.

     

  • 2ನೇ ಕ್ಲಾಸ್‍ನಿಂದ ಶುರುವಾದ ಡೈರೆಕ್ಟರ್ ಕಥೆ..!

    director used to tell story from 2nd std

    3 ದಿನ 30 ಗಂಟೆ 30 ಸೆಕೆಂಡ್ ಅನ್ನೋ ವಿಭಿನ್ನ ಟೈಟಲ್ ಸಿನಿಮಾದಿಂದ ಗಮನ ಸೆಳೆದಿರುವ ಚಿತ್ರದ ನಿರ್ದೇಶಕ ಮಧುಸೂದನ್. ನಿರ್ದೇಶನ ಹೊಸದಲ್ಲ. ಆ್ಯಡ್ ಫಿಲಂ, ಕಿರುಚಿತ್ರ, ಟೆಲಿ ಸೀರಿಯಲ್ ಮಾಡಿದ ಅನುಭವವಿದೆ. ಸಿನಿಮಾ ಮಾತ್ರ ಹೊಸದು. ವಿಭಿನ್ನವಾಗಿ ಕಥೆ ಹೇಳುವ ಮಧುಸೂದನ್ ಅವರಿಗೆ ಕಥೆ ಹೇಳುವ ಖಯಾಲಿ ಶುರುವಾಗಿದ್ದು ಅವರು 2ನೇ ಕ್ಲಾಸ್‍ನಲ್ಲಿದ್ದಾಗ.

    ಅಪ್ಪ ಸಿನಿಮಾ ಆಪರೇಟರ್ ಆಗಿದ್ದರು. ಚಿತ್ರದ ಪ್ರಿಂಟ್‍ಗಳನ್ನು ಒಮ್ಮೊಮ್ಮೆ ಮನೆಗೂ ತಂದು ಪರಿಶೀಲಿಸುತ್ತಿದ್ದರು. ಆದರೆ, ಮಧುಸೂದನ್‍ಗೆ ಇಷ್ಟವಾಗಿದ್ದು ಆ ನೆಗೆಟಿವ್, ತಂತ್ರಜ್ಞಾನಕ್ಕಿಂತ ಕಥೆ. ಹೀಗಾಗಿ 2ನೇ ಕ್ಲಾಸ್‍ನಲ್ಲಿದ್ದಾಗಲೇ ಕಥೆ ಹೇಳುವ ಖಯಾಲಿಗೆ ಬಿದ್ದರು. 

    ಪುಟ್ಟ ಹುಡುಗನ ಉತ್ಸಾಹಕ್ಕೆ ಶಾಲೆಯಲ್ಲಿ ಪ್ರೋತ್ಸಾಹವೂ ಸಿಕ್ಕಿತು. ಮಧುಸೂದನ್ ಕತೆ, ಕವನಗಳನ್ನೆಲ್ಲ ಬರೆದು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಮಿಂಚಿದರು. ದೊಡ್ಡವರಾಗುತ್ತಾ ಆಗುತ್ತಾ ಹೆಚ್ಚು ಹೆಚ್ಚು ಓದುತ್ತಾ ಹೋದರು. ತೇಜಸ್ವಿ, ಯಂಡಮೂರಿ ವೀರೇಂದ್ರನಾಥ್, ನಾಗೇಶ್ ಹೆಗಡೆ, ತರಾಸು, ಎಸ್.ಎಲ್.ಭೈರಪ್ಪ ಮೊದಲಾದವರೆಂದರೆ ಇಷ್ಟ.

    ಹೀಗೆ ಚಿಕ್ಕ ವಯಸ್ಸಿನಿಂದ ಶುರುವಾದ ಕಥೆ ಹೇಳುವ ಅಭ್ಯಾಸ, ಓದಿನ ವ್ಯಾಪ್ತಿ, ಜೀವನ ಹಾಗೂ ಜೀವನದ ಸಾಹಸಗಳೇ ಸಿನಿಮಾದಲ್ಲಿದೆ. ಅಫ್‍ಕೋರ್ಸ್ ಅದೊಂದು ಜೀವನ ಕಥೆಯೂ ಹೌದು. ಒಂದು ಅಪ್ಪಟ ಮನರಂಜನೆಯ ಜೊತೆ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ ಮಧುಸೂದನ್.

  • 3 Gante 30 Days 30 Seconds Shooting Complete

    3 gante 30 days 30 seconds shooting complete

    The shooting of the film 3 Gante 30 Dina 30 Seconds starring Aru Gowda and Kavya Shetty is complete. The film is now on the editing table sources confirmed.  Aru Gowda who made his debut in Muddu Manase plays an advocate in 3 Gante 30 Dina 30 Seconds'.

    3gante_stills.jpg

    It is a thriller directed by new director GK Madhusudhan. Chandrashekhar R Padmashali is the producer. The film has music by Sridhar R Sambhram and Sri CrzayMindz is the editor. Devaraj, Sudharani, Chandrashekar (Edakau Gudda) are playing important roles in the film. 

  • 3 Gante 30 Dina 30 Second Audio Is A Hit

    3 gante 30 dina 30 second

    Sridhar Sambhram has another hit album in his kitty. The audio of the film 3 Gante 30 Dina 30 Second has become a big hit. The songs were released last week and have garnered very good response from the audience.

    Jayant Kaikini's lines for the songs have jelled well with Sambhram's tunes. The film has Aru Gowda and Kavya Shetty in the lead roles. The film is directed by newcomer GK Madhusudhan. Chandan Shetty has sung the title track of the film which has become a sensation with nearly 8 lakh views on a single online platform.

  • 3 Gante 30 Dina 30 Second Releasing on January 19th

    3 gante 30 dina 30 second

    The much publicized movie 3 Gante 30 Dina 30 Second starring Aru Gowda and Kavya Shetty is releasing on January 19th. Aru Gowda who made his debut in Muddu Manase plays an advocate in 3 Gante 30 Dina 30 Seconds

    It is a thriller directed by new director GK Madhusudhan. Chandrashekhar R Padmashali is the producer. The film has music by Sridhar R Sambhram and Sri CrzayMindz is the editor. Devaraj, Sudharani, Chandrashekar (Edakau Gudda) are playing important roles in the film.

    Sridhar Sambhram is the music director for the movie. Chandan Shetty has sung the title track of the film which has become a sensational hit.

     

  • 3 Gante 30 Dina 30 Second Review, Chitraloka Rating 3/5

    3 gante 30 minutes 30 seconds movie review

    3 Gante 30 Dina 30 Second is a thriller, every second of it. It is several thrilling elements packed into one quick and fast narrative that gives goosebumps to the audience in every scene. The first scene is about how the hero solves a very complicated problem in just three hours. Then has faces the toughest challenge of his life and it is a personal challenge. He has to win this in 30 days. Most of the story is about this 30-day-challenge. He has to get a TV anchor to make him love him. She is also the daughter of the owner of that channel. She is immune to love because of various personal reasons. How our hero manages to convince her forms this romantic tale. 

    Finally there is also a smaller thriller he has to fulfill in the end. Overall the film is an entertainment package. Arun Gowda and Kavya Shetty play the lead roles. Arun is an advocate while Kavya is the TV anchor. They have great chemistry between them and it is a treat to watch them on screen. They are ably supported by the other cast that includes Sudha Rani, Devaraj, Chandrashekar, Sundar, Ramesh Bhat and others. The incidents and characters of Devaraj and Sudharani are special. Devaraj plays an army man who has lost his vision, hearing and speech also. He gives an amazing performance without being able to show his eyes or speak. It is an award winning performance. 

    There are also very good technical details in the film. The cinematography is top class. There are some good songs which add value to the film. Crisp editing by Sri and the narrative that blends emotion and thrill elements in one flow are major advantages for the film. All the various characters are perfectly put together in an engaging story. The film also has a good message in the end. The explanation for love will sometimes leave you confused but that is how love is; confusing to most people and beyond definition. Many people have tried to clearly define love and failed. This film encompasses all of them and more than that. Even if you agree with love or are against it does not matter. This film will entertain you with love. 

    Chitraloka Rating - 3/5

  • 3 Gante 30 Dina 30 Second Songs Released

    3 gante 30 dina audio launched by hamsalekha

    The songs of '3 Gante 30 Dhina 30 Second' was released in a grand function held at the  Chowdaiah Memorial Hall in Bangalore. Music director Hamsalekha released the songs of the film.

    The event was attended by many celebrities from the Kannada film industry including senior directors Bhagawan, Bhargava, Joe Simon, Sunil Kumar Desai, producers Umesh Banakar, Soorappa Babu and others.

    '3 Gante 30 Dhina 30 Second' is being produced by Brain Share Creations Private Limited and is directed by G K Madhusudhan. The film stars Aru Gowda, Kavya Shetty and others in prominent roles. Sridhar Sambhram is the music director.

    Related Articles :-

    3 Gante 30 Days 30 Seconds Shooting Complete

  • 3 ಗಂಟೆ 30 ದಿನ 30 ಸೆಕೆಂಡ್ ಮರ್ಮವೇನು ಗೊತ್ತಾ..?

    3 gante 30 minutes 30 seconds movie image

    3 ಗಂಟೆ 30 ದಿನ 30 ಸೆಕೆಂಡು. ಟೈಟಲ್ಲೇ ವಿಚಿತ್ರ ಮತ್ತು ವಿಭಿನ್ನ. ಚಿತ್ರದ ಕಥೆಯೂ ಹಾಗೇ ವಿಭಿನ್ನವಾಗಿಯೇ ಇದೆ. ಸಿನಿಮಾದ ಟೈಟಲ್ ನೋಡಿದವರು, ಏನಿದರ ಮೀನಿಂಗು ಅಂತಾ ತಲೆಗೆ ಹುಳ ಬಿಟ್ಕೊಂಡಿರೋದಂತೂ ನಿಜ. ಲೆಕ್ಕದ ಪ್ರಕಾರ ಬಂದಿದ್ದರೆ, 30 ದಿನ ಮೊದಲು ಬರಬೇಕಿತ್ತು. ಆದರೆ, 3 ಗಂಟೆ ಬಂದು ಆಮೇಲೆ 30 ದಿನ ದಿ ಬರುತ್ತೆ. 30 ದಿನ ಆದ ಮೇಲೆ ಅರ್ಧ ನಿಮಿಷದ 30 ಸೆಕೆಂಡ್ ಯಾಕೆ ಬಂತು..? ಹೀಗೆ ಹತ್ತಾರು ಪ್ರಶ್ನೆಗಳು.

    ಇವುಗಳಿಗೆ ಕಾರಣ ಹೇಳ್ತೀವಿ. ಚಿತ್ರದ ಹೀರೋ ಅರೂ ಗೌಡ ವಕೀಲ. ಎಂಥ ಕೇಸೇ ಇರಲಿ, ಇತ್ಯರ್ಥವಾಗದೆ ಒದ್ದಾಡುತ್ತಿರಲಿ, ಅದರಲ್ಲಿ ಎಂಥದ್ದೇ ಸಮಸ್ಯೆ ಇರಲಿ.. ಕೇವಲ 3 ಗಂಟೆಯಲ್ಲಿ.. ಅದೂ ಕೋರ್ಟ್‍ನ ಹೊರಗೇ ಪರಿಹಾರ ಹೇಳ್ತಾನೆ. ಅದು ಕೇವಲ 3 ಗಂಟೆಯಲ್ಲಿ.

    ಹೀಗೆ 3 ಗಂಟೆಯಲ್ಲಿ ಪರಿಹಾರ ಹೇಳುವ ನಾಯಕ ಮತ್ತು ರಾಜ್ಯಕ್ಕೆಲ್ಲ ಬುದ್ದಿ ಹೇಳೋ ನಾಯಕಿ ಕಾವ್ಯಾಶೆಟ್ಟಿ ಮಧ್ಯೆ ಒಂದು ಚಾಲೆಂಜ್ ಉದ್ಭವವಾಗುತ್ತೆ. ಅದು 30 ದಿನಗಳ ರಿಯಾಲಿಟಿ ಶೋ. ಅದು ಮೇಲ್ನೋಟಕ್ಕೆ ಸರಳವಾಗಿ ಕಂಡರೂ, ಅಷ್ಟು ಸರಳವಲ್ಲ. ಅದು 30 ದಿನ.

    ಆದರೆ, ಇಡೀ ಸಿನಿಮಾಗೆ 30 ಸೆಕೆಂಡ್‍ನಲ್ಲಿ ಪರಿಹಾರ, ತಿರುವು ಸಿಗ್ತಾ ಹೋಗುತ್ತೆ. ಅರ್ಧ ನಿಮಿಷದಲ್ಲಿ ಆಗುವ ಬದಲಾವಣೆಗಳೇ ಚಿತ್ರದ ಹೈಲೈಟ್ಸ್. ಅದು 30 ಸೆಕೆಂಡ್ಸ್.

    ಜನವರಿ 19ಕ್ಕೆ 3 ಗಂಟೆ ಬಿಡುವು ಮಾಡಿಕೊಳ್ಳಿ. 30 ದಿನ, 30 ಸೆಕೆಂಡ್‍ನ ಲವ್ & ಥ್ರಿಲ್ ಅನುಭವಿಸಿ.

  • 3 ಗಂಟೆ 30 ದಿನ 30 ಸೆಕೆಂಡ್ ಹಿಂದಿನ ನೈಜ ಕಥೆ

    3 gante movie real story

    3 ಗಂಟೆ 30 ದಿನ 30 ಸೆಕೆಂಡ್ ಚಿತ್ರದ ಕಥೆಯಲ್ಲಿ ಹೀರೋ ಲಾಯರ್, ಹೀರೋಯಿನ್ ಟಿವಿ ಆ್ಯಂಕರ್. ದೇವರಾಜ್ ಅಂಗವಿಕಲ ಯೋಧರಾದರೆ, ಅವರ ಸಂಗಾತಿ ಸುಧಾರಾಣಿ. ಎಡಕಲ್ಲುಗುಡ್ಡದ ಚಂದ್ರಶೇಖರ್, ನಾಯಕಿಯ ತಂದೆ. ನಾಯಕ ಮತ್ತು ನಾಯಕಿಯ ಮಧ್ಯೆ ಒಂದು ಚಾಲೆಂಜ್ ಬಿದ್ದು ಶುರುವಾಗುವ ಕಥೆ, ವಿಭಿನ್ನ ಆಯಾಮಕ್ಕೆ ಹೊರಳಿಕೊಳ್ಳುತ್ತೆ. ಈಗಿನ ಯೂತ್ ಟ್ರೆಂಡ್‍ಗೆ ತಕ್ಕಂತೆ ಸಿದ್ಧವಾಗಿರುವ ಚಿತ್ರದಲ್ಲಿ ಪ್ರೀತಿ, ಥ್ರಿಲ್ಲರ್, ಮನರಂಜನೆ, ಕಚಗುಳಿ ಇಡುವ ಡೈಲಾಗ್, ಇಂಪಾದ ಹಾಡುಗಳು, ಮನಸೆಳೆಯುವ ಛಾಯಾಗ್ರಹಣ ಎಲ್ಲವೂ ಇದೆ.

    ಜಾಹೀರಾತು ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಮಧುಸೂದನ್ ನಿರ್ದೇಶನದ ಈ ಚಿತ್ರಕ್ಕೆ ನಿಜವಾಗಲೂ ಸ್ಫೂರ್ತಿಯಾಗಿದ್ದು ಒಂದು ನೈಜಕಥೆಯಂತೆ. ಅವರು ಕಣ್ಣಾರೆ ಕಂಡ ಪ್ರೇಮ ಪ್ರಕರಣವೊಂದರಲ್ಲಿ ಮದುವೆಗೆ ಜಾತಿ ಅಡ್ಡಿಯಾಯ್ತು. ಅಂತಸ್ತಿನ ಸಮಸ್ಯೆಯೂ ಉದ್ಭವವಾಯ್ತು. ನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ. ಆಗ ಶುರುವಾದ ತಳಮಳ 3 ಗಂಟೆ 30 ದಿನ 30 ಸೆಕೆಂಡ್ ಚಿತ್ರಕ್ಕೆ ಕಥೆಯಾಯ್ತು ಎಂದು ಹೇಳಿಕೊಂಡಿದ್ದಾರೆ ಮಧುಸೂದನ್.

    ಆ ಸಾವಿನಿಂದ ಅವನು ಸಾಧಿಸಿದ್ದಾದರೂ ಏನು..? ಮನೆಯವರು, ಗೆಳೆಯರು ಒಂದಷ್ಟು ದಿನ ಕಣ್ಣೀರು ಹಾಕಿದರು. ಆಮೇಲೆ ಮರೆತರು. ಜೀವನ ನಡೆಯುತ್ತಲೇ ಇತ್ತು. ಯೌವ್ವನದಲ್ಲಿ ಹುಟ್ಟಿಕೊಳ್ಳುವ ಭಾವನೆಗಳಿಗೆ ನಾವು ಪ್ರೀತಿಯ ಮುದ್ರೆ ಒತ್ತುದ್ದೀವೆಯೋ.. ಅಥವಾ ಪ್ರೀತಿಯನ್ನು ಉಳಿಸಿಕೊಳ್ಳಲು ನಮಗೆ ಶಕ್ತಿಯಿಲ್ಲವೋ ಎಂಬ ತಾಕಲಾಟಗಳನ್ನಿಟ್ಟುಕೊಂಡು ಚಿತ್ರದ ಕಥೆ ಹೆಣೆದಿದ್ದಾರೆ ನಿರ್ದೇಶಕರು. ಸಿನಿಮಾ ಥಿಯೇಟರುಗಳಲ್ಲಿದೆ.

  • 3 ಗಂಟೆ 30 ನಿಮಿಷ 30 ಸೆಕೆಂಡು, ದೇವರಾಜ್‍ಗೆ ಕಣ್ಣು ಕಾಣಲ್ಲ

    3 gante movie image

    ಕನ್ನಡದಲ್ಲಿ ಅಂಧರ ಪಾತ್ರಧಾರಿಗಳು ಹೆಚ್ಚುತ್ತಿದ್ದಾರೆ. ಇತ್ತೀಚೆಗಷ್ಟೇ ಶಿವರಾಜ್ ಕುಮಾರ್ ಕವಚ ಚಿತ್ರದಲ್ಲಿ ಅಂಧರಾಗುತ್ತಿದ್ದರೆ, ಸಂಹಾರದಲ್ಲಿ ಚಿರಂಜೀವಿ ಸರ್ಜಾ ಕುರುಡನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಇವರಿಬ್ಬರಿಗಿಂತ ಅಂಧನಾಗಿ ಮೊದಲು ಬರುತ್ತಿರುವುದು ಡೈನಮಿಕ್ ಸ್ಟಾರ್ ದೇವರಾಜ್.

    3 ಗಂಟೆ, 30 ದಿನ, 30 ಸೆಕೆಂಡ್ ಚಿತ್ರದಲ್ಲಿ ದೇವರಾಜ್ ಅವರದ್ದು ಅಂಧನ ಪಾತ್ರ. ಇಡೀ ಚಿತ್ರದ ಹೈಲೈಟೇ ಅದು. ಪಾಕಿಸ್ತಾನ ವಿರುದ್ಧ ಯುದ್ಧದಲ್ಲಿ ಕಣ್ಣು ಕಳೆದುಕೊಂಡಿರುವ ಸೈನಿಕನ ಪಾತ್ರ ದೇವರಾಜ್ ಅವರದ್ದು. ಇಡೀ ಚಿತ್ರ ಟೇಕಾಫ್ ಆಗುವುದೇ ದೇವರಾಜ್ ಪಾತ್ರದಿಂದ ಎನ್ನುತ್ತಾರೆ ನಿರ್ದೇಶಕ ಮಧುಸೂದನ್. ಚಿತ್ರವನ್ನು ಭರ್ಜರಿಯಾಗಿ ತೆರೆಗೆ ತರುತ್ತಿದ್ದಾರೆ ನಿರ್ಮಾಪಕ ಚಂದ್ರಶೇಖರ್ ಆರ್ ಪದ್ಮಸಾಲಿ.

    ಅಂದಹಾಗೆ ದೇವರಾಜ್‍ಗೆ ಅಂಧನ ಪಾತ್ರ ಹೊಸದಲ್ಲ. ಈ ಹಿಂದೆ ಎಸ್‍ಪಿ ಬಾರ್ಗವಿ ಚಿತ್ರದಲ್ಲಿ ಇರುಳು ಕುರುಡನ ಪಾತ್ರದಲ್ಲಿ ಮಿಂಚಿದ್ದರು. ಇತ್ತೀಚೆಗೆ ವಿಭಿನ್ನ ಪಾತ್ರಗಳಿಂದ ಅಭಿನಯದ ವೈಭವ ಪರಿಚಯಿಸುತ್ತಿರುವ ದೇವರಾಜ್‍ಗೆ, 3 ಗಂಟೆ, 30 ದಿನ, ಸೆಕೆಂಡಿನಲ್ಲೂ ವಿಶೇಷ ಪಾತ್ರ ದಕ್ಕಿದೆ.

  • 30 ಸೆಕೆಂಡಿನ ಕಥೆ ಏನೋ ಡಿಫರೆಂಟ್ ಕಣ್ರಿ..

    3 gante 30 minutes 30 seconds movie image

    3 ಗಂಟೆ, 30 ದಿನ, 30 ಸೆಕೆಂಡು.. ಟೈಟಲ್‍ನಿಂದಲೇ ವಿಚಿತ್ರ ಕುತೂಹಲ ಮೂಡಿಸಿರುವ ಸಿನಿಮಾ. ಟೈಟಲ್ ಅಷ್ಟೇ ಅಲ್ಲ, ಕಥೆಯೂ ಹಾಗೆಯೇ ಇದೆಯಂತೆ. ಇದು ಒಂಥರಾ ಲವ್ ಚಾಲೆಂಜ್ ಚಿತ್ರ. 

    ಚಿತ್ರದ ಹೀರೋ ಅವಿನಾಶ್, ಎಂಥವನೆಂದರೆ, ಸಮಸ್ಯೆ ಯಾವುದೇ ಇರಲಿ ಬಗೆಹರಿಸಬಲ್ಲ ಚಾಣಾಕ್ಷ. ರಾಜಕಾರಣಿಯೊಬ್ಬನ ಮಗನ ಸಮಸ್ಯೆ ನಿವಾರಿಸಲು, ಇಡೀ ರಾಜ್ಯವೇ ತುದಿಗಾಲಲ್ಲಿ ಕೂರುವಂತಹ ನಾಟಕವೊಂದನ್ನು ಸೃಷ್ಟಿಸಿಬಿಡುತ್ತಾನೆ.

    ಇನ್ನು ನಾಯಕಿ ಒಬ್ಬ ಟಿವಿ ಆ್ಯಂಕರ್. ಆಕೆ ಪ್ರೀತಿ ಸತ್ಯಾನಾ..? ಮಿಥ್ಯಾನಾ..? ಅನ್ನೋ ಟಿವಿ ಡಿಬೇಟ್ ಶುರು ಮಾಡುತ್ತಾಳೆ. ಈ ಡಿಬೇಟ್‍ನಲ್ಲಿ ನಾಯಕಿ ಹಾಗೂ ನಾಯಕನ ಮಧ್ಯೆ ಸವಾಲ್ ಬೀಳುತ್ತೆ. ಭಾವನೆಗಳನ್ನೇ ನಂಬದ ನಾಯಕಿ, ಮೌಲ್ಯಗಳೇ ಇಲ್ಲದ ನಾಯಕ, ಅವರ ಮಧ್ಯೆ ಪ್ರೀತಿಯೇ ದೇವರೆಂದು ಭಾವಿಸಿ ಜೀವಿಸುತ್ತಿರುವ ಪ್ರೇಮಿಗಳು.. ಹೀಗೆ ಕಥೆ ಥ್ರಿಲ್ಲಾಗಿ ಸಾಗುತ್ತೆ.

    ಇಂಥ ಕಥೆಗೆ 3 ಗಂಟೆ, 30 ದಿನ, 30 ಸೆಕೆಂಡು.. ಎಂದೇಕೆ ಹೆಸರಿಟ್ಟರು ಅನ್ನೋದೇ ಸಸ್ಪೆನ್ಸ್. ಸೆಕೆಂಡುಗಳಲ್ಲಿ ಅರ್ಥವಾಗುತ್ತೆ. ಸಿನಿಮಾ ನೋಡಿ.

  • 30 ಸೆಕೆಂಡ್ ಚಿತ್ರಕ್ಕೆ 35 ದಿನ ಮ್ಯೂಸಿಕ್

    3 gante 30 minutes 30 seconds movie image

    3 ಗಂಟೆ 30 ದಿನ 30 ಸೆಕೆಂಡ್ ಚಿತ್ರದಲ್ಲಿ ಥ್ರಿಲ್ಲರ್ ಸ್ಟೋರಿ ಇದೆ. ಥ್ರಿಲ್ಲರ್ ಕಥೆಯೇ ಚಿತ್ರದ ಅತಿ ದೊಡ್ಡ ಆಕರ್ಷಣೆ. ಥ್ರಿಲ್ಲರ್ ಸಿನಿಮಾಗಳಲ್ಲಿ ಅತ್ಯಂತ ಮುಖ್ಯವಾಗಿ ಬೇಕಿರುವುದು ಹಿನ್ನೆಲೆ ಸಂಗೀತ. ಹಿನ್ನೆಲೆ ಸಂಗೀತ ಕೈ ಕೊಟ್ಟರೆ, ಇಡೀ ಚಿತ್ರವೇ ದಾರಿ ತಪ್ಪುವ ಭೀತಿ ಇರುತ್ತೆ. ಹೀಗಾಗಿಯೇ ಈ ಚಿತ್ರಕ್ಕೆ ಸತತ 35 ದಿನ ಬ್ಯಾಕ್‍ಗ್ರೌಂಡ್ ಮ್ಯೂಸಿಕ್‍ಗಾಗಿಯೇ ಕೆಲಸ ಮಾಡಿದೆ ಈ ಟೀಂ.

    ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್ ಅವರಿಗಂತೂ ಇದೊಂದು ಮರೆಯಲಾಗದ ಅನುಭವ. ಪ್ರತಿ ದೃಶ್ಯಕ್ಕೂ ಸರಿಯಾದ ಬಿಟ್ಸ್ ಕೂಡಿಸುವ ಕೆಲಸ ಸುಲಭದ್ದಾಗಿರಲಿಲ್ಲ ಎಂದಿದ್ದಾರೆ ಶ್ರೀಧರ್. ಸೆಕೆಂಡು ಸೆಕೆಂಡುಗಳಲ್ಲಿ ಚಿತ್ರದ ಮೂಡ್ ಬದಲಾಗುತ್ತೆ. ಅದಕ್ಕೆ ತಕ್ಕಂತೆ ಹಿನ್ನೆಲೆ ಸಂಗೀತವೂ ಬದಲಾಗಬೇಕು. ಅದು ಸಹಜವಾಗಿ ಕೇಳಿಸಬೇಕು. ಯಾವುದೇ ಸಂಗೀತ ನಿರ್ದೇಶಕನಿಗೆ ಅದೊಂದು ದೊಡ್ಡ ಸವಾಲು ಎನ್ನುವುದು ಶ್ರೀಧರ್ ಅವರ ಆಭಿಪ್ರಾಯ.

    ಅರೂ ಗೌಡ, ಕಾವ್ಯಾಶೆಟ್ಟಿ ನಾಯಕ-ನಾಯಕಿಯರಾಗಿದ್ದರೆ, ದೇವರಾಜ್,ಸುಧಾರಾಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಎಡಕಲ್ಲು ಗುಡ್ಡದ ಚಂದ್ರಶೇಖರ್, ಯಮುನಾ, ಮೇಘನಾ, ಜಯಲಕ್ಷ್ಮೀ ಪಾಟೀಲ್, ಸುಂದರ್ ಮೊದಲಾದವರು ನಟಿಸಿರುವ ಚಿತ್ರದಲ್ಲಿ ಸಂಗೀತದ ಪಾತ್ರ ದೊಡ್ಡದು ಎಂದು ಖುಷಿಪಟ್ಟಿದ್ದಾರೆ ಅರೂಗೌಡ.

     

  • 30 ಸೆಕೆಂಡ್‍ಗೆ ಇನ್ನು ಮೂರು ದಿನ..!

    countdown begins for 3 gante

    3 ಗಂಟೆ 30 ದಿನ 30 ಸೆಕೆಂಡ್. ವಿಭಿನ್ನ ಟೈಟಲ್‍ನಿಂದ ಗಮನ ಸೆಳೆದಿರುವ ಈ ಸಿನಿಮಾ ಈ ವಾರವೇ ತೆರೆಗೆ ಬರುತ್ತಿದೆ. ಯಾವುದೇ ಫಾರ್ಮುಲಾ, ಟ್ರೆಂಡ್‍ನ ಹಿಂದೆ ಬೀಳದೆ ವಿಭಿನ್ನವಾಗಿ ಮಾಡಿರುವ ಸಿನಿಮಾ ನಮ್ಮದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಾರೆ ನಿರ್ದೇಶಕ ಮಧುಸೂದನ್.

    ಚಿತ್ರದ ಕಥೆಯೇನು ಎಂದರೆ ಅದೊಂದು ಟಾಸ್ಕ್ ಅಂತಾರೆ ಡೈರೆಕ್ಟರ್. ಮೊದಲು ಅದು 30 ಗಂಟೆಗಳ ಟಾಸ್ಕ್. ನಂತರ 30 ದಿನಗಳ ಸೀರಿಯಸ್ ಚಾಲೆಂಜ್ ಆಗುತ್ತೆ. ಕೊನೆಗೆ 30 ಸೆಕೆಂಡ್‍ನಲ್ಲಿ ಟ್ವಿಸ್ಟ್ ಇಡೀ ಚಿತ್ರವನ್ನೇ ಬದಲಾಯಿಸುತ್ತೆ. ಈ ಕಾರಣಕ್ಕಾಗಿ 3 ಗಂಟೆ, 30 ದಿನ, 30 ಸೆಕೆಂಡ್ ಅನ್ನೋ ಟೈಟಲ್ ಚಿತ್ರಕ್ಕೆ ಹೇಳಿ ಮಾಡಿಸಿದಂತಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ ನಿರ್ಮಾಪಕ ಮಧುಸೂದನ್.

     

  • ಆನ್‍ಲೈನ್ ವೀಕ್ಷಕರ ಮನ ಮೆಚ್ಚಿದ 30 ಸೆಕೆಂಡ್

    3 gante is an online hit

    3 ದಿನ, 30 ಗಂಟೆ, 30 ಸೆಕೆಂಡು ಚಿತ್ರದ ಬಿಡುಗಡೆ ಹತ್ತಿರವಾಗುತ್ತಿದೆ. ಚಿತ್ರದ ಕಥೆ, ಟ್ರೇಲರ್ ಆನ್‍ಲೈನ್‍ನಲ್ಲಿ ಮೋಡಿ ಮಾಡಿಬಿಟ್ಟಿದೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಮೂರೇ ದಿನದಲ್ಲಿ ಟ್ರೇಲರ್ ಮೆಚ್ಚಿದವರು 5 ಲಕ್ಷಕ್ಕೂ ಹೆಚ್ಚು ಜನ.

    ಚಿತ್ರದ ಟೈಟಲ್ ಟ್ರ್ಯಾಕ್ ಅಂತೂ ಸೂಪರ್ ಹಿಟ್ ಆಗಿದೆ. ಚಿತ್ರದ ಟೈಟಲ್ ಟ್ರ್ಯಾಕ್‍ನ್ನು ಈಗಾಗಲೇ ಒಂದು ಮಿಲಿಯನ್‍ಗೂ ಹೆಚ್ಚು ಮಂದಿ ನೋಡಿ ಮೆಚ್ಚಿದ್ದಾರೆ. ಅರುಣ್ ಗೌಡ, ಕಾವ್ಯಾ ಶೆಟ್ಟಿ ಅಭಿನಯದ ಚಿತ್ರ ಬಿಡುಗಡೆ ಸಮೀಪಿಸುತ್ತಿದ್ದಂತೆ ಕಾಲೇಜು ಕುಮಾರ ಕುಮಾರಿಯರ ಟ್ರೆಂಡ್ ಆಗಿಬಿಟ್ಟಿದೆ.

    ಯವ ಸಮೂಹವನ್ನೇ ದೃಷ್ಟಿಯಲ್ಲಿಟ್ಟುಕೊಂಡು ನಿರೂಪಿಸಿರುವ ಟ್ರೇಲರ್‍ನಲ್ಲಿ ಯುವಕ, ಯುವತಿಯರ ಕಿವಿಗೆ ರಸಗವಳ ಕೊಟ್ಟಿದ್ದಾರೆ ನಿರ್ದೇಶಕರು. ಕುತೂಹಲವನ್ನೂ ಮೂಡಿಸಿಬಿಟ್ಟಿದ್ದಾರೆ.

    ಚಿತ್ರದಲ್ಲಿ ಬಳಸಿಕೊಳ್ಳಲು ಸಾಧ್ಯವಾಗದ ಕೆಲವು ಡಿಲೀಟೆಡ್ ಸೀನ್‍ಗಳನ್ನೂ ಯೂಟ್ಯೂಬ್‍ಗೆ ಬಿಡುವ ಮೂಲಕ ಕುತೂಹಲವನ್ನು ಹೆಚ್ಚಿಸುತ್ತಲೇ ಇದೆ 3 ಗಂಟೆ, 30 ದಿನ 30 ಸೆಕೆಂಡು.

  • ಓಲ್ಡ್ ಈಸ್ ಗೋಲ್ಡ್ ತಾರೆಯರೆಲ್ಲ 30 ಸೆಕೆಂಡ್‍ನಲ್ಲಿ..

    30 seconds special stars

    30 ಗಂಟೆ 30 ದಿನ 30 ಸೆಕೆಂಡು.. ಕೇವಲ ಟೈಟಲ್‍ನಿಂದಷ್ಟೇ ಅಲ್ಲ, ವಿಭಿನ್ನ ಕಥಾ ಹಂದರವೂ ಕುತೂಹಲ ಕೆರಳಿಸುತ್ತಿದೆ. ಸ್ಪೆಷಲ್‍ಗಳ ಮೂಟೆಯನ್ನೇ ಹೊತ್ತು ತರುತ್ತಿರುವ ಚಿತ್ರದಲ್ಲಿ 80, 90ರ ದಶಕದ ಹಲವು ತಾರೆಯರು ಒಟ್ಟಿಗೇ ಸೇರಿರುವುದು ಇನ್ನೊಂದು ವಿಶೇಷ.

    ನಾಯಕ ಅರೂ ಗೌಡ, ನಾಯಕಿ ಕಾವ್ಯಾ ಶೆಟ್ಟಿ. ಇಬ್ಬರ ಚಾಲೆಂಜ್‍ನಿಂದ ಶುರುವಾಗುವ ಕಥೆಯಲ್ಲಿ ಎಡಕಲ್ಲು ಗುಡ್ಡದ ಚಂದ್ರಶೇಖರ್, ನಾಯಕಿಯ ತಂದೆಯ ಪಾತ್ರದಲ್ಲಿದ್ದಾರೆ. ಮಗಳ ಮೇಲಿನ ಮಮಕಾರದಿಂದ ಎಲ್ಲ ಅಪಾಯಗಳನ್ನೂ ಮೈಮೇಲೆ ಎಳೆದುಕೊಳ್ಳುವ ಅಪ್ಪನ ಪಾತ್ರ ಚಂದ್ರಶೇಖರ್ ಅವರದ್ದು.

    ಮುಕ್ತಮುಕ್ತ ಖ್ಯಾತಿಯ ಜಯಲಕ್ಷ್ಮಿ ಅವರದ್ದು ತ್ಯಾಗಮಯಿ ಪಾತ್ರದಲ್ಲಿದ್ದರೆ, ನಟಿ ಯಮುನಾ ನಾಯಕನ ತಾಯಿಯ ಪಾತ್ರದಲ್ಲಿದ್ದಾರೆ. ಮಗನ ಒಳಿತಿಗಾಗಿ ಸದಾ ಪರಿತಪಿಸುವ ಹೆಂಗರುಳಿನ ಪಾತ್ರ ಯಮುನಾ ಅವರದ್ದು. ಇನ್ನು ಸುಂದರ್ ಅವರದ್ದು ನಾಯಕನ ತಂದೆಯ ಪಾತ್ರ. 

    ಇನ್ನು ಇಡೀ ಚಿತ್ರದಲ್ಲಿನ ಅತಿ ದೊಡ್ಡ ಅಟ್ರ್ಯಾಕ್ಷನ್ ದೇವರಾಜ್-ಸುಧಾರಾಣಿ. ದೇವರಾಜ್ ಕಣ್ಣು ಕಾಣಿಸದ, ಕಿವಿ ಕೇಳಿಸದ, ಮಾತೂ ಬಾರದ ನಿವೃತ್ತ ಮಿಲಿಟರಿ ಆಫೀಸರ್ ಪಾತ್ರದಲ್ಲಿದ್ದರೆ, ಸುಧಾರಾಣಿ ದೇವರಾಜ್‍ಗೆ ಜೋಡಿಯಾಗಿದ್ದಾರೆ. ಆಕೆ ದೇವರಾಜ್‍ಗೆ ಟೀಚರ್ ಕೂಡಾ ಹೌದು.

    30 ಸೆಕೆಂಡ್‍ನ ವಿಶೇಷಗಳು ಇನ್ನೂ ಹಲವಾರಿವೆ. ವಿಶೇಷಗಳನ್ನೆಲ್ಲ ಜನವರಿ 19ರ ಥಿಯೇಟರುಗಳಲ್ಲಿ ಕಣ್ತುಂಬಿಕೊಳ್ಳಬಹುದು.

  • ದೇವರಾಜ್‍ಗೂ ಭಯ ಹುಟ್ಟಿಸಿದ್ದ ಪಾತ್ರ ಅದು..!

    devaraj image

    ಡೈನಮಿಕ್ ಸ್ಟಾರ್ ದೇವರಾಜ್, ಎಂಥಹ ಕಲಾವಿದ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ರಂಗಭೂಮಿಯಿಂದ ಬಂದಿರುವ, ಚಿತ್ರರಂಗದಲ್ಲೇ ಸುಮಾರು 30 ವರ್ಷ ಕಳೆದಿರುವ ದೇವರಾಜ್, ಎಂತಹ ಪಾತ್ರಗಳನ್ನೇ ಆದರೂ ಲೀಲಾಜಾಲವಾಗಿ ನಟಿಸಬಲ್ಲ ಕಲಾವಿದ. ಅಂತಹ ದೇವರಾಜ್ ಕೂಡಾ ನಟಿಸೋಕೆ ಎರಡು ಬಾರಿ ಯೋಚಿಸುವಂತಹ ಪಾತ್ರವೊಂದು ಬಂದಿತ್ತಂತೆ. ಈ ಪಾತ್ರ ಮಾಡೋಕೆ ನನ್ನಿಂದ ಸಾಧ್ಯಾನಾ ಎಂದು ಯೋಚಿಸಿ, ಆಗಲ್ಲ ಎಂದು ಚಿತ್ರತಂಡಕ್ಕೆ ವಾಪಸ್ ಕಳಿಸಿದ್ದರಂತೆ. ಆದರೂ, ಚಿತ್ರತಂಡದವರು ಹಠ ಬಿಡದೆ.. ದೇವರಾಜ್‍ರನ್ನು ಒಪ್ಪಿಸಿ ಪಾತ್ರವನ್ನು ಮಾಡಿಸಿದ್ದಾರೆ.

    ಈ ಪಾತ್ರ ಮಾಡೋಕೆ ನನ್ನಿಂದ ಆಗುತ್ತಾ ಎಂದು ದೇವರಾಜ್ ಯೋಚಿಸುವಂತೆ ಮಾಡಿದ್ದ ಪಾತ್ರ, 3 ಗಂಟೆ 30 ದಿನ 30 ಸೆಕೆಂಡ್ ಚಿತ್ರದ ಅಶಕ್ತ ಯೋಧನ ಪಾತ್ರ. ಕಣ್ಣು ಕಾಣಲ್ಲ, ಕಿವಿ ಕೇಳಲ್ಲ, ಮಾತು ಬರಲ್ಲ.. ಇಂಥ ಪಾತ್ರವನ್ನು ನಿಭಾಯಿಸುವುದೇ ಹೇಗೆ ಅನ್ನೋದೇ ದೊಡ್ಡ ಚಾಲೆಂಜ್. ಆದರೆ, ಅಭಿನಯಿಸುತ್ತಾ ಹೋದ ಮೇಲೆ ಸಲೀಸಾಯ್ತು. ನನಗಿಂತ ಹೆಚ್ಚಾಗಿ ಚಿತ್ರತಂಡಕ್ಕೆ ಖುಷಿಯಾಯ್ತು ಎಂದು ಹೇಳಿಕೊಂಡಿದ್ದಾರೆ ದೇವರಾಜ್.

    ನನ್ನ ಬಾಡಿ ಲಾಂಗ್ವೇಜ್ ನೊಡಿ ಜನ ನಗಬಹುದೇನೋ ಎಂಬ ಭಯ ಇದೆ. ಆದರೆ, ನಿರ್ದೇಶಕರು ವಿಶ್ವಾಸದಿಂದಿದ್ದಾರೆ. ಜೊತೆಗೆ ಸುಧಾರಾಣಿ ಇದ್ದ ಕಾರಣ, ಅಭಿನಯಿಸೋಕೆ ನನಗೂ ಕಂಪರ್ಟಬಲ್ ಆಗಿತ್ತು ಎಂದು ಹೇಳಿದ್ದಾರೆ ದೇವರಾಜ್. ಚಿತ್ರ ಇದೇ ಶುಕ್ರವಾರ ತೆರೆಗೆ ಬರುತ್ತಿದೆ.

  • ಪಾಕ್‍ನ ಸಾವಿರಾರು ಸೈನಿಕರನ್ನು ಕ್ಷಣದಲ್ಲಿ ಸಮಾಧಿ ಮಾಡಿದ್ದ ಸೈನಿಕ..!

    great warrior story

    ನಮಗೆ ಕಾರ್ಗಿಲ್ ಕಥೆ ಗೊತ್ತು. ಪಾಕ್ ಸೈನಿಕರನ್ನು ನಮ್ಮ ಸೈನಿಕರು ಹೇಗೆ ಸದೆಬಡಿದರು, ಪ್ರಾಣಾರ್ಪಣೆ ಮಾಡಿದವರೆಷ್ಟು ಜನ.? ಪಾಕಿಸ್ತಾನದ ಕುತಂತ್ರ ಹೇಗಿತ್ತು..? ಹೀಗೆ ನಮಗೆ ಇಂಥ ಹಲವಾರು ಕಥೆಗಳು ಗೊತ್ತು. ಆಧರೆ, ಈ ಕಥೆ ನಿಮಗೆ ಗೊತ್ತಿರುವ ಸಾಧ್ಯತೆ ಕಡಿಮೆ. ಹಾಗೆ ನೋಡಿದರೆ, ಈ ಯೋಧನ ಪರಾಕ್ರಮ, ಸಮಯಸ್ಫೂರ್ತಿಯ ಗೆಲುವು ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು ಎಂಬ ವಾದವೂ ಇದೆ.

    ಈ ಘಟನೆ ನಡೆದಿದ್ದು ಕಾರ್ಗಿಲ್ ಯುದ್ಧ ಆರಂಭಕ್ಕೂ ಮುನ್ನ. ನೀಲಂ ಕಣಿವೆಯಲ್ಲಿ ಇಂಡಿಯನ್ ಆರ್ಮಿ ಫಾರ್ವರ್ಡ್ ಲಾಜಿಸ್ಟಿಕ್ ಬೇಸ್‍ನಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಪಾಕಿಸ್ತಾನದ ಸಾವಿರಾರು ಯೋಧರು, 40 ಟ್ಯಾಂಕರ್ ಆಕ್ರಮಣಕ್ಕೆ ಸಿದ್ಧರಾಗಿದ್ದರು. ಆದರೆ, ಭಾರತದ ಬಳಿ ಇದ್ದದ್ದು ಕೇವಲ ನೂರು ಸೈನಿಕರು. ಸ್ವಲ್ಪ ಏಮಾರಿದರೆ ಟಿತ್‍ಪಾಲ್ ಪ್ರಾಂತ್ಯ ಕೈತಪ್ಪುವ ಭೀತಿಯಿತ್ತು. 

    ಆದರೆ ಅಲ್ಲೊಬ್ಬ ಸೈನಿಕನಿದ್ದ. ಆತ ಎಂತಹ ಪರಾಕ್ರಮ & ಬುದ್ದಿವಂತಿಕೆ ಮೆರೆದನೆಂದರೆ, ಪಾಕ್ ಸೈನಿಕರು ಗೊತ್ತೇ ಆಗದಂತೆ ಸಮಾಧಿಯಾಗಿಬಿಟ್ಟರು. ಆಗ ಅಲ್ಲಿದ್ದ ಯೋಧ ಕ್ಯಾ.ಸುಂದರಂ, ತಕ್ಷಣ ಶೌರ್ಯ ಮತ್ತು ತಲೆ ಎರಡನ್ನೂ ಉಪಯೋಗಿಸಿದರು.ಅಲ್ಲಿದ್ದ 30 ಡಿಗ್ರಿ ಆ್ಯಂಗಲ್‍ನಲ್ಲಿದ್ದ ಮಾಸ್ ರಾಕ್ ಬಂಡೆಯೊಂದರ ಬಿರುಕನ್ನು ಗುರುತಿಸಿದ್ದರು. ಅದು ಬಿರುಕುಬಿಟ್ಟಿತ್ತು. ತಡಮಾಡದೆ, ತಮ್ಮ ಸೈನಿಕರಿಂದ ಕವರ್ ಫೈರಿಂಗ್ ತೆಗೆದುಕೊಂಡು ಮುಂದುವರಿದರು. ಆ ಬಿರುಕಿಗೇ ಗ್ರೈನೇಡ್ ಫಿಕ್ಸ್ ಮಾಡಿ ನೆಗೆದುಬಿಟ್ಟರು. 

    ನಂತರ ಸೃಷ್ಟಿಯಾಗಿದ್ದು ಹಿಮಪಾತ. ಹಿಮಪಾತ ಬಿದ್ದಿದ್ದು ದಾಳಿಗೆ ಸಿದ್ಧರಾಗಿದ್ದ ಪಾಕ್ ಸೈನಿಕರ ಮೇಲೆ. ನೋಡ ನೋಡುತ್ತಲೇ ಸಮಾಧಿಯಾಗಿ ಹೋದರು. ಇಂದಿಗೂ ಅದನ್ನು ಪಾಕಿಸ್ತಾನ ನೈಸರ್ಗಿಕ ಹಿಮಪಾತ ಎಂದು ಹೇಳಿಕೊಂಡೇ ಬರುತ್ತಿದೆ.

    ಆದರೆ, ಅಂದು ಶಿಖರದ ಮೇಲೆ ಹೋಗಿ, ಬಿರುಕಿಗೆ ಗ್ರೈನೇಡ್ ಇಟ್ಟು ಬಂದ ಕ್ಯಾ. ಸುಂದರಂ ಇಂದಿಗೂ ಇದ್ದಾರೆ. ಅಂದಿನ ಆ ಪರಾಕ್ರಮ ಅವರ ಬದುಕನ್ನೇ ಕಿತ್ತುಕೊಂಡಿದೆ. ಅವರಿಗೆ ಕಣ್ಣು ಕಾಣಲ್ಲ. ಕಿವಿ ಕೇಳಲ್ಲ. ಮಾತನಾಡೋಕೆ ಆಗಲ್ಲ. 

    ಬೇರೆಯವರಾಗಿದ್ದರೆ ಹುಚ್ಚರಾಗುತ್ತಿದ್ದರೇನೋ.. ಆದರೆ, ಒಬ್ಬ ಹೆಣ್ಣು ಮಗಳ ಪ್ರೀತಿ ಸುಂದರಂ ಬದುಕನ್ನು ಸಹನೀಯವಾಗಿಸಿದೆ. ಸುಂದರವಾಗಿಸಿದೆ. ಅಂದಹಾಗೆ, ತೆರೆಗೆ ಬರಲು ಸಿದ್ಧವಾಗಿರುವ 3 ಗಂಟೆ 30 ದಿನ, 30 ಸೆಕೆಂಡು ಸಿನಿಮಾದಲ್ಲಿರೋದು ಇದೇ ಕ್ಯಾ.ಸುಂದರಂ ಕಥೆ. ಆ ಪಾತ್ರದಲ್ಲಿ ನಟಿಸುತ್ತಿರುವುದು ಡೈನಮಿಕ್ ಸ್ಟಾರ್ ದೇವರಾಜ್. ಅವರ ಸಾಹಸ ಹಾಗೂ ಬದುಕಿನ ಸ್ಫೂರ್ತಿಯ ಕಥೆಯನ್ನು ಮಿಸ್ ಮಾಡದೇ ನೋಡಿ. ಅದು ಒಬ್ಬ ಯೋಧನ ಸಾಹಸ & ಪ್ರೀತಿಯ ಕಥೆ.

  • ಪ್ರೀತೀನಾ.. ಐಶ್ವರ್ಯಾನಾ..? ಸೆಕೆಂಡ್‍ಗಳಲ್ಲಿ ತಿಳ್ಕೊಳ್ಳಿ..!

    3 gante 30 minutes 30 seconds movie image

    ತರ್ಕ, ಮನಸಿನ ಭಾಷೆ. ಭಾವನೆ, ಹೃದಯದ ಭಾಷೆ. ತರ್ಕಬದ್ಧವಾಗಿ ಆಲೋಚನೆ ಮಾಡುವವರು ಜೀವನದಲ್ಲಿ ಹಣ, ಐಶ್ವರ್ಯ, ಸಂಪತ್ತು ಎಲ್ಲವನ್ನೂ ಪಡೀತಾರೆ. ಭಾವನೆಗಳಿಗೆ ಬದ್ಧವಾಗಿರುವವರು ಸದಾ ನೆಮ್ಮದಿಯಾಗಿ, ಸುಖಿಗಳಾಗಿರುತ್ತಾರೆ.

    ಈ ಎರಡೂ ಒಬ್ಬರಿಗೇ ಸಿಕ್ಕುವುದು ಅಪರೂಪ. ಎರಡರಲ್ಲಿ ಒಂದನ್ನಷ್ಟೇ ಆಯ್ಕೆ ಮಾಡಿಕೊಳ್ಳೋಕೆ ಸಾಧ್ಯ. ಇಂಥಾದ್ದೊಂದು ಸೂಕ್ಷ್ಮ ವಿಷಯವನ್ನಿಟ್ಟುಕೊಂಡು ಬರುತ್ತಿರುವ ಸಿನಿಮಾ 3 ಗಂಟೆ, 30 ದಿನ , 30 ಸೆಕೆಂಡ್.

    ಚಿತ್ರದ ಹೆಸರು ವಿಭಿನ್ನವಾಗಿದೆ. ಕಥೆಯೂ ವಿಭಿನ್ನವಾಗಿದೆ ಅನ್ನೋದು ಚಿತ್ರದ ನಿರ್ದೇಶಕ ಮಧುಸೂದನ್. ಚಿತ್ರದ ಟ್ಯಾಗ್‍ಲೈನ್ ಏನ್ ಗೊತ್ತಾ..? ಇದು ಪ್ರೀತಿಯ ಪೋಸ್ಟ್‍ಮಾರ್ಟಮ್. ಚಿತ್ರಕ್ಕೆ ಬಂಡವಾಳ ಹೂಡಿರುವ ಚಂದ್ರಶೇಖರ್ ಆರ್. ಪದ್ಮಶಾಲಿಯವರಷ್ಟೇ ಅಲ್ಲ, ಇಡೀ ಚಿತ್ರತಂಡದಲ್ಲಿರುವ ಬಹುತೇಕರು ಪರಸ್ಪರ ಗೆಳೆಯರು. 

    ಪ್ರೇಕ್ಷಕರ ಹೃದಯ ಕದಿಯಲು 30 ಸೆಕೆಂಡ್ ಸಾಕು ಎಂಬ ವಿಶ್ವಾಸದಲ್ಲಿದೆ ಚಿತ್ರ ತಂಡ. ಸೆಕೆಂಡ್ ಲೆಕ್ಕ ಅಲ್ವಾ..? ನೋಡೇ ನೋಡ್ತಿವಿ ಬಿಡಿ.

  • ಮಲ್ಟಿಪ್ಲೆಕ್ಸ್‍ಗಳಲ್ಲಿ ವಂಡರ್‍ಫುಲ್ 3 ಗಂಟೆ 30 ದಿನ 30 ಸೆಕೆಂಡು

    3 gante successful in multiplexes

    3 ಗಂಟೆ 30 ದಿನ 30 ಸೆಕೆಂಡು.. ತನ್ನ ವಿಭಿನ್ನ ಟೈಟಲ್‍ನಿಂದಲೇ ಗಮನ ಸೆಳೆದಿದ್ದ ಚಿತ್ರ. ಇದೇ ಶುಕ್ರವಾರ ಬಿಡುಗಡೆಯಾಗಿರುವ ಚಿತ್ರಕ್ಕೆ ವಿಮರ್ಶಕರ ವಲಯದಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಯುವ ಜನಾಂಗಕ್ಕೆ ಬೇಕಿರುವ ಒಂದು ಅತ್ಯುತ್ತಮ ಸಂದೇಶವನ್ನು ಮನರಂಜನೆಯ ಮೂಲಕವೇ ಹೇಳಿರುವ ಪ್ರಯತ್ನಕ್ಕೆ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ.

    ಅದರಲ್ಲಿಯೂ ಸಿಂಗಲ್ ಸ್ಕ್ರೀನ್‍ಗಳಿಗಿಂಂತ ಅತ್ಯುತ್ತಮ ಸ್ವಾಗತ ಸಿಕ್ಕಿರುವುದು ಮಲ್ಟಿಪ್ಲೆಕ್ಸ್‍ಗಳಲ್ಲಿ. ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ಸೇರಿದಂತೆ ರಾಜ್ಯದ ದೊಡ್ಡ ದೊಡ್ಡ ನಗರಗಳಲ್ಲಿನ ಮಲ್ಟಿಪ್ಲೆಕ್ಸ್ ಥಿಯೇಟರುಗಳಲ್ಲಿ ಪ್ರದರ್ಶನಗಳ ಸಂಖ್ಯೆ ಈಗ ಇನ್ನಷ್ಟು ಹೆಚ್ಚಿರುವುದು ವಿಶೇಷ. 

    ಬಿಡುಗಡೆಯಾದ ದಿನದ ನಂತರ ಪ್ರದರ್ಶನಗಳ ಸಂಖ್ಯೆ ಹೆಚ್ಚುವುದು ಸಣ್ಣ ಮಾತೇನಲ್ಲ. ಹೀಗಾಗಿಯೇ ಚಿತ್ರದ ನಿರ್ದೇಶಕ ಮಧುಸೂದನ್ ಗೌಡ ಮತ್ತು ನಿರ್ಮಾಪಕ ಚಂದ್ರಶೇಖರ್ ಪದ್ಮಶಾಲಿ ಇಬ್ಬರೂ ಖುಷಿಯಾಗಿದ್ದಾರೆ. ಕ್ಲಾಸ್ ವರ್ಗದ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡೇ ಮಾಡಿದ್ದ ಸಿನಿಮಾ, ಯಶಸ್ವಿಯಾಗಿ ಮುನ್ನುಗ್ಗುತ್ತಿದೆ.