ಬ್ರಹ್ಮಚಾರಿ, ಇದೇ ವಾರ ರಿಲೀಸ್ ಆಗುತ್ತಿರುವ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಚಿತ್ರದ ಸಬ್ಜೆಕ್ಟ್ ಹೇಗಿದೆಯೆಂದರೆ, ಇಂತಹ ಸಿನಿಮಾ ಮಾಡೋಕೆ ಧೈರ್ಯ ಬೇಕು ಅಂತಾರೆ ನೀನಾಸಂ ಸತೀಶ್.
ಇಮೇಜ್ಗಳನ್ನೆಲ್ಲ ಪಕ್ಕಕ್ಕಿಟ್ಟು ಹೊಸ ಸಾಹಸಕ್ಕೆ ಕೈ ಹಾಕುವುದು ಅಷ್ಟು ಸುಲಭ ಅಲ್ಲ. ಹಾಗೆ ಸಿನಿಮಾ ಮಾಡಿ, ಜನ ಮೆಚ್ಚುವಂತೆ ಮಾಡುವುದೂ ಸುಲಭವಲ್ಲ. ಜನ ಮೆಚ್ಚಿರುವ ಯಾವುದೇ ಮಾದರಿಯ ಸಿನಿಮಾ ಮಾಡುವುದು ಸುಲಭ. ಆದರೆ, ಇದು ಬೇರೆಯದೇ ದಾರಿ. ರಿಸ್ಕ್ ತೆಗೆದುಕೊಂಡಿದ್ದೇವೆ. ಗೆಲ್ಲುವ ವಿಶ್ವಾಸವೂ ಇದೆ ಅಂತಾರೆ ಸತೀಶ್.
ಒಂದು ಸಣ್ಣ ವಿಷಯ ಡೈವೋರ್ಸ್ವರೆಗೆ ಹೋಗುತ್ತೆ. ಇಂಥವು ಸಾಮಾನ್ಯವಾಗಿ ಎಲ್ಲರ ಫ್ಯಾಮಿಲಿಗಳಲ್ಲೂ ಆಗುತ್ತೆ. ಸೆಕ್ಷÄವಲ್ ಪ್ರಾಬ್ಲಂ ಕಥೆ, ಆದರೆ ಎಲ್ಲಿಯೂ ಅದನ್ನು ನೇರವಾಗಿ ಹೇಳೋದೇ ಇಲ್ಲ. ನೋಡುವವರು ನಗುತ್ತಾರೆಯೇ ಹೊರತು, ಮಜುಗರಪಡುವುದಿಲ್ಲ ಎನ್ನುವ ಕಾನ್ಫಿಡೆನ್ಸ್ ಸತೀಶ್ ಅವರದ್ದು.
ಸತೀಶ್, ಆದಿತಿ ಕೌಂಟರ್ ಆ್ಯಕ್ಟಿಂಗ್ ಚಿತ್ರದ ಹೈಲೈಟ್. ಚಂದ್ರಮೋಹನ್ ಒಂದು ಸೂಕ್ಷö್ಮ ಸಬ್ಜೆಕ್ಟ್ನ್ನು ತುಂಬಾ ಚೆನ್ನಾಗಿ ಹ್ಯಾಂಡಲ್ ಮಾಡಿದ್ದಾರೆ ಎನ್ನುವ ಸತೀಶ್, ನಿರ್ಮಾಪಕ ಉದಯ್ ಕುಮಾರ್ ಅವರ ಧೈರ್ಯವನ್ನು ಮೆಚ್ಚಿಕೊಂಡಿದ್ದಾರೆ.