` sathish neenasam, - chitraloka.com | Kannada Movie News, Reviews | Image

sathish neenasam,

  • ಡಬ್ಬಲ್ ಮೀನಿಂಗು.. ಫುಲ್ ಫೀಲಿಂಗು.. ಪೆಟ್ರೋಮ್ಯಾಕ್ಸ್ ಮಾಸ್ & ಕ್ಲಾಸ್

    ಡಬ್ಬಲ್ ಮೀನಿಂಗು.. ಫುಲ್ ಫೀಲಿಂಗು.. ಪೆಟ್ರೋಮ್ಯಾಕ್ಸ್ ಮಾಸ್ & ಕ್ಲಾಸ್

    ನಾಲ್ವರು ಅನಾಥರು.. ಅನಾಥರಾಗಿ ಹುಟ್ಟಿದರೂ ಅನಾಥರಾಗಿ ಸಾಯಬಾರದು ಎಂದು ಹೊರಡುತ್ತಾರೆ. ಅವರೆಲ್ಲರೂ ಒಂದು ಮನೆ ಮಾಡಿಕೊಂಡು ಒಟ್ಟಿಗೇ ಬದುಕುತ್ತಾ ಚೆನ್ನಾಗಿರುತ್ತಾರಾ ಅನ್ನೋದೇ ಚಿತ್ರದ ಕಥೆ.

    ನಮ್ ಸಿನಿಮಾದಲ್ಲಿ ಇಷ್ಟೊಂದ್ ಎಮೊಷನ್ ಇರೋವಾಗ ನಮ್ ಡೈರೆಕ್ಟರ್ ಯಾಕೆ ಬರೀ ಡಬಲ್ ಮೀನಿಂಗ್ ಡೈಲಾಗ್ ಇಟ್ಟವ್ರೆ ಅನ್ನೋ ಡೈಲಾಗ್‍ನ್ನ ಟೀಸರಲ್ಲೇ ಬಿಟ್ಟಿದ್ದರು ವಿಜಯ್ ಪ್ರಸಾದ್. ಆದರೆ.. ವೈರಲ್ ಆಗಿದ್ದು ಮಾತ್ರ.. ಬೆಡ್ ಮೇಲೆ ಅರೆಬೆತ್ತಲಾಗಿ ಮಲಗಿ ಹರಿಪ್ರಿಯಾ-ಸತೀಶ್ ಪರಸ್ಪರ ಹೇಳಿ ಕೇಳಿಕೊಂಡಿದ್ದ ಪಿಚ್ಚು.. ವಿಕೆಟ್ಟು.. ಕವರ್ ಡ್ರೈವು.. ಡೈಲಾಗುಗಳೇ. ಆಗ ಸಿನಿಮಾ ನೋಡಿ..

    ಅದು ಡಬಲ್ ಮೀನಿಂಗ್ ಅಲ್ಲ. ಚೇಷ್ಟೆ ಎಂದಿದ್ದ ವಿಜಯ್ ಪ್ರಸಾದ್.. ಎಂದಿನಂತೆ ಮತ್ತೊಂದು ಸೆಂಟಿಮೆಂಟ್ ಕಥೆಯನ್ನೇ ಇಟ್ಟಿದ್ದಾರೆ. ಡಬಲ್ ಮೀನಿಂಗ್ ಡೈಲಾಗುಗಳ ಜೊತೆ ನಗಿಸುತ್ತಲೇ ಗಾಢವಾದ ವಿಷಾದ ಆವರಿಸಿಕೊಳ್ಳುವಂತೆ ಮಾಡುವುದು ಡೈರೆಕ್ಟರ್ ಸ್ಟೈಲ್. ಅಲ್ಲಿ ಪೆಟ್ರೋಮ್ಯಾಕ್ಸ್ ತಂಡ ಗೆದ್ದಿದೆ. ನಿರ್ಮಾಪಕ ಕೆ.ಎಂ.ಸುಧೀಂದ್ರ ಅವರು ಖುಷಿಯಾಗುವಂತೆ ಓಪನಿಂಗ್ ಸಿಕ್ಕಿದೆ. ಪೆಟ್ರೋಮ್ಯಾಕ್ಸ್ ಬದುಕು ಮತ್ತು ಬೆಳಕಿನ ಕಥೆ.

  • ಡೈರೆಕ್ಟರ್ ಆಗೋಕೆ ನೀನಾಸಂ ಸತೀಶ್ ರೆಡಿ

    sathish ninasam all set to don director's cap

    ಅಯೋಗ್ಯ ಚಿತ್ರದ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ನೀನಾಸಂ ಸತೀಶ್, ಚಂಬಲ್ ಚಿತ್ರ ಬಿಡುಗಡೆಯ ಉತ್ಸಾಹದಲ್ಲಿದ್ದಾರೆ. ತಮಿಳಿನಲ್ಲಿ ಮೊದಲ ಬಾರಿಗೆ ನಾಯಕನಾಗಿ ನಟಿಸುತ್ತಿದ್ದಾರೆ. ನಟರಷ್ಟೇ ಅಲ್ಲದೆ, ನಿರ್ಮಾಪಕರಾಗಿಯೂ ಪ್ರಯೋಗ ನಡೆಸಿರುವ ನೀನಾಸಂ ಸತೀಶ್, ಈಗ ನಿರ್ದೇಶನಕ್ಕೂ ಇಳಿಯುವ ಮನಸ್ಸು ಮಾಡಿದ್ದಾರೆ.

    ಮೊದಲ ಬಾರಿಗೆ ಇಂಥಾದ್ದೊಂದು ಸಾಹಸಕ್ಕೆ ಕೈ ಹಾಕಿದ್ದೇನೆ. ಹೊಸ ವರ್ಷಕ್ಕೆ ಚಿತ್ರದ ಟೈಟಲ್, ಫಸ್ಟ್‍ಲುಕ್ ಬಿಡುಗಡೆ ಮಾಡುತ್ತೆನೆ' ಎಂದಿದ್ದಾರೆ ಸತೀಶ್. ಕಥೆ ಸಿದ್ಧವಾಗುತ್ತಿದೆ. ನೀನಾಸಂ ಸತೀಶ್, ಮೂಲತಃ ರಂಗಭೂಮಿಯಿಂದ ಬಂದವರು. ನಾಟಕದ ಎಲ್ಲ ವಿಭಾಗಗಳಲ್ಲಿಯೂ ಕೆಲಸ ಮಾಡಿದ ಅನುಭವ ಇರೋದ್ರಿಂದ ಕಷ್ಟವೇನೂ ಆಗದು.

    ನಿರ್ಮಾಪಕರಾಗಿ ಒಂದು ಸಿನಿಮಾ, ಎರಡು ಕಿರುಚಿತ್ರ, ಒಂದು ಕಿರುಚಿತ್ರಕ್ಕೆ ರಾಜ್ಯ ಪ್ರಶಸ್ತಿಯನ್ನೂ ಪಡೆದಿರುವ ಸತೀಶ್, ನಿರ್ದೇಶಕರಾಗಿಯೂ ಯಶಸ್ಸು ಕಾಣಲಿ.

  • ತಮಿಳಿನಲ್ಲಿ ನೀನಾಸಂ ಸತೀಶ್ ರೌಡಿ..!

    sathish ninasam in tamil

    ನೀನಾಸಂ ಸತೀಶ್ ತಮಿಳು ಮತ್ತು ಬಾಲಿವುಡ್​ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ ಎನ್ನುವುದು ಹಳೆಯ ಸುದ್ದಿ. ಇದು ಸ್ವಲ್ಪ ಅಪ್​ಡೇಟ್. ತಮಿಳಿನಲ್ಲಿ ಸತೀಶ್ ನಟಿಸುತ್ತಿರುವುದು ರೌಡಿಯ ಪಾತ್ರದಲ್ಲಿ. ಅದೂ ಕೂಡಾ ಮಧುರೈನಲ್ಲಿ ಬದುಕಿದ್ದ ರೌಡಿಯೊಬ್ಬನ ರಿಯಲ್ ಲೈಫ್​ ಕಥೆಯನ್ನೇ ಇಟ್ಟುಕೊಂಡು ಚಿತ್ರ ಮಾಡಲಾಗಿದೆ. 

    ಅದು ಪಕ್ಕಾ ಥ್ರಿಲ್ಲರ್ ಸಬ್ಜೆಕ್ಟ್. ಅನಿಶ್ ಎಂಬ ಯುವ ನಿರ್ದೇಶಕ ನೀನಾಸಂ ಸತೀಶ್ ನಟಿಸಲಿರುವ ಚಿತ್ರದ ನಿರ್ದೇಶಕ. ಈ ಹಿಂದೆ ತಿರುಮನಂ ಎನುಮ್ ನಿಕ್ಕಾ ಎಂಬ ಚಿತ್ರ ನಿರ್ದೆಶಿಸಿದ್ದ ಅನೀಶ್​ಗೆ ಇದು ಎರಡನೇ ಸಿನಿಮಾ. ತಮಿಳಿನಲ್ಲಿ ಸತೀಶ್​ಗೆ ಇದು ಮೊದಲನೇ ಸಿನಿಮಾ. ಈ ಸಿನಿಮಾಗೆ ಆಯ್ಕೆಯಾಗೋಕೆ ಕಾರಣ, ಸತೀಶ್ ನಾಯಕರಾಗಿ ನಟಿಸಿದ್ದ ಲೂಸಿಯಾ ಚಿತ್ರ.

    ಇನ್ನು ಹಲವು ಯುವ ಕಲಾವಿದರಿಗೆ ಸ್ಫೂರ್ತಿಯಾಗಿರುವ ಸುದೀಪ್ ಅವರೇ ಸತೀಶ್​ಗೆ ತಮಿಳು ಚಿತ್ರರಂಗಕ್ಕೂ ಹೋಗುವ ಧೈರ್ಯ ಕೊಟ್ಟಿದೆಯಂತೆ. 2 ವರ್ಷಗಳಿಂದ ಸ್ಕ್ರಿಪ್ಟ್ ಮಾಡಿರುವ ಅನೀಶ್, ತನ್ನ ಚಿತ್ರದ ಪಾತ್ರಕ್ಕೆ ನೀನಾಸಂ ಸತೀಶ್ ಸೂಟ್ ಆಗುತ್ತಾರೆ ಎಂಬ ಕಾರಣಕ್ಕಾಗಿಯೇ ಅವರನ್ನು ಆಯ್ಕೆ ಮಾಡಿದ್ದೇನೆ ಎಂದಿದ್ದಾರೆ.

  • ತಮಿಳು, ತೆಲುಗಿನತ್ತ ನೀನಾಸಂ ಸತೀಶ್

    sathish ninasam

    ನೀನಾಸಂ ಸತೀಶ್ ಕನ್ನಡದಲ್ಲಿ ವಿಶೇಷ ಛಾಪು ಮೂಡಿಸಿರುವ ನಟ. ನೀನಾಸಂನಲ್ಲಿ ಕಲಿತಿದ್ದನ್ನೆಲ್ಲ ತೆರೆಯ ಮೇಲೆ ತನ್ನದೇ ಶೈಲಿಯಲ್ಲಿ ತೋರಿಸಿರುವ ಪ್ರತಿಭಾವಂತ. ಈ ಪ್ರತಿಭಾವಂತನಿಗೀಗ ನೆರೆಯ ತಮಿಳು ಮತ್ತು ಹಿಂದಿ ಚಿತ್ರರಂಗದ ಬಾಗಿಲು ತೆರೆದಿದೆ.

    ಪರಭಾಷೆಗೂ ಕಾಲಿಡುತ್ತಿರುವ ಸಂಗತಿಯನ್ನು ಸ್ವತಃ ನೀನಾಸಂ ಸತೀಶ್ ಹೇಳಿಕೊಂಡಿದ್ದಾರೆ. ಚಿತ್ರ ಯಾವುದು, ನಿರ್ದೇಶಕರು ಯಾರು ಎಂಬ ಸಂಗತಿಗಳನ್ನು ನೀನಾಸಂ ಸತೀಶ್ ಹೇಳಿಲ್ಲ. ಕೆಲವೇ ದಿನಗಳಲ್ಲಿ ಆ ಚಿತ್ರಗಳ ಫಸ್ಟ್ ಲುಕ್ ವಿನ್ಯಾಸ ಬಿಡುಗಡೆಯಾಗಲಿದೆ ಎನ್ನುವುದನ್ನಷ್ಟೆ ಹೇಳಿದ್ದಾರೆ. ಶುಭವಾಗಲಿ ನೀನಾಸಂ ಸತೀಶ್.

  • ತುಂಟ ಕಂಠೀರವನ ಲಾಡ್ಜಿನಲ್ಲಿ ಅಕಟಕಟಾ ಏನಿದು ಮಾತಿನ ಲೀಲೆ..?

    director vijay prasad charms yet again

    ಯಾರಿದು ತುಂಟ ಕಂಠೀರವ ಅಂದ್ರೆ ಅನುಮಾನವೇ ಬ್ಯಾಡ.. ಅದು ನಿರ್ದೇಶಕ ವಿಜಯ ಪ್ರಸಾದ್. ಅವರ ನಿರ್ದೇಶನದ ಹೊಸ ಸಿನಿಮಾ ಪರಿಮಳ ಲಾಡ್ಜ್ ಈಗ ನೆಟ್ಟಿನಲ್ಲಿ ಎಲ್ಲರನ್ನೂ ನೆಟ್ಟಗೆ ನಿಂತು ಟೀಕಿಸುವಂತೆ ಮಾಡಿದೆ. ನಾಯಕ ನಟ ನೀನಾಸಂ ಸತೀಶ್ ಸ್ವತಃ ಸ್ಪಷ್ಟೀಕರಣ ಕೊಟ್ಟಿದ್ದರೂ ಟೀಕೆಗಳೇನೂ ನಿಂತಿಲ್ಲ. ಇಷ್ಟಕ್ಕೂ ಟೀಸರ್‍ನಲ್ಲಿ ಅಂಥಾದ್ದೇನಿದೆ..? ಬೇರೇನಿಲ್ಲ.. ಅವರು ಚಿತ್ರತಂಡದ ಪ್ರತಿಯೊಬ್ಬರನ್ನೂ ಒಂದು ಪೋಲಿತನದ ಮೂಲಕವೇ ಪರಿಚಯಿಸಿದ್ದಾರೆ.

    ನಾಯಕರಾದ ಸತೀಶ್ ಮತ್ತು ಯೋಗೀಶ್‍ರನ್ನೇ ಅವರು ಪರಿಚಯಿಸೋದು ಸಲಿಂಗಕಾಮಿಗಳೆಂದು. ಅಫ್‍ಕೋರ್ಸ್.. ಅದಕ್ಕೆ ಸತೀಶ್ ಸ್ಪಷ್ಟನೆ ಕೊಟ್ಟಿದ್ದಾರೆ.

    ಇನ್ನು ದತ್ತಣ್ಣ, ಸುಮನ್ ರಂಗನಾಥ್, ಬುಲೆಟ್ ಪ್ರಕಾಶ್, ಹೇಮಾದತ್ ಇಲ್ಲಿ ಆಳ ನೋಡಿ ಲಾಳ ಹೊಡೆದವರಾಗ್ತಾರೆ. ಅರೆರೆ.. ಅಂದ್ಕೊಂಡ್ರಾ.. ಅವರು ತಂತ್ರಜ್ಞರಲ್ಲಿ ಒಬ್ಬರನ್ನೂ ಹಾಗೇ ಬಿಟ್ಟಿಲ್ಲ.

    ಸ್ಟಿಲ್ ಫೋಟೋಗ್ರಫಿ ಮಾಡೋ ಅನಿಲ್ ಅವರನ್ನು ನೊರೆ ನೋಡಿ ಪೊರೆ ಬಿಟ್ಟವ್ರು ಎಂದು ಪರಿಚಯಿಸೋ ನಿರ್ದೇಶಕರು, ಸಂಗೀತ ನಿರ್ದೇಶಕ ಅನೂಪ್ ಸೀಳಿನ್‍ರನ್ನ ಲಾಡಿ ಜೊತೆ ರಾಗಾನೂ ಎಳೆದವ್ರು ಎಂದು ಕಾಲೆಳೆಯುತ್ತಾರೆ.

    parimala_lodge_titles_19.jpg

    ಕಾರ್ಯಕಾರಿ ನಿರ್ಮಾಪಕರಾದ ಕುಮಾರ ಸುಂದರಂ, ರಾಜಶೇಖರ್, ನಾರಾಯಣ್ ಪಿಳ್ಳೈ ಬ್ರಾ ನೋಡಿ ಬಾಗ್ಲು ತೆಗೆದವರಾದ್ರೆ, ಮ್ಯಾನೇಜರುಗಳಾದ ರಾಜಣ್ಣ - ನರೇಶ್ ಮೂಗ್‍ಬಟ್ಟು ಸಪ್ಲೈ ಮಾಡಿ ಮಕಾಡೆ ಮಲಗಿಸುವವರಾಗ್ತಾರೆ. ಇದು ಇಷ್ಟಕ್ಕೇ ನಿಲ್ಲಲ್ಲ.. ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿಗೆ ತೊಡೆ ನೋಡಿ ತೋಪ್ಡಾ ಹೊಡೆದವರ ಪಟ್ಟ ಸಿಕ್ಕರೆ, ಸಂಕಲನಕಾರ ಸುರೇಶ್ ಅರಸ್‍ಗೆ ಬ್ಲೂ ಫಿಲಂ ನೋಡಿ ಕಟ್ ಮಾಡಿ ಬರೀ ಫಿಲಂ ಕೊಡೋವ್ರು ಅಂಥಾರೆ. ಕ್ಯಾಮೆರಾಮನ್ ನಿರಂಜನ್ ಬಾಬು ಗುಪ್ತ ಕ್ಯಾಮೆರಾ ಇಟ್ಟು, ಗುನ್ನ ತಿಂದವರಾದ್ರೆ, ತಮ್ಮದೇ ತಂಡದಲ್ಲಿರೋ ವಿನಯ್, ಮಹೇಶ್, ಪ್ರಭು, ಪ್ರಿಯಾರನ್ನ ಮಸಾಜ್ ಮಾಡ್ಸಿ ಮಟಾಶ್ ಆದವ್ರು ಅಂತಾರೆ ವಿಜಯ್ ಪ್ರಸಾದ್. ವರ್ಣಾಲಂಕಾರದ ಬಾಬು ಧರ್ಮೇಂದ್ರ ಜಡೆ ನೋಡಿ ಜಲಕ್ರೀಡೆ ಆಡಿದವರಂತೆ. 

    ಹೀಗೆ ಎಲ್ಲರನ್ನೂ ಕಾಲೆಳೆದ ನಿರ್ದೇಶಕರು ನಿರ್ಮಾಪಕರನ್ನು  ಕಾಸ್ ಬದ್ಲು ಕಾಂಡೊಮ್ ಇಟ್ಟುಕೊಂಡವ್ರು ಎಂದು ಕಿಚಾಯಿಸ್ತಾರೆ. ತಮ್ಮನ್ನು ಇನ್ನೂ ಒಂದು ಹೆಜ್ಜೆ ಮುಂದೆ ತಗೊಂಡ್ ಹೋಗಿ.. ಕಾಚ ತೋರಿಸಿ ಕಥೆ ಮಾಡಿದವ್ರು ಅಂತಾ ಹೇಳ್ಕೊತಾರೆ.

    ಇದು ತುಂಟತನವೋ.. ಹಾಸ್ಯದ ಪರಮಾವಧಿಯೋ.. ಅತಿರೇಕವೋ.. ನಿರ್ಧಾರ ಪ್ರೇಕ್ಷಕ ಪ್ರಭುವಿಗೆ ಬಿಟ್ಟಿದ್ದು.

  • ತುಂಟ ಶಿಖಾಮಣಿ ಬ್ರಹ್ಮಚಾರಿಯನ್ನು ಹಿಡ್ಕೊಂಡ್ ಬಿಟ್ರು ಪ್ರೇಕ್ಷಕರು

    bramhachari is appreciated by audience

    ಹಿಡ್ಕ ಹಿಡ್ಕ ಹಿಡ್ಕ ಎನ್ನುತ್ತಲೇ ರೋಮಾಂಚನ ಹುಟ್ಟಿಸಿದ್ದ ಬ್ರಹ್ಮಚಾರಿಯನ್ನು ಪ್ರೇಕ್ಷಕರು ಅಷ್ಟೇ ಪ್ರೀತಿಯಿಂದ ಹಿಡಿದುಕೊಂಡಿದ್ದಾರೆ. ಸತೀಶ್ ಮತ್ತು ಆದಿತಿಯ ತುಂಟಾಟ, ರನೌಟ್ ಕಥೆಗೆ ಬೆರೆಸಿರುವ ಕಾಮಿಡಿಯ ಒಗ್ಗರಣೆ, ಪ್ರೇಕ್ಷಕರಿಗೆ ನಗೆಯೂಟದ ಮೃಷ್ಟಾನ್ನ ಭೋಜನವನ್ನೇ ನೀಡಿದೆ. ಥಿಯೇಟರಿಗೆ ಎಂಟ್ರಿ ಕೊಟ್ಟು ಸಿನಿಮಾ ಶುರುವಾದ ಮೇಲೆ ನಗಲು ಶುರು ಮಾಡುವ ಪ್ರೇಕ್ಷಕ, ಸಿನಿಮಾ ಮುಗಿಯುವವರೆಗೂ ನಗುತ್ತಲೇ ಇರುತ್ತಾನೆ ಎನ್ನುವುದರಲ್ಲಿಯೇ ಚಿತ್ರತಂಡದ ಗೆಲುವಿದೆ.

    ನಿರ್ದೇಶಕ ಚಂದ್ರಮೋಹನ್, ನಿರ್ಮಾಪಕ ಉದಯ್ ಇಬ್ಬರೂ ಕೂಡಾ ಚಿತ್ರದಲ್ಲಿ ಲೈಂಗಿಕ ಸಮಸ್ಯೆಯ ಕಥೆ ಇದ್ದರೂ, ಎಲ್ಲಿಯೂ ಅಶ್ಲೀಲತೆಯ ಸೋಂಕಿಲ್ಲ ಎಂದು ಭರವಸೆ ಕೊಟ್ಟಿದ್ದರು. ಭರವಸೆ ಹುಸಿಯಾಗಿಲ್ಲ. ತುಂಟಾಟಕ್ಕೆ ಮಿತಿಯಿಲ್ಲ.

    ಧರ್ಮವಿಶ್ ಸಂಗೀತದಲ್ಲಿ ಬರುವ ಹಾಡುಗಳು ಹುಚ್ಚೆಬ್ಬಿಸಿದರೆ, ಆದಿತಿಯ ನೋಟಕ್ಕೇ ಪ್ರೇಕ್ಷಕ ಫಿದಾ ಆಗಿಬಿಡುತ್ತಾನೆ. ಸತೀಶ್ ಜೊತೆ ನಗಿಸಲು ಪೈಪೋಟಿಗೆ ಬೀಳುವುದು ಕೆ.ಆರ್.ಪೇಟೆ ಶಿವರಾಜ್. ಫೈನಲಿ.. ಪ್ರೇಕ್ಷಕರೂ ಹ್ಯಾಪಿ.. ನಿರ್ಮಾಪಕರು ಡಬಲ್ ಹ್ಯಾಪಿ.

  • ನಗೆಯ ಹಬ್ಬದ ಸಂಭ್ರಮ ಬ್ರಹ್ಮಚಾರಿ

    be a part of laugh riot with bramhachari

    ನೀನಾಸಂ ಸತೀಶ್, ಉದಯ್ ಮೆಹ್ತಾ ಕಾಂಬಿನೇಷನ್‍ನಲ್ಲಿ ಬರುತ್ತಿರುವ ಸಿನಿಮಾ ಬ್ರಹ್ಮಚಾರಿ. ಲವ್ ಇನ್ ಮಂಡ್ಯ ನಂತರ ಹೀರೋ ಮತ್ತು ನಿರ್ಮಾಪಕರು ಮತ್ತೆ ಒಂದಾಗಿರುವ ಚಿತ್ರವಿದು. ಚಿತ್ರದ ನಿರ್ದೇಶಕರು ಡಬಲ್ ಎಂಜಿನ್, ಬಾಂಬೆ ಮಿಠಾಯಿ ಚಿತ್ರಗಳ ಚಂದ್ರಮೋಹನ್. ಆ ಚಿತ್ರಗಳಲ್ಲಿ ಚಂದ್ರಮೋಹನ್ ಡಬಲ್ ಮೀನಿಂಗ್ ಸಂಭಾಷಣೆಯನ್ನು ಹೆಚ್ಚು ಬಳಸಿದ್ದರು. ಹೀಗಾಗಿಯೇ ಇವರ ಜೊತೆ ಚಿತ್ರ ಮಾಡೋದಾ ಎಂಬ ಯೋಚನೆಯಲ್ಲಿದ್ದೆ. ಅವರ ಸಹವಾಸವೇ ಬೇಡ ಎಂದುಕೊಂಡಿದ್ದೆ. ಆದರೆ, ಕಥೆ ಕೇಳುವಾಗಲೇ ನಗು ತಡೆಯೋಕೆ ಆಗಲಿಲ್ಲ. ಹೀಗಾಗಿ ಒಪ್ಪಿಕೊಂಡೆ ಎನ್ನುವ ಸತೀಶ್, ಚಿತ್ರದಲ್ಲಿ ಮುಜುಗರ ತರುವ ಹಾಸ್ಯ ಇಲ್ಲ ಎನ್ನುತ್ತಾರೆ. 

    ನಾಯಕಿಯಾಗಿ ನಟಿಸಿರುವ ಆದಿತಿ ಪ್ರಭುದೇವ ಅವರಿಗೆ ಸತೀಶ್ ಎದುರು ನಗು ಕಂಟ್ರೋಲ್ ಮಾಡಿಕೊಂಡು ನಟಿಸುವುದೇ ದೊಡ್ಡ ಚಾಲೆಂಜ್ ಆಗಿತ್ತಂತೆ. ದತ್ತಣ್ಣ, ಕೆಆರ್‍ಪೇಟೆ ಶಿವರಾಜ್, ಅಚ್ಯುತ್ ಕುಮಾರ್, ಪದ್ಮಜಾ ರಾವ್ ನಟಿಸಿರುವ ಚಿತ್ರ, ವಿಶೇಷವಾಗಿ ಹುಡುಗರಿಗೆ ಇಷ್ಟವಾಗಲಿದೆ ಅನ್ನೋದು ಚಿತ್ರತಂಡದವರು ಅದರಲ್ಲೂ ಚಿತ್ರದ ನಾಯಕಿ ಆದಿತಿ ಕಾನ್ಫಿಡೆನ್ಸು.

  • ನಾಡೋಡಿಗಳ್ ಶಶಿಕುಮಾರ್ ಜೊತೆ ನೀನಾಸಂ ಸತೀಶ್

    Sathish Ninasam To Debut With Tamil Actor Sasikumar

    ತಮಿಳಿನಲ್ಲಿ ನಟ ಶಶಿಕುಮಾರ್ ಅವರ ಖ್ಯಾತಿಯೇ ಬೇರೆ. ಬೇರೆಯದೇ ರೀತಿಯ ರಿಯಲೆಸ್ಟಿಕ್ ಸಿನಿಮಾಗಳ ಮೂಲಕ ಹೆಸರಾಗಿರುವ ಶಶಿಕುಮಾರ್, ಈಗ ಕನ್ನಡದ ನಟ ನೀನಾಸಂ ಸತೀಶ್ ಕುಮಾರ್ ಮೇಲೆ ಕಣ್ಣು ಹಾಕಿದ್ದಾರೆ. ಶಶಿಕುಮಾರ್ ನಟಿಸುತ್ತಿರುವ ಪಗೆವನಕ್ಕು ಅರಳ್ವಾಯ್ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿದ್ದಾರೆ ಸತೀಶ್.

    ಇದು ಷೇಕ್ಸ್‍ಪಿಯರ್‍ನ ಮ್ಯಾಕ್‍ಬೆತ್ ನಾಟಕವನ್ನು ಆಧರಿಸಿರುವ ಚಿತ್ರ. ನಾನು ಮತ್ತು ಶಶಿಕುಮಾರ್ ಇಲ್ಲಿ ಖೈದಿಗಳು. ಬಿಂದು ಮಾಧವಿ ಮತ್ತು ವಾಣಿ ನಾಯಕಿಯರು ಎಂದು ಮಾಹಿತಿ ನೀಡಿದ್ದಾರೆ ಸತೀಶ್. ಚಿತ್ರದ ಚಿತ್ರೀಕರಣ ಚೆನ್ನೈನಲ್ಲಿ ಶುರುವಾಗಿದೆ. ಸಿನಿಮಾ ಕನ್ನಡದಲ್ಲೂ ಡಬ್ ಆಗಿ ಬರುವ ನಿರೀಕ್ಷೆ ಇದೆ.

  • ನಿರ್ದೇಶಕರ ಸಂಗಮದ ಚಂಬಲ್‍ನಲ್ಲಿ ನೀನಾಸಂ ಸತೀಶ್ ಟೆಕ್ಕಿ

    sathish ninasam's new film with directors team

    ನೀನಾಸಂ ಸತೀಶ್ ಎಂದರೆ ತಕ್ಷಣ ನೆನಪಾಗುವುದೇ ಮಂಡ್ಯದ ಪೋಲಿ ಹುಡುಗನ ಮುಖ. ಅಷ್ಟರಮಟ್ಟಿಗೆ ಮಂಡ್ಯ ಶೈಲಿಯ ಪಾತ್ರಗಳಿಗೆ ಬ್ರಾಂಡ್ ಆಗಿರುವ, ಕನ್ನಡ ಚಿತ್ರ ಪ್ರೇಕ್ಷಕರಿಗೆ ಪಕ್ಕಾ ಲೋಕಲ್ ಹುಡುನಾಗಿರುವ ನೀನಾಂ ಸತೀಶ್, ಇದೇ ಮೊದಲ ಬಾರಿಗೆ ಟೆಕ್ಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಹೆಸರು ಚಂಬಲ್.

    ಅಂದಹಾಗೆ ಇದು ನಿರ್ದೇಶಕರ ಸಂಗಮದ ಚಿತ್ರ. ಚಿತ್ರದ ನಿರ್ದೇಶಕ ಜೇಕಬ್ ವರ್ಗಿಸ್. ಸವಾರಿ, ಪೃಥ್ವಿ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದವರು. ಚಿತ್ರದಲ್ಲಿ ನಿರ್ದೇಶಕ ಪವನ್ ಕುಮಾರ್ ಕೂಡಾ ಒಂದು ಮಾಡಿದ್ದಾರೆ. ಚಿತ್ರದ ಸಾಹಿತ್ಯ ನಿರ್ದೇಶಕ ಸಿಂಪಲ್ ಸುನಿ ಅವರದ್ದಾದರೆ, ಚಿತ್ರಕಥೆ ಬರೆದಿರುವುದು ಗೋದ್ರಾ ನಿರ್ದೇಶಕ ನಂದೀಶ್. 

    ಇಷ್ಟು ದಿನ ನನ್ನನ್ನು ಲೂಸಿಯಾದಿಂದ ಗುರುತಿಸುತ್ತಿದ್ದರು. ಈ ಚಿತ್ರದ ನಂತರ ನನ್ನನ್ನು ಚಂಬಲ್ ಮೂಲಕ ಗುರುತಿಸುತ್ತಾರೆ. ಇದು ನನಗಷ್ಟೇ ಅಲ್ಲ, ನಿರ್ದೇಶಕ ಜೇಕಬ್ ವರ್ಗಿಸ್ ಅವರ ಕೆರಿಯರ್‍ನಲ್ಲೂ ಬೆಸ್ಟ್ ಸಿನಿಮಾ ಆಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಸತೀಶ್.

  • ನೀನಾಸಂ ಸತೀಶ್ ಕಾಣದಂತೆ ಮಾಯವಾದಾಗ ಧರ್ಮಣ್ಣ ಬಂದರು..!

    Neenasam Satheesh, Dharmanna Kadur Image

    ಕಾಣದಂತೆ ಮಾಯವಾದನು ಚಿತ್ರದಲ್ಲಿ ಧರ್ಮಣ್ಣ ಕಡೂರು ಒಂದು ವಿಶೇಷ ಪಾತ್ರದಲ್ಲಿದ್ದಾರೆ. ಧರ್ಮಣ್ಣ ಪಾತ್ರವೇ ಇಡೀ ಚಿತ್ರದ ಅಟ್ರ್ಯಾಕ್ಷನ್. ಸಖತ್ ಡಿಫರೆಂಟಾಗಿದೆ ಎನ್ನುವ ಚಿತ್ರತಂಡ, ಪಾತ್ರದ ಗುಟ್ಟು ಬಿಟ್ಟುಕೊಡಲ್ಲ. ಅಂದಹಾಗೆ ಅದು ನೀನಾಸಂ ಸತೀಶ್ ಮಾಡಬೇಕಿದ್ದ ಪಾತ್ರ ಅನ್ನುವ ರಹಸ್ಯ ಸ್ವಲ್ಪ ತಡವಾಗಿ ಗೊತ್ತಾಗಿದೆ.

    ಪಾತ್ರ ವಿಭಿನ್ನವಾಗಿದೆ ಎಂಬ ಕಾರಣಕ್ಕೆ ಆ ರೋಲ್‍ಗೆ ಓಕೆ ಎಂದಿದ್ದ ರಂತೆ ಸತೀಶ್. ಆದರೆ ಮಾಸ್ತಿಗುಡಿ ಚಿತ್ರೀಕರಣ ವೇಳೆ ಉದಯ್ ಮೃತಪಟ್ಟ ನಂತರ ಕಾಣದಂತೆ ಮಾಯವಾದನು ಚಿತ್ರತಂಡದ ಎಲ್ಲ ಪ್ಲಾನ್‍ಗಳೂ ಏರುಪೇರಾಗಿಬಿಟ್ಟವು. ಸತೀಶ್ ಅವರು ಕಾಣದಂತೆ ಮಾಯವಾದನು ಚಿತ್ರಕ್ಕೆ ಡೇಟ್ಸ್ ಅಡ್ಜಸ್ಟ್ ಮಾಡಲು ಆಗಲೇ ಇಲ್ಲ. ಆಗ ಆ ಅವಕಾಶ ಹೋಗಿದ್ದು ಧರ್ಮಣ್ಣ ಬಳಿಗೆ.

    ನಾನು ಪಾತ್ರ ಕೇಳಿ ಥ್ರಿಲ್ ಆದೆ. ಆದರೆ ಇದು ಸತೀಶ್ ಅವರು ಮಾಡಬೇಕಿದ್ದ ಪಾತ್ರ ಎಂಬ ಕಾರಣಕ್ಕೆ ಅವರನ್ನೂ ಸಂಪರ್ಕಿಸಿದೆ. ಎಲ್ಲ ಮಾತುಕತೆ ಆಗಿದೆ. ಪಾತ್ರ ಚೆನ್ನಾಗಿದೆ. ನೀವು ಮಾಡಿ. ಡೋಂಟ್ ವರಿ ಎಂದರು.

    ರಾಜ್ ಪತ್ತಿಪಾಟಿ ನಿರ್ದೇಶನದ ಚಿತ್ರದಲ್ಲಿ ಜಯಮ್ಮನ ಮಗ ಚಿತ್ರದ ನಿರ್ದೇಶಕ ವಿಕಾಸ್ ಹೀರೋ. ಸಿಂಧು ಲೋಕನಾಥ್ ಹೀರೋಯಿನ್. ಇದೇ ವಾರ ಸಿನಿಮಾ ರಿಲೀಸ್ ಆಗುತ್ತಿದೆ.

     

  • ನೀನಾಸಂ ಸತೀಶ್ ಕಾರ್ ಆ್ಯಕ್ಸಿಡೆಂಟ್

    sathish ninasam's car accident

    ನೀನಾಸಂ ಸತೀಶ್‍ಗೆ ಇತ್ತೀಚೆಗೆ ಅಪಘಾತಗಳು ಬೆನ್ನತ್ತಿದಂತಿವೆ. ಟೈಗರ್ ಗಲ್ಲಿ ಚಿತ್ರದ ಚಿತ್ರೀಕರಣ ವೇಳೆ ಸಾಹಸ ದೃಶ್ಯದ ಚಿತ್ರೀಕರಣದಲ್ಲಿ ಅಪಘಾತಕ್ಖಿಡಾಗಿದ್ದ ಸತೀಶ್, ಈ ಬಾರಿ ಮತ್ತೊಂದು ಅಪಾಯದಿಂದ ಪಾರಾಗಿದ್ದಾರೆ. ಮಂಡ್ಯ ಬಳಿ ನೀನಾಸಂ ಸತೀಶ್ ಅವರ ಕಾರು ಅಪಘಾತಕ್ಕೀಡಾಗಿದೆ.

    ಅದೃಷ್ಟವಶಾತ್, ನೀನಾಸಂ ಸತೀಶ್ ಕೊನೆಯ ಕ್ಷಣದಲ್ಲಿ ಕಾರ್ ಹತ್ತಿರಲಿಲ್ಲ. ಬದಲಿಗೆ ಕಾರ್‍ನಲ್ಲಿ ಸತೀಶ್ ಅವರ ಮೇಕಪ್ ಮ್ಯಾನ್, ಚಾಲಕ ಹಾಗೂ ಕೆಲವು ಸ್ನೇಹಿತರಿದ್ದರು. ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಯಾರಿಗೂ ಪ್ರಾಣಾಪಾಯವಾಗಿಲ್ಲ.

    ಅಯೋಗ್ಯ ಚಿತ್ರದ ಶೂಟಿಂಗ್‍ಗಾಗಿ ಮಂಡ್ಯದಲ್ಲಿರುವ ನೀನಾಸಂ ಸತೀಶ್, ತಕ್ಷಣ ಜೊತೆಯಲ್ಲಿದ್ದವರ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗಾರರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. 

     

  • ನೀನಾಸಂ ಸತೀಶ್ ಚಿತ್ರಕ್ಕೆ ಧನುಷ್ ಪ್ರಮೋಷನ್

    dhanush to release sathish's chambal

    ಅಯೋಗ್ಯ ಹಿಟ್ ಆದ ಖುಷಿಯಲ್ಲಿರೋ ನೀನಾಸಂ ಸತೀಶ್, ಚಂಬಲ್ ಚಿತ್ರದ ಬಿಡುಗಡೆಗೆ ಸಿದ್ಧತೆ ನಡೆಸಿದ್ದಾರೆ. ಚಂಬಲ್ ವಿಶೇಷ ಸಿನಿಮಾ. ಇದುವರೆಗೆ ನೀನಾಸಂ ಸತೀಶ್‍ರನ್ನು ನೋಡದೇ ಇರುವ ಲುಕ್ ಈ ಚಿತ್ರದಲ್ಲಿದೆ. ಕಥೆ ಕೂಡಾ ಡಿಫರೆಂಟ್. ಈಗ ಆ ಖುಷಿಗೆ ಇನ್ನೊಂದು ದೊಡ್ಡ ಖುಷಿ ಸೇರಿದೆ.

    ಚಂಬಲ್ ಚಿತ್ರದ ತಮಿಳು ವರ್ಷನ್‍ನ್ನು ರಜನಿಕಾಂತ್ ಅಳಿಯ, ಸ್ಟಾರ್ ನಟ ಧನುಷ್ ಪ್ರಮೋಟ್ ಮಾಡುತ್ತಿದ್ದಾರೆ. ಕನ್ನಡದಲ್ಲಿ ಚಿತ್ರಕ್ಕೆ ಈಗಾಗಲೇ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಧ್ವನಿ ಕೊಟ್ಟಿದ್ದಾರೆ. ಈಗ ಚಿತ್ರಕ್ಕೆ ಧನುಷ್ ಬೆಂಬಲವೂ ಸಿಕ್ಕಿದೆ. ಮಾರುಕಟ್ಟೆ, ಉತ್ತಮ ಬಾಂಧವ್ಯದ ದೃಷ್ಟಿಯಿಂದ ಇದೊಂದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ ನೀನಾಸಂ ಸತೀಶ್.

  • ನೀನಾಸಂ ಸತೀಶ್ ಜೊತೆ ಕುಲುವಿನಲ್ಲಿ ಆದಿತಿ ಪ್ರಭುದೇವ ಮ್ಯಾಟ್ನಿ

    ನೀನಾಸಂ ಸತೀಶ್ ಜೊತೆ ಕುಲುವಿನಲ್ಲಿ ಆದಿತಿ ಪ್ರಭುದೇವ ಮ್ಯಾಟ್ನಿ

    ಮೊನ್ ಮೊನ್ನೆ ತಾನೇ ಮದುವೆಯಾಗಿದೆ.. ಹೊಸ ಗಂಡನನ್ನ ಬಿಟ್ಟು ಮತ್ತೆ ಡ್ಯೂಟಿಗೆ ಹೊರಟುಬಿಟ್ರಾ ಆದಿತಿ ಪ್ರಭುದೇವ ಎಂದು ಅಭಿಮಾನಿಗಳು ನೊಂದುಕೊಳ್ಳುತ್ತಿದ್ದರೆ ಆದಿತಿ ಮಾತ್ರ ಆಗಲೇ ಶೂಟಿಂಗಿನಲ್ಲಿ ಬ್ಯುಸಿ. ಅದು ಮೈಮೂಳೆಗಳನ್ನೂ ಕೊರೆಯುವ ಚಳಿ. ಅಂತಹ ಪ್ರದೇಶದಲ್ಲಿ ಹಾಡಿನ ಚಿತ್ರೀಕರಣ. ಹಾಡಿನ ಚಿತ್ರೀಕರಣಕ್ಕೆ ಹೋದಾಗ ಅಲ್ಲಿನ ಪ್ರಕೃತಿ ಸೌಂದರ್ಯ ನೋಡಿ ತುಂಬಾ ಖುಷಿ ಆಯಿತು. ನಮ್ಮ ನೆಲದ ಕುಲು ಮನಾಲಿ ಮುಂದೆ ಯಾವ ವಿದೇಶ ತಾಣದ ಸೌಂದರ್ಯ ಕಡಿಮೆಯೇ. ಕುನುಮನಾಲಿಯ ಅತ್ಯಂತ ಅಪಾಯಕಾರಿ ಹಾಗೂ ಮೈನಸ್ 5 ಡಿಗ್ರಿ ಸೆಲ್ಸಿಯಸ್ನಲ್ಲಿ ಚಿತ್ರೀಕರಣ ಮಾಡಿದ್ದೇವೆ. ಎಂದು ಹೇಳಿಕೊಂಡಿದ್ದಾರೆ ನಟ ನೀನಾಸಂ ಸತೀಶ್.

    ಅಂದಹಾಗೆ ಈ ಚಿತ್ರಕ್ಕೆ ನಾಯಕಿಯಾಗಿದ್ದವರು ರಚಿತಾ ರಾಮ್. ಆದರೆ ಈಗ ಹಾಡು ಶೂಟಿಂಗ್ ಆಗಿರೋದು ಆದಿತಿ ಪ್ರಭುದೇವ ಜೊತೆ. ಹಾಗಾದರೆ ರಚಿತಾ, ಮ್ಯಾಟ್ನಿ ಟೀಮಿನಿಂದ ಹೊರಗೆ ಬಂದ್ರಾ? ಗೊತ್ತಿಲ್ಲ. ಅಯೋಗ್ಯ ನಂತರ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಜೊತೆಯಾಗಿರುವ ಕಾರಣಕ್ಕೇ ಸೆನ್ಸೇಷನ್ ಸೃಷ್ಟಿಸಿದ್ದ ಸಿನಿಮಾ ಮ್ಯಾಟ್ನಿ. 2020ರಲ್ಲಿ ಘೋಷಣೆಯಾಗಿದ್ದ ಚಿತ್ರ. ನಂತರ ಕೊರೊನಾ.. ಇನ್ನೊಂದು.. ಮತ್ತೊಂದು. ಎಂದು ಮುಂದೆ ಮುಂದೆ ಹೋಗಿ ಈಗ ಬ್ಯುಸಿಯಾಗಿ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದೆ. ರಚಿತಾ ರಾಮ್ ಜಾಗಕ್ಕೇ ಆದಿತಿ ಪ್ರಭುದೇವ ಬಂದ್ರಾ? ಅಥವಾ ಆದಿತಿ ಪ್ರಭುದೇವ ಚಿತ್ರದ ಇನ್ನೊಬ್ಬ ನಾಯಕಿನಾ..? ಡೈರೆಕ್ಟರ್ ಮನೋಹರ್ ಕಾಂಪಲ್ಲಿಯವರೇ ಹೇಳಬೇಕು.

    ಪಾರ್ವತಿ ಎಸ್ ಗೌಡ ನಿರ್ಮಾಣದ ಈ ಚಿತ್ರಕ್ಕೆ ಈ ಹಾಡಿನೊಂದಿಗೆ ಬಹುತೇಕರಮ ಮುಕ್ತಾಯ ಆಗಿದೆ. ನಾಗಭೂಷಣ್, ಪೂರ್ಣ, ಶಿವರಾಜ್ ಕೆ ಆರ್ ಪೇಟೆ, ಪೂರ್ಣಚಂದ್ರ ಅವರು ಚಿತ್ರದಲ್ಲಿ ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ಸುಧಾಕರ್ ಹಾಗೂ ಕೀರ್ತನ್ ಪಾಜಾರ್ ಛಾಯಾಗ್ರಹಣ ಚಿತ್ರಕ್ಕಿದೆ.

     

  • ನೀನಾಸಂ ಸತೀಶ್ ತಾಯಿ ವಿಧಿವಶ

    ನೀನಾಸಂ ಸತೀಶ್ ತಾಯಿ ವಿಧಿವಶ

    ನಟ ನೀನಾಸಂ ಸತೀಶ್ ಅವರ ತಾಯಿ ಚಿಕ್ಕತಾಯಮ್ಮ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಚಿಕ್ಕತಾಯಮ್ಮ ಅವರನ್ನು ಮಗುವಿನಿಂತೆ ನೋಡಿಕೊಳ್ಳುತ್ತಿದ್ದರು ಸತೀಶ್. ಸತೀಶ್ ಅವರನ್ನು ಕಷ್ಟಪಟ್ಟು ಬೆಳೆಸಿದ್ದ ತಾಯಿ ಚಿಕ್ಕತಾಯಮ್ಮ ಅವರಿಗೆ ಸತೀಶ್ ಸೇರಿ ಎಂಟು ಜನ ಮಕ್ಕಳು.

    ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಯಾಲದಹಳ್ಳಿ, ಸತೀಶ್ ಅವರ ಹುಟ್ಟೂರು. ಅದೇ ಊರಿನಲ್ಲಿ ಚಿಕ್ಕತಾಯಮ್ಮ ಅವರ ಅಂತ್ಯಸಂಸ್ಕಾರ ನೆರವೇರಿದೆ.

  • ನೀನಾಸಂ ಸತೀಶ್ ಬ್ರಹ್ಮಚಾರಿ 100% ವರ್ಜಿನ್

    sathis ninasam's next titled bramhachari

    ಅರೆ.. ನೀನಾಸಂ ಸತೀಶ್ ಅವರಿಗೆ ಮದುವೆಯಾಗಿ ಮುದ್ದಾದ ಮಗು ಇರುವ ಸುದ್ದಿ ಓದಿದ್ದೆನಲ್ಲ.. ಅವರು ಮತ್ತೆ ಬ್ರಹ್ಮಚಾರಿಯಾಗೋಕೆ ಹೇಗೆ ಸಾಧ್ಯ ಎಂದು ತಲೆಗೆ ಹುಳ ಬಿಟ್ಕೋಬೇಡಿ. ಇದು ಸಿನಿಮಾ ಫೀಲ್ಡು. ಏನ್ ಬೇಕಾದ್ರೂ ಆಗಬಹುದು. ಹೀಗಾಗಿ ನೀನಾಸಂ ಸತೀಶ್ ಬ್ರಹ್ಮಚಾರಿ ಆಗಿದ್ದಾರೆ.

    ಲವ್ ಇನ್ ಮಂಡ್ಯ ಕಾಂಬಿನೇಷನ್ ಸತೀಶ್ ಮತ್ತು ಉದಯ್ ಮೆಹ್ತಾ ಒಟ್ಟಿಗೇ ಸಿನಿಮಾ ಮಾಡ್ತಾರೆ ಅನ್ನೋ ಸುದ್ದಿಯ ಅಪ್‍ಡೇಟ್ ಸುದ್ದಿ ಇದು. ಆ ಚಿತ್ರದ ಹೆಸರು ನೀನಾಸಂ ಸತೀಶ್ ಬ್ರಹ್ಮಚಾರಿ 100% ವರ್ಜಿನ್. ಡೈರೆಕ್ಟರ್ ಡಬಲ್ ಎಂಜಿನ್, ಬಾಂಬೆ ಮಿಠಾಯಿ ಸಿನಿಮಾ ನಿರ್ದೇಶಿಸಿದ್ದ ಚಂದ್ರಮೋಹನ್. ಯುಗಾದಿ ಹಬ್ಬಕ್ಕೆ ಸಿನಿಮಾ ಶುರು.

  • ನೀನಾಸಂ ಸತೀಶ್, ಶರ್ಮಿಳಾ ಮಾಂಡ್ರೆ ಕ್ರೈಂ ಥ್ರಿಲ್ಲರ್

    sathish ninasam and shramila mandre pair up for next film

    ನೀನಾಸಂ ಸತೀಶ್ ಸಿಕ್ಕಾಪಟ್ಟೆ ಬ್ಯುಸಿಯಾಗಿಬಿಟ್ಟಿದ್ದಾರೆ. ಅವರ ಕೈಲೀಗ ಸಾಲು ಸಾಲು ಚಿತ್ರಗಳಿವೆ. ಬ್ರಹ್ಮಚಾರಿ, ಗೋದ್ರಾ, ಪರಿಮಳ ಲಾಡ್ಜ್ ನಂತರ ಮತ್ತೊಂದು ಚಿತ್ರಕ್ಕೆ ಓಕೆ ಎಂದಿದ್ದಾರೆ ನೀನಾಸಂ ಸತೀಶ್. ಅದು ಶರ್ಮಿಳಾ ಮಾಂಡ್ರೆ ಜೊತೆ.

    ಹೊಸ ಚಿತ್ರಕ್ಕೆ ಶರ್ಮಿಳಾ ಮಾಂಡ್ರೆಯವರೇ ನಿರ್ಮಾಪಕಿ. ಆಕೆ ಚಿತ್ರದ ನಂತರ ತೆರೆಯಿಂದ ದೂರವೇ ಇದ್ದ ಶರ್ಮಿಳಾ, ಈಗ ತಮ್ಮದೇ ಬ್ಯಾನರ್ ಮೂಲಕ ಬರುತ್ತಿದ್ದಾರೆ. ಇದು ಕ್ರೈಂ ಥ್ರಿಲ್ಲರ್ ಕಥೆ ಎಂದಿದ್ದಾರೆ ಶರ್ಮಿಳಾ. ಅರವಿಂದ್ ಶಾಸ್ತ್ರಿ ನಿರ್ದೇಶಿಸುತ್ತಿರುವ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿಲ್ಲ. ಅಕ್ಟೋಬರ್‍ನಲ್ಲಿ ಚಿತ್ರ ಸೆಟ್ಟೇರಲಿದ್ದು, ಅರ್ಧಕ್ಕಿಂತಲೂ ಹೆಚ್ಚು ಭಾಗದ ಚಿತ್ರೀಕರಣ ಲಂಡನ್‍ನಲ್ಲಿಯೇ ನಡೆಯಲಿದೆ.  ಚಿತ್ರದಲ್ಲಿ ಶರ್ಮಿಳಾ ಕ್ರೈಂ ರಿಪೋರ್ಟರ್ ಆಗಿ ನಟಿಸುತ್ತಿದ್ದು, ಚಿತ್ರ ಪ್ರಿ-ಪ್ರೊಡಕ್ಷನ್ ಹಂತದಲ್ಲಿದೆ.

  • ಪಗೈವಾನುಕು ಅರುಲ್ವೈ ನೀನಾಸಂ ಸತೀಶ್

    sathish ninsam debuts in tamil

    ನೀನಾಸಂ ಸತೀಶ್, ತಮಿಳಿನತ್ತ ಹೊರಟಿದ್ದಾರೆ. ಅಯೋಗ್ಯ ಚಿತ್ರದ ನಂತರ ಮತ್ತೊಮ್ಮೆ ಹಿಟ್ ಟ್ರ್ಯಾಕ್‍ಗೆ ಮರಳಿದ ಸತೀಶ್, ತಮಿಳಿನಲ್ಲಿ ಭರ್ಜರಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ತಮಿಳಿನಲ್ಲಿ ಸತೀಶ್ ಅಭಿನಯದ ಚಿತ್ರದ ಹೆಸರು ಪಗೈವಾನುಕು ಅರುಲ್ವೈ.

    ಪಗೈವಾನುಕು ಅರುಲ್ವೈ ಚಿತ್ರದ ನಿರ್ದೇಶಕ ಅನೀಶ್. ಈ ಹಿಂದೆ ತಿರುವಾನಂ ಎನ್ನುಂ ನಿಖಾ ಅನ್ನೋ ಚಿತ್ರ ನಿರ್ದೇಶಿಸಿ ಗೆದ್ದಿದ್ದವರು. ಸತೀಶ್ ಅಭಿನಯದ ಸಿನಿಮಾ ಪಗೈವಾನುಕು ಅರುಲ್ವೈ ಟೈಟಲ್ ಲಾಂಚ್, ಸ್ವಿಟ್ಜರ್‍ಲ್ಯಾಂಡ್‍ನಲ್ಲಿ ಡಿಸೆಂಬರ್ 10ರಂದು ನಡೆಯಲಿದೆ.

    Related Articles :-

    Ayogya’ Sathish To Make His Debut In Tamil

  • ಪೆಟ್ರೋಮ್ಯಾಕ್ಸ್ ಚಿತ್ರಕ್ಕೆ ಯು ಸರ್ಟಿಫಿಕೇಟ್

    ಪೆಟ್ರೋಮ್ಯಾಕ್ಸ್ ಚಿತ್ರಕ್ಕೆ ಯು ಸರ್ಟಿಫಿಕೇಟ್

    ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೇಲರ್ ರಿಲೀಸ್ ಆದಾಗಿನಿಂದ ಎಲ್ಲರೂ ಚಿತ್ರದ ಸಿಂಗಲ್ ಮತ್ತು ಡಬಲ್ ಮೀನಿಂಗ್ ಬಗ್ಗೆ ಮಾತನಾಡುತ್ತಿದ್ದಾರೆ. ಟ್ರೇಲರಿನಲ್ಲೇ ಬೆಡ್‍ರೂಂ ಸೀನ್ ಬೇಕಿತ್ತಾ..? ಅಂತಾ ಡೈಲಾಗು ಬೇಕಿತ್ತಾ..? ಬ್ಯಾಟಂತೆ.. ಪಿಚ್ಚಂತೆ.. ಔಟ್ ಅಂತೆ.. ಕವರ್ ಡ್ರೈವ್ ಅಂತೆ.. ಥೂ.. ಥೂ..ಥೂ..ಥೂ..ಥೂ.. ಛೀ..ಛೀ..ಛೀ..ಛೀ..ಛೀ..ಛೀ.. ಎನ್ನುವವರಿಗೆಲ್ಲ ಉತ್ತರ ಈಗ ಸೆನ್ಸಾರ್ ಬೋರ್ಡಿನಿಂದ ಬಂದಿದೆ. ಚಿತ್ರಕ್ಕೆ ಯು ಸರ್ಟಿಫಿಕೇಟ್ ನೀಡಿದೆ ಸೆನ್ಸಾರ್ ಮಂಡಳಿ.

    ವಿಜಯ್ ಪ್ರಸಾದ್ ಹಚ್ಚಿರೋ ಪೆಟ್ರೋಮ್ಯಾಕ್ಸ್‍ನಲ್ಲಿ ನೀನಾಸಂ ಸತೀಶ್, ಹರಿಪ್ರಿಯಾ, ಕಾರುಣ್ಯ ರಾಮ್, ನಾಗಭೂಷಣ್, ಅರುಣ್ ಕುಮಾರ್, ಅಚ್ಯುತ್ ಕುಮಾರ್, ವಿಜಯಲಕ್ಷ್ಮೀ ಸಿಂಗ್, ಸುಧಾ ಬೆಳವಾಡಿ, ವೀಣಾ ಸುಂದರ್, ಪದ್ಮಜಾ ರಾವ್... ಸುಮನ್ ರಂಗನಾಥ್.. ಎಲ್ಲರೂ ಇದ್ದಾರೆ. ಇನ್ನು ಕೆಲವೇ ದಿನ.. ಥಿಯೇಟರುಗಳಿಗ ಹಾಲು ಉಕ್ಕಿಸೋಕೆ ಬರಲಿದ್ದಾರೆ.

  • ಪೆಟ್ರೋಮ್ಯಾಕ್ಸ್ ರಿಲೀಸ್ ಡೇಟ್ ಫಿಕ್ಸ್ : ಜುಲೈ 15ಕ್ಕೆ

    ಪೆಟ್ರೋಮ್ಯಾಕ್ಸ್ ರಿಲೀಸ್ ಡೇಟ್ ಫಿಕ್ಸ್ : ಜುಲೈ 15ಕ್ಕೆ

    ತರಲೆ.. ತುಂಟಾಟ.. ಪೋಲಿ.. ಎಂದೆಲ್ಲ ತನ್ನವರಿಂದಲೇ ಕರೆಸಿಕೊಳ್ಳೋ ವಿಜಯ್ ಪ್ರಸಾದ್. ಪಾತ್ರ ಯಾವುದೇ ಇರಲಿ.. ಅದಕ್ಕೆ ತಕ್ಕಂತೆ ಸೆಟ್ ಆಗೋ ನೀನಾಸಂ ಸತೀಶ್.. ಇವರಿಬ್ಬರ ಜಂಟಿ ಕನಸಿನ ಸಿನಿಮಾ ಪೆಟ್ರೋಮ್ಯಾಕ್ಸ್. ಜುಲೈ 15ಕ್ಕೆ ರಿಲೀಸ್ ಆಗುತ್ತಿದೆ. ಈ ಚಿತ್ರಕ್ಕೆ ಸತೀಶ್ ಮತ್ತು ವಿಜಯ್ ಪ್ರಸಾದ್ ಇಬ್ಬರೂ ನಿರ್ಮಾಪಕರು.

    ನಾಲ್ವರು ಅನಾಥ ಹುಡುಗರು ಒಬ್ಬ ಸೀನಿಯರ್ ಮಹಿಳೆಯನ್ನು ಲವ್ ಮಾಡೋ ಕಥೆ ಸಿನಿಮಾದಲ್ಲಿದೆ. ಸತೀಶ್ ಜೊತೆಗೆ ಹರಿಪ್ರಿಯಾ, ಕಾರುಣ್ಯ ರಾಮ್, ನಾಗಭೂಷಣ್, ಹೇಮಾ ದತ್ ನಟಿಸಿರುವ ಚಿತ್ರವಿದು. ಪೆಟ್ರೋಮ್ಯಾಕ್ಸ್ : ಮನೆದೇವ್ರಾಣೆಗೂ ಅದಲ್ಲ... ಸಿನಿಮಾ ಜುಲೈ 15ಕ್ಕೆ ರಿಲೀಸ್ ಆಗಲಿದೆ.

  • ಪೆಟ್ರೋಮ್ಯಾಕ್ಸ್`ಗೆ ಕಾರುಣ್ಯ ರಾಮ್

    Karunya Ram Joins 'Petromax' Team

    ನೀರ್ ದೋಸೆ ಖ್ಯಾತಿಯ ವಿಜಯ್ ಪ್ರಸಾದ್ ಅವರ ನಿರ್ದೇಶನದ ಹೊಸ ಸಿನಿಮಾ ಪೆಟ್ರೋಮ್ಯಾಕ್ಸ್`ಗೆ ಈಗ ವಜ್ರಕಾಯ ಬೆಡಗಿಯೂ ಸೇರಿಕೊಂಡಿದ್ದಾರೆ. ನಟಿ ಕಾರುಣ್ಯ ರಾಮ್ ಚಿತ್ರದ ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಈಗಾಗಲೇ ಪೆಟ್ರೋಮ್ಯಾಕ್ಸ್ ಚಿತ್ರದಲ್ಲಿ ಹರಿಪ್ರಿಯಾ ಕೂಡಾ ಇರೋದು ವಿಶೇಷ.

    ಮೂವರು ಹುಡುಗರು, ಒಬ್ಬಳೇ ಹುಡುಗಿ.. ಅವರ ಜೀವನದ ಕಥೆ.. ವಿಜಯ್ ಪ್ರಸಾದ್ ಕಥೆ ಹೇಳೋ ವಿಶೇಷತೆ.. ಹೀಗೆ ಸ್ಪೆಷಲ್ಲಾಗಿರೋ ಈ ಕಥೆಯಲ್ಲಿ ಕಾರುಣ್ಯ ರೋಲ್ ಏನು ಅನ್ನೋದು ಸದ್ಯಕ್ಕೆ ಗೊತ್ತಿಲ್ಲ.

    ಲಾಕ್ ಡೌನ್ ನಂತರ ನಾನು ಕ್ಯಾಮೆರಾ ಎದುರಿಸ್ತಿರೋ ಮೊದಲ ಸಿನಿಮಾ. ಹರಿಪ್ರಿಯಾ ಇದ್ದರೂ, ವಿಜಯ್ ಪ್ರಸಾದ್ ಚಿತ್ರಗಳಲ್ಲಿ ಕಥೆಯೇ ಪ್ರಧಾನವಾಗಿರುತ್ತೆ, ಹೀಗಾಗಿ ನೋ ಟೆನ್ಷನ್. ನನ್ನ ಪಾತ್ರ ಪ್ರಮುಖವಾಗಿದೆ ಎಂದಿದ್ದಾರೆ ಕಾರುಣ್ಯ. ನೀನಾಸಂ ಸತೀಶ್ ನಾಯಕರಾಗಿರೋ ಚಿತ್ರವಿದು.