` rakshit shetty - chitraloka.com | Kannada Movie News, Reviews | Image

rakshit shetty

  • Avane Srimannarayana Set In 1980s

    rakshit's avane srimanarayana

    Rakshith Shetty's new film 'Avane Srimannarayana' is in the pre-production stage for more than 10 months and now the film is all set to be launched soon. The film is likely to be launched in the month of December.

    Rakshith Shetty says that the film is set in 80s backdrop. The story is about a corrupt police officer in a fictional town called Amaravathi in Northern Karnataka. The team is scouting for location in North Karnataka and apart from Rakshith Shetty, Sanvi Srivatsav, Achyuth Kumar and others in prominent roles.

    The film is said to be the one of the big budget films in Rakshith Shetty's career. The film's budget is around 15-20 crores and the team is looking for a returns of 75 crores from this film.

  • Kirik Party to Release in Australia on Jan 15th

    kirik party image

    Rakshith Shetty's new film 'Kirik Party' is not only Released in Chennai and Kochi. Now the film is all set to release in Australia on the 15th of January. 'Kirik Party' will be first screened in Melbourned on January 15th at the Village Cinemas - Fountain Gate at 4 PM. It will be later released in Village Cinemas at Werribee on January 22nd. On the same day the will be released in Event Cinemas at Liverpool. The film will be releasing in Perth Adelaide and Brisbane in the coming days.

    'Kirik Party' stars Rakshith, Achyuth Kumar and others in prominent roles. Actor turned director Rishabh Shetty who had directed 'Ricky' is the director of this film. Ajaneesh Lokanath has composed the music for the film, while Karam Chawla is the cinematographer. 'Kirik Party' is produced by actor-director Rakshith Shetty and Pushkar Mallikarjunaiah.

  • Rakshit Shetty, Shanvi in Rangi Taranga Producers New Movie

    rakshit shetty, shanvi srivatsav image

    Rangitaranga producer HV Prakash will be starting a new untitled movie starring Rakshit Shetty, Shanvi Srivatsav in lead. Movie is directed by Sachin who is making his debut. Basically Sachin is a movie editor and for this movie he has written the story, screenplay, dialogues and will be doing the editing.

    Shooting will be held in Bengaluru, Ooty and Munar. Godi Banna fame Charan Raj is scoring the music and Manohar Joshi is the cinematographer.

     

  • Sapta Sagaradaache Ello' Launched

    Sapta Sagaradaache Ello' Launched

    Rakshit Shetty's new film 'Sapta Sagaradaache Ello' being written and directed by Hemanth Rao was launched at the Dharmagiri Manjunatha Swamy Temple in Bangalore.

    'Sapta Sagaradaache Ello' is an intense love story, 'My films usually deal with relationships and this film also deals with the relationship of a boy and girl. The film shows a 10 year journey of a couple. The film travels in two timelines, while the first one is in 2010, the second one is in 2020. The shooting of the film will start from this month end. Before that, we are planning a workshop between the lead actors Rakshit Shetty and Rukmini Vasanth' says Hemanth.

    This is Rakshit's second film with Hemanth after 'Godhi Banna Sadhara Maikattu'. 'Hemanth told me the idea of the film in just 10 minutes, which I liked a lot. I wanted to be a part of the project and that's how it started' says Rakshit.

    Rakshit himself is producing the film under his Parmavah Pictures. The shooting for the film start from this month end and will complete by mid-july. Rakshith plans to release in the last week of December this year.

    Charan Raj is the music director, while Advaitha is the cinematographer.

  • ಅವನೇ ಶ್ರೀಮನ್ನಾರಾಯಣ ಕಲಿಸಿದ ಪಾಠವೇ ಚಾರ್ಲಿಯನ್ನು ಗೆಲ್ಲಿಸಿತು : ರಕ್ಷಿತ್ ಶೆಟ್ಟಿ

    ಅವನೇ ಶ್ರೀಮನ್ನಾರಾಯಣ ಕಲಿಸಿದ ಪಾಠವೇ ಚಾರ್ಲಿಯನ್ನು ಗೆಲ್ಲಿಸಿತು : ರಕ್ಷಿತ್ ಶೆಟ್ಟಿ

    777 ಚಾರ್ಲಿ. ಈಗ ಇಡೀ ದೇಶದಲ್ಲಿ ಸುದ್ದಿ ಮಾಡ್ತಿರೋ ಸಿನಿಮಾ. ಬಾಕ್ಸಾಫೀಸಿನಲ್ಲಿ ಬೊಂಬಾಟ್ ಕಲೆಕ್ಷನ್ ಮಾಡುತ್ತಾ 4ನೇ ವಾರದಲ್ಲೂ ಸಖತ್ತಾಗಿ ಕ್ಲಿಕ್ ಆಗಿದೆ. ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲಿ ನಿಧಾನಕ್ಕೆ ಪಿಕಪ್ ಆದ 777 ಚಾರ್ಲಿ, ಅಲ್ಲಿಯ ಪ್ರೇಕ್ಷಕರಿಗೂ ಇಷ್ಟವಾಗಿದ್ದು ವಿಶೇಷ. ಈ ಸಂದರ್ಭದಲ್ಲಿ ರಕ್ಷಿತ್ ಶೆಟ್ಟಿ ತಮ್ಮ ಅವನೇ ಶ್ರೀಮನ್ನಾರಯಣ ಚಿತ್ರವನ್ನ ನೆನಪಿಸಿಕೊಂಡಿದ್ದಾರೆ.

    ನಾನು ಈಗಲೂ ಅವನೇ ಶ್ರೀಮನ್ನಾರಾಯಣ ಸೋತಿತು ಎಂದು ಒಪ್ಪಿಕೊಳ್ಳಲ್ಲ. ಅದೊಂದು ಕೆಟ್ಟ ಬಿಸಿನೆಸ್. 777 ಚಾರ್ಲಿ ರಿಲೀಸ್ ವೇಳೆ ಮತ್ತೆ ನಾವೇನಾದರೂ ಅದೇ ರೀತಿ ಮಾಡಿದ್ದರೆ ನನಗೆ ಬರುತ್ತಿದ್ದ ಲಾಭದಲ್ಲಿ ಬಹುತೇಕ ಕಡಿಮೆಯಾಗುತ್ತಿತ್ತು. ನನಗೆ ಅವನೇ ಶ್ರೀಮನ್ನಾರಾಯಣ ದೊಡ್ಡ ಪಾಠ. ಸಿನಿಮಾ ಮೇಕಿಂಗ್, ಬಿಸಿನೆಸ್, ಲೈಫ್.. ಎಲ್ಲವನ್ನೂ ಕಲಿಸಿದ ಎಂದಿದ್ದಾರೆ ರಕ್ಷಿತ್ ಶೆಟ್ಟಿ.

  • ಅವನೇ ಶ್ರೀಮನ್ನಾರಾಯಣ ವೀಕೆಂಡ್ ಬಾಕ್ಸಾಫೀಸ್ ರಿಪೋರ್ಟ್

    avane srimnanarayana official box office report

    ಅವನೇ ಶ್ರೀಮನ್ನಾರಾಯಣ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು..? ಗಾಂಧಿನಗರದ ಮೂಲಗಳ ಪ್ರಕಾರ ಮೊದಲ ವೀಕೆಂಡ್ ಗಳಿಕೆ 25  ಕೋಟಿಯ ಗಡಿ ದಾಟಿದೆ. ಸೇಲ್ ಆಗಿರುವುದು 15 ಲಕ್ಷಕ್ಕೂ ಹೆಚ್ಚು ಟಿಕೆಟ್. 3 ದಿನಗಳಲ್ಲಿ 5 ಸಾವಿರ ಶೋ ಪ್ರದರ್ಶನಗೊಂಡಿವೆ. ಸ್ಸೋ.. ಪುಷ್ಕರ್ ಮಲ್ಲಿಕಾರ್ಜುನಯ್ಯ ಲಕ್ಷ್ಮೀ ದೇವಿಗೆ ಪೂಜೆ ಮಾಡುತ್ತಿರುವುದಕ್ಕೆ ಕಾರಣವೂ ಇದೆ. ಅಂದಹಾಗೆ.. ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗಿದ್ದರೂ, ಇನ್ನಷ್ಟು ಥಿಯೇಟರುಗಳಿಗೆ ಡಿಮ್ಯಾಂಡ್ ಬಂದಿದೆ. 2ನೇ ವಾರಕ್ಕೆ 80 ಚಿತ್ರಮಂದಿರಗಳು, ಸ್ಕ್ರೀನ್‍ಗಳು ಹೆಚ್ಚುವರಿಯಾರಿಗೆ ಸೇರ್ಪಡೆಯಾಗಲಿವೆ.

    ತೆಲುಗಿನಲ್ಲಿ ಈ ವಾರ ರಿಲೀಸ್. ಆಗಲೇ ಆಂಧ್ರ, ತೆಲಂಗಾಣದಲ್ಲಿ 36 ಸಾವಿರ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಆಗಿವೆ. `ನಮ್ಮ ಉದ್ದೇಶದ ಗಡಿಯನ್ನು ಮೊದಲನೇ ದಿನವೇ ಮುಟ್ಟಿದ್ದೇವೆ. ಒಂದು ಚಿತ್ರದ ಬಗ್ಗೆ ಎಲ್ಲ ರೀತಿಯಲ್ಲೂ.. ಎಲ್ಲ ಕೋನಗಳಲ್ಲೂ ಜನ ಮಾತನಾಡುತ್ತಿದ್ದಾರೆ ಅಂದರೆ, ಅದು ನಮ್ಮ ಸಿನಿಮಾದ ನಿಜವಾದ ಗೆಲುವು. ಅಂತಹ ಚಿತ್ರ ಕೊಟ್ಟಿರುವುದಕ್ಕೆ ನನಗೀಗ ಹೆಮ್ಮೆ ಎಂದಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ.

    3 ವರ್ಷದ ನಂತರ ಪ್ರತ್ಯಕ್ಷರಾದ ನಾರಾಯಣ ರಕ್ಷಿತ್ ಶೆಟ್ಟಿಗೆ, ಮೊದಲ ಚಿತ್ರದಲ್ಲೇ ಬಂಪರ್ ಹೊಡೆದ ನಿರ್ದೇಶಕ ಸೃಷ್ಟಿಕರ್ತ ಸಚಿನ್ ರವಿಗೆ, ಒಂದು ಚಿತ್ರಕ್ಕಾಗಿ ಸುದೀರ್ಘ ಡೇಟ್ಸ್ ಕೊಟ್ಟು ಕಾದ ಲಕ್ಷ್ಮೀ ಶಾನ್ವಿ ಶ್ರೀವಾತ್ಸವ್ ಅವರಿಗೆ ಇದು 2019ರ ಬಂಪರ್ ಉಡುಗೊರೆ.k

  • ಅವನೇ ಶ್ರೀಮನ್ನಾರಾಯಣ.. 12 ನಿಮಿಷ ರುದ್ರನರ್ತನ

    avane srimanarayana is a total mass entertainment

    ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿರೋದು ರಕ್ಷಿತ್ ಶೆಟ್ಟಿ. ಹೀಗಾಗಿ ಅದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿರಲಿದೆ ಎಂದುಕೊಂಡವರಿಗೆ ಒಂದು ಸ್ಪೆಷಲ್ ಸುದ್ದಿ ಇಲ್ಲಿದೆ. ಚಿತ್ರದಲ್ಲಿ ಸುಮಾರು 12 ನಿಮಿಷಗಳ ಆ್ಯಕ್ಷನ್ ಇದೆಯಂತೆ. ಚಿತ್ರದ ಕ್ಲೈಮಾಕ್ಸ್‍ನಲ್ಲಿ 6 ನಿಮಿಷದ ಫೈಟಿಂಗ್ ಇದ್ಯಂತೆ. 

    `ಇಡೀ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಬಾಡಿ ಲಾಂಗ್ವೇಜ್ ಬದಲಿಸಿಕೊಂಡಿದ್ದಾರೆ. ಒಂದೊಂದು ಫೈಟ್ ಸೀನ್ ಶೂಟ್ ಮಾಡೋಕೂ 10-15 ದಿನ ತೆಗೆದುಕೊಂಡಿದ್ದೇವೆ' ಎಂದು ಮಾಹಿತಿ ನೀಡಿದ್ದಾರೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ. 

  • ಎಲ್ಲೂ ಹೋಗಲ್ಲ.. ರಕ್ಷಿತ್ ಶೆಟ್ಟಿ ಎಲ್ಲೂ ಹೋಗಲ್ಲ..!

    ಎಲ್ಲೂ ಹೋಗಲ್ಲ.. ರಕ್ಷಿತ್ ಶೆಟ್ಟಿ ಎಲ್ಲೂ ಹೋಗಲ್ಲ..!

    ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಎಲ್ಲೂ ಹೋಗುತ್ತಿಲ್ಲ. ಅಂದ್ರೆ ಅವರು ಕನ್ನಡದಲ್ಲಿಯೇ ಇರಲಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಷ್ಟೇ ಸಿನಿಮಾ ಮಾಡ್ತಾರೆ. ತಮಿಳಿಗೂ ಹೋಗುತ್ತಿಲ್ಲ. ಇನ್ಯಾವ ಭಾಷೆಗೂ ಹೋಗುತ್ತಿಲ್ಲ. ಇದನ್ನು ಸ್ವತಃ ರಕ್ಷಿತ್ ಶೆಟ್ಟಿಯವರೇ ಖಚಿತ ಪಡಿಸಿದ್ದಾರೆ. 777 ಚಾರ್ಲಿ ಚಿತ್ರದ ಭರಪೂರ ಯಶಸ್ಸಿನ ನಂತರ ಸಹಜವಾಗಿಯೇ ರಕ್ಷಿತ್ ಶೆಟ್ಟಿಯವರಿಗೆ ಬೇಜಾನ್ ಡಿಮ್ಯಾಂಡ್ ಕ್ರಿಯೇಟ್ ಆಗಿತ್ತು. ಇದೀಗ ರಕ್ಷಿತ್ ಶೆಟ್ಟಿ ಅವೆಲ್ಲವನ್ನೂ ಸೈಡಿಗೆ ತಳ್ಳಿ ಇಲ್ಲೇ ಇರುವುದಾಗಿ ಹೇಳಿದ್ದಾರೆ.

    ರಕ್ಷಿತ್ ಶೆಟ್ಟಿ ಸದ್ಯಕ್ಕೆ ಹೇಮಂತ್ ರಾವ್ ಜೊತೆ ಸಪ್ತಸಾರದಾಚೆ ಎಲ್ಲೋ ಚಿತ್ರ ಮಾಡುತ್ತಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ರಕ್ಷಿತ್ ಮತ್ತು ಹೇಮಂತ್ ರಾವ್ ಇಬ್ಬರೂ ಜೊತೆಯಾಗಿರುವ ಚಿತ್ರ ಅದು. ಆ ಚಿತ್ರಕ್ಕಾಗಿ ಚಿತ್ರದ ಪಾತ್ರಕ್ಕಾಗಿ ಈಗಾಗಲೇ ಡುಮ್ಮಣ್ಣನಾಗಿರುವ ರಕ್ಷಿತ್ ಶೆಟ್ಟಿ ಪಾತ್ರದೊಳಗೆ ಮುಳುಗಿದ್ದಾರೆ.

    ಅದು ಮುಗಿಯುತ್ತಿದ್ದಂತೆಯೇ ಹೊಂಬಾಳೆಯವರಿಗೆ ಒಪ್ಪಿಕೊಂಡಿರುವ ರಿಚರ್ಡ್ ಆಂಟನಿ ಚಿತ್ರ ಶುರುವಾಗಬೇಕು. ಚಿತ್ರಕ್ಕೆ ರಕ್ಷಿತ್ ಶೆಟ್ಟಿಯವರದ್ದೇ ಡೈರೆಕ್ಷನ್ ಇರೋದ್ರಿಂದ ಕೆಲಸವೂ ಜಾಸ್ತಿ. ಸ್ಕ್ರಿಪ್ಟ್, ಪ್ರೀ ಪ್ರೊಡಕ್ಷನ್ ಕೆಲಸಗಳ ಜೊತೆಗೆ ನಟನೆಗೂ ತಯಾರಾಗಬೇಕು. ಉಳಿದವರು ಕಂಡಂತೆ ಚಿತ್ರದ ಪ್ರೀಕ್ವೆಲ್ ಎನ್ನಲಾಗುತ್ತಿದ್ದರೂ, ಗ್ಯಾರಂಟಿ ಏನೂ ಇಲ್ಲ.

    ಇವುಗಳ ಜೊತೆಗೆ ಪುಣ್ಯಕೋಟಿ ಅನ್ನೋ ಚಿತ್ರವನ್ನು ರಕ್ಷಿತ್ ಶೆಟ್ಟಿ ಘೋಷಿಸಿದ್ದಾರೆ. ಅದನ್ನು ಎರಡು ಭಾಗಗಳಲ್ಲಿ ಮಾಡುವ ಪ್ಲಾನ್ ರಕ್ಷಿತ್ ಶೆಟ್ಟಿಯವರದ್ದು. ಅವರದ್ದೇ ಡೈರೆಕ್ಷನ್.  ಅದೆಲ್ಲದರ ಜೊತೆಗೆ ಮಿಡ್ ನೈಟ್ ಟು ಮೋಕ್ಷ ಎಂಬ ಚಿತ್ರ ಲಿಸ್ಟಿನಲ್ಲಿದೆ.

    ತಮ್ಮ ಸಿನಿಮಾಗಳ ಬಗ್ಗೆ ಮಾಹಿತಿ ನೀಡಲು ರಕ್ಷಿತ್ ಶೆಟ್ಟಿ ಒಂದು ಟ್ವೀಟ್ ಮಾಡಿದ್ದರು. 'ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ನಂತರ ನನ್ನ ಮುಂದಿನ ಸಿನಿಮಾಗಳು ಈ ರೀತಿ ಇವೆ. RA (ರಿಚರ್ಡ್ ಆಂಟನಿ), PK1 (ಪುಣ್ಯಕೋಟಿ 1), PK 2 (ಪುಣ್ಯಕೋಟಿ 2), ಮತ್ತು  M2M (Midnight to Moksha)  ನನಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡುವ ನಾಲ್ಕು ಚಿತ್ರಗಳು ಮಾತ್ರ. ಸದ್ಯ 'ಕಿರಿಕ್ ಪಾರ್ಟಿ 2' ಮಾಡುವ ಯಾವ ಆಲೋಚನೆಯೂ ಇಲ್ಲ. ಆದರೆ 'ಕಿರಿಕ್ ಪಾರ್ಟಿ 2' ಬಗ್ಗೆ ನನಗೆ ಬೇರೆಯದೇ ರೀತಿಯ ಪ್ಲ್ಯಾನ್ಗಳು ಇದೆ, ನೋಡೋಣ... ಇದಿಷ್ಟು ಹೊರತುಪಡಿಸಿ, ಸೋಶಿಯಲ್ ಮೀಡಿಯಾದಲ್ಲಿ ನೀವೇನೇ ಓದಿದ್ದರೂ ಅದೆಲ್ಲವೂ ಸುಳ್ಳು. ಅದೆಲ್ಲ ಯಾವತ್ತಿಗೂ ನಿಜವಾಗುವುದಿಲ್ಲ. Love you all ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

    ಅಂದಹಾಗೆ ಇದಿಷ್ಟೂ ಕ್ಲಾರಿಫಿಕೇಷನ್ ನೀಡೋದಕ್ಕೆ ಕಾರಣ ವಿಕ್ರಂ ಚಿತ್ರದ ಡೈರೆಕ್ಟರ್ ಲೋಕೇಶ್ ಅವರ ಹೊಸ ಚಿತ್ರದಲ್ಲಿ ಕಮಲ್ ಹಾಸನ್, ವಿಜಯ್ ಜೊತೆ ರಕ್ಷಿತ್ ನಟಿಸುತ್ತಿದ್ದಾರೆ ಎಂಬ ಸುದ್ದಿಯಾಗಿತ್ತು. ಕಮಲ್ ಜೊತೆಗೆ ನಟಿಸುತ್ತಾರಂತೆ ಎಂಬ ಸುದ್ದಿಯೇ ಸೆನ್ಸೇಷನ್ ಸೃಷ್ಟಿಸಿತ್ತು. ಈ ಎಲ್ಲ ಸುದ್ದಿಗಳೂ ವದಂತಿಗಳಷ್ಟೇ ಎಂದು ಖಚಿತ ಪಡಿಸಿದ್ದಾರೆ ರಕ್ಷಿತ್ ಶೆಟ್ಟಿ.

  • ಐಶ್ವರ್ಯಾ ರೈ-ಮಣಿರತ್ನಂ ಸಿನಿಮಾ ಟೀಸರ್ ರಿಲೀಸ್ ಮಾಡಿದ ರಕ್ಷಿತ್ ಶೆಟ್ಟಿ

    ಐಶ್ವರ್ಯಾ ರೈ-ಮಣಿರತ್ನಂ ಸಿನಿಮಾ ಟೀಸರ್ ರಿಲೀಸ್ ಮಾಡಿದ ರಕ್ಷಿತ್ ಶೆಟ್ಟಿ

    ಪೊನ್ನಿಯಿನ್ ಸೆಲ್ವನ್. ಚೋಳರ ಕಾಲದ ಕಥೆ. ಚೋಳರು ಮತ್ತು ಪಾಂಡ್ಯರ ನಡುವೆ ನಡೆದ ಯುದ್ಧ ಮತ್ತು ಮರಾಮೋಸದ ಯುದ್ಧಗಳ ಕಥೆ. ರಾಣಿ ನಂದಿನಿಯ ಸೌಂದರ್ಯ, ಯುದ್ಧ, ಸೇಡುಗಳ ಕಥೆ. ಇದು ಐಶ್ವರ್ಯಾ ರೈ ಮತ್ತು ಮಣಿರತ್ನಂ ಕಾಂಬಿನೇಷನ್ ಸಿನಿಮಾ. ಮಣಿರತ್ನಂ ನಿರ್ದೇಶನದ ಈ ಚಿತ್ರದಲ್ಲಿ ಐಶ್ವರ್ಯಾ ರೈ, ತ್ರಿಷಾ, ವಿಕ್ರಂ, ಕಾರ್ತಿ, ಜಯಂ ರವಿ, ಪ್ರಕಾಶ್ ರೈ.. ಹೀಗೆ ದೊಡ್ಡ ಕಲಾವಿದರ ದಂಡೇ ಇದೆ.

    ಚಿತ್ರ ಕನ್ನಡದಲ್ಲೂ ಬರುತ್ತಿದ್ದು, ಕನ್ನಡದ ಟೀಸರ್‍ನ್ನು ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿದ್ದಾರೆ. ಕಲ್ಕಿ ಕೃಷ್ಣಮೂರ್ತಿ ಎಂಬುವವರು 1955ರಲ್ಲಿ ಬರೆದಿದ್ದ ಬೃಹತ್ ಕಾದಂಬರಿಗಳನ್ನು ಆಧರಿಸಿ ಮಾಡಿರುವ ಸಿನಿಮಾ ಇದು. ಚಿತ್ರ ಎರಡು ಭಾಗಗಳಲ್ಲಿ ಬರುತ್ತಿದ್ದು, ಈಗ ಮೊದಲ ಭಾಗ ಸಿದ್ಧವಾಗಿದೆ. ಬಾಹುಬಲಿ, ಪುಷ್ಪ, ಆರ್.ಆರ್.ಆರ್. ಕೆಜಿಎಫ್, ವಿಕ್ರಂ ನಂತರ ಇದು ದಕ್ಷಿಣದಿಂದ ಬರಲಿರುವ ಮತ್ತೊಂದು ಬ್ಲಾಕ್ ಬಸ್ಟರ್ ಎನ್ನುತ್ತಿದೆ ಬಾಲಿವುಡ್.

  • ಕಿರಿಕ್ ಪಾರ್ಟಿ ಡೇಟಿಗೇ ಅವನೇ ಶ್ರೀಮನ್ನಾರಾಯಣ

    avane srimanarayana to release in december

    ಅವನೇ ಶ್ರೀಮನ್ನಾರಾಯಣ. ಕನ್ನಡದ ಬಹುಕೋಟಿ ಬಜೆಟ್ ಸಿನಿಮಾ. ರಕ್ಷಿತ್ ಶೆಟ್ಟಿ, ಶಾನ್ವಿ ಅಭಿನಯದ ಚಿತ್ರ ಪ್ರೊಡಕ್ಷನ್ ಹಂತದಲ್ಲೇ 2 ವರ್ಷ ಪೂರೈಸಿದೆ. ಬರೋಬ್ಬರಿ 200 ದಿನಗಳ ಶೂಟಿಂಗ್ ಆಗಿದೆ. ಸಿನಿಮಾ ರಿಲೀಸ್ ಯಾವಾಗ ಎಂಬ ಪ್ರಶ್ನೆಗೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಇತ್ತೀಚೆಗೆ 70 ದಿನಗಳ ಕೌಂಟ್ ಡೌನ್ ಕೊಟ್ಟಿದ್ದರು. ಈಗ ರಿಲೀಸ್ ಡೇಟ್ ಹೊರಬಿದ್ದಿದೆ.

    ಎಲ್ಲವೂ ಪ್ಲಾನ್ ಪ್ರಕಾರವೇ ಆದರೆ, ಡಿಸೆಂಬರ್ ಕೊನೆಯಲ್ಲಿ ಅವನೇ ಶ್ರೀಮನ್ನಾರಾಯಣ ರಿಲೀಸ್ ಆಗಲಿದೆ. ಅದು ಕಿರಿಕ್ ಪಾರ್ಟಿ ರಿಲೀಸ್ ಆದ ಡೇಟ್ನಲ್ಲೇ ಬರುವ ಸಾಧ್ಯತೆ ಹೆಚ್ಚು. 2016ರಲ್ಲಿ ಕಿರಿಕ್ ಪಾರ್ಟಿ ಬಾಕ್ಸಾಫೀಸ್ನಲ್ಲಿ ಅಲೆಲೆಲೆಲೆ.. ಎಂದೇ ಸದ್ದು ಮಾಡಿತ್ತು. ಈಗ ಶ್ರೀಮನ್ನಾರಾಯಣನ ಟೈಂ.

     

  • ಕಿರಿಕ್ ಪಾರ್ಟಿ ರೆಕಾರ್ಡ್ ಮೊದಲ ವಾರಕ್ಕೇ ಮುರಿದ ನಾರಾಯಣ

    avane srimannarayana breaks kirik party record

    ಕಿರಿಕ್ ಪಾರ್ಟಿ, ರಕ್ಷಿತ್ ಶೆಟ್ಟಿ ವೃತ್ತಿ ಜೀವನದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ. ಆ ಚಿತ್ರ ರಿಲೀಸ್ ಆದ 3 ವರ್ಷಗಳ ನಂತರ ತೆರೆಗೆ ಬಂದ ಅವನೇ ಶ್ರೀಮನ್ನಾರಾಯಣ, ಮೊದಲ ವಾರವೇ ಬಾಕ್ಸಾಫೀಸ್ ದಾಖಲೆ ಮುರಿದಿದೆ. 400 ಚಿತ್ರಮಂದಿರಗಳಲ್ಲಿ ತೆರೆ ಕಂಡಿರುವ ಅವನೇ ಶ್ರೀಮನ್ನಾರಾಯಣ, ಮೊದಲ ವಾರವೇ ಕಿರಿಕ್‌ ಪಾರ್ಟಿ ಸಿನಿಮಾಗಿಂತ ನಾಲ್ಕು ಪಟ್ಟು ಹೆಚ್ಚು ಗಳಿಸಿದೆ ಎಂದು ಸ್ವತಃ ರಕ್ಷಿತ್ ಶೆಟ್ಟಿ ಹೇಳಿಕೊಂಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಥಿಯೇಟರ್ ವಿಸಿಟ್ ನಂತರ ಮಾತನಾಡಿದ ರಕ್ಷಿತ್ ಶೆಟ್ಟಿ, ಈ ಚಿತ್ರ ಮಾಸ್ ಪ್ರೇಕ್ಷಕರ ಜತೆಗೆ, ಕೌಟುಂಬಿಕ ಪ್ರೇಕ್ಷಕರನ್ನೂ ಸೆಳೆದಿದೆ ಎಂದು ತಿಳಿಸಿದ್ದಾರೆ. ವಿಜಯಯಾತ್ರೆ ನಡೆಸುತ್ತಿರುವ ರಕ್ಷಿತ್ ಶೆಟ್ಟಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ನಾವು ನಿರೀಕ್ಷಿಸಿದಷ್ಟು ಪ್ರತಿಕ್ರಿಯೆ ಸಿಗಲಿಲ್ಲ ಎಂದು ಪ್ರಾಮಾಣಿಕವಾಗಿಯೇ ಒಪ್ಪಿಕೊಂಡಿದ್ದಾರೆ. ಆದರೆ, ವಿಮರ್ಶೆ ನೋಡಿ ಹಾಗೂ ಸಿನಿಮಾ ನೋಡಿದವರ ಬಾಯಿ ಮಾತಿನ ಪ್ರಚಾರದಿಂದಾಗಿ ಸಿನಿಮಾಗೆ ಜನ ಬರುವ ಸಂಖ್ಯೆ ಹೆಚ್ಚುತ್ತಿದೆ ಎಂಬ ಖುಷಿಯನ್ನೂ ಹಂಚಿಕೊಂಡಿದ್ದಾರೆ.

    ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಣದ ಅವನೇ ಶ್ರೀಮನ್ನಾರಾಯಣ ಚಿತ್ರದಲ್ಲಿ ಶಾನ್ವಿ ಶ್ರೀವಾತ್ಸವ್ ನಾಯಕಿ. ಸಚಿನ್ ರವಿ ನಿರ್ದೇಶಕ. ಒಟ್ಟಾರೆ ಇಡೀ ಚಿತ್ರತಂಡ ಸಂಭ್ರಮ ಯಾತ್ರೆಯಲ್ಲಿದೆ.

  • ಗಡಿ ದಾಟಿಯೂ ಗೆದ್ದ ಸಪ್ತ ಸಾಗರದಾಚೆ ಎಲ್ಲೋ..

    ಗಡಿ ದಾಟಿಯೂ ಗೆದ್ದ ಸಪ್ತ ಸಾಗರದಾಚೆ ಎಲ್ಲೋ..

    ರಕ್ಷಿತ್ ಶೆಟ್ಟಿ ಅವರ ಸಪ್ತ ಸಾಗರದಾಚೆ ಎಲ್ಲೋ ಕನ್ನಡದಲ್ಲಷ್ಟೇ ಅಲ್ಲ, ತೆಲುಗಿನಲ್ಲೂ ಜಯಭೇರಿ ಬಾರಿಸಿದೆ. ಕನ್ನಡದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಸಪ್ತಸಾಗರಾಲು ದಾಟಿ ಅನ್ನೋ ಹೆಸರಲ್ಲಿ ತೆಲುಗಿಗೆ ಡಬ್ ಆಗಿ ರಿಲೀಸ್ ಆಗಿದೆ. ಹೇಮಂತ್ ರಾವ್ ನಿರ್ದೇಶನದ ಈ ಪ್ರೇಮಕಥೆಗೆ ತೆಲುಗರೂ ಶರಣಾಗಿ ಹೋಗಿದ್ದಾರೆ.

    ಮನು- ಪ್ರಿಯಾ ಪ್ರೇಮಕತೆಗೆ ಫಿದಾ ಆಗೋಗಿದ್ದಾರೆ. ಮೊದಲ ದಿನ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ ನೋಡಿ 2ನೇ ದಿನ ಶೋಗಳ ಸಂಖ್ಯೆ ಹೆಚ್ಚಿಸಲಾಗಿದೆ. ನಿರ್ದೇಶಕ ಹೇಮಂತ್ ರಾವ್ 'ಸಪ್ತ ಸಾಗರಾಲು ದಾಟಿ' ಮೊದಲ ದಿನ ಬ್ರೇಕ್ ಈವನ್ ಆಗಿದೆ. 2ನೇ ದಿನ ಆಂಧ್ರದಲ್ಲಿ 10, ತೆಲಂಗಾಣದಲ್ಲಿ 16 ಶೋಗಳು ಸೇರಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.

     ಸೆಪ್ಟೆಂಬರ್ 1ಕ್ಕೆ ಕರ್ನಾಟಕದಲ್ಲಿ ರಿಲೀಸ್ ಆಗಿದ್ದ 'ಸಪ್ತ ಸಾಗರದಾಚೆ ಎಲ್ಲೋ' ಸಿನಿಮಾ ಪ್ರೇಕ್ಷಕರಿಗೆ ಮೋಡಿ ಮಾಡಿತ್ತು. ಈಗಾಗಲೇ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಸಿನಿಮಾ ಸದ್ದು ಮಾಡಿದೆ. ಇದೀಗ ತೆಲುಗಿನಲ್ಲೂ ಸದ್ದು ಮಾಡ್ತಿದೆ. ಮುಂದೆ ತಮಿಳು, ಮಲಯಾಳಂನಲ್ಲೂ ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ಚಿಂತನೆ ನಡೆಸುತ್ತಿದೆ. ಅಕ್ಟೋಬರ್ 19ಕ್ಕೆ ಚಿತ್ರದ 2ನೇ ಭಾಗ ರಿಲೀಸ್ ಆಗಲಿದೆ.

  • ಡುಮ್ಮನಾದ ರಕ್ಷಿತ್ ಶೆಟ್ಟಿ : ಡುಮ್ಮ ಮಾಡಿದ್ದು ಹೇಮಂತ್

    ಡುಮ್ಮನಾದ ರಕ್ಷಿತ್ ಶೆಟ್ಟಿ : ಡುಮ್ಮ ಮಾಡಿದ್ದು ಹೇಮಂತ್

    ಇತ್ತೀಚೆಗಷ್ಟೇ ರಕ್ಷಿತ್ ಶೆಟ್ಟಿ ತಮ್ಮ ಎರಡು ಚಿತ್ರಗಳ ಪ್ರಮೋಷನ್‍ನಲ್ಲಿ ಕಾಣಿಸಿಕೊಂಡಿದ್ದರು. ಸಕುಟುಂಬ ಸಮೇತ ಮತ್ತು 777 ಚಾರ್ಲಿ ಚಿತ್ರದ ಕಾರ್ಯಕ್ರಮಗಳಲ್ಲಿ ರಕ್ಷಿತ್ ಶೆಟ್ಟಿ ಅವರನ್ನು ನೋಡಿದ್ದವರು ವಾಟ್ ಈಸ್ ದಿಸ್ ಎಂದಿದ್ದರು. ಅಷ್ಟು ದಪ್ಪಗಾಗಿದ್ದರು ರಕ್ಷಿತ್ ಶೆಟ್ಟಿ. ಏನಿಲ್ಲವೆಂದರೂ 15ರಿಂದ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದರು ರಕ್ಷಿತ್ ಶೆಟ್ಟಿ. ಈಗ ಅವರ ಡುಮ್ಮನಾಗಿದ್ದರ ಹಿಂದಿನ ಸತ್ಯ ಹೊರಬಿದ್ದಿದೆ. ರಕ್ಷಿತ್ ಅವರನ್ನು ಇಷ್ಟು ಡುಮ್ಮಗಾಗಿಸಿದ್ದು ನಿರ್ದೇಶಕ ಹೇಮಂತ್ ರಾವ್ ಅವರು ಅನ್ನೋ ಸತ್ಯ ಗೊತ್ತಾಗಿದೆ.

    ಗೋಧಿ ಬಣ್ಣ ಸಾಧಾರಣ ಮೈಕಟ್ಟು ನಂತರ ಹೇಮಂತ್ ರಾವ್ ನಿರ್ದೇಶನದಲ್ಲಿ ಮತ್ತೊಮ್ಮೆ ರಕ್ಷಿತ್ ನಟಿಸುತ್ತಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ.. ಚಿತ್ರದ ಚಿತ್ರೀಕರಣ ಈಗಾಗಲೇ ಶೇ.50ರಷ್ಟು ಕಂಪ್ಲೀಟ್ ಆಗಿದೆ. ಅದರಲ್ಲಿ ರಕ್ಷಿತ್ ಶೆಟ್ಟಿ ಕಾಲೇಜು ಹುಡುಗ. ಸ್ಲಿಮ್ & ಸ್ಮಾರ್ಟ್. ಇನ್ನು ಬಾಕಿಯಿರೋ ಚಿತ್ರೀಕರಣಕ್ಕೆ ರಕ್ಷಿತ್ ಶೆಟ್ಟಿ ಇನ್ನೊಂದ್ ಹತ್ತು ವರ್ಷ ದೊಡ್ಡವರಾಗಬೇಕು. ಒಂದಿಷ್ಟು ಅಂಕಲ್ ಲುಕ್ಕೂ ಬೇಕು. ಸಾಲ್ಟ್ & ಪೆಪ್ಪರ್ ಗಡ್ಡ ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ತೂಕ ಒಂದಿಷ್ಟು ಹೆಚ್ಚಾಗಬೇಕು. ಅದೆಲ್ಲದರ ಫಲಿತಾಂಶವೇ ರಕ್ಷಿತ್ ಶೆಟ್ಟಿಯವರ ಈ ಲುಕ್ಕು.

    ಜೂನ್ 10ಕ್ಕೆ 777 ಚಾರ್ಲಿ ರಿಲೀಸ್ ಆಗುತ್ತಿದೆ. ಆ ಚಿತ್ರದ ಪ್ರಮೋಷನ್ ಮುಗಿಸಿದ ನಂತರ ರಕ್ಷಿತ್ ಶೆಟ್ಟಿ ಸಪ್ತಸಾಗರದಾಚೆಯೆಲ್ಲೋ ಚಿತ್ರಕ್ಕೆ ಎಂಟ್ರಿ ಕೊಡಲಿದ್ದಾರೆ. ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮನು ಹೆಸರಿನ ಪಾತ್ರ ಮಾಡುತ್ತಿದ್ದು, ರಕ್ಷಿತ್ ಎದುರು ಹೀರೋಯಿನ್ ಆಗಿರೋದು ರುಕ್ಮಿಣಿ ವಸಂತ್. ಅಂದಹಾಗೆ.. ರುಕ್ಮಿಣಿ ವಸಂತ್ ಗೆಟಪ್ ಕೂಡಾ ಚೇಂಜ್ ಆಗಲೇಬೇಕಲ್ವಾ..? ಹೇಮಂತ್ ರಾವ್ ಅವರಿಗ್ಯಾವ ಲುಕ್ ಕೊಟ್ಟಿದ್ದಾರೋ.. ಅವರೇ ಹೇಳಬೇಕು.

  • ಥಿಯೇಟರ್ ವಿಸಿಟ್ ಜೊತೆಗೆ ಹಿಂದಿಗೂ ಹೊರಟ ಕತ್ತೆ..ಪುಟ್ಟಿ..!

    ಥಿಯೇಟರ್ ವಿಸಿಟ್ ಜೊತೆಗೆ ಹಿಂದಿಗೂ ಹೊರಟ ಕತ್ತೆ..ಪುಟ್ಟಿ..!

    ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಸೂಪರ್ ಹಿಟ್ ಆಗಿದೆ. ರಕ್ಷಿತ್ ಶೆಟ್ಟಿ-ಹೇಮಂತ್ ರಾವ್ ಜೋಡಿ ಮತ್ತೊಂದು ಬಂಪರ್ ಹೊಡೆದಿದ್ದಾರೆ. ರೂಲ್ಸ್..ಟ್ರೆಂಡ್ ಮಾಡೋದ್ರಲ್ಲೇ ಫೇಮಸ್ ಆಗಿರೋ ಹೇಮಂತ್ ರಾವ್-ರಕ್ಷಿತ್ ಶೆಟ್ಟಿ, ಈ ಬಾರಿಯೂ ಗುರಿ ಮುಟ್ಟಿದ್ದಾರೆ. ರುಕ್ಮಿಣಿ ವಸಂತ್ ಕರ್ನಾಟಕದ ಹೊಸ ಕ್ರಶ್ ಆಗಿದ್ದಾರೆ. ಹೀಗಿರುವಾಗಲೇ ಚಿತ್ರತಂಡ ಥಿಯೇಟರ್ ವಿಸಿಟ್ ಶುರು ಮಾಡಿದೆ.

    ಸೆ.5ರಂದು ಮಂಡ್ಯ ಮತ್ತು ಮೈಸೂರಿನಲ್ಲಿ ಥಿಯೇಟರ್ ವಿಸಿಟ್ ಮಾಡಿದ ಸಪ್ತಸಾಗರದಾಚೆ ಎಲ್ಲೋ ತಂಡ, 6ನೇ ತಾರೀಕು ಹಾಸನ ಮತ್ತು ಉಡುಪಿ ಯಾತ್ರೆ ಮುಗಿಸಿದೆ. ಇಂದು ಉಡುಪಿ ಮತ್ತು ಮಣಿಪಾಲ್`ಗೆ ಭೇಟಿ ನೀಡಲಿದೆ. ಅದಾದ ನಂತರ ಸೆ.8ಕ್ಕೆ ಮಂಗಳೂರು ಹಾಗೂ ಸೆಪ್ಟೆಂಬರ್ 9ರಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದೆ.

    ಸೆ.10ಕ್ಕೆ ಹುಬ್ಬಳ್ಳಿ-ಧಾರವಾಡ, ಸೆ.11ಕ್ಕೆ ಬೆಳಗಾವಿ ಹಾಗೂ ಸೆ.12ಕ್ಕೆ ದಾವಣಗೆರೆ ಮತ್ತು ತುಮಕೂರು ತಲುಪಲಿದೆ. ಇದೀಗ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಹಿಂದಿಗೆ ಡಬ್ ಆಗುತ್ತಿದ್ದು, ತಮ್ಮ ಪಾತ್ರಕ್ಕೆ ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಅವರೇ ಹಿಂದಿಯಲ್ಲಿಯೂ ಡಬ್ ಮಾಡಿದ್ದಾರೆ.

  • ನೊಗ್‍ರಾಜನ ಮುಖದಲ್ಲಿ ನಗುವೋ ನಗು

    humble politician is happy

    ಹಂಬಲ್ ನೊಗ್‍ರಾಜ್, ಪೊಲಿಟಿಕಲ್ ಕಾಮಿಡಿ ಚಿತ್ರದ ನಿರ್ಮಾಪಕರ ಮುಖದಲ್ಲೀಗ ನಗುವೋ ನಗು. ಚಿತ್ರಕ್ಕೆ ಹಾಕಿದ ಬಂಡವಾಳದ ಜೊತೆ ಲಾಭವೂ ಬಂದಿದೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಈಗ ಸಂತಸದಲ್ಲಿದ್ದಾರೆ.

    ಇದೀಗ ಚಿತ್ರ ಇನ್ನೂ ಒಂದು ದಾಖಲೆ ಬರೆದಿದೆ. ಚಿತ್ರ ಅಮೇಜಾನ್ ಪ್ರೈಮ್ ವಿಡಿಯೋಗೆ ಮಾರಾಟವಾಗಿದೆ. ಅಮೇಜಾನ್ ಪ್ರೈಮ್ ವಿಡಿಯೋ ಖರೀದಿಸಿರುವ ಮೊದಲ ಕನ್ನಡ ಚಿತ್ರ ಆಪರೇಷನ್ ನೊಗ್‍ರಾಜ್. 

    ಥಿಯೇಟರಿನಿಂದಲೇ ಲಾಭ ಮಾಡಿದ್ದ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಈಗ ಅಮೇಜಾನ್‍ನಲ್ಲೂ ಲಾಭ ಪಡೆದಿದೆ. ಅಂದಹಾಗೆ ಚಿತ್ರದ ಸ್ಯಾಟಲೈಟ್ ರೈಟ್ಸ್ ಇನ್ನೂ ಪುಷ್ಕರ್ ಅವರ ಬಳಿಯೇ ಇದೆ. ಡಿಮ್ಯಾಂಡೂ ಇದೆ. 

     

     

  • ಪರಶು ಮತ್ತು ಪರಶುರಾಮರೇ ಹೊಸ ಚಿತ್ರಗಳಿಗೆ ಸ್ಫೂರ್ತಿ : ರಕ್ಷಿತ್ ಶೆಟ್ಟಿ

    ಪರಶು ಮತ್ತು ಪರಶುರಾಮರೇ ಹೊಸ ಚಿತ್ರಗಳಿಗೆ ಸ್ಫೂರ್ತಿ : ರಕ್ಷಿತ್ ಶೆಟ್ಟಿ

    ರಕ್ಷಿತ್ ಶೆಟ್ಟಿ ಸದ್ಯಕ್ಕೆ ರಿಚರ್ಡ್ ಆಂಟನಿ ಚಿತ್ರದ ಸ್ಕ್ರಿಪ್ಟ್ ವರ್ಕಿನಲ್ಲಿ ಬ್ಯುಸಿಯಾಗಿದ್ದಾರೆ. ಒಂದೆಡೆ ಸಪ್ತಸಾಗರದಾಚೆ ಎಲ್ಲೋ ಸಿನಿಮ ರಿಲೀಸ್ ಡೇಟ್ ಘೋಷಿಸಿರುವ ರಕ್ಷಿತ್ ಶೆಟ್ಟಿ ಒಂದು ವಿಡಿಯೋ ಬಿಟ್ಟಿದ್ದಾರೆ. ಆ ವಿಡಿಯೋದಲ್ಲಿ ರಿಚರ್ಡ್ ಆಂಟನಿ ಮತ್ತು ಪುಣ್ಯಕೋಟಿ ಸಿನಿಮಾಗಳಿಗೆ ಸ್ಪೂರ್ತಿ ಕರಾವಳಿ ಸೃಷ್ಟಿಕರ್ತನಾದ ಪರಶುರಾಮ ಮತ್ತು ಅವರ ಕೊಡಲಿ ಅರ್ಥಾತ್ ಪರಶು ಎಂದು ಹೇಳಿಕೊಂಡಿದ್ದಾರೆ.

    ರಕ್ಷಿತ್ ಶೆಟ್ಟಿ ‘ನಾ ಕಂಡಂತೆ’ ಎಂಬ ಒಂದು ಸಂವಾದಾತ್ಮಕ ಸರಣಿಯನ್ನು ಪ್ರಾರಂಭಿಸುತ್ತಿದ್ದಾರೆ. ಹೀಗಾಗಿ ತನ್ನ ಅಭಿಮಾನಿಗಳನ್ನು ಈ ಸಂವಾದ ಸರಣಿಯಲ್ಲಿ ಭಾಗಿಯಾಗಿ ಎಂದು ಆಹ್ವಾನಿಸಿದ್ದಾರೆ. ಇದೊಂದು ಕಥಾ ಪ್ರಪಂಚ. ಸೃಷ್ಟಿಸಿರುವುದು ರಕ್ಷಿತ್ ಶೆಟ್ಟಿ.

    ತಮ್ಮ ಆಹ್ವಾನಪತ್ರಿಕೆಯಲ್ಲಿ ರಕ್ಷಿತ್ ಶೆಟ್ಟಿ ಉಡುಪಿಯ ಅನಂತೇಶ್ವರ ದೇಗುಲ, ಅದನ್ನು ಸ್ಥಾಪಿಸಿದ ಪರಶುರಾಮರ ಕಥೆ, ಸಂಪೂರ್ಣ ಅಂಗಡಿಯಲ್ಲಿ ಸಿಗುತ್ತಿದ್ದ 5 ರೂಪಾಯಿ ಚಾಕ್ಲೇಟುಗಳ ಕಥೆಯನ್ನೆಲ್ಲ ಹೇಳ್ತಾರಂತೆ. ಗುರುಪೂರ್ಣಿಮೆಯ ದಿನ ಅವರು ಘೋಷಿಸಿರುವ 'ನಾ ಕಂಡಂತೆ' ಸರಣಿ ಮುಂದಿನ ದಿನಗಳಲ್ಲಿ ನಮ್ಮ ಪುರಾಣ, ಇತಿಹಾಸವನ್ನು ಇಂದಿನ ಕಥೆಗೆ ಅಳವಡಿಸಿಕೊಳ್ಳುವ ಪ್ರಯತ್ನ. 'ನನ್ನ ಈ ಕಥಾಪ್ರಪಂಚಕ್ಕೆ ನಿಮ್ಮೆಲ್ಲರಿಗೂ ಸ್ವಾಗತ' ಎನ್ನುವ ಮೂಲಕ ಈ ಬಗ್ಗೆ ಮುಕ್ತ ಚರ್ಚೆ ನಡೆಯಲಿ ಅನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ.  ಹಗಲಿರುಳೂ ಕ್ರಿಯೇಟಿವಿಟಿಗೆ ತುಡಿಯುವ ಶೆಟ್ಟರ ಈ ಹೊಸ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

  • ಪೊಲೀಸರ ಹೃದಯವನ್ನೂ ಗೆದ್ದ ಚಾರ್ಲಿ ಬಾಕ್ಸಾಫೀಸ್'ನ್ನೂ ಗೆದ್ದ

    ಲೀಸರ ಹೃದಯವನ್ನೂ ಗೆದ್ದ ಚಾರ್ಲಿ ಬಾಕ್ಸಾಫೀಸ್'ನ್ನೂ ಗೆದ್ದ

    777 ಚಾರ್ಲಿ ಸಿನಿಮಾ ನೋಡಿ ಹೊರಗೆ ಬರುವವರ ಕಣ್ಣು ಒದ್ದೆಯಾಗುತ್ತಿದೆ. ಒಂದು ಭಾವುಕತೆ ಆವರಿಸಿಕೊಳ್ಳುತ್ತದೆ. ಕೆಲವರು ಬಿಕ್ಕಳಿಸುತ್ತಾರೆ. ಒಂದು ಕಾಲದಲ್ಲಿ ತಾಯಿ, ತವರು, ತಂಗಿ ಸೆಂಟಿಮೆಂಟ್ ಚಿತ್ರಗಳೇ ಮೆರೆಯುತ್ತಿದ್ದ ಕಾಲದಲ್ಲಿ ಇಂಥಾದ್ದೊಂದು ಕಣ್ಣೀರ ಧಾರೆ ಹರಿದಿತ್ತು. ಈಗ ಒಂದು ನಾಯಿಯ ಕಥೆ ಕಣ್ಣೀರು ತರಿಸುತ್ತಿರುವುದು ವಿಶೇಷ. 777 ಚಾರ್ಲಿ ಗೆದ್ದಿದ್ದಾಗಿದೆ.

    ಮಂಗಳೂರು ಪೊಲೀಸರು ತಮ್ಮ ಶ್ವಾನದಳಕ್ಕೆ ಸೇರಿದ ನಾಯಿಗೆ ಚಾರ್ಲಿ ಎಂದೇ ನಾಮಕರಣ ಮಾಡಿದ್ದಾರೆ. ಸಿನಿಮಾದಲ್ಲಿ ಚಾರ್ಲಿಯಾಗಿ ನಟಿಸಿರುವವಳು ಲ್ಯಾಬ್ರಡಾರ್ ರಿಟ್ರೈವರ್ ತಳಿಯ ನಾಯಿ. ಪೊಲೀಸರ ಬಳಿ ಸೇರಿದ ಈ ನಾಯಿಯೂ ಅಷ್ಟೆ, ಅದೇ ತಳಿಯದ್ದು. ಬಂಟ್ವಾಳದಿಂದ ತರಿಸಿರುವ ನಾಯಿ. 20 ಸಾವಿರ ಕೊಟ್ಟು ಈ ನಾಯಿ ಖರೀದಿಸಿದ್ದಾರಂತೆ. ಇನ್ನೊಂದಾರು ತಿಂಗಳ ನಂತರ ತರಬೇತಿ ಶುರು ಮಾಡಲಿದ್ದಾರೆ. ಈ ನಾಯಿಗೆ ಬಾಂಬ್ ನಿಷ್ಕ್ರಿಯ ದಳದಲ್ಲಿ ಬಾಂಬ್ ಪತ್ತೆ ಹಚ್ಚುವ ತರಬೇತಿ ನೀಡಲಿದ್ದಾರೆ ಪೊಲೀಸರು.

    ಅಂದಹಾಗೆ ಇದೆಲ್ಲದರ ಮಧ್ಯೆ ಬಾಕ್ಸಾಫೀಸ್‍ನಲ್ಲೂ ಭರ್ಜರಿ ಸದ್ದು ಮಾಡಿದೆ 777 ಚಾರ್ಲಿ. ಎಲ್ಲ ಕಡೆಯೂ ಹೌಸ್‍ಫುಲ್ ಪ್ರದರ್ಶನ ಕಂಡಿದೆ. ಚಿತ್ರಕ್ಕೆ ಹಾಗೂ ತಮ್ಮ ಪಾತ್ರಕ್ಕೆ ಸಿಕ್ಕ ರಿಯಾಕ್ಷನ್ಸ್ ಬಗ್ಗೆ ನಟ ರಕ್ಷಿತ್ ಶೆಟ್ಟಿ ಖುಷಿಯಾಗಿದ್ದರು. ಈಗ ನಿರ್ಮಾಪಕ ರಕ್ಷಿತ್ ಶೆಟ್ಟಿಯೂ ಖುಷಿಯಾಗಿದ್ದಾರೆ. ಚಿತ್ರಕ್ಕೆ ಸಿಕ್ಕಿರುವ ಅಭೂತಪೂರ್ವ ಓಪನಿಂಗ್ ಅದಕ್ಕೆ ಕಾರಣ. ಏಕೆಂದರೆ ಇದು ರೆಗ್ಯುಲರ್ ಕಮರ್ಷಿಯಲ್ ಸಿನಿಮಾ ಅಲ್ಲ. ಕಿರಣ್ ರಾಜ್ ನಿರ್ದೇಶನದ ಸಿನಿಮಾ ಬೇರೆಯದೇ ಜಾನರ್ ಸ್ಟೋರಿ. ಹೀಗಾಗಿ.. ಹೊಸತನದ ಪ್ರಯೋಗ ಕೂಡಾ ಒಳ್ಳೆಯ ಕಲೆಕ್ಷನ್ ಮಾಡಿರುವುದು ಸಹಜವಾಗಿಯೇ ನಿರ್ಮಾಪಕ ರಕ್ಷಿತ್ ಶೆಟ್ಟಿಗೆ ಖುಷಿ ಕೊಟ್ಟಿದೆ.

  • ಬ್ರೇಕು ಸಿಕ್ಕ ತಕ್ಷಣ ರಶ್ಮಿಕಾ-ರಕ್ಷಿತ್ ಜೋಡಿ ಅಲೆಲೆಲೆಲೆ..!

    rashmika rakshit city rounds

    ರಶ್ಮಿಕಾ ಮಂದಣ್ಣ ಮತ್ತು ರಕ್ಷಿತ್ ಶೆಟ್ಟಿ ಜೋಡಿ, ಸದ್ಯಕ್ಕೆ ಕನ್ನಡದ ಹಾಟ್ ಜೋಡಿ. ಎಂಗೇಜ್‍ಮೆಂಟ್ ಆಗಿದ್ದರೂ, ಕೆಲಸದ ಒತ್ತಡಗಳಿಂದಾಗಿ ಇಬ್ಬರೂ ಬ್ಲಾಕ್ & ವೈಟ್ ಕನಸುಗಳಿಗಷ್ಟೇ ಸೀಮಿತವಾಗಿದ್ದರು. ಅವರ ಬ್ಲಾಕ್ & ವೈಟ್ ಕನಸು ಬಣ್ಣವಾಗಿದ್ದು ಅಂಜನಿಪುತ್ರದ ಪ್ರೆಸ್‍ಮೀಟ್ ದಿನ.

    ರಶ್ಮಿಕಾ, ಹೈದರಾಬಾದ್, ಬೆಂಗಳೂರು ಎಂದು ಓಡಾಡುತ್ತಿದ್ದರೆ, ಇತ್ತ ರಕ್ಷಿತ್ ಶೆಟ್ಟಿ, ಸಿನಿಮಾ, ಸ್ಕ್ರಿಪ್ಟು, ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿ. ಇದರ ಮಧ್ಯೆ ಪ್ಲಾನ್ ಮಾಡಿ ಒಂದಿಡೀ ದಿನ ಒಟ್ಟಿಗೇ ಸುತ್ತವ ಪ್ಲಾನ್ ಮಾಡಿದ್ದಾರೆ. ಬೆಂಗಳೂರು ಸುತ್ತೋಕೆ ಕಾರ್‍ಗಿಂತ ಬೈಕೇ ಬೆಸ್ಟು ಎಂದುಕೊಂಡ ರಕ್ಷಿತ್, ಬೈಕ್‍ನಲ್ಲಿಯೇ ಸುತ್ತಾಡಿದ್ದಾರೆ. ಅವರ ಅಂದ, ಅದೃಷ್ಟವನ್ನೂ ಹಿಂದಿನ ಸೀಟ್‍ನಲ್ಲಿ ಕೂರಿಸಿಕೊಂಡು.

    ಬೈಕ್ ಎಂದರೆ ಭಯ ಬೀಳುವ ರಶ್ಮಿಕಾ, ರಕ್ಷಿತ್ ಧೈರ್ಯದ ಮೇಲೆ ಸುತ್ತಾಡಿದ್ದಾರೆ. ಹೆಲ್ಮೆಟ್ ಹಾಕಿಕೊಂಡರೆ ಯಾರಿಗೂ ಗುರುತು ಸಿಕ್ಕೋದಿಲ್ಲ ಎಂದುಕೊಂಡಿದ್ದರಂತೆ. ಇದರ ಮಧ್ಯೆಯೂ ಅಭಿಮಾನಿಯೊಬ್ಬ ಫೋಟೋ ತೆಗೆದು, ಆ ಫೋಟೋ ವೈರಲ್ ಆಗಿಬಿಟ್ಟಿದೆ.

  • ಮತ್ತೆ ಟ್ರೆಂಡಿಂಗ್ ಜಾನರ್ ಬ್ರೇಕ್ ಮಾಡಿದ ಸಪ್ತ ಸಾಗರದಾಚೆ ಎಲ್ಲೋ..

    ಮತ್ತೆ ಟ್ರೆಂಡಿಂಗ್ ಜಾನರ್ ಬ್ರೇಕ್ ಮಾಡಿದ ಸಪ್ತ ಸಾಗರದಾಚೆ ಎಲ್ಲೋ..

    ಈಗ ಆಕ್ಷನ್ ಸಿನಿಮಾಗಳ ಕಾಲ. ಕೆಜಿಎಫ್, ಪುಷ್ಪ, ಕಾಂತಾರ, ಪಠಾಣ್, ಜವಾನ್, ಜೈಲರ್, ವೇದ, ಸಲಾರ್.. ಹೀಗೆ ಎಲ್ಲರೂ ಒಂದರ ಹಿಂದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾಗಳ ಬೆನ್ನು ಹಿಡಿದು ಸಾಗುತ್ತಿರುವಾಗ.. ಅಂತಹ ಚಿತ್ರಗಳೇ ಹಿಟ್ ಆಗುತ್ತಿರುವಾಗ ಮತ್ತೊಮ್ಮೆ ರೂಲ್ಸ್ ಬ್ರೇಕ್ ಮಾಡಿದ್ದಾರೆ ರಕ್ಷಿತ್ ಶೆಟ್ಟಿ & ಹೇಮಂತ್ ರಾವ್ ಜೋಡಿ.

    ಸಪ್ತಸಾಗರದಾಚೆ ಎಲ್ಲೋ.. ಸಿನಿಮಾ.. ಒಂದು ಕವಿತೆಯಂತ ಪ್ರೇಮ ಕಥೆ. ಕವಿತೆ ಎಂದುಕೊಂಡರೆ ಕವಿತೆ. ಕಥೆ ಎಂದುಕೊಂಡರೆ ಕಥೆ. ಭಾವನೆಗಳದ್ದೇ ಆಕ್ಷನ್ ಸೀಕ್ವೆನ್ಸ್. ಅಬ್ಬರವಿಲ್ಲದ ಡೈಲಾಗ್ಸ್. ಮಾತಿನಲ್ಲೇ ರೋಮಾಂಚನಗೊಳಿಸುವ ಮನು ಮತ್ತು ಪ್ರಿಯಾ. ಆ ಮಾತುಗಳಲ್ಲಿ ಒಂದು ತುಂಟತನ.. ಹೃದಯವನ್ನೇ ತುಂಬಿಕೊಳ್ಳುವ ಪ್ರೇಮ.. ಕಣ್ಣುಗಳಲ್ಲೇ ನಡೆಯೋ ಸಂಭಾಷಣೆ.. ಹೇಮಂತ್ ರಾವ್ ರೆಗ್ಯುಲರ್ ಜಾನರ್ ಬ್ರೇಕ್ ಮಾಡಿದ್ದಾರೆ. ಅವರ ಪ್ರೇಮಕಥೆಗೆ ಜೀವ ತುಂಬಿರೋದು ರಕ್ಷಿತ್ ಶೆಟ್ಟಿ ಮತ್ತು ರುಕ್ಮಿಣಿ ವಸಂತ್.

    ಪ್ರೇಮಕಥೆಯನ್ನೂ ಇಂಟ್ರೆಸ್ಟಿಂಗ್ ಆಗಿ..ಇಂಟೆನ್ಸಿವ್ ಆಗಿ ಹೇಳಿರುವ ಹೇಮಂತ್ ರಾವ್ ಎರಡನೇ ಭಾಗಕ್ಕೆ ಕಾಯುವಂತೆ ಮಾಡಿದ್ದಾರೆ. ಇವತ್ತು ಥಿಯೇಟರಿಗೆ ಬರುತ್ತಿರೋ ಸಪ್ತಸಾಗರದಾಚೆ ಎಲ್ಲೋ.. ಪ್ರೇಕ್ಷಕರ ಕಣ್ಣನ್ನು ಒದ್ದೆ ಮಾಡಿದೆ. ಹೃದಯವನ್ನು ಬಲವಾಗಿ ತಟ್ಟಿದೆ.

    ಕತ್ತೆ ಮತ್ತು ಪುಟ್ಟಿ ಇಬ್ಬರ ಕೆಮಿಸ್ಟ್ರಿಯೂ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅವಿನಾಶ್, ಪವಿತ್ರಾ ಲೋಕೇಶ್, ಯಮುನಾ ಶ್ರೀನಿಧಿ, ಹರ್ಷಿಲ್ ಕೌಶಿಕ್, ಅಶ್ವಿನ್ ಹಾಸನ್, ಅಶೋಕ್ ತಮ್ಮ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅಚ್ಯುತ್ ಕುಮಾರ್, ಗೋಪಾಲ್ ದೇಶಪಾಂಡೆ, ರಮೇಶ್ ಇಂದಿರಾ, ಶರತ್ ಲೋಹಿತಾಶ್ವ ಹೈಲೈಟ್ ಆಗುತ್ತಾರೆ. ಇನ್ನು, ಈ ಸಿನಿಮಾವನ್ನು ಎರಡು ಭಾಗಗಳಾಗಿ ಮಾಡಿರುವುದರ ಬಗ್ಗೆ ಹೇಳುವುದಾದರೆ, ಖಂಡಿತ ಪಾರ್ಟ್ 2ಕ್ಕೆ ಒಂದಷ್ಟು ಇಂಟರೆಸ್ಟಿಂಗ್ ಆಗಿರುವ ವಿಷಯಗಳನ್ನು ಹೇಮಂತ್ ಇಟ್ಟುಕೊಂಡಿದ್ದಾರೆ. ಮುಂದೇನಾಗಬಹುದು ಎಂಬ ಕುತೂಹಲವನ್ನು ಉಳಿಸಿಕೊಂಡು, ಪಾರ್ಟ್ 1 ಅನ್ನು ಮುಗಿಸಿದ್ದಾರೆ.

  • ಮತ್ತೆ ರಿಚ್ಚಿಯಾಗುತ್ತಿದ್ದಾರೆ ರಕ್ಷಿತ್ ಶೆಟ್ಟಿ

    rakshit shetty busy with pushkar mallikarjun

    ಉಳಿದವರು ಕಂಡಂತೆ ಚಿತ್ರದಲ್ಲಿನ ರಿಚ್ಚಿ ಪಾತ್ರ, ರಕ್ಷಿತ್ ಶೆಟ್ಟಿಗೆ ಹೊಸ ಇಮೇಜ್ ತಂದುಕೊಟ್ಟಿದ್ದು ಸುಳ್ಳಲ್ಲ. ಶೂಟ್ ಮಾಡ್ಲಾ ಅನ್ನೋ ರಕ್ಷಿತ್ ಶೆಟ್ಟಿಯ ಡೈಲಾಗ್ ಮತ್ತು ಹುಲಿ ಡ್ಯಾನ್ಸ್, ಇಂದಿಗೂ ಫೇಮಸ್. ವಿಭಿನ್ನ ಚಿತ್ರಕತೆಯಿಂದಾಗಿ ಗಮನ ಸೆಳೆದಿದ್ದ ಸಿನಿಮಾದ ಸೀಕ್ವೆಲ್‍ಗೆ ಸಿದ್ಧರಾಗುತ್ತಿದ್ದಾರೆ ರಕ್ಷಿತ್ ಶೆಟ್ಟಿ. 

    ಉಳಿದವರು ಕಂಡಂತೆ ಚಿತ್ರದಲ್ಲಿನ ರಿಚ್ಚಿ ಪಾತ್ರವನ್ನೇ ಕೇಂದ್ರವಾಗಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಉಳಿದವರು ಕಂಡಂತೆ ಚಿತ್ರದಲ್ಲಿದ್ದವರೆಲ್ಲ ಈ ಸಿನಿಮಾದಲ್ಲೂ ಇರ್ತಾರೆ. ಆದರೆ, ಡೈರೆಕ್ಟರ್ ರಕ್ಷಿತ್ ಶೆಟ್ಟಿ ಅಲ್ಲ, ರಿಷಬ್ ಶೆಟ್ಟಿ. ರಿಷಬ್, ಉಳಿದವರು ಕಂಡಂತೆ ಸಿನಿಮಾ ಮಾಡುವಾಗ ನನಗೆ ಅಸಿಸ್ಟೆಂಟ್ ಆಗಿದ್ದವರು. ಅವರಿಗೆ ಚಿತ್ರದ ಬಗ್ಗೆ ಎಲ್ಲವೂ ಗೊತ್ತು. ಕಥೆ, ಪಾತ್ರಗಳ ಬಗ್ಗೆ ಚೆನ್ನಾಗಿ ಗೊತ್ತಿದೆ. ಅವರೇ ಚಿತ್ರದ ಹೊಣೆ ಹೊರಲಿದ್ದಾರೆ ಎಂದಿದ್ದಾರೆ ರಕ್ಷಿತ್.  ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ನಿರ್ಮಾಪಕರು.

    ಉಳಿದಂತೆ ಗೋಧಿಬಣ್ಣ ಸಾಧಾರಣ ಮೈಕಟ್ಟು ಚಿತ್ರದ ಖ್ಯಾತಿಯ ಹೇಮಂತ್ ರಾವ್, ರಕ್ಷಿತ್ ಅವರಿಗಾಗಿಯೇ ಕಥೆಯೊಂದನ್ನು ಸಿದ್ಧಪಡಿಸುತ್ತಿದ್ದಾರೆ. ಅದು ಸ್ವಾತಂತ್ರ್ಯ ಪೂರ್ವದ ಕಥೆ. ಆ ಕಥೆಗಾಗಿ ಒಂದಿಷ್ಟು ಸಂಶೋಧನೆ ಕೆಲಸ ಬಾಕಿಯಿದೆ. ಎಲ್ಲವನ್ನೂ ಸಿದ್ಧಪಡಿಸಿಕೊಂಡು ಶೂಟಿಂಗ್‍ಗೆ ಸಿದ್ಧರಾಗಲಿದ್ದಾರೆ ರಕ್ಷಿತ್ ಶೆಟ್ಟಿ. ಒನ್ಸ್ ಎಗೇಯ್ನ್, ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರೇ ನಿರ್ಮಾಪಕ.

    ಇನ್ನು 3ನೇ ಸಿನಿಮಾಗೂ ರಕ್ಷಿತ್ ಶೆಟ್ಟಿ ಸಿದ್ಧರಾಗುತ್ತಿದ್ದಾರೆ. ಆ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಅವರೇ ಡೈರೆಕ್ಟರ್. ಸದ್ಯಕ್ಕೆ ಕಥೆಯ ಎಳೆಯೊಂದು ಮನಸ್ಸಿನಲ್ಲಿದೆ. ಅದನ್ನು ಸ್ವಲ್ಪ ಇಂಪ್ರೂವ್ ಮಾಡಬೇಕು. ಅದು ಫೈನಲ್ ಹಂತಕ್ಕೆ ಬಂದ ನಂತರ ಚಿತ್ರಕ್ಕೆ ಸಿದ್ಧನಾಗಲಿದ್ದೇನೆ ಎಂದಿದ್ದಾರೆ ರಕ್ಷಿತ್ ಶೆಟ್ಟಿ. ಮತ್ತೊಮ್ಮೆ, ಈ ಚಿತ್ರಕ್ಕೂ ಹಣ ಹೂಡುವುದು ಪುಷ್ಕರ್ ಮಲ್ಲಿಕಾರ್ಜುನಯ್ಯ.

    ಸದ್ಯಕ್ಕೆ ರಕ್ಷಿತ್ ಶೆಟ್ಟಿ ಅವನೇ ಶ್ರೀಮನ್ನಾರಯಣದಲ್ಲಿ ಬ್ಯುಸಿ. ಅದಾದ ನಂತರ ಚಾರ್ಲಿ ಶುರುವಾಗಲಿದೆ. ಆ ಎರಡೂ ಚಿತ್ರಗಳು ಅಂತಿಮ ಹಂತಕ್ಕೆ ಬರುವ ಹೊತ್ತಿಗೆ ಈ ಸಿನಿಮಾಗಳು ಶುರುವಾಗಲಿವೆ.