` vaishnavi, - chitraloka.com | Kannada Movie News, Reviews | Image

vaishnavi,

  • Ambarish Releases The Songs Of Vaishnavi

    actor ambareesh image

    Actor turned politician Ambarish recently released the songs of a new film called Vaishnavi starring Yana and Srinagara Kitty at the Rejoyz Auditorium in Malleshwaram in Bangalore.

    It was a simple function and Ambarish along with music composer Hamsalekha released the songs of the film. Former AKKA president Amarnath Gowda, Srinagara Kitty, Praveen Godkindi and others were present at the occasion.

    vaishnavi_audio_launch.jpg

    'Vaishnavi' is an art film directed by G V Iyer's protege G Murthy and produced by S Nagaraj who is also father of actress Yana. Praveen Godkindi is the music director of the film and has composed the songs for the film. Srinivas Prabhu, Rameshwari Verma and others play prominent roles in the film

  • ಅಗ್ನಿಸಾಕ್ಷಿ ಲವ್‍ಸ್ಟೋರಿ.. ನಿಜವಾಗಬಹುದು.. ಸುಳ್ಳಾಗಬಹುದು..!

    agnisakhi hero and heroine

    ಅಗ್ನಿಸಾಕ್ಷಿ, ಸದ್ಯಕ್ಕೆ ಕನ್ನಡ ಕಿರುತೆರೆಯ ಯಶಸ್ವಿ ಧಾರಾವಾಹಿಗಳಲ್ಲಿ ಒಂದು. ಧಾರಾವಾಹಿಯ ನಾಯಕ ವಿಜಯ್ ಸೂರ್ಯ, ನಾಯಕಿ ವೈಷ್ಣವಿ. ಇವರಿಬ್ಬರ ಮಧ್ಯೆ ಏನೋ ಒಂದು ಕೆಮಿಸ್ಟ್ರಿ ಇದೆ. ಅದು ಕೆಲಸ ಮಾಡ್ತಾ ಇದೆ. ಕ್ಯಾಮೆರಾ ಮುಂದಷ್ಟೇ ಅಲ್ಲ, ಕ್ಯಾಮೆರಾ ಹಿಂದೆಯೂ ಇವರಿಬ್ಬರು ಪ್ರೇಮಿಗಳು ಅನ್ನೋ ಸುದ್ದಿ ಹರಿದಾಡುತ್ತಿದೆ.

    ಮೊನ್ನೆ ಮೊನ್ನೆಯಷ್ಟೇ ಚಂದನ್ ಶೆಟ್ಟಿ ಜೊತೆಗಿನ ಎಂಗೇಜ್‍ಮೆಂಟ್ ಗಾಸಿಪ್‍ಗೆ ನೋ ಎಂದಿದ್ದ ವೈಷ್ಣವಿ, ವಿಜಯ್ ಸೂರ್ಯ ಕುರಿತ ಗಾಸಿಪ್‍ಗಳಿಗೆ ಹಲವು ಬಾರಿ ನೋ ಎಂದಿದ್ದಾರೆ. ಆದರೆ, ವಿಜಯ್ ಸೂರ್ಯ ಹೇಳಿರುವುದೇ ವಿಭಿನ್ನ ಅಷ್ಟೇ ಅಲ್ಲ, ಗೊಂದಲಕಾರಿಯೂ ಹೌದು.

    ವೈಷ್ಣವಿ ನನಗೆ ಒಳ್ಳೆಯ ಬೆಸ್ಟ್ ಫ್ರೆಂಡ್. ಸದ್ಯಕ್ಕಂತೂ ನಾವಿಬ್ಬರೂ ಕೋ-ಸ್ಟಾರ್‍ಗಳು. ತೆರೆಯ ಮೇಲೆ ಗಂಡಹೆಂಡತಿಯಾಗಿ ನಟಿಸುವಾಗ, ಕಂಫರ್ಟ್ ಆಗಿಯೇ ಇರುತ್ತೇವೆ. ಆದರೆ, ಅದು ರಿಯಲ್ ಬದುಕಿನ ತನಕ ಬಂದಿಲ್ಲ. ಅವರಿಗೆ ಬಹಳ ತಾಳ್ಮೆಯಿದೆ. ಎಷ್ಟೋ ಬಾರಿ ಅವರು ನನಗೆ ಸ್ಫೂರ್ತಿಯಾಗಿದ್ದಾರೆ ಎಂದಿದ್ದಾರೆ ವಿಜಯ್ ಸೂರ್ಯ.

    ಇನ್ನು ಲವ್, ಮದುವೆ ಬಗ್ಗೆ ಕೇಳಿದಾಗ ನೀಡಿರುವ ಉತ್ತರ ಸ್ವಲ್ಪ ಹುಬ್ಬೇರಿಸುವಂತೆ ಮಾಡಿರೋದು ಸತ್ಯ. ನಮ್ಮಿಬ್ಬರ ಮಧ್ಯೆ ಭಿನ್ನತೆಗಳಿವೆ. ಸದ್ಯಕ್ಕೆ ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಸದ್ಯಕ್ಕೆ ನಾವಿಬ್ಬರೂ ಆ ಬಗ್ಗೆ ಯೋಚಿಸಿಲ್ಲ. ಮುಂದೇನೋ ಗೊತ್ತಿಲ್ಲ. ರೂಮರ್ ನಿಜವಾದರೂ ಆಗಬಹುದು. ಸುಳ್ಳಾದರೂ ಆಗಬಹುದು.

    ವಿಜಯ್ ಸೂರ್ಯ ಅವರ ಈ ಮಾತು, ರೂಮರ್‍ಗಳನ್ನು ಇನ್ನಷ್ಟು ಗಟ್ಟಿ ಮಾಡಿದೆಯೇ ಹೊರತು, ದೂರ ಮಾಡಿಲ್ಲ. ಇದು ರೂಮರ್ ಅಷ್ಟೆ ಎಂದು ಇಬ್ಬರೂ ಅಗ್ನಿಸಾಕ್ಷಿಯಾಗಿ ಪ್ರಮಾಣ ಮಾಡಬೇಕೇನೋ..

  • ಚಂದನ್ ಶೆಟ್ಟಿ ಜೊತೆ ಮದ್ವೆಯಂತೆ - ಅಗ್ನಿಸಾಕ್ಷಿ ವೈಷ್ಣವಿ ಹೇಳಿದ್ದೇನು..?

    chandan shetty vaishnavi marriage rumors

    ಬಿಗ್‍ಬಾಸ್ ವಿನ್ನರ್ ಆಗಿ ಹೊರಬಂದ ಚಂದನ್ ಶೆಟ್ಟಿ ಮತ್ತು ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವೈಷ್ಣವಿ ಗೌಡ ಮದುವೆಯಾಗುತ್ತಿದ್ದಾರಂತೆ. ಎಂಗೇಜ್‍ಮೆಂಟ್ ಆಗಲಿದೆಯಂತೆ. ಇಂಥಾದ್ದೊಂದು ಸುದ್ದಿ ಎಷ್ಟರಮಟ್ಟಿಗೆ ಹಬ್ಬಿತೆಂದರೆ, ಎಲ್ಲರೂ ಅವರಿಗೆ ಫೋನ್ ಮಾಡಿ ಶುಭಾಶಯ ಹೇಳುವವರೆ. ಸ್ಪಷ್ಟನೆ ಕೇಳದೆ ಶುಭಾಶಯ ಹೇಳೋಕೆ ಕಾರಣವೂ ಇತ್ತು. ವೈಷ್ಣವಿ ಗೌಡ ಹೆಸರಿನ ಫೇಸ್‍ಬುಕ್ ಖಾತೆಯಲ್ಲೇ ಇಂಥಾದ್ದೊಂದು ಸುದ್ದಿ ಹಬ್ಬಿತ್ತು. ಅದು ವೆರಿಫೈಡ್ ಅನ್ನೋ ಸಿಂಬಲ್‍ನ ರೈಟ್ ಮಾರ್ಕ್ ಗುರುತಿನ ಖಾತೆಯಾದ್ದರಿಂದ ಅದು ವೈಷ್ಣವಿ ಗೌಡ ಅವರ ಅಧಿಕೃತ ಖಾತೆಯೆಂದೇ ಅಭಿಮಾನಿಗಳು ನಂಬಿಬಿಟ್ಟಿದ್ದರು.

    ಈಗ ಅದಕ್ಕೆಲ್ಲ ವೈಷ್ಣವಿ ಗೌಡ ತೆರೆ ಎಳೆದಿದ್ದಾರೆ. ತಾನು ಫೇಸ್‍ಬುಕ್‍ನಲ್ಲಿ ಇಲ್ಲವೇ ಇಲ್ಲ. ಅದು ಯಾರ ಅಕೌಂಟೋ ನನಗೆ ಗೊತ್ತಿಲ್ಲ. ನಾನು ಇರೋದು ಇನ್‍ಸ್ಟಾಗ್ರಾಂನಲ್ಲಿ ಮಾತ್ರ. ದಯವಿಟ್ಟು ನಮ್ಮ ವೈಯಕ್ತಿಕ ಜೀವನಕ್ಕೆ ಇಣುಕಬೇಡಿ. ಮದುವೆ, ನಿಶ್ಚಿತಾರ್ಥದ ಸುದ್ದಿಗಳೆಲ್ಲ ವದಂತಿ. ಅದೆಲ್ಲವೂ ಸುಳ್ಳು ಎಂದಿದ್ದಾರೆ ವೈಷ್ಣವಿ ಗೌಡ.

    ಚಂದನ್ ಶೆಟ್ಟಿ ಕೂಡಾ ಪ್ರತಿಕ್ರಿಯೆ ನೀಡಿ, ವೈಷ್ಣವಿ ಗೌಡ ನನಗೆ ವೈಯಕ್ತಿಕವಾಗಿ ಪರಿಚಯ ಕೂಡಾ ಇಲ್ಲ. ಧಾರಾವಾಹಿಯಲ್ಲಿ ನೋಡಿದ್ದೇನಷ್ಟೆ. ಸದ್ಯಕ್ಕೆ ಈಗ ಸಿಕ್ಕಿರುವ ಯಶಸ್ಸನ್ನು ಬಳಸಿಕೊಂಡು ಇನ್ನಷ್ಟು ಬೆಳೆಯುವ ಯೋಚನೆ ಇದೆ. ಮದುವೆಯ ಬಗ್ಗೆ ಯೋಚಿಸಲೂ ಪುರುಸೊತ್ತಿಲ್ಲ ಎಂದಿದ್ದಾರೆ.

     

  • ಜಿಕೆ, ವೈಷ್ಣವಿ, ಅನುಪಮಾ, ದಯಾಳ್ ಬಿಗ್‍ಮಿಲನ

    big boss contestants reunite

    ಬಿಗ್‍ಬಾಸ್‍ನಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳೆಲ್ಲ ಒಟ್ಟಿಗೇ ಸೇರುತ್ತಿದ್ದಾರೆ. ಇದೇ ಸೋಮವಾರ ಒಂದೇ ದಿನ ಎರಡು ಚಿತ್ರಗಳ ಮುಹೂರ್ತ ನಡೆಯುತ್ತಿದೆ. ಎರಡೂ ಚಿತ್ರಗಳಿಗೆ ಪದ್ಮನಾಭ್ ದಯಾಳ್ ನಿರ್ದೇಶಕ. ಒಂದು ಚಿತ್ರಕ್ಕೆ ಕೆ.ಮಂಜು ನಿರ್ಮಾಪಕರಾದರೆ, ಮತ್ತೊಂದು ಚಿತ್ರಕ್ಕೆ ಸೈಯದ್ ಸಲಾಮ್ ನಿರ್ಮಾಪಕರು. ಒಂದು `ಕರಾಳ ರಾತ್ರಿ' ಚಿತ್ರ, ಮತ್ತೊಂದು `ಪುಟ 109'.

    ಜೆಕೆ, ಅನುಪಮಾ ಹಾಗೂ ವೈಷ್ಣವಿ, ಬಿಗ್‍ಬಾಸ್‍ನಲ್ಲಿ ಸ್ಪರ್ಧಿಸಿದ್ದವರು. ನಿರ್ದೇಶಕ ದಯಾಳ್ ಕೂಡಾ  ಬಿಗ್‍ಬಾಸ್ ಮನೆಗೆ ಸ್ಪರ್ಧಿಯಾಗಿ ಹೋಗಿದ್ದವರೇ. ಅಲ್ಲಿಯೇ ಹೀರೋ, ಹೀರೋಯಿನ್‍ಗಳನ್ನು ಫಿಕ್ಸ್ ಮಾಡಿದ್ದ ದಯಾಳ್, ಈಗ ಮುಹೂರ್ತದ ಘಟ್ಟಕ್ಕೆ ಬಂದು ತಲುಪಿದ್ದಾರೆ. ನವೀನ್ ಕೃಷ್ಣ, ರಂಗಾಯಣ ರಘು, ವೀಣಾ ಸುಂದರ್ ಪ್ರಮುಖ ಪಾತ್ರದಲ್ಲಿರುತ್ತಾರೆ. ಒಟ್ಟಿನಲ್ಲಿ ಬಿಗ್‍ಬಾಸ್ ಸ್ಪರ್ಧಿಗಳೆಲ್ಲ ಒಟ್ಟಿಗೇ ಸೇರುತ್ತಿದ್ದಾರೆ.